Tag: lake

  • ದೀಪಾವಳಿ ಹಬ್ಬದ ದಿನವೇ ಕೆರೆಗೆ ಹಾರಿ ಪ್ರಾಣ ಬಿಟ್ಟ SSLC ವಿದ್ಯಾರ್ಥಿನಿ

    ದೀಪಾವಳಿ ಹಬ್ಬದ ದಿನವೇ ಕೆರೆಗೆ ಹಾರಿ ಪ್ರಾಣ ಬಿಟ್ಟ SSLC ವಿದ್ಯಾರ್ಥಿನಿ

    ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದ ದಿನವೇ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದ ಬಳಿ ನಡೆದಿದೆ.

    ಗೌರಿಬಿದನೂರು ತಾಲೂಕಿನ ಬಿಕ್ಕಲಹಳ್ಳಿ ಗ್ರಾಮದ ದಿವ್ಯ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಂಚೇನಹಳ್ಳಿಯ ಸಂಯುಕ್ತ ಫ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ದಿವ್ಯ ಎಂದಿನಂತೆ ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಬಂದಿದ್ದಾಳೆ.

    ಆದರೆ ಶಾಲೆಗೆ ಹೋಗಬೇಕಾದ ವಿದ್ಯಾರ್ಥಿನಿ ಶಾಲೆಗೆ ಹೋಗದೆ ಸೀದಾ ಶ್ರೀನಿವಾಸ ಸಾಗರ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆರೆಯ ಏರಿಯ ಮೇಲೆ ಸ್ಕೂಲ್ ಬ್ಯಾಗ್ ಸೇರಿದಂತೆ ಶೂ ಹಾಗೂ ಶೂನಲ್ಲಿ ತಾನು ಧರಿಸಿದ್ದ ಎರಡು ಬೆಳ್ಳಿ ಉಂಗುರಗಳು ಪತ್ತೆಯಾಗಿವೆ.

    ವಿದ್ಯಾರ್ಥಿನಿಯ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಮೃತ ದಿವ್ಯ ತಂದೆ ರಾಮಪ್ಪ ಹಾಗೂ ಅಣ್ಣ ಘಟನಾ ಸ್ಥಳಕ್ಕೆ ಬಂದಿದ್ದು, ಮಗಳ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ ಅಂದಿದ್ದಾರೆ.

    ಸದ್ಯ ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಧ ಪೂಜೆಯಂದೇ ವಿಧಿಯಾಟ – ಬೈಕ್ ತೊಳೆಯಲು ತೆರಳಿದ್ದ ಯುವಕರು ನೀರುಪಾಲು

    ಆಯುಧ ಪೂಜೆಯಂದೇ ವಿಧಿಯಾಟ – ಬೈಕ್ ತೊಳೆಯಲು ತೆರಳಿದ್ದ ಯುವಕರು ನೀರುಪಾಲು

    ಚಿಕ್ಕಮಗಳೂರು: ಬೈಕ್ ತೊಳೆಯಲು ಕೆರೆಗೆ ಹೋದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

    ಹೇಮಂತ್ (18), ವಿಜಯ್ (21), ಶಿವರಾಜ್ (14) ಮೃತ ಯುವಕರಾಗಿದ್ದು, ಆಯುಧ ಪೂಜೆಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಗ್ರಾಮದ ಕಟ್ಟೆ ಕೆರೆಯಲ್ಲಿ ಬೈಕ್ ತೊಳೆಯಲು ಹೋಗಿದ್ದರು. ಈ ವೇಳೆ ಓರ್ವ ಯುವಕ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಮೃತ ಮೂವರು ಯುವಕರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೈಕ್ ಮಾತ್ರ ಕೆರೆ ಬಳಿ ನಿಂತಿರುವುದನ್ನ ಕಂಡ ಗ್ರಾಮಸ್ಥರು ವಿಚಾರಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಹಬ್ಬದ ದಿನದಂತೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿರುವ ಲಿಂಗದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೊಡ್ಡ ಕೆರೆ ಕೋಡಿಗೆ ಬಿದ್ದ ಕಾರ್ – ಇಬ್ಬರ ದುರ್ಮರಣ

    ದೊಡ್ಡ ಕೆರೆ ಕೋಡಿಗೆ ಬಿದ್ದ ಕಾರ್ – ಇಬ್ಬರ ದುರ್ಮರಣ

    ಮೈಸೂರು: ದೊಡ್ಡ ಕೆರೆ ಕೋಡಿಗೆ ಕಾರು ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ನಡೆದಿದೆ.

    ದಶರಥ (27) ಮತ್ತು ಶಿವಣ್ಣ (28) ಮೃತ ದುರ್ದೈವಿಗಳು. ದಶರಥ ಶವ ಕಾರಿನಲ್ಲಿ ಪತ್ತೆಯಾಗಿದ್ದು, ಶಿವಣ್ಣ ಶವ ಘಟನಾ ಸ್ಥಳದಿಂದ ಸ್ವಲ್ಪ ದೂರದ ಜಮೀನಿನಲ್ಲಿ ಪತ್ತೆಯಾಗಿದೆ. ಮೃತರು ಪಿರಿಯಾಪಟ್ಟಣದ ದೇವೇಗೌಡನಕೊಪ್ಪಲು ಬಡಾವಣೆಯ ನಿವಾಸಿಗಳು ಎಂದು ಗುರುತಿಸಲಾಗಿದೆ.

    ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ. ಇವರೆಲ್ಲರೂ ಪಿತೃ ಪಕ್ಷಕ್ಕಾಗಿ ಭೇರ್ಯ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ದೊಡ್ಡ ಕೆರೆ ಕೋಡಿ ಬಳಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಪರಿಣಾಮ ದಶರಥ ಮತ್ತು ಶಿವಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಕೆ.ಆರ್ ನಗರ ಇನ್ಸ್ ಪೆಕ್ಟರ್ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂಗೆ ಹಾಡಿನ ಮೂಲಕ ಕೆರೆಗೆ ನೀರು ಹರಿಸುವಂತೆ ಮನವಿ: ಶಿರಾ ಯುವಕನ ವಿಡಿಯೋ ವೈರಲ್

    ಸಿಎಂಗೆ ಹಾಡಿನ ಮೂಲಕ ಕೆರೆಗೆ ನೀರು ಹರಿಸುವಂತೆ ಮನವಿ: ಶಿರಾ ಯುವಕನ ವಿಡಿಯೋ ವೈರಲ್

    ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಸಿಎಂ ಕುಮಾರಸ್ವಾಮಿಯವರಿಗೆ ಹಾಡಿನ ಮೂಲಕ ಮನಮುಟ್ಟುವ ರೀತಿಯಲ್ಲಿ ಯುವ ರೈತನೋರ್ವ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಹಲವಾರು ಹೋರಾಟಗಳು ನಡೆದಿದೆ. ರಕ್ತದ ಮೂಲಕ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ಮನವಿಯನ್ನೂ ಮಾಡಲಾಗಿದೆ. ಆದರೂ ಸಹ ಇಲ್ಲಿಯವರೆಗೂ ಮದಲೂರು ಕೆರೆಗೆ ಹನಿ ನೀರೂ ಹರಿದಿಲ್ಲ. ಇದರಿಂದ ಬೇಸತ್ತ ಯುವ ರೈತನೋರ್ವ ಹೃದಯ ಮುಟ್ಟವ ರೀತಿಯಲ್ಲಿ ಹಾಡನ್ನು ರಚಿಸಿ ಹಾಡಿರುವ ವಿಡಿಯೋ ಸಾಕಷ್ಟು ಸುದ್ದಿಯಾಗಿದೆ.

    ಪೂಜಾರ್ ಮುದ್ದನಹಳ್ಳಿ ಯುವ ರೈತ ಮಂಜುನಾಥ್ ಎಂಬಾತ ಹಿರಿಯ ಗಾಯಕ ಸಿ.ಅಶ್ವಥ್ ಹಾಡಿರುವ “ಒಳಿತು ಮಾಡು ಮನುಸ” ಎಂಬ ಹಾಡಿನ ಸಂಗೀತಕ್ಕೆ ತಾನೇ ಬೇರೆ ಸಾಹಿತ್ಯ ಬರೆದು ಹಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ ರೀತಿಯಲ್ಲಿ ಈ ಹಾಡು ರಚಿಸಿದ್ದಾರೆ. ಅಲ್ಲದೇ ಐದು ನಿಮಿಷ ಸ್ವತಃ ಹಾಡಿರುವ ರೈತನ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಂಜುನಾಥ್, ನಮ್ಮ ಭಾಗದಲ್ಲಿ ನೀರಿನ ಅಭಾವ ಹೆಚ್ಚಿದ್ದು, ಬೆಳೆ ಬೆಳೆಯಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಸಿಎಂ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಅವರು ರೈತರ ಪರ ಕಾಳಜಿಯನ್ನು ಹೊಂದಿದ್ದಾರೆ. ನಮ್ಮ ಮದಗೂರಿನ ಕೆರೆಗೆ ನೀರು ಹರಿಸುವಂತೆ ಎಷ್ಟೇ ಬಾರಿ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಹೀಗಾಗಿ ಹಾಡಿನ ಮೂಲಕ ಅವರ ಮನ ಮುಟ್ಟುವಂತೆ ಹಾಡಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆರೆಗೆ ಬಿದ್ದ ಕರುಗಳನ್ನು ರಕ್ಷಿಸಿ ಪ್ರಾಣ ಬಿಟ್ಟ ತಂದೆ-ಮಗ

    ಕೆರೆಗೆ ಬಿದ್ದ ಕರುಗಳನ್ನು ರಕ್ಷಿಸಿ ಪ್ರಾಣ ಬಿಟ್ಟ ತಂದೆ-ಮಗ

    ಮಂಡ್ಯ: ಎತ್ತಿನ ಗಾಡಿ ಸಮೇತ ಕೆರೆಗೆ ಬಿದ್ದ ಕರುಗಳನ್ನು ರಕ್ಷಿಸಿದ ತಂದೆ ಮತ್ತು ಮಗ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ.

    45 ವರ್ಷದ ಶಿವಣ್ಣ ಮತ್ತು 17 ವರ್ಷದ ಚಂದನ್ ಮೃತ ದುರ್ದೈವಿಗಳು. ಕರುಗಳಿಗೆ ಎತ್ತಿನ ಗಾಡಿ ಅಭ್ಯಾಸ ಮಾಡಿಸುವ ಸಲುವಾಗಿ ತಂದೆ ಮಗ ಜಮೀನಿನ ಕಡೆ ಹೊರಟಿದ್ದರು. ಈ ವೇಳೆ ಕೆರೆಯ ಬಳಿ ಬಂದಾಗ ಹೆದರಿದ ಎತ್ತಿನ ಕರುಗಳು, ನೇರ ಕೆರೆಗೆ ನುಗ್ಗಿವೆ.

    ಕರುಗಳು ಕೆರೆಯ ಕಡೆ ನುಗ್ಗುತ್ತಿದ್ದಂತೆಯೇ ಆತಂಕಗೊಂಡ ಶಿವಣ್ಣ ಮತ್ತು ಚಂದನ್ ಗಾಡಿಯ ಜೊತೆ ಎತ್ತುಗಳು ಸಾವನ್ನಪ್ಪಬಹುದು ಎಂಬ ಭಯದಿಂದ ಗಾಡಿಯಿಂದ ಎತ್ತುಗಳನ್ನು ಬಿಡಿಸಿ ರಕ್ಷಣೆ ಮಾಡಿದ್ದಾರೆ. ಆದರೆ ತಕ್ಷಣ ಇಬ್ಬರಿಗೂ ಮೇಲೆ ಬರಲು ಆಗದೇ ತಂದೆ ಮಗ ಇಬ್ಬರೂ ಒಟ್ಟಿಗೆ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಘಟನೆ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಂದೆ ಮತ್ತು ಮಗನ ಸಾವಿನಿಂದ ಹಾಡ್ಲಿ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ

    ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ

    ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ ಉಂಟಾಗಿದೆ.

    ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳ್ಳಂದೂರು ಕೆರೆ ಕೋಡಿ ಹರಿದಿದ್ದು ಈಗ ನೊರೆ ಬೆಟ್ಟದಂತೆ ಶೇಖರಣೆಯಾಗಿದೆ. ಇದರಿಂದಾಗಿ ಬೆಳ್ಳಂದೂರು – ಹೆಚ್‍ಎಎಲ್ ಮಾರ್ಗವಾಗಿ ಸಂಚರಿಸುವ ವಾಹನ ಸವಾರರ ಮೇಲೆ ಗಾಳಿ ಬಂದಾಗ ನೊರೆಯ ಸಿಂಚನವಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ.

    ಕೆಲ ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದ್ದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿ ಟಿ) ಬಿಬಿಎಂಪಿಗೆ ಹಲವು ಬಾರಿ ಚಾಟಿ ಬೀಸಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಕೆರೆಯನ್ನು ಶುಚಿಗೊಳಿಸಿ, ಕೆರೆಗೆ ಬರುವ ಕರುಷಿತ ನೀರಿಗೆ ಕಡಿವಾಣ ಹಾಕದೆ ಇರುವುದರಿಂದ ಈಗ ಮತ್ತೆ ನೊರೆ ಕಾಣಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ovmwvtWl0HU

  • ಈಜಲು ಆಗದೆ, ದಡಕ್ಕೂ ಬರಲಾಗದೆ ಉಸಿರುಗಟ್ಟಿ ಯುವಕ ಸಾವು

    ಈಜಲು ಆಗದೆ, ದಡಕ್ಕೂ ಬರಲಾಗದೆ ಉಸಿರುಗಟ್ಟಿ ಯುವಕ ಸಾವು

    ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಅಯ್ಯನಕೆರೆಯಲ್ಲಿ ನಡೆದಿದೆ.

    ಮೃತ ಯುವಕನನ್ನ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯ ಪೂರ್ಣೇಶ್(25) ಎಂದು ಗುರುತಿಸಲಾಗಿದೆ. ಪೂರ್ಣೇಶ್ ಶನಿವಾರ ಸಂಜೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಅಯ್ಯನಕೆರೆಯಲ್ಲಿ ಈಜಲು ತೆರಳಿದ್ದನು. ಕೆರೆಯಲ್ಲಿ ಸ್ವಲ್ಪ ಹೊತ್ತು ಈಜಿದ್ದಾನೆ. ನಂತರ ಈಜಲು ಸಾಧ್ಯವಾಗದೆ ಇತ್ತ ದಡಕ್ಕೂ ಬರಲಾಗದೆ ಕೆರೆಯಲ್ಲಿ ಮುಳುಗಿದ್ದಾನೆ.

    ಸ್ನೇಹಿತ ಮುಳುಗುತ್ತಿದ್ದಾಗ ಉಳಿದ ಸ್ನೇಹಿತರು ಕಾಡಾಲು ಯತ್ನಿಸಿದ್ದಾರೆ. ಆದರೆ ಮೂವರು ಸ್ನೇಹಿತರಿಗೂ ಈಜು ಬರುತ್ತಿರಲಿಲ್ಲ. ಇದರಿಂದ ಅವರು ಮುಳುಗುತ್ತಿದ್ದ ಪೂರ್ಣೇಶ್ ನನ್ನು ಕಾಪಾಡಲು ಬಟ್ಟೆ, ಮರದ ಬಳ್ಳಿಯನ್ನು ಎಸೆಯುತ್ತಾರೆ. ಪೂರ್ಣೇಶ್ ತುಂಬಾ ದೂರ ಹೋಗಿ ಈಜಾಡುತ್ತಿದ್ದ ಕಾರಣ ಮುಳುಗಿ ಸಾವನ್ನಪ್ಪಿದ್ದಾನೆ.

    ಸ್ನೇಹಿತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ರಾತ್ರಿ ಆಗಿದ್ದರಿಂದ ಹುಡುಕಲು ಸಾಧ್ಯವಾಗಿಲ್ಲ. ಇಂದು ಮುಂಜಾನೆಯಿಂದನೇ ಹುಡುಕಾಟ ಶುರುಮಾಡಿದ್ದು, ಸದ್ಯ ಯುವಕನ ಮೃತದೇಹ ಪತ್ತೆಯಾಗಿದೆ.

    ಈ ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಈಜಾಡಿ ಸುಸ್ತಾಗಿ ನೋಡನೋಡುತ್ತಲೇ ಕಣ್ಮರೆ- ಮೋಜಿಗಾಗಿ ಯುವಕನ ಜೀವವೇ ಹೋಯ್ತು!

    ಈಜಾಡಿ ಸುಸ್ತಾಗಿ ನೋಡನೋಡುತ್ತಲೇ ಕಣ್ಮರೆ- ಮೋಜಿಗಾಗಿ ಯುವಕನ ಜೀವವೇ ಹೋಯ್ತು!

    ಬೆಂಗಳೂರು: ಮೋಜಿಗಾಗಿ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಳೆ ನಿಜಗಲ್ ಕೆರೆಯಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಶ್ರೀನಿವಾಸ್ ಮೃತ ದುರ್ದೈವಿ. ಮೃತ ಶ್ರೀನಿವಾಸ್ ನಂದಿಹಳ್ಳಿ ಬಳಿಯ ರಿಲಯಾನ್ಸ್ ವೇರ್ ಔಸ್‍ನಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಮುಂಜಾನೆ ತನ್ನ ಆರು ಮಂದಿ ಸ್ನೇಹಿತರಾದ ರಾಘವೇಂದ್ರ, ಮೋಹನ್ ಕುಮಾರ್, ವಿನಯ್ ಸಿಂಗ್, ಸಂತೋಷ್, ಸುರೇಶ್ ಬಾಬು ಮತ್ತು ತೇಜಸ್ ಎಲ್ಲರೊಂದಿಗೆ ಈಜಲು ತೆರಳಿದ್ದನು.

    ಈ ವೇಳೆ ಈಜಿ ಈಜಿ ಸುಸ್ತಾದ ಯುವಕ ನೋಡ ನೋಡುತ್ತಲೆ ಕಣ್ಮರೆಯಾಗಿದ್ದಾನೆ. ಶ್ರೀನಿವಾಸ್ ಕಣ್ಮೆರೆಯಾಗುವ ವಿಡಿಯೋ ಮತ್ತೊಬ್ಬ ಸ್ನೇಹಿತನ ಮೊಬೈಲ್‍ ನಲ್ಲಿ ಸೆರೆಯಾಗಿದೆ. ಈತನೊಂದಿಗೆ ಇತರ ಸ್ನೇಹಿತರು ಸಹ ಈಜುತ್ತಿದ್ದರು. ಆದರೆ ಯಾರು ಸಹ ಆತನನ್ನು ಉಳಿಸಲಾಗಲಿಲ್ಲ. ಶ್ರೀನಿವಾಸ್ ಮುಳುಗುತ್ತಿರುವಾಗ ದಡದಲ್ಲಿರುವ ಮತ್ತೊಬ್ಬ ಸ್ನೇಹಿತ, ಅವನು ಮುಳುಗುತ್ತಿದ್ದಾನೆ ಜುಟ್ಟು ಹಿಡಿದು ಮೇಲೆತ್ತಿ ಅನ್ನುತ್ತಾನೆ. ಆಗ ಮೇಲೆತ್ತಲಾಗುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸರೆಯಾಗಿದೆ.

    ಶ್ರೀನಿವಾಸ್‍ಗೆ ನೀರು ಎಂದರೆ ಭಯ, ಆತನಿಗೆ ಈಜು ಬರುತ್ತಿರಲಿಲ್ಲ ಎಂದು ಮೃತಳ ಚಿಕ್ಕಮ್ಮ ಆರೋಪಿಸಿದ್ದಾರೆ. ಆದರೆ ಆತನಿಗೆ ನೀರಿಗೆ ಇಳಿಯಬೇಡ ಎಂದರು ಸ್ವತಃ ಅವನೇ ಈಜಲು ತೆರಳಿದ್ದ ಎಂದು ಸ್ನೇಹಿತ ಸಂತೋಷ್ ತಿಳಿಸಿದ್ದಾನೆ. ಆದ್ದರಿಂದ ಈ ಘಟನೆಯ ಸುತ್ತ ಹಲವಾರು ಹನುಮಾನಗಳು ಸೃಷ್ಟಿಯಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿ ಮೃತ ಶ್ರೀನಿವಾಸ್ ದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಸದ್ಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಸ್ನೇಹಿತರನ್ನು ಡಾಬಸ್ ಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆಗೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗು ಸಾವನ್ನಪ್ಪಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ಬಾಣಂತಿ

    ಮಗು ಸಾವನ್ನಪ್ಪಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ಬಾಣಂತಿ

    ಬಾಗಲಕೋಟೆ: ಮಗು ಮೃತಪಟ್ಟಿದ್ದರಿಂದ ಬಾಣಂತಿಯೊಬ್ಬರು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಮಖಂಡಿ ನಗರದ ಹೊರವಲಯದ ಲಕ್ಕನಕೆರೆಯಲ್ಲಿ ನಡೆದಿದೆ.

    23 ವರ್ಷದ ಮಲ್ಲವ್ವ ವಿಭೂತಿ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಾಣಂತಿ. ಮಲ್ಲವ್ವಗೆ ಒಂದು ತಿಂಗಳ ಹಿಂದೆ ಹೆರಿಗೆಯಾಗಿತ್ತು. ಎರಡು ದಿನಗಳ ನಂತರ ಗಂಡು ಮಗು ಸಾವನ್ನಪ್ಪಿತ್ತು. ಮಗು ಸಾವಿನಿಂದಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಇದರಿಂದ ಮಲ್ಲವ್ವ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ.

    ಶುಕ್ರವಾರ ಮಧ್ಯಾಹ್ನ ಮಲ್ಲವ್ವ ಮನೆಯಿಂದ ಕಾಣೆಯಾಗಿದ್ದರು. ಸಂಜೆಯವರೆಗೂ ಮನೆಯಲ್ಲಿ ತಮಗೆ ಗೊತ್ತಿರುವ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ ಮಲ್ಲವ್ವ ಎಲ್ಲೂ ಪತ್ತೆಯಾಗಿಲ್ಲ. ಬಳಿಕ ಇಂದು ಮುಂಜಾನೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.

    ಇಂದು ಲಕ್ಕನಕೆರೆಯಲ್ಲಿ ಮಹಿಳಾ ಮೃತದೇಹ ಮೇಲೆ ತೇಲಿ ಬಂದಿತ್ತು. ಆಗ ಸುತ್ತಮುತ್ತಲಿನ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಜಮಖಂಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮೃತ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಆಗ ಮಲ್ಲವ್ವ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಸರಿಗಷ್ಟೇ ‘ರಿಸರ್ವ್ ಫಾರೆಸ್ಟ್’-ಒಳಗಡೆ ಲವರ್ಸ್ ಗಳ ಆಟ ತುಂಟಾಟ, ಪುಂಡರ ಪಾರ್ಟಿ ಬಲು ಜೋರು

    ಹೆಸರಿಗಷ್ಟೇ ‘ರಿಸರ್ವ್ ಫಾರೆಸ್ಟ್’-ಒಳಗಡೆ ಲವರ್ಸ್ ಗಳ ಆಟ ತುಂಟಾಟ, ಪುಂಡರ ಪಾರ್ಟಿ ಬಲು ಜೋರು

    ಬೆಂಗಳೂರು: ‘ರಿಸರ್ವ್ ಫಾರೆಸ್ಟ್’ (ರಕ್ಷಿತ ಅರಣ್ಯ ಪ್ರದೇಶ) ಅಂದರೆ ಕಾಡಿನೊಳಗೆ ಯಾರೂ ಪ್ರವೇಶಿಸುವಂತಿಲ್ಲ. ಆದರೆ ಇದು ಹೆಸರಿಗಷ್ಟೇ ರಿಸರ್ವ್ ಫಾರೆಸ್ಟ್. ಇಲ್ಲಿ ಎಲ್ಲಿ ಬೇಕಾದ್ರೂ ರಾಜಾರೋಷವಾಗಿ ಓಡಾಡಬಹುದು. ಕೆರೆ ಹಾಳು ಮಾಡಿದ ಬೆಂಗಳೂರು ಮಂದಿ, ಈಗ ಕಾಡು ಹಾಳು ಮಾಡಲು ಹೊರಟಿದ್ದಾರೆ.

    ಇದು ಬೆಂಗಳೂರಿನ ಹೆಸರಘಟ್ಟ ರಕ್ಷಿತಾರಣ್ಯ ಪ್ರದೇಶ. ಆದ್ರೆ ಈ ಕಾಡಿನೊಳಕ್ಕೆ ನೀವು ಆರಾಮಾಗಿ ಎಂಟ್ರಿ ಕೊಟ್ಟು ಎಲ್ಲಿ ಬೇಕಾದ್ರು ಓಡಾಡಿ ಬರಬಹುದು. ಅಷ್ಟೇ ಯಾಕೆ ಇಲ್ಲೇ ನೈಟ್ ಕ್ಯಾಂಪ್ ಹಾಕಿ ಪಾರ್ಟಿ ಕೂಡ ಮಾಡಬಹುದು. ಇಲ್ಲಿ ಯಾರೂ ಹೇಳೋರು ಇಲ್ಲ ಕೇಳೋರು ಇಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಯಾರ ಭಯವಿಲ್ಲದೇ ಪ್ರೇಮಿಗಳು ಓಡಾಡುತ್ತಾರೆ. ಎಲ್ಲೆಂದರಲ್ಲಿ ಪಾರ್ಟಿ ಮಾಡಿ ಎಣ್ಣೆ ಬಾಟಲ್ ಗಳನ್ನ ಎಸೆದು ಹೋಗಿದ್ದಾರೆ. ನವಿಲುಗಳು ಹೆಚ್ಚಾಗಿರುವ ಈ ಪ್ರದೇಶವನ್ನ ನವಿಲು ರಕ್ಷಿತಾರಣ್ಯ ಪ್ರದೇಶ ಅಂತ ಘೋಷಿಸಲಾಗಿದೆ. ಇಲ್ಲಿ ನಡೆಯುತ್ತೀರುವ ಈ ಅಕ್ರಮ ಚಟುವಟಿಕೆಗಳಿಂದಾಗಿ ನವಿಲುಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಇಷ್ಟೆಲ್ಲಾ ಆಗ್ತಿದ್ರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.

    ಹೆಸರಘಟ್ಟ ರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಹೆಸರಘಟ್ಟ ಕೆರೆ ಇದೆ. ಹಾಗೆ ಪಕ್ಕಕ್ಕೆ ಕಣ್ಣುಹಾಯಿಸಿದ್ರೆ ಇಲ್ಲಿ ಪ್ರವೇಶ ಮಾಡುವುದು, ಕೆರೆಯಲ್ಲಿ ಬಟ್ಟೆ ಒಗೆಯುವುದು, ಮೀನು ಹಿಡಿಯುವುದು ನಿಷೇಧಿಸಲಾಗಿದೆ, ನಿಯಮ ಮೀರಿದ್ರೆ ಶಿಕ್ಷೆಗೆ ಗುರಿ ಪಡಿಸಲಾಗುತ್ತೆ ಅಂತ ಬರೆದಿರುವ ಬೋರ್ಡ್ ಹಾಕಲಾಗಿದೆ. ಎಲ್ಲ ನಿಬಂಧನೆಗಳು ಕೇವಲ ಬೋರ್ಡ್ ಗಷ್ಟೇ ಸೀಮಿತವಾಗಿದ್ದು ಇಲ್ಲಿ ರಾಜಾರೋಷವಾಗಿ ಮೀನು ಹಿಡಿಯುತ್ತಾರೆ, ಜಲಮಂಡಳಿಯಾಗಲೀ, ಅರಣ್ಯ ಇಲಾಖೆಯವರಾಗಲೀ ತಡೆಯೋ ಗೋಜಿಗೇ ಹೋಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಕೆರೆಯಲ್ಲಿ ಇಷ್ಟೆಲ್ಲಾ ಅಕ್ರಮ ಚಟುವಟಿಗೆಗಳು ನಡೆಯುತ್ತಿರುವುದರಿಂದ ವಿದೇಶದಿಂದ ಈ ಕೆರೆಗೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ಬೆಂಗಳೂರು ಮಂದಿಯ ಮೂಜು ಮಸ್ತಿಯಿಂದಾಗಿ ನವಿಲುಗಳ ಅಸ್ತಿತ್ವಕ್ಕೂ ಧಕ್ಕೆಯಾಗ್ತಿದೆ. ಈಗಲೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ರೆ ಮುಂದಿನ ದಿನ ರಕ್ಷಿತಾರಣ್ಯದ ಜೊತೆ ಕೆರೆಯೂ ನಾಶವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv