Tag: koppala. police

  • ಲವ್ವರ್‌ ಜೊತೆ ಗಂಡನ ಹತ್ಯೆ – ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿ ಹಬ್ಬ ಮಾಡಿದ್ದ ಪತ್ನಿ ಅಂದರ್‌

    ಲವ್ವರ್‌ ಜೊತೆ ಗಂಡನ ಹತ್ಯೆ – ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿ ಹಬ್ಬ ಮಾಡಿದ್ದ ಪತ್ನಿ ಅಂದರ್‌

    – ರಾಡ್‌ನಿಂದ ಹೊಡೆದು, ಪೆಟ್ರೋಲ್‌ ಸುರಿದು ಸುಟ್ಟಿದ್ದ ಮುದ್ದಿನ ಹೆಂಡ್ತಿ
    – ಮೂರು ಮಕ್ಕಳ ತಂದೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ

    ಕೊಪ್ಪಳ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು, ಸುಟ್ಟು ಹಾಕಿದ ಬಳಿಕ ನಾಗರ ಪಂಚಮಿ ಹಬ್ಬ ಮಾಡಿದ್ದ ವಿಲಕ್ಷಣ ಘಟನೆಯೊಂದು ಕೊಪ್ಪಳ (Koppala) ತಾಲೂಕಿನ ಬುದಗೂಂಪದಲ್ಲಿ ನಡೆದಿದೆ.

    ದ್ಯಾಮಣ್ಣ ವಜ್ರಬಂಡಿ (38) ಕೊಲೆಯಾದ ಪತಿ, ನೇತ್ರಾವತಿ (Netravati) ಚಟ್ಟಕಟ್ಟಿದ ಪತ್ನಿ. ತನ್ನ ಪ್ರಿಯಕರ ಶಾಮಣ್ಣ ಜೊತೆ ಸೇರಿಕೊಂಡು ಪತಿಯನ್ನ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

    ಕೊಲೆ ನಡೆದಿದ್ದು ಹೇಗೆ?
    ಪತ್ನಿ ನೇತ್ರಾವತಿ ಜುಲೈ 25ರಂದು ಪ್ರೀಯಕರ ಶ್ಯಾಮಣ್ಣ ಜೊತೆ ಸೇರಿಕೊಂಡು ಗಂಡನನ್ನ ಕೊಲೆ ಮಾಡಿದ್ದಳು. ತಮ್ಮ ಜಮೀನಿನಲ್ಲಿಯೇ ರಾಡ್ ನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಶವ ಸುಟ್ಟು ಹಾಕಿದ್ದಳು. ಶ್ಯಾಮಣ್ಣ ಜೊತೆ ಸೇರಿಕೊಂಡು ಪೆಟ್ರೋಲ್‌ ಸುರಿದು ಶವ ಸುಟ್ಟಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್- ವಿಕಾಸ್ ಕುಮಾರ್ ಸಸ್ಪೆಂಡ್ ಆದೇಶ ವಾಪಸ್

    ಪರಸಂಗಕ್ಕೆ ಅಡ್ಡಿಯಾದ ಪತಿಗೆ ಚಟ್ಟ
    ಆರೋಪಿ ಶ್ಯಾಮಣ್ಣ ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿ. ಅದೇ ಗ್ರಾಮದ ನೇತ್ರಾವತಿಯನ್ನ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ನೇತ್ರಾವತಿ ಹಾಗೂ ಶ್ಯಾಮಣ್ಣ ನಡುವೆ ಅಕ್ರಮ ಸಂಭಂದ ಇತ್ತು. ಶ್ಯಾಮಣ್ಣನಿಗೆ ಮೂರು ಮಕ್ಕಳಿದ್ದರೂ ಇಬ್ಬರ ಅಕ್ರಮ ಸಂಬಂಧ ಮುಂದುವರಿದಿತ್ತು. ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ

    ದ್ಯಾಮಣ್ಣನನ್ನ ಕೊಲೆ ಮಾಡಲೆಂದೇ ಬೂದಗುಂಪದ ಗ್ಯಾರೇಜ್ ಒಂದರಲ್ಲಿ ಶ್ಯಾಮಣ್ಣ ರಾಡ್ ಪಡೆದು ಅದೇ ರಾಡ್ ನಿಂದ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಲಾರಿ ಚಕ್ರ ರಿಪೇರಿಗೆಂದು ರಾಡ್ ಪಡೆದುಕೊಂಡದಿದ್ದ ಶ್ಯಾಮಣ್ಣ, ಅದೇ ರಾಡ್ ನಿಂದ ದ್ಯಾಮಣ್ಣನನ್ನ ಕೊಂದಿದ್ದಾನೆ. ಕೊಲೆ ನಂತ್ರ ರಾಡ್ ವಾಪಸ್‌ ಕೊಟ್ಟಿದ್ದಾನೆ. ಜೊತೆಗೆ ಲಾರಿಗೆ ಪಂಚರ್‌ ಹಾಕಿಸಿಕೊಂಡು ಹಣ ಆಮೇಲೆ ಕೊಡ್ತೀನಿ ಎಂದು ಸಹಿ ಮಾಡಿ ಹೋಗಿದ್ದ, ಅಷ್ಟರಲ್ಲಿ ತಗಲ್ಲಾಕೊಂಡಿದ್ದಾನೆ.

    ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿದ್ದ ಐನಾತಿ
    ಜುಲೈ 25ರಂದು ಪತಿಯನ್ನ ಕೊಲೆ ಮಾಡಿದ್ದ ನೇತ್ರಾವತಿ 5 ದಿನಗಳ ಕಾಲ ಮನೆಯಲ್ಲೇ ಇದ್ದಳು. ಕೊಲೆ ನಂತರ ತನ್ನ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಳು. ದ್ಯಾಮಣ್ಣನ ಮನೆಯವರು ಗಂಡನನ್ನ ಕೇಳಿದ್ರೆ ಧರ್ಮಸ್ಥಳಕ್ಕೆ (Dharmasthala) ಹೋಗಿದ್ದಾರೆಂದು ಕಥೆ ಕಟ್ಟಿದ್ದಳು. ಇದರಿಂದ ಅನುಮಾನಗೊಂಡ ದ್ಯಾಮಣ್ಣ ಸಹೋದರರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಬಳಿಕ ನೇತ್ರಾವತಿ ಸತ್ಯ ಒಪ್ಪಿಕೊಂಡಿದ್ದಾಳೆ. ಬಳಿಕ ನೇತ್ರಾವತಿ ಹಾಗೂ ಕೊಲೆ ಮಾಡಿದ ಪ್ರೀಯಕರ ಶ್ಯಾಮಣ್ಣನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

    ಇನ್ನೂ ಅಪರಿಚಿತ ಶವ ಪತ್ತೆಯಾದಾಗ ಗುರುತು ಸಿಗದ ಹಿನ್ನೆಲೆ ಕೊಪ್ಪಳ ಮುನಿರಾಬಾದ್ ಪೊಲೀಸರೇ ಶವ ಸಂಸ್ಕಾರ ಮಾಡಿದ್ರು. ಗುರುವಾರ (ಜು.31) ವಿಷಯ ತಿಳಿದ ಬಳಿಕ ದ್ಯಾಮಣ್ಣ ಕುಟುಂಬಸ್ಥರು ಶವಕ್ಕೆ ಮಣ್ಣು ಹಾಕಿ ಶಾಸ್ತ್ರ ನೆರವೇರಿಸಿದ್ದಾರೆ. ದ್ಯಾಮಣ್ಣ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಗಾರೆ ಕೆಲಸದವನ ಜೊತೆ ಕಂಟ್ರ್ಯಾಕ್ಟರ್ ಮಗಳ ಲವ್ – ಮದ್ವೆಯಾದ 15 ದಿನಕ್ಕೆ ಓಡಿಬಂದ ಗೃಹಿಣಿ!

    ಗಾರೆ ಕೆಲಸದವನ ಜೊತೆ ಕಂಟ್ರ್ಯಾಕ್ಟರ್ ಮಗಳ ಲವ್ – ಮದ್ವೆಯಾದ 15 ದಿನಕ್ಕೆ ಓಡಿಬಂದ ಗೃಹಿಣಿ!

    ಕೊಪ್ಪಳ: ಮದುವೆಯಾದ 15 ದಿನಕ್ಕೆ ಗಾರೆ ಕೆಲಸದಾತನೊಂದಿಗೆ ಕಂಟ್ರ್ಯಾಕ್ಟರ್ ಮಗಳು ಓಡಿ ಹೋಗಿರುವ ಘಟನೆ ಕೊಪ್ಪಳದಲ್ಲಿ (Koppala) ನಡೆದಿದೆ.

    ಆಂಧ್ರಪ್ರದೇಶ ಮೂಲದ ಲೇಬರ್ ಕಂಟ್ರ್ಯಾಕ್ಟರ್ (Contractor) ಮಗಳಿಗೆ ಬೆಂಗಳೂರಲ್ಲಿ ತಂದೆ ಬಳಿ ಗಾರೆ ಕೆಲಸ ಮಾಡ್ತಿದ್ದ ಯುವಕನ ಮೇಲೆ ಲವ್ ಆಗಿತ್ತು. ಗಾರೆ ಕೆಲಸ ಮಾಡ್ತಿದ್ದ ವೇಳೆ ವೆಂಕಟೇಶ್ ಮೇಲೆ ಆಕೆಗೆ ಪ್ರೀತಿ (Love) ಮೂಡಿತ್ತು. ಇದನ್ನೂ ಓದಿ: ಬೆಳಗಾವಿ | ರಜೆಗೆಂದು ಊರಿಗೆ ಬಂದಿದ್ದ ಯೋಧ ಇಬ್ರಾಹಿಂ ಹೃದಯಾಘಾತದಿಂದ ಸಾವು

    ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ರು. ಆದ್ರೆ ಇಬ್ಬರ ಪ್ರೀತಿ ವಿಷಯ ತಿಳಿದ ಮಹಿಳೆಯ ಪೋಷಕರು ಆಕೆಯನ್ನು ಊರಿಗೆ ಕರೆದೊಯ್ದು ಬಲವಂತವಾಗಿ ಬೇರೆ ಮದುವೆ ಮಾಡಿಸಿದ್ದರು. ಆದರೆ ಬೇರೆ ಮದುವೆಯಾಗಿ ಗಂಡನ ಮನೆಗೆ ಹೋದ ಗೃಹಿಣಿ, ವೆಂಕಟೇಶ್‌ಗೆ ಕರೆ ಮಾಡಿ ಆತನೊಂದಿಗೆ ಬರೋದಾಗಿ ತಿಳಿಸಿದ್ದಾಳೆ. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಂಡು ಸಾಯೋದಾಗಿ ಹೇಳಿ, ಮದುವೆಯಾಗಿ 15 ದಿನಕ್ಕೆ ಗಂಡನ ಮನೆ ಬಿಟ್ಟು ಪ್ರೀತಿಸಿದ ಯುವಕನ ಜೊತೆ ಮನೆ ಬಿಟ್ಟು ಬಂದಿದ್ದಾಳೆ. ಇದನ್ನೂ ಓದಿ: 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ, ಪ್ರತಿ ತಿಂಗಳು ಹಣ ಕೊಡೋಕೆ ತೊಡಕುಗಳಿವೆ: ಹೆಚ್.ಎಂ ರೇವಣ್ಣ

    ಮಹಿಳೆಯು ವೆಂಕಟೇಶ್ ಜೊತೆ ಕೊಪ್ಪಳಕ್ಕೆ ಬಂದಿರುವ ವಿಚಾರ ತಿಳಿದ ಆಕೆಯ ಪೋಷಕರು ಆಂಧ್ರಪ್ರದೇಶದಿಂದ ಕೊಪ್ಪಳಕ್ಕೆ ಬಂದು ಜೋಡಿಯ ಹುಡುಕಾಟ ನಡೆಸಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಕೊಪ್ಪಳ ಎಸ್ಪಿಯ ಮೊರೆ ಹೋಗಿದ್ದು, ನಮಗೆ ರಕ್ಷಣೆ ಸಿಗೋವರೆಗೂ ಎಲ್ಲೂ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೊಪ್ಪಳ ಪೊಲೀಸರು ಈ ಜೋಡಿಗೆ ರಕ್ಷಣೆ ನೀಡಿ, ಒಂದಾಗಿ ಬಾಳಲು ಅವಕಾಶ ಕೊಡಿಸ್ತಾರಾ ಕಾದು ನೋಡಬೇಕಿದೆ.

  • ಪತ್ನಿ ಪಾಲಿಗೆ ವಿಲನ್ ಆದ ಪೊಲೀಸ್ ಕಾನ್ಸ್‌ಟೇಬಲ್ – ಕೊಪ್ಪಳದಲ್ಲಿ ಗರ್ಭಿಣಿ ಹೆಂಡ್ತಿಗೆ ಟಾರ್ಚರ್

    ಪತ್ನಿ ಪಾಲಿಗೆ ವಿಲನ್ ಆದ ಪೊಲೀಸ್ ಕಾನ್ಸ್‌ಟೇಬಲ್ – ಕೊಪ್ಪಳದಲ್ಲಿ ಗರ್ಭಿಣಿ ಹೆಂಡ್ತಿಗೆ ಟಾರ್ಚರ್

    ಕೊಪ್ಪಳ: ಆತ ಓರ್ವ ಪೊಲೀಸ್ ಹೆಡ್ ಕಾನ್ಸ್‌ಟೇಬಲ್. ಜನರಿಗೆ ಆತ ನ್ಯಾಯ ಕೊಡಿಸಬೇಕಾದವನು. ಆದರೆ ಇದೀಗ ಆ ಮುಖ್ಯ ಪೇದೆ ತನ್ನ ಪತ್ನಿಯ ಬಾಳಲ್ಲಿ ವಿಲನ್ ಆಗಿದ್ದಾನೆ. ಮದುವೆ ಆದ ಐದೇ ದಿನದಿಂದ ಪತ್ನಿ ಕಿರುಕಳ ನೀಡುತ್ತಿರೋ ಆ ಪೊಲೀಸ್ ಪೇದೆ, ಇದೀಗ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ.

    ಹೌದು. ಕೊಪ್ಪಳ ನಗರ ಠಾಣೆಯ ಮುಖ್ಯ ಪೇದೆ ಬಸವರಾಜ್ ಪತ್ನಿ ಬಾಳಲ್ಲಿ ವಿಲನ್ ಆಗಿದ್ದಾನೆ. ಪತ್ನಿ ಕವಿತಾಗೆ ಕಿರುಕುಳ ನೀಡ್ತಿರೋ ಆರೋಪ ಎಸ್ ಬಸವರಾಜ್ ವಿರುದ್ಧ ಕೇಳಿ ಬಂದಿದೆ. ಬಸವರಾಜ್ ಹಾಗೂ ಕವಿತಾ 2018ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಐದನೇ ದಿನಕ್ಕೆ ಇಬ್ಬರ ಬಾಳಲ್ಲಿ ಬಿರುಗಾಳಿ ಶುರುವಾಗಿತ್ತು. ಅಷ್ಟಕ್ಕೂ ಬಿರುಗಾಳಿ ಶುರುವಾಗಲು ಇನ್ನೊಬ್ಬ ಹೆಣ್ಣು ಕಾರಣವಾಗಿದ್ದಾಳೆ. ಪತ್ನಿ ಇದ್ದರೂ ಮತ್ತೊಬ್ಬಳ ಜೊತೆ ಬಸವರಾಜ್ ಅಕ್ರಮ ಸಂಬಂಧ ಹೊಂದಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ ಬಸವರಾಜ್ ನಿತ್ಯ ಪತ್ನಿ ಕವಿತಾಗೆ ಕಿರುಕುಳ ನೀಡುತ್ತಿದ್ದಾನೆ. ಕಳೆದ ಎಂಟು ದಿನಗಳ ಹಿಂದೆ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ಗಲಾಟೆಯಾಗಿ ಪತ್ನಿ ಕವಿತಾಳನ್ನು ಮನೆಯಿಂದ ಹೊರಹಾಕಿದ್ದಾನೆ. ಅಲ್ಲದೆ ಗರ್ಭಿಣಿಯಾಗಿರುವ ಕವಿತಾ ಹೊಟ್ಟೆಗೆ ಬಸವರಾಜ್ ಬಲವಾಗಿ ಒದ್ದಿದ್ದಾನೆ. ಪರಿಣಾಮ ಹೊಟ್ಟೆಯಲ್ಲಿರೋ ಮಗುವಿಗೆ ತೊಂದರೆಯಾಗಿದೆ ಎಂದು ವೈದ್ಯರು ಹೇಳಿದ್ದಾರಂತೆ.

    ಬಸವರಾಜ್ ಅನೇಕ ಬಾರಿ ಕವಿತಾಳೊಂದಿಗೆ ಜಗಳ ಮಾಡಿದ್ದರೂ ಹಿರಿಯರೆಲ್ಲ ಸೇರಿ ಬಗೆಹರಿಸಿದ್ರು. ಆದರೂ ಬಸವರಾಜ್ ಗದಗಿನ ತನ್ನ ಹಳೆಯ ಪ್ರೇಯಸಿಯನ್ನ ಮರೆತ್ತಿಲ್ಲ. ಅವಳೊಂದಿಗೆ ನಿತ್ಯ ಫೋನಿನಲ್ಲಿ ಮಾತಾಡಿದ್ದಾನೆ. ಈ ವಿಷಯ ಕವಿತಾಳಿಗೂ ತಿಳದಿತ್ತು. ಹೀಗಾಗಿ ಹಳೆ ಪ್ರೇಯಸಿ ವಿಚಾರಕ್ಕೆ ಗಲಾಟೆಯಾಗಿದೆ. ಹಳೆ ಪ್ರೇಯಸಿ ನಿತ್ಯ ಬಸವರಾಜ್‍ಗೆ ಫೋನ್ ಮಾಡಿ ಹೆಂಡತಿಗೆ ಡಿವೋರ್ಸ್ ಕೊಡು ಎಂದು ಹೇಳುತ್ತಿದ್ದಾಳಂತೆ. ಪ್ರೇಯಸಿ ಮಾತು ಕೇಳಿ ಮುಖ್ಯ ಪೇದೆ ಬಸವರಾಜ್ ಕವಿತಾಳಿಗೆ ವಿಚ್ಚೇಧನ ಕೊಡುವಂತೆ ಕಿರುಕುಳ ನೀಡುತ್ತಿದ್ದಾನೆ. ಇದಲ್ಲದೆ ಕವಿತಾ ಹಾಗೂ ಬಸವರಾಜ್ ದಂಪತಿಗೆ ಈಗಾಗಲೇ ಒಂದು ವರ್ಷದ ಹೆಣ್ಣು ಮಗು ಇದೆ. ಆ ಮಗು ಹೆಣ್ಣು ಹೀಗಾಗಿ ಅದನ್ನು ಮಾರಾಟ ಮಾಡಿ ಎಂದು ಕಿರುಕುಳ ನೀಡುತ್ತಿದ್ದಾನೆ. ಮುಖ್ಯ ಪೇದೆಯ ಕೀಚಕ ಕೃತ್ಯಕ್ಕೆ ಹೆಂಡತಿ ಹಾಗೂ ಹೆಣ್ಣು ಮಗು, ಹೊಟ್ಟೆಯಲ್ಲಿರೋ ಮಗು ಮೂವರು ನರಕಯಾತನೆ ಅನುಭವಿಸುತ್ತಿದ್ದಾರೆ. ಈಗಾಗಲೇ ಕವಿತಾ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದು, ತವರು ಮನೆ ನವಲಗುಂದಲದಲ್ಲಿ ಕೀಚಕ ಪೇದೆಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

    ಒಟ್ಟಾರೆ ಜನರಿಗೆ ನ್ಯಾಯ ಹೇಳಬೇಕಾದ ಪೇದೆಯೇ ಇದೀಗ ವಿಲನ್ ಆಗಿದ್ದಾನೆ. ಹಳೆ ಪ್ರೇಯಸಿ ಮಾತು ಕೇಳಿ ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ. ಜೊತೆಗೆ ಮಗು ಮಾರಾಟ ಮಾಡು ಅಂತ ಪೀಡಿಸುತ್ತಿರೋ ಪೊಲೀಸ್ ಪೇದೆ ಬಸವರಾಜ್‍ಗೆ ಸರಿಯಾದ ಶಿಕ್ಷೆಯಾಗಬೇಕಿದೆ ಎಂದು ಕವಿತಾ ಅಲವತ್ತುಕೊಂಡಿದ್ದಾರೆ.