Tag: Lal Bagh

  • ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದ ರಚಿತಾ ರಾಮ್ ಕಾರು

    ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದ ರಚಿತಾ ರಾಮ್ ಕಾರು

    ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಲಾಲ್ ಬಾಗ್ (Lal Bagh) ನಲ್ಲಿ ಫ್ಲವರ್ ಶೋ (Flower Show) ನಡೆಯುತ್ತಿದೆ. ಇದರಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕಾಗಿ ನಟಿ ರಚಿತಾ ರಾಮ್ (Rachita Ram) ಇಂದು ಲಾಲ್ ಬಾಗ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ. ಜಸ್ಟ್ ಮಿಸ್ ಎನ್ನುವಂತೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾನೆ.

    ಈ ಘಟನೆ ನಡೆದಾಗ ರಚಿತಾ ರಾಮ್ ಕಾರಲ್ಲಿ ಇದ್ದರೂ, ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ಲವರ್ ಶೋನತ್ತ ತೆರಳಿದ್ದಾರೆ. ಕಾರು ನಿಲ್ಲಿಸದೇ ಕ್ಷಮೆಯಾಚನೆಯೂ ಮಾಡದೇ ಹೊರಟ ರಚಿತಾ ಹಾಗೂ ಡ್ರೈವರ್ ನಡೆಗೆ ಅಲ್ಲಿದ್ದವರು ಬೇಸರ ಮಾಡಿಕೊಂಡಿದ್ದಾರೆ.

     

    ಆಕಸ್ಮಿಕ ಎನ್ನುವಂತೆ ಘಟನೆ ನಡೆದಿದ್ದರೂ, ರಚಿತಾ ರಾಮ್ ಕನಿಷ್ಠ ಮಾನವೀಯತೆ ದೃಷ್ಟಿಯಿಂದಾರೂ ಕಾರ್ಮಿಕನನ್ನು ಮಾತನಾಡಿಸಬೇಕಿತ್ತು ಎನ್ನುವುದು ಅಲ್ಲಿದ್ದವರ ಪ್ರತಿಕ್ರಿಯೆಯಾಗಿತ್ತು. ಆದರೆ, ರಚಿತಾ ಹಾಗೆ ಮಾಡಿಲ್ಲ ಎನ್ನುವುದೇ ಬೇಸರದ ಸಂಗತಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನ ಬಾಕಿಯಿದೆ. ಆದರೆ ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‍ಬಾಗ್‍ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಈ ಬಾರಿ ರದ್ದಾಗಿದೆ.

    ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ರದ್ದತಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕುಸುಮಾ, ಕೊರೊನಾ ಭೀತಿ ಹಿನ್ನೆಲೆ ಫ್ಲವರ್ ಶೋವನ್ನು ಕೈ ಬಿಟ್ಟಿದ್ದೇವೆ. ಪ್ರತಿವರ್ಷ ಐದು ಲಕ್ಷಕ್ಕೂ ಹೆಚ್ಚು ಮಂದಿ ಫ್ಲವರ್ ಶೋ ವೀಕ್ಷಣೆ ಮಾಡುತ್ತಿದ್ದರು ಎಂದು ಹೇಳಿದರು.

    ಒಂದು ಪ್ರದರ್ಶನಕ್ಕೆ ಎರಡು ಕೋಟಿಗೂ ಅಧಿಕ ವೆಚ್ಚ ತಗುಲುತ್ತಿತ್ತು. ಫ್ಲವರ್ ಶೋ ವೇಳೆ ಹೆಚ್ಚು ಜನ ಉದ್ಯಾನವನಕ್ಕೆ ಬರುತ್ತಾರೆ. ಈ ವೇಳೆ ಕ್ರೌಡ್ ಕಂಟ್ರೋಲ್ ಮಾಡುವುದು ಅಸಾಧ್ಯ. 1912 ರಿಂದ ಆರಂಭವಾದ ಪ್ಲವರ್ ಶೋ ಸುಮಾರು 109 ವರ್ಷಗಳ ಕಾಲ ಸತತವಾಗಿ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು.

    ತೋಟಗಾರಿಕೆ ಇಲಾಖೆ ಈ ವರ್ಷ ಆಯೋಜನೆ ಮಾಡುವ ಲೆಕ್ಕಾಚಾರ ಇಟ್ಟುಕೊಂಡಿತ್ತು. ಈ ಬಗ್ಗೆ ಬಿಬಿಎಂಪಿಗೆ ತೋಟಗಾರಿಕೆ ಇಲಾಖೆ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಫಲಪುಷ್ಪ ಪ್ರದರ್ಶನ ಆಯೋಜಿಸುವುದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷದ ಫ್ಲವರ್ ಶೋವನ್ನು ತೋಟಗಾರಿಕೆ ಇಲಾಖೆ ಕೈ ಬಿಟ್ಟಿದೆ ಎಂದರು.

    ಕೋವಿಡ್ 19 ನಿಂದಾಗಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ಫ್ಲವರ್ ಶೋ ರದ್ದಾಗಿತ್ತು. ಈಗ ಮತ್ತೊಮ್ಮೆ ಕೊರೊನಾ ಕಾರಣದಿಂದಾಗಿ ಫ್ಲವರ್ ಶೋ ರದ್ದಾಗಿದೆ.

  • ಬೆಳ್ಳಂಬೆಳಗ್ಗೆ ಲಾಲ್ ಬಾಗ್‍ನಲ್ಲಿ ಸೋಮಣ್ಣ ರೌಂಡ್ಸ್

    ಬೆಳ್ಳಂಬೆಳಗ್ಗೆ ಲಾಲ್ ಬಾಗ್‍ನಲ್ಲಿ ಸೋಮಣ್ಣ ರೌಂಡ್ಸ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಲಾಲ್ ಬಾಗ್ ಉದ್ಯಾನವನಕ್ಕೆ ವಸತಿ ತೋಟಗಾರಿಕಾ ಮತ್ತು ರೇಷ್ಮೆ ಸಚಿವರಾದ ವಿ. ಸೋಮಣ್ಣ ಭೇಟಿ ಕೊಟ್ಟಿದ್ದಾರೆ. ಮುಂಜಾನೆ ಲಾಲ್ ಬಾಗ್‍ನಲ್ಲಿ ವಾಯು ವಿಹಾರ ಮಾಡಿ, ಲಾಲ್ ಬಾಗ್‍ಗೆ ವಾಯು ವಿಹಾರಕ್ಕೆ ಬಂದಿದ್ದ ನಾಗರಿಕರ ಜೊತೆ ಸಂವಾದ ನಡೆಸಿದ್ದಾರೆ.

    ಲಾಲ್ ಬಾಗ್ ರೌಂಡ್ಸ್ ಹಾಕಿ ಗ್ಲಾಸ್ ಹೌಸ್, ರೋಜ್ ಗಾರ್ಡನ್, ಲಾಲ್ ಬಾಗ್ ಕೆರೆ ಮತ್ತು ಫಾಲ್ಸ್ ಅನ್ನು ಸಚಿವರು ವೀಕ್ಷಣೆ ಮಾಡಿದರು. ನಾಗರಿಕರ ಜೊತೆ ಮಾತನಾಡಿ ನಿಮಗೆ ಏನಾದರೂ ಸಮಸ್ಯೆ ಇದ್ದರೆ ಹೇಳಿ, ಉದ್ಯಾನವನದಲ್ಲಿ ಏನೇ ಕೆಲಸ ಆಗಬೇಕಾದರು ತಿಳಿಸಿ ಎಂದರು.

    ಲಾಲ್ ಬಾಗ್ ರೌಂಡ್ಸ್ ಹಾಕಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಗಣರಾಜ್ಯೋತ್ಸವದ ಬಳಿಕ ನಾವು ಇಲ್ಲಿಗೆ ಭೇಟಿ ನೀಡಿದ್ದೇವೆ. ಮೊನ್ನೆಯಷ್ಟೇ ಕಬ್ಬನ್ ಪಾರ್ಕ್‍ಗೆ ಹೋಗಿದ್ದೆ. ವಾಕರ್ಸ್ ಆರೋಗ್ಯ ತಪಾಸಣೆಗೆ ಆಸ್ಪತ್ರೆಯನ್ನು ಮಾಡಲಾಗಿದೆ. ಸಾರ್ವಜನಿಕರು ನೆಮ್ಮದಿಯಿಂದ ವಾಕ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ತಿಂಗಳು ಆಯವ್ಯಯ ಮಂಡನೆ ಮಾಡಲಾಗುತ್ತದೆ. ಇದರಲ್ಲಿ ತೋಟಗಾರಿಕೆ ಇಲಾಖೆ ಅಭಿವೃದ್ಧಿಗೆ ಹಣ ಇಡುವಂತೆ ಮನವಿ ಮಾಡಲಾಗಿದೆ. ಫೆ. 3ರಂದು ಸಿಎಂ ಚರ್ಚೆಗೆ ಕರೆದಿದ್ದಾರೆ. ಇದನ್ನು ಇನ್ನೂ ಮೇಲ್ದರ್ಜೆಗೆ ಕೊಂಡೊಯ್ಯಲು ಚಿಂತನೆ ಮಾಡಲಾಗಿದೆ. ಕೆಂಪೇಗೌಡರ ಚಿಂತನೆಗೆ ಮೀರಿ ಬೆಂಗಳೂರು ಬೆಳೆಯುತ್ತಿದೆ ಎಂದು ತಿಳಿಸಿದರು.

    ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಣ್ಣ, ಹೈಕಮಾಂಡ್ ಇದೆ, ಅನುಭವಿ ಸಿಎಂ ಇದ್ದಾರೆ. ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ ಮಾಡ್ತಿನಿ ಅಂತ ಹೇಳಿದ್ದಾರೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ ಅಂತ. ಯಡಿಯೂರಪ್ಪ ನಿಂತ ನೀರಲ್ಲ, ಅವರು ಹೈಕಮಾಂಡ್ ಬಳಿ ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಹೈಕಮಾಂಡ್ ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಾನು ಊಹಾಪೋಹದವನಲ್ಲ ಹಿರಿಯ ಸಚಿವರಿಗೆ ಕೋಕ್ ನೀಡುವ ಬಗ್ಗೆ ಖಂಡಿತವಾಗಿಯೂ ಗೊತ್ತಿಲ್ಲ ಎಂದು ಹೇಳಿದರು.

  • ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಫೋಟೋ ಶೂಟ್‍ಗೆ ಕ್ಯಾಮೆರಾ ತಂದರೆ ಲಕ್ಷಾಂತರ ರೂಪಾಯಿ ಕ್ಯಾಮೆರಾ ಸೀಜ್ ಆಗಲಿದೆ. ಅಲ್ಲದೇ ಜೊತೆಗೆ ಫೋಟೋ ಶೂಟ್ ಮಾಡಿದರೆ ದಂಡ ಕೂಡ ಹಾಕುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.

    ಈಗಾಗಲೇ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಫೋಟೋ ಶೂಟ್ ನಿಷೇಧಗೊಂಡಿದೆ. ಆದರೂ ಈ ಆದೇಶಕ್ಕೆ ಕ್ಯಾರೇ ಅನ್ನದ ಜನರು, ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಸುವಾಗ ಎಲ್ಲೆಂದರಲ್ಲಿ ಬಟ್ಟೆ ಬದಲಾಯಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬಂದವರಿಗೆ ಇರಿಸುಮುರಿಸು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸಾಕಷ್ಟು ಜನರು ಈ ವಿಚಾರವಾಗಿ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ಜೊತೆಗೆ ಹೈ ರೆಸ್ಯೂಲಷನ್ ಇರುವ ಕ್ಯಾಮೆರಾ ಬಳಕೆಯಿಂದ ಕಬ್ಬನ್ ಪಾರ್ಕಿನ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ ಎಂದು ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

    ಸದ್ಯವೇ ಫೋಟೋ ಶೂಟ್ ಗೆ ಬಳಸುವ ಕ್ಯಾಮೆರಾಗಳನ್ನು ಸೀಜ್ ಮಾಡಿ ದಂಡ ಕಟ್ಟಿಸಿಕೊಳ್ಳುವ ಕಾಯ್ದೆಯನ್ನು ಪ್ರಯೋಗಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

  • ಲಾಲ್ ಬಾಗ್ ಫ್ಲವರ್ ಶೋ ವೀಕ್ಷಣೆಗೆ ನಮ್ಮ ಮೆಟ್ರೋನಿಂದ ಬಂಪರ್ ಆಫರ್!

    ಲಾಲ್ ಬಾಗ್ ಫ್ಲವರ್ ಶೋ ವೀಕ್ಷಣೆಗೆ ನಮ್ಮ ಮೆಟ್ರೋನಿಂದ ಬಂಪರ್ ಆಫರ್!

    ಬೆಂಗಳೂರು: ವೀಕೆಂಡ್ ನಲ್ಲಿ ಲಾಲ್ ಬಾಗ್ ಫ್ಲವರ್ ಶೋ ನೋಡಲು ಬರುವವರಿಗೆ ನಮ್ಮ ಮೆಟ್ರೋ ಬಂಪರ್ ಆಫರ್  ವೊಂದನ್ನು ನೀಡಿದೆ.

    ನಮ್ಮ ಮೆಟ್ರೋ ಕೇವಲ 30 ರೂಪಾಯಿಯಲ್ಲಿ ಎರಡು ಬದಿಯ ಪ್ರಯಾಣಕ್ಕೆ ಅವಕಾಶ ನೀಡಿದೆ. 30 ರೂ. ಪೇಪರ್ ಟಿಕೆಟ್ ಮೂಲಕ ಲಾಲ್ ಬಾಗ್ ಗೆ ಹೋಗಿ ವಾಪಸ್ ಬರಬಹುದು. ಅಷ್ಟೇ ಅಲ್ಲದೇ ಲಾಲ್ ಬಾಗ್ ನಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹೋಗಿ ವಾಪಸ್ ಆಗಬಹುದು.

    ಈ ಆಫರ್ ವೀಕೆಂಡ್ ನಲ್ಲಿ ಅಂದ್ರೆ ದಿನಾಂಕ 11, 12, 15 ರಂದು ಮಾತ್ರ ಅನ್ವಯವಾಗುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು 30 ರೂ. ನಲ್ಲಿ ಲಾಲ್ ಬಾಗ್ ಹೋಗಿ ವಾಪಸ್ ಬರಬಹುದು. ಸ್ಮಾರ್ಟ್ ಕಾರ್ಡ್ ಬಳಕೆ ಮಾಡುವರಿಗೂ ಸಾಮಾನ್ಯ ದರ ಅನ್ವಯವಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 208ನೇ ಫ್ಲವರ್ ಶೋ- ಒಂದೇ ದಿನದಲ್ಲಿ ಲಕ್ಷಕ್ಕಿಂತ್ಲೂ ಅಧಿಕ ಜನ ಭೇಟಿ

    208ನೇ ಫ್ಲವರ್ ಶೋ- ಒಂದೇ ದಿನದಲ್ಲಿ ಲಕ್ಷಕ್ಕಿಂತ್ಲೂ ಅಧಿಕ ಜನ ಭೇಟಿ

    ಬೆಂಗಳೂರು: ಬಹುನೀರಿಕ್ಷಿತ 208 ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಈ ಹೂಮೇಳ ನೋಡಲು ಜನರು ಸಾಗರದಂತೆ ಹರಿದು ಬಂದಿದ್ದು, ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಜನರು ಭೇಟಿ ನೀಡಿದ್ದಾರೆ.

    ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ 208ನೇ ಫ್ಲವರ್ ಶೋ ಎಲ್ಲರ ಮನಸೂರೆಗೊಳಿಸಿದೆ. ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ಸೂಚಿಸುವ ಯೋಜನೆ ಜನಮೆಚ್ಚುಗೆಗೆ ಪಾತ್ರವಾಗಿದೆ. ಯುದ್ಧ ವಾಹನಗಳು, ಹಿಮಾಲಯದ ಬೆಟ್ಟ ಗುಡ್ಡಗಳು, ಸಿಯಾಚಿನ್‍ನ ಹಿಮ, ಟ್ಯಾಂಕರ್, ನೌಕಾದಳದ ಹಡಗನ್ನು ಹೂವಿನ ಮಾದರಿಯಲ್ಲಿ ರಚಿಸಲಾಗಿದ್ದು, ಜನ ಆಸಕ್ತಿಯಿಂದ ಆಗಮಿಸಿ ಕಣ್ತುಂಬಿಕೊಂಡಿದ್ದಾರೆ.

    ಲಾಲ್‍ಬಾಗ್ ಹೂಮೇಳದಿಂದಾಗಿ ಸಿಂಗಾರಗೊಂಡ ನವ ವಧುವಿನಂತೆ ಕಂಗೊಳಿಸುತ್ತಿತ್ತು. ಶನಿವಾರ ಮೊದಲ ದಿನವಾದ್ದರಿಂದ ಫ್ಲವರ್ ಶೋಗೆ 15 ಸಾವಿರ ಜನ ಭೇಟಿ ನೀಡಿದ್ದರು. ಭಾನುವಾರ ಆಗಿದ್ದರಿಂದ ಹೆಚ್ಚು ಜನ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಭೇಟಿ ಕೊಟ್ಟಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಲಾಲ್‍ಬಾಗ್‍ಗೆ ಭೇಟಿ ಕೊಟ್ಟಿದ್ದಾರೆ ಎಂದು ಪ್ರವಾಸಿ ಆರತಿ ಹೇಳಿದ್ದಾರೆ.

    ಗಾಜಿನ ಮನೆ ಪ್ರವೇಶ ಮಾಡುತ್ತಿದ್ದಂತೆಯೇ ನವದೆಹಲಿಯಲ್ಲಿರುವ ಸ್ಮಾರಕ ಅಮರ್ ಜವಾನ್ ಜ್ಯೋತಿಯ ಮಾದರಿಯನ್ನ ನಿರ್ಮಿಸಲಾಗಿದೆ. ಫಲಪುಷ್ಪಗಳ ಜೊತೆ ಸೈನಿಕರ ತ್ಯಾಗ ಬಲಿದಾನ ಕುರಿತು ಮೂಡಿಸುವ ಜಾಗೃತಿಗೆ ಸಾರ್ವಜನಿಕರು ಭೇಷ್ ಅನ್ನುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿರುವ ರೀಲ್ ಚಿತ್ರವೂ ಕೂಡ ಗಾಜಿನ ಮನೆಯಲ್ಲಿ ಗಮನ ಸೆಳೆಯುತ್ತಿದೆ. ಈ ಫಲಪುಷ್ಪ ಪ್ರದರ್ಶನದ ಸೊಬಗು ಆಗಸ್ಟ್ 15 ರವರೆಗೆ ಆಯೋಜನೆಗೊಂಡಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews