Tag: Land Slides

  • ಹಾಸನದಲ್ಲಿ ಶಾಲಾ ಕಟ್ಟಡ ಕುಸಿತ – ರಜೆಯಿಂದ ತಪ್ಪಿತು ಭಾರೀ ಅನಾಹುತ

    ಹಾಸನದಲ್ಲಿ ಶಾಲಾ ಕಟ್ಟಡ ಕುಸಿತ – ರಜೆಯಿಂದ ತಪ್ಪಿತು ಭಾರೀ ಅನಾಹುತ

    ಹಾಸನ: ಚನ್ನಪಟ್ಟಣದಲ್ಲಿರುವ ಶಾಲಾ ಕಟ್ಟಡವೊಂದು ಭಾರೀ ಮಳೆಗೆ ಕುಸಿದು ಬಿದ್ದಿದ್ದು, ಶಾಲೆಗೆ ರಜೆ ಕೊಟ್ಟ ಕಾರಣಕ್ಕೆ ಭಾರೀ ಅನಾಹುತವೊಂದು ತಪ್ಪಿದೆ.

    ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಚನ್ನಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡದ ಗೋಡೆ ಕುಸಿದು ಬಿದ್ದಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಒಂದು ವೇಳೆ ರಜೆ ನೀಡದೇ ಇದ್ದಲ್ಲಿ ಜೀವ ಅಪಾಯಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಗೋಡೆಯ ಜೊತೆಗೆ ಅರ್ಧ ಮಹಡಿ ಸಹ ನೆಲಕ್ಕೆ ಬಿದ್ದಿದೆ.

    ಮಳೆಯ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂ ಕುಸಿತಗೊಂಡಿದೆ. ಹಾಸನ ಸಕಲೇಶಪುರ ತಾಲೂಕಿನ ಆನೆಮಹಲ್ ಬಳಿ ಭೂಮಿ ಕುಸಿದಿದೆ. ಈ ವೇಳೆ ಮಣ್ಣಿನ ನಡುವೆ ಸಿಲುಕಿ ಒಂದು ಕಾರು ಜಖಂಗೊಂಡಿದೆ. ಹಾಗೆಯೇ ಹೆದ್ದಾರಿಯ ಎತ್ತಿನಹಳ್ಳದ ಬಳಿ ಕೂಡ ಗುಡ್ಡ ಕುಸಿದಿದ್ದು, ಈ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣಿನ ರಾಶಿಯಿಂದ ವಾಹನಗಳು ಸಾಲುಗಟ್ಟಿ ನಿಂತ್ತಿದ್ದು, ಸವಾರರು ಪರೆದಾಡುತ್ತಿದ್ದಾರೆ.

    ನಿರಂತರವಾಗಿ ಸುರಿಯುತ್ತಿರೋ ಮಳೆ ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಇತ್ತ ಆನೆಮಹಲ್ ಭಾಗದಲ್ಲಿ ನಾಲ್ಕು ಮನೆಗಳು ಕುಸಿಯುವ ಸಾಧ್ಯತೆಯಿದ್ದು, ಅಪಾಯದ ಅಂಚಿನಲ್ಲಿರೋ ನಾಲ್ಕು ಮನೆಗಳ 10ಕ್ಕೂ ಹೆಚ್ಚು ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.

  • ಕುಸಿದ ಜಾಗದಲ್ಲೇ ಭೂಮಿ ತಾಯಿಗೆ ವಿಶೇಷ ಪೂಜೆ

    ಕುಸಿದ ಜಾಗದಲ್ಲೇ ಭೂಮಿ ತಾಯಿಗೆ ವಿಶೇಷ ಪೂಜೆ

    ಬೆಳಗಾವಿ: ಜಿಲ್ಲೆಯ ಕುಳ್ಳೂರ ಗ್ರಾಮದಲ್ಲಿ ಭೂಮಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯದಿಂದ ದೇವರ ಮೊರೆ ಹೋಗಿದ್ದಾರೆ.

    ಕುಳ್ಳೂರ ಗ್ರಾಮದಲ್ಲಿ ಏಕಾಏಕಿ ಕಳೆದ ಹದಿನೈದು ದಿನಗಳಿಂದ ಕಿ.ಮೀ ಗಟ್ಟಲೆ ಭೂಮಿ ಬಾಯಿ ಬಿಡುತ್ತಿದೆ. ರಸ್ತೆ ಸೇರಿದಂತೆ ಜಮೀನುಗಳಲ್ಲಿ ಭೂಮಿ ಕುಸಿದು ಕಂದಕಗಳು ನಿರ್ಮಾಣ ಆಗುತ್ತಿದೆ. ಯಾವುದೇ ಅನಾಹುತ ಮತ್ತು ಭೂ ಕುಸಿತವಾಗದಿರಲಿ ಎಂದು ಕುಸಿದ ಜಾಗದಲ್ಲೇ ಗ್ರಾಮಸ್ಥರು ಭೂಮಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಈ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿರುವ ಭೂಮಿ ದೊಡ್ಡ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಕುಳ್ಳೂರನಿಂದ ಬಿಚಗುತ್ತಿ ತಿಮ್ಮಾಪುರ್ ಸೇರಿ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಕೂಡ ಭೂಮಿ ಕುಸಿದಿದ್ದು ಸುರಂಗದಂತಾಗಿ ಇಲ್ಲಿ ಮಾರ್ಪಟ್ಟಿದೆ. ಈ ಕಾರಣಕ್ಕೆ ರಸ್ತೆಯಲ್ಲಿ ಕಲ್ಲಿಟ್ಟು ಎಚ್ಚರಿಕೆ ಬೋರ್ಡ್ ಕೂಡ ಹಾಕಿ ಜನರನ್ನ ಆ ಕಡೆ ಓಡಾಡದಂತೆ ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.

    ಆರು ತಿಂಗಳ ಹಿಂದೆಯೇ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದ ಭೂಮಿ ಈಗ ಏಕಾಏಕಿ ಕುಸಿಯುತ್ತಿರುವುದರಿಂದ ಗ್ರಾಮಸ್ಥರು ಆ ಕಡೆ ಸುಳಿಯುವುದನ್ನೇ ಬಿಟ್ಟಿದ್ದಾರೆ. ಸುಮಾರು ಎರಡು ಕಿ.ಮೀ ನಷ್ಟು ಭೂಮಿ ಕುಸಿದಿದ್ದು ನಿತ್ಯವೂ ಇದರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಈ ಕುರಿತು ರಾಮದುರ್ಗ ತಹಶೀಲ್ದಾರರ ಗಮನಕ್ಕೆ ತಂದರೆ ಅದು ನನಗೆ ಸಂಬಂಧ ಇಲ್ಲ. ಬೇಕಾದರೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹೇಳಿ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ.

  • ಬೆಳಗಾವಿ ಏಕಾಏಕಿ ಕಿ.ಮೀ ಗಟ್ಟಲೇ ಬಾಯಿ ಬಿಟ್ಟ ಭೂಮಿ – ಗ್ರಾಮಸ್ಥರಲ್ಲಿ ಆತಂಕ

    ಬೆಳಗಾವಿ ಏಕಾಏಕಿ ಕಿ.ಮೀ ಗಟ್ಟಲೇ ಬಾಯಿ ಬಿಟ್ಟ ಭೂಮಿ – ಗ್ರಾಮಸ್ಥರಲ್ಲಿ ಆತಂಕ

    ಬೆಳಗಾವಿ: ಜಿಲ್ಲೆಯಲ್ಲೊಂದು ಭಯಾನಕ ಘಟನೆ ನಡೆದಿದ್ದು ಏಕಾಏಕಿ ಕಿ.ಮೀ ಗಟ್ಟಲೇ ಭೂಮಿ ಬಾಯಿ ಬಿಡುತ್ತಿದೆ. ಭೂಮಿ ಬಾಯಿ ಬಿಡುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುಳ್ಳುರು ಗ್ರಾಮದಲ್ಲಿ ಕಂಡು ಬಂದಿದೆ. ಈ ದೃಶ್ಯ ನೋಡಿದ ಇಲ್ಲಿನ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಈ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿರುವ ಭೂಮಿ ದೊಡ್ಡ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಕುಳ್ಳುರ್ ನಿಂದ ಬಿಚಗುತ್ತಿ ತಿಮ್ಮಾಪುರ್ ಸೇರಿ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಕೂಡ ಭೂಮಿ ಕುಸಿದಿದ್ದು ಸುರಂಗದಂತಾಗಿ ಇಲ್ಲಿ ಮಾರ್ಪಟ್ಟಿದೆ. ಈ ಕಾರಣಕ್ಕೆ ರಸ್ತೆಯಲ್ಲಿ ಕಲ್ಲಿಟ್ಟು ಎಚ್ಚರಿಕೆ ಬೋರ್ಡ್ ಕೂಡ ಹಾಕಿ ಜನರನ್ನ ಆ ಕಡೆ ಓಡಾಡದಂತೆ ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.

    ಆರು ತಿಂಗಳ ಹಿಂದೆಯೇ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದ ಭೂಮಿ ಈಗ ಏಕಾಏಕಿ ಕುಸಿಯುತ್ತಿರುವುದರಿಂದ ಗ್ರಾಮಸ್ಥರು ಆ ಕಡೆ ಸುಳಿಯುವುದನ್ನೇ ಬಿಟ್ಟಿದ್ದಾರೆ. ಸುಮಾರು ಎರಡು ಕಿ.ಮೀ ನಷ್ಟು ಭೂಮಿ ಕುಸಿದಿದ್ದು ನಿತ್ಯವೂ ಇದರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಈ ಕುರಿತು ರಾಮದುರ್ಗ ತಹಶೀಲ್ದಾರರ ಗಮನಕ್ಕೆ ತಂದರೆ ಅದು ನನಗೆ ಸಂಬಂಧ ಇಲ್ಲ. ಬೇಕಾದರೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹೇಳಿ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ.

    ಇತ್ತ ಇಪ್ಪತ್ತರಿಂದ ಮೂವತ್ತು ಅಡಿಯಷ್ಟು ಭೂಮಿ ಕೆಳಭಾಗದಲ್ಲಿ ಕುಸಿದಿದ್ದು ಪ್ರಳಯದ ಆತಂಕ ಇಲ್ಲಿ ಸೃಷ್ಟಿಯಾಗಿದೆ. ಕೆಲವರು ದೇವರ ಮೊರೆ ಹೋದರೆ ಮತ್ತೆ ಕೆಲವರು ಭೂವಿಜ್ಞಾನಿಗಳ ಮೊರೆ ಹೋಗಿ ಭೂ ಕುಸಿತದ ಕಾರಣ ಹುಡುಕುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಕೂಡ ಅಧಿಕಾರಿಗಳು ಮಾತ್ರ ಇಲ್ಲಿ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

  • ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಬೀದಿಗೆ ಬಂದ ಕುಟುಂಬಕ್ಕೆ 5 ತಿಂಗ್ಳಾದ್ರು ಮನೆಯಿಲ್ಲ

    ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಬೀದಿಗೆ ಬಂದ ಕುಟುಂಬಕ್ಕೆ 5 ತಿಂಗ್ಳಾದ್ರು ಮನೆಯಿಲ್ಲ

    ಮಡಿಕೇರಿ: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದ್ದ ಕೊಡಗು ಪುನರ್ ನಿರ್ಮಾಣದ ಕನಸು ನನಸಾಗುವ ಲಕ್ಷಣ ಕಾಣುತ್ತಿಲ್ಲ. ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಕುಟುಂಬಗಳಿಗೆ 5 ತಿಂಗಳು ಕಳೆದರೂ ಒಂದೇ ಒಂದು ಸೂರಿನ ನೆರಳು ಕೂಡ ಸಿಕ್ಕಿಲ್ಲ. ನಿವೇಶನಕ್ಕೆ ಎಂದು ಗುರುತಿಸಿರುವ ಭೂಮಿಯಲ್ಲಿ ಅಡಿಗಲ್ಲಿಟ್ಟು ಆಸೆ ಹುಟ್ಟಿಸಿದ್ದೇ ಬಂತು, ಮನೆಗಳು ಮಾತ್ರ ನಿರ್ಮಾಣವಾಗುತ್ತಿಲ್ಲ. ಅಡಿಗಲ್ಲಿಟ್ಟು ಒಂದು ತಿಂಗಳೊಳಗೆ ಮನೆ ನಿರ್ಮಾಣವಾಗುತ್ತೆ ಎನ್ನುವ ಸಿಎಂ ಭರವಸೆ ಹುಸಿಯಾಗಿರುವುದು ನಿರಾಶ್ರಿತರ ಆತಂಕಕ್ಕೆ ಕಾರಣವಾಗಿದೆ.

    ರಣಭೀಕರ ಮಳೆ, ಭೀಕರ ಭೂಕುಸಿತಕ್ಕೆ ಸಿಲುಕಿ ಮನೆಗಳು ನೆಲ ಸಮವಾಗಿ, ಜನರು ಅತಂತ್ರರಾಗಿ ಬರೋಬ್ಬರಿ 5 ತಿಂಗಳು ಕಳೆದಿದೆ. ಸೂರು ಕಲ್ಪಿಸುವುದ್ದಕ್ಕೆ ಜಿಲ್ಲೆಯ 5 ಕಡೆಗಳಲ್ಲಿ ನೂರಾರು ಏಕರೆ ಭೂಮಿ ಗುರುತಿಸಿ 3 ತಿಂಗಳಾಗಿದೆ. ಮನೆ ಮಠ ಕಳೆದುಕೊಂಡವರನ್ನು ನಿರಾಶ್ರಿತ ಕೇಂದ್ರದಿಂದ ಹೊರತಳ್ಳಿ 1 ತಿಂಗಳು ಉರುಳಿದೆ. ಇನ್ನೂ ಗುರುತಿಸಿದ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಅಡಿಗಲ್ಲಿಟ್ಟು ಒಂದು ತಿಂಗಳೊಳಗೆ ಮನೆ ನಿರ್ಮಾಣವಾಗುತ್ತೆ ಎಂದು ಸಿಎಂ ಹೇಳಿ 1 ತಿಂಗಳ ಮೇಲೆ 10 ದಿನವಾಗಿದೆ. ಆದರೂ ಕೂಡ ಒಂದೇ ಒಂದು ಮನೆ ನಿರ್ಮಾಣವಾಗಿಲ್ಲ. ಅಲೆಮಾರಿಗಳಾಗಿ ಸೂರಿನ ಕನಸು ಕಾಣುತ್ತಿರುವವರ ಕಣ್ಣೀರು ಒರೆಸೋರು ಕಣ್ಮರೆಯಾಗಿ ಎಷ್ಟೋ ದಿನಗಳಾಗಿದೆ. ಜನಪ್ರತಿನಿಧಿಗಳ ಪೊಳ್ಳು ಭರವಸೆ ಹಾಗೂ ಆಡಳಿತದ ಆಮೆಗತಿಗೆ ಹಿಡಿದ ಕೈಗನ್ನಡಿಯಾಗಿದೆ. ಕೊಡಗು ಪುನರ್ ನಿರ್ಮಾಣದ ಕಾರ್ಯವೈಖರಿ. ಆಶ್ಚರ್ಯ ಆದರೂ ಇದು ಸತ್ಯ. ಸರ್ಕಾರದ ಈ ನಡೆ ಸೂರು ಕಳೆದುಕೊಂಡವರ ಆತಂಕಕ್ಕೆ ಕಾರಣವಾಗಿದೆ.

    ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಸುಮಾರು 480 ಕುಟುಂಬಗಳು ಮನೆ ಕಳೆದುಕೊಂಡಿವೆ. ಅವರಿಗೆ ಮನೆ ನಿರ್ಮಿಸಿಕೊಡುವುದ್ದಕ್ಕೆ ಎಂದು ಜಿಲ್ಲೆಯ ಕರ್ಣಂಗೇರಿ, ಮದೆ, ಸಂಪಾಜೆ, ಕುಶಾಲನಗರ ಹಾಗೂ ಜಂಬೂರುಗಳಲ್ಲಿ ಸುಮಾರು 95.06 ಏಕರೆ ಭೂಮಿ ಗುರುತಿಸಿದೆ. ರಾಜೀವ್ ಗಾಂಧಿ ವಸತಿ ನಿಗಮ ಮನೆ ನಿರ್ಮಾಣದ ಹೊಣೆ ಹೊತ್ತಿದೆ. ಇದರ ನಡುವೆ ಡಬಲ್ ಬೆಡ್ ರೂಂ ಮನೆ ನಿರ್ಮಾಣದ ತೀರ್ಮಾನ ಅಂತಿಮವಾಗಿ ಡಿಸಂಬರ್ 7ರಂದು ಸಿಎಂ ಕುಮಾರಸ್ವಾಮಿ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದರು. ಅಲ್ಲದೇ ಅಂದು ಒಂದು ತಿಂಗಳೊಳಗೆ ಮನೆ ನಿರ್ಮಾಣವಾಗುತ್ತೆ ಎಂದು ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೂ ಒಂದೇ ಒಂದು ಮನೆ ಕೂಡ ನಿರ್ಮಾಣವಾಗಿಲ್ಲ. ಮನೆ ನಿರ್ಮಾಣ ಇರಲಿ ಒಂದು ಕಡೆ ಬಿಟ್ಟರೆ ಬೇರೆಲ್ಲೂ ಕೂಡ ಮನೆಯ ಫೌಂಡೇಶನ್ ಕೆಲಸ ಕೂಡ ಆಗಿಲ್ಲ. ಹೀಗಾದರೆ ಮನೆ ಯಾವಾಗ ನಿರ್ಮಾಣವಾಗುತ್ತೆ, ನಮಗ್ಯಾವಾಗ ಸೂರು ಸಿಗುತ್ತೆ? ಸಿಗುತ್ತಾ ಇಲ್ವಾ ಎನ್ನುವ ಆತಂಕದಲ್ಲೇ ನಿರಾಶ್ರಿತರು ದಿನದೂಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೂತು ಹೋಗಿರುವ ವಸ್ತುಗಳಿಗಾಗಿ ಈಗಲೂ ಹುಡುಕಾಡುತ್ತಿದ್ದಾರೆ ಕೊಡಗಿನ ಜನತೆ!

    ಹೂತು ಹೋಗಿರುವ ವಸ್ತುಗಳಿಗಾಗಿ ಈಗಲೂ ಹುಡುಕಾಡುತ್ತಿದ್ದಾರೆ ಕೊಡಗಿನ ಜನತೆ!

    ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಕುಟುಂಬಗಳು ಇಂದಿಗೂ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿವೆ. ಮಹಾಮಳೆಗೆ ಕುಸಿದ ಬೆಟ್ಟದ ಮಣ್ಣಿನ ರಾಶಿಯಡಿ ಸಿಲುಕಿಕೊಂಡ ಮನೆಗಳ ಅವಶೇಷಗಳಡಿಯಲ್ಲಿ ಹೂತು ಹೋಗಿರುವ ವಸ್ತುಗಳಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.

    ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಆಗಸ್ಟ್ 16ರ ಬೆಳಿಗ್ಗೆ 7.45 ಗಂಟೆಗೆ ಜಲಸ್ಫೋಟದೊಂದಿಗೆ ಭಾರೀ ಬೆಟ್ಟ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆಯೊಳಗಿದ್ದ ವೃದ್ಧೆಯೊಬ್ಬರು ಭೂ ಸಮಾಧಿಯಾಗಿದ್ದರು. ಇದೇ ಮನೆಯೊಳಗಿದ್ದ ಗಣಪತಿ ಮತ್ತವರ ಕುಟುಂಬ ಸದಸ್ಯರು ಪವಾಡದ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ದರು.

    ಕಣ್ಣೇದುರೇ ಹೂತು ಹೋದ ಹೆತ್ತಾಕೆಯನ್ನು ಹೊರಗೆಳೆಯಲು 40 ಅಡಿ ಎತ್ತರದ ಕೆಸರಿನ ಪ್ರವಾಹ ಬಿಡಲಿಲ್ಲ. ನೀರು ಪಾಲಾದ ಸ್ಥಿತಿಯಲ್ಲಿದ್ದ 2 ಕ್ವಿಂಟಾಲ್ ಕರಿಮೆಣಸು, ಹರಿದ ಬಟ್ಟೆಗಳು, ಮುರಿದ ಮಂಚ, ಕೆಸರು ಮೆತ್ತಿಕೊಂಡ ಕೆಲವು ದಾಖಲೆಗಳು ಸಿಕ್ಕಿದ್ದವು.

    ಶೋಧ ಮುಂದುವರಿಸುತ್ತಿದ್ದಂತೆಯೇ ಅಮ್ಮವ್ವ ಅವರ 1 ಚಿನ್ನದ ಉಂಗುರ, 1 ಜೊತೆ ಓಲೆ, ತಿಂಗಳ ಖರ್ಚಿಗೆಂದು ಮನೆಯಲ್ಲಿಟ್ಟದ್ದ 10 ಸಾವಿರ ರೂ. ನಗದು ಕೆಸರು ಮೆತ್ತಿದ ಸ್ಥಿತಿಯಲ್ಲಿ ಮಣ್ಣಿನಡಿಯಲ್ಲಿ ಪತ್ತೆಯಾದವು. ಮತ್ತಷ್ಟು ಹುಡುಕಿದಾಗ ಕೊಡವ ಸಂಪ್ರದಾಯದ ತೆಂಗಿನ ಎಣ್ಣೆಯ 2 ಬಟ್ಟಲು, ಮುರಿದು ತುಂಡರಿಸಲ್ಪಟ್ಟ ಸ್ಥಿತಿಯಲ್ಲಿದ್ದ ಜೋಡಿ ನಳಿಕೆಯ 1 ಜಮ್ಮಾ ಬಂದೂಕು, ಅಡುಗೆ ಸಿಲಿಂಡರ್ ಮತ್ತು ಬೆಳ್ಳಿಯ ಪೀಚೆಕತ್ತಿ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv