Tag: KPCC president Dinesh Gundu Rao

  • ಕೈ ಶಾಸಕರನ್ನು ದಿನೇಶ್ ಗುಂಡೂರಾವ್ ಹತೋಟಿಯಲ್ಲಿಡಲಿ, ನನಗೆ ಸಲಹೆ ಕೊಡಬೇಡಿ ಎಂದ ರೇವಣ್ಣ!

    ಕೈ ಶಾಸಕರನ್ನು ದಿನೇಶ್ ಗುಂಡೂರಾವ್ ಹತೋಟಿಯಲ್ಲಿಡಲಿ, ನನಗೆ ಸಲಹೆ ಕೊಡಬೇಡಿ ಎಂದ ರೇವಣ್ಣ!

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನಗೆ ಸಲಹೆ ನೀಡುವುದು ಬೇಡ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಟಾಂಗ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರಿಂದ ಯಾವುದೇ ಎಚ್ಚರಿಕೆ ಪಡೆಯುವ ಅವಶ್ಯಕತೆ ನನಗೆ ಇಲ್ಲ. ದಿನೇಶ್ ಗುಂಡೂರಾವ್ ಅವರಿಗೆ ಮೊದಲು ಅವರ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳೋಕೆ ಹೇಳಿ. ನನ್ನನ್ನು ನೋಡಿಕೊಳ್ಳುವ ಅವಶ್ಯಕತೆ ದಿನೇಶ್ ಗುಂಡೂರಾವ್ ಗೆ ಬೇಡ. ನನ್ನ ಅಧ್ಯಕ್ಷರು ಹೇಳಿದಂತೆ ನಾನು ಕೇಳುತ್ತೇನೆ ಎಂದು ತಿರುಗೇಟು ನೀಡಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು 5 ಬಾರಿ ಶಾಸಕನಾಗಿದ್ದೇನೆ. ನನಗೂ ರಾಜಕೀಯ ಗೊತ್ತು. ದಿನೇಶ್ ಗುಂಡೂರಾವ್ ನನಗೆ ಅಡ್ವೈಸ್ ಮಾಡೋದು ಬೇಡ. ಅವರ ಪಕ್ಷ ಅವರು ನೋಡಿಕೊಳ್ಳಲಿ. ನನಗೆ ಎಚ್ಚರಿಕೆ ಕೊಡೋಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ದಿನೇಶ್ ಗುಂಡೂರಾವ್ ಅವರಿಂದ ಏನೂ ಕೇಳುವ ಅಗತ್ಯ ಇಲ್ಲ ಎಂದರು. ನಾನು ಯಾವುದೇ ನಿಗಮ ಮಂಡಳಿ ಸ್ಥಾನದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆ ಜವಾಬ್ದಾರಿ ನಾನು ನಿರ್ವಹಣೆ ಮಾಡುತ್ತಿದ್ದೇನೆ. ನಿಗಮ-ಮಂಡಳಿ ನೇಮಕ ವಿಚಾರ ದೇವೇಗೌಡರು, ಕುಮಾರಸ್ವಾಮಿ ತೀರ್ಮಾನ ಮಾಡ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು. ಅಲ್ಲದೇ ಸಮ್ಮಿಶ್ರ ಸರ್ಕಾರದ ಯಾವುದೇ ವಿಷಯ ಇದ್ದರೂ ದೇವೇಗೌಡ, ಕುಮಾರಸ್ವಾಮಿ, ಎಚ್ ವಿಶ್ವನಾಥ್ ನೋಡಿಕೊಳ್ತಾರೆ. ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ನಾನು ಅದನ್ನು ನಿಭಾಯಿಸುತ್ತೇನೆ ಎಂದರು.

    ಗುಂಡಿ ಮುಚ್ಚಿ: ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಈಗ ಮಳೆ ಕಡಿಮೆ ಇದೆ. ಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದೇನೆ. ಶೀಘ್ರವೇ ಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ ಎಂದರು. ಇದಲ್ಲದೇ ಅಪಘಾತ ವಲಯ ಹುಡುಕಿ ರಿಪೇರಿ ಮಾಡುವಂತೆ ಸೂಚನೆ ನೀಡಲಾಗಿದೆ. ಶಾಲಾ ಸಂಪರ್ಕ ಸೇತುವೆ 8 ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳುತ್ತಿದ್ದೇವೆ. ಸಿಎಂ ಸೂಚನೆ ಮೇರೆಗೆ ಚಿಕ್ಕ ಸೇತುವೆ ನಿರ್ಮಾಣ ಮಾಡಲಿದ್ದೇವೆ. ಇದಕ್ಕಾಗಿ 120 ಕೋಟಿ ಹಣ ಸಿಎಂ ಕೊಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡುತ್ತೇವೆ ಎಂದರು.

    ನಿನ್ನೆ ದೇವೇಗೌಡರು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ನಮ್ಮ ಬಳಿ ನೋಟ್ ಪ್ರಿಂಟ್ ಮಾಡೋ ಯಂತ್ರ ಇಲ್ಲ. ಇತಿಮಿತಿಯ ಆರ್ಥಿಕತೆಯಲ್ಲಿ ಕೆಲಸ ಮಾಡ್ತಿದ್ದೇವೆ. ಹೀಗಿದ್ರೂ ಜನರ ಕಷ್ಟ ಸರಿಪಡಿಸಲು ಆಗ್ತಿಲ್ಲ ಎಂಬ ನೋವು ದೇವೇಗೌಡರದ್ದು. ಅಧಿಕಾರ ಇದ್ದರೂ ಜನರ ನೋವು ಸರಿ ಮಾಡಲು ಆಗ್ತಿಲ್ಲ ಎಂಬ ಭಾವನೆಯಲ್ಲಿ ದೇವೇಗೌಡರು ನೋವಿನಿಂದ ಮಾತಾಡಿದ್ದಾರೆ. ದೇವೇಗೌಡರು 60 ವರ್ಷದ ರಾಜಕಾರಣ ಮಾಡಿದವರು. ಜನರಿಗೆ ಏನೂ ಮಾಡೋಕಾಗುತ್ತಿಲ್ಲ ಎಂಬ ದುಃಖ ದೇವೇಗೌಡರಿಗಿದೆ. ದೇವೇಗೌಡರು ರಾತ್ರೋರಾತ್ರಿ ರಾಜೀನಾಮೆ ಬಿಸಾಕಿ ಬಂದವರು. ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಜನರಿಗಾಗಿ ಕೆಲಸ ಮಾಡಿದವರು ಎಂದು ಅಪ್ಪನ ಪರ ಬ್ಯಾಟಿಂಗ್ ಮಾಡಿದರು.

    ಸಪ್ಲಿಮೆಂಟರಿ ಬಜೆಟ್ ನನಗಾಗಿ ಇಟ್ಟಿಲ್ಲ. ಗುತ್ತಿಗೆದಾರರ ಹಣ ಪಾವತಿ ಮಾಡಲು ಕೊಟ್ಟಿದ್ದಾರೆ. ಇದು ಕೇವಲ ನಮ್ಮ ಕಾಲದಲ್ಲಿ ಮಾತ್ರ ಆಗಿಲ್ಲ. ಪ್ರತಿ ಸರ್ಕಾರದಲ್ಲೂ ಆಗಿದೆ. ಹಿಂದಿನ ಯೋಜನೆಗೆ ಹಣ ಬಿಡುಗಡೆ ಮಾಡಲು 2 ಸಾವಿರ ಕೋಟಿ ನನ್ನ ಇಲಾಖೆಗೆ ಕೊಟ್ಟಿದ್ದಾರೆ. ನನ್ನ ಮನೆಗೆ ಆ ಹಣ ಎತ್ತಿಕೊಂಡು ಹೋಗಲ್ಲ. ಹಿಂದೆ ಸಾಲ ಮಾಡಿ ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಗುತ್ತಿಗೆದಾರರ ಹಣ ಬಾಕಿ ಇದೆ. ಬಾಕಿ ನೀಡಲು ಹಣ ಕೊಟ್ಟಿದ್ದಾರೆ. ಸುಮಾರು 3700 ಕೋಟಿ ರೂಪಾಯಿ ಗುತ್ತಿಗೆದಾರರ ಹಣ ಬಾಕಿ ಇದೆ. ಹೀಗಾಗಿ ನನ್ನ ಇಲಾಖೆಗೆ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.

    ಸ್ಟೀಲ್ ಬ್ರಿಡ್ಜ್ ಬಗ್ಗೆ ನೋ ಕಮೆಂಟ್ಸ್!: ಸ್ಟೀಲ್ ಬ್ರಿಡ್ಜ್ ಯೋಜನೆ ನನ್ನ ಇಲಾಖೆಯ ಯೋಜನೆ ಅಲ್ಲ. ಕಾರ್ಪೋರೇಷನ್ ಲಿಮಿಟ್ಸ್ ಯೋಜನೆ. ಇದನ್ನ ಆ ಇಲಾಖೆಗೆ ಸಂಬಂಧಪಟ್ಟ ಮಂತ್ರಿಗೆ ಕೇಳಬೇಕು. ಈ ಬಗ್ಗೆ ಸಿಎಂ ಕುಳಿತು ನಿರ್ಧಾರ ಮಾಡ್ತಾರೆ. ಕುಮಾರಸ್ವಾಮಿ ಹಿಂದೆ ವಿರೋಧ ಮಾಡಿರಲಿಲ್ಲ. ಆತುರವಾಗಿ ಮಾಡ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಜನ ವಿರೋಧ ಮಾಡಿದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿ ಯೋಜನೆ ಮಾಡಬೇಕು. ಈ ಬಗ್ಗೆ ಸಿಎಂ, ಸಚಿವರು ಕುಳಿತು ನಿರ್ಧಾರ ಮಾಡಲಿ. ಅಕ್ರಮ ಎಂದಾದರೆ ಈ ಬಗ್ಗೆಯೂ ಚರ್ಚೆ ಮಾಡಲಿ ಎಂದರು.

    ಬಜೆಟ್ ಗೆ ಮುಹೂರ್ತ ನಾನು ಇಡಲ್ಲ!: ಬಜೆಟ್ ಗೆ ನಾನು ಮುಹೂರ್ತ ಇಡೋದಲ್ಲ ಎಂದು ಸಚಿವ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. ಬಜೆಟ್ ಗೆ ರೇವಣ್ಣ ಶಾಸ್ತ್ರ ನೋಡಿ ದಿನಾಂಕ ಫಿಕ್ಸ್ ಮಾಡಬೇಕು ಎಂಬ ಸಿಎಂ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ಕೊಟ್ಟ ಅವ್ರು, ರೇವಣ್ಣ ದಿನ ನಿಗದಿ ಮಾಡ್ತಾರೆ ಎಂದು ಸಿಎಂ ತಮಾಷೆಗೆ ಹೇಳಿದ್ದಾರೆ. ಬಜೆಟ್ ದಿನಾಂಕ ನಿಗದಿ ಮಾಡೋದು ಕ್ಯಾಬಿನೆಟ್. ಅಲ್ಲಿ ಚರ್ಚೆ ಮಾಡಿ ನಂತರ ರಾಜ್ಯಪಾಲರಿಗೆ ಕಳುಹಿಸುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕ್ಯಾಬಿನೆಟ್ ವಿಸ್ತರಣೆ – ಯಾರು ಇನ್? ಯಾವ ಕೋಟಾದಲ್ಲಿ ಯಾರಿಗೆ ಸ್ಥಾನ?

    ಕ್ಯಾಬಿನೆಟ್ ವಿಸ್ತರಣೆ – ಯಾರು ಇನ್? ಯಾವ ಕೋಟಾದಲ್ಲಿ ಯಾರಿಗೆ ಸ್ಥಾನ?

    ಬೆಂಗಳೂರು: ಕೆಜಿಎಫ್ ಚಿತ್ರಕ್ಕಿಂತಲೂ ಕುತೂಹಲ ಮೂಡಿಸಿರೋ ಕ್ಯಾಬಿನೆಟ್ ವಿಸ್ತರಣೆಗೆ ಕೊನೆಗೂ ಕಾಲಕೂಡಿ ಬಂದಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ರಾಜ್ಯದ ಕಾಂಗ್ರೆಸ್ ನಾಯಕರು ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ.

