Tag: Labor

  • ವಿದ್ಯುತ್ ಕೇಬಲ್‍ಗೆ ಸಿಲುಕಿ 15 ನಿಮಿಷ ಕಂಬದಲ್ಲೇ ಒದ್ದಾಡಿದ ಯುವಕ

    ವಿದ್ಯುತ್ ಕೇಬಲ್‍ಗೆ ಸಿಲುಕಿ 15 ನಿಮಿಷ ಕಂಬದಲ್ಲೇ ಒದ್ದಾಡಿದ ಯುವಕ

    ತುಮಕೂರು: ವಿದ್ಯುತ್ ಕೇಬಲ್ ರಿಪೇರಿ ಮಾಡಲು ತೆರಳಿದ್ದ ಗುತ್ತಿಗೆ ಕಾರ್ಮಿಕ ವಿದ್ಯುತ್ ಕೇಬಲ್ ನಡುವೆ ಸಿಲುಕಿ ಒದ್ದಾಟ ನಡೆಸಿದ ಘಟನೆ ನಗರದ ಶಿರಾ ಗೇಟ್ ಬಳಿ ನಡೆದಿದೆ.

    ಸೋಯಬ್ (25) ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡಿದ ಯುವಕ. ನಗರದಲ್ಲಿ ವಿದ್ಯುತ್ ತಂತಿ ಬದಲಾಗಿ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಸರ್ಕಾರದಿಂದ ಕಾಮಗಾರಿ ಗುತ್ತಿಗೆ ಪಡೆದಿದ್ದ ವ್ಯಕ್ತಿ ಕಾರ್ಮಿಕರೊಂದಿಗೆ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಕೇಬಲ್ ಅಳವಡಿಸಲು ಯುವಕನನ್ನು ವಿದ್ಯುತ್ ಕಂಬಕ್ಕೆ ಹತ್ತಿಸಿಲಾಗಿತ್ತು. ಈ ವೇಳೆ ಯುವಕನ ಕಾಲು ಜಾರಿ ಕೇಬಲ್ ನಡುವೆಯೇ ಸಿಕ್ಕಿಬಿದಿದ್ದ.

    ಕಂಬ ಏರಲು ತಂದಿದ್ದ ವಾಹನ ಬೇರೆ ಸ್ಥಳಕ್ಕೆ ತೆರಳಿದ ಕಾರಣ ಯುವಕ ಕೇಬಲ್ ನಡುವೆ ಸಿಕ್ಕಿ ನರಳುತ್ತಿದ್ರು ಸಹಾಯ ಮಾಡಲಾಗದೆ ಇತರೇ ಸ್ಥಳದಲ್ಲಿದ್ದ ಕಾರ್ಮಿಕರು ದಿಕ್ಕು ತೋಚದಾಗಿದ್ದರು. ಪರಿಣಾಮ ಸುಮಾರು 15 ನಿಮಿಷಗಳ ಕಾಲ ಯುವಕ ವಿದ್ಯುತ್ ಕಂಬದಲ್ಲೇ ಒದ್ದಾಟ ನಡೆಸಿದ್ದ. ಆ ಬಳಿಕ ಘಟನೆ ಸ್ಥಳಕ್ಕೆ ಜೆಸಿಪಿ ತರಿಸಿ ಆದರ ಮೂಲಕ ಯುವಕನನ್ನು ರಕ್ಷಣೆ ಮಾಡಿದರು.

    ಹೆಚ್ಚು ಸಮಯ ವಿದ್ಯುತ್ ಕಂಬದಲ್ಲೇ ಸಿಲುಕಿ ಒದ್ದಾಟ ನಡೆಸಿದ್ದ ಕಾರಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಸಿ ವ್ಯಾಲಿ ಕಾಮಗಾರಿ ವೇಳೆ ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರ ಸಾವು

    ಕೆಸಿ ವ್ಯಾಲಿ ಕಾಮಗಾರಿ ವೇಳೆ ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರ ಸಾವು

    ಬೆಂಗಳೂರು: ಕೆಸಿ ವ್ಯಾಲಿ ಕಾಮಗಾರಿ ವೇಳೆ ಮಣ್ಣಿನ ದಿಬ್ಬ ಕುಸಿದ ಪರಿಣಾಮ ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮಹದೇವಪುರದ ಬಳಿ ನಡೆದಿದೆ.

    ಮೃತರನ್ನು ಉತ್ತರ ಭಾರತ ಮೂಲದ ಸಂದೀಪ್(24) ಅಖಿಲೇಶ್ ಯಾದವ್(26) ಎಂದು ಗುರುತಿಸಲಾಗಿದೆ. ಕೆಆರ್ ಪುರದ ಬಳಿ ನಡೆಯುತ್ತಿರುವ ಕೆಸಿ ವ್ಯಾಲಿ ಕಾಮಗಾರಿ ಸ್ಥಳದಲ್ಲಿ ಘಟನೆ ನಡೆದಿದೆ. ಈ ವೇಳೆ ಎಂಜಿನಿಯರ್ ಉಮಾಶಂಕರ್ ಎಂಬವರನ್ನು ರಕ್ಷಣೆ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳದಲ್ಲಿ ಮೃತ ಪಟ್ಟ ಕಾರ್ಮಿಕರ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜಲ್ಲಿ ಬಂಕರ್ ಕುಸಿದು ಇಬ್ಬರು ಕಾರ್ಮಿಕರ ಸಾವು

    ಜಲ್ಲಿ ಬಂಕರ್ ಕುಸಿದು ಇಬ್ಬರು ಕಾರ್ಮಿಕರ ಸಾವು

    ಉಡುಪಿ: ಜಲ್ಲಿ ಬಂಕರ್ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಶಿವಪುರದ ಮೂಕಾಂಬಿಕಾ ಕ್ರಷರ್‍ನಲ್ಲಿ ನಡೆದಿದೆ.

    ಸಂಜೀವ ಮತ್ತು ಜಗದೀಶ್ ಸಾವನ್ನಪ್ಪಿದ ಕಾರ್ಮಿಕರು. ಜಲ್ಲಿ ಪುಡಿ ತುಂಬಿಸುತ್ತಿದ್ದ ವೇಳೆ ಅವಘಡ ನಡೆದಿದ್ದು ಉಸಿರುಗಟ್ಟಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಕ್ರಷರ್‍ನಲ್ಲಿ ಬಂಡೆ ಕಲ್ಲನ್ನು ಪುಡಿ ಮಾಡಿ, ಜಲ್ಲಿ ಬಂಕರ್ ಒಳಗೆ ತುಂಬಿಸಿಡಲಾಗುತ್ತದೆ. ಬಂಕರ್‍ನಿಂದ ಟಿಪ್ಪರ್‍ಗೆ ಜಲ್ಲಿಯನ್ನು ತುಂಬಿ ಸಾಗಾಟ ಮಾಡಲಾಗುತ್ತದೆ.

    ಟಿಪ್ಪರ್‍ಗೆ ಜಲ್ಲಿ ಬಂಕರ್‍ನಿಂದ ಜಲ್ಲಿ ತುಂಬಿಸುತ್ತಿದ್ದ ವೇಳೆ ಬಂಕರ್ ತಗಡು ಶೀಟ್ ಕುಸಿದಿದೆ. ಜಲ್ಲಿ ರಾಶಿಯ ಕೆಳಗೆ ಸಿಲುಕಿಕೊಂಡ ಇಬ್ಬರೂ ಸಹ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬುಲ್ಡೋಜರ್ ಮೂಲಕ ಕುಸಿದ ಬಂಕರ್ ತೆರವುಗೊಳಿಸುವಷ್ಟರಲ್ಲಿ ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದಾರೆ.

    ಉಡುಪಿ ಎಸ್‍ಪಿ ಡಾ. ಸಂಜೀವ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬಾಲಕನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ರು

    ಬಾಲಕನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ರು

    ಹುಬ್ಬಳ್ಳಿ: ಮ್ಯಾನಹೋಲ್‍ಗಳಲ್ಲಿ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಬಾರದು ಎಂಬ ನಿಯಮ ಇದೆ. ಆದ್ರೆ ಆ ನಿಯಮವನ್ನೇ ಗಾಳಿಗೆ ತೂರಿ ಹುಬ್ಬಳ್ಳಿಯಲ್ಲಿ ಬಾಲಕನೊಬ್ಬನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ ಘಟನೆ ನಡೆದಿದೆ.

    ಹೌದು. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಮ್ಯಾನಹೋಲ್‍ನಲ್ಲಿ ಕಿರಣ್ ಎಂಬ ಹುಡುಗನನ್ನು ಕೆಳಗೆ ಇಳಿಸಿ ಸ್ವಚ್ಛತೆ ಮಾಡಿಸಿದ್ದಾರೆ.

    ಚನ್ನಮ್ಮ ವೃತ್ತದಲ್ಲಿನ ಯುಜಿಡಿ (ಒಳ ಚರಂಡಿ ವ್ಯವಸ್ಥೆ) ತುಂಬಿಕೊಂಡಿದ್ದು, ಇದೇ ವೃತ್ತದಲ್ಲಿ ಸಾರ್ವಜನಿಕ ಶೌಚಾಲಯವೊಂದು ದುರಸ್ತಿಗೊಂಡಿದೆ. ಹೀಗಾಗಿ ಶೌಚಾಲಯ ಗುತ್ತಿಗೆ ಪಡೆದ ಗುತ್ತಿಗೆದಾರ, ಕಿರಣ್‍ನನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ.

    ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತವರಲ್ಲೇ ನಡೆದಿದೆ ರಾಜ್ಯದ ಮಾನ ಹೋಗೋ ಘಟನೆ

    ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಳಿ ಮ್ಯಾನ್ ಹೋಲ್ ಕ್ಲೀನ್ ಮಾಡಲು ಅತ್ಯಾಧುನಿಕ ಯಂತ್ರಗಳಿದ್ರೂ ಈ ರೀತಿ ಕಾರ್ಮಿಕರನ್ನು ಬಳಸಿ ಕ್ಲೀನ್ ಮಾಡಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ 3 ಕಾರ್ಮಿಕರ ಸಾವು

    https://youtu.be/kcFSaXt6CH8

    https://youtu.be/xkvU06jGuCU