Tag: lake

  • ಗದಗಿನ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ

    ಗದಗಿನ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ

    ಗದಗ: ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲೂ ಪಕ್ಷಿದಾಮವೊಂದು ಪ್ರಸಿದ್ಧಿಯಾಗಿದ್ದು, ಪ್ರತಿವರ್ಷ ಚಳಿಗಾಲದಲ್ಲಿ ವಿದೇಶಿ ಬಾನಾಡಿಗಳ ದಂಡು ಇಲ್ಲಿ ಲಗ್ಗೆ ಇಡುತ್ತವೆ. ಅಲ್ಲಿಯ ವಿದೇಶಿ ಬಾನಾಡಿಗಳ ಚಿಲಿಪಿಲಿ ಕಲರವಗಳ ಚೆಲ್ಲಾಟ ನೋಡಲು ಎರಡು ಕಣ್ಣುಗಳು ಸಾಲದು.

    ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಸುಮಾರು 130 ಎಕರೆ ವಿಸ್ತೀರ್ಣ ಹೊಂದಿರುವ ಐತಿಹಾಸಿಕ ಕೆರೆಯಿದು. ದೇಶ-ವಿದೇಶಿ ಪಕ್ಷಿಗಳ ಆಗಮನದಿಂದ ಪ್ರವಾಸಿಗರನ್ನು ಈ ಕೆರೆ ಆಕರ್ಷಿಸುತ್ತಿದೆ. ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ್, ಪಾಕಿಸ್ತಾನ್, ಟಿಬೇಟ್ ಹೀಗೆ ಅನೇಕ ಕಡೆಯಿಂದ ಸಾವಿರಾರು ಹಕ್ಕಿಗಳು ಪ್ರತಿವರ್ಷ ಚಳಿಗಾಲಕ್ಕೆ ಇಲ್ಲಿಗೆ ಲಗ್ಗೆ ಇಡುತ್ತವೆ. ಆ ದೇಶದ ಹವಾಮಾನವೇ ಈ ಪಕ್ಷಿಗಳು ಇಲ್ಲಿಗೆ ಬರಲು ಕಾರಣ ಎನ್ನಲಾಗುತ್ತಿದೆ.

    ಜಿಲ್ಲೆ ಮಾಗಡಿ ಕೆರೆಗೆ ಬರುವ ಪಕ್ಷಿಗಳಾದ ಬಾರ್ ಹೆಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ್, ಪಾಂಟೆಡ್ ಸ್ಪಾರ್ಕ್ ಸೇರಿದಂತೆ ಅನೇಕ ಜಾತಿಯ ವಿದೇಶಿ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಪಕ್ಷಿಗಳ ಹಾರಾಟ, ಕೂಗಾಟ ಅಂದ-ಚಂದ ಸವಿಯಲು ಎರಡು ಕಣ್ಣುಗಳು ಸಾಲದು. ಗುಂಪು ಗುಂಪಾಗಿ ರಾಕೆಟ್‍ನಂತೆ ಹಾರಿ ಬರುತ್ತವೆ. ಇವುಗಳನ್ನ ನೋಡಲು ಅನೇಕ ಜಿಲ್ಲೆಗಳಿಂದ ಜನರು ಬರುತ್ತಾರೆ. ಕೆಲವು ಪಕ್ಷಿ ಪ್ರೇಮಿಗಳು ಇವುಗಳ ಫೋಟೋ ಶೂಟ್‍ಗಾಗಿ ಅಂತಾನೆ ಬಂದು, ಕೆರೆಯ ದಡದಲ್ಲಿ ಕೂತು ಫೋಟೋ ಕ್ಲಿಕ್ ಮಾಡುವ ಮೂಲಕ ಸಂತೋಷ ಪಡುತ್ತಾರೆ.

    ವಿದೇಶಿ ಪಕ್ಷಿಗಳು ಡಿಸೆಂಬರ್ ತಿಂಗಳಲ್ಲಿ ಈ ಕೆರೆಗೆ ಬರಲು ಪ್ರಾರಂಭಿಸುತ್ತವೆ. ಫೆಬ್ರವರಿವರೆಗೆ ಅಂದರೆ ಸುಮಾರು ಮೂರು-ನಾಲ್ಕು ತಿಂಗಳ ಕಾಲ ಈ ಮಾಗಡಿ ಕೆರೆಯಲ್ಲಿ ಪಕ್ಷಿಗಳು ವಾಸವಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ವಿದೇಶಿ ಪಕ್ಷಿಗಳು ರಾತ್ರಿಯಾಗುತ್ತಿದ್ದಂತೆ ಆಹಾರಕ್ಕಾಗಿ ಸುತ್ತಮುತ್ತಲಿನ ಜಮೀನುಗಳಿಗೆ ಹೊರಡುತ್ತವೆ. ರಾತ್ರಿ ಹೊತ್ತು ಆಹಾರಕ್ಕೆ ಹೋದರೆ ಮತ್ತೆ ಮುಂಜಾನೆ ಕೆರೆಗೆ ಮರಳುತ್ತವೆ.

    ಈ ಪಕ್ಷಿಗಳನ್ನ ನೋಡಲು ನಿತ್ಯವು ರಾಜ್ಯದ ನಾನಾ ಭಾಗದಿಂದಲೂ ಅಷ್ಟೇ ಅಲ್ಲ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಪ್ರವಾಸಿಗರು ಸಹ ಇಲ್ಲಿಗೆ ಬರುತ್ತಿದ್ದಾರೆ. ಹೀಗಾಗಿ ಕೆರೆ ಸುತ್ತಲು ಫುಟ್ ಪಾತ್, ಕುಡಿಯುವ ನೀರು, ಉದ್ಯಾನವನ, ಕುಳಿತುಕೊಳ್ಳಲು ಬೆಂಚ್ ಅಥವಾ ಆಸನದ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಕ್ಯಾಂಟೀನ್ ಹೀಗೆ ಪ್ರವಾಸಿಗರಿಗೆ ಅನೇಕ ಮೂಲಭೂತ ಸೌಲಭ್ಯಗಳನ್ನ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಬೇಕು ಎಂಬುದು ಪ್ರವಾಸಿಗರ ಹಾಗೂ ಸ್ಥಳೀಯರ ಬೇಡಿಕೆಯಾಗಿದೆ.

  • ಕಾಣೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ- ಕೊಲೆ ಶಂಕೆ

    ಕಾಣೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ- ಕೊಲೆ ಶಂಕೆ

    ಚಾಮರಾಜನಗರ: ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಆಟೋ ಡ್ರೈವರ್ ಇದೀಗ ಶವವಾಗಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

    ಆಟೋ ಡ್ರೈವರ್ ನಾಗ (30) ಶವ ತೆರಕಣಾಂಬಿ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಕೂಡ ನಾಗ ಕಾಣೆಯಾಗಿರುವ ಬಗ್ಗೆ ಸ್ನೇಹಿತರು, ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇದೀಗ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕೆರೆಯಲ್ಲಿ ಮೃತ ದೇಹ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯಾಗಿರೋ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

  • ಕೆರೆ ಒತ್ತುವರಿ ತೆರವು ಕಾರ್ಯಚರಣೆ ಮಾಡಿದ ಬಿಬಿಎಂಪಿ

    ಕೆರೆ ಒತ್ತುವರಿ ತೆರವು ಕಾರ್ಯಚರಣೆ ಮಾಡಿದ ಬಿಬಿಎಂಪಿ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೆರೆ ಒತ್ತುವರಿ ತೆರವು ಕಾರ್ಯಚರಣೆ ಇಂದು ನಡೆಯಿತು. 140 ಎಕರೆ ಪ್ರದೇಶವುಳ್ಳ ಹುಳಿಮಾವು ಕೆರೆ ಪ್ರದೇಶ ಕಮ್ಮನಹಳ್ಳಿ ಸರ್ವೇಯಲ್ಲಿ ಇಂದು ಒಂದೂವರೆ ಗುಂಟೆ ಪ್ರದೇಶದಲ್ಲಿದ್ದ 2 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

    ಅದೇ ಸರ್ವೇಯಲ್ಲಿ 13.25 ಗುಂಟೆ ಜಾಗದಲ್ಲಿರುವ 8 ಕಟ್ಟಡಗಳಿಗೆ ನ್ಯಾಯಾಲಯದಲ್ಲಿ ತಡೆ ಇದೆ. ಇನ್ನು 24 ಗುಂಟೆ ದೇವಸ್ಥಾನದ ಜಾಗದಲ್ಲಿರುವ ಉದ್ಯಾನವನ್ನು ಹಾಗೂ 23 ಗುಂಟೆ ಪ್ರದೇಶ ಖಾಲಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆದು ಪೆನ್ಸಿಂಗ್ ಅಳವಡಿಸಲು ಕ್ರಮ ವಹಿಸಲಾಗಿದೆ. ಕಮ್ಮನಹಳ್ಳಿ ಸರ್ವೇಯಲ್ಲಿ 15 ಎಕರೆ 32 ಗುಂಟೆ ಪ್ರದೇಶವಿದ್ದು, ಅದರಲ್ಲಿ 27 ಗುಂಟೆ ರಸ್ತೆ ನಿರ್ಮಿಸಿದ್ದು, ಖಾಸಗಿಯವರು 1 ಎಕರೆ 30 ಗುಂಟೆ ಒತ್ತುವರಿ ಮಾಡಿಕೊಂಡಿರುವ ಮಾಹಿತಿಯೂ ಇದೆ.

    ಹುಳಿಮಾವು ಸರ್ವೇಯಲ್ಲಿ 124 ಎಕರೆ 25 ಗುಂಟೆ ಪ್ರದೇಶವಿದೆ. 17.33 ಎಕರೆ ಪ್ರದೇಶ ಒತ್ತುವರಿಯಾಗಿದ್ದು, 6 ಎಕರೆ 13 ಗುಂಟೆ ರಸ್ತೆ, 11 ಎಕರೆ 20 ಗುಂಟೆ ಬಿಡಿಎ ಬಡಾವಣೆ ಇದೆ. ಅದರಲ್ಲಿ 12 ಗುಂಟೆ ಉದ್ಯಾನ, 15 ಗುಂಟೆ ಅಂಗನವಾಡಿ ಕೇಂದ್ರ, 6.45 ಗುಂಟೆ ಸರ್ಕಾರಿ ಶಾಲೆ, 4 ಗುಂಟೆ ಬ್ಯಾಡ್ಮಿಂಟನ್ ಕೋರ್ಟ್, 5.50 ಗುಂಟೆ ಸಾಯಿಮಂದಿರ, 4 ಗುಂಟೆ ಪ್ರವಚನ ಮಂದಿರ, 1.45 ಗುಂಟೆ ಚೌಡೇಶ್ವರಿ ದೇವಸ್ಥಾನ, 3.45 ಗುಂಟೆ ವೈಷ್ಣವಿ ದೇವಿ ದೇವಸ್ಥಾನ ಇದ್ದು, ಅದಕ್ಕೆಲ್ಲಾ ನೋಟಿಸ್ ಜಾರಿಗೊಳಿಸಿ ತೆರವುಗೊಳಿಸುವ ಸೂಚನೆ ಸಹ ಇಂದು ನೀಡಲಾಗಿದೆ.

    ಕೆರೆ ವಿಭಾಗದ ಮುಖ್ಯ ಅಭಿಯಂತರರು ಮೋಹನ್ ಕೃಷ್ಣ, ತಹಶೀಲ್ದಾರ್ ಶಿವಪ್ಪ ಹೆಚ್ ಲಮಾಣಿ ಅವರ ನೇತೃತ್ವದಲ್ಲಿ ಇಂದು 6 ಜೆ.ಸಿ.ಬಿ, 2 ಇಟಾಚಿ ಹಾಗೂ 70 ಪೊಲೀಸ್ ಸಿಬ್ಬಂದಿ ಸಹಯೋಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

  • ಶಿಕ್ಷಕರ ಕಣ್ಣು ತಪ್ಪಿಸಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರು ಪಾಲು

    ಶಿಕ್ಷಕರ ಕಣ್ಣು ತಪ್ಪಿಸಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರು ಪಾಲು

    – ಶೈಕ್ಷಣಿಕ ಪ್ರವಾಸಕ್ಕೆ ಬಂದಾಗ ದುರ್ಘಟನೆ

    ಕಲಬುರಗಿ: ಶಿಕ್ಷಕರ ಕಣ್ಣು ತಪ್ಪಿಸಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಮಲಾಪುರ ತಾಲೂಕಿನ ಬೆಳಕೋಟಾ ಕೆರೆಯಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸತ್ಯಸಾಯಿ ಶಾಲೆಯ ಲಕ್ಮಣ ಭೀಮರಾಯ ಡೊಣ್ಣುರ, ಶುಭಂ ಸೋಸುರ ಮತ್ತು ಮಂಜುನಾಥ ಮೃತ ವಿದ್ಯಾರ್ಥಿಗಳು. ಶೈಕ್ಷಣಿಕ ಪ್ರವಾಸಕ್ಕೆ ಬಂದಾಗ ದುರ್ಘಟನೆ ನಡೆದಿದೆ.

    ಇಂಡಿ ತಾಲೂಕಿನ ಸತ್ಯಸಾಯಿ ಶಾಲೆಯ ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಕಮಲಾಪುರದ ಸತ್ಯಸಾಯಿ ಶಾಲೆಗೆ ಬಂದಿದ್ದರು. ಈ ವೇಳೆ ಲಕ್ಮಣ, ಶುಭಂ ಹಾಗೂ ಮಂಜುನಾಥ ಮೂವರು ಸೇರಿ ಶಿಕ್ಷಕರ ಕಣ್ಣು ತಪ್ಪಿಸಿ ಬೆಳಕೋಟಾ ಕೆರೆಗೆ ಈಜಲು ಹೋಗಿದ್ದರು. ಆದರೆ ಮೂವರಲ್ಲಿ ಯಾರಿಗೂ ಸಹ ಈಜು ಬಾರದಿದ್ದರೂ ನೀರಿಗೆ ಇಳಿದು ಮೋಜು ಮಾಡಲು ಮುಂದಾಗಿದ್ದರು. ಈ ವೇಳೆ ಆಳವಾದ ನೀರನ್ನು ಅರಿಯದ ವಿದ್ಯಾರ್ಥಿಗಳು ಈಜಲು ಯತ್ನಿಸಿದ ಪರಿಣಾಮ ಒಬ್ಬರ ನಂತರ ಒಬ್ಬರು ನೀರಿನಲ್ಲಿ ಮುಳುಗಿ  ಸಾವನ್ನಪ್ಪಿದ್ದಾರೆ.

    ವಿದ್ಯಾರ್ಥಿಗಳು ನೀರಿನಲ್ಲಿ ಬಿದ್ದಿರುವುದು ಬೆಳಕೋಟಾ ಗ್ರಾಮದ ಜನರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರು ಬಾಲಕರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವಪತ್ತೆ – ವಾರಿಸುದಾರರಿಗೆ ಪೊಲೀಸರ ಹುಡುಕಾಟ

    ಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವಪತ್ತೆ – ವಾರಿಸುದಾರರಿಗೆ ಪೊಲೀಸರ ಹುಡುಕಾಟ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ವ್ಯಾಪ್ತಿಯ ರಾಯನಕಲ್ಲು ಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದೆ.

    ಸರಿ ಸುಮಾರು 65 ರಿಂದ 70 ವರ್ಷದ ವೃದ್ಧೆಯ ಶವ ಪತ್ತೆಯಾಗಿದ್ದು, ವೃದ್ಧೆಯ ಗುರುತು ಪತ್ತೆಯಾಗಿಲ್ಲ. ಕೆರೆ ಬಳಿ ಜಾನುವಾರುಗಳ ಸಮೇತ ಗ್ರಾಮಸ್ಥರು ಕೆರೆಯಲ್ಲಿ ವೃದ್ಧೆಯ ಶವ ತೇಲಾಡುತ್ತಿರುವುದನ್ನು ಗಮನಿಸಿ ಮಂಚೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಬಂದ ಮಂಚೇನಹಳ್ಳಿ ಪೊಲೀಸರು ಮೃತದೇಹವನ್ನು ಹೊರ ತೆಗೆದು ಸದ್ಯ ಗೌರಿಬಿದನೂರು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತ ಮಹಿಳೆಯ ಬಳಿ ಐದಾರು ವಿಧದ ಮಾತ್ರೆಗಳು ಲಭ್ಯವಾಗಿದ್ದು, ಜೀವನದಲ್ಲಿ ಖಾಯಿಲೆಗಳಿಂದ ಮನನೊಂದು ಮನೆ ಬಿಟ್ಟು ಬಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರ ಮಾಹಿತಿ ಇಲ್ಲದ ಕಾರಣ ಮೃತ ವೃದ್ಧೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಗುರುತು ವಿಳಾಸ ಗೊತ್ತಿದ್ದಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಮನವಿ ಮಾಡಿಕೊಂಡಿದ್ದಾರೆ.

  • ಕೆರೆ ನೀರಿನಲ್ಲಿ ಸಿಲುಕಿದ್ದ ಎಮ್ಮೆ ರಕ್ಷಿಸಲು ಹೋಗಿ ಯುವಕ ಸಾವು

    ಕೆರೆ ನೀರಿನಲ್ಲಿ ಸಿಲುಕಿದ್ದ ಎಮ್ಮೆ ರಕ್ಷಿಸಲು ಹೋಗಿ ಯುವಕ ಸಾವು

    ಬೀದರ್: ಎಮ್ಮೆ ರಕ್ಷಿಸಲು ಹೋಗಿದ್ದ ಯುವಕನ್ನೊಬ್ಬ ಕೆರೆ ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗೋಪಾಲ ರೆಡ್ಡಿ ಪಲರಡ್ಡೆ(22) ಮೃತ ಯುವಕ. ಇಂದು ಮಧ್ಯಾಹ್ನ ಎಮ್ಮೆ ಮೇಯಿಸಲೆಂದು ಜಮೀನಿಗೆ ತೆರಳಿದಾಗ, ಗ್ರಾಮದ ಸಮೀಪವೇ ಇರುವ ಕೆರೆ ನೀರಿನಲ್ಲಿ ಇಳಿದ ಎಮ್ಮೆ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೆ ಒದ್ದಾಡುತ್ತಿತ್ತು.

    ಇದನ್ನು ಗಮನಿಸಿದ ಗೋಪಾಲರೆಡ್ಡಿ ನೀರಿನಿಂದ ಎಮ್ಮೆ ಹೊರ ತರಲೆಂದು ತಾನು ಕೆರೆಗೆ ಇಳಿದಿದ್ದಾನೆ. ಆದರೆ ತಾನು ಕೂಡ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ಯುವಕನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ತಲುಪವಷ್ಟರಲ್ಲಿ ಯುವಕ ಮೃತಪಟ್ಟಿದ್ದ.

  • ರೈತ ಸಂಘದಿಂದ ಸರ್ಕಾರಕ್ಕೆ ಮನವಿ – ಕೆರೆ ಅಭಿವೃದ್ಧಿಯಲ್ಲಿ ಅಧಿಕಾರಿಗಳು ವಿಫಲ

    ರೈತ ಸಂಘದಿಂದ ಸರ್ಕಾರಕ್ಕೆ ಮನವಿ – ಕೆರೆ ಅಭಿವೃದ್ಧಿಯಲ್ಲಿ ಅಧಿಕಾರಿಗಳು ವಿಫಲ

    ನೆಲಮಂಗಲ: ರಾಷ್ಟ್ರೀಯ ಕಿಸಾನ್ ಸಂಘದ ರೈತರು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳ ವರ್ತನೆಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಅಮಾನಿಕೆರೆ ಬಿನ್ನಮಂಗಲ ಮಲ್ಲಾಪುರ ಕೆರೆ ಸೇರಿದಂತೆ ತಾಲೂಕಿನ ಕೆರೆ ಅಭಿವೃದ್ಧಿ ಮಾಡದೆ ಕುಂಠಿತವಾಗಿವೆ.

    ಈ ಕೆರೆಗಳಿಗೆ ಪಟ್ಟಣದಿಂದ ರಾಜಕಾಲುವೆ ಮೂಲಕ ಮಲಮೂತ್ರದ ತ್ಯಾಜ್ಯವನ್ನು ನೇರವಾಗಿ ಹರಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ನಾನಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತಿದ್ದು, ಅಂತರ್ಜಲ ಮಟ್ಟಕೂಡ ಕಲುಷಿತವಾಗುತ್ತಿದೆ.

    ಈ ಬಗ್ಗೆ ಸಾಕಷ್ಟು ಬಾರಿ ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾರೊಬ್ಬರೂ ಗಮನ ಹರಿಸದೇ ನಿರ್ಲಕ್ಷಿಸಿದ್ದಾರೆ. ಇತ್ತ ಕೆಲ ಪ್ರಭಾವಿಗಳು ಕೆರೆ ಕುಂಟೆ ಸೇರಿದಂತೆ ರಾಜಕಾಲುವೆಗಳನ್ನ ಒತ್ತುವರಿ ಮಾಡಿದ್ದು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಮುಂದಿನ ದಿನದಲ್ಲಿ ಹೋರಾಟದ ಎಚ್ಚರಿಕೆಯನ್ನ ರೈತ ಮುಖಂಡರು ನೀಡಿದ್ದು, ಕೆರೆ ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮಗಳು ನಡೆದಿದ್ದು ಎಲ್ಲವನ್ನು ತನಿಖೆ ನಡೆಸುವಂತೆ ರೈತರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ನೇಣು ಹಾಕಿಕೊಂಡಿದ್ದ ಮರದ ಕೊಂಬೆ ಮುರಿದಿದ್ದಕ್ಕೆ ಕೆರೆಗೆ ಜಿಗಿದು ಪ್ರಾಣಬಿಟ್ಟ ಶಿಕ್ಷಕ

    ನೇಣು ಹಾಕಿಕೊಂಡಿದ್ದ ಮರದ ಕೊಂಬೆ ಮುರಿದಿದ್ದಕ್ಕೆ ಕೆರೆಗೆ ಜಿಗಿದು ಪ್ರಾಣಬಿಟ್ಟ ಶಿಕ್ಷಕ

    ಕೊಲಾರ: ನೇಣು ಹಾಕಿಕೊಂಡಿದ್ದ ಮರದ ಕೊಂಬೆ ಮುರಿದಿದ್ದಕ್ಕೆ ಶಿಕ್ಷಕನೊಬ್ಬ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ತಾಲೂಕಿನ ಕಾಳಹಸ್ತಿಪುರದಲ್ಲಿ ನಡೆದಿದೆ.

    ಭಟ್ರಹಳ್ಳಿ ಗ್ರಾಮದ ಪ್ರಭಾಕರ್ (31) ಆತ್ಮಹತ್ಯೆ ಶರಣಾದ ಶಿಕ್ಷಕ. ಪ್ರಭಾಕರ್ ಯಾದಗಿರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಊರಹಬ್ಬಕ್ಕಾಗಿ ಪ್ರಭಾಕರ್ ಸ್ವಗ್ರಾಮಕ್ಕೆ ಬಂದಿದ್ದ. ಜೊತೆಗೆ ಮನೆತನ ನೋಡಲು ಹೆಣ್ಣಿನ ಮನೆಯವರು ಬರುತ್ತಾರೆ ಅಂತ ಪ್ರಭಾಕರ್ ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದು ಕೊಟ್ಟಿದ್ದ. ಆದರೆ ಬುಧವಾರ ಹೆಣ್ಣಿನ ಮನೆಯವರು ಬರುವುದಕ್ಕೂ ಮುನ್ನ ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಮೊಬೈಲ್ ಅನ್ನು ತಮ್ಮನ ಕೈಗೆ ಕೊಟ್ಟು ಹೋಗಿದ್ದ.

    ಮನೆಗೆ ಬಂದಿದ್ದ ಹುಡುಗಿ ಮನೆಯವರು ಕಾದು ಕಾದು ಮರಳಿ ತಮ್ಮ ಊರಿಗೆ ಹೋದರು. ಆದರೆ ಪ್ರಭಾಕರ್ ಮನೆಗೆ ಬಾರದೆ ಇರುವುದರಿಂದ ಆತನಿಗಾಗಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಕಾಳಹಸ್ತಿಪುರ ಗ್ರಾಮದ ಕೆರೆಯ ಬಳಿ ಗುರುವಾರ ಪ್ರಭಾಕರ್ ಬೈಕ್ ಮತ್ತು ಚಪ್ಪಲಿ ಪತ್ತೆಯಾಗಿದ್ದವು. ಈ ವಿಷಯ ತಿಳಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಸ್ಥಳ ಪರಿಶೀಲನೆ ಮಾಡಿದಾಗ ಪ್ರಭಾಕರ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ಮೃತದೇಹ ಪತ್ತೆಗಾಗಿ ಕಾರ್ಯಚರಣೆ ನಡೆಸಿದರು. ಕೆರೆಯಲ್ಲಿ ಬೋಟ್ ಸಹಾಯದಿಂದ ಸುಮಾರು ಎರಡು ಗಂಟೆಗಳ ಹುಡುಕಾಟ ನಡೆಸಿದಾಗ ಪ್ರಭಾಕರ್ ಶವ ಪತ್ತೆಯಾಗಿದೆ.

    ಪ್ರಭಾಕರ್ ಕೆರೆಗೆ ಬೀಳುವ ಮುನ್ನ ಮರಕ್ಕೆ ಹಗ್ಗ ಕಟ್ಟಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಮರದ ಕೊಂಬೆ ತುಂಡಾಗಿದ್ದರಿಂದ ಬೇರೆ ದಾರಿ ಕಾಣದೆ ಕಾಳಹಸ್ತಿಪುರ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಪ್ರಭಾಕರ್ ಇದಕ್ಕೂ ಮೊದಲು ಎರಡ್ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ಏನು ಇಲ್ಲದಿದ್ದರೂ ಅವನಿಗೆ ಸಂಬಂಧಿಕರೇ ಮಾಟ ಮಂತ್ರ ಮಾಡಿಸಿದ್ದರು. ಹಾಗಾಗಿ ಅವನ ಮನಸ್ಥಿತಿ ಕೆಟ್ಟುಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಹಲವಾರು ಬಾರಿ ನಾವು ಅವನನ್ನ ಕಾಪಾಡಿಕೊಂಡಿದ್ದೆವು ಎಂದು ಪೋಷಕರು ದೂರಿದ್ದಾರೆ.

  • ಹಸಿರು ಬಣ್ಣಕ್ಕೆ ತಿರುಗಿದ ಕೆರೆ – ರಾಸಾಯನಿಕ ಮಿಶ್ರಣದ ಶಂಕೆ

    ಹಸಿರು ಬಣ್ಣಕ್ಕೆ ತಿರುಗಿದ ಕೆರೆ – ರಾಸಾಯನಿಕ ಮಿಶ್ರಣದ ಶಂಕೆ

    ಚಿಕ್ಕಮಗಳೂರು: 10 ವರ್ಷದ ಬಳಿಕ ಕೆರೆ ತುಂಬಿದೆ ಎಂದು ಗ್ರಾಮಸ್ಥರು ಖುಷಿಪಡುವಷ್ಟರಲ್ಲಿ ಕೆರೆಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಗ್ರಾಮಸ್ಥರನ್ನು ತಲೆ ಮೇಲೆ ಕೈಹೊದ್ದು ಕೂರುವಂತೆ ಮಾಡಿದೆ.

    ತಾಲೂಕಿನ ಆರದವಳ್ಳಿ ಕೆರೆ ಕಳೆದ 10 ವರ್ಷಗಳಿಂದ ತುಂಬಿರಲಿಲ್ಲ. ಈ ವರ್ಷ ತುಂಬಿದರಿಂದ ಜಾನುವಾರುಗಳು ಹಾಗೂ ಕೃಷಿಗೆ ಸಮೃದ್ಧ ನೀರು ದೊರೆಯಿತು ಎಂದು ಖುಷಿ ಪಟ್ಟಿದ್ದರು. ಆದರೆ ಕೆರೆಗೆ ರಾಸಾಯನಿ ಮಿಶ್ರಣವಾಗಿರುವುದರಿಂದ ಕೆರೆಯ ಬಣ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಸ್ಥಳಿಯರನ್ನು ಆತಂಕಕ್ಕೆ ದೂಡಿದೆ. ಅಲ್ಲದೆ ಕೆರೆ ತನ್ನ ರೂಪವನ್ನು ಬದಲಿಸಿಕೊಳ್ಳುತ್ತಿದ್ದಂತೆ ಊರಿನ ತುಂಬಾ ದುರ್ನಾತ ಬೀರಲಾರಂಭಿಸಿದೆ. ದಾರಿಹೊಕ್ಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿ, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

    ಕೆರೆಯ ಬಣ್ಣ ಬದಲಾಗುತ್ತಿದ್ದಂತೆ ಕೆರೆಯಲ್ಲಿದ್ದ ಮೀನು-ಏಡಿ ಸೇರಿದಂತೆ ಜಲಚರಗಳು ಸಾವಿಗೀಡಾಗಿವೆ. ಸದ್ಯ ಈ ನೀರನ್ನು ಯಾವುದಕ್ಕೂ ಬಳಸಲಾರದಂತಾಗಿದೆ. ಕೆರೆಯಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದವರು ಮೀನಿನ ಬೆಳವಣಿಗೆಗೆ ಅಥವಾ ಬೇರೆ ಯಾವುದೋ ಕಾರಣಕ್ಕೆ ರಾಸಾಯನಿಕ ಬಳಸಿರಬಹುದು. ಆದ್ದರಿಂದ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಶಂಕಿಸಲಾಗಿದೆ.

    ಕೆರೆಯ ಪಕ್ಕದಲ್ಲೇ ಶಾಲೆ-ಅಂಗನವಾಡಿ ಇದ್ದು ಮಕ್ಕಳು ಮೂಗು ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಕೆರೆಯ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೆ ಬರುವ ಭಕ್ತರು ಕೂಡ ಕೆರೆಯ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಈ ನೀರನ್ನು ಈಗ ಜಾನುವಾರು ಕೂಡ ಕುಡಿಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಘಟನೆಗೆ ಸೂಕ್ತ ಕಾರಣ ತಿಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

    ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

    ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೃತನನ್ನು 22 ವರ್ಷದ ಅವಿನಾಶ್ ಎಂದು ಗುರುತಿಸಲಾಗಿದೆ. ಅವಿನಾಶ್ ಮೂಲತಃ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದವನಾಗಿದ್ದು, ಬಿ. ಹೊಸಳ್ಳಿ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

    ಯುವಕನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಮೃತದೇಹಕ್ಕಾಗಿ ಪೊಲೀಸ್ ಹಾಗೂ ಸ್ಥಳಿಯರು ಹುಡುಕಾಟ ನಡೆಸಿದ್ದಾರೆ.