Tag: Lakshmi Siddaiah

  • ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ಕಿರುತೆರೆಯ ಹಿಟ್ ನಿರ್ದೇಶಕ ವಿನೋದ್ ದೊಂಡಾಳೆ (Vinod Dondale) ಜು.20ರಂದು ನೇಣಿಗೆ ಕೊರಳೊಡ್ಡಿದ್ದಾರೆ. ಇದೀಗ ನಿರ್ದೇಶಕ ವಿನೋದ್ ಅಂತಿಮ ದರ್ಶನ ಪಡೆದ ಬಳಿಕ ನಟಿ ಲಕ್ಷ್ಮಿ ಸಿದ್ದಯ್ಯ (Lakshmi Siddaiah) ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರ ಅವರು ತಗೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ ಎಂದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ರೊಟ್ಟಿ ಮೇಲೆ ಉಗುಳಿದ ಅನ್ಯಕೋಮಿನ ವ್ಯಾಪಾರಿ; ರಾಮ-ಶಬರಿಗೆ ಹೋಲಿಸಿದ ಸೋನು ಸೂದ್‌ ವಿರುದ್ಧ ಆಕ್ರೋಶ

    ವಿನೋದ್ ಸರ್ ಜೊತೆ ಕೆಲಸ ಮಾಡಿದ್ದು, ಇದೇ ಫಸ್ಟ್ ಪ್ರಾಜೆಕ್ಟ್ ‘ಗಂಗೆ ಗೌರಿ’ ಸೀರಿಯಲ್. ಆದರೆ ಅವರ ಬಗ್ಗೆ ತುಂಬಾ ವರ್ಷದಿಂದ ಕೇಳಿದ್ದೀನಿ. ಅವರು ಇಲ್ಲ ಅನ್ನೋದನ್ನು ನಂಬೋಕೆ ಆಗ್ತಿಲ್ಲ. ಅಷ್ಟು ಸರಳ ವ್ಯಕ್ತಿ. ನಮ್ಮಗಳ ಜೊತೆ ನಮ್ಮ ಹಾಗೆನೇ ಇರೋರು. ಡೈರೆಕ್ಟರ್ ಅನ್ನೋ ಭಾವನೆನೇ ಕೊಡ್ತಿರಲಿಲ್ಲ ಎಂದು ನಟಿ ಲಕ್ಷ್ಮಿ ಸಿದ್ದಯ್ಯ ಭಾವುಕರಾಗಿದ್ದಾರೆ.

    ಅವರ ಜೊತೆ ಸೆಟ್‌ನಲ್ಲಿ ತುಂಬಾ ಜಗಳ ಮಾಡಿಕೊಂಡು ಕೆಲಸ ಮಾಡಿದ್ದೀನಿ. ನಮಗೆ ಆಗಲ್ಲ ಅಂದರೆ ಆಯ್ತು, ಸರಿ ಬಿಡಿ ಅಂತಾ ಹೇಳುತ್ತಿದ್ದರು. ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು ವಿನೋದ್ ಸರ್. ಈಗ ಅವರು ಹೀಗೆ ನಿರ್ಧಾರ ತಗೊಂಡಿದ್ದಾರೆ ಅಂದರೆ ನಂಬಲು ಕಷ್ಟ ಆಗ್ತಿದೆ ಎಂದಿದ್ದಾರೆ ನಟಿ ಲಕ್ಷ್ಮಿ.

    ಇತ್ತೀಚೆಗೆ ‘ಗಂಗೆ ಗೌರಿ’ ಸೀರಿಯಲ್‌ಗಾಗಿ ಎಲ್ಲರೂ ಕಾಶಿಗೆ ಶೂಟಿಂಗ್ ಹೋಗಿದ್ದೆವು. ಅವರ ಜೊತೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈ ವೇಳೆ, ಅವರ ಜೊತೆ ಕೆಲಸ ಮಾಡಿದ್ವಿ ಅನ್ನೋ ಫೀಲ್ ಕೊಡಲಿಲ್ಲ. ಎಲ್ಲರೂ ಜೊತೆಯಾಗಿ ಫ್ಯಾಮಿಲಿ ಟ್ರಿಪ್ ಹೋದ ಹಾಗೆ ಅನಿಸುತ್ತಿತ್ತು. ಅದೆಷ್ಟೋ ಜನರಿಗೆ ಅವರು ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ. ವಿನೋದ್ ಸರ್ ರೀತಿಯ ವ್ಯಕ್ತಿ ಇಲ್ಲದೇ ಇರೋದು ಕಿರುತೆರೆ ಮತ್ತು ಹಿರಿತೆರೆಗೆ ದೊಡ್ಡ ನಷ್ಟ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, ನಿರ್ದೇಶಕ ವಿನೋದ್ ದೊಂಡಾಳೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೋಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.

  • ಆಕ್ಸಿಡೆಂಟ್ ಆರೋಪ: ತಪ್ಪು ಮಾಡಿಲ್ಲ ಅಂತಿದ್ದಾರೆ ಕಿರುತೆರೆ ನಟಿ ಲಕ್ಷ್ಮಿ

    ಆಕ್ಸಿಡೆಂಟ್ ಆರೋಪ: ತಪ್ಪು ಮಾಡಿಲ್ಲ ಅಂತಿದ್ದಾರೆ ಕಿರುತೆರೆ ನಟಿ ಲಕ್ಷ್ಮಿ

    ಮ್ಮ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಸಿ, ತಮ್ಮನ್ನು ಅವಾಚ್ಯ ಪದಗಳಿಂದ ನಟಿ (Actress) ಲಕ್ಷ್ಮಿ ಸಿದ್ದಯ್ಯ (Lakshmi Siddaiah) ನಿಂದಿಸಿದ್ದಾರೆ ಎಂದು ಇಬ್ಬರು ಹುಡುಗಿಯರು ಆರೋಪ ಮಾಡಿದ್ದರು. ತಮ್ಮನ್ನು ನಿಂದಿಸಿದ್ದಲ್ಲದೇ, ತಮ್ಮ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತಂತೆ ನಟಿ ಲಕ್ಷ್ಮಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇದು ಡಿಸೆಂಬರ್ 6ರಂದು ನಡೆದಿರುವ ಘಟನೆ (Accident). ನಾನು ವೇಗವಾಗಿ ಕಾರು ಓಡಿಸ್ತಿದ್ದೆ ಎಂದು ಹೇಳ್ತಾರೆ. ಜ್ಞಾನ ಭಾರತಿ ರಸ್ತೆಯಲ್ಲಿ, ಅದೂ ಸಂಜೆ ವೇಳೆ ಕಾರನ್ನು ವೇಗವಾಗಿ ಓಡಿಸೋಕೆ ಸಾಧ್ಯವೇ ಇಲ್ಲ. ಆ ಹುಡುಗಿಯರು ಸುಳ್ಳು ಹೇಳುತ್ತಿದ್ದಾರೆ. ಅವರ ದ್ವಿಚಕ್ರವಾಹನಕ್ಕೆ ಟಚ್ ಆಗಿದ್ದು ನಿಜ. ಅವರೇ ನನ್ನ ಮೇಲೆ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದು. ಅವರ ಅಣ್ಣ, ತಾಯಿ ಎಲ್ಲರೂ ಸ್ಥಳಕ್ಕೆ ಬಂದಿದ್ದರು. ನನಗೆ ಶೂಟಿಂಗ್ ಇದ್ದ ಕಾರಣ ಬೇಗ ಹೊರಟೆ. ದುಡ್ಡಿಗಾಗಿ ಅವರು ಬೇಡಿಕೆ ಇಟ್ಟರು. ನಾನು ಕೊಡುವುದಿಲ್ಲ ಎಂದೆ. ಅಷ್ಟೇ ಆಗಿದ್ದು. ಅವರು ಸುಳ್ಳು ಹೇಳುತ್ತಿದ್ದಾರೆ ಅಂತಾರೆ ಲಕ್ಷ್ಮಿ.

    ತಪ್ಪು ಮಾಡಿಲ್ಲ ಹಾಗಾಗಿ ಕಾಸು ಕೊಡಲ್ಲ ಎಂದಿರುವ ಲಕ್ಷ್ಮಿ, ಆ ಸಹೋದರಿಯ ಕಡೆಯಿಂದ ತಮಗೆ ಕರೆ ಬಂದಾಗ ಎರಡು ಲಕ್ಷ ರೂಪಾಯಿ ಕೇಳಿದರು ಎಂದು ಲಕ್ಷ್ಮಿ ಹೇಳಿದ್ದಾರೆ. ಅವರ ಮೇಲೆ ಕಾನೂನು ರೀತಿಯ ಕ್ರಮಕ್ಕಾಗಿ ಕೋರ್ಟ್ ಗೆ ಮೊರೆ ಹೋಗುವುದಾಗಿಯೂ ನಟಿ ತಿಳಿಸಿದ್ದಾರೆ.

  • ನಟಿ ಲಕ್ಷ್ಮಿ ಮೇಲೆ ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ ಮಾಡಿದ ಆರೋಪ

    ನಟಿ ಲಕ್ಷ್ಮಿ ಮೇಲೆ ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ ಮಾಡಿದ ಆರೋಪ

    ನ್ನಡದ ಕಿರುತೆರೆ ಮತ್ತು ಹಿರಿತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಮೇಲೆ ಗುರುತರ ಆರೋಪ ಬಂದಿದೆ. ಆಕ್ಸಿಡೆಂಟ್ (Accident) ಮಾಡಿದ್ದಲ್ಲದೇ, ಯುವತಿಯರ ಜೊತೆ ನಡುರಸ್ತೆಯಲ್ಲೇ ಲಕ್ಷ್ಮಿ (Lakshmi Siddaiah) ರಂಪಾಟ ಮಾಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಕ್ಸಿಡೆಂಟ್ ಮಾಡಿದ್ದಲ್ಲದೇ ಯುವತಿಗೆ ಹಲ್ಲೆ ಕೂಡ ನಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಘಟನೆ ಕಳೆದ ಡಿಸೆಂಬರ್ 6 ರಂದು ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ಮಾಧುರಿ ಮತ್ತು ಅವರ ಸೋದರಿ ಐಶ್ವರ್ಯಗೆ ನಟಿ ಲಕ್ಷ್ಮಿ ಅವರ ಕಾರು ಡಿಕ್ಕಿ ಹೊಡೆದಿದೆ. ಲಕ್ಷ್ಮಿ ಆಕ್ಸಿಡೆಂಟ್ ಮಾಡಿದ್ದಲ್ಲದೇ, ಮಾಧುರಿ ಮತ್ತು ಐಶ್ವರ್ಯ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರಂತೆ. ಜೊತೆಗೆ ಇವರ ಮೊಬೈಲ್ ಕೂಡ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ನಟಿ ಲಕ್ಷ್ಮಿ ಚಲಾಯಿಸುತ್ತಿದ್ದ ಕಾರು ಮಾಧುರಿ ಮತ್ತು ಐಶ್ವರ್ಯ ಗಾಡಿಗೆ ಡಿಕ್ಕಿ ಹೊಡೆದಿದೆ. ಅಲ್ಲಿಂದ ಮಾತಿಗೆ ಮಾತು ಶುರುವಾಗಿದೆ. ಲಕ್ಷ್ಮಿ ಮತ್ತು ಅವರ ಜೊತೆಗಿದ್ದ ಆನಂದ್ ಕುಮಾರ್ ಎನ್ನುವವರು ಹಲ್ಲೆ ಮಾಡಿದ್ದಾರೆ ಎಂದು ಈ ಸೋದರಿಯರು ಆರೋಪ ಮಾಡಿದ್ದಾರೆ. ಜೊತೆಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ.

     

    ಗಲಾಟೆ ನಡೆದು 3 ತಿಂಗಳಾದರೂ ಪೊಲೀಸರು ಕ್ರಮ ತಗೆದುಕೊಂಡಿಲ್ಲ ಎನ್ನುವುದು ಸೋದರಿಯರ ಆರೋಪ. ಮೊಬೈಲ್ ಸಹ ವಾಪಾಸ್ಸು ಕೊಡಿಸಿಲ್ಲ ಎನ್ನುತ್ತಾರೆ ಹಲ್ಲೆಗೊಳಗಾದವರು.