    ಸಂಪುಟ ವಿಸ್ತರಣೆ ಅಲ್ಲದೇ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮಗ್ಗಲ ಮುಳ್ಳಾಗಿರುವ ಜಾರಕಿಹೊಳಿ ಬ್ರದರ್ಸ್ ಅವರನ್ನ ಒಡೆದು ಆಳಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದ್ದು, ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಮಾಜಿ ಸಚಿವ ಸತೀಶ್ ಜಾರಕಿಹೊಳಿಗೆ ಅವಕಾಶ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಉಳಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಲು ಹೈಕಮಾಂಡ್ ಚರ್ಚೆ ನಡೆಸಿದೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಸಂಪುಟದಿಂದ ಯಾರಿಗೆ ಕೊಕ್ ?
    * ರಮೇಶ್ ಜಾರಕಿಹೊಳಿ ಔಟ್, ಸತೀಶ್ ಜಾರಕಿಹೊಳಿ ಇನ್ (ಎಸ್‍ಪಿ ಕೋಟಾ)
    * ಆರ್. ಶಂಕರ್ ಔಟ್, ಸಿ.ಎಸ್. ಶಿವಳ್ಳಿ ಇನ್ (ಕುರುಬರ ಕೋಟಾ)

    ಹೊಸದಾಗಿ ಯಾರ ಎಂಟ್ರಿ ?
    * ಎಂ.ಬಿ. ಪಾಟೀಲ್ / ಬಿಸಿ ಪಾಟೀಲ್ (ಲಿಂಗಾಯತ ಕೋಟಾ)
    * ರಹೀಂ ಖಾನ್ (ಮುಸ್ಲಿಂ ಕೋಟಾ)
    * ತುಕಾರಾಂ (ಎಸ್‍ಟಿ ಕೋಟಾ)
    * ಭೀಮಾನಾಯ್ಕ್/ ಪರಮೇಶ್ವರ ನಾಯ್ಕ್ (ಎಸ್‍ಟಿ ಲಂಬಾಣಿಗೆ ಮತ್ತೊಂದು ಸ್ಥಾನ)
    * ಧರ್ಮಸೇನಾ / ರೂಪಾ ಶಶಿಧರ್ / ತಿಮ್ಮಾಪೂರ (ದಲಿತ ಎಡಗೈ ಕೋಟಾ)
    * 20 ನಿಗಮ ಮಂಡಳಿಗೆ ನೇಮಕ
    * 8 ಸಂಸದೀಯ ಕಾರ್ಯದರ್ಶಿ, ಓರ್ವ ದೆಹಲಿ ವಿಶೇಷ ಪ್ರತಿನಿಧಿ ನೇಮಕ

    ಸಂಪುಟ ವಿಸ್ತರಣೆ ಕಸರತ್ತು ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ರಾಜ್ಯ ಕಾಂಗ್ರೆಸ್ ನಾಯಕರು ಈ ಸಂಬಂಧ ಚರ್ಚೆ ನಡೆಸಿದರು. ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಭೆಯಲ್ಲಿ ಭಾಗಿದ್ದರು. ಈ ವೇಳೆ ಆರು ಸಚಿವ ಸ್ಥಾನ ಭರ್ತಿ ಕುರಿತು ಚರ್ಚೆ ನಡೆಸಿದರು.

    ಈ ವೇಳೆ ಪ್ರಮುಖವಾಗಿ ವಿ. ಮುನಿಯಪ್ಪಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡುವ ವಿಚಾರದಲ್ಲಿ ನಾಯಕರದಲ್ಲಿ ಒಮ್ಮತ ಅಭಿಪ್ರಾಯ ಮೂಡಿಬಂತು ಎನ್ನಲಾಗಿದ್ದು, ರಾಹುಲ್ ಗಾಂಧಿ ಅವರ ಬಳಿ ಒಂದೇ ಹೆಸರು ನೀಡಿ ಅಂತಿಮ ಮುದ್ರೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ನೂತನ ಸಚಿವರ ಪ್ರಮಾಣವಚನ ಸಮಾರಂಭ ರಾಜಭವನದ ಗ್ಲಾಸ್‍ಹೌಸ್‍ನಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಕ್ಷೇತರ ಪಾಲಿಕೆ ಸದಸ್ಯರಿಗೆ ಬಿಜೆಪಿಯಿಂದ ಮಾನಸಿಕ ಹಿಂಸೆ-ದಿನೇಶ್ ಗುಂಡೂರಾವ್ ಆರೋಪ

    ಪಕ್ಷೇತರ ಪಾಲಿಕೆ ಸದಸ್ಯರಿಗೆ ಬಿಜೆಪಿಯಿಂದ ಮಾನಸಿಕ ಹಿಂಸೆ-ದಿನೇಶ್ ಗುಂಡೂರಾವ್ ಆರೋಪ

    ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸಿರುವ ಬಿಜೆಪಿ ಈ ಪ್ರಯತ್ನದಲ್ಲಿ ವಿಫಲವಾಗಿ, ಸದ್ಯ ಬಿಬಿಎಂಪಿಯಲ್ಲೂ ಅಧಿಕಾರ ವಹಿಸಲು ಅಂತಹದ್ದೇ ಯತ್ನ ನಡೆಸಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಮುಖಂಡರು ಬಿಬಿಎಂಪಿಯಲ್ಲಿ ಅಧಿಕಾರ ಕಿತ್ತುಕೊಳ್ಳಲು ವಿಫಲರಾಗಿದ್ದಾರೆ. ಇಲ್ಲಿ ಅಧಿಕಾರ ಪಡೆಯಲು ಪಕ್ಷೇತರ ಅಭ್ಯರ್ಥಿಗಳನ್ನು ಕರೆದುಕೊಂಡು ಮಾನಸಿಕ ಹಿಂಸೆ ನೀಡಿದ್ದಾರೆ. ಆದರೆ ಪಕ್ಷೇತರರು ನಮ್ಮ ಜೊತೆಯೇ ಬರುವುದಾಗಿ ತಿಳಿಸಿದ್ದಾರೆ. ಅದ್ದರಿಂದ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಮೈತ್ರಿ ಜೆಡಿಎಸ್ ಪಕ್ಷದೊಂದಿಗೆ ನಡೆಯುತ್ತದೆ ಎಂದು ತಿಳಿಸಿದರು.

    ಬಿಜೆಪಿ ಮುಖಂಡರು ಮಾತನಾಡಿದ ಬಳಿಕ ಪಕ್ಷೇತರರೆಲ್ಲರೂ ನಮ್ಮ ಬಳಿ ಬಂದು ಬಿಜೆಪಿ ನೀಡಿದ ಆಫರ್ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ ಅಭ್ಯರ್ಥಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿ ಮುಖಂಡರು ಅಧಿಕಾರ ಪಡೆಯಲು ವ್ಯರ್ಥ ಪ್ರಯತ್ನ ಮಡುತ್ತಿದ್ದಾರೆ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅವರಿಗೆ ದೇವರು ಈಗಲಾದರೂ ಉತ್ತಮ ಬುದ್ಧಿ ನೀಡಲಿ. ದೇವರು, ಆಚರಣೆ, ಸಂಸ್ಕøತಿ ಎಂದು ಹೇಳುವ ಅವರು ಮೊದಲು ಇಂತಹ ಕೆಲಸಗಳನ್ನು ನಿಲ್ಲಿಸಲಿ ಎಂದು ಹೇಳಿದರು.

    ಇನ್ನು ಬಿಬಿಎಂಪಿ ಮೈತ್ರಿ ಕುರಿತು ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್, ಹ್ಯಾರಿಸ್ ಸೇರಿದಂತೆ ಮುಖಂಡರೊಂದೊಗೆ ಚರ್ಚೆ ನಡೆಸಿ ತೀರ್ಮಾಸಲಿದ್ದೇವೆ. ಎಲ್ಲಾ ಪಕ್ಷೇತರ ಸದಸ್ಯರು ನಮ್ಮ ಜೊತೆ ಇದ್ದಾರೆ. ಅವರು ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಆದರೆ ಬಿಜೆಪಿ ಮುಖಂಡರು ಒತ್ತಡ ಹಾಕಿದ್ದಾರೆ. ಅವರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv