Tag: Kumari 21F

  • ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ‘ಕುಮಾರಿ 21 ಎಫ್’ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿರೋ ವಿಚಾರ ಎಲ್ಲರಿಗೂ ತಿಳಿದದ್ದೇ. ಆದರೆ, ಈ ಚಿತ್ರದ ಟೈಟಲ್ಲಿನ ಬಗ್ಗೆ ಇದೀಗ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಇದರ ಅಸಲೀ ನಿಗೂಢ ಏನಿರಬಹುದೆಂಬ ಬಗ್ಗೆ ಪ್ರೇಕ್ಷಕರಲ್ಲೊಂದು ಗಾಢವಾದ ಕುತೂಹಲವೂ ಇದೆ!

    ಇದು ನಿಜಕ್ಕೂ ಆಲೋಚನೆಗೆ ಹಚ್ಚುವ ಟೈಟಲ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಗೆಗಿನ ಯಾವ ವಿಚಾರಗಳನ್ನೂ ಬಿಟ್ಟುಕೊಡದ ಚಿತ್ರ ತಂಡ ಥೇಟರಿನಲ್ಲಿಯೇ ಅದನ್ನು ಪ್ರೇಕ್ಷಕರ ಮುಂದೆ ತೆರೆದಿಡೋ ನಿರ್ಧಾರ ಮಾಡಿದಂತಿದೆ. ನಾಯಕ ಪ್ರಣಾಮ್ ಮಾತುಗಳಲ್ಲಿಯೇ ಈ ಚಿತ್ರ ವಿಭಿನ್ನವಾದೊಂದು ಕಥೆ ಹೊಂದಿದೆ ಎಂಬ ವಿಚಾರ ಮಾತ್ರ ಜಾಹೀರಾಗಿದೆ.

    ಹೇಳಿ ಕೇಳಿ ಪ್ರಣಾಮ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪುತ್ರ. ಆದ್ದರಿಂದಲೇ ಆತನ ಎಂಟ್ರಿಯ ಬಗ್ಗೆ ಪ್ರೇಕ್ಷಕರಲ್ಲೊಂದು ಮಾಸ್ ಆದ ನಿರೀಕ್ಷೆ ಇದ್ದೇ ಇತ್ತು. ಪ್ರಣಾಮ್ ಆಕ್ಷನ್ ಓರಿಯಂಟೆಡ್ ಕಥೆಯ ಮೂಲಕವೇ ಎಂಟ್ರಿ ಕೊಡುತ್ತಾರೆಂಬ ಬಗೆಗೂ ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಪ್ರಣಾಮ್ ಎಲ್ಲ ಹೀರೋಯಿಸಮ್ಮಿನ ಅಬ್ಬರದಾಚೆಗೆ ನಟನೆಗೆ ಸವಾಲಾಗಿರುವ ಪಾತ್ರವನ್ನೇ ಆರಿಸಿಕೊಳ್ಳುವ ಮೂಲಕ ಭರವಸೆ ಹುಟ್ಟಿಸಿದ್ದಾರೆ.

    ಪ್ರಣಾಮ್ ಅವರದ್ದಿಲ್ಲಿ ತನ್ನ ಪಾಡಿಗೆ ತಾನಿರುವ, ಸಣ್ಣ ಕನಸೇ ಆದರೂ ಕಷ್ಟಪಟ್ಟು ನನಸು ಮಾಡಿಕೊಳ್ಳುವ ಪಾತ್ರವಂತೆ. ಇಂಥಾ ಹುಡುಗನ ಬಾಳಲ್ಲಿ ಬಿಂದಾಸ್ ಹುಡುಗಿಯೊಬ್ಬಳ ಪ್ರವೇಶವಾದ ನಂತರದಲ್ಲಿ ನಡೆಯುವ ರಸವತ್ತಾದ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಈಗಾಗಲೇ ಟ್ರೈಲರ್ ಗೆ ವ್ಯಾಪಕ ಮೆಚ್ಚುಗೆ ಬಂದಿದೆ. ಪ್ರಣಾಮ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರೋ ದಿನಗಳೂ ಹತ್ತಿರಾಗಿವೆ.

  • ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಶ್ರೀ ಹಯಗ್ರೀವ ಕಲಾಚಿತ್ರ ಲಾಂಛನದಲ್ಲಿ ಸಂಪತ್ ಕುಮರ್ ಹಾಗೂ ಶ್ರೀಧರ್ ರೆಡ್ಡಿ ಅವರು ನಿರ್ಮಿಸಿರುವ ಖ್ಯಾತ ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ `ಕುಮಾರಿ 21 ಎಫ್` ಚಿತ್ರದ ಟ್ರೇಲರನ್ನು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಯೂಟ್ಯೂಬ್ ನಲ್ಲಿ ಟ್ರೇಲರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಶ್ರೀಮಾನ್ ವೆಮುಲ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಸಾಗರ್ ಮಹತಿ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ರಾಮಿ ರೆಡ್ಡಿ ಅವರ ಛಾಯಾಗ್ರಹಣ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಪ್ರಣಾಮ್ ದೇವರಾಜ್, ನಿಧಿ ಕುಶಾಲಪ್ಪ. ರವಿ ಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.