Tag: lake

  • ಕಾಡುಪ್ರಾಣಿಗಳ ನೀರಿನ ದಾಹ ನೀಗಿಸಿ ಮಾನವೀಯತೆ ಮೆರೆದ ರೈತ ಮದಾರಸಾಬ

    ಕಾಡುಪ್ರಾಣಿಗಳ ನೀರಿನ ದಾಹ ನೀಗಿಸಿ ಮಾನವೀಯತೆ ಮೆರೆದ ರೈತ ಮದಾರಸಾಬ

    ಧಾರವಾಡ: ಭೀಕರ ಬರಗಾಲದಿಂದ ವಿದ್ಯಾಕಾಶಿ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ. ಇಂಥ ಬರದ ಪರಿಸ್ಥಿತಿಯ ನಡುವೆಯೂ ಕಳೆದ ಮೂರು ವರ್ಷದಿಂದ ಪ್ರಾಣಿಗಳಿಗೆ ನೀರುಣಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಈ ನಮ್ಮ ಪಬ್ಲಿಕ್ ಹೀರೋ.

    ಧಾರವಾಡ ತಾಲೂಕಿನ ಲಾಳಗಟ್ಟಿ ಗ್ರಾಮ ಚಿಕ ರೈತ ಮದಾರಸಾಬ ಅಗಸಿಮನಿ ಬೋರ್‍ವೆಲ್ ಮೂಲಕ ಕಾಡುಪ್ರಾಣಿಗಳಿಗೆ ನೀರುಣಿಸ್ತಿದ್ದಾರೆ. ತೋಟದ ಪಕ್ಕದ ಅರಣ್ಯದಲ್ಲಿ ಇಲಾಖೆ ನಿರ್ಮಿಸಿರೋ ಚಿಕ್ಕ ಕೆರೆ ಬತ್ತಿ ಹೋಗಿತ್ತು. ಒಂದು ದಿನ ತೋಟದ ಪೈಪ್‍ಗೆ ಜಿಂಕೆಗಳು ಬಾಯಿ ಹಾಕಿ ನೀರಿನ ಹನಿಗಳನ್ನ ಕುಡಿಯುತ್ತಿದ್ದವಂತೆ. ಈ ಮನಕಲಕುವ ದೃಶ್ಯ ನೋಡಿದ ಮದಾರಸಾಬ ಅಂದಿನಿಂದಲೇ ಬತ್ತಿ ಹೋಗಿದ್ದ ಕೆರೆಗೆ ನೀರು ತುಂಬಿಸ್ತಿದ್ದಾರೆ.

    ನೀರಿಲ್ಲದೇ ಗ್ರಾಮಕ್ಕೆ ಬಂದಾಗ ನಾಯಿ ದಾಳಿಗೆ ಅದೆಷ್ಟೋ ಪ್ರಾಣಿಗಳು ಬಲಿಯಾಗಿವೆ. ಹಗಲು ಜನ ಓಡಾಡೋ ಕಾರಣ ಕತ್ತಲೆ ಕವಿದಂತೆ ಜಿಂಕೆ, ಸಾರಂಗ, ಕಾಡು ಹಂದಿ, ನವಿಲು ಸೇರಿದಂತೆ ಹಲವು ಪ್ರಾಣಿಗಳು ನೀರಿನ ದಾಹ ನೀಗಿಸಿಕೊಳ್ಳುತ್ತಿವೆ. ಇದೀಗ ಮದಾರಸಾಬ ಅವರ ಈ ಕೆಲಸವನ್ನ ಗ್ರಾಮಸ್ಥರು ಶ್ಲಾಘಿಸುತ್ತಾರೆ.

    ಇಂತಹ ಬಿರುಬೇಸಿಗೆಯಲ್ಲೂ ನೀರುಣಿಸ್ತಿರೋ ಮದಾರಸಾಬ ಅವ್ರಿಗೆ ವನ್ಯಜೀವಿಗಳಿಗೆ ಧನ್ಯತಾಭಾವ ತೋರಿಸುತ್ತಿವೆ. ಬೇಸಿಗೆಯಲ್ಲಿ ನೀರಿಗಾಗಿ ಕಷ್ಟಪಡುತ್ತಿರುವ ಕಾಡುಪ್ರಾಣಿಗಳಿಗೆ ನೀರುಣಿಸುವ ಮೂಲಕ ಮದಾರಸಾಬ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದು, ಇವರ ಸೇವೆ ಹೀಗೆ ನಿರಂತರವಾಗಿ ನಡೆಯಲಿ ಎಂಬುವುದೇ ನಮ್ಮ ಆಶಯ.

    https://www.youtube.com/watch?v=R5edBrw6I_g

     

  • ನೋಡನೋಡುತ್ತಿದ್ದಂತೆ ಕಲ್ಯಾಣಿಯಲ್ಲಿ ಮುಳುಗಿ ವ್ಯಕ್ತಿ ಸಾವು: ಮಾನವೀಯತೆ ಮರೆತ ಕೋಲಾರ ಜನ

    ನೋಡನೋಡುತ್ತಿದ್ದಂತೆ ಕಲ್ಯಾಣಿಯಲ್ಲಿ ಮುಳುಗಿ ವ್ಯಕ್ತಿ ಸಾವು: ಮಾನವೀಯತೆ ಮರೆತ ಕೋಲಾರ ಜನ

    ಕೋಲಾರ: ಸಾವು ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ ಎಂದು ಮಾಧ್ಯಮಗಳು ಸಾಕಷ್ಟು ಬಾರಿ ಸುದ್ದಿ ಪ್ರಸಾರ ಮಾಡಿದರೂ ಕೋಲಾರದ ಜನ ಮಾನವೀಯತೆಯನ್ನು ಮರೆತಿದ್ದಾರೆ.

    ಜನರು ನೋಡ ನೋಡುತ್ತಿದ್ದಂತೆ ಹಾರೋಹಳ್ಳಿ ನಿವಾಸಿ ನಂಜಪ್ಪ(70) ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಅಪಾಯದಲ್ಲಿದ್ದಾಗ ರಕ್ಷಣೆ ಮಾಡಬೇಕಾದ ಜನ ನಂಜಪ್ಪ ಅವರ ಕೊನೆ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು ಶವವನ್ನು ಹುಡುಕುತ್ತಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=1AdWGm0-7yY

  • ಫೇಸ್‍ಬುಕ್ ಮೂಲಕ ಕೊಟ್ಟೂರು ಕೆರೆಗೆ ಸಿಕ್ತು ಮರುಜೀವ!

    ಫೇಸ್‍ಬುಕ್ ಮೂಲಕ ಕೊಟ್ಟೂರು ಕೆರೆಗೆ ಸಿಕ್ತು ಮರುಜೀವ!

    -ಅಂಚೆ ಕೊಟ್ರೇಶ ಫೇಸ್‍ಬುಕ್ ಪೋಸ್ಟ್ ಗೆ ಸ್ಪಂದಿಸಿದ ಯುವಕರು

    ಬಳ್ಳಾರಿ: ತಮಿಳು ನಟ ಧನುಷ್ ನಟಿಸಿರುವ ಬಿಟೆಕ್ ರಘುವರನ್ ಸಿನಿಮಾದಲ್ಲೊಂದು ಸೀನಿದೆ. ಫೇಸ್‍ಬುಕ್ ಮೂಲಕವೇ ಯುವಕರನ್ನೆಲ್ಲಾ ಸೇರಿಸಿ ಅಪಾರ್ಟ್‍ಮೆಂಟ್ ಕಾಮಗಾರಿಯನ್ನು ಕಂಪ್ಲೀಟ್ ಮಾಡಿದ ಸೀನ್ ಅದು. ಅದೇ ರೀತಿಯಲ್ಲಿ ಬಳ್ಳಾರಿಯಲ್ಲೊಬ್ಬರು ಫೇಸ್‍ಬುಕ್ ಮೂಲಕವೇ ಕೆರೆ ಕ್ರಾಂತಿಗೆ ಮುಂದಾಗಿದ್ದಾರೆ.

    ಅಂಚೆ ಕೊಟ್ರೇಶ ಅಂತಾನೇ ಕರೆಸಿಕೊಳ್ಳುವ ಕೂಡ್ಲಗಿ ತಾಲೂಕಿನ ಕೊಟ್ಟೂರು ಪಟ್ಟಣದ ನಿವಾಸಿ ಕೊಟ್ರೇಶ ಅವರು 5 ವಾರಗಳ ಹಿಂದೆಯಷ್ಟೇ ಏಕಾಂಗಿಯಾಗಿ ಕರೆಯಲ್ಲಿನ ಜಾಲಿ ಮುಳ್ಳುಗಳನ್ನು ತೆರವು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಈ ಬಗ್ಗೆ ಪೇಸ್‍ಬುಕ್‍ನಲ್ಲಿ ನಮ್ಮ ಕೆರೆ ನಮ್ಮ ಹಕ್ಕು ಕೆರೆ ಕ್ಲೀನ್ ಮಾಡೋಕೆ ಬನ್ನಿ ಅಂತಾ ಮನವಿಯನ್ನೂ ಮಾಡಿದ್ದರು. ಇವರ ಫೇಸ್‍ಬುಕ್ ಪೋಸ್ಟ್ ಗೆ ಸ್ಪಂದಿಸಿದ ಯುವಕರು 700 ಎಕರೆಯಷ್ಟು ವಿಶಾಲವಾಗಿರುವ ಕೆರೆಗೆ ಮರು ಜೀವ ನೀಡೋ ಕಾಯಕಕ್ಕೆ ಕೈಜೋಡಿಸಿದ್ದಾರೆ.

    ಇದುವರೆಗೆ ಕೆರೆಯ ತುಂಬಾ ಹರಡಿದ್ದ ಜಾಲಿ ಮುಳ್ಳನು ಖಾಲಿ ಮಾಡಲಾಗಿದೆ. ಜೆಸಿಬಿ ಮೂಲಕವೂ ಕೆರೆಯನ್ನು ಶುಚಿಗೊಳಿಸುವ ಕಾಯಕ ಸಾಗಿದೆ. ಜಿಲ್ಲಾಡಳಿತ ಕೂಡಾ ಜೊತೆಯಾದರೆ ಕೊಟ್ಟೂರು ಕೆರೆ ಮತ್ತೆ ಕೋಡಿ ಹೊಡೆಯೋದ್ರಲ್ಲಿ ಅನುಮಾನವೇ ಇಲ್ಲ.

  • ಅಂಚೆ ಉದ್ಯೋಗಿಯೊಬ್ಬರ 1 ಎಫ್‍ಬಿ ಪೋಸ್ಟ್ ನಿಂದ 200 ಎಕ್ರೆಯ ಕೊಟ್ಟೂರು ಕೆರೆ ಕ್ಲೀನ್!

    ಅಂಚೆ ಉದ್ಯೋಗಿಯೊಬ್ಬರ 1 ಎಫ್‍ಬಿ ಪೋಸ್ಟ್ ನಿಂದ 200 ಎಕ್ರೆಯ ಕೊಟ್ಟೂರು ಕೆರೆ ಕ್ಲೀನ್!

    – ಸಾಮಾಜಿಕ ಜಾಲತಾಣದಿಂದ ಶುರುವಾಯ್ತು `ನಮ್ಮ ಕೆರೆ ನಮ್ಮ ಹಕ್ಕು’ ಆಂದೋಲನ

    ಬಳ್ಳಾರಿ: ಫೇಸ್‍ಬುಕ್ ದುರ್ಬಳಕೆ ಆಗ್ತಿದೆ, ಜನರ ಆಮೂಲ್ಯ ಸಮಯ ಹಾಳಾಗ್ತಿದೆ ಎಂದು ಆರೋಪಿಸುವ ಮಂದಿಯೇ ಅಧಿಕ. ಆದರೆ ಜಿಲ್ಲೆಯಲ್ಲಿ ಅಂಚೆ ನೌಕರರೊಬ್ಬರ ಪೋಸ್ಟ್ ನಿಂದಾಗಿ ಇದೀಗ ದೊಡ್ಡದೊಂದು ಆಂದೋಲನ ಶುರುವಾಗಿದೆ.

    ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಕೊಟ್ರೇಶ್ ಎಂಬವರು ಹಾಕಿದ ಪೋಸ್ಟ್ ಗೆ ಇಂದು ಸಾವಿರಾರು ಯುವಕರಿಗೆ ಪ್ರೇರಣೆಯಾಗಿದೆ. ಕೊಟ್ರೇಶ್ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಪಟ್ಟಣದ ನಿವಾಸಿ. ಕೊಟ್ಟೂರಿನ ಪುರಾತನ ಕಾಲದ 700 ಎಕರೆ ಕೆರೆಯಲ್ಲಿ ತುಂಬಿದ್ದ ಜಾಲಿ ಮುಳ್ಳುಗಳ ತೆರವು ಮಾಡಲು ಇವರು ಒಬ್ಬರೇ ಮುಂದಾಗಿದ್ದರು. ಕಳೆದ 5 ವಾರಗಳ ಹಿಂದೆ ರವಿವಾರ ದಿನ ಇವರು ಒಬ್ಬರೇ ಕರೆಯಲ್ಲಿನ ಜಾಲಿ ಮುಳ್ಳುಗಳ ತೆರವು ಮಾಡುವ ಕೆಲಸ ಆರಂಭಿಸಿದ್ದರು. ಕೆರೆ ಕ್ಲೀನ್ ಮಾಡೋ ಫೋಟೋವೊಂದನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ `ನಮ್ಮ ಕೆರೆ ನಮ್ಮ ಹಕ್ಕು’ ಕೆರೆ ಕ್ಲೀನ್ ಮಾಡೋಕೆ ಬನ್ನಿ ಅಂತಾ ಕರೆ ನೀಡಿದ್ದರು.

    ನಮ್ಮ ಕೆರೆ ನಮ್ಮ ಹಕ್ಕು ಪೋಸ್ಟ್:
    ಕೊಟ್ರೇಶ್ ಅವರು ಮಾಡಿದ ನಮ್ಮ ಕೆರೆ ನಮ್ಮ ಹಕ್ಕು ಪೋಸ್ಟ್ ನ್ನು ಗಮನಿಸಿದ ಸ್ಥಳೀಯರು ಇದೀಗ ಗುಂಪು ಗುಂಪಾಗಿ ಪ್ರತಿ ಭಾನುವಾರ ಕೆರೆ ಕ್ಲೀನ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂಚೆ ಕೋಟ್ರೇಶರ ಕೆರೆ ಕ್ಲೀನ್ ಮಾಡೋ ಉದ್ದೇಶ ಮನಗಂಡ ಸ್ಥಳೀಯರು ಕೆರೆಯಲ್ಲಿನ ಜಾಲಿಮುಳ್ಳುಗಳ ತೆರವಿಗೆ ತಮ್ಮ ಕೈಲಾದಷ್ಟೂ ಹಣ ನೀಡಿ ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ಸ್ವಪ್ರೇರಿತರಾಗಿ ಜೆಸಿಬಿ ಯಂತ್ರಗಳ ಬಾಡಿಗೆಯನ್ನು ಸಹ ನೀಡುವ ಮೂಲಕ ಕೆರೆಯಲ್ಲಿನ ಮುಳ್ಳುಗಳನ್ನು ತೆರವು ಮಾಡುತ್ತಿದ್ದಾರೆ.

    ಅಂಚೆ ಕ್ರೋಟ್ರೇಶರೊಂದಿಗೆ ಇದೀಗ ಕೊಟ್ಟೂರಿನ ಸುಮಾರು 150ಕ್ಕೂ ಹೆಚ್ಚು ಯುವಕರು ಪ್ರತಿ ಭಾನುವಾರು ಕೆರೆ ಕ್ಲೀನ್ ಮಾಡುವ ಮೂಲಕ ಇದೂವರೆಗೂ ಬರೋಬ್ಬರಿ 200 ಎಕರೆಯಲ್ಲಿನ ಮುಳ್ಳುಗಳನ್ನು ತೆರವು ಮಾಡಲಾಗಿದೆ.

    ಪುರಾತನ ಕಾಲದ ಈ ಕೊಟ್ಟೂರು ಕೆರೆ ಬರೋಬ್ಬರಿ 700 ಎಕರೆ ವಿಸ್ತಾರ ಹೊಂದಿದೆ. ಈಗಾಗಲೇ ಸ್ಥಳೀಯ ಯುವಕರು ಸ್ವಪ್ರೇರಣೆಯಿಂದ 200 ಎಕರೆ ವಿಸ್ತಾರದಲ್ಲಿನ ಜಾಲಿಮುಳ್ಳುಗಳನ್ನು ಕ್ಲೀನ್ ಮಾಡಿದ್ದಾರೆ. ಅಲ್ಲದೇ ಪ್ರತಿ ಭಾನುವಾರದಿಂದ ಭಾನುವಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸ್ವಪ್ರೇರಣೆಯಿಂದ ಆಗಮಿಸಿ ಕೆರೆ ಕ್ಲೀನ್ ಮಾಡುವ ಮೂಲಕ ಸರ್ಕಾರ ಜಿಲ್ಲಾಡಳಿತ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ.

    ಕೆರೆಗೆ ಬರೋ ನೀರಿನ ಮಾರ್ಗಗಳನ್ನು ಜಿಲ್ಲಾಡಳಿತ ಸರಿಪಡಿಸಿ ಮುಂದಿನ ದಿನಗಳಲ್ಲಿ ಕೆರೆಗೆ ನೀರು ಬರುವಂತೆ ಮಾಡಬೇಕಾಗಿದೆ. ಒಟ್ಟಾರೆ ಅಂಚೆ ಕೋಟ್ರೇಶರು ಫೇಸ್‍ಬುಕ್‍ನಲ್ಲಿ ಮಾಡಿದ ಪೊಸ್ಟ್ ಇದೀಗ ನೂರಾರು ಎಕರೆ ವಿಸ್ತಾರದ ಕೆರೆ ಕ್ಲೀನ್ ಮಾಡಲು ಪ್ರೇರಣೆಯಾಗಿದೆ.

     

     

  • ಮಂಡ್ಯ: ಮೀನುಗಾರರ ಬಲೆಗೆ ಸಿಕ್ತು ಎಟಿಎಂ ಯಂತ್ರ

    ಮಂಡ್ಯ: ಮೀನುಗಾರರ ಬಲೆಗೆ ಸಿಕ್ತು ಎಟಿಎಂ ಯಂತ್ರ

    ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಕರೆಯಲ್ಲಿ ಮೀನುಗಾರರು ಬೀಸಿದ ಬಲೆಗೆ ಮೀನು ಸಿಗುವ ಬದಲು ಎಟಿಎಂ ಯಂತ್ರ ಸಿಕ್ಕಿದೆ.

    ದರೋಡೆಕೋರರು ಎಟಿಎಂ ಯಂತ್ರವನ್ನು ಕದ್ದು ತಂದು ಅದರಲ್ಲಿಯ ಹಣವನ್ನು ತೆಗೆದು ಕೊನೆಗೆ ಯಂತ್ರವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು, ಮೀನುಗಾರರು ಬೀಸಿದ್ದ ಬಲೆಗೆ ಎಟಿಎಂ ಯಂತ್ರ ಸಿಕ್ಕಿದೆ.

    ಇದನ್ನೂ ಓದಿ: ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ 

    ಈ ಬಗ್ಗೆ ಕೂಡಲೇ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ನಾಗಮಂಗಲ ಪಟ್ಟಣ ಪೊಲೀಸರು ಕೆರೆಯಲ್ಲಿ ಪತ್ತೆಯಾದ ಎಟಿಎಂ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಎಟಿಎಂ ಯಂತ್ರ ಯಾವ ಬ್ಯಾಂಕಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಇದನ್ನೂ ಓದಿ: ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ? 

     

  • ಸ್ನಾನಕ್ಕೆ ತೆರಳಿದ್ದ ಬಾಲಕ ಕೆರೆಯಲ್ಲಿ ಸಾವು: ನಾಲ್ವರು ಪಾರು

    ಸ್ನಾನಕ್ಕೆ ತೆರಳಿದ್ದ ಬಾಲಕ ಕೆರೆಯಲ್ಲಿ ಸಾವು: ನಾಲ್ವರು ಪಾರು

    ರಾಯಚೂರು: ಜಿಲ್ಲೆಯ ಸಿಂಧನೂರಿನ ತಾಲೂಕಿನ ಮೂರು ಮೈಲ್ ಕ್ಯಾಂಪ್ ಬಳಿ ಕೆರೆಗೆ ಸ್ನಾನಕ್ಕೆ ತೆರಳಿದ್ದ ಯುವಕ ಜಲಸಮಾಧಿಯಗಿದ್ದಾನೆ.

    ಸಿಂಧನೂರು ಪಟ್ಟಣದ ನಿವಾಸಿ 16 ವರ್ಷದ ಹುಸೇನ್ ಮೃತ ದುರ್ದೈವಿ. ಹುಸೇನ್ ಜೊತೆಯಲ್ಲಿ ಇನ್ನೂ ನಾಲ್ಕು ಜನ ಭಾನುವಾರ ಕೆರೆಗೆ ಸ್ನಾನ ಮಾಡಲು ತೆರಳಿದ್ದರು. ಆದರೆ ಹುಸೇನ್ ಮಾತ್ರ ಕೆರೆಯ ಮದ್ಯದ ಆಳವಾದ ಸ್ಥಳದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

    ಹುಸೇನ್ ಜಲಸಮಾಧಿ ಆಗಿದ್ರೂ, ಆತನ ಗೆಳೆಯರು ಭಯದಿಂದ ಯಾರಿಗೂ ತಿಳಿಸಿರಲಿಲ್ಲ. ತಮ್ಮ ಮಗ ಕಾಣದೇ ಇದ್ದಾಗ ಹುಸೇನ್ ಪೋಷಕರು ಇಂದು ಆತನ ಗೆಳೆಯರನ್ನು ವಿಚಾರಿಸಿದಾಗ ವಿಷಯ ತಿಳಿದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಹುಸೇನ್ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀವು ಗಡಿ ಗುರುತಿಸಿ, ನಾವು ಜಾಗ ಕೊಡ್ತೀವಿ: ಮಾದರಿಯಾದ ಮಂಡ್ಯ ರೈತರು

    ಮಂಡ್ಯ: ಒತ್ತುವರಿಯಾಗಿದ್ದ ಕೆರೆ ಜಾಗವನ್ನು ಸ್ವತಃ ರೈತರೇ ಮುಂದೆ ನಿಂತು ತಾಲೂಕು ಆಡಳಿತದೊಂದಿಗೆ ಸೇರಿ ತೆರವುಗೊಳಿಸುವ ಮೂಲಕ ಮಾದರಿಯಾದ ಘಟನೆ ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ರೈತರು ಇಂತಹದೊಂದು ಕೆಲಸದಲ್ಲಿ ಭಾಗಿಯಾಗಿದ್ದಾರೆ.

    ಗ್ರಾಮದಲ್ಲಿ ಸುಮಾರು 13.10 ಎಕರೆ ವಿಸ್ತಿರ್ಣದ ಕೆರೆ ಇತ್ತು. ಆದ್ರೆ ರೈತರು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಇದ್ರಿಂದಾಗಿ ಹೂಳು ತುಂಬಿಕೊಂಡು ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಕೆರೆ ಪುನಶ್ಚೇತನಕ್ಕೆ ಒತ್ತಾಯಿಸಿ ತಹಸೀಲ್ದಾರ್ ಮಾರುತಿ ಪ್ರಸನ್ನ ಅವ್ರಿಗೆ ಮನವಿ ಸಲ್ಲಿಸಿದ್ರು.

    ಆದರೆ ಕೆರೆಯ ಬಳಿ ಬಂದು ಪರಿಶೀಲಿಸಿದಾಗ ಅಧಿಕಾರಿಗಳಿಗೆ ಶಾಕ್ ಕಾದಿತ್ತು ಯಾಕಂದ್ರೆ ಕೆರೆ ಸಂಪೂರ್ಣ ಒತ್ತುವರಿಯಾಗಿದ್ದು ಅದನ್ನ ರೈತರಿಂದ ಹೇಗಪ್ಪ ಬಿಡಿಸುವುದು ಅನ್ನೋದು ಅಧಿಕಾರಿಗಳಿಗೆ ತಲೆ ನೋವಾಗಿತ್ತು. ಆದರೆ ಇದಕ್ಕೆ ಆಸ್ಪದ ಕೊಡದ ರೈತರು ನೀವು ಕೆರೆ ಗಡಿ ಗೊತ್ತು ಮಾಡಿ ಜಾಗ ಖಾಲಿ ಮಾಡಿ ಅನ್ನಿ ಸಾಕು. ನಾವು ಮರು ಮಾತನಾಡದೇ ತಾತ ಮುತ್ತಾಂದಿರ ಕಾಲದಿಂದ ಉಳುಮೆ ಮಾಡುತ್ತಿದ್ದ ಜಾಗ ಖಾಲಿ ಮಾಡ್ತೀವಿ ಎಂದು ಹೇಳಿದ್ದರು.

    ಕೊಟ್ಟ ಮಾತಿನಂತೆ ಕೆರೆ ಒತ್ತವರಿ ಮಾಡಿಕೊಂಡಿದ್ದವರೇ ಜಾಗ ತೆರವು ಮಾಡಿ ಕೆರೆ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಇದರಿಂದ ತಹಶಿಲ್ದಾರ್ ಮಾರುತಿ ಪ್ರಸನ್ನ ಒತ್ತುವರಿ ಕಾರ್ಯ ಆರಂಭಿಸುವ ಮುನ್ನ ರೈತರಿಗೆ ಹಾರ ಹಾಕಿ ಅಭಿನಂದಿಸಿದ್ದಾರೆ. ಇದೀಗ ಒತ್ತುವರಿ ತೆರವು ಕಾರ್ಯ ಆರಂಭವಾಗಿದ್ದು, ರೈತರು ತಾವೇ ಮುಂದೆ ನಿಂತು ಕೆರೆ ಅಭಿವೃದ್ಧಿ ಮಾಡುತ್ತಿರುವುದು ಜಿಲ್ಲೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.