Tag: Kollywood

  • ನಟನೆಯಿಂದ ನಿವೃತ್ತಿ ಪಡೆಯುತ್ತಾರಾ ಸೂಪರ್ ಸ್ಟಾರ್ – ಅಣ್ಣಾತೆ ಚಿತ್ರೀಕರಣದ ವೇಳೆ ರಜನಿ ಹೇಳಿದ್ದೇನು?

    ನಟನೆಯಿಂದ ನಿವೃತ್ತಿ ಪಡೆಯುತ್ತಾರಾ ಸೂಪರ್ ಸ್ಟಾರ್ – ಅಣ್ಣಾತೆ ಚಿತ್ರೀಕರಣದ ವೇಳೆ ರಜನಿ ಹೇಳಿದ್ದೇನು?

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಿಂದ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ.

    ನಟ ರಜನಿಕಾಂತ್ ಇತ್ತೀಚೆಗೆ ಅಣ್ಣಾತೆ ಸಿನಿಮಾದ ಚಿತ್ರೀಕರಣ ಮುಗಿಸಿ ಹೈದರಾಬಾದ್‍ನಿಂದ ಚೆನ್ನೈಗೆ ಬಂದು ವ್ಯಾಕ್ಸಿನ್ ಎರಡನೇ ಡೋಸ್ ಪಡೆದು ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಕಾಲ ಕಳೆಯುತ್ತಿದ್ದಾರೆ.

    ಇಲ್ಲಿಯವರೆಗೂ ಸುಮಾರು 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಜನಿಕಾಂತ್‍ರವರು ತಮ್ಮ 70 ವಯಸ್ಸಿನಲ್ಲಿಯೂ ಬೆಳ್ಳಿ ಪರದೆ ಮೇಲೆ ಮಿಂಚುವ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

    ಆದರೆ ಇತ್ತೀಚೆಗೆ ಅಣ್ಣಾತೆ ಚಿತ್ರೀಕರಣದ ವೇಳೆ ರಜನಿಕಾಂತ್‍ರವರು ನಿವೃತ್ತಿ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಟನೆಯಿಂದ ನಿವೃತ್ತಿ ಪಡೆಯುವ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದು, ಆದರೆ ಸಿನಿಮಾದಲ್ಲಿ ನಟಿಸಬೇಕಾದರೆ ಆರೋಗ್ಯ ಸರಿಯಾಗಿ ಇರಬೇಕು ಎಂದು ಹೇಳಿದ್ದಾರಂತೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಜನಿಕಾಂತ್‍ರವರು ಸಿದ್ದರಾಗಿ ಅನಾರೋಗ್ಯ ಕಾರಣದಿಂದ ರಾಜಕೀಯದಿಂದಲೂ ದೂರ ಸರಿದರು.

    ಸದ್ಯ ರಜನಿಕಾಂತ್‍ರವರು ಅಣ್ಣಾತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ರಜನಿಕಾಂತ್‍ರವರಿಗೆ ನಯನತಾರಾ ಜೋಡಿಯಾಗಿದ್ದಾರೆ. ನಿರ್ದೇಶಕ ಶಿವಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಮೀನಾ, ಖುಷ್ಬೂ, ಕೀರ್ತಿ ಸುರೇಶ್, ಜಾಕಿ ಶ್ರಾಫ್, ಜಗಪತಿ ಬಾಬು, ಪ್ರಕಾಶ್ ರಾಜ್ ನಟಿಸಿದ್ದಾರೆ.

  • ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

    ಚೆನ್ನೈ: ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಅತೀ ಹೆಚ್ಚು ಶ್ರೀಮಂತ ನಟಿ ಎಂಬ ಸುದ್ದಿಯೊಂದು ಬಹಿರಂಗಗೊಂಡಿದೆ. ಹಲವಾರು ವರ್ಷಗಳಿಂದ ಸಿನಿಮಾಗಳಲ್ಲಿ ಅಭಿನಯಿಸಿರುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ನಟಿ ನಯನತಾರಗೆ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ.

    ಕಾಲಿವುಡ್, ಟಾಲಿವುಡ್, ಮಾಲಿವುಡ್, ಸ್ಯಾಂಡಲ್‍ವುಡ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನಯನತಾರರವರು ಖಾಸಗಿ ಜೀವನದಲ್ಲಿಯೂ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದಾರೆ. ಅಲ್ಲದೆ ಅನೇಕ ಟೀಕೆ, ವಿವಾದಗಳಿಗೂ ಒಳಗಾಗಿದ್ದರು. ಹೀಗಿದ್ದರೂ ನಯನತಾರ ಮಾತ್ರ ಯಾವುದಕ್ಕೂ ಕುಗ್ಗದೇ ಸೌತ್ ಸಿನಿ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ.

    ಸದ್ಯ ನಯನತಾರ ದಕ್ಷಿಣ ಭಾರತದ ಶ್ರೀಮಂತ ನಟಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸುತ್ತಾಡಲು ಪ್ರೈವೇಟ್ ವಿಮಾನವನ್ನೇ ಹೊಂದಿರುವ ಇವರ ಬಳಿ ಸುಮಾರು 70 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ನಯನತಾರ ಬಳಿ 80 ಲಕ್ಷದ ಆಡಿ ಕ್ಯೂ 7 ಕಾರು, 75.21 ಲಕ್ಷದ ಬಿಎಂಡಬ್ಲೂ ಎಕ್ಸ್ 5 ಎರಡು ದುಬಾರಿ ವೆಚ್ಚದ ಕಾರುಗಳಿದೆ.

    ಒಂದು ಸಿನಿಮಾದಲ್ಲಿ ಅಭಿನಯಿಸಲು ನಯನತಾರರವರು ಸುಮಾರು 3 ಕೋಟಿ ಸಂಭಾವನೆ ಪಡೆಯುತ್ತಾರೆ. 2019ರಲ್ಲಿ 7 ಸಿನಿಮಾಗಳಲ್ಲಿ ನಟಿಸಿರುವ ನಯನತಾರ, 2020ರಲ್ಲಿ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ನೆಟ್ರಿಕಣ್, ಅಣ್ಣಾತ್ತೆ ಹಾಗೂ ವಿಜಯ್ ಸೇತುಪತಿ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    ಮೂಲತಃ ಕೇರಳದವರಾಗಿರುವ ನಟಿ ನಯನತಾರ ಸದ್ಯ ಚೆನ್ನೈನ ಅಪಾರ್ಟ್‍ಮೆಂಟ್‍ನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲೀವಿಂಗ್ ಟೂ ಗೆದರ್ ರಿಲೇಷನ್ ಶಿಪ್‍ನಲ್ಲಿದ್ದಾರೆ.

  • ಕೊರೊನಾ ಲಸಿಕೆ ಪಡೆದ ತಲೈವಾ

    ಕೊರೊನಾ ಲಸಿಕೆ ಪಡೆದ ತಲೈವಾ

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಗುರುವಾರ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‍ನನ್ನು ಪಡೆದುಕೊಂಡಿದ್ದಾರೆ.

    ಈ ಕುರಿತಂತೆ ರಜನಿಕಾಂತ್ ಪುತ್ರಿ, ಸೌಂದರ್ಯ ರಜನಿಕಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ತಲೈವರ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಬನ್ನಿ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡಿ ಗೆಲವು ಸಾಧಿಸೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ರಜನಿಕಾಂತ್ ಗ್ರೇ ಕಲರ್ ಟೀ ಶರ್ಟ್ ಹಾಗೂ ಬ್ಲಾಕ್ ಕಲರ್ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದಾಗಿದೆ.

    ನಿರ್ದೇಶಕ ಸಿರುತೈ ಶಿವ ಆ್ಯಕ್ಷನ್ ಕಟ್ ಹೇಳುತ್ತಿರುವ ಅಣ್ಣಾತ್ತೆ ಚಿತ್ರೀಕರಣಕ್ಕಾಗಿ ಹೈದರಾಬಾದ್‍ಗೆ ತೆರಳಿದ್ದರು. ಆದರೆ ನಿನ್ನೆ ರಜನಿಕಾಂತ್ ಚೆನ್ನೈಗೆ ಹಿಂದಿರುಗಿ ಲಸಿಕೆ ಪಡೆದುಕೊಂಡಿದ್ದಾರೆ.

    ಅಣ್ಣಾತ್ತೆ ಸಿನಿಮಾದಲ್ಲಿ ರಜನಿಕಾಂತ್‍ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮೀನಾ, ಖುಷ್ಬು, ಪ್ರಕಾಶ್ ರಾಜ್ ಮತ್ತು ಕಾಣಿಸಿಕೊಂಡಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

  • ಸೀರೆಯಲ್ಲಿ ರಶ್ಮಿಕಾ ಮಂದಣ್ಣ – ಕೊಡಗಿನ ಕುವರಿ ಲುಕ್‍ಗೆ ಫಿದಾ ಆದ ಫ್ಯಾನ್ಸ್

    ಸೀರೆಯಲ್ಲಿ ರಶ್ಮಿಕಾ ಮಂದಣ್ಣ – ಕೊಡಗಿನ ಕುವರಿ ಲುಕ್‍ಗೆ ಫಿದಾ ಆದ ಫ್ಯಾನ್ಸ್

    ಬೆಂಗಳೂರು: ದಕ್ಷಿಣ ಭಾರತದ ಚೆಲುವೆ ನಟಿ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಮಿಂಚುವ ಮೂಲಕ ಅಭಿಮಾನಿಗಳನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ನಟ ಕಾರ್ತಿಕ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸುಲ್ತಾನ್ ಸಿನಿಮಾದ ಟ್ರೈಲರ್ ಲಾಂಚ್ ಸಮಾರಂಭ ಚೆನ್ನೈನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ರಶ್ಮಿಕಾ ರೆಟ್ರೋ ಕಮ್ ಮಾಡ್ರೆನ್ ಸೀರೆ ಲುಕ್‍ನಲ್ಲಿ ಮಿಂಚಿದ್ದರು. ಸದ್ಯ ಸೀರೆ ತೊಟ್ಟು ಫೋಟೋಗೆ ಪೋಸ್ ನೀಡಿರುವ ರಶ್ಮಿಕಾ ಮಂದಣ್ಣ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಫೋಟೋದಲ್ಲಿ ರಶ್ಮಿಕಾ ಕ್ರೀಮ್ ಕಲರ್ ನೆಟ್ ಸೀರೆ ತೊಟ್ಟು, ಕೂದಲನ್ನು ಬನ್ ಮೂಲಕ ಮೇಲಕ್ಕೆ ಕಟ್ಟಿದ್ದಾರೆ ಹಾಗೂ ಅದಕ್ಕೆ ಕೃತಕ ಗುಲಾಬಿ ಹೂವೊಂದನ್ನು ಮುಡಿದುಕೊಂಡಿದ್ದಾರೆ.

    ಸದಾ ಹೊಸ ತರಹದ ಲುಕ್‍ಗಳಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುವ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಅಲ್ಲದೆ ಈ ಸೀರೆ ರಶ್ಮಿಕಾ ಮಂದಣ್ಣ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರು. ಸದ್ಯ ಈ ಫೋಟೋವನ್ನು ರಶ್ಮಿಕಾ ತಮ್ಮ ಇನ್ ಸ್ಟಾಗ್ರಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ರೀತಿಯ ಪರಿಪೂರ್ಣತೆ( ಮೈ ಕೈಂಡ್ ಪರ್ಫೆಕ್ಟ್ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ರಶ್ಮಿಕಾರ ಈ ಫೋಟೋಗೆ ಅಭಿಮಾನಿಗಳು ಕಮೆಂಟ್ ಸೆಕ್ಷನ್‍ನಲ್ಲಿ ಹಾರ್ಟ್ ಚಿಹ್ನೆಯನ್ನು ಹಾಕುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕಾಲಿವುಡ್ ನಟಿ ಕೀರ್ತಿ ಸುರೇಶ್ ಕೂಡ ರಶ್ಮಿಕಾ ಮಂದಣ್ಣರ ಈ ಫೋಟೋಗೆ ಸ್ಮೈಲಿ ಚಿಹ್ನೆಯನ್ನು ಹಾಕಿ ಕಮೆಂಟ್ ಮಾಡಿದ್ದಾರೆ.

    ದಕ್ಷಿಣ ಭಾರತದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ರಶ್ಮಿಕಾ ಮಂದಣ್ಣ ಇದೀಗ ಮಿಷನ್ ಮಜ್ನು ಸಿನಿಮಾದ ಮೂಲಕ ಬಾಲಿವುಡ್‍ಗೆ ಲಗ್ಗೆ ಇಟ್ಟಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಜೋಡಿಯಾಗಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸಿದ್ದಾರೆ.

  • ಕಾಲಿವುಡ್ ನಟ ಸೂರ್ಯಗೆ ಕೊರೊನಾ ನೆಗೆಟಿವ್

    ಕಾಲಿವುಡ್ ನಟ ಸೂರ್ಯಗೆ ಕೊರೊನಾ ನೆಗೆಟಿವ್

    ಚೆನ್ನೈ: ಕಾಲಿವುಡ್ ನಟ ಸೂರ್ಯರಿಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುವುದಾಗಿ ಅವರ ಸಹೋದರ ನಟ ಕಾರ್ತಿಕ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಈ ವಿಚಾರವಾಗಿ ಕಾರ್ತಿಕ್, ಅಣ್ಣ ಮನೆಗೆ ಹಿಂದಿರುಗಿದ್ದಾರೆ ಮತ್ತು ಎಲ್ಲರೂ ಕ್ಷೇಮವಾಗಿದ್ದಾರೆ. ಕೆಲವು ದಿನಗಳ ಕಾಲ ಕ್ವಾರೆಂಟೈನ್‍ನಲ್ಲಿಯೇ ಇರಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗಾಗಿ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ತಮಿಳಿನಲ್ಲಿ ಟ್ವೀಟ್ ಮಾಡಿರುವ ಸೂರ್ಯ, ಕೋವಿಡ್ ಪಾಸಿಟಿವ್ ವರದಿಯಿಂದ ಚಿಕಿತ್ಸೆಗೆ ಒಳಗಾಗಿದ್ದ ನಾನು ಇದೀಗ ಕ್ಷೇಮವಾಗಿದ್ದೇನೆ. ಕೊರೊನಾದಿಂದ ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ನಾವು ಭಯದಿಂದ ಇರಲು ಸಾಧ್ಯವಿಲ್ಲ. ಜೀವನದಲ್ಲಿ ಬರುವುದನ್ನು ಸ್ವೀಕರಿಸೋಣ, ನಾವು ಇನ್ನೂ ಜಾಗರೂಕರೂಕತೆಯಿಂದ ಮತ್ತು ಸುರಕ್ಷತೆಯಿಂದ ಇರಬೇಕು. ಈ ಸಮಯದಲ್ಲಿ ನನ್ನ ಜೊತೆಯಾಗಿ ನಿಂತ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪ್ರೀತಿಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಅಮೆಜಾನ್ ಪ್ರೈಮ್ ಸನಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿತ್ತು.

  • ಕಾಲಿವುಡ್ ‘ಪೌಡರ್’ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ 50 ಸೆಲೆಬ್ರಿಟಿಗಳು

    ಕಾಲಿವುಡ್ ‘ಪೌಡರ್’ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ 50 ಸೆಲೆಬ್ರಿಟಿಗಳು

    ಕಾಲಿವುಡ್ ಬಹು ನಿರೀಕ್ಷಿತ ‘ಪೌಡರ್’ ಚಿತ್ರದ ಟೀಸರ್ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದೆ. ಚಿತ್ರತಂಡ ದಕ್ಷಿಣ ಭಾರತದ 50 ಸೆಲೆಬ್ರಿಟಿಗಳ ಕೈಯಲ್ಲಿ ಟೀಸರ್ ಬಿಡುಗಡೆ ಮಾಡಿಸುವ ಮೂಲಕ ವಿಶೇಷತೆ ಮೆರೆದಿದೆ. ರಾಣಾ ದಗ್ಗುಬಾಟಿ, ಮಮ್ಮುಟ್ಟಿ, ಎ.ಆರ್ ರೆಹಮಾನ್, ರಿತಿಕ್ ಸಿಂಗ್, ತಮನ್ನಾ, ಆರ್ ಮಾಧವನ್ ಸೇರಿದಂತೆ 50 ಸೆಲೆಬ್ರಿಟಿಗಳು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ಗಳಲ್ಲಿ ‘ಪೌಡರ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ವಿಭಿನ್ನವಾಗಿ ಟೀಸರ್ ಬಿಡುಗಡೆ ಮಾಡಿ ಗಮನ ಸೆಳೆದಿರುವ ‘ಪೌಡರ್’ ಚಿತ್ರ ಟೀಸರ್ ಮೂಲಕವೂ ಕ್ಯೂರಿಯಾಸಿಟಿ ಹುಟ್ಟುಹಾಕಿದೆ.

    ತಮಿಳು ಚಿತ್ರರಂಗದ ಜನಪ್ರಿಯ ಪಿಆರ್‍ಓ ನಿಖಿಲ್ ಮುರುಕನ್ ‘ಪೌಡರ್’ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪವರ್ ಫುಲ್ ಸಬ್ಜೆಕ್ಟ್ ಮೂಲಕ ನಿಖಿಲ್ ಮುರುಕನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ತಮ್ಮ ಬಹು ವರ್ಷಗಳ ಕನಸು ನನಸು ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಿಖಿಲ್ ಮುರುಕನ್ ಬಣ್ಣಹಚ್ಚಿದ್ದು, ನಟಿ ವಿದ್ಯಾ ಪ್ರದೀಪ್ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

    ಕ್ರೈಂ, ಥ್ರಿಲ್ಲರ್ ಕಥಾಹಂದರವುಳ್ಳ ‘ಪೌಡರ್’ ಚಿತ್ರವನ್ನು ಈ ಹಿಂದೆ ‘ದಾ ದಾ 87’ ಚಿತ್ರ ನಿರ್ದೇಶಿಸಿದ್ದ ವಿಜಯ್ ಶ್ರೀ ಜಿ ನಿರ್ದೇಶನ ಮಾಡುತ್ತಿದ್ದಾರೆ. ನರ ಮನುಷ್ಯರ ಮಾಂಸ ಮಾರಾಟ ಮಾಫಿಯಾ ಸುತ್ತಾ ಹೆಣೆಯಲಾದ ಕ್ರೈಂ ಥ್ರಿಲ್ಲರ್ ಚಿತ್ರ ಎನ್ನುವುದನ್ನು ಟೀಸರ್ ತುಣುಕು ಹೇಳುತ್ತಿದ್ದು ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಟೀಸರ್ ಬಿಜಿಎಂ ಸಖತ್ ಕಿಕ್ ನೀಡುತ್ತಿದ್ದು, ಚಿತ್ರದ ಮೇಲೆ ಸಿನಿ ಪ್ರೇಮಿಗಳಲ್ಲಿ ಬಾರೀ ನಿರೀಕ್ಷೆ ಮೂಡಿಸಿದೆ.

    ಆರಂಭದಲ್ಲೇ ಸಖತ್ ಸೌಂಡ್ ಮಾಡುತ್ತಿರುವ ‘ಪೌಡರ್’ ಚಿತ್ರದ ತಾರಾಬಳಗದಲ್ಲಿ ಮೊಟ್ಟ ರಾಜೇಂದ್ರನ್, ಮನೋಬಲ್, ಮನೋಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರಾಜಪಂಡ್ರಿ ಕ್ಯಾಮೆರಾ ಕೈಚಳಕ, ಸ್ಯಾಮ್ ಸಿ.ಎಸ್ ಸಂಗೀತ ನಿರ್ದೇಶನವಿದ್ದು, ಜಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ಜಯ ಶ್ರೀ ವಿಜಯ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಟ ವಿಜಯ್ ಸೇತುಪತಿ

    ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಟ ವಿಜಯ್ ಸೇತುಪತಿ

    ಚೆನ್ನೈ: ಹುಟ್ಟುಹಬ್ಬದಂದು ಲಾಂಗ್ ಹಿಡಿದು ಕೇಕ್ ಕತ್ತರಿಸಿದ ಕಾಲಿವುಡ್ ನಟ ವಿಜಯ್ ಸೇತುಪತಿ ತನ್ನ ತಪ್ಪಿನ ಅರಿವಾಗಿ ಟ್ವೀಟ್ ಮಾಡುವ ಮೂಲಕವಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿಜಯ್ ಸೇತುಪತಿಯವರು ಶೂಟಿಂಗ್ ಸೆಟ್‍ನಲ್ಲೇ ಬರ್ತ್ ಡೇ ಆಚರಿಸಿದ್ದರು. ಈ ವೇಳೆ ಲಾಂಗ್ ಹಿಡಿದು ಕೇಕ್ ಕಟ್ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ವಿಜಯ್ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ನೋಡಿದ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ನಾಯಕ ನಟನಾಗಿ ಹಲವರಿಗೆ ಮಾದರಿಯಾಗಿ ನಿಲ್ಲಬೇಕಿದ್ದ ನೀವು, ಈ ರೀತಿ ತಲ್ವಾರ್‍ನಲ್ಲಿ ಕೇಕ್ ಕತ್ತರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನರು ಪ್ರಶ್ನೆ ಮಾಡಿದ್ದರು. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿರೋಧವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ವಿಜಯ್ ಸೇತುಪತಿಯವರು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    ನನ್ನ ಜನ್ಮ ದಿನದ ಶುಭಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ. ಮೂರು ದಿನಗಳ ಹಿಂದೆ ನನ್ನ ಹುಟ್ಟುಹಬ್ಬದ ಆಚರಣೆಯಂದು ತೆಗೆದಿರುವ ಫೋಟೋಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ನಾನು ನಿರ್ದೇಶಕ ಪೊನ್‍ರಾಮ್ ಅವರ ಚಿತ್ರದಲ್ಲಿ ನಟಿಸಲಿದ್ದೇನೆ. ಅವರ ಸಿನಿಮಾದಲ್ಲಿ ಕತ್ತಿ ಪ್ರಮುಖ ಮಾತ್ರವನ್ನು ವಹಿಸುತ್ತದೆ. ಹೀಗಾಗಿ ಕೇಕ್ ಕತ್ತರಿಸಲು ಅದೇ ಕತ್ತಿಯನ್ನು ಬಳಕೆ ಮಾಡಿದ್ದೇನೆ. ನಾನು ಲಾಂಗ್ ಹಿಡಿದು ಕೇಕ್ ಕತ್ತರಿಸುವ ಮೂಲಕವಾಗಿ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಹುಷಾರ್ ಆಗಿರುತ್ತೇನೆ. ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

  • ಕಾಲಿವುಡ್‍ಗೆ ಎಂಟ್ರಿ ಕೊಟ್ಟ ಅಭಿನಯ ಚತುರ ನೀನಾಸಂ ಸತೀಶ್

    ಕಾಲಿವುಡ್‍ಗೆ ಎಂಟ್ರಿ ಕೊಟ್ಟ ಅಭಿನಯ ಚತುರ ನೀನಾಸಂ ಸತೀಶ್

    ಲೂಸಿಯಾ ಸಿನಿಮಾ ಮುಖಾಂತರ ಕನ್ನಡ ಸಿನಿರಸಿಕರ ಮನಗೆದ್ದು, ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ನಟ ನೀನಸಾಂ ಸತೀಶ್. ಅಭಿನಯ ಚತುರ ಎಂದೇ ಕರೆಸಿಕೊಳ್ಳೊವ, ಮಂಡ್ಯದ ಗಂಡು, ಲೂಸಿಯಾ ನಂತರ ಚಿತ್ರರಂಗದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ನಟನೆ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿಯಾದ ನೀನಾಸಂ ಸತೀಶ್ ಚಂದನವನದ ಬೇಡಿಕೆಯ ನಟ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನೀನಾಸಂ ಸತೀಶ್ ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

    ನಿರ್ದೇಶಕ ಅನಿಸ್ ಅಬ್ಬಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಪಗೈವಾನುಕ್ಕು ಅರುಲ್ವಾಯ್ ಚಿತ್ರದ ಮೂಲಕ ಕಾಲಿವುಡ್‍ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ ನೀನಾಸಂ ಸತೀಶ್. ಖೈದಿ ಪಾತ್