Tag: kuruba

  • ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಬೆಂಗಳೂರು: ಕುರುಬ ಸಮುದಾಯವನ್ನು (Kuruba Community) ಎಸ್‌ಟಿ ಪಟ್ಟಿಗೆ (ST List) ಸೇರಿಸುವ ವಿಚಾರ ಜಾತಿ ಜಟಾಪಟಿಗೆ ವೇದಿಕೆ ಆಗಿದೆ. ಎಸ್‌ಟಿಗೆ ಸೇರ್ಪಡೆ ಮಾಡುವ ಅಂತಿಮ ತೀರ್ಮಾನಕ್ಕೂ ಮುನ್ನವೇ ವಾಲ್ಮೀಕಿ ಸಮುದಾಯ (Valmiki Community) ಮಹತ್ವದ ಸಭೆ ಕರೆದಿದೆ.

    ಸೆಪ್ಟಂಬರ್ 18ರಂದು ಹರಿಹರ ವಾಲ್ಮೀಕಿ ಗುರುಪೀಠದಲ್ಲಿ ಸಭೆ ಕರೆಯಲಾಗಿದ್ದು, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮೂರು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದು, ಸಭೆಗೆ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿ, ಮಾಜಿ ಎಂಎಲ್‌ಸಿ, ಧರ್ಮದರ್ಶಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರಿಗೆ ಸಭೆಗೆ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ: ಸುನಿಲ್ ಕುಮಾರ್ ಕಿಡಿ

     

    ಸಭೆಯ ಅಜೆಂಡಾ ಏನು?
    ವಾಲ್ಮೀಕಿ ನಾಯಕ ಜಾತಿಗೆ ಇತರೆ ಮೇಲ್ವರ್ಗದ ಜಾತಿಗಳನ್ನು ಸೇರ್ಪಡೆ ಮಾಡುತ್ತಿರುವ ಸರ್ಕಾರದ ನಡೆ ಬಗ್ಗೆ ತೀರ್ಮಾನ.

    ನಾಯಕ ತಳವಾರ ಹೆಸರಿನಲ್ಲಿ ಇತರೆ ಜಾತಿಯ ತಳವಾರರು ತೆಗೆದುಕೊಳ್ಳುತ್ತಿರುವ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರಕ್ಕೆ ಒತ್ತಾಯ.

    ರಾಜ್ಯ ಸರ್ಕಾರ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಜಾತಿ ಕಾಲಂ ನಲ್ಲಿ ಜಾತಿ ಹೆಸರನ್ನು ನಮೂದಿಸುವ ಕುರಿತು ಚರ್ಚೆ.

  • ದುರಹಂಕಾರಿ ಅಂದ್ರೂ ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ: ಸಿದ್ದರಾಮಯ್ಯ

    ದುರಹಂಕಾರಿ ಅಂದ್ರೂ ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ: ಸಿದ್ದರಾಮಯ್ಯ

    – ಮುಂದುವರಿದ ಜಾತಿ ಹೆಸರಿನಲ್ಲಿ ಸಮಾವೇಶ ಮಾಡಿದರೆ ಅದು ಜಾತೀಯತೆ
    – ಹಿಂದುಳಿದ ವರ್ಗದವರು ಸಮಾವೇಶ ಮಾಡಿದರೆ ಅದು ಜಾತೀಯತೆ ಆಗಲ್ಲ

    ಬೆಂಗಳೂರು: ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಶ್ರೀ ಕಾಗಿನೆಲೆ (Kaginele Mutt) ಮಹಾಸಂಸ್ಥಾನ ಕನಕಗುರುಪೀಠ, ಶಾಖಾಮಠ, ಕೇತೋಹಳ್ಳಿ ಬೆಂಗಳೂರಿನ ಭಕ್ತ ಭಂಡಾರದ ಕುಟೀರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯಾವಂತರಾದರೆ ಸ್ವಾಭಿಮಾನ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

    ಮೇಲ್ವರ್ಗದ ಬಡವ ಬಂದರೆ ಏನು ಸ್ವಾಮಿ ಎನ್ನುತ್ತಾರೆ. ದಲಿತನೊಬ್ಬ (Dalits) ವಿದ್ಯಾವಂತ ಶ್ರೀಮಂತ ಬಂದರೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ನನ್ನನ್ನು ನೋಡಿದಾಗ ಕೆಲವರು ಸಿದ್ದರಾಮಯ್ಯಗೆ ದುರಹಂಕಾರ ಎನ್ನುತ್ತಾರೆ. ಆದರೆ ನಾನು ಸ್ವಾಭಿಮಾನಿಯೇ ಹೊರತು ದುರಹಂಕಾರಿ ಅಲ್ಲ. ನನ್ನನ್ನ ದುರಹಂಕಾರಿ ಅಂದರೆ ಕೇರ್ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Heart Attack | ರಾಜ್ಯದಲ್ಲಿಂದು ಐವರು ಬಲಿ – ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ರಾಜಣ್ಣ ಸೂಚನೆ

    ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ. ಅವರು ದುರಹಂಕಾರಿ ಅಂದರು ಐ ಡೋಂಟ್ ಕೇರ್. ನಿಮ್ಮನ್ನು ದುರಹಂಕಾರಿ ಅಂದರೂ ಸ್ವಾಭಿಮಾನಿಗಳಾಗಿ ಬದುಕಿ ಎಂದು ಸಲಹೆ ನೀಡಿದರು.

    ಬಂಗಾರಪ್ಪ ಅವರನ್ನು ಆಹ್ವಾನಿಸಲು ಹೋದಾಗ 25 ಲಕ್ಷ ರೂ. ದುಡ್ಡು ಕೊಡಲು ಬಂದರು. ಆಗ ಕುರುಬರು (Kurubas) ಅಷ್ಟು ಬಡವರಿಲ್ಲ ಅಂತ ವಾಪಸ್‌ ನೀಡಿದೆ. ಹರಿ‌ಕೋಡೆ ಅವರು ನಾನು ಊಟ ಹಾಕಿಸುತ್ತೇನೆ ಎಂದಿದ್ದರು. ಅವರಿಗೂ ಬೇಡ ಎಂದೆವು. 5-6 ಲಕ್ಷ ಜನ ಸೇರಿದ ಕಾರ್ಯಕ್ರಮದಲ್ಲಿ ಯಾರಿಗೆ ಮಠ ಇಲ್ವೋ ಅವರಿಗೆಲ್ಲ ಈ ಮಠ ಅಂತ ಘೋಷಣೆ ಮಾಡಿದೆವು ಎಂದು ಹಳೆಯ ನೆನಪು ಹಂಚಿಕೊಂಡರು. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಮಠಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಠಗಳು ಆಗದಿದ್ದರೆ ಶಿಕ್ಷಣ, ಆರೋಗ್ಯ ಸಂಘಟನೆ ಆಗುವುದಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿಯನ್ನ ಗುರುತಿಸಬೇಕು, ಜಾತಿಯನ್ನ ನಾಶ ಮಾಡಬೇಕು ಎಂದು ಕುವೆಂಪು ಹೇಳಿದರು. ಎಲ್ಲರ ಸರ್ವೋದಯ ಆಗಬೇಕು ಎಂದು ಮಹಾತ್ಮ ಗಾಂಧೀಜಿ ಕರೆ ನೀಡಿದ್ದರು. ಕುವೆಂಪು ಅವರು ಸಮಪಾಲು, ಸಮಬಾಳು ಆಗ್ಬೇಕು ಎಂದರು. ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆ ಆಗಬೇಕು ಎಂದು ತಿಳಿಸಿದರು.

     

    ಜಾತಿಗೊಂದು ಮಠ ಬೇಡ ಎಂದು ನಾನು ಹೇಳುವುದಿಲ್ಲ. ಜಾತಿ ಎಂಬುದು ವಾಸ್ತವಿಕ, ಮುಂದುವರಿದ ಜಾತಿ (Caste) ಹೆಸರಿನಲ್ಲಿ ಸಮಾವೇಶ ಮಾಡಿದರೆ ಅದು ಜಾತೀಯತೆ ಆಗುತ್ತದೆ. ಹಿಂದುಳಿದ ವರ್ಗದವರು ಜಾತಿ ಸಮಾವೇಶ ಮಾಡಿದರೆ ಅದು ಜಾತೀಯತೆ ಆಗುವುದಿಲ್ಲ. ಎಲ್ಲರೂ ವಿದ್ಯಾವಂತರಾಗಿ, ಸಂಘಟಿತರಾಗಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ಶೋಷಿತ ವರ್ಗದ ಜನ ಇದನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಸಮ ಸಮಾಜ ಆಗುವುದು ಕಷ್ಟ. ನಾವು ಕುರುಬರನ್ನೇ ಅಭಿವೃದ್ಧಿ ಪಡಿಸಲು ಈ ಮಠ ಕಟ್ಟಿಲ್ಲ. ಅನ್ಯಾಯವಾಗಿರುವವರಿಗೆ ಈ ಮಠ ಕಟ್ಟಿದ್ದೇವೆ. ಎಲ್ಲರೂ ಮುಖ್ಯ ವಾಹಿನಿಗೆ ಬರಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.

    ಬೇರೆಯವರು ಮಾಡಿರುವ ಮಠ ತಪ್ಪು ಎಂದು ನಾನು ಹೇಳುವುದಿಲ್ಲ. ಸಿದ್ದರಾಮಯ್ಯ ಸಮುದಾಯಕ್ಕೆ ಏನು ಮಾಡಿದ್ದಾನೆ ಎಂದು ಕೆಲವರು ಕೇಳುತ್ತಾರೆ. ಕೇಳುವುದು ಒಳ್ಳೆಯದು ಯಾವತ್ತು ಪ್ರಶ್ನೆ ಮಾಡಿ ಒಪ್ಪಿಕೊಳ್ಳಬೇಕು ಎಂದು ಸಮಾಜಕ್ಕಾಗಿ ನಾನು ಏನೇನು ಮಾಡಿದ್ದೇನೆ ಎಂಬುದನ್ನು ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ವಿವರಿಸಿದರು.

  • ಸಿದ್ದುಗೆ `ಅಹಿಂದ’ ಪದದ ಅರ್ಥವೇ ಗೊತ್ತಿಲ್ಲ – ಕಣ್ಣೀರಿಟ್ಟ ಗೋಪಿಕೃಷ್ಣ ದಂಪತಿ

    ಸಿದ್ದುಗೆ `ಅಹಿಂದ’ ಪದದ ಅರ್ಥವೇ ಗೊತ್ತಿಲ್ಲ – ಕಣ್ಣೀರಿಟ್ಟ ಗೋಪಿಕೃಷ್ಣ ದಂಪತಿ

    ಚಿಕ್ಕಮಗಳೂರು: ಗೋಪಿಕೃಷ್ಣಗೆ (Gopikrishna) ತರೀಕೆರೆಯ (Tarikere) ಕಾಂಗ್ರೆಸ್ (Congress) ಟಿಕೆಟ್ ತಪ್ಪಿದ್ದು, ಮನನೊಂದ ದಂಪತಿ ನೂರಾರು ಅಭಿಮಾನಿಗಳ ಮಧ್ಯೆಯೇ ಕಣ್ಣೀರಿಟ್ಟಿದ್ದಾರೆ.

    ತರೀಕೆರೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಟಿಕೆಟ್‍ಗಾಗಿ 14 ಜನ ಹೋರಾಡುತ್ತಿದ್ದರು. ಅಂತಿಮವಾಗಿ ಗೋಪಿಕೃಷ್ಣ ಹಾಗೂ ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಇದನ್ನೂ ಓದಿ: ಜಗದೀಶ್‌ ಶೆಟ್ಟರ್‌ಗೆ ಬಿಜೆಪಿ ನೀಡಿತ್ತು 2 ಬಿಗ್‌ ಆಫರ್‌

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಗೋಪಿಕೃಷ್ಣಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ರಾಜ್ಯದಲ್ಲಿ ಮಡಿವಾಳದ ಸಮುದಾಯದವರಿಗೆ ಎಲ್ಲೂ ಟಿಕೆಟ್ ನೀಡಿಲ್ಲ. ಅವರಿಗೆ ಟಿಕೆಟ್ ಕೊಟ್ಟೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ಕೈ ಟಿಕೆಟ್ ತಪ್ಪಿದ್ದು, ದಂಪತಿ ನೂರಾರು ಅಭಿಮಾನಿಗಳ ಮಧ್ಯೆ ಕಣ್ಣೀರಿಟ್ಟಿದ್ದಾರೆ.

    ಗೋಪಿಕೃಷ್ಣಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಿಟ್ಟಿಗೆದ್ದ ಅಭಿಮಾನಿಗಳು ಆಟೋಗೆ ಬೆಂಕಿ ಹಚ್ಚಿದ್ದಾರೆ. ಸಿದ್ದರಾಮಯ್ಯನವರ (Siddaramaiah) ಅಹಿಂದ (Ahinda) ಹೆಸರಿಗೆ ಮಾತ್ರ. ಅವರಿಗೆ ಅಹಿಂದ ಪದದ ಅರ್ಥವೇ ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಸದ್ಯ ಟಿಕೆಟ್ ಸಿಕ್ಕಿರುವ ಮಾಜಿ ಶಾಸಕ ಶ್ರೀನಿವಾಸ್ ಗೆಲುವಿನ ಹಾದಿಯೂ ಸುಲಭವಾಗಿಲ್ಲ. ತರೀಕೆರೆಯಲ್ಲಿ ನಿರ್ಣಾಯಕ ಪಾತ್ರವಿರುವ ಕುರುಬ ಸಮುದಾಯ ಶ್ರೀನಿವಾಸ್‍ಗೆ ವಿರೋಧವಿದೆ. ಶ್ರೀನಿವಾಸ್ ಕುರುಬ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ಕಾರಣದಿಂದ ಕುರುಬ (Kuruba) ಸಮುದಾಯ ಅವರ ವಿರುದ್ಧ ತಿರುಗಿದೆ. ಅವರಿಗೆ ಟಿಕೆಟ್ ಕೈತಪ್ಪಿಸಬೇಕೆಂದು ಕುರುಬ ಸಮುದಾಯದ ಪ್ರಮುಖ ನಾಯಕರು ಸಹ ಹೋರಾಡಿದ್ದರು. ಶ್ರೀನಿವಾಸ್‍ಗೆ ಟಿಕೆಟ್ ನೀಡಿದರೆ ಕುರುಬ ಸಮುದಾಯದಿಂದ ಏಳೆಂಟು ಅಭ್ಯರ್ಥಿಗಳು ಚುನಾವಣೆಗೆ ನಿಲ್ಲುತ್ತೇವೆಂದು ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಟಿಕೆಟ್ ಅವರಿಗೆ ಸಿಕ್ಕಿರುವುದು ಸಮುದಾಯದವನ್ನ ಸಿಟ್ಟಾಗಿಸಿದೆ.

    ಶ್ರೀನಿವಾಸ್ ವಿರುದ್ಧ ಇರುವ ಕುರುಬ ಸಮುದಾಯದ ನಾಯಕರು ಗೋಪಿಕೃಷ್ಣ ಜೊತೆಗೆ ನಿಂತಿದ್ದಾರೆ. ಗೋಪಿಕೃಷ್ಣ, ಅಭಿಮಾನಿಗಳು ಹಾಗೂ ಎಲ್ಲಾ ಸಮುದಾಯದ ಮುಖಂಡರ ಜೊತೆ ಸಭೆ ಬಳಿಕ ಮುಂದಿನ ರಾಜಕೀಯದ ನಡೆ ನಿರ್ಧರಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಅವರು ಪಕ್ಷೇತರವಾಗಿ ನಿಲ್ಲುವ ಸೂಚನೆ ನೀಡಿದ್ದಾರೆ. ಗೋಪಿಕೃಷ್ಣ ಸ್ವಂತಂತ್ರವಾಗಿ ಸ್ಪರ್ಧಿಸಿದರೆ ಶ್ರೀನಿವಾಸ್ ಗೆಲುವಿಗೆ ಕಷ್ಟವಾಗುವ ಸೂಚನೆ ಕೂಡ ಇದೆ. ಈ ಇಬ್ಬರ ನಡುವಿನ ತಿಕ್ಕಾಟ ಮೂರನೇಯವನಿಗೆ ಲಾಭ ಎಂಬಂತೆ ನಮಗೆ ಲಾಭವಾಗಬಹುದು ಎಂದು ಬಿಜೆಪಿಗರು ಅಂದಾಜಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್‌ ಕಡಿಮೆ ಮಾಡಿದ್ರೆ ಇಂದಿರಾ ಕ್ಯಾಂಟೀನ್‌ ಉಳಿಯುತ್ತಿತ್ತು – ಸಿದ್ದರಾಮಯ್ಯ ಟಾಂಗ್‌

  • ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂಬ ಆಸೆ ನನಗೂ ಇದೆ: ಸಿದ್ದು ಹಾಡಿ ಹೊಗಳಿದ ಶ್ರೀರಾಮುಲು

    ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂಬ ಆಸೆ ನನಗೂ ಇದೆ: ಸಿದ್ದು ಹಾಡಿ ಹೊಗಳಿದ ಶ್ರೀರಾಮುಲು

    ಬಳ್ಳಾರಿ: ಸದಾ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವ ಸಚಿವ ಶ್ರೀರಾಮುಲು ಅವರು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಅನ್ನೋ ಆಸೆ ನನಗೂ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಗಣಿ ನಾಡು ಬಳ್ಳಾರಿಯಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕುರುಬರ ಹಾಸ್ಟೆಲ್ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಕುರುಬ ಸಮುದಾಯ ಹಾಗೂ ಸಿದ್ದರಾಮಯ್ಯ ವಿರೋಧಿಯಲ್ಲ. ಅವಕಾಶ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ. ನಾನು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಸಿದ್ದರಾಮಯ್ಯ ಕೂಡಾ ಒಪ್ಪುತ್ತಾರೆ. ದೊಡ್ಡ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ತಂತ್ರಗಳನ್ನು ಮಾಡಲೇಬೇಕು. ಮುಂದೊಂದು ದಿನ ನಾನು ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಬರುತ್ತೇವೆ. ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನವನ್ನು ನಾನು ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Bigg Boss-ರಣರಂಗವಾದ ಬಿಗ್ ಬಾಸ್ ಮನೆ : ರೊಟ್ಟಿ ವಿಚಾರಕ್ಕೆ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ

    ನಾನು ಮತ್ತು ಸಿದ್ದರಾಮಯ್ಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೆವು. ನಾವಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಹೇಗೆ ಎನ್ನುವುದನ್ನು ಮುಂದೊಂದು ದಿನ ಹೇಳುವೆ. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ದರು ಎನ್ನುವುದನ್ನು ಹೋಗಿ ಅವರನ್ನೇ ಕೇಳಿ. ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು ಸಹಕಾರ ನೀಡಿರುವುದಾಗಿ ತಿಳಿಸಿದ್ದಾರೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡುವುದಕ್ಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ. ಒಳಗೊಳಗೆ ನಾವೂ ಎನೋ ಮಾಡಿಕೊಳ್ಳುತ್ತೇವೆ. ಅದೆಲ್ಲಾ ನಿಮಗೆ ಗೊತ್ತಾಗಲ್ಲ ಎಂದಿದ್ದಾರೆ.

    ನಾವಿಬ್ಬರೂ ರಾಜಕಾರಣದಲ್ಲಿ ಇರಬೇಕು. ನಾವಿಬ್ಬರೂ ವಿಧಾನಸೌಧದ ಒಳಗೆ ಇರಬೇಕು. ಸಿದ್ದರಾಮಯ್ಯಗೆ ಭಗವಂತ ಆರ್ಶಿವಾದ ಮಾಡಿದರೆ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಹಿಂದುಳಿದ ವರ್ಗದಿಂದ ಅವಕಾಶ ಸಿಕ್ಕರೇ ನಾನು ಮುಖ್ಯಮಂತ್ರಿ ಆಗುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಕುರ್ಚಿ ಎರುವ ಆಸೆಯನ್ನು ಶ್ರೀರಾಮುಲು ಹೊರಹಾಕಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ತಲುಪಿದ ಚೀನಾದ ಸರ್ವೇಕ್ಷಣಾ ಹಡಗು – ಈ ನೌಕೆಯ ವಿಶೇಷತೆ ಏನು?

    Live Tv
    [brid partner=56869869 player=32851 video=960834 autoplay=true]

  • ಕುರುಬ ಜನಾಂಗದವರು ಜೆಡಿಎಸ್ ಸೀಲ್‍ಗೆ ಸೇರುವುದಿಲ್ಲ: ವರ್ತೂರು ಪ್ರಕಾಶ್

    ಕುರುಬ ಜನಾಂಗದವರು ಜೆಡಿಎಸ್ ಸೀಲ್‍ಗೆ ಸೇರುವುದಿಲ್ಲ: ವರ್ತೂರು ಪ್ರಕಾಶ್

    ಮಂಡ್ಯ: ಕುರುಬ ಜನಾಂಗದವರು ಜೆಡಿಎಸ್ ಸೀಲ್‍ಗೆ ಸೇರುವುದಿಲ್ಲ, ನನ್ನ ಕತ್ತು ಕೊಯ್ದರು ನಾನು ಜೆಡಿಎಸ್ ಪರ ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೂಗನಕೊಪ್ಪಲು ಗ್ರಾಮದಲ್ಲಿ ನಡೆದ ಶ್ರೀ ಕನಕ ಸಮುದಾಯ ಭವನದ ಶಂಕು ಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೂ ಜೆಡಿಎಸ್ ಪಕ್ಷಕ್ಕೂ ಆಗಲ್ಲ. ನಾನು ಯಾವ ಪಕ್ಷದವನು ಅಲ್ಲ. ಇಂಡಿಪೆಂಡೆಂಟ್ ನಾನು, ನಾನು ಯಾರಿಗೂ ಕೇರ್ ಮಾಡಲ್ಲ. ನಾನು ನನ್ನ ಸಮಾಜಕ್ಕೆ ಮಾತ್ರ ಬೆಲೆ ಕೊಡುವುದು. ನನ್ನ ಅಭಿಮಾನಿಗಳು ಮಳವಳ್ಳಿಯಲ್ಲಿ ಸಾವಿರಾರು ಜನ ಇದ್ದಾರೆ. ಅವರೆಲ್ಲರೂ ಕಾಂಗ್ರೆಸ್‍ನವರೇ, ಅವರನ್ನು ನಾನು ಅನ್ನದಾನಿ ಬಳಿ ಹೋಗಿ ಎಂದಿದ್ದೆ. ಜೆಡಿಎಸ್ ಮುಖ ನೋಡಿಕೊಂಡು ಹೇಳಿಲ್ಲ, ಅನ್ನದಾನಿ ಮುಖ ನೋಡಿಕೊಂಡು ಹೇಳಿದ್ದು. ಜೆಡಿಎಸ್ ಪಕ್ಷಕ್ಕೆ ನನ್ನ ಕತ್ತು ಕೂಯ್ದರು ಹೇಳುವುದಿಲ್ಲ. ಅನ್ನದಾನಿ ಒಳ್ಳೆಯವನು ನನ್ನ ಒಳ್ಳೆಯ ಸ್ನೇಹಿತ ಎಂಬ ಕಾರಣಕ್ಕೆ ನಾನು ಹೇಳಿದ್ದೇನೆ ಅಷ್ಟೇ ಎಂದರು.

    ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನುವುದು ಮುಖ್ಯವಲ್ಲ, ಸಮಾಜದ ಪರ ಯಾರು ಇರುತ್ತಾರೋ ಅವರ ಪರ ನಾವು ಇರಬೇಕು. ಸಿದ್ದರಾಮಯ್ಯ ಅವರನ್ನು ಈ ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಮಳವಳ್ಳಿಗೆ ಬರಲು ಇಷ್ಟ. ಆದರೆ ಮಳವಳ್ಳಿ ಬರದೆ ಇರದ ಹಾಗೆ ಮಾಡಿರುವುದೇ ಮಳವಳ್ಳಿ ಅವರೇ ಎಂದು ಸಿದ್ದರಾಮಯ್ಯ ಆಪ್ತ ಶಿವಣ್ಣ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:  ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ

    ಶಿವಣ್ಣನನ್ನು ಮನೆಯಿಂದ ಹೊರಗಡೆ ಹಾಕುವವರೆಗೆ ನಮ್ಮಪ್ಪರಾಣೆ ಸಿದ್ದರಾಮಯ್ಯ ಉದ್ಧಾರ ಆಗುವುದಿಲ್ಲ. ಸಿದ್ದರಾಮಯ್ಯ ಅವನು ಹೇಳಿದ ಹಾಗೆ ಕೇಳುತ್ತಾರೆ. ಅವನು ಹೇಳಿದ ಕಾರಣ ಸಿದ್ದರಾಮಯ್ಯ ಇಲ್ಲಿಗೆ ಬಂದಿಲ್ಲ. ಆತ ನಮ್ಮ ಜನಾಂಗದವರಿಗೆ ಸಹಾಯ ಮಾಡಿದರೆ, ನಾನು ಏಕೆ ಅನ್ನದಾನಿ ಬಗ್ಗೆ ಮಾತನಾಡುತ್ತಿದ್ದೆ ಎಂದರು. ಇದನ್ನೂ ಓದಿ: ಬೆಳಗಾವಿ ಲೋಕಸಭೆಯಿಂದ ನನ್ನ ಸ್ಪರ್ಧೆ ನಿಶ್ಚಿತ : ಸತೀಶ್ ಜಾರಕಿಹೊಳಿ

    ಇನ್ನೂ ಬಂಡಯ್ಯಪ್ಪ ಕಾಶಂಪೂರ್ ಕುರಿತು ಮಾತನಾಡುವ ವೇಳೆ ವರ್ತೂರು ಪ್ರಕಾಶ್ ಹಾಸ್ಯ ಚಟಾಕಿ ಹಾರಿಸಿದರು. ಕಾಶಂಪೂರ್ ಬೀದರ್ ಜಿಲ್ಲೆಯವರು ಆರ್ಥಿಕವಾಗಿ ಚೆನ್ನಾಗಿ ಇದ್ದಾರೆ. ಅವರದ್ದು ಎಣ್ಣೆಯ ಫ್ಯಾಕ್ಟರಿ ಇದೆ, ಬಾಟಲು ತಯಾರು ಮಾಡುತ್ತಾರೆ. ಕನಕ ಭವನ ನಿರ್ಮಾಣಕ್ಕೆ ಹಣ ಕೊಡುತ್ತಾರೆ. ಅನ್ನದಾನಿ ಅವನನ್ನು ಬಿಡಬೇಡ ಎಂದು ಕಾಲೆಳೆದರು.

  • ಸಿಎಂ ಯಡಿಯೂರಪ್ಪಗೆ ಅಷ್ಟ ಸವಾಲು – ಆತುರದ ನಿರ್ಣಯ ಬೇಡ ಎಂದ ಹೈಕಮಾಂಡ್

    ಸಿಎಂ ಯಡಿಯೂರಪ್ಪಗೆ ಅಷ್ಟ ಸವಾಲು – ಆತುರದ ನಿರ್ಣಯ ಬೇಡ ಎಂದ ಹೈಕಮಾಂಡ್

    ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ, ಸಂಪುಟ ಬಿಕ್ಕಟ್ಟು, ಪಕ್ಷದೊಳಗಿನ ವಿರೋಧಿಗಳ ರಣತಂತ್ರಗಳಿಗೆ ಹೈರಾಣಾಗಿರುವ ಸಿಎಂ ಯಡಿಯೂರಪ್ಪಗೆ ಈಗ ಹೊಸದಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ ಅಷ್ಟ ಸಂಕಷ್ಟಗಳು ಎದುರಾಗಿದೆ. ಪಂಚಮಸಾಲಿ, ಕುರುಬ ಸಮುದಾಯಗಳ ಹೋರಾಟ ನಡೆಯುತ್ತಿರೋ ಬೆನ್ನಲ್ಲೇ, ವಾಲ್ಮೀಕಿ ಸಮುದಾಯ ಕೂಡ ಸಿಡಿದೆದ್ದಿದೆ. ಇವತ್ತು ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಗಡುವು ಕೂಡ ನೀಡಲಾಗಿದೆ.

    ಇದೇ ಹೊತ್ತಲ್ಲಿ ಪ್ರಬಲ ಸಮುದಾಯಗಳಿಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕೆ ಕೆಲ ಸಮುದಾಯಗಳು ಪ್ರಬಲ ವಿರೋಧ ಮಾಡುತ್ತಿವೆ. ಒಬ್ಬರ ಮೀಸಲಾತಿ ಬೇಡಿಕೆ ಈಡೇರಿಸಿದ್ರೇ ಇನ್ನೊಬ್ಬರು ಸಿಡಿದೇಳ್ತಾರೆ. ಇದರಿಂದ ಯಾರಿಗೆ ಕೊಡೋದು? ಯಾರಿಗೆ ಬಿಡೋದು ಅಂತಾ ಸಿಎಂ ಯಡಿಯೂರಪ್ಪ ತಲೆ ಕೆಡಿಸಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿವೆ.

    ಹೀಗಾಗಿ ಮೀಸಲಾತಿ ಹೋರಾಟಗಳು ಕೈಮೀರೋದನ್ನು ತಡೆಯೋದಕ್ಕೆ ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ. ಹೀಗಾಗಿ ಇನ್ನೂ ಎರಡು ವರ್ಷಗಳ ಕಾಲ ಮೀಸಲಾತಿ ಮುಲಾಮು ಹಚ್ಚುತ್ತಾ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಪ್ಲಾನ್ ಕೂಡ ನಡೆದಿದೆ. ಇದರ ಹೊಣೆಯನ್ನು ಆಯಾ ಸಮುದಾಯಗಳ ಸಚಿವರಿಗೆ ಸಿಎಂ ವಹಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

    1. ವಾಲ್ಮೀಕಿ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್- ಶೇ.7.5
    ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಏರಿಸಬೇಕು. ಮೀಸಲಾತಿ ಕುರಿತು ನ್ಯಾ.ನಾಗಮೋಹನದಾಸ್ ಸಮಿತಿ ವರದಿ ಹಲವು ತಿಂಗಳಾದರೂ ಬೇಡಿಕೆ ಈಡೇರಿಸಬೇಕು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಮೇಲೆ ಒತ್ತಡ ಹಾಕಲಾಗುತ್ತಿದೆ. ಇಂದು ವಾಲ್ಮೀಕಿ ಶ್ರೀಗಳು ಮುಖ್ಯಮಂತ್ರಿಗಳಿಗೆ ಮಾರ್ಚ್ 9ರವರೆಗೆ ಗಡುವು ನೀಡಿದ್ದಾರೆ.

    2. ಪಂಚಮಸಾಲಿ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್- 2ಎ
    2ಎ ಮೀಸಲಾತಿಗೆ ಒತ್ತಾಯಿಸಿ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿಗರು ಪಾದಯಾತ್ರೆ. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಇದಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ರಾಜಕೀಯ ಮೀಸಲಾತಿ ಬೇಡ ಎಂದು ಶ್ರೀಗಳು ಹೇಳಿದ್ದಾರೆ.

    3. ಕುರುಬ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿಗೆ ಸೇರ್ಪಡೆ
    ಎಸ್‍ಟಿ ಸಮುದಾಯಕ್ಕೆ ಸೇರಿಸಲು ಕುರುಬ ಸಮುದಾಯದವರು ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದ ನಿರಂಜನಾಪುರಿ ಸ್ವಾಮೀಜಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಸರ್ಕಾರಕ್ಕೆ ಸಂದೇಶ ರವಾನೆ ಮಾಡಿದ್ದಾರೆ. ಬೇಡಿಕೆ ಪರಿಶೀಲಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ.

    4. ಈಡಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: 2ಎ ಪಟ್ಟಿ ಬದಲಿಸಬೇಡಿ
    ಪಂಚಮಸಾಲಿ ಮತ್ತು ಬಲಿಷ್ಠ ಜಾತಿಗಳನ್ನು 2ಎ ಪಟ್ಟಿಗೆ ಸೇರಿಸಬಾರದು. 2ಎ ಪಟ್ಟಿಯಲ್ಲಿರುವ 102 ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಬಾರದು. 2ಎ ಮೀಸಲಾತಿ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಆಗ್ರಹಿಸಿದೆ. ಈಡಿಗ ಮತ್ತು ಈಡಿಗದ 26 ಉಪಜಾತಿಗಳು 2ಎ ಪಟ್ಟಿಯಲ್ಲಿದೆ.

    5. ಗಾಣಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿಗೆ ಸೇರ್ಪಡೆ
    ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಗಾಣಿಗ ಸಮಾಜ ಪಟ್ಟು ಹಿಡಿದಿದ್ದು, ಸದ್ಯದಲ್ಲೇ ಗಾಣಿಗ ಸಮುದಾಯದಿಂದ ಶಕ್ತಿ ಪ್ರದರ್ಶನ ಮಾಡ್ತೀವಿ ಎಂದು ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

    6. ಮಾದಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಒಳ ಮೀಸಲಾತಿ
    ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡುವಂತೆ ಆಗ್ರಹ ವ್ಯಕ್ತವಾಗಿದ್ದು, ನ್ಯಾ.ಎ.ಜಿ ಸದಾಶಿವ ಆಯೋಗದ ವರದಿ ಶಿಫಾರಸು ಜಾರಿಗೆ ಪಟ್ಟು ಹಿಡಿದಿದ್ದಾರೆ. ಮಾ.25ರಿಂದ ಏ.14ರವರೆಗೂ ಪಾದಯಾತ್ರೆ ಮಾಡುವ ಎಚ್ಚರಿಕೆಯನ್ನ ಮಾದಿಗ ಸಮುದಾಯ ನೀಡಿದೆ. ದಲಿತ ಹೋರಾಟಗಾರ ಹರಿಹರದ ಬಿ.ಕೃಷ್ಣಪ್ಪ ಸಮಾಧಿಯಿಂದ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

    7. ಗಂಗಾಮತಸ್ಥ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿ ಮೀಸಲಾತಿ
    ಗಂಗಾಮತಸ್ಥ ಹಾಗೂ 38 ಉಪಜಾತಿಗಳನ್ನು ಎಸ್‍ಟಿಗೆ ಸೇರಿಸಲು ಸಿಎಂ ಮೇಲೆ ಒತ್ತಡ ಹಾಕಲಾಗುತ್ತಿದೆ. 2014ರ ಮಾರ್ಚ್ ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು 2 ಬಾರಿ ಪ್ರಸ್ತಾವ ಮಾಡಲಾಗಿತ್ತು. ಆದ್ರೆ ಜನಗಣತಿ ಮಹಾನಿರ್ದೇಶಕರು ಪ್ರಸ್ತಾವವನ್ನ ತಿರಸ್ಕರಿಸಿದ್ದರು. 2018ರ ಅಕ್ಟೋಬರ್ ಮತ್ತು 2019ರ ಜುಲೈನಲ್ಲಿ ಹೆಚ್ಚುವರಿ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿತ್ತು. ಫೆ.2ರಂದು ಕೇಂದ್ರಕ್ಕೆ ಮತ್ತೆ ಹೆಚ್ಚುವರಿ ಮಾಹಿತಿ, ದಾಖಲೆ ಸಲ್ಲಿಕೆ ಮಾಡಲಾಗಿದೆ.

    8. ಒಕ್ಕಲಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: 2ಎ
    ಪ್ರಬಲ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಕೂಗು ಕೇಳಿ ಬಂದಿದೆ. ಪಂಚಮಸಾಲಿ ಬೆನ್ನಲ್ಲೇ 2ಎ ಮೀಸಲಾತಿ ಕಲ್ಪಿಸಲು ಒತ್ತಾಯ ಹಾಕಲಾಗಿದ್ದು, ಈ ಕುರಿತು ಜೆಡಿಎಸ್ ವಕ್ತಾರ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ.

  • ಬೆಂಗಳೂರಿನಲ್ಲಿ ಮೊಳಗಿದ ಕುರುಬರ ಎಸ್ಟಿ ಹೋರಾಟದ ಕಿಚ್ಚು

    ಬೆಂಗಳೂರಿನಲ್ಲಿ ಮೊಳಗಿದ ಕುರುಬರ ಎಸ್ಟಿ ಹೋರಾಟದ ಕಿಚ್ಚು

    – ಕಾರ್ಯಕ್ರಮಕ್ಕೆ ಗೈರಾಗಿ ಆಕ್ರೋಶಕ್ಕೆ ಗುರಿಯಾದ ಸಿದ್ದರಾಮಯ್ಯ

    ಬೆಂಗಳೂರು: ಎಸ್ಟಿ ಮೀಸಲಾತಿಗೆ ಆಗ್ರಹಿಸಿ ನಡೆದ ಕುರುಬ ಸಮುದಾಯದ ಸಮಾವೇಶದ ಕಿಚ್ಚು ರಾಜ್ಯ ರಾಜಧಾನಿಯಲ್ಲಿ ಇಂದು ರಂಗೇರಿತ್ತು. ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಹಾಲುಮತದ ಬಾಂಧವರು ಭಾಗಿಯಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಿದರು.

    ಮಾದವಾರ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ನಡೆದ ಬೃಹತ್ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿ ಎಸ್ಟಿ ಮೀಸಲಾತಿ ಕೊಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು. ಕನಕ ಪೀಠದ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಸಮಾವೇಶ ನಡೆಯಿತು.

    ಸಮಾವೇಶದಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಎಸ್ಟಿ ಮೀಸಲಾತಿ ಕೊಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ಕೊಟ್ಟು, ಸಮಾವೇಶಕ್ಕೆ ಆಗಮಿಸದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಸಚಿವ ಈಶ್ವರಪ್ಪ ಮಾತನಾಡಿ ಮೋದಿ, ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಮೀಸಲಾತಿ ಮಾಡಿಸಿಕೊಂಡು ಬರುವುದಾಗಿ ಸಮಾವೇಶದಲ್ಲಿ ಭರವಸೆ ಕೊಟ್ಟರು. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ನಂತರ ಮಾತನಾಡಿದ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಮನವಿ ಮಾಡಿಕೊಂಡು, ಯಡಿಯೂರಪ್ಪ ಅವರು ಕೂಡಲೇ ಕುಲ ಅಧ್ಯಯನ ಶಾಸ್ತ್ರ ಮಾಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಬಳಿಕ ನಾವು ಮೋದಿ, ಅಮಿತ್ ಶಾ ಬಳಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ. ಎಲ್ಲಾ ಸ್ವಾಮೀಜಿಗಳ ತರಹ ಬ್ಲ್ಯಾಕ್ ಮೇಲ್ ಮಾಡುವುದಿಲ್ಲ. ನಾವು ಸಾಯೋವರೆಗೂ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಮೋದಿ ಅವರು ಮೀಸಲಾತಿ ಕೊಟ್ಟರೆ 60 ಲಕ್ಷ ಕುರುಬರು ಮೋದಿ ಜೊತೆ ಇರುತ್ತೇವೆ ಎಂದು ಘೋಷಣೆ ಮಾಡಿದರು.

  • `ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು

    `ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು

    ಬದ್ರುದ್ದೀನ್ ಕೆ ಮಾಣಿ
    ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಿರ್ಣಾಯಕ ಪಾತ್ರ ವಹಿಸುತ್ತಿರುವ ಪ್ರಬಲ ಕುರುಬ ಸಮುದಾಯದ ಮೇಲೆ ಈಗ `ಕೇಸರಿ’ ಕಣ್ಣು ಬಿದ್ದಿದೆ. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಸಮುದಾಯದ `ಐಕಾನ್’ ಎಂಬ ನೆಲೆಯಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿರುವ ಈ ಮತಬ್ಯಾಂಕ್‍ಗೆ ಲಗ್ಗೆ ಇಡಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.

    80-90ರ ದಶಕದಲ್ಲಿ ರಾಜ್ಯದ ಕುರುಬ ಸಮುದಾಯ ಬಹುತೇಕ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ರಾಜ್ಯಾದ್ಯಂತ ಸುಮಾರು 50 ಲಕ್ಷದಷ್ಟಿರುವ ಈ ಸಮುದಾಯ 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಈ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಒಲವಿರುವ ಅಭ್ಯರ್ಥಿಗಳೇ ಬಹುತೇಕ ಗೆಲ್ಲುತ್ತಾ ಬಂದಿದ್ದಾರೆ. ಹೀಗಾಗಿಯೇ ರಾಜ್ಯ ರಾಜಕಾರಣದಲ್ಲಿ ಈಗ ಸಮುದಾಯ ನಿರ್ಣಾಯಕ ಎಂಬುದು ರಾಜಕೀಯ ಪಡಸಾಲೆಯ ವಿಶ್ಲೇಷಣೆ.

    ಚಾಮುಂಡೇಶ್ವರಿ ಕ್ಷೇತ್ರದಿಂದ 1983ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಸಿದ್ದರಾಮಯ್ಯ, ಅಂದಿನ ರಾಮಕೃಷ್ಣ ಹೆಗಡೆಯವರ ಕಣ್ಣಿಗೆ ಬಿದ್ದಿದ್ದರ ಪರಿಣಾಮ ರಾಜಕೀಯವಾಗಿ ಮುಖ್ಯವಾಹಿನಿಗೆ ಬಂದಿದ್ದರು. ಕಾಲಕ್ರಮೇಣ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿರುವ ಸಮುದಾಯದ ಒಲವು ಪಡೆದು ರಾಜ್ಯ ನಾಯಕರಾಗಿ ಬೆಳೆದದ್ದು ಇತಿಹಾಸ. ನಂತರದ ದಿನಗಳಲ್ಲಿ ದೇವೇಗೌಡರ ನಿಷ್ಠಾವಂತರ ಪಾಳೆಯದಲ್ಲಿ ಗುರುತಿಸಿಕೊಂಡವರು, ಗೌಡರು ಪ್ರಧಾನಿ ಹುದ್ದೆಗೇರಿದಾಗ 1996ರಲ್ಲಿ ಸಿಎಂ ಅಭ್ಯರ್ಥಿಯಾಗುವಲ್ಲಿಗೆ ಬಂದು ತಲುಪಿದ್ದರು. ಜೆ.ಹೆಚ್.ಪಟೇಲ್‍ರಿಗೆ ಸಿಎಂ ಗಾದಿ ತಪ್ಪಿಸಲು ಅಂದು ಗೌಡರು ಸಿದ್ದರಾಮಯ್ಯರನ್ನು ಮುಂದಿಟ್ಟು ರಾಜಕೀಯ ದಾಳ ಎಸೆದಿದ್ದರು. ಆದ್ರೆ, ಅದು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಜನತಾದಳ (ಎಸ್)ನಲ್ಲಿ ಗೌಡರ ನೀಲಿಗಣ್ಣಿನ ನಾಯಕನಾಗಿ ಬೆಳದರು ಸಿದ್ದರಾಮಯ್ಯ. ಜನತಾದಳ (ಎಸ್) ಪಕ್ಷ ಮುನ್ನಡೆಸಿ 2004ರಲ್ಲಿ ಚುನಾವಣೆ ಎದುರಿಸಿದ ಸಿದ್ದರಾಮಯ್ಯ, ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿ ಕುರುಬ ಸಮುದಾಯದ ಏಕೈಕ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡು ಸಮುದಾಯವನ್ನು ಪೂರ್ಣಪ್ರಮಾಣದಲ್ಲಿ ಜೆಡಿಎಸ್ ವೋಟ್ ಬ್ಯಾಂಕ್ ಮಾಡಿದ್ದು ಇತಿಹಾಸ. ಅಂದು ಬಹುತೇಕ ಕುರುಬ ಸಮುದಾಯ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂಬ ಕಾರಣಕ್ಕೆ ಜೆಡಿಎಸ್ ಬೆಂಬಲಿಸಿತ್ತು.

    ಕಾಂಗ್ರೆಸ್ ಜೆಡಿಎಸ್ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಅವಕಾಶ ಕಳೆದುಕೊಂಡ ಸಿದ್ದರಾಮಯ್ಯ, ಅದೇ ಮುನಿಸಿನಲ್ಲಿ ಮುಂದೆ ಜೆಡಿಎಸ್‍ನೊಂದಿಗೆ ವಿರಸದೊಂದಿಗೆ ಪಕ್ಷದಿಂದ ಹೊರಹಾಕಲ್ಪಟ್ಟರು. ಅಹಿಂದ ಸಂಘಟಿಸಿ ಸಮುದಾಯವನ್ನು ತನ್ನೊಂದಿಗೆ ಇಟ್ಟುಕೊಂಡ ಅವರು ಕಾಂಗ್ರಸ್ ಸೇರಿದಾಗಲೂ ಕುರುಬ ಸಮುದಾಯ ತಮ್ಮೊಂದಿಗೆ ಇರುವಂತೆ ನೋಡಿಕೊಂಡರು. ಅಲ್ಲಿಂದ ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ಏನೇನೋ ಕಸರತ್ತು ಮಾಡಿ ಯಾರನ್ನೇ ನಾಯಕನಾಗಿ ಬಿಂಬಿಸಿದರೂ ಸಮುದಾಯ ಸಿದ್ದರಾಮಯ್ಯನವರ ಕಾರಣಕ್ಕೆ ಕಾಂಗ್ರೆಸ್ ಜೊತೆ ನಿಂತಿರುವುದು ಸತ್ಯ.

    ಆದರೆ ಈಗ ಕಾಲ ಬದಲಾಗಿದೆ. 2013ರಲ್ಲಿ ಬಹುಮತದೊಂದಿಗೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿ 5 ವರ್ಷ ರಾಜ್ಯವನ್ನಾಳಿ ಸಮುದಾಯ ಏಕಮೇವಾದ್ವಿತೀಯ ನಾಯಕನಾಗಿ ಮೆರೆದರು. ಸಮುದಾಯದ ಎರಡನೇ ಪಂಕ್ತಿ ನಾಯಕರನ್ನು ಬೆಳೆಸದೇ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟ ಸಿದ್ದರಾಮಯ್ಯ ವಿರುದ್ಧ ಈಗ ಸಮುದಾಯದ ನಾಯಕರೇ ತಿರುಗಿ ಬೀಳತೊಡಗಿದ್ದಾರೆ. 2018ರ ಫಲಿತಾಂಶದ ಬಳಿಕವಂತೂ, ಅವರು ಸಮುದಾಯದ ಹಿಡಿತ ಕಳೆದುಕೊಳ್ಳತೊಡಗಿದ್ದಾರೆ. ಬಿಜೆಪಿಯಂತೂ ಈವರೆಗೆ ಮಾಡಿದ ಎಲ್ಲಾ ಕಸರತ್ತುಗಳಲ್ಲೂ ಕುರುಬ ಸಮುದಾಯವನ್ನು ಸೆಳೆಯಲು ವಿಫಲವಾಗಿದ್ದಂತೂ ಸತ್ಯ. ಪಕ್ಷದ ಹಿರಿಯ ನೇತಾರ ಕೆ.ಎಸ್.ಈಶ್ವರಪ್ಪ, ಸಮುದಾಯದ ‘ಐಕಾನ್’ ಆಗಲು ಸಾಧ್ಯವಾಗಿಲ್ಲ. ಪಕ್ಷ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ, ಡಿಸಿಎಂ ಪಟ್ಟ, ಮಂತ್ರಿ ಪದವಿ ನೀಡಿದರೂ ಸಮುದಾಯವನ್ನು ಸೆಳೆಯಲು ಆಗಲೇ ಇಲ್ಲ. ಈಗ ಮತ್ತೆ ‘ಕುರುಬಾಸ್ತ್ರ’ ಬಿಜೆಪಿಗೆ ದೊರೆತಿರುವುದು ಈ ಉಪಚುನಾವಣೆ ಬಳಿಕ. ಕುರುಬ ನಾಯಕರನ್ನು ಸಿದ್ದರಾಮಯ್ಯ ಮುಗಿಸ್ತಾ ಇದ್ದಾರೆ ಎಂದು ಬಿಂಬಿಸಿ, ಎರಡನೇ ಹಂತದ ನಾಯಕರನ್ನೆಲ್ಲಾ ಸೆಳೆದು ಅವರಿಗೆ ಜವಾಬ್ದಾರಿ ನೀಡಿ ಸಮುದಾಯದ ಒಲವು ಗಳಿಸಲು ತಂತ್ರ ರೂಪಿಸುತ್ತಿದೆ ಬಿಜೆಪಿ. ಅಹಿಂದಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತಂದ ರಾಯಣ್ಣ ಬ್ರಿಗೇಡ್‍ಗೆ ಲಗಾಮು ಹಾಕಿದ್ದ ಕೇಸರಿ ಪಾಳಯ ಈಗ ಮತ್ತೆ ಹೊಸ ತಂತ್ರಗಾರಿಕೆಗೆ ಕೈಹಾಕಿದೆ.

    ಉಪಚುನಾವಣೆಯಲ್ಲಿ 3 ಹಿರಿಯ ಪ್ರಮುಖ ನಾಯಕರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಆದ್ರೆ ನಾವು ಅವರಿಗೆ ಮನ್ನಣೆ ನೀಡುತ್ತೇವೆ, ಪಕ್ಷ ನಿಮ್ಮೊಂದಿಗೆ ಇದೆ, ನಮ್ಮೊಂದಿಗೆ ನೀವು ಇರಿ ಎಂದು ಸಂದೇಶ ರವಾನಿಸಲು ಆರಂಭಿಸಿದೆ ಕೇಸರಿ ಬ್ರಿಗೇಡ್. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಮುದಾಯದ ‘ಮತ ಬ್ಯಾಂಕ್’ಗೆ ಬಿಜೆಪಿ ಲಗ್ಗೆ ಇಡುತ್ತಿರುವುದಂತೂ ಸತ್ಯ.

    ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರನ್ನು ಸೆಳೆದು ಕುರುಬ ಸಮುದಾಯದ ವಿಶ್ವಾಸ ಗಳಿಸುವುದು ‘ಕೇಸರಿ’ ಟೀಂನ ಅಜೆಂಡಾ, ಜೊತೆಗೆ ಕಾಂಗ್ರೆಸ್‍ನಲ್ಲೂ ಸಿದ್ದರಾಮಯ್ಯ ವಿರೋಧಿ ಪಾಳೆಯ ಈಗ ಪ್ರಬಲವಾಗತೊಡಗಿ, ಅವರನ್ನು ಮೂಲೆಗುಂಪು ಮಾಡ್ತಾ ಇದ್ದಾರೆ ಎಂದು ಬಿಂಬಿಸುವುದು ಕೂಡಾ ಮತ್ತೊಂದು ತಂತ್ರದ ಭಾಗವೂ ಹೌದು. ಕಾಂಗ್ರೆಸ್‍ನೊಳಗೆ ವಿರೋಧಿಗಳು ಸಿದ್ದರಾಮಯ್ಯಗೆ ಈಗ ಹೆಚ್ಚಾಗತೊಡಗಿರುವುದು ಸಹಜವಾಗಿ ಕುರುಬ ಸಮುದಾಯದಲ್ಲಿ ಅಭದ್ರತೆ ಕಾಡತೊಡಗಿರುವುದಂತೂ ನಿಜ. ಇದನ್ನೇ ಬಂಡವಾಳ ಮಾಡಿಕೊಳ್ಳಲಿರುವ ಬಿಜೆಪಿ ಎರಡು ಮತ್ತು ಮೂರನೇ ಹಂತದ ನಾಯಕರನ್ನು ಸೆಳೆದು ಸಮುದಾಯದ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಲು ನಿರ್ಧರಿಸಿದೆ.

    ಹೀಗಾಗಿ ಸಹಜವಾಗಿ ಕುರುಬ ಸಮುದಾಯ ಅಲ್ಪ ಪ್ರಮಾಣದಲ್ಲಾದ್ರೂ ಬಿಜೆಪಿ ಕಡೆಗೆ ವಾಲುವುದರಲ್ಲಿ ಅನುಮಾನವಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕುರುಬ ಸಮುದಾಯದ ಕನಿಷ್ಠ ಅರ್ಧ ಭಾಗದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ ಪಕ್ಷಕ್ಕೆ ಅದು ದೊಡ್ಡ ಆಸ್ತಿ ಎಂಬುದೇ ಬಿಜೆಪಿ ಪಡಸಾಲೆಯ ಲೆಕ್ಕಾಚಾರ. ಒಂದು ವೇಳೆ ಸಿದ್ದರಾಮಯ್ಯ ನಾಯಕತ್ವಕ್ಕೆ ಕಾಂಗ್ರೆಸ್‍ನಲ್ಲಿ ಕೊಕ್ಕೆ ಬಿದ್ದರೆ, ಬಿಜೆಪಿ ಗುರಿಯಂತೂ ಇನ್ನಷ್ಟು ಸುಲಭವಾಗುವುದರಲ್ಲಿ ಸಂಶಯವಿಲ್ಲ.

  • ಅಂಬೇಡ್ಕರ್ ನಾಮಫಲಕ ಬಳಕೆ ವಿಚಾರ – ಎರಡು ಸಮುದಾಯಗಳ ಮಧ್ಯೆ ಕಿತ್ತಾಟ

    ಅಂಬೇಡ್ಕರ್ ನಾಮಫಲಕ ಬಳಕೆ ವಿಚಾರ – ಎರಡು ಸಮುದಾಯಗಳ ಮಧ್ಯೆ ಕಿತ್ತಾಟ

    ಯಾದಗಿರಿ: ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಸಹಿತ ನಾಮ ಫಲಕ ಅಳವಡಿಸುವ ವಿಚಾರಕ್ಕಾಗಿ ವಡಗೇರಾ ಪಟ್ಟಣದಲ್ಲಿ ಕುರುಬ ಸಮುದಾಯ ಮತ್ತು ದಲಿತ ಸಂಘಟನೆಗಳ ನಡುವೆ ಕಿತ್ತಾಟ ಆರಂಭವಾಗಿದೆ.

    ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಮತ್ತು ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ಈ ವಿಚಾರಕ್ಕೆ ಈಗ ಪೊಲೀಸರು ಕುರುಬ ಸಮುದಾಯದ ಕುಮ್ಮಕ್ಕಿನಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ಯಾವುದೇ ಕಾರಣಕ್ಕೂ ನಾಮ ಫಲಕ ಅಳವಡಿಸಬಾರದೆಂದು ವಿರೋಧಿಸಿ ಕುರುಬ ಸಮುದಾಯದಿಂದಲೂ ಸಹ ಪ್ರತಿಭಟನೆ ಮಾಡುತ್ತಿದ್ದಾರೆ.

    ಈ ಸಂಬಂಧ ವಡಗೇರಾ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಭದ್ರತೆ ನೀಡಲಾಗಿದೆ.

  • ಸಿದ್ದರಾಮಯ್ಯ ಆಡಳಿತದಲ್ಲಿ ಹಿಂದುಳಿದ ವರ್ಗಗಳಿಗೆ ಭಾರೀ ಅನ್ಯಾಯ, ಕುರುಬರಿಗೆ ಸಹಾಯ ಆಗಿಲ್ಲ: ಎಚ್.ವಿಶ್ವನಾಥ್

    ಸಿದ್ದರಾಮಯ್ಯ ಆಡಳಿತದಲ್ಲಿ ಹಿಂದುಳಿದ ವರ್ಗಗಳಿಗೆ ಭಾರೀ ಅನ್ಯಾಯ, ಕುರುಬರಿಗೆ ಸಹಾಯ ಆಗಿಲ್ಲ: ಎಚ್.ವಿಶ್ವನಾಥ್

    ಬೆಂಗಳೂರು: ಕುರುಬ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯನವರಿಂದ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಹಿಂದುಳಿದ ವರ್ಗದ ಮುಖಂಡ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರಿಂದ ಯಾವುದೇ ಆರ್ಥಿಕ ಬೆಂಬಲ ನೀಡಿಲ್ಲ. ಕುರುಬರಿಗೂ ಯಾವುದೇ ಸಹಾಯ ಮಾಡಿಲ್ಲ. ಅಹಿಂದ ವರ್ಗ ನಿಮ್ಮಿಂದ ದೂರವಾಗುತ್ತಿದೆ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.

    ರಾಷ್ಟ್ರೀಯ ಪಕ್ಷಗಳು ಅಹಿಂದ ನಾಯಕರ ಧ್ವನಿ ಅಡಗಿಸಿವೆ. ಬಿಜೆಪಿ ಸಂಗೊಳ್ಳಿ ರಾಯಣ್ಣ ರಾಯಣ್ಣ ಸಂಘಟನೆಯ ಧ್ವನಿ ಅಡಗಿಸಿದೆ. ಅಹಿಂದ, ಅಹಿಂದ ಎನ್ನುವ ಸೊಲ್ಲು ತಾವು ಕಾಂಗ್ರೆಸ್ ಬಂದ ಮೇಲೆ ಅಡಗಿ ಹೋಗಿದೆ. ಮುಖ್ಯಮಂತ್ರಿ ಆಗಿದ್ದೀರಿ. ನಿಮ್ಮಿಂದ ಯಾವ ಉಪಕಾರ ಆಯ್ತು? ಕುರುಬ ಸಮುದಾಯ ಈಗ ನಿಮ್ಮಿಂದ ವಿಮುಖವಾಗುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಕಿಡಿಕಾರಿದರು.

    ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ದೇವೇಗೌಡರು ಸಿಎಂ ಆಗಿದ್ದಾಗ ಬಹುತೇಕ ಖಾತೆಗಳನ್ನು ಹಿಂದುಳಿದ ವರ್ಗಗಳ ಮುಖಂಡರಿಗೆ ನೀಡಿದ್ದರು. ಫೆ.23ರಿಂದ ಹಿಂದುಳಿದ ವರ್ಗಗಳ ನಾಯಕರು ಪ್ರವಾಸ ಮಾಡಲಿದ್ದೇವೆ. ಫೆ.23ರಂದು ಶಿವಮೊಗ್ಗ, ಫೆ.24 ಮೈಸೂರು, 25 ಬೆಂಗಳೂರು, 26 ಬೀದರ್, 28 ರಂದು ಹಿಂದುಳಿದ ವರ್ಗಗಳ ಸಮಾವೇಶಗಳು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.