Tag: lady gang

  • 1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್‌ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್

    1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್‌ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್

    – 15 ಜನರ ವಿರುದ್ಧ ಬಿತ್ತು ಕೇಸ್‌; ಕಿಂಗ್‌ಪಿನ್‌ ನಯನಾ ಅರೆಸ್ಟ್‌

    ಬೆಂಗಳೂರು: ನಗರದಲ್ಲೊಂದು ಖತರ್ನಾಕ್‌ ಗ್ಯಾಂಗ್‌ ಹುಟ್ಟಿಕೊಂಡಿದೆ. ಕಡಿಮೆ ಬಡ್ಡಿಗೆ ಲೋನ್‌ (Loan) ಕೊಡಿಸ್ತೀವಿ ಅಂತ ಬಂದು ಗ್ರಾಹಕರಿಂದ ಹಣ ಪೀಕಿ ಎಸ್ಕೇಪ್‌ ಆಗ್ತಾರೆ. ಇದೇ ರೀತಿ ಜನರನ್ನ ಯಾಮಾರಿಸುತ್ತಿದ್ದ ಖತರ್ನಾಕ್‌ ಲೇಡಿ ಗ್ಯಾಂಗ್‌ವೊಂದು ಪೊಲೀಸರ ಬಲೆಗೆ ಬಿದ್ದಿದೆ. ಪ್ರಕರಣ ಕಿಂಗ್‌ಪಿನ್‌ ಲೇಡಿಯನ್ನ (Lady Gang) ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

    ಹೌದು.. ಸುಬ್ಬಲಕ್ಷ್ಮಿ ಚಿಟ್‌ ಫಂಡ್‌ (Chit Fund) ಹೆಸರಿನಲ್ಲಿ 1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ನಂಬಿಸಿದ್ದ ಲೇಡಿಗ್ಯಾಂಗ್‌ ಗ್ರಾಹಕರೊಬ್ಬರಿಗೆ 30 ರೂ. ಪಡೆದು ವಂಚನೆ ಎಸಗಿತ್ತು. ದೂರು ಪಡೆದು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಿಂಗ್‌ಪಿನ್‌ ಲೇಡಿಯನ್ನ ಬಂಧಿಸಿದ್ದಾರೆ. ವಿಚಾರಣೆ ಬಳಿಕ ಒಟ್ಟು 15 ಜನರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಇದನ್ನೂ ಓದಿ: ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

    ಈ ಗ್ಯಾಂಗ್‌ ಪಂಗನಾಮ ಹಾಕಿದ್ದು ಹೇಗೆ?
    1 ರೂ.ಪಾಯಿಗೆ ಲೋನ್‌ ಕೊಡ್ತಿಸ್ತೀವಿ ಅಂದಿದ್ದ ಈ ಗ್ಯಾಂಗ್‌ ಗ್ರಾಹಕರಿಂದ ಲೋನ್‌ ಪ್ರೊಸೆಸಿಂಗ್‌ಗೆ 30 ರೂ. ಹಣ ಪಡೆದುಕೊಂಡಿತ್ತು. ಕಿಂಗ್‌ ಪಿನ್‌ ನಯನಾ ನಮ್ಮ ಸಂಬಂಧಿ ಸುಬ್ಬಲಕ್ಷ್ಮಿ ಚಿಟ್ ಫಂಡ್‌ನಲ್ಲಿ ಕೆಲ್ಸ ಮಾಡ್ತಿದ್ದಾರೆ. 10 ಲಕ್ಷ ಲೋನ್ ಕೊಡಿಸ್ತಾರೆ, ಬರೀ 1 ರೂಪಾಯಿ ಬಡ್ಡಿ ಅಷ್ಟೇ ಅಂತ ಹೇಳಿದ್ದಾಳೆ. ನಂತ್ರ ಲೋನ್‌ ಮಂಜೂರಾಗಬೇಕಾದ್ರೆ, ಮೊದಲೇ 3 ಇಎಂಐ ಕಟ್ಟಬೇಕು. ತಿಂಗಳಿಗೆ 10 ಸಾವಿರದಂತೆ 30 ಸಾವಿರ ರೂ. ಇಎಂಐ, ಜೊತೆಗೆ ಪ್ರೊಸೆಸಿಂಗ್‌ ಶುಲ್ಕ 5 ಸಾವಿರ ರೂ. ಕಟ್ಟಬೇಕು ಅಂತ ಹೇಳಿದ್ದಾರೆ. ಕೊನೆಗೆ ಎಲ್ಲರಿಗೂ ಒಟ್ಟಿಗೆ ಲೋನ್‌ ರಿಲೀಸ್‌ ಮಾಡ್ತೇವೆ ಅಂತ ಹೇಳಿ ಅಬೇಸ್‌ ಆಗಿದ್ದಾರೆ. ಇದನ್ನೂ ಓದಿ: ದುರ್ಗಾಪುರ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್‌ – ಜೊತೆಗಿದ್ದ ಸ್ನೇಹಿತನೇ 6ನೇ ಆರೋಪಿ

    ನಯನಾ ಗೌಡ ಈ ಲೇಡಿಗ್ಯಾಂಗ್‌ನ ಕಿಂಗ್‌ ಪಿನ್‌ ಆಗಿದ್ದು, ಕವನಾ, ಗಿರೀಜಾ ಎಂಬ ಮಹಿಳೆಯರೂ ಸೇರಿಕೊಂಡಿದ್ದಾರೆ. ಗ್ರಾಹಕರಿಂದ ಹಣ ಕಟ್ಟಿಸಿಕೊಂಡ ಬಳಿಕ ಲೋನ್‌ ಕೊಡಿಸದೇ, ಹಣವನ್ನೂ ವಾಪಸ್‌ ಕೊಡದೇ ವಂಚಿಸಿದ್ದಾರೆ. ಈ ಕುರಿತು ಸಂತ್ರಸ್ತರು ಬಸವೇಶ್ವರನಗರ, ಕೆ.ಪಿ. ಅಗ್ರಹಾರ, ಶ್ರೀರಾಮ್ ಪುರ, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ತನಿಖೆ ಬಳಿಕ ಕಿಂಗ್‌ ಪಿನ್‌ ನಯನಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನ ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ನಯನಾ ಹಲವರ ಹೆಸರು ಬಾಯ್ಬಿಟ್ಟಿದ್ದಿ, ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 15 ಜನರ ಮೇಲೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ನೂರಾರು ಶವಗಳ ಹೂತಿಟ್ಟ ಕೇಸ್ – ಕೋರ್ಟ್‌ನಲ್ಲಿ ಹೊಸ ಕಥೆ ಬಿಚ್ಚಿಟ್ಟ `ಬುರುಡೆ’ ಚಿನ್ನಯ್ಯ

  • ಭಿಕ್ಷೆಗಾಗಿ ಬರ್ತಾರೆ, ಲಕ್ಷ ಲಕ್ಷ ಹಣ ಎಗರಿಸ್ತಾರೆ- ಬೆಂಗಳೂರಿನಲ್ಲಿ ಬಿಹಾರಿ ಲೇಡಿ ಗ್ಯಾಂಗ್

    ಭಿಕ್ಷೆಗಾಗಿ ಬರ್ತಾರೆ, ಲಕ್ಷ ಲಕ್ಷ ಹಣ ಎಗರಿಸ್ತಾರೆ- ಬೆಂಗಳೂರಿನಲ್ಲಿ ಬಿಹಾರಿ ಲೇಡಿ ಗ್ಯಾಂಗ್

    – ಜನಜಂಗುಳಿ ಮಾರುಕಟ್ಟೆಯಲ್ಲಿ ಕಳ್ಳಿಯರ ಕೈಚಳಕ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆರು ಮಹಿಳೆಯರ ಗ್ಯಾಂಗ್ ಕಾಣಿಸಿಕೊಂಡಿದ್ದು, ಕಳ್ಳಿಯರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಿಕ್ಷೆ ಬೇಡುವ ನೆಪದಲ್ಲಿ ಬರುವ ಮಹಿಳೆಯರು ಜನರ ಗಮನ ಬೇರಡೆ ಸೆಳೆದು ಕೌಂಟರ್ ನಲ್ಲಿರುವ ಹಣವನ್ನು ಕದ್ದು, ಜನಜಂಗುಳಿಯ ಮಾರುಕಟ್ಟೆಗಳಲ್ಲಿ ಮಿಂಚಿನಂತೆ ಮರೆ ಆಗ್ತಾರೆ.

    ಬೆಂಗಳೂರಿನ ಎಪಿಎಂಸಿಗೆ ಕಾಲಿಟ್ಟ ಈ ತಂಡ ಕ್ಷಣಾರ್ಧದಲ್ಲಿ ಹಣ ಕದ್ದು ಎಸ್ಕೇಪ್ ಆಗಿದೆ. ಫೆಬ್ರವರಿ 23ರಂದು ಎಪಿಎಂಸಿಯಲ್ಲಿರುವ ಅಂಗಡಿಗೆ ಮಹಿಳೆಯರ ಗ್ಯಾಂಗ್ ಲಗ್ಗೆ ಇಟ್ಟಿದೆ. ಕೆಲವರು ಭಿಕ್ಷೆ ನೀಡುವಂತೆ ಕ್ಯಾಶ್ ಕೌಂಟರ್ ಬಳಿ ಬಂದು ನಿಂತಿದ್ದಾರೆ. ಈ ವೇಳೆ ಮಾಲೀಕ ಮಹಿಳೆಯನ್ನ ಅಂಗಡಿಯಿಂದ ಹೊರ ಕಳುಹಿಸಿಸಲು ಗಲ್ಲಾ ಪೆಟ್ಟಿಗೆಯಿಂದ ಎದ್ದು ಹೊರ ಬಂದಿದ್ದಾರೆ. ಅಷ್ಟರಲ್ಲಿಯೇ ಮಹಿಳೆ ನಿಧಾನಕ್ಕೆ ಕ್ಯಾಶ್ ಕೌಂಟರ್ ಬಳಿ ಬಂದು ಹಣದ ಕಟ್ಟು ಎತ್ತಿ ಎಸ್ಕೇಪ್ ಆಗಿದ್ದಾಳೆ.

    ಮಹಿಳೆಯರನ್ನ ಹೊರಗೆ ಕಳುಹಿಸಿ ಗಲ್ಲಾಪೆಟ್ಟಿಗೆ ಬಳಿ ಬಂದಾಗ ವ್ಯಕ್ತಿಗೆ ಹಣ ಕಳ್ಳತನ ಆಗಿರೋದು ಗಮನಕ್ಕೆ ಬಂದಿದೆ. ಕೂಡಲೇ ಹೊರ ಹೋಗಿ ನೋಡಿದ್ರೆ ಲೇಡಿ ಗ್ಯಾಂಗ್ ಮಿಂಚಿನಂತೆ ಮರೆಯಾಗಿತ್ತು. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

  • ಸಿಗ್ನಲ್‍ನಲ್ಲಿ ಕಾರು ಹತ್ತಿ ಕತ್ತಲು ಇರೋ ಕಡೆ ಕರ್ಕೊಂಡು ಹೋಗಿ ದೋಚ್ತಾರೆ ಸುಂದ್ರಿಯರು!

    ಸಿಗ್ನಲ್‍ನಲ್ಲಿ ಕಾರು ಹತ್ತಿ ಕತ್ತಲು ಇರೋ ಕಡೆ ಕರ್ಕೊಂಡು ಹೋಗಿ ದೋಚ್ತಾರೆ ಸುಂದ್ರಿಯರು!

    ಬೆಂಗಳೂರು: ಇಷ್ಟು ದಿನ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣಗಳು ನಡೆಯುತ್ತಿತ್ತು. ಆದ್ರೆ ಇದೀಗ ಹುಡುಗಿಯರೇ ಒಂಟಿಯಾಗಿ ಓಡಾಡೋ ಹುಡುಗರು, ವೃದ್ಧರನ್ನ ದರೋಡೆ ಮಾಡುವ ಘಟನೆಗಳು ನಡೆಯುತ್ತಿವೆ.

    ಹೌದು. ಬೆಂಗಳೂರಿನಲ್ಲಿ ತಡ ರಾತ್ರಿ ರಸ್ತೆ ಬದಿ ನಿಂತು ಸ್ಮೈಲ್ ಕೊಡುವ ಯುವತಿಯರ ಎದುರು ನೀವೇನಾದ್ರು ಗಾಡಿ ನಿಲ್ಲಿಸಿದ್ರೆ ನಿಮ್ಮ ಕಥೆ ಮುಗಿಯಿತು. ಒಂಟಿಯಾಗಿ ಓಡಾಡೊ ಪುರುಷರು, ಸಂಜೆ ವಾಕಿಂಗ್ ಮಾಡೊ ವೃದ್ಧರದಿಂದ ಹಣ, ಮೊಬೈಲ್ ದೋಚಿ ಪರಾರಿಯಾಗ್ತಾರೆ.

    ನಡೆದಿದ್ದೇನು?: 31 ವರ್ಷದ ಗೌಡ ಎಂಬವರು ಸ್ನೇಹಿತರನ್ನ ಡ್ರಾಪ್ ಮಾಡಿ ಇಂದಿರಾನಗರದ ಬಳಿ ಬಂದಾಗ ಯುವತಿಯೊಬ್ಬಳು ಸ್ಮೈಲ್ ಕೊಡ್ತಾಳೆ. ಅಂತೆಯೇ ಕಾರು ಸಿಗ್ನಲ್‍ನಲ್ಲಿ ನಿಲ್ಲಿಸಿದಾಗ ಯುವತಿ ಕಾರು ಹತ್ತಿದ್ಳು. ಮಾತಾಡ್ತಾ ಇದ್ದ ಹಾಗೆ ಮತ್ತೊಬ್ಬ ಯುವತಿಯೂ ಕಾರು ಹತ್ತಿಯೇ ಬಿಟ್ಟಳು. ಈ ವೇಳೆ ಗೌಡ ಕಾರು ಇಳಿಯುವಂತೆ ಹೇಳಿದ್ರು. ಆದ್ರೆ ಯುವತಿ ಗೌಡ ರನ್ನು ಹಿಂದಿನಿಂದ ತಬ್ಬಿಕೊಂಡು ಕಿಸ್ ಕೇಳಿದ್ದಾಳೆ. ಮಾತ್ರವಲ್ಲದೇ ಕತ್ತಲು ಇರೋ ಕಡೆ ಕಾರು ಚಲಾಯಿಸವಂತೆ ಹೇಳಿದ್ದಾಳೆ. ಈ ಸಂದರ್ಭದಲ್ಲಿ ಗೌಡ್ರು ಪೊಲೀಸ್ ಠಾಣೆಗೆ ಹೋಗ್ತೀನಿ ಅಂದ್ರು. ಇದರಿಂದ ಭಯಬಿದ್ದ ಯುವತಿಯರು ಕಾರಿನಿಂದ ಇಳಿದಿದ್ದಾರೆ. ಮನೆಗೆ ಹೋಗಿ ನೋಡಿದಾಗ ಗೌಡ್ರುಗೆ ಶಾಕ್ ಕಾದಿತ್ತು. ಯಾಕಂದ್ರೆ ಅವರ ಬಳಿಯಿದ್ದ 50 ಗ್ರಾಂ ಚಿನ್ನದ ಸರ ಕಳವಾಗಿತ್ತು.

    ಇದೇ ರೀತಿಯ ಅನುಭವ ಗೌಡ ಅವರ ಸ್ನೇಹಿತರಿಗೂ ಆಗಿತ್ತು. ಹಲಸೂರು ಬಳಿ ಯುವತಿಯೊಬ್ಬಳು ಕಾರು ಹತ್ತಿ ತನ್ನ ಟೀಶರ್ಟ್ ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾಳೆ. ಒಂದು ವೇಳೆ ನೀನು ಹಣ ಕೊಡದಿದ್ದರೆ ಕೂಗಿಕೊಳ್ಳುವಾಗಿ ಬೆದರಿಸಿದ್ದಾಳೆ. ಹಣ ಕೊಡಲೆಂದು ವ್ಯಾಲೆಟ್ ತೆಗೆದಾಗ ವ್ಯಾಲೆಟ್ ಹಾಗೂ ಮೊಬೈಲ್ ಕಸಿದು ಯುವತಿ ಪರಾರಿಯಾಗಿದ್ದಾಳೆ.

    61 ವರ್ಷದ ನಿವೃತ್ತ ಡಿಆರ್‍ಡಿಒ ಅಧಿಕಾರಿಗೂ ಇದೇ ಅನುಭವ. ಅಧಿಕಾರಿ ನ್ಯೂ ತಿಪ್ಪಸಂದ್ರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಬೆದರಿಸಿ ಹಣ ಲಪಾಟಾಯಿಸಿದ್ದಾಳೆ.

    ಹೆಲ್ಮೆಟ್ ಹಾಕಿದ್ದ ಯುವತಿ ಅಧಿಕಾರಿ ಬಳಿ ಬಂದು ನಾನು ಯಾರು ಗೊತ್ತಾಯ್ತ ಅಂದ್ಲು. ಎಲ್ಲೋ ನೋಡಿದ ಹಾಗಿದೆ ಹೆಲ್ಮೆಟ್ ತೆಗೆಯಿರಿ ಅಂತಾ ಅಧಿಕಾರಿ ಹೇಳಿದ್ರು. ಅಂತೆಯೇ ಹೆಲ್ಮೆಟ್ ತೆಗೆದು ಯುವತಿ ಬೆದರಿಸಲು ಆರಂಭಿಸಿದ್ದಾಳೆ. ಈ ವೇಳೆ ಮಾನ ಮರ್ಯಾದೆಗೆ ಅಂಜಿ ನಿವೃತ್ತ ಅಧಿಕಾರಿ ಹಣ ಕೊಟ್ಟಿದ್ದಾರೆ.

    ಸದ್ಯ ಈ ಯುವತಿಯರ ಗ್ಯಾಂಗ್ ಬಗ್ಗೆ ಜೆಬಿ ನಗರ, ಇಂದಿರಾನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.