Tag: labh singh ugoke

  • ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!

    ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!

    ಚಂಡೀಗಢ: ಆಮ್ ಆದ್ಮಿ ಪಾರ್ಟಿ (AAP) ಯ ಶಾಸಕ ಲಾಭ್ ಸಿಂಗ್ ಉಗೋಕೆಯವರ ತಂದೆ ಆತ್ಮಹತ್ಯೆಗೆ ಯತ್ನಿಸಿದ ಅಚ್ಚರಿಯ ಘಟನೆಯೊಂದು ಇಂದು ಪಂಜಾಬ್‍ನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತತ್ನಿಸಿದವರನ್ನು ದರ್ಶನ್ ಸಿಂಗ್ (Darshan Singh) ಎಂದು ಗುರುತಿಸಲಾಗಿದೆ. ಇವರು ಆತ್ಮಹತ್ಯೆಗೆ ಯತ್ನಿಸಿದ ವಿಚಾರವನ್ನು ಸ್ವತಃ ಪಂಜಾಬ್ (Punjab) ಶಾಸಕರೇ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

    ದರ್ಶನ್ ಸಿಂಗ್ ಅವರು ಇಂದು ಮಧ್ಯಾಹ್ನದ ಬಳಿಕ ವಿಷಯುಕ್ತ ಪದಾರ್ಥವನ್ನು ಸೇವಿಸಿದ್ದಾರೆ. ಪರಿಣಾಮ ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದರ್ಶನ್ ಸಿಂಗ್ ಆತ್ಮಹತ್ಯೆಗೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಲಾಭ್ ಸಿಂಗ್ (Labh Singh Ugoke) ಅವರು ಪ್ರತಿಕ್ರಿಯಿಸಿ, ತಂದೆ ಬೆಳಗ್ಗಿನವರೆಗೆ ಚೆನ್ನಾಗಿಯೇ ಇದ್ದರು. ಆದರೆ ನಾನು ಸಚಿವ ಸಂಪುಟ ಸಭೆ (Cabinet Meeting) ಗೆಂದು ಚಂಢೀಗಢಕ್ಕೆ ಬಂದ ಬಳಿಕ ಏನಾಯ್ತೋ ಗೊತ್ತಿಲ್ಲ ಎಂದು ತಿಳಿಸಿರು.

    ವರದಿಗಳ ಪ್ರಕಾರ, ದರ್ಶನ್ ಅವರ ಹಿರಿಯ ಸಹೋದರ ಸುಖಚೈನ್ ಸಿಂಗ್ ಅವರು ಕುಡಿತದ ದಾಸರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮನೆಯಲ್ಲಿ ಶಾಸಕರ ತಂದೆ ಜಗಳವಾಡಿದ್ದಾರೆ. ಇದಾದ ಬಳಿಕ ಅವರು ವಿಷಕಾರಿ ವಸ್ತುವೊಂದನ್ನು (Poisonous Substance) ಸೇವಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅಲ್ಲಿಂದ ಅವರನ್ನು ಲೂಧಿಯಾನದ ಡಿಸಿಎಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಸದ್ಯ ಶಾಸಕರ ತಂದೆಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ಶಾಸಕರು ತಮ್ಮ ತಂದೆ ಚಿಕಿತ್ಸೆ ಪಡೆಯುತ್ತಿರುವ ಲೂಧಿಯಾನ ಡಿಎಂಸಿಗೆ ತಲುಪಿದ್ದಾರೆ. ಈ ಮಧ್ಯೆ ಉಗೋಕೆ ಅವರ ಆಪ್ತ ಸಹಾಯಕ ಗುರ್ತೇಜ್ ಸಿಂಗ್ ಅವರು ಮಾತನಾಡಿ, ಶಾಸಕರ ತಂದೆಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿದೆ ಎಂದು ಹೇಳಿಕೆ ನೀಡಿದ್ದರು.

    ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ನಂತರ ಲಾಭ್ ಸಿಂಗ್ ಉಗೋಕೆ ಗಮನ ಸೆಳೆದರು.

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್ ರಿಪೇರಿ ಮಾಡುವ ವ್ಯಕ್ತಿ, ಸಮಾಜ ಸೇವಕಿ ಎದುರು ಸೋಲನುಭವಿಸಿದ ಘಟಾನುಘಟಿಗಳು

    ಮೊಬೈಲ್ ರಿಪೇರಿ ಮಾಡುವ ವ್ಯಕ್ತಿ, ಸಮಾಜ ಸೇವಕಿ ಎದುರು ಸೋಲನುಭವಿಸಿದ ಘಟಾನುಘಟಿಗಳು

    ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ಜಯಬೇರಿ ಬಾರಿಸಿದೆ. ಪಂಜಾಬ್ ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ಚರಣ್ ಜಿತ್ ಸಿಂಗ್ ಚೆನ್ನಿ (Charanjit Singh Channi), ಮೊಬೈಲ್ ರಿಪೇರಿ ಮಾಡುವ ಅಂಗಡಿಯ ವ್ಯಕ್ತಿಯ ವಿರುದ್ಧವಾಗಿ ಹೀನಾಯವಾಗಿ ಸೋತಿದ್ದಾರೆ.

    ಮೊಬೈಲ್ ರಿಪೇರಿ ಮಾಡುವ ಲಾಭ್ ಸಿಂಗ್ ಉಗೋಕೆ ಅವರು ಚನ್ನಿಯನ್ನು 40,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಲಾಭ್ ಸಿಂಗ್ ತಾಯಿ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಈತನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ.  ಇದನ್ನೂ ಓದಿ:  ಬುಲ್ಡೋಜರ್ ಮುಂದೆ ಯಾರು ಬರಲು ಸಾಧ್ಯವಿಲ್ಲ: ಹೇಮಾ ಮಾಲಿನಿ

    ಪಂಜಾಬ್‍ನಲ್ಲಿ ಅದ್ಭುತ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿವೆ. ಪೊರಕೆ ಗುರುತಿನ ಪಕ್ಷ ಆಮ್ ಆದ್ಮಿಗಳ ಅಖಂಡ ಆಪ್ ಕಿ ಸರ್ಕಾರ್ ಬಂದಿದೆ. ಕೇಜ್ರಿವಾಲ್ ಅವರ ಏಕ್ ಮೌಕಾ ನಿನಾದ ಫಲಿಸಿದೆ. ಆಮ್ ಆದ್ಮಿ ಕನ್ವಿನರ್ ಕೇಜ್ರಿವಾಲ್ ಪ್ರಕಟಿಸಿದ ಮ್ಯಾನಿಫೆಸ್ಟೋ ಮತ್ತು ಭರವಸೆಗಳಿಗೆ ಪಂಜಾಬಿಗಳು ಫಿದಾ ಆಗಿದ್ದಾರೆ. ಮುಖ್ಯವಾಗಿ ಏಕ್ ಮೌಕಾ ಕೇಜ್ರಿವಾಲ್, ಏಕ್ ಮೌಕಾ ಭಗವಂತ್ ಮನ್ ಘೋಷಣೆಗಳು ಜನ ಮನಗೆದ್ದಿದೆ. ಇದನ್ನೂ ಓದಿ: ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ

    ಆಮ್ ಆದ್ಮಿ ಪಂಜಾಬ್‍ನಲ್ಲಿ ಲ್ಯಾಂಡ್‍ಸ್ಲೈಡ್ ವಿಕ್ಟರಿ ಸಾಧಿಸಿದ್ದಾರೆ. ಮೊದಲೇ ನಾಯಕತ್ವ ಕಚ್ಚಾಟದಲ್ಲಿ ಮುಳುಗಿದ್ದ ಕಾಂಗ್ರೆಸ್ ಪಕ್ಷವನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಶತಮಾನದ ಪಕ್ಷ ಧೂಳೀಪಟವಾಗಿದೆ. ಪಂಜಾಬ್‍ನಲ್ಲಿನ ಎಎಪಿ ವೇವ್ 2015ರ ದೆಹಲಿ ಫಲಿತಾಂಶವನ್ನು ನೆನಪಿಸಿದೆ. ಸಿಎಂ ಚನ್ನಿ, ಸಿಧು, ಅಮರಿಂದರ್ ಸಿಂಗ್, ಪ್ರಕಾಶ್ ಸಿಂಗ್ ಬಾದಲ್ ಸೇರಿ ಘಟಾನುಘಟಿಗಳೆಲ್ಲಾ ಮನೆ ಸೇರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಸಿಎಂ ಚನ್ನಿಯನ್ನು ಸೋಲಿಸಿದ್ದು ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಓರ್ವ ಕಾಮನ್ ಮ್ಯಾನ್. ಇದನ್ನೂ ಓದಿ: ಬಿಜೆಪಿಗೆ ಗೆಲುವು – 4 ದಾಖಲೆ ಬರೆದ ಸಿಎಂ ಯೋಗಿ

    ಸಿಧುರನ್ನು (Navjot Singh Sidhu) ಸೋಲಿಸಿದ್ದು ಸಮಾಜ ಸೇವಕಿ ಜೀವನ್‍ ಜ್ಯೋತ್ ಕೌರ್. ಫೋನ್ ಕಾಲ್ ಸ್ಪಂದನೆ ಮೂಲಕ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಭಗವಂತ್ ಮನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ರಾಜಭವನದಲ್ಲಿ ಅಲ್ಲ. ತಮ್ಮ ಪೂರ್ವಿಕರ ಗ್ರಾಮ ಕಟ್ಕರ್ ಕಲನ್‍ನಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಭಗತ್ ಸಿಂಗ್ ಹುಟ್ಟೂರು ಕೂಡ ಹೌದು. ಅಂದ ಹಾಗೇ, ಭಗವಂತ್ ಮನ್ ಒಂದು ಕಾಲದಲ್ಲಿ ಹಾಸ್ಯ ನಟ. ಇನ್ನು ಸಿಎಂ ಚನ್ನಿ ನಾಳೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರೆ.