Tag: Land Acquisition

  • ಕೆಐಡಿಬಿಯಿಂದ 1700 ಎಕರೆ ಭೂ ಸ್ವಾಧೀನಕ್ಕೆ ರೈತರ ವಿರೋಧ – ಬೃಹತ್ ಟ್ರಾಕ್ಟರ್  ರ‍್ಯಾಲಿ

    ಕೆಐಡಿಬಿಯಿಂದ 1700 ಎಕರೆ ಭೂ ಸ್ವಾಧೀನಕ್ಕೆ ರೈತರ ವಿರೋಧ – ಬೃಹತ್ ಟ್ರಾಕ್ಟರ್ ರ‍್ಯಾಲಿ

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಈಗಾಗಲೇ ಕೆಐಡಿಬಿ ಹಂತ-ಹಂತವಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ತಿದೆ. ಈ ಹಿನ್ನೆಲೆ ರೈತರು ಆಕ್ರೋಶಗೊಂಡಿದ್ದು, ಇಂದು ಬೃಹತ್ ಟ್ರಾಕ್ಟರ್ ರ‍್ಯಾಲಿ ಮಾಡಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಸಾವಿರಾರು ಎಕರೆ ರೈತರ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿದ್ದ ಕೆಐಡಿಬಿ, ಇದೀಗ ಎರಡನೇ ಹಂತವಾಗಿ ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ರೈತರು ಟ್ರಾಕ್ಟರ್ ರ್ಯಾಲಿ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಸಿ ಭವನಕ್ಕೆ ಲಗ್ಗೆ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.

    ಸರ್ಕಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದ ದೇವನಹಳ್ಳಿಯ ಹಲವು ಹಳ್ಳಿಗಳಲ್ಲಿ ಮುಂದಿನ ದಿನ ಕೈಗಾರಿಕೆ ಅನುಕೂಲವಾಗಲಿ ಎಂದು ಸಾವಿರಾರು ಎಕರೆ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿದೆ. ರೈತರಿಗೆ ಮೊದಲನೇ ಹಂತದ ಭೂಮಿಗೆ ಪರಿಹಾರ ಕೊಡುವ ಪ್ರಕ್ರಿಯೆ ಕೂಡ ಮುಗಿದಿಲ್ಲ. ಇದೀಗ 13 ಹಳ್ಳಿಗಳ 1700 ಎಕರೆ ರೈತರ ಭೂಮಿಯನ್ನ ಎರಡನೇ ಹಂತದಲ್ಲಿ ಭೂ ಸ್ವಾಧೀನಕ್ಕೆ ಮುಂದಾಗಿದ್ದು, ರೈತರ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ:  ಮತ್ತೆ ಕ್ಲೋಸ್ ಆಯ್ತು ಫ್ಲೈಓವರ್ – ಕಳಪೆ ಕಾಮಗಾರಿ ಎಂದ ತಜ್ಞರು

    15 ದಿನಗಳಿಂದ ಭೂ-ಸ್ವಾಧೀನ ಕೈಬಿಡುವಂತೆ ರೈತರು ಧರಣಿ ನಡೆಸಿ 15 ದಿನಗಳ ಗಡುವನ್ನ ನೀಡಿದ್ದರು. ಆದ್ರೆ ಫಲಿತಾಂಶ ಬಾರದ ಕಾರಣ ಇಂದು 13 ಹಳ್ಳಿಗಳ ರೈತರು ಡಿಸಿ ಕಚೇರಿವರೆಗೂ ಟ್ರಾಕ್ಟರ್ ರ‍್ಯಾಲಿ ನಡೆಸಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ರೈತರು ಇಂದು ಟ್ರಾಕ್ಟರ್ ರ‍್ಯಾಲಿ ನಡೆಸಲು, ಎಲ್ಲ ಹಳ್ಳಿಗಳಿಂದ ಟ್ರಾಕ್ಟರ್ ಗಳು ಚನ್ನರಾಯಪಟ್ಟಣಕ್ಕೆ ತಂದು ಡಿಸಿ ಕಚೇರಿಗೆ ಹೊರಡಲು ಯೋಜನೆ ರೂಪಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಅಧಿವೇಶನ ಹಿನ್ನೆಲೆ ರೈತರ ಹೋರಾಟ ಜೋರಾಗಬಹುದೆಂದು ಟ್ರಾಕ್ಟರ್ ಗಳನ್ನ ಸೀಜ್ ಮಾಡಲು ಬೆಳಗ್ಗೆಯಿಂದ ಮುಂದಾಗಿದ್ದರು.

    ಪರಿಣಾಮ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿತ್ತು. ಜೊತೆಗೆ ಚನ್ನರಾಯಪಟ್ಟಣ ಸರ್ಕಲ್ ನಿಂದ ಟ್ರಾಕ್ಟರ್ ಗಳು ತೆರಳಲು ಪೊಲೀಸರು ನಿರಾಕರಿಸಿದ್ರು. ಈ ಹೋರಾಟ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೈರೇಗೌಡ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ನಾಲ್ಕು ಟ್ರಾಕ್ಟರ್ ಗಳಿಗೆ ಪೊಲೀಸರು ತೆರಳಲು ಅನುಮತಿ ನೀಡಿದ್ದು, ಟ್ರಾಕ್ಟರ್ ಗಳಲ್ಲೆ ಕುಳಿತ ರೈತರು ಡಿಸಿ ಕಚೇರಿವರೆಗೂ ರ‍್ಯಾಲಿಯಲ್ಲಿ ತೆರಳಿ ಭೂ-ಸ್ವಾಧೀನ ಕೈಬಿಡುವಂತೆ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಪ್ರಿಯತಮನ ಕೊಲೆ ಮಾಡಿದ ಪ್ರಿಯತಮೆ 7 ವರ್ಷದ ಬಳಿಕ ಅರೆಸ್ಟ್!

    ಕೃಷಿ ಆಧಾರಿತ ಭೂಮಿಗಳನ್ನ ಸರ್ಕಾರ ಸ್ವಾಧೀನಪಡಿಸಿಕೊಂಡು ರೈತರನ್ನ ಸಂಕಷ್ಟಕ್ಕೆ ದುಡುತ್ತಿದೆ ಅಂತ ಆಕ್ರೋಶ ಹೊರಹಾಕಿದ್ರು. ವಿಮಾನ ನಿಲ್ದಾಣದ ಪಕ್ಕದ ಚನ್ನರಾಯಪಟ್ಟಣ ಹೋಬಳಿಯ ಹಲವು ಹಳ್ಳಿಗಳ ರೈತರ ಭೂಮಿಯನ್ನ ಮುಂದಿನ ಕೈಗಾರಿಕಾ ಘಟಕ ಸ್ಥಾಪನೆಗೆ ಕೆಐಡಿಬಿ ಭೂ-ಸ್ವಾಧೀನಕ್ಕೆ ಮುಂದಾಗಿದೆ. ಇದಕ್ಕೆ ಹಲವು ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಎರಡು ಬಾರಿ ಬೃಹತ್ ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಭೂ ಕಬಳಿಕೆ ರೈತರಿಗೆ ಕುಣಿಕೆ – ಮಲೆನಾಡಿನಲ್ಲಿ ಜೈಲು ಸೇರ್ತಾರಾ ಒತ್ತುವರಿದಾರರು?

    ಭೂ ಕಬಳಿಕೆ ರೈತರಿಗೆ ಕುಣಿಕೆ – ಮಲೆನಾಡಿನಲ್ಲಿ ಜೈಲು ಸೇರ್ತಾರಾ ಒತ್ತುವರಿದಾರರು?

    ಶಿವಮೊಗ್ಗ: ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಕರ್ನಾಟಕ ಭೂ ಒತ್ತುವರಿ ನಿಷೇಧ ವಿಶೇಷ ನ್ಯಾಯಾಲಯವೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಅನ್ವಯ ಮಲೆನಾಡಿನ ಇಬ್ಬರು ರೈತರಿಗೆ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ವಿಶೇಷ ನ್ಯಾಯಾಲಯ ರಚನೆ ಆದ ಮೇಲೆ ಇದು ಜೈಲು ಶಿಕ್ಷೆಗೆ ಗುರಿಯಾದ ಜಿಲ್ಲೆಯ ಮೊದಲ ಪ್ರಕರಣವಾಗಿದೆ.

    ಸಾಗರ ತಾಲೂಕು ಆವಿನಹಳ್ಳಿ ಗ್ರಾಮದಲ್ಲಿ ಮೂರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದ ವಾಸು, ಹಾಗೂ ಎರಡು ಎಕರೆ ಒತ್ತುವರಿ ಮಾಡಿದ್ದ ಗಣಪತಿ ಶಿಕ್ಷೆಗೆ ಒಳಗಾದ ರೈತರು. ಈ ಅರಣ್ಯ ಒತ್ತುವರಿ ಬಗ್ಗೆ ಸಾಗರ ವಲಯ ಅರಣ್ಯಾಧಿಕಾರಿ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಬಳಿಕ, ಇವರಿಬ್ಬರಿಗೂ ಒಂದು ವರ್ಷ ಜೈಲು, 10 ಸಾವಿರ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ಕರ್ನಾಟಕ ಭೂಒತ್ತುವರಿ ನಿಷೇಧ ವಿಶೇಷ ನ್ಯಾಯಲಯದ ತೀರ್ಪು ನೀಡಿದೆ.

    ಮಲೆನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಐನೂರಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿ ಹಂತದಲ್ಲಿದ್ದು, ಇಷ್ಟೂ ಜನ ತಮ್ಮ ಬದುಕು ಕಟ್ಟಿಕೊಂಡ ತೋಟ, ಗದ್ದೆ, ಮನೆಗಳನ್ನು ತೆರವು ಮಾಡಬೇಕಾಗಿದೆ. ಇಷ್ಟೇ ಅಲ್ಲದೆ, ಇವರೆಲ್ಲರೂ ಜೈಲು ಶಿಕ್ಷೆ ಅಥವಾ ದಂಡ ಪಾವತಿಸಿ, ಬೀದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ಇದೇ ಪ್ರಕರಣ ಮಾದರಿಯಲ್ಲಿ ವಿಚಾರಣೆಗಳು ನಡೆದಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸರಿ ಸುಮಾರು ಒಂದು ಲಕ್ಷ ಜನ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಬಗರ್ ಹುಕುಂ, ಅರಣ್ಯ ಹಕ್ಕು ಇನ್ನಿತರ ಕಾಯ್ದೆಗಳ ಅಡಿ ಭೂ ಮಂಜೂರಾತಿಗೆ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದರು. ಇವುಗಳಲ್ಲಿ ತಿರಸ್ಕೃತ ಅರ್ಜಿಗಳನ್ನು ಸಾರಾಸಗಟಾಗಿ ಅಕ್ರಮ ಎಂದು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಪರಿಗಣಿಸಿ, ಪ್ರಕರಣ ದಾಖಲಿಸಲು ಆರಂಭಿಸಿವೆ.

    ಇಡೀ ಮಲೆನಾಡು ಈ ತೀರ್ಪಿನಿಂದಾಗಿ ಬೆಚ್ಚಿ ಬಿದ್ದಿದೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಈ ಘಟನೆ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ. ಅಲ್ಲದೆ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಮಲೆನಾಡಿನ ಲಕ್ಷಾಂತರ ಕೃಷಿಕರು ಭೂಮಿ ಕಳೆದುಕೊಳ್ಳಲಿದ್ದಾರೆ. ಇದೂವರೆಗೆ ಬಂದ ಎಲ್ಲಾ ಸರ್ಕಾರಗಳೂ, ರಾಜಕೀಯ ಪಕ್ಷಗಳೂ ಈ ಕಾಯ್ದೆ ರದ್ದು ಮಾಡುತ್ತೇವೆ ಎಂದು ಮೊಸಳೆ ಕಣ್ಣೀರು ಸುರಿಸಿವೆ. ಆದರೆ, ಮಲೆನಾಡಿನ ರೈತರು ಭೂಗಳ್ಳರು ಎಂಬ ಹಣೆಪಟ್ಟೆ ಕಟ್ಟಿಕೊಳ್ಳುವುದು ತಪ್ಪಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಇಂಥ ಪ್ರಕರಣಗಳು ಮಲೆನಾಡಿನಾದ್ಯಂತ ತಲ್ಲಣ ಮೂಡಿಸಲಿವೆ.

    ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಯ ಸೆಕ್ಷನ್ 7ರ ಪ್ರಕಾರ ಭೂಕಬಳಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬಹುದು. ಇದರ ಅನ್ವಯ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ವಿಶೇಷ ನ್ಯಾಯಾಲಯ ಸ್ಥಾಪನೆಯಾಯಿತು. ಇಡೀ ರಾಜ್ಯದ ಯಾವುದೇ ಭಾಗದಲ್ಲಿ ಕಂದಾಯ, ಅರಣ್ಯ, ನಗರಸಭೆ, ಗ್ರಾಪಂ ಸೇರಿದಂತೆ ಯಾವುದೇ ರೀತಿಯ ಸರ್ಕಾರಿ ಭೂಮಿ ಕಬಳಿಕೆ ವ್ಯಾಜ್ಯಗಳು ಇದೊಂದೇ ನ್ಯಾಯಾಲಯದಲ್ಲಿ ನಡೆಯುತ್ತವೆ.

    ಮಲೆನಾಡಿನ ಯಾವುದೋ ಮೂಲೆಯಲ್ಲಿ ಒಂದು ಎಕರೆ ಭೂಮಿಯನ್ನು ಜೀವನಕ್ಕಾಗಿ ಸಾಗುವಳಿ ಮಾಡಿದ್ದರೆ, ಆ ರೈತ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಓಡಾಡಬೇಕು. ಮಲೆನಾಡಿನ ರೈತರಿಗೆ ಈ ಬಿಸಿ ತಟ್ಟತೊಡಗಿದೆ.

  • ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಇಟಾನಗರ: ಕೇಂದ್ರ ರಕ್ಷಣಾ ಸಚಿವಾಲಯದಿಂದ ಅರುಣಾಚಲಪ್ರದೇಶದ ಹಳ್ಳಿಯ ಜನರಿಗೆ ಕೊಟ್ಯಾಧಿಪತಿಯಾಗುವ ಭಾಗ್ಯ ಬಂದಿದೆ. ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯು ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರ ಹೊಮ್ಮಿದೆ.

    ಕೇಂದ್ರದ ರಕ್ಷಣಾ ಸಚಿವಾಲಯವು ಬೊಮ್ಜ ಹಳ್ಳಿಯಲ್ಲಿ 200.056 ಎಕರೆ ಭೂ ಸ್ವಾಧೀನ ಮಾಡಿರುವ ಕಾರಣ ಪರಿಹಾರ ಧನವಾಗಿ 40,80,38,400 ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಪರಿಹಾರ ಹಣವನ್ನು ಕೊಡಲಾಗಿದ್ದು, ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ.

    31 ಕುಟುಂಬಗಳಿರುವ ಹಳ್ಳಿಯಲ್ಲಿ, 29 ಕುಟುಂಬಗಳಿಗೆ ತಲಾ 1,09,03,813.37 ರೂ. ಗಳನ್ನು ಕೊಡಲಾಗಿದೆ. ಇದರಿಂದ ಬೊಮ್ಜ ಕೋಟ್ಯಾಧಿಪತಿಗಳ ಹಳ್ಳಿಯಾಗಿ ಬದಲಾಗಿದೆ. ತಾವಾಂಗ್ ಗ್ಯಾರಿಸನ್‍ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

    ಈ ಹಣವನ್ನು ಸೋಮವಾರ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯು ಭೂಸ್ವಾಧೀನ ಪರಿಹಾರವನ್ನು ಮತ್ತಷ್ಟು ನೀಡಲಿದೆ ಎಂದು ಹೇಳಿದರು.