Tag: Kotekar

  • Kotekar Bank Robbery | ಗುಪ್ತಚರ ಇಲಾಖೆ ಸಹಾಯದಿಂದ ಆರೋಪಿಗಳ ಬಂಧನ: ಕಮಿಷನರ್ ಅನುಪಮ್ ಅಗರ್ವಾಲ್

    Kotekar Bank Robbery | ಗುಪ್ತಚರ ಇಲಾಖೆ ಸಹಾಯದಿಂದ ಆರೋಪಿಗಳ ಬಂಧನ: ಕಮಿಷನರ್ ಅನುಪಮ್ ಅಗರ್ವಾಲ್

    ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ (Bank Robbery) ಪ್ರಕರಣ ಬೇಧಿಸಲು ಗುಪ್ತಚರ ಇಲಾಖೆ (Intelligence Department) ಸಹಾಯ ಮಾಡಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ (Anupam Agarwal) ಹೇಳಿದ್ದಾರೆ.

    ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬೈ (Mumbai) ಮೂಲದ ಗ್ಯಾಂಗ್‌ನಿಂದ ದರೋಡೆ ನಡೆದಿದೆ. ತಮಿಳುನಾಡು ಮೂಲದವರಾದ ದರೋಡೆಕೋರರು ದರೋಡೆ ಮಾಡಲೆಂದೇ ಮಂಗಳೂರಿಗೆ ಬಂದಿದ್ದರು. ಬಳಿಕ ಕೇರಳದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು ಎಂದರು. ಇದನ್ನೂ ಓದಿ: ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮುಸ್ಲಿಂ ವ್ಯಕ್ತಿ ಮತಾಂತರ – ದೇವಾಲಯದಲ್ಲಿ ವಿವಾಹ

    ಮುಂಬೈಯಿಂದ ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ. ಮುರುಗಂಡಿ ದೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್. ಪ್ರಕಾಶ್@ಜೋಶ್ವಾ, ಮಣಿವಣ್ಣನ್‌ನನ್ನೂ ಬಂಧನ ಮಾಡಿದ್ದೇವೆ. ತಮಿಳುನಾಡಿನ ತಿರುವನ್ನೇಲಿಯಿಂದ ಬಂಧಿಸಿದ್ದೇವೆ. ಬಂಧಿತರಿಂದ ಫಿಯೆಟ್ ಕಾರ್ ವಶಪಡಿಸಿಕೊಂಡಿದ್ದೇವೆ. ದರೋಡೆಗೆ ಮಹಾರಾಷ್ಟ್ರ ಮೂಲದ ಫಿಯೆಟ್ ಕಾರ್ ಬಳಸಿದ್ದರು. ಮುರುಗುಂಡಿ ಕಾರನ್ನು ತಿರುವನ್ನಲಿ ತನಕ ಕೊಂಡು ಹೋಗಿದ್ದರು. ಆರೋಪಿಗಳಿಂದ ಎರಡು ಗೋಣಿ ಚೀಲ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತರರಾಜ್ಯ ಪ್ರವಾಸಿ ತಾಣಗಳಿಗೆ KSTDC ಪ್ಯಾಕೇಜ್ ಟೂರ್ – ಯಾವ ಸ್ಥಳಕ್ಕೆ ಎಷ್ಟು ರೂ?

    ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದೆ. ಬಂಧಿತರಿಂದ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ.ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೇ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮಂಗಳೂರು ಬ್ಯಾಂಕ್‌ ದರೋಡೆ ಕೇಸ್‌ – ಮುಂಬೈ ಗ್ಯಾಂಗ್‌ಗೆ ಸೇರಿದ ಮೂವರು ಆರೋಪಿಗಳು ಅರೆಸ್ಟ್‌

  • ಮಂಗಳೂರು ಬ್ಯಾಂಕ್‌ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?

    ಮಂಗಳೂರು ಬ್ಯಾಂಕ್‌ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?

    ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಹಗಲು ದರೋಡೆ ಪ್ರಕರಣ (Kotekar Cooperative Bank Robbery) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೇವಲ 5 ನಿಮಿಷದಲ್ಲಿ ಹಣ, ಚಿನ್ನದ ಮೂಟೆ ಕಟ್ಟಿಕೊಂಡು ಹೋಗಿದ್ದ ಖದೀಮರ ಮಾಸ್ಟರ್ ಪ್ಲ್ಯಾನ್‌ ಏನು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

    ಬ್ಯಾಂಕ್‌ನಲ್ಲಿ ಲೂಟಿ ಮಾಡಿದ ಡಕಾಯಿತರು ಕೋಟೆಕಾರು ಜಂಕ್ಷನ್‌ನಿಂದ ಮುಖ್ಯರಸ್ತೆಗೆ ಹೋಗಿ ಅಲ್ಲಿಂದ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ದರೋಡೆ ವೇಳೆ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಸಿದಿದ್ದ ಕಿಡಿಗೇಡಿಗಳು, ಮಂಗಳೂರು (Mangaluru) ನಗರವನ್ನು ಸುತ್ತಿ ಕದ್ರಿ ರಸ್ತೆಯ ಬಳಿ ಮೊಬೈಲ್ ಎಸೆದಿದ್ದಾರೆ. ಇದನ್ನೂ ಓದಿ: ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

     

    1 ಕಾರ್ ಮಂಗಳೂರಿನ ಕಡೆಗೆ ಹೋದರೆ ಇನ್ನೊಂದು ಕಾರು ಚಿನ್ನಾಭರಣ ಸಮೇತ ಕೇರಳ ಕಡೆಗೆ ಹೋಗಿದೆ. ಕಾರಿಗೆ ಬೆಂಗಳೂರು ನಂಬರ್ ಪ್ಲೇಟ್ ಅಂಟಿಸಿದ್ದಾರೆ. ತಲಪಾಡಿ ಟೋಲ್ ಗೇಟ್‌ನಲ್ಲಿ 150 ರೂಪಾಯಿ ಟೋಲ್ ಕಟ್ಟಿದ್ದಾರೆ. ಈ ಟೋಲ್ ಗೇಟ್‌ನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರ 2 ತಂಡ ಕಾಸರಗೋಡು, ಕೇರಳದತ್ತ ಹೋಗಿವೆ. ಕೇರಳ ತಲುಪಿದ್ದ ದರೋಡೆಕೋರರು ಬೋಟ್ ಮೂಲಕ ತಮಿಳುನಾಡು ತಲುಪಿರುವ ಶಂಕೆಯೂ ವ್ಯಕ್ತವಾಗಿದೆ. ಅಲ್ಲದೇ ನಕಲಿ ಇಡಿ ಅಧಿಕಾರಿಗಳ ಹೆಸರಲ್ಲಿ ಬೀಡಿ ವ್ಯಾಪಾರಿಗೆ ವಂಚಿಸಿದ್ದ ಗ್ಯಾಂಗೇ ಈ ಕೃತ್ಯವನ್ನು ಎಸಗಿರುವ ಅನುಮಾನವಿದೆ.

     

    ಬ್ಯಾಂಕ್ ದರೋಡೆಯಾದ ಬೆನ್ನಲ್ಲೇ ಆತಂಕಕ್ಕೊಳಗಾದ ಗ್ರಾಹಕರು ಬ್ಯಾಂಕ್ ಮುಂದೆ ಜಮಾಯಿಸಿದ್ದರು. ನಮ್ಮ ಚಿನ್ನ, ಹಣ ನಮಗೆ ಕೊಡಿ ಅಂತ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್‌ನವರ ನಿರ್ಲಕ್ಷ್ಯದಿಂದಲೇ ಈ ದರೋಡೆ ನಡೆದಿದೆ. ಅವರ ಕೈವಾಡವೂ ಇರಬಹುದು ಅಂತ ಗ್ರಾಹಕರು ಆರೋಪಿಸಿದ್ದಾರೆ.