Tag: Kushinagar

  • ಮದುವೆಯಾದ ಮೂರೇ ತಿಂಗಳಲ್ಲಿ ಕಾನ್ಸ್ಟೇಬಲ್‌ ಪತ್ನಿ ಸಾವು

    ಮದುವೆಯಾದ ಮೂರೇ ತಿಂಗಳಲ್ಲಿ ಕಾನ್ಸ್ಟೇಬಲ್‌ ಪತ್ನಿ ಸಾವು

    ಲಕ್ನೋ: ಮೂರು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ (Marriage) ಕಾನ್ಸ್ಟೇಬಲ್‌ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ (Uttar Pradesh Kushinagar) ನಡೆದಿದೆ.

    ಕುಶಿನಗರದ ಕಾಸ್ಯ ಪೊಲೀಸ್ ಠಾಣೆಯ (Kasia Police Station) ಭೈಂಷಾ ಗ್ರಾಮದ ಮನೆಯೊಂದರಲ್ಲಿ ಮುಚ್ಚಿದ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ (Investigation) ಆರಂಭಿಸಿದ್ದಾರೆ.

    ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪೊಲೀಸ್ ಕಾನ್ಸ್ಟೇಬಲ್ ರೋಷನ್ ರೈ, ಪೊಲೀಸ್ ವರಿಷ್ಠಾಧಿಕಾರಿ ಒತ್ತಡಕ್ಕೆ ಮಣಿದು ತನ್ನ ಗೆಳತಿಯನ್ನ ವಿವಾಹವಾಗಿದ್ದ. ಇದೀಗ ಆಕೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪತಿಯೇ ಆಕೆಯನ್ನು ಕೊಂದಿರುವುದಾಗಿ ಯುವತಿ ಪೋಷಕರು ಅರೋಪಿಸಿದ್ದಾರೆ. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

    ಏನಿದು ಲವ್‌ಸ್ಟೋರಿ?
    ಕಾಸ್ಯ ಪೊಲೀಸ್ ಠಾಣೆಗೆ ಕಾನ್‌ಸ್ಟೆಬಲ್ ರೋಷನ್ ರೈ ನಿಯೋಜನೆಗೊಂಡಿದ್ದ ಸಮಯದಲ್ಲಿ ಜಾಲತಾಣದ (Social Media) ಮೂಲಕ ಯುವತಿಯೊಬ್ಬಳ ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯನ್ನು ಸಂಪರ್ಕಿಸಿ ಪ್ರೀತಿಸಲು ಶುರು ಮಾಡಿದ್ದ. ಆಕೆಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ (Live In RelationShip) ವಾಸಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನ ದೈಹಿಕವಾಗಿ ಬಳಸಿಕೊಂಡು ಸಂಪರ್ಕ ಕಡಿದುಕೊಳ್ಳಲು ಯತ್ನಿಸುತ್ತಿದ್ದ. ಅದಕ್ಕಾಗಿ ಜಥಾನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಇದರಿಂದ ಬೇಸತ್ತಿದ್ದ ಯುವತಿ ಪೊಲೀಸ್ ವರಿಷ್ಠಾಧಿಕಾರಿ ಧವಳ್ ಜೈಸ್ವಾಲ್ ಅವರಿಗೆ ಎಲ್ಲ ವಿಷಯ ತಿಳಿಸಿದ್ದಳು. ಬಳಿಕ ಎಸ್ಪಿ ತಾವೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದರು.

    ಮೂರು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಇಬ್ಬರಿಗೂ ಮದುವೆ ಮಾಡಿಸಲಾಗಿತ್ತು. ಕೆಲ ದಿನಗಳವರೆಗೆ ಸಂಸಾರ ಚೆನ್ನಾಗಿಯೇ ಇತ್ತು. ಇದೀಗ ಮುಚ್ಚಿದ ಕೊಣೆಯೊಂದರಲ್ಲಿ ಕಾನ್ಸ್ಟೇಬಲ್‌ ಪತ್ನಿ ಶವವಾಗಿ ಪತ್ತೆಯಾಗಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಕಾಸ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮೋದಿ ಹೇಳೋದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ಬಿಕೆ ಹರಿಪ್ರಸಾದ್ ಕಿಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಿಠಾಯಿ ತಿಂದು 4 ಮಕ್ಕಳು ಸಾವು – ಪರಿಹಾರದ ಭರವಸೆ ನೀಡಿದ ಯೋಗಿ

    ಮಿಠಾಯಿ ತಿಂದು 4 ಮಕ್ಕಳು ಸಾವು – ಪರಿಹಾರದ ಭರವಸೆ ನೀಡಿದ ಯೋಗಿ

    ಲಕ್ನೋ: ಮನೆಯ ಬಾಗಿಲಲ್ಲಿ ಸಿಕ್ಕ ಮಿಠಾಯಿಯನ್ನು ತಿಂದು ನಾಲ್ಕು ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ನಡೆದಿದೆ.

    ಮಂಜನ (5), ಸ್ವೀಟಿ (3), ಸಮರ್ (2), ಹಾಗೂ ಅರುಣ್(5) ಮೃತರು. ದಿಲೀಪ್‍ನಗರದ ನಿವಾಸಿ ಮುಖಿಯಾ ದೇವಿ ಅವರು ಬೆಳಗ್ಗೆ ತಮ್ಮ ಮನೆಯನ್ನು ಗುಡಿಸುವಾಗ ಐದು ಚಾಕ್ಲೇಟ್ ಹಾಗೂ ಕೆಲವು ನಾಣ್ಯಗಳನ್ನು ಒಳಗೊಂಡ ಪ್ಲಾಸ್ಟಿಕ್ ಚೀಲವನ್ನು ದೊರೆತಿತ್ತು. ನಂತರ ಅದರಲ್ಲಿದ್ದ ಚಾಕ್ಲೇಟ್‌ನ್ನು ತಮ್ಮ ಮೂವರು ಮೊಮ್ಮಕ್ಕಳಿಗೆ ಹಾಗೂ ನೆರೆ ಮನೆಯ ಮಗುವಿಗೆ ನೀಡಿದ್ದರು.

    ಈ ಚಾಕ್ಲೇಟ್‍ನ್ನು ನಾಲ್ವರು ಮಕ್ಕಳು ಸೇವಿಸಿದ್ದಾರೆ. ಆದರೆ ತಕ್ಷಣ ಅವರೆಲ್ಲರೂ ಅಸ್ವಸ್ಥರಾಗಿ ಪ್ರಜ್ಞಾಹೀನರಾಗಿದ್ದಾರೆ. ಇದರಿಂದಾಗಿ ಆತಂಕಗೊಂಡ ಪಾಲಕರು ತಕ್ಷಣ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: ಮುಳ್ಳು ಹಂದಿ ಚಿತ್ರದಂತೆ ಕಾಣುವ ವೈದ್ಯರ ಸಹಿ ವೈರಲ್

    ಘಟನೆ ಸಂಬಂಧಿಸಿ ಪೊಲೀಸ್ ತನಿಖೆ ಆರಂಭಿಸಲಾಗಿದ್ದು, ಸಾವಿಗೆ ಕಾರಣ ತನಿಖೆ ನಡೆಸಲಾಗುತ್ತಿದೆ. ಉಳಿದ ಒಂದು ಚಾಕ್ಲೇಟ್ ಅನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ಘಟನೆ ಸಂಬಂಧಿಸಿ ಉತ್ತರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದ್ದು, ಸೂಕ್ತ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು