Tag: kushi

  • ಸಮಂತಾ ಮನೆಯಲ್ಲಿ ಮದುವೆ ಸಡಗರ- ಹೂಗುಚ್ಛ ಹಿಡಿದು ನಿಂತ ನಟಿ

    ಸಮಂತಾ ಮನೆಯಲ್ಲಿ ಮದುವೆ ಸಡಗರ- ಹೂಗುಚ್ಛ ಹಿಡಿದು ನಿಂತ ನಟಿ

    ಸೌತ್ ನಟಿ ಸಮಂತಾ (Samantha) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಹೋದರ ಮದುವೆಯಲ್ಲಿ (Wedding) ನಟಿ ಮಿರ ಮಿರ ಅಂತ ಮಿಂಚಿದ್ದಾರೆ. ಮದುವೆ ಸಡಗರದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

    ಸಮಂತಾ ಅಣ್ಣ ಡೇವಿಡ್ ಪ್ರಭು (David Prabhu) ಫಾರಿನ್‌ನಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕುಟುಂಬದ ಜೊತೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ. ನೇರಳೆ ಬಣ್ಣದ ಗೌನ್ ಧರಿಸಿ ನಟಿ ಕಂಗೊಳಿಸಿದ್ದಾರೆ. ಹೂಗುಚ್ಛ ಹಿಡಿದು ನಟಿ ಮಿಂಚಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ನಟಿಗೆ ಇಬ್ಬರೂ ಸಹೋದರರು ಇದ್ದಾರೆ. ಅದರಲ್ಲಿ ಅಣ್ಣ ಡೇವಿಡ್ ಅಮೆರಿಕದಲ್ಲಿ ನೆಲೆಸಿದ್ದು, ನಗರದ ಗ್ರೇಟ್ ಲೇಕ್ ಬಳಿ ನಿಖೊಲೆ ಅವರನ್ನು ವಿವಾಹವಾಗಿದ್ದಾರೆ. ಇದನ್ನೂ ಓದಿ:ದರ್ಶನ್ ‍ಪ್ರಕರಣ ವೈಯಕ್ತಿಕ: ಡಾ.ರಾಜ್ ನೆನಪಿಸಿಕೊಂಡ ಗುರುಕಿರಣ್

    ಅಂದಹಾಗೆ, ಆದಿತ್ಯಾ ರಾಯ್ ಕಪೂರ್ ಜೊತೆ ಸಮಂತಾ ಹೊಸ ಬಾಲಿವುಡ್ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ರಾಜ್ ಮತ್ತು ಡಿಕೆ ನಿರ್ಮಾಣ ಮಾಡಿದ್ದಾರೆ.

  • ಅಭಿಮಾನಿಗಳ ಪ್ರೀತಿಗೆ ಕಣ್ಣೀರಿಟ್ಟ ಸಮಂತಾ

    ಅಭಿಮಾನಿಗಳ ಪ್ರೀತಿಗೆ ಕಣ್ಣೀರಿಟ್ಟ ಸಮಂತಾ

    ಸೌತ್ ನಟಿ ಸಮಂತಾ (Samantha) ಸದ್ಯ ಬಾಲಿವುಡ್ (Bollywood) ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ, ಜಾಹೀರಾತು ಶೂಟಿಂಗ್ ಅಂತ ನಟಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಸಮಂತಾ ಫ್ಯಾನ್ಸ್ ಮೀಟ್ ಕಾರ್ಯಕ್ರಮ ಮಾಡಿದ್ದಾರೆ. ಅಭಿಮಾನಿಗಳ ಅಭಿಮಾನ ಕಂಡು ನಟಿ ಕಣ್ಣೀರಿಟ್ಟಿದ್ದಾರೆ.

    ತಮ್ಮ ಕೆಲಸದ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಅಭಿಮಾನಿಗಳ ಜೊತೆ ನಟಿ ಸಮಯ ಕಳೆದಿದ್ದಾರೆ. ಪ್ರತಿಯೊಬ್ಬರಿಗೂ ಫೋಟೋ ನೀಡಿ, ಅವರು ತಂದ ಉಡುಗೊರೆಯನ್ನು ನಟಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ:ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಮಹಿಳಾ ಅಭಿಮಾನಿಯೊಬ್ಬರು ಸಮಂತಾರನ್ನು ತಬ್ಬಿಕೊಂಡು ಅಳುತ್ತಾರೆ. ಆ ಅಭಿಮಾನಿಯನ್ನು ತಬ್ಬಿ ಸಮಾಧಾನಿಸಿದ್ದಾರೆ. ಬಳಿಕ ಫ್ಯಾನ್ಸ್ ಪ್ರೀತಿಯಿಂದ ತಂದಿರುವ ಕೇಕ್ ಅನ್ನು ಸಮಂತಾ ಕತ್ತರಿಸಿ ಸಂಭ್ರಮಸಿದ್ದಾರೆ. ಬಹುದಿನಗಳ ನಂತರ ಅಭಿಮಾನಿಗಳು ಪ್ರೀತಿ, ಹಾರೈಕೆ ನೋಡಿ ನಟಿ ಭಾವುಕರಾಗಿದ್ದಾರೆ. ಸದ್ಯ ಫ್ಯಾನ್ಸ್ ಮೀಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಇನ್ನೂ ಪ್ರಸ್ತುತ ಪ್ರಾಜೆಕ್ಟ್ ವಿಚಾರಕ್ಕೆ ಬರೋದಾದ್ರೆ, ಪ್ರಿಯಾಂಕಾ ಚೋಪ್ರಾ ನಟಿಸಿದ `ಸಿಟಾಡೆಲ್’ ಇಂಡಿಯನ್ ವರ್ಷನ್‌ನಲ್ಲಿ ‘ಹನಿ ಬನಿ’ ಎಂಬ ಟೈಟಲ್‌ನೊಂದಿಗೆ ರಿಲೀಸ್ ಆಗುತ್ತಿದೆ. ವರುಣ್ ಧವನ್‌ಗೆ ನಾಯಕಿಯಾಗಿ ಸಮಂತಾ ನಟಿಸಿದ್ದಾರೆ. ಈ ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

    ಆದರೆ ‘ಯಶೋದ’ ಮತ್ತು ‘ಖುಷಿ’ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

  • ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಕೊಟ್ಟ ಸಮಂತಾಗೆ ನೆಟ್ಟಿಗರಿಂದ ಕ್ಲಾಸ್

    ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಕೊಟ್ಟ ಸಮಂತಾಗೆ ನೆಟ್ಟಿಗರಿಂದ ಕ್ಲಾಸ್

    ಮಂತಾ (Samantha) ಪದೇ ಪದೇ ಸಿಂಪತಿ ಗಿಟ್ಟಿಸಿಕೊಳ್ತಾರೆ. ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ದಿಟ್ಟತನಕ್ಕೆ ಫ್ಯಾನ್ಸ್ ಅಷ್ಟಿಷ್ಟಲ್ಲ. ಸಿನಿಮಾ ಮಾಡದೆಯೇ ಜಾಲತಾಣದಲ್ಲಿರುವ ಫಾಲೋವರ್ಸ್‌ಗಳಿಂದ ಜೀವನ ಮಾಡುತ್ತಿದ್ದಾರೆ ಸಮಂತಾ. ಅದೇ ಜಾಲತಾಣದಲ್ಲಿ ತಪ್ಪು ಮಾಹಿತಿ ಕೊಟ್ಟು ಪೇಚಿಗೆ ಸಮಂತಾ ಸಿಲುಕಿದ್ದಾರೆ. ಸ್ಯಾಮ್‌ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ವರ್ತೂರು ಸಂತೋಷ್ ಹೆಸರು ಹೇಳದೇ ಕ್ಷಮೆ ಕೇಳಿದ ಜಗ್ಗೇಶ್

    ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಇರೋ ಸಮಂತಾ ಅಲ್ಲಿಂದಲೇ ಜನರ ಜೊತೆ ಸಂಪರ್ಕದಲ್ಲಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಮಾಡದಿದ್ದರೂ ಇನ್ಸ್ಟಾಗ್ರಾಂನಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಕೃಪೆಯಿಂದ ಹಣ ದುಡಿಯುತ್ತಿದ್ದಾರೆ. ಫೋಟೋಶೂಟ್, ಜಾಹೀರಾತಿನಿಂದಾಗಿ ಹಣ ಗಳಿಸುತ್ತಾರೆ. ಇತ್ತೀಚೆಗೆ ತಮ್ಮದೇ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹೊಸದೊಂದು ವೀಡಿಯೋ ಹಾಕಿರುವ ಸಮಂತಾ ಅದರಲ್ಲಿ ಲಿವರ್ ಡೀಟಾಕ್ಸಿಂಗ್ ಬಗ್ಗೆ ಮಾತನಾಡಿದ್ದಾರೆ.

    ಲಿವರ್ ಡಿಟಾಕ್ಸಿಂಗ್‌ಗೆ ಏನೇನ್ ಮಾಡಬೇಕು ಎಂಬುದರ ಬಗ್ಗೆ ಜನರಿಗೆ ಕೊಂಚ ಸಲಹೆ ಕೊಟ್ಟಿದ್ದಾರೆ. ಅವರ ಜೊತೆ ವೈದ್ಯರು ಕೂಡ ಸಂಭಾಷಣೆಯಲ್ಲಿ ತೊಡಗುತ್ತಾರೆ. ಇವರಿಬ್ಬರ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವೈದ್ಯರೊಬ್ಬರು ಎಕ್ಸ್‌ನಲ್ಲಿ ಸಮಂತಾ ವಿರುದ್ಧ ಹರಿಹಾಯ್ದಿದ್ದಾರೆ. ಸಮಂತಾ ಜನರಿಗೆ ಕೊಡ್ತಿರುವ ಮಾಹಿತಿ ತಪ್ಪಾಗಿದೆ. ಗೊತ್ತಿಲ್ಲ ಅಂದ್ರೆ ಸುಮ್ಮನೆ ಇರಬೇಕು. ಆರೋಗ್ಯದ ವಿಚಾರವಾಗಿ ತಪ್ಪು ಸಂದೇಶ ಕೊಡಬಾರದು ಅಂತ ಕೆಂಡಕಾರಿದ್ದಾರೆ. ಈ ಬಗ್ಗೆ ಸಮಂತಾ ಕಡೆಯಿಂದ ಪ್ರತ್ಯುತ್ತರ ಬಂದಿಲ್ಲ.

    ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

    ಆದರೆ ಯಶೋದ ಮತ್ತು ಖುಷಿ ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 6 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

    ಸಮಂತಾಗೆ ಟಾಲಿವುಡ್ ಮಾತ್ರವಲ್ಲ ಬಾಲಿವುಡ್‌ನಿಂದಲೂ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಹಾಗಾಗಿ ಸಮಂತಾ ಸಿನಿಮಾ ಮತ್ತು ಲುಕ್ ಹೇಗಿರಲಿದೆ ಎಂಬ ಚರ್ಚೆ ಕೂಡ ನಡೆದಿದೆ. ಹೊಸ ಕೆಲಸ ಅವರ ಕೆರಿಯರ್‌ಗೆ ತಿರುವು ಕೊಡಲಿ ಎಂದು ಸ್ಯಾಮ್ ಫ್ಯಾನ್ಸ್ ಆಶಿಸುತ್ತಿದ್ದಾರೆ.

  • ಬಾಲಿವುಡ್ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಸಮಂತಾ

    ಬಾಲಿವುಡ್ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಸಮಂತಾ

    ಟಾಲಿವುಡ್ ನಟಿ ಸಮಂತಾ (Samantha) ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ. ಮೈಯೋಸಿಟಿಸ್ ಖಾಯಿಲೆಯನ್ನು ಪಕ್ಕಕ್ಕೆ ಇಟ್ಟು, ಹೊಸ ಸಾಹಸದ ಮೊದಲ ಝಲಕ್ ತೋರಿಸಿದ್ದಾರೆ. ಇನ್ನೇನು ಸಮಂತಾ ಬಣ್ಣದ ಲೋಕದ ಬದುಕು ಮುಗಿಯಿತು. ಎಂದು ಅಂದುಕೊಂಡವರಿಗೆ ಭರ್ಜರಿ ಕಾಣಿಕೆ ಕೊಡಲು ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ಬಿಗ್‌ ಬಾಸ್‌’ ಶೋ ಮುಗಿದ ಬಳಿಕ ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸ್ಪರ್ಧಿಗಳು

    ಸಮಂತಾ ಕಳೆದ ಈ ಎರಡು ವರ್ಷ. ಅಷ್ಟೇನೂ ಸುಖದಾಯಕವಾಗಿರಲಿಲ್ಲ. ಮೊದಲ ಕಾರಣ ಎಲ್ಲರಿಗೂ ಗೊತ್ತು. ಅದು ವರ್ಷದಿಂದ ಕಾಡುತ್ತಿರುವ ಮೈಯೋಸೀಟಿಸ್. ಅದರಿಂದ ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆ ಪಡೆದು ಬಂದರು. ಅದಕ್ಕಾಗಿ ಸಿನಿಮಾ ರಂಗದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಈಗ ಹೊಸದೊಂದು ಯುದ್ಧ ಮುಗಿಸಿ ಬಂದಿದ್ದಾರೆ. ಸದ್ಯದಲ್ಲೇ ಇವರ ವೆಬ್‌ಸೀರೀಸ್ ‘ಸಿಟಾಡೆಲ್’ ಓಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಒಂದು ಗೆಲುವಿಗೆ ಸ್ಯಾಮ್ ಕಾದಿದ್ದಾರೆ. ಕಾರಣ ಈ ಹಿಂದಿನ ಎರಡ್ಮೂರು ಸಿನಿಮಾ ಕೈ ಹಿಡಿಯಲಿಲ್ಲ. ಇದಾದಾದರೂ ಗೆಲ್ಲುತ್ತಾ?

     

    View this post on Instagram

     

    A post shared by Samantha (@samantharuthprabhuoffl)

    ಈಗಾಗಲೇ ‘ಸಿಟಾಡೆಲ್’ ಸೀರೀಸ್ ಮುಗಿದಿದೆ. ಡಬ್ಬಿಂಗ್ ನಡೆಯುತ್ತಿದೆ. ಬಾಲಿವುಡ್ ಹೀರೋ ವರುಣ್ ಧವನ್ (Varun Dhawan) ಜೊತೆ ಸಮಂತಾ ಕೈ ಜೋಡಿಸಿದ್ದಾರೆ. ಫ್ಯಾಮಿಲಿಮ್ಯಾನ್ ಸರಣಿ ನಿರ್ದೇಶಿಸಿದ್ದ ಡಿಕೆ ಇದರ ಸಾರಥಿ. ಹಾಲಿವುಡ್ ಸರಣಿಯ ಹಿಂದಿ ರಿಮೇಕ್ ಇದು. ಈಗಾಗಲೇ ಸರಣಿಯ ಕೆಲವು ದೃಶ್ಯ ನೋಡಿದ್ದೇನೆ. ಅದ್ಭುತವಾಗಿದೆ. 22 ತಿಂಗಳ ಕಷ್ಟ ಕಾಣುತ್ತಿದೆ. ಜನರು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ. ಹೀಗಂತ ಸಮಂತಾ ಬರೆದುಕೊಂಡಿದ್ದಾರೆ. ಇನ್ನೇನು ಓಟಿಟಿಯನ್ನು ಇದು ಮೆರವಣಿಗೆ ಹೊರಡಲಿದೆ. ಇದಾದರೂ ಸ್ಯಾಮ್‌ಗೆ ಗೆಲುವಿನ ರುಚಿ ತೋರಿಸುತ್ತದಾ ಅಥವಾ ಇಲ್ವಾ ಸೋಲುತ್ತಾ ಕಾದುನೋಡಬೇಕಿದೆ.

    ‘ಖುಷಿ’ (Kushi) ಸಿನಿಮಾ ಬಳಿಕ ಸಮಂತಾ ಬ್ರೇಕ್ ತೆಗೆದುಕೊಂಡಿದ್ದರು. ‘ಸಿಟಾಡೆಲ್’ (Citadel) ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ವೈವಾಹಿಕ ಬದುಕಿನಲ್ಲಿ ಫೇಲ್ ಆಗಿರುವ ಸಮಂತಾಗೆ ಸಿನಿ ಕೆರಿಯರ್ ಮತ್ತೆ ಕೈಹಿಡಿಯುತ್ತಾ ಕಾಯಬೇಕಿದೆ.

  • ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ಸುತ್ತಾಡಿದ್ರಾ ರಶ್ಮಿಕಾ ಮಂದಣ್ಣ?

    ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ಸುತ್ತಾಡಿದ್ರಾ ರಶ್ಮಿಕಾ ಮಂದಣ್ಣ?

    ನ್ನಡತಿ, ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಗ ಟರ್ಕಿಗೆ ಹೋಗಿದ್ದಾಗ ತೆಗೆದ ಫೋಟೋಗಳನ್ನ ಬಹುದಿನಗಳ ನಂತರ ನಟಿ ಶೇರ್ ಮಾಡಿದ್ದಾರೆ. ಹಳೆಯ ಫೋಟೋ ಶೇರ್ ಮಾಡಿ ರಶ್ಮಿಕಾ ಮತ್ತೆ ಸಿಕ್ಕಿಬಿದ್ದಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಜೊತೆ ನಟಿ ಸುತ್ತಾಡಿದ್ದಾರೆ ಎಂದು ಮತ್ತೆ ಟೀಕೆಗೆ ಒಳಗಾಗಿದ್ದಾರೆ.

    ಆದರೆ, ಈಗ ಮತ್ತೆ ನಟಿ ರಶ್ಮಿಕಾ ಮಂದಣ್ಣ ಫೋಟೋ ಮತ್ತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಳೆಯದು ಎಂದು ಅಭಿಮಾನಿಗಳು ಸಾಕ್ಷಿ ಸಮೇತ ಗುರುತಿಸಿದ್ದಾರೆ. ಜೊತೆಗೆ ನೀವು ವಿಜಯ್ ದೇವರಕೊಂಡ ಅವರ ಜೊತೆಗೆ ಟರ್ಕಿ ಪ್ರವಾಸಕ್ಕೆ ತೆರಳಿದ್ದಾಗ ತೆಗೆದುಕೊಂಡಿರುವ ಚಿತ್ರ ಇದು ಎಂದು ನೆಟ್ಟಿಗರು ರಶ್ಮಿಕಾ ಕಾಲೆಳೆದಿದ್ದಾರೆ. ಮೊದಲೇ ಇಬ್ಬರ ಡೇಟಿಂಗ್‌ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದು, ಈ  ಪೋಸ್ಟ್‌ನಿಂದ ಮತ್ತಷ್ಟು ಸಂಶಯ ಜಾಸ್ತಿಯಾಗಿದೆ. ಇದನ್ನೂ ಓದಿ:Bigg Boss: ಒಬ್ಬ ರಾವಣ, 10 ತಲೆ, ಒಂದೇ ಮನೆ 10 ಸೀಸನ್‌- ಸುದೀಪ್‌ ಖಡಕ್‌ ಡೈಲಾಗ್

    ಈ ಹಿಂದೆ ಒಂದೇ ಬ್ಯಾಕ್ ಗ್ರೌಂಡ್ ಇದ್ದ ಚಿತ್ರಗಳನ್ನು ಹಂಚಿಕೊಂಡಿದ್ದ ವೇಳೆ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದರು. ಈಗ ಮತ್ತೆ ಒಂದೇ ರೀತಿಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇತ್ತೀಚಿಗೆ ನಟಿ ಕೆಲ ಹಿಂದೆ ಟರ್ಕಿಯಲ್ಲಿ ತಾನು ಕಳೆದ ರಜಾ ದಿನಗಳ ನೆನಪಿನಲ್ಲಿ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿರೋದು ಅನೇಕರ ಚರ್ಚೆಗೆ ಗ್ರಾಸವಾಗಿದೆ.

    ‘ಖುಷಿ’ (Kushi) ಸಿನಿಮಾದ ಶೂಟಿಂಗ್ ಟರ್ಕಿಯಲ್ಲಿ ನಡೆದಿತ್ತು. ಅಲ್ಲಿನ ಫೋಟೋಗಳನ್ನ ವಿಜಯ್ ಹಂಚಿಕೊಂಡಿದ್ದರು. ಈಗ ರಶ್ಮಿಕಾ ಹಂಚಿಕೊಂಡಿರೋದನ್ನ ನೋಡಿ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಲೇಟ್ ಆಗಿ ಶೇರ್ ಮಾಡಿದ್ರು ನಟಿ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಇದು ನಿಜನಾ? ಈ ಬಗ್ಗೆ ನಟಿಯೇ ಸ್ಪಷ್ಟನೆ ಕೊಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಡ ಕುಟುಂಬಕ್ಕೆ 1 ಲಕ್ಷ ಘೋಷಣೆ ಮಾಡಿದ ಬೆನ್ನಲ್ಲೇ ವಿಜಯ್ ದೇವರಕೊಂಡ ಎಡವಟ್ಟು

    ಬಡ ಕುಟುಂಬಕ್ಕೆ 1 ಲಕ್ಷ ಘೋಷಣೆ ಮಾಡಿದ ಬೆನ್ನಲ್ಲೇ ವಿಜಯ್ ದೇವರಕೊಂಡ ಎಡವಟ್ಟು

    ವಿಜಯ್ ದೇವರಕೊಂಡ-ಸಮಂತಾ (Samantha) ಆಕಾಶ ನೋಡುವಂತಾಗಿದೆ. ಇನ್ನೇನು ಗೆದ್ದೇ ಬಿಟ್ಟೆವು ಎಂದು ಆಕಾಶಕ್ಕೇರಿದ್ದ ಜೋಡಿಯನ್ನು ದೇವರು ನೆಲಕ್ಕೆ ಇಳಿಸಿದ್ದಾನೆ. ಏಕಾಏಕಿ ಏನಾಯಿತು ಖುಷಿ(Kushi Fim) ಸಿನಿಮಾಗೆ ? ಎಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಚಿತ್ರ ಅದ್ಯಾಕೆ ಡಿಸಾಸ್ಟರ್ ಪಟ್ಟಿ ಸೇರಿತು? ಏನಿದರ ಹಿಂದಿನ ಹಕೀಕತ್ತು? ಇಲ್ಲಿದೆ ಮಾಹಿತಿ.

    ‘ಖುಷಿ’ ಸಿನಿಮಾ ಐದು ದಿನಗಳ ಹಿಂದೆ ದೇಶ ವಿದೇಶದಲ್ಲಿ ತೆರೆ ಕಂಡಿತ್ತು. ವಿಜಯ್(Vijay Devarakonda)- ಸಮಂತಾ ಜೋಡಿ ಪಕ್ಕಾ ಕ್ಲಿಕ್ ಆಗುತ್ತದೆ. ಇದನ್ನೇ ಎಲ್ಲರೂ ನಂಬಿದ್ದರು. ಸಮಂತಾ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೋಗಿದ್ದರು. ಅಲ್ಲೂ ಪ್ರಚಾರ ಮಾಡಿದರು. ಇಲ್ಲಿ ದೇವರಕೊಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಿದರು. ಹಾಡು, ಟ್ರೈಲರ್ ಎಲ್ಲಾ ಮೋಡಿ ಮಾಡಿತು. ಸಿನಿಮಾ ತೆರೆ ಕಂಡ ದಿನ ಮೂವತ್ತು ಕೋಟಿ ಬಾಚಿತು. ಈಗ ಎಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು. ಗೆದ್ದೇ ಬಿಟ್ಟಿದ್ದರು. ಸೋಮವಾರ (ಸೆ.4) ಮಕಾಡೆ ಮಲಗಿತಲ್ಲ. ಚಿತ್ರದ ಕಲೆಕ್ಷನ್ ಈಗ ಕೊಂಚ ಡಲ್ ಆಗಿದೆ.‌ ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ಇದು ಲವ್‌ಸ್ಟೋರಿ. ನಿರ್ದೇಶಕ ಅದಕ್ಕೆ ಹೊಸ ಬಣ್ಣ ಹಚ್ಚಿದ್ದು ಇಷ್ಟವಾಗಲಿಲ್ಲವಾ ? ವಿಜಯ್-ಸಮಂತಾ ಜೋಡಿಯನ್ನು ಜನ ಮೆಚ್ಚಲಿಲ್ಲವಾ? ಉತ್ತರ ಕಷ್ಟ. ಈಗ ಎಲ್ಲವೂ ಮುಗಿದಿದೆ. ಖುಷಿ ಅಟ್ಟರ್ ಫ್ಲಾಪ್ ಲಿಸ್ಟ್‌ಗೆ ಜಮೆಯಾಗಿದೆ. ಸಿನಿಮಾ ಗೆದ್ದಿತೆಂದು ವಿಜಯ್ ನೂರು ಬಡ ರೈತ ಕುಟುಂಬಕ್ಕೆ ತಲಾ 41 ಲಕ್ಷ ಹಂಚುವುದಾಗಿ ಘೋಷಿಸಿದ್ದರು. ಈಗ ಕ್ಲೈಮಾಕ್ಸ್ ಎಡವಟ್ಟಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ ರೌಡಿ ಬಾಯ್ ಎಂದು ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Kushi ಸಿನಿಮಾ ಸಕ್ಸಸ್, ವಿಜಯ್ ದೇವರಕೊಂಡ ಟೆಂಪಲ್ ರನ್

    Kushi ಸಿನಿಮಾ ಸಕ್ಸಸ್, ವಿಜಯ್ ದೇವರಕೊಂಡ ಟೆಂಪಲ್ ರನ್

    ‘ಲೈಗರ್’ (Liger) ಸಿನಿಮಾ ಸೋಲಿನಿಂದ ಬೇಸತ್ತ ವಿಜಯ್ ದೇವರಕೊಂಡಗೆ ಈಗ ಬ್ರೇಕ್ ಸಿಕ್ಕಿದೆ. ‘ಖುಷಿ’ (Kushi Film) ಸಿನಿಮಾದ ಸಕ್ಸಸ್ ಬೆನ್ನಲ್ಲೇ ತೆಲಂಗಾಣದ ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವರ ಸನ್ನಿಧಿಗೆ ವಿಜಯ್ ದೇವರಕೊಂಡ (Vijay Devarakonda) ಭೇಟಿ ನೀಡಿದ್ದಾರೆ.

    ಸಮಂತಾ (Samantha), ವಿಜಯ್ ನಟನೆಯ ಖುಷಿ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಕೂಡ ಒಂದೊಳ್ಳೆಯ ಕಲೆಕ್ಷನ್ ಮಾಡ್ತಿದೆ. ಸೋಲಿನ ಸುಳಿಯಲ್ಲಿದ್ದ ವಿಜಯ್ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಇದೇ ಖುಷಿಯಲ್ಲಿ ತಮ್ಮ ಫ್ಯಾಮಿಲಿ ಮತ್ತು ಖುಷಿ ಟೀಮ್ ಜೊತೆ ವಿಜಯ್ ದೇವರಕೊಂಡ ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ‘ಖುಷಿ’ ಚಿತ್ರದ ಸಕ್ಸಸ್ ಜೊತೆ ಕೆಲ ದಿನಗಳ ಹಿಂದೆ ಆನಂದ್ ದೇವರಕೊಂಡ (Anand Devarakonda) ನಟನೆಯ ಬೇಬಿ (Baby) ಸಿನಿಮಾ ಕೂಡ ಬಿಗ್ ಸಕ್ಸಸ್ ಕಂಡಿದೆ. ಆನಂದ್ ಕೂಡ ವಿಜಯ್ ಜೊತೆ ಪೂಜೆಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಸ್ವಾಮಿಜೀ ಅವರನ್ನ ಭೇಟಿಯಾಗಿ ವಿಜಯ್ ಕುಟುಂಬ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ಬಿಕಿನಿ ಫೋಟೋಶೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಸೋನು ಗೌಡ

    ಅಂದಹಾಗೆ, ‘ಖುಷಿ’ ಸಿನಿಮಾ ಇದೇ ಸೆಪ್ಟೆಂಬರ್ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಿದ್ದು, ಸಮಂತಾ- ವಿಜಯ್ ಕಾಂಬೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ಲವ್, ರೊಮ್ಯಾನ್ಸ್, ಜಗಳ ಎಲ್ಲವೂ ನೋಡುಗರಿಗೆ ಕಮಾಲ್ ಮಾಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಹುಡುಗಿ ಕೈ ಯಾರದ್ದು? ಮನದನ್ನೆ ಬಗ್ಗೆ ಸುಳಿವು ಕೊಟ್ಟ ನಟ

    ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಹುಡುಗಿ ಕೈ ಯಾರದ್ದು? ಮನದನ್ನೆ ಬಗ್ಗೆ ಸುಳಿವು ಕೊಟ್ಟ ನಟ

    ಟಾಲಿವುಡ್‌ನ ರೊಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಮಹಿಳಾ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆಗುವಂತಹ ನ್ಯೂಸ್ ಕೊಟ್ಟಿದ್ದಾರೆ. ತನ್ನ ಕೈ ಹಿಡಿದಿರುವ ಮನದನ್ನೆ ಫೋಟೋ ಹಂಚಿಕೊಂಡು ಸದ್ಯದಲ್ಲೇ ಅನೌನ್ಸ್ ಆಗುತ್ತೆ ಎಂದಿದ್ದಾರೆ ವಿಜಯ್. ಈ ಮೂಲಕ ತನ್ನ ಲವ್ ಲೈಫ್ ಬಗ್ಗೆ ವಿಜಯ್ ಸುಳಿವು ನೀಡಿದ್ದಾರೆ. ಹಾಗಾದ್ರೆ ಆ ಹುಡುಗಿ (Girl) ಯಾರು?

    ವಿಜಯ್ ದೇವರಕೊಂಡ ಟಾಲಿವುಡ್‌ನ ಬೋಲ್ಡ್ ಹೀರೋ ತನಗನಿಸಿದ್ದನ್ನು ನೇರವಾಗಿ ಹೇಳುವ ನಟ. ವಿಜಯ್ ಒಪ್ಪಿಕೊಳ್ಳುವ ಸಿನಿಮಾಗಳು ಕೂಡ ಅಷ್ಟೇ ಬೋಲ್ಡ್ ಆಗಿರುತ್ತೆ. ನಿನ್ನೆ ರಾತ್ರಿ (ಆಗಸ್ಟ್ 29) ವಿಜಯ್ ದೇವರಕೊಂಡ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹುಡುಗಿಯ ಕೈ ಮೇಲೆ ತನ್ನ ಕೈ ಇಟ್ಟಿದ್ದ ಫೋಟೊವನ್ನು ಶೇರ್ ಮಾಡಿದ್ದರು. ಈ ಫೋಟೊ ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ ವಿಜಯ್ ದೇವರಕೊಂಡ ಬರೆದುಕೊಂಡ ಸಾಲುಗಳು ಅಷ್ಟೇ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಶಾರುಖ್ ‘‌ಜವಾನ್ʼ ಕಾಳಗಕ್ಕೆ ಯಶ್- ಪೃಥ್ವಿರಾಜ್ ಸುಕುಮಾರನ್ ಸಾಥ್

    ಏನೋನೋ ನಡೆಯುತ್ತಿದೆ. ಆದರೆ, ಇದು ಮಾತ್ರ ನಿಜಕ್ಕೂ ವಿಶೇಷ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಶೇರ್ ಆಗ್ತಿದ್ದಂತೆ ವಿಜಯ್, ಮದುವೆ (Wedding) ಬಗ್ಗೆ ಅನೌನ್ಸ್ ಮಾಡಬಹುದಾ? ಎಂದು ಲೆಕ್ಕಚಾರ ಹಾಕ್ತಿದ್ದಾರೆ. ಇತ್ತೀಚಿಗೆ ಸಮಂತಾ ಜೊತೆ ಕೂಡ ವಿಜಯ್ ಒಡನಾಟ ಚೆನ್ನಾಗಿರುವ ಕಾರಣ, ವಿಜಯ್ ಕೈ ಮೇಲಿರುವ ಆ ಕೈ ರಶ್ಮಿಕಾ ಮಂದಣ್ಣ ಅವರದ್ದಾ? (Rashmika Mandanna) ಅಥವಾ ಸಮಂತಾನಾ (Samantha) ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಎಲ್ಲದಕ್ಕೂ ವಿಜಯ್ ದೇವರಕೊಂಡ ಉತ್ತರ ನೀಡುವವರೆಗೂ ಕಾಯಬೇಕಿದೆ.

    ಅಸಲಿಗೆ ಇದು, ವಿಜಯ್ ಮದುವೆ ಮ್ಯಾಟರ್ ಅಲ್ಲ, ‘ಗೀತಾ ಗೋವಿಂದಂ’ (Geetha Govindam) ನಿರ್ದೇಶಕ, ರಶ್ಮಿಕಾ ಜೊತೆಗಿನ ಹೊಸ ಸಿನಿಮಾದ ಅನೌನ್ಸ್‌ಮೆಂಟ್ ವಿಚಾರ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ ನಟರನ್ನ ಫ್ಲಾಪ್‌ ಹೀರೋಸ್ ಎಂದು ಕರೆದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ವಿಜಯ್

    ಆ ನಟರನ್ನ ಫ್ಲಾಪ್‌ ಹೀರೋಸ್ ಎಂದು ಕರೆದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ವಿಜಯ್

    ವಿಜಯ್ ದೇವರಕೊಂಡ (Vijay Devarakonda) ಅಕ್ಷರಶಃ ಹೊಂಡಕ್ಕೆ ಬಿದ್ದಿದ್ದಾರೆ. ಖುಷಿ (Kushi) ಸಿನಿಮಾ ಇನ್ನೆನು ಬಿಡುಗಡೆಯಾಗಲಿದೆ. ಈ ಹೊತ್ತಲ್ಲಿ ರಜನಿ, ದಳಪತಿ ವಿಜಯ್ ಹಾಗೂ ಚಿರು ಭಕ್ತಗಣವನ್ನು ಕೆರಳಿಸಿದ್ದಾರೆ. ಫ್ಲಾಪ್ ಹೀರೋಸ್ ಎಂದು ಇನ್‌ಡೈರೆಕ್ಟಾಗಿ ಈ ಸ್ಟಾರ್‌ಗಳನ್ನು ಕರೆದಿದ್ದಾರೆ. ಏನಿದು ಸುದ್ದಿ? ಏನಾಗಲಿದೆ ದೇವರಕೊಂಡ ಖುಷಿ ಸಿನಿಮಾ? ನೋಡಿ.

    ಸುಮ್ಮನಿರಲಾದೆ ಇರುವೆ ಬಿಟ್ಟುಕೊಂಡರು ಅನ್ನೋದು ಇದಕ್ಕೇನೆ. ವಿಜಯ್ ಹಾಗೂ ಸಮಂತಾ ಅಭಿನಯದ ಖುಷಿ ಬಿಡುಗಡೆ ಹೊಸ್ತಿನಲ್ಲಿದೆ. ಸಿನಿಮಾ ಪ್ರಚಾರ ಮಾಡೋದು ಬಿಟ್ಟು. ಇನ್ಯಾರೋ ಹೀರೋಗಳನ್ನು ಎಳೆದು ತಂದರೆ ಅವರವರ ಫ್ಯಾನ್ಸ್ ಸುಮ್ಮನಿರುತ್ತಾರಾ? ಈ ಸ್ಟಾರ್‌ಗಳೆಲ್ಲ ಫ್ಲಾಪ್ ಸಿನಿಮಾ ಕೊಟ್ಟರೂ ನಾವು ಮುಚ್ಚಿಕೊಂಡು ನೋಡಬೇಕು ಎಂದಿರುವುದು ರಜನಿ, ವಿಜಯ್ ಹಾಗೂ ಚಿರು ಫ್ಯಾನ್ಸ್‌ಗೆ ಖಾರ ಕಲಿಸಿದಂತಾಗಿದೆ. ಏನಂದರು ವಿಜಯ್ ದೇವರಕೊಂಡ?

    ರಜನಿ(Rajanikanth), ವಿಜಯ್ (Thalapathy Vijay) ಹಾಗೂ ಚಿರಂಜೀವಿ (Megastar Chiranjeevi) ಹಲವಾರು ಫ್ಲಾಪ್ ಕೊಟ್ಟಿದ್ದಾರೆ. ಆರಾರು ಸಿನಿಮಾ ಸೋತರೂ ಜೈಲರ್ ರೀತಿ ಮತ್ತೆ ಹಿಟ್ ಕೊಟ್ಟು ಎದ್ದು ಬರುತ್ತಾರೆ. ಸೋಲು ಅವರನ್ನು ಕಂಗೆಡಿಸುವುದಿಲ್ಲ. ಅವರು ಸೂಪರ್‌ಸ್ಟಾರ್ಸ್. ಅವರ ಸಿನಿಮಾಗಳನ್ನು ಮುಚ್ಚಿಕೊಂಡು ನೋಡಬೇಕು.‌ ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

    ವಿಜಯ್ ಸತ್ಯ ಹೇಳಿದ್ದಾರೆ. ಆದರದನ್ನು ವಿವರಿಸಿದ ರೀತಿ ಫ್ಯಾನ್ಸ್ ಅರಗಿಸಿಕೊಂಡಿಲ್ಲ. ರಜನಿ, ವಿಜಯ್, ಚಿರು ಭಕ್ತಗಣ ಈ ಕಾರಣಕ್ಕೆ ಕೊಂಡ ವಿರುದ್ಧ ಕೆಂಡ ಕಾರುತ್ತಿದೆ. ಯಾವಾಗ ಫ್ಯಾನ್ಸ್ ಆಕ್ರೋಶ ಹೆಚ್ಚಾಯಿತೊ. ವಿಜಯ್ ಕ್ಷಮೆ ಕೇಳಿಲ್ಲ. ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ ಎಂದು ಗಹಗಹಿಸಿದ್ದಾರೆ. ಖುಷಿ ಚಿತ್ರಕ್ಕೆ ಗತಿ ಕಾಣಿಸುತ್ತೇವೆ ತೊಡೆ ತಟ್ಟಿದೆ ಮೂರೂ ಸ್ಟಾರ್ಸ್ ಬಳಗ. ಲೈಗರ್ ಸೋಲು ಪಾಠ ಕಲಿಸಿಲ್ಲ ಈ ವ್ಯಕ್ತಿಗೆ. ಎಣಿಸಿ ಎಣಿಸಿ ಮೊಂಬತ್ತಿ ಇಡಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಪ್ಪು ಸೀರೆಯುಟ್ಟು ಮಿಂಚಿದ ನಟಿ ಸಮಂತಾ

    ಕಪ್ಪು ಸೀರೆಯುಟ್ಟು ಮಿಂಚಿದ ನಟಿ ಸಮಂತಾ

    ಸೌತ್ ಬ್ಯೂಟಿ ಸಮಂತಾ (Samantha) ಈಗ ನ್ಯೂಯಾರ್ಕ್‌ಲ್ಲಿದ್ದಾರೆ. 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಸಮಂತಾ ಭಾಗಿಯಾಗುವ ಮೂಲಕ ಸುದ್ದಿಯಾದರು. ಸದ್ಯ ದೂರ ದೇಶದಲ್ಲಿ ಸ್ಯಾಮ್ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬ್ಯೂಟಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದೀಗ ಶೇರ್ ಮಾಡಿರುವ ನಯಾ ಫೋಟೋಶೂಟ್‌ನಲ್ಲಿ ಸಮಂತಾ ಬಳುಕುವ ಬಳ್ಳಿಯಂತೆ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಸೀರೆಯುಟ್ಟು ಚಸ್ಮಾ ಧರಿಸಿ ಸ್ಟೈಲ್ ಆಗಿ ನ್ಯೂಯಾರ್ಕ್ ಕಾರ್ಯಕ್ರಮವೊಂದರಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. 18ರ ಹುಡುಗಿಯರನ್ನೇ ಸೆಡ್ಡು ಹೊಡೆಯೋ ಹಾಗೆ ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ತಮಿಳಿನ ‘ಜಂಟಲ್‌ಮ್ಯಾನ್ 2’ನಲ್ಲಿ ಸುಧಾರಾಣಿ

    ‘ಖುಷಿ’ (Kushi) ಸಿನಿಮಾದ ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ನ್ಯೂಯಾರ್ಕ್‌ಗೆ ಸಮಂತಾ ಹಾರಿದ್ದರು. ಈಗ ನ್ಯೂಯಾರ್ಕ್ ಅಭಿಮಾನಿಗಳ ಜೊತೆ ಸ್ಯಾಮ್ ಸಮಯ ಕಳೆದಿದ್ದಾರೆ. ಅಲ್ಲಿಯೂ ಕೂಡ ಪುಷ್ಪ ಚಿತ್ರದ ಸೂಪರ್ ಹಿಟ್ ಹಾಡಿಗೆ ನಟಿ ಹೆಜ್ಜೆ ಹಾಕಿದ್ದಾರೆ.

    ವಿಜಯ್ ದೇವರಕೊಂಡ (Vijay Devarakonda)- ಸಮಂತಾ ನಟನೆಯ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ತೆರೆಗೆ ಬರುತ್ತಿದೆ. ಲವ್ ಮಾಡಿ ಮನೆಯವರ ವಿರೋದಧ ನಡುವೆ ಮದುವೆಯಾಗುವ ಜೋಡಿಯ ಸುಂದರ ಕಥೆಯನ್ನ ಖುಷಿ ಸಿನಿಮಾದಲ್ಲಿ ತೋರಿಸಲಾಗಿದೆ. ರಿಲೀಸ್ ನಂತರ ಅದೆಷ್ಟರ ಮಟ್ಟಿಗೆ ಚಿತ್ರ ಮೋಡಿ ಮಾಡುತ್ತೆ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]