Tag: Lakshmi Baramma

  • ಮಾಲ್ಡೀವ್ಸ್‌ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಿನ್ನು

    ಮಾಲ್ಡೀವ್ಸ್‌ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಿನ್ನು

    ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಚಿನ್ನು ಎಂದೇ ಖ್ಯಾತಿ ಗಳಿಸಿರುವ ರಶ್ಮಿ ಪ್ರಭಾಕರ್ ಇತ್ತೀಚೆಗಷ್ಟೇ ನಿಖಿಲ್ ಭಾರ್ಗವ್ ಜೊತೆ ಹಸೆಮಣೆ ಏರಿದ್ದರು. ಇದೀಗ ಈ ಜೋಡಿ ಮಾಲ್ಡೀವ್ಸ್‌ನಲ್ಲಿ ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಸಖತ್ ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕನ್ನಡದ ಲಕ್ಷ್ಮಿ ಬಾರಮ್ಮ, ಮನಸೆಲ್ಲಾ ನೀನೇ, ಮಹಾಭಾರತ, ದರ್ಪಣ, ಜೀವನ ಚೈತ್ರ, ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ ಹೀಗೆ ಸಾಕಷ್ಟು ಸೀರಿಯಲ್ ಮೂಲಕ ಮನೆಮಾತಾಗಿರೋ ನಟಿ ರಶ್ಮಿ ಪ್ರಭಾಕರ್ ಇದೀಗ ತಮ್ಮ ಪತಿ ನಿಖಿಲ್ ಭಾರ್ಗವ್ ಜೊತೆ ದಾಂಪತ್ಯ ಜೀವನವನ್ನು ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಮಾಲ್ಡೀವ್ಸ್ನ ಸುಂದರ ತಾಣಗಳಿಗೆ ಈ ಜೋಡಿ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ನಟಿ ರಶ್ಮಿ ಮತ್ತು ನಿಖಿಲ್ ಒಬ್ಬರನೊಬ್ಬರು ಪ್ರೀತಿಸಿ, ಗುರು ಹಿರಿಯರ ಸಮ್ಮುಖದಲ್ಲಿ ಏಪ್ರಿಲ್ 25ರಂದು ಹಸೆಮಣೆ ಏರಿದ್ದರು. ನಿಖಿಲ್ ಭಾರ್ಗವ್ ಜಾಹಿರಾತು ಕಂಪನಿಯೊಮದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಶ್ಮಿ ಮದುವೆಗೆ ಅನೇಕ ಕಿರುತೆರೆ ಕಲಾವಿದರು ಬಂದು ಶುಭ ಹಾರೈಸಿದ್ದರು. ಸದ್ಯ ಈ ನವಜೋಡಿ ಹನಿಮೂನ್‌ಗಾಗಿ ಮಾಲ್ಡೀವ್ಸ್ಗೆ ಹಾರಿದ್ದಾರೆ. ತಮ್ಮ ದಾಂಪತ್ಯ ಜೀವನವನ್ನು ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

  • ನಿಜಜೀವನದಲ್ಲೂ ಚಂದನ್‍ಗೆ ‘ಲಕ್ಷ್ಮೀ’ಯಾದ ಕವಿತಾ ಗೌಡ

    ನಿಜಜೀವನದಲ್ಲೂ ಚಂದನ್‍ಗೆ ‘ಲಕ್ಷ್ಮೀ’ಯಾದ ಕವಿತಾ ಗೌಡ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷೀ ಬಾರಮ್ಮ’ ಧಾರವಾಹಿಯಲ್ಲಿ ನಟ ಹಾಗೂ ನಟಿಯಾಗಿ ಒಟ್ಟಿಗೆ ಅಭಿನಯಿಸಿರುವ ಚಂದನ್ ಕುಮಾರ್ ಮತ್ತು ಕವಿತಾ ಗೌಡ ತಮ್ಮ ನಿಜಜೀವನದಲ್ಲಿ ಒಂದಾಗುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

    ಈ ಕುರಿತು ಚಂದನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ನಾವಿಬ್ಬರು ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೇವೆಂದು ತಿಳಿಸಿದ್ದಾರೆ.

    ಧಾರವಾಹಿಯಲ್ಲಿ ನಟಿಸುತ್ತಿರುವಾಗಲೇ ಈ ಜೋಡಿ ಪ್ರೀತಿಯ ಬಲೆಗೆ ಬಿದ್ದಿದೆ ಎಂಬ ಗುಮಾನಿ ಹರಿದಾಡುತ್ತಿತ್ತು. ಆದರೆ ಚಂದನ್ ಮತ್ತು ಕವಿತಾ ನಾವಿಬ್ಬರೂ ಉತ್ತಮ ಸ್ನೇಹಿತರು ಎಂಬ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಆದರೆ ಇದೀಗ ಚಂದನ್ ಕುಮರ್ ‘ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡು ಕವಿತಾ ಗೌಡ ಜೊತೆಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇವರಿಬ್ಬರೂ ನಿಜಕ್ಕೂ ಏಪ್ರಿಲ್ 1 ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

    ಧಾರವಾಹಿಗಳಲ್ಲಿ ಎಲ್ಲರ ಮನೆಮನಗಳಲ್ಲಿ ಸ್ಥಾನ ಪಡೆದಿರುವ ಈ ಜೋಡಿ ಕೆಲದಿನಗಳ ಹಿಂದೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿಸಿಕೊಂಡಿತ್ತು. ಹಾಗೂ ಒಟ್ಟಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಮಾರಂಭಗಳಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಅಭಿಮಾನಿಗಳಲ್ಲಿ ಇವರಿಬ್ಬರು ಪ್ರೀತಿಮಾಡುತ್ತಿದ್ದಾರೆ ಎಂಬ ಅನುಮಾನವು ಮೂಡಿತ್ತು.

    ಇದಕ್ಕೆ ಪುಷ್ಟಿ ಕೊಡುವಂತೆ ಚಂದನ್ ಕುಮಾರ್, ಕವಿತಾ ಅವರ ಹುಟ್ಟುಹಬ್ಬದಂದು ಮಧ್ಯರಾತ್ರಿ ಕವಿತಾ ಮನೆಗೆ ತೆರಳಿ ಸರ್ಪ್ರೈಸ್ ನೀಡಿದ್ದರು. ಹಾಗೆ ಹಲವು ಟ್ರಿಪ್‍ಗಳನ್ನೂ ಹೋಗಿ ಎಂಜಾಯ್ ಮಾಡಿದ್ದರು ಇದನ್ನೇಲ್ಲ ಗಮನಿಸಿದಾಗ ಇವರಿಬ್ಬರ ನಡುವೆ ಪ್ರೀತಿಯ ಬಂಧ ಬೆಸೆದಿದೆ ಎಂಬ ಸಂದೇಹ ಕಾಡುತ್ತಿತ್ತು ಇದೀಗ ಈ ಸಂದೇಹ ಬಗೆಹರಿಯುವ ಹಂತಕ್ಕೆ ಬಂದು ನಿಂತಿದೆ.

    ಚಂದನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಕವಿತಾ ಅವರ ಫೋಟೋ ಹಂಚಿಕೊಂಡು ಪೋಸ್ಟ್ ಹಾಕುತ್ತಿದ್ದಂತೆ ಹಲವು ನಟ-ನಟಿಯರು ಈ ಜೋಡಿಗೆ ಶುಭಹಾರೈಸಿದ್ದಾರೆ. ಈ ಎಲ್ಲಾ ಶುಭಾಶಯಗಳಿಗೆ ಚಂದನ್ ಧನ್ಯವಾದ ತಿಳಿಸಿದ್ದು, ಏಪ್ರಿಲ್ 1 ರಂದು ಯಾವ ರೀತಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

  • ‘ಲಕ್ಷ್ಮೀಬಾರಮ್ಮ’ ಖ್ಯಾತಿಯ ಚಿನ್ನು ಜೀವನದ ದುರಂತ ಕಥೆ!

    ‘ಲಕ್ಷ್ಮೀಬಾರಮ್ಮ’ ಖ್ಯಾತಿಯ ಚಿನ್ನು ಜೀವನದ ದುರಂತ ಕಥೆ!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಲಕ್ಷ್ಮೀಬಾರಮ್ಮ’ ಧಾರಾವಾಹಿಯನ್ನು ಹಲವಾರು ವರ್ಷಗಳಿಂದ ನೋಡುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಚಿನ್ನು ಕ್ಯಾರೆಕ್ಟರ್ ನಿಭಾಯಿಸ್ತಿರುವ ರಶ್ಮಿ ಪ್ರಭಾಕರ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ ಅವರ ಜೀವನದಲ್ಲಿ ಒಂದು ದುರಂತ ಕಥೆ ನಡೆದಿದೆ.

    ಲಕ್ಷ್ಮೀಬಾರಮ್ಮ ಸೀರಿಯಲ್ ನೋಡುವಾಗ ಚಿನ್ನುವನ್ನು ಸೂಕ್ಷ್ಮವಾಗಿ ಗಮನಿಸಿ. ಆಗ ಆಕೆಯ ಎಡಗಣ್ಣು ತುಂಬಾ ಚಿಕ್ಕದಾಗಿ ಕಾಣುತ್ತದೆ. ಮೇಲ್ನೋಟಕ್ಕೆ ಮಾತ್ರ ಚಿನ್ನುಗೆ ಕಣ್ಣು ಕಾಣುತ್ತದೆ. ಆದರೆ ಎಡಗಣ್ಣಿನ ದೃಷ್ಟಿಯನ್ನ ಸುಮಾರು ವರ್ಷಗಳ ಹಿಂದೆಯೇ ಆಕೆ ಕಳೆದುಕೊಂಡಿದ್ದಾರೆ.

    ನನಗೆ ಸುಮಾರು 6-7 ವರ್ಷವಿದ್ದಾಗಲೇ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದೇನೆ. ಶಿವರಾತ್ರಿ ಹಬ್ಬ ಆಚರಣೆ ಮಾಡುತ್ತಿದ್ದಾಗ ಕೈಯಲ್ಲಿ ಸುಣ್ಣದ ಡಬ್ಬಿ ಹಿಡಿದು ಆಟವಾಡುತ್ತಿದ್ದೆ. ಆಗ ಸುಣ್ಣ ಎರಡೂ ಕಣ್ಣಿಗೆ ಎಗರಿಬಿಟ್ಟಿತು. ತಕ್ಷಣವೇ ನೀರಿನಿಂದ ಕಣ್ಣಿನಲ್ಲಿರುವ ಸುಣ್ಣವನ್ನ ತೆಗೆದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಆಗಲೇ ನಾನು 70% ಕಣ್ಣಿಗೆ ದೃಷ್ಟಿಯನ್ನು ಕಳೆದುಕೊಂಡಿದ್ದೆ ಎಂದು ರಶ್ಮಿ ಪ್ರಭಾಕರ್ ಅವರು ಹೇಳಿದ್ದಾರೆ.

    ನನಗೆ ಬಾಲ್ಯದಿಂದಲೂ ನ್ಯೂಸ್ ರೀಡರ್ ಆಗಬೇಕು ಎಂದು ಕನಸು ಕಂಡಿದ್ದೆ. ಒಂದಿಷ್ಟು ದಿನ ಕಾಲ ಖಾಸಗಿ ಚಾನೆಲ್‍ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದೆ. ಬಳಿಕ ಧಾರಾವಾಹಿಯಲ್ಲಿ ಅಭಿನಯಿಸುವ ಆಫರ್ ಬಂತು. ಚಿಕ್ಕವಯಸ್ಸಿನಲ್ಲಿ ತನ್ನ ಸಂಬಂಧಿಯಾಗಿದ್ದ ನಟಿ ಸೌಂದರ್ಯರನ್ನ ನೋಡಿಕೊಂಡು ಬೆಳೆದಿದ್ದರಿಂದ ತಾನೂ ನಟಿಯಾಗಬೇಕು ಅಂತ ಆಸೆಪಟ್ಟಿದ್ದೆ. ಆದರೆ ಎಡಗಣ್ಣು ಚಿಕ್ಕದಾಗಿ ಇದ್ದಿದ್ದರಿಂದ ಸಾಕಷ್ಟು ಪಾತ್ರಗಳು ಮಿಸ್ ಆದವು. ಆದರೂ ನಾನು ತಲೆಕೆಡಿಸಿಕೊಳ್ಳದೇ ಮುಂದೊಂದು ದಿನ ಮುಖ್ಯಪಾತ್ರಧಾರಿಯಾಗಿ ಮಿಂಚುತ್ತೀನಿ ಅಂತ ವರ್ಷಗಳ ಕಾಲ ಕಾಯುತ್ತಿದ್ದೆ ಎಂದು ರಶ್ಮಿ ಹೇಳಿದ್ದಾರೆ.

    `ಲಕ್ಷ್ಮೀಬಾರಮ್ಮ’ ಧಾರಾವಾಹಿಯ ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟರು. ಇತ್ತೀಚೆಗೆ ಎಡಗಣ್ಣಿಗೆ ಒಂದು ಸರ್ಜರಿಯಾಗಿ ಒಂದು ತಿಂಗಳು ವಿಶ್ರಾಂತಿ ಪಡೆದು ಧಾರಾವಾಹಿಗೆ ಬಂದೆ. ಆಗ ನಿರ್ದೇಶಕರು ನಿನ್ನ ಕೈಯಲ್ಲಿ ಆಗುತ್ತದೆ ಮಾಡು ಎಂದು ನಂಬಿಕೆಯಿಂದ ಚಿನ್ನು ಪಾತ್ರವನ್ನು ಮಾಡಿಸಿದರು. ಅವರಿಗೆ ಮತ್ತು ತನ್ನ ತಂಡದವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ.

    ಧಾರಾವಾಹಿ ಮಾಡುವಾಗ ಚಿನ್ನುಗೆ ಕಷ್ಟಗಳ ಮೇಲೆ ಕಷ್ಟ ಬರುತ್ತದೆ. ನಗುವುದಕ್ಕಿಂತ ಕಣ್ಣೀರು ಸುರಿಸುವುದೇ ಹೆಚ್ಚು. ಈಗಾಗಲೇ ಕಣ್ಣು ದೃಷ್ಟಿ ಕಳೆದುಕೊಂಡಿರುವುದರಿಂದ ಕಣ್ಣಿಗೆ ಗ್ಲಿಸರಿನ್ ಹಾಕುವಂತಿಲ್ಲ. ಎಮೋಷನಲ್ ಸೀನ್ ಮಾಡುವಾಗ ಪರಕಾಯ ಪ್ರವೇಶ ಮಾಡಿ ಅಳುವ ಸೀನ್‍ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅಳುವಾಗ ಎಡಗಣ್ಣು ನೋವಾಗುತ್ತದೆಯಂತೆ. ಆದರೂ ಅಭಿಮಾನಿಗಳನ್ನ ರಂಜಿಸುವುದಕ್ಕೆ ಚಿನ್ನು ಕಣ್ಣೀರು ಹಾಕಲೆಬೇಕು.

    ಲಕ್ಷ್ಮೀಬಾರಮ್ಮ ಸೀರಿಯಲ್ ಮೂಲಕ ನಿಮ್ಮೆಲ್ಲರ ಮುಂದೆ ಚಿನ್ನು ಆಗಿ ನಿಲ್ಲಲಿಕ್ಕೆ ರಶ್ಮಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಹನಟಿಯಾಗಿ ಕಿರುತೆರೆ ಜಗತ್ತಿಗೆ ಬಂದು ಹಲವಾರು ಜನರಿಂದ ಟೀಕೆಗೊಳಗಾದ ರಶ್ಮಿ, ಇವತ್ತು ಲೀಡಿಂಗ್ ನಟಿಯಾಗಿ ಮಿಂಚುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ನನಗೆ ಸಚಿನ್ ಬೇಕು, ಮದ್ವೆ ಮಾಡಿಕೊಡಿ’ ಅಂದ್ರಂತೆ ಕಾರುಣ್ಯ ರಾಮ್!

    ‘ನನಗೆ ಸಚಿನ್ ಬೇಕು, ಮದ್ವೆ ಮಾಡಿಕೊಡಿ’ ಅಂದ್ರಂತೆ ಕಾರುಣ್ಯ ರಾಮ್!

    ಹರೀಶ್ ಸೀನಪ್ಪ
    ಬೆಂಗಳೂರು: ಲಕ್ಷ್ಮಿ ಬಾರಮ್ಮ ಧಾರಾವಾಹಿಯ ‘ಕುಮುದಾ’ ಬಾಳಲ್ಲಿ ನಟಿ ಕಾರುಣ್ಯ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಚಿನ್ ಜೊತೆ 11 ದಿನದ ಹಿಂದೆ ಆಗಿದ್ದ ನಿಶ್ಚಿತಾರ್ಥ ಮುರಿಯೋ ಪ್ರಯತ್ನ ನಡೆಯುತ್ತಿದೆ ಅಂತ ಕುಮುದಾ ಖ್ಯಾತಿಯ ಅನಿಕಾ ಆರೋಪಿಸಿದ್ದಾರೆ. ಈ ಹಿಂದೆ ಕಾರುಣ್ಯ ರಾಮ್ ಸಚಿನ್ ಎಂಬವರನ್ನು ಪ್ರೀತಿಸಿದ್ದರಂತೆ. ಕಾರುಣ್ಯರಾಮ್ ಜೊತೆ ಸಂಬಂಧ ಕಟ್ ಆಗಿ ಮೂರು ವರ್ಷ ಕಳೆದ ಮೇಲೆ ಸಚಿನ್ ಹಾಗೂ ಅನಿಕಾಗೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥ ಆದ್ಮೇಲೆ ನನ್ನ ಮದುವೆ ಮುರಿಯೋಕೆ ಕಾರುಣ್ಯ ರಾಮ್ ಪ್ರಯತ್ನ ಪಡ್ತಿದ್ದಾರೆ ಎಂದು ಕಿರುತೆರೆ ನಟಿ ಅನಿಕಾ ತನಗಾದ ನೋವನ್ನ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಪಬ್ಲಿಕ್ ಟಿವಿ ಪ್ರತಿನಿಧಿ ಹರೀಶ್ ಸೀನಪ್ಪ ಜೊತೆ ಅನಿಕಾ ಸಿಂಧ್ಯಾ ಮನಸ್ಸು ಬಿಚ್ಚಿ ಮಾತನಾಡಿದಾಗ ಏನೆಲ್ಲಾ ಹೇಳಿದ್ರು ಅನ್ನೋದು ಇಲ್ಲಿದೆ ನೋಡಿ.

    ನಿಮಗೆ ಯಾರಿಂದ ತೊಂದರೆಯಾಗುತ್ತಿದೆ?
    ನಾನು ಮಾನಸಿಕವಾಗಿ ತುಂಬಾ ಡಿಸ್ಟರ್ಬ್ ಆಗಿದ್ದೀನಿ. ಯಾರದೇ ಲೈಫ್ ನಲ್ಲಿ ಮದುವೆ ಅಥವಾ ಎಂಗೇಜ್ಮೆಂಟ್ ಆದ್ಮೇಲೆ ಯಾರಾದ್ರೂ ಬಂದರೆ ಮನೆಯವರು ಕೂಡಾ ಡಿಸ್ಟರ್ಬ್ ಆಗ್ತಾರೆ. ಕಾರುಣ್ಯರಾಮ್ ಹಾಗೂ ನನಗೆ ಎಂಗೇಜ್ಮೆಂಟ್ ಆದ ಸಚಿನ್ ಮಧ್ಯೆ ಮುಂಚೆ ಲವ್ ಇತ್ತಂತೆ. ಅದು ನನಗೆ ಬೇಡ. ಎಂಗೇಜ್ಮೆಂಟ್ ಆದಮೇಲೆ ಅವಳು ಸುಮ್ಮನೆ ಇದ್ದು ಬಿಡಬೇಕಿತ್ತು. ಎಂಗೇಜ್ಮೆಂಟ್ ನಡೆಯುವ 10 ದಿನ ಮೊದಲು ಹಾಗೂ ಎಂಗೇಜ್ಮೆಂಟ್ ಆದಮೇಲೂ ಟಾರ್ಚರ್ ಮಾಡಿದ್ದಾರೆ. ಈ ವಿಷಯ ನನಗೆ ಮೊನ್ನೆ ಮೊನ್ನೆ ಸಚಿನ್ ನಿಂದ ವಿಷಯ ಗೊತ್ತಾಯ್ತು. ಮೊನ್ನೆ ಕೂಡಾ ಸಚಿನ್ ತಾಯಿಗೆ ಫೋನ್ ಮಾಡಿ ಕರೆಸಿಕೊಂಡು ಅವರು ನನಗೆ ಸಚಿನ್ ಬೇಕು. ಮದುವೆ ಮಾಡಿಕೊಡಿ ಎಂದು ಹೇಳಿದ್ದಾಳೆ. ಇದರಿಂದ ನನ್ ಲೈಫ್ ಏನಾಗ್ಬೇಕು? ನನ್ ಲೈಫ್ ಹಾಳಾಗಲ್ವಾ..? ನಾನೇ ಸರಿ ಇಲ್ಲ ಅಂತೆಲ್ಲಾ ಹೇಳಲ್ವಾ..? ಈ ಹಿನ್ನೆಲೆಯಲ್ಲಿ ನಾನೇ ಮೊದಲು ಹೇಳ್ತಾ ಇದೀನಿ. ದಯವಿಟ್ಟು ಇದು ನನಗೆ ಬೇಡ ಎಂದು ನೀನು ಸುಮ್ಮನಾದರೆ ಸರಿ. ನನಗೆ ಯಾವುದೇ ಹೆದರಿಕೆ ಇಲ್ಲ. ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಕೂಡಾ ಇಲ್ಲ. ಸುಮ್ಮನಾಗಿಬಿಟ್ರೆ ಈ ಕೇಸ್ ಇಲ್ಲಿಗೇ ಮುಗಿಯುತ್ತೆ. ನೀನೇನಾದ್ರೂ ಫ್ಯೂಚರಲ್ಲಿ ಅವನು ನಂಗೆ ಬೇಕು ಅಂದ್ರೆ ನಾನೇನ್ಮಾಡಬೇಕು ನನಗೆ ಗೊತ್ತು.

    ಸಚಿನ್ ನಿಮಗೆ ಯಾವಾಗ, ಹೇಗೆ ಪರಿಚಯವಾದ್ರು..?
    ಸಚಿನ್ ತುಂಬಾ ಒಳ್ಳೆಯ ಹುಡುಗ. ನನ್ ತಂದೆಯ ಬ್ಯುಸಿನೆಸ್ ಪಾರ್ಟನರ್ ಮೈದುನ ಸಚಿನ್. ಮನೆಯಲ್ಲಿ ನನಗೆ ಹುಡುಗನನ್ನು ಹುಡುಕ್ತಾ ಇದ್ರು. ಪ್ರಪೋಸಲ್ ಬಂತು. ಒಳ್ಳೆಯ ಹುಡುಗ ಎಂದು ಎಲ್ಲಾ ಒಪ್ಪಿಗೆಯಾಯಿತು. ಆವಾಗ ಯಾವುದೇ ತೊಂದರೆಯಿರಲಿಲ್ಲ. ಅವರು ನನ್ ಜೊತೆ ಓಡಾಡ್ತಿದ್ರು. ಎಂಗೇಜ್ಮೆಂಟ್ ಆದ್ಮೇಲೆ ಒಂದು ಕಾಲ್ ಇಲ್ಲ, ಮೆಸೇಜ್ ಇಲ್ಲ. ಸೋ ನನಗೆ ಅನುಮಾನ ಬಂತು. ಜಗಳ ಆಗಿ ಕೇಳಿದಾಗ ಮನೆಯಲ್ಲಿ ರಂಪ ರಾಮಾಯಣ ಆಗೋಗಿದೆ. ಅವಳೂ ಒಬ್ಳು ಹುಡುಗಿ. ಅವಳ ಲೈಫ್‍ಗೆ ಡ್ಯಾಮೇಜ್ ಮಾಡೋಕೆ ನನಗೆ ಇಷ್ಟವಿಲ್ಲ. ಮರ್ಯಾದೆಯಾಗಿ ಅವಳು ಹಿಂದಕ್ಕೆ ಸರಿದು ಬಿಟ್ರೆ ಸರಿ. ನನ್ ಲೈಫ್ ಬಗ್ಗೆ ನನಗೂ ಹೆದರಿಕೆ ಇರುತ್ತದೆ.

    ಸಚಿನ್ ಜೊತೆ ಅಥವಾ ಕಾರುಣ್ಯ ಜೊತೆ ಮಾತನಾಡಿದ್ರಾ..? ಸಚಿನ್ ಕೇಳಿದಾಗ ಏನ್ ಹೇಳಿದ್ರು..?
    ಸಚಿನ್ ಗೆ ಕೇಳಿದಾಗ ನನಗೆ ಈಗ ಅವಳು ಬೇಡ, ನೀನು ಬೇಕು. ಎಂಗೇಜ್ಮೆಂಟ್ ಆಗಿದ್ದೀನಿ. ನಿನ್ನನ್ನೇ ಮದುವೆಯಾಗ್ತೀನಿ ಅಂತಾ ಹೇಳಿದ್ದಾರೆ. ಕಾರುಣ್ಯ ಜೊತೆ ನಾನು ಇದುವರೆಗೂ ಡೈರೆಕ್ಟ್ ಆಗಿ ಮಾತನಾಡಿಲ್ಲ. ನನಗೂ ಅವಳಿಗೂ ಯಾವುದೇ ಪರಿಚಯವಿಲ್ಲ. ಇಂಡೈರೆಕ್ಟಾಗಿ ನನ್ ಹುಡ್ಗನಿಗೆ ಟಾರ್ಚರ್ ಮಾಡೋದೂ ಒಂದೇ, ನನ್ ಲೈಫ್ ಡ್ಯಾಮೇಜ್ ಮಾಡೋದೂ ಒಂದೇ.

    ಈ ವಿಷಯ ನಿಮಗೆ ಗೊತ್ತಾಗಿದ್ದು ಹೇಗೆ?
    ಈ ವಿಚಾರದಲ್ಲಿ ಮನೆಯಲ್ಲಿ ಏನ್ ಹೇಳ್ತಿದಾರೆ. ಈ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡುತ್ತಿದ್ದೀರಿ?
    ಸಚಿನ್ ನನ್ ಜೊತೆ ಮಾತನಾಡದೇ ಇದ್ದಾಗ ಅನುಮಾನ ಬಂದು ಕೇಳಿದೆ. ಆಗ ಈ ವಿಷಯಗಳೆಲ್ಲಾ ಹೊರಗೆ ಬಂತು. ನನಗೆ ತುಂಬಾ ಹರ್ಟ್ ಆಗಿದೆ. ತಕ್ಷಣ ಫೇಸ್‍ಬುಕ್ ನಿಂದ ಎಲ್ಲಾ ಡಿಲೀಟ್ ಮಾಡಿದೀನಿ. ರಿಂಗ್ ಕೂಡಾ ತೆಗೆದುಬಿಟ್ಟೆ. ಅಷ್ಟೊಂದು ಹರ್ಟ್ ಆಗಿದ್ದೀನಿ. ಮನೆಯವರಿಗೂ ಹರ್ಟ್ ಆಗಿದೆ. ಈವಾಗ ಎಲ್ಲಾ ಸರಿ ಹೋಗ್ತಾ ಇದೆ. ಹುಡುಗ ನನ್ ಕಡೆ ಇದಾನೆ. ಅವಳು ಮತ್ತೆ ಅವನ ಲೈಫ್ ಗೆ ಬರಬಾರದು. ಅವನ ಅಮ್ಮನಿಗಾಗಲೀ, ಅವನಿಗಾಗಲೀ ಯಾವುದೇ ಟಾರ್ಚರ್ ಮಾಡಬಾರದು. ಮದುವೆಯಾದ ಮೇಲೂ ನನಗೂ ನಿನಗೂ ಸಂಬಂಧವಿಲ್ಲ ಎಂದು ಅವಳು ಸುಮ್ಮನಿದ್ದುಬಿಡಬೇಕು.

    ಕಾರುಣ್ಯರಾಮ್ ಸಚಿನ್, ಅಮ್ಮನ ಜೊತೆ ಮಾತನಾಡಿದ್ದರ ಬಗ್ಗೆ ಏನ್ ಹೇಳ್ತೀರಾ..?
    ಯಾರೇ ಆಗಲಿ ನನ್ ಲವ್ ಮಾಡಿರೋ ಹುಡುಗ ಬೇರೆಯವರನ್ನು ಎಂಗೇಜ್ಮೆಂಟ್ ಆಗ್ತಿದ್ದಾರೆ ಎಂದರೆ ಅವರು ಚೆನ್ನಾಗಿರ್ಲಿ ಎಂದು ಸುಮ್ಮನಾಗ್ತಾರೆ. ಎಂಗೇಜ್ಮೆಂಟ್ ಆದ್ಮೇಲೆ ಅವರ ಅಮ್ಮನಿಗೆ ಬಂದು ಬಿಟ್ಟು ನನಗೆ ಮದುವೆ ಮಾಡಿಕೊಡಿ ಎಂದರೆ ಎಲ್ಲರಿಗೂ ಏನನ್ನಿಸುತ್ತೆ..? ನನಗೆ ಯಾವ ಹೆದರಿಕೆಯೂ ಇಲ್ಲ. ನಾನು ಎಂಥ ಹುಡುಗಿ ಅಂತಾ ಇಂಡಸ್ಟ್ರಿಗೆ ಗೊತ್ತು. ಇದನ್ನ ಇಲ್ಲಿಗೆ ನಿಲ್ಲಿಸಿದರೆ ಸರಿ.

     

    https://youtu.be/A8d3MaQjKpE

    https://youtu.be/CGvMv9nG1j0

     

    https://youtu.be/01_CZO0LRxc

    https://youtu.be/k-Q4HK-s5Ko

     

  • ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದಾ ಬಾಳಲ್ಲಿ ನಟಿ ಕಾರುಣ್ಯ `ಕಿರಿಕ್’!

    ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದಾ ಬಾಳಲ್ಲಿ ನಟಿ ಕಾರುಣ್ಯ `ಕಿರಿಕ್’!

    ಬೆಂಗಳೂರು: ಧಾರಾವಾಹಿ ನಟಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕುಮುದಾ ಅಲಿಯಾಸ್ ಅನಿಕಾ ಮದುವೆ ಮುರಿದು ಬೀಳಲು ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    10 ದಿನಗಳ ಹಿಂದೆ ಉದ್ಯಮಿ ಸಚಿನ್ ಎಂಬವರ ಜೊತೆ ನನ್ನ ನಿಶ್ಚಿತಾರ್ಥ ಆಗಿತ್ತು. ಆದರೆ ಈಗ ನಟಿ ಕಾರುಣ್ಯ ರಾಮ್ ನಿಂದಾಗಿ ಈ ನಿಶ್ಚಿತಾರ್ಥ ಬ್ರೇಕಪ್ ಆಗಿದೆ ಎಂದು ಅನಿಕಾ ಆರೋಪ ಮಾಡಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅನಿಕಾ, ಇದೆ ತಿಂಗಳು ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನನ್ನ ಮತ್ತು ಸಚಿನ್ ನಿಶ್ಚಿತಾರ್ಥ ನಡೆದಿತ್ತು. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ ಸಚಿನ್ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್ ಮೆಂಟ್ ಆದ ಮೇಲೆ ನನ್ನ ಜೊತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ನಟಿ ಅನಿಕಾ ಅವರ ಆರೋಪಕ್ಕೆ ಪ್ರತಿಕ್ರಯಿಸಿದ ನಟಿ ಕಾರುಣ್ಯ, ನನಗೆ ಅನಿಕಾ ಯಾರು ಎನ್ನುವುದೇ ಪರಿಚಯವೇ ಇಲ್ಲ. ನನಗೆ ಸಚಿನ್ ಕೂಡ ಗೊತ್ತಿಲ್ಲ. ನಾನು ಸ್ನೇಹಿತರ ಜೊತೆ ರೆಸ್ಟೋರೆಂಟ್ ಗೆ ಹೋಗಿದ್ದೆ ಅಲ್ಲಿ ಸಚಿನ್ ಇದ್ದರು. ಎಲ್ಲರ ಜೊತೆ ಇದ್ದಾಗ ಮಾತನಾಡಿದ್ದೀನಿ ಅಷ್ಟೆ ಎಂದು ಹೇಳಿದ್ದಾರೆ.

    ಬಹುಶಃ ಆ ಹುಡುಗಿ ಪಬ್ಲಿಸಿಟಿ ಪಡೆಯೋಕೆ ಇದೆಲ್ಲ ಮಾಡುತ್ತಿರಬಹುದು. ನನಗೆ ಮದುವೆಯಾಗೋಕೆ ಅವರೇ ಬೇಕಿಲ್ಲ. ಆ ಹುಡುಗಿಗೆ ಬಹುಶಃ ಇನ್‍ಫಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಅನ್ನಿಸುತ್ತಿದೆ. ಆಕೆಯನ್ನು ನಾನು ನೋಡೇ ಇಲ್ಲ. ನಾನು ಯಾರ ಕುಟುಂಬಕ್ಕೂ ತೊಂದರೆ ನೀಡಿಲ್ಲ. ನನ್ನಿಂದ ತೊಂದರೆ ಆದರೆ ಆ ಹುಡುಗ ಮಾತಾಡಬೇಕು ಇವಳ್ಯಾಕೆ ಮಾತನಾಡುತ್ತಿದ್ದಾಳೆ? ನನಗೆ ಸಚಿನ್ ಪರಿಚಯವಿಲ್ಲ, ಅವರು ಪಬ್ಲಿಸಿಟಿಗೋಸ್ಕರ ಸುದ್ದಿ ಮಾಡುತ್ತಿರಬಹುದು ಎಂದು ನಟಿ ಕಾರುಣ್ಯ ರಾಮ್ ತಿಳಿಸಿದ್ದಾರೆ.

    ಉದ್ಯಮಿ ಸಚಿನ್ ಯಾರೆಂಬುದು ನನಗೆ ಗೊತ್ತೇ ಇಲ್ಲ. ಯಾವುದೋ ಒಂದು ರೆಸ್ಟೊರೆಂಟ್ ಗೆ ಹೋದಾಗ ಅವನು ಪರಿಚಯವಾಗಿದ್ದ. ಅವನೊಂದಿಗೆ ಒಂದೇ ಒಂದು ಸಾರಿ ಮಾತನಾಡಿದ್ದೇನೆ. ಇಷ್ಟಕ್ಕೂ ಅವನು ವಯಸ್ಸಲ್ಲಿ ನನಗಿಂತ ದೊಡ್ಡವನು. ನನಗೆ ಈ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಆಕೆ ಕಿರುತೆರೆಯ ನಟಿ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರಿಗೂ ಫೋನ್ ಮಾಡಿಲ್ಲ, ಬೆದರಿಕೆಯೂ ಹಾಕಿಲ್ಲ. ನಾನೇದರೂ ಬೆದರಿಕೆ ಹಾಕಿದ್ದರೆ ಅವರ ಕುಟುಂಬದವರು ದೂರು ನೀಡಲಿ. ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಸುಮ್ ಸುಮ್ಮನೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದ್ದಾರೆ.