Tag: Kuruba Society

  • ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗೋದಿಲ್ಲ: ಈಶ್ವರಪ್ಪ

    ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗೋದಿಲ್ಲ: ಈಶ್ವರಪ್ಪ

    – ಹೋರಾಟದ ಮೂಲಕ ಎಸ್‍ಟಿ ಹಕ್ಕು ಪಡೆಯೋಣ

    ಹಾವೇರಿ: ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗೋದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯ, ಕುರುಬರ ಎಸ್‍ಟಿ ಮೀಸಲಾತಿಯ ರಾಜ್ಯಮಟ್ಟದ ಮಹಿಳಾ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯೋಣ. ಪಕ್ಷವನ್ನು ಬಿಟ್ಟು ಕುರುಬರು ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಒಂದಾಗಿದ್ದೇವೆ ಎಂದರು.

    ಕುರುಬರ ಎಸ್‍ಟಿ ಮೀಸಲಾತಿ ಹೋರಾಟಕ್ಕೆ ಭಗವಂತ ಯಶಸ್ಸು ನೀಡುತ್ತಾನೆ. ಸ್ವಾಮೀಜಿಗಳ ನೇತೃತ್ವದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡೋಣ. ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯೋಣ ಎಂದು ತಿಳಿಸಿದರು.