Tag: Krishna janmasthami

  • ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ತಿರುವನಂತಪುರಂ: ಭಾರತದ ಹಲವೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಈ ಮಧ್ಯೆ ಯುವತಿಯೊಬ್ಬರು ಕೃಷ್ಣನ ವೇಷದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದು ಈ ವರ್ಷದ ವಿಡಿಯೋ ಅಲ್ಲ ಎಂದು ಯುವತಿ ಸ್ಪಷ್ಟನೆ ನೀಡಿದ್ದಾರೆ.

    ವೈರಲ್ ವಿಡಿಯೋದಲ್ಲಿ ಇರುವ ಯುವತಿಯ ಹೆಸರು ವೈಷ್ಣವ ಕೆ. ಸುನೀಲ್. ಮೂಲತಃ ಕೇರಳ ನಿವಾಸಿಯಾಗಿರುವ ಇವರು ಕಳೆದ ವರ್ಷ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುವ ಮೂಲಕ ಮಡಿಕೆಯನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರು ಅವರ ವಿಡಿಯೋ ಸೆರೆ ಹಿಡಿದಿದ್ದರು. ಆದರೆ ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಹಲವರು ತಮ್ಮ ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ವೈಷ್ಣವ ಕೆ. ಸುನೀಲ್, “ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದ ವಿಡಿಯೋ ಇದು. ಇದು ಕಳೆದ ವರ್ಷದ ವಿಡಿಯೋ ಆಗಿದ್ದು, ಈಗ ವೈರಲ್ ಆಗುತ್ತದೆ ಎಂದುಕೊಂಡರಲಿಲ್ಲ. ನಾನು ಮೂರು ವರ್ಷದಿಂದ ಗುರುವಾಯೂರು ದೇವಸ್ಥಾನದಲ್ಲಿ ಡ್ಯಾನ್ಸ್ ಮಾಡುತ್ತಿದ್ದೇನೆ. ನಾನು ಗುರುವಾಯೂರು ನಿವಾಸಿಯಾಗಿದ್ದು, ಕೃಷ್ಣನ ಭಕ್ತೆ” ಎಂದು ತಿಳಿಸಿದ್ದಾರೆ.

    ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವೇಳೆ ಚಿಕ್ಕ ಮಕ್ಕಳು ಕೃಷ್ಣನ ವೇಷ ಧರಿಸಿ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಕಳೆದ ವರ್ಷ ಚಿಕ್ಕ ಮಕ್ಕಳ ಜೊತೆ ವೈಷ್ಣವ ಕೂಡ ನೃತ್ಯ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಲ್ಲದೆ ಯುವತಿಯ ಎಕ್ಸ್ ಪ್ರೆಶನ್ ಗೆ ಜನ ಫಿದಾ ಆಗಿದ್ದಾರೆ.

    https://www.youtube.com/watch?time_continue=39&v=4r29WrG6JbY

  • ಸೈನಿಕರಿಂದ ಕೃಷ್ಣಜನ್ಮಾಷ್ಟಮಿ ಆಚರಣೆ

    ಸೈನಿಕರಿಂದ ಕೃಷ್ಣಜನ್ಮಾಷ್ಟಮಿ ಆಚರಣೆ

    ಬೆಳಗಾವಿ: ಸಾವಿರಾರು ಜನರನ್ನು ಪ್ರವಾಹದಲ್ಲಿ ರಕ್ಷಿಸಿದ ಸೈನಿಕರು ಇಂದು ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ತೊಡಗಿಕೊಂಡಿದ್ದರು.

    ಬೆಳಗಾವಿ ನಗರದಲ್ಲಿರುವ ಮರಾಠಾ ರೆಜಿಮೆಂಟ್‍ನ ಮೈದಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆ ನಡೆದಿದೆ. ಕೇವಲ ದೇಶ ಕಾಯುವುದರಲ್ಲಿ ಬ್ಯುಸಿಯಾಗಿರುತ್ತಿದ್ದ ಸೈನಿಕರು ಇಂದು ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ರೆಜಿಮೆಂಟ್‍ನಲ್ಲಿ ಹೊಸದಾಗಿ ಸೈನ್ಯಕ್ಕೆ ಸೇರುವ ಯುವಕರ ತರಬೇತಿಯಿಂದ ಹಿಡಿದು ದೇಶದಲ್ಲಿ ನಡೆಯುವ ಯುದ್ಧಗಳ ತರಬೇತಿ ಕೂಡ ಇಲ್ಲೇ ಆಗುತ್ತದೆ.

    ಈ ಪ್ರದೇಶದಲ್ಲಿ ಇಂದು ಗುಂಡು ಮದ್ದಿನ ಸದ್ದು ಇರಲಿಲ್ಲ ಬದಲಿಗೆ ಡಿಜೆ ಸೌಂಡ್ ಕೇಳಿ ಬರುತ್ತಿತ್ತು. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸೈನಿಕರಿಗೆ ಗಡಿಗೆ ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಂದು ಆಫೀಸರ್ ತಂಡ, ಆಡಳಿತ ವಿಭಾಗ ತಂಡ, ಹೊಸದಾಗಿ ಸೈನ್ಯಕ್ಕೆ ಸೇರಿಕೊಂಡ ಯುವಕರ ತಂಡ ಹೀಗೆ ಮೂರು ತಂಡಗಳನ್ನು ಮಾಡಿ ಗಡಿಗೆ ಒಡೆಯಲು ಕಾಲಾವಕಾಶ ನಿಗದಿ ಮಾಡಲಾಗಿತ್ತು.

    ಆರಂಭದಲ್ಲಿ ಮೂರು ತಂಡಗಳು ಗಡಿಗೆ ಒಡೆಯುವ ಮಾದರಿಯಲ್ಲೇ ಒಬ್ಬರ ಮೇಲೊಬ್ಬರು ಹತ್ತಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಇದಾದ ಬಳಿಕ ಡಿಜೆ ಸಾಂಗ್ ಹಾಕಿ ಕೇಸರಿನಲ್ಲಿ ನಿಂತು ಒಬ್ಬರ ಮೇಲೊಬ್ಬರು ಹತ್ತುತ್ತಾ ಗಡಿಗೆ ಒಡೆಯುವ ಪ್ರಯತ್ನ ಮಾಡಿದರು. ಇದೇ ಸಂದರ್ಭದಲ್ಲಿ ಉಳಿದ ವಿರೋಧಿ ತಂಡದವರು ಅವರಿಗೆ ಜೋರಾಗಿ ನೀರು ಎರಚಿ ಕೆಡವುವ ಪ್ರಯತ್ನ ಮಾಡಿ ಯಶಸ್ವಿಯಾದರು. ಇದಾದ ಬಳಿಕ ಮತ್ತೊಂದು ರೌಂಡ್ ನಲ್ಲಿ ಆಫೀಸರ್ಸ್ ತಂಡ ಗಡಿಗೆ ಒಡೆಯವುದರಲ್ಲಿ ಯಶಸ್ವಿಯಾದರು.

    ಮೊಸರಿನ ಗಡಿಗೆ ಒಡೆದ ತಂಡಕ್ಕೆ ಬಹುಮಾನ ನೀಡಿ ಗೌರವಿಸಿದರು. ಇದಾದ ಬಳಿಕ ಎಲ್ಲ ಸೈನಿಕರು ಸೇರಿಕೊಂಡು ಅದೇ ಕೆಸರಿನಲ್ಲಿ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಕೂಡ ಮಾಡಿದರು. ಕಾರ್ಯಕ್ರಮಕ್ಕೆ ಸೈನಿಕರ ಕುಟುಂಬ ಆಗಮಿಸಿ ಅವರು ಕೂಡ ಸಂಭ್ರಮದಲ್ಲಿ ಭಾಗಿಯಾದರು. ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿನ ಪ್ರವಾಹಕ್ಕೆ ಸಿಕ್ಕ ಸಾವಿರಾರು ಜನರನ್ನು ಇಲ್ಲಿನ ಸೈನಿಕರೇ ಕಾರ್ಯಾಚರಣೆ ಮಾಡಿ ರಕ್ಷಿಸಿ ಬಂದಿದ್ದರು. ಇಂತಹ ಹೆಮ್ಮೆಯ ಸೈನಿಕರು ಇಂದು ದೇವರ ನಾಮಸ್ಮರಣೆ ಜೊತೆಗೆ ಕೊಂಚ ರಿಲ್ಯಾಕ್ಸ್ ಆಗಿ ಕಾಲ ಕಳೆದರು.