Tag: Lakshmivara Tirtha Swamiji

  • ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇವತ್ತು ನಡೆಯಲಿದ್ದು, ಶಿರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

    ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮಕ್ಕೆ ಏರ್ಪಾಟು ಮಾಡಿಕೊಂಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ಮಠದಲ್ಲಿರುವ ಮುಖ್ಯಪ್ರಾಣ ದೇವರು, ಅನ್ನವಿಠಲ ದೇವರಿಗೆ ಎಳನೀರಿನ ಅಭಿಷೇಕ ನಡೆಯಲಿದೆ. ಆರಾಧನಾ ಪ್ರಕ್ರಿಯೆಯ ನಂತರ ಸುಮಾರು 300 ಜನರಿಗೆ ಅನ್ನದಾನ ನಡೆಯಲಿದೆ. ಕಾಪು ತಾಲೂಕಿನ ಹಿರಿಯಡ್ಕ ಸಮೀಪದ ಶಿರೂರು ಗ್ರಾಮದಲ್ಲಿ ಈ ಎಲ್ಲಾ ವಿಧಿವಿಧಾನ ನಡೆಯುತ್ತಿದ್ದು, ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಆರಾಧನಾ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದೆ.

    ಜುಲೈ 19 ರಂದು ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ 13 ನೇ ದಿನಕ್ಕೆ ಆರಾಧನೆ ನಡೆಯಬೇಕಿತ್ತು. ಆದರೆ ವಾರದ ಹಿಂದೆಯಷ್ಟೇ ಪೊಲೀಸರು ಮೂಲಮಠವನ್ನು ದ್ವಂದ್ವ ಸೋದೆ ಮಠಕ್ಕೆ ಬಿಟ್ಟುಕೊಟ್ಟಿದ್ದರು. ಪ್ರಕರಣ ತನಿಖೆ ಹಂತದಲ್ಲಿ ಇದ್ದುದರಿಂದ ಆರಾಧನಾ ಪ್ರಕ್ರಿಯೆ ವಿಳಂಬವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀರೂರು ಮಠಾಧೀಶರು ಸಾವನ್ನಪ್ಪಿ 1 ತಿಂಗಳಾದರೂ ಎಫ್‍ಎಸ್‍ಎಲ್ ವರದಿ ಇಲ್ಲ, ಎಫ್‍ಐಆರ್ ದಾಖಲಾಗಿಲ್ಲ!

    ಶೀರೂರು ಮಠಾಧೀಶರು ಸಾವನ್ನಪ್ಪಿ 1 ತಿಂಗಳಾದರೂ ಎಫ್‍ಎಸ್‍ಎಲ್ ವರದಿ ಇಲ್ಲ, ಎಫ್‍ಐಆರ್ ದಾಖಲಾಗಿಲ್ಲ!

    ಉಡುಪಿ: ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಂಶಯಾಸ್ಪದವಾಗಿ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಶ್ರೀಗಳ ಮರಣೋತ್ತರ ಪರೀಕ್ಷೆ ಮತ್ತು ಎಫ್‍ಎಸ್‍ಎಲ್ ವರದಿ ಪೊಲೀಸರ ಕೈಸೇರಿಲ್ಲ. ಹಾಗಾಗಿ ಪ್ರಕರಣದ ಎಫ್‍ಐಆರ್ ಕೂಡ ಪೊಲೀಸರು ದಾಖಲಿಸಿಕೊಂಡಿಲ್ಲ.

    ಜುಲೈ 19ಕ್ಕೆ ಸಾವನ್ನಪ್ಪಿರುವ ಸ್ವಾಮೀಜಿಯ ಸಾವಿನ ಕಾರಣ ನಿಗೂಢವಾಗಿಯೇ ಇದೆ. ಪೂರ್ವಾಶ್ರಮದ ತಮ್ಮ ಲಾತವ್ಯ ಆಚಾರ್ಯ ಇದೊಂದು ಅಸಹಜ ಸಾವು ಎಂದು ಮಾತ್ರ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆ ವರದಿ ಬರಲು ಒಂದು ವಾರ ಬೇಕಾಗುತ್ತದೆ. ಎಫ್ ಎಸ್ ಎಲ್‍ಗೆ 2 ವಾರಗಳು ಸಾಕು ಆದರೆ ದಿನ 30 ಕಳೆದರೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಜಯರಾಮ್ ಅಂಬೇಕಲ್ಲು ಹೇಳಿದರು.

    ಎಫ್ ಎಸ್ ಎಲ್ ವರದಿ ಕೈಸೇರಲು ಕನಿಷ್ಟ ಎರಡು ವಾರ ಗರಿಷ್ಟ 8 ವಾರಗಳು ಬೇಕು. ಎಫ್ ಎಸ್ ಎಲ್ ವರದಿ ತಡವಾದಷ್ಟು ಸಾವಿಗೆ ಕಾರಣ ತಿಳಿಯಲು ಸಾಧ್ಯವಿಲ್ಲ ಎಂಬುದು ಶೀರೂರು ಶ್ರೀ ಕಾನೂನು ಸಲಹೆಗಾರ ರವಿಕಿರಣ್ ಮುರ್ಡೇಶ್ವರ ಅವರ ಸಂಶಯವಾಗಿದೆ. ದೇಹದಲ್ಲಿರುವ ಸಿಕ್ಕ ವಿಷದ ಅಂಶ ಪ್ರಯೋಗಾಲಯದಲ್ಲಿ ಪತ್ತೆಯಾಗಲು ಸಾಧ್ಯವಿಲ್ಲ ವಿಷ ವಿಷತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.

    ಎಫ್ ಎಸ್ ಎಲ್ ವರದಿ ಬರುವ ತನಕ ಪೊಲೀಸ್ ತನಿಖೆ ನಡೆಸಲೂ ಆಗುತ್ತಿಲ್ಲ ಹಾಗಾಗಿ ಶೀರೂರು ಶ್ರೀ ಅಭಿಮಾನಿ ಸಮಿತಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದೆ. ಒಟ್ಟಿನಲ್ಲಿ ಶೀರೂರು ಶ್ರೀ ಪ್ರಕರಣ ಸಾಕಷ್ಟು ಕುತೂಹಲ ನಿರೀಕ್ಷೆಯ ಜೊತೆ ಸಂಶಯಗಳನ್ನು ಹುಟ್ಟುಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಬಳಿಕ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಮಠದ ಡಿವಿಆರ್ ನಾಪತ್ತೆಯಾಗಿದೆ.

    ಸ್ವಾಮೀಜಿಗಳ ಅಸಹಜ ಸಾವಿನ ಕುರಿತಂತೆ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈ ವೇಳೆ ಸಿಸಿಟಿವಿ ವಿಡಿಯೋಗಳನ್ನು ಸೇವ್ ಮಾಡುತ್ತಿದ್ದ ಡಿವಿಆರ್ ಇದೀಗ ಮೂಲ ಮಠದಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಶಿರೂರು ಮೂಲಮಠದಿಂದ ಕೆಲ ವಸ್ತುಗಳು ಕೂಡ ಕಾಣೆಯಾಗಿವೆ.

    ಶಿರೂರು ಮೂಲ ಮಠದ ಪ್ರವೇಶ ದ್ವಾರದಲ್ಲೇ ಒಂದು ಸಿಸಿಟಿವಿ ಇತ್ತು. ಇದರಲ್ಲಿ ಮಠಕ್ಕೆ ಬರುವ ಎಲ್ಲಾ ಭಕ್ತರ ಬಗ್ಗೆ ದಾಖಲಾಗುತ್ತಿತ್ತು. ಯಾಕಂದ್ರೆ ಇದೊಂದು ದಾರಿಯ ಮೂಲಕವೇ ಭಕ್ತರು ಮಠ ಪ್ರವೇಶವಾಗಬೇಕಿತ್ತು. ಹೀಗಾಗಿ ಪೊಲೀಸರು ಇದೊಂದೇ ಸಾಕ್ಷಿ ಅಂತ ಪೊಲೀಸರು ನಂಬಿದ್ದರು. ತನಿಖೆಯ ಆರಂಭದಲ್ಲಿಯೇ ಪೊಲೀಸರು ಡಿವಿಆರ್ ಸಿಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು. ಅಲ್ಲದೇ ಡಿವಿಆರ್ ಅನ್ನು ಸ್ವತಃ ಸ್ವಾಮೀಜಿಯವರೇ ಬೇರೆ ಮಠಕ್ಕೆ ಶಿಫ್ಟ್ ಮಾಡಿದ್ದಾರೆಯೋ ಎನ್ನುವುದರ ಬಗ್ಗೆ ತನಿಖೆ ನಡೆದಿತ್ತು. ಆದ್ರೆ ಎಲ್ಲಿ ಹುಡುಕಾಡಿದ್ರೂ ಡಿವಿಆರ್ ಮಾತ್ರ ಕಾಣಿಸುತ್ತಿಲ್ಲ.

    ಸ್ವಾಮೀಜಿಯವರು ಆಸ್ಪತ್ರೆಗೆ ದಾಖಲಾದ ದಿನವೇ ಯಾರೋ ಮಠಕ್ಕೆ ಬಂದು ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಆದ್ರೆ ಏನೆಲ್ಲ ವಸ್ತುಗಳನ್ನು ಹಾಗೂ ಯಾರು ತೆಗೆದುಕೊಂಡು ಹೋಗಿದ್ದಾರೆಂಬ ಬಗ್ಗೆ ದಾಖಲೆಗಳು ಈ ಸಿಸಿಟಿವಿಯಲ್ಲಿ ಸಿಗಬೇಕಿತ್ತು. ಆದ್ರೆ ಡಿವಿಆರ್ ಅನ್ನೇ ತೆಗೆದುಕೊಂಡು ಹೋಗಿದ್ರೆ ಎಲ್ಲಾ ದಾಖಲೆಗಳು ನಾಪತ್ತೆ ಆಗಿರೋ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಆ ದಿನ ಮಠಕ್ಕೆ ಬಂದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಮೂರು ತಿಂಗಳ ಹಿಂದೆ ಮಠದಲ್ಲಿ ಹಸುವಿನ ಕಳ್ಳತನವಾಗಿತ್ತು. ಆ ಸಂದರ್ಭದಲ್ಲಿ ಸಿಸಿಟಿವಿಯಲ್ಲಿ ದೃಶ್ಯಗಳು ಲಭ್ಯವಾಗಿದ್ದು, ಅದನ್ನು ಸ್ವತಃ ಸ್ವಾಮೀಜಿಗಳೇ ಮಧ್ಯಮಗಳಿಗೆ ನೀಡಿದ್ದರು. ಹೀಗಾಗಿ ಅಂದಿ ಇದ್ದ ಡಿವಿಆರ್ ಆ ನಂತ್ರ ಏನಾಗಿದೆ ಎಂಬುದೇ ಇದೀಗ ಪ್ರಶ್ನೆಯಾಗಿದೆ.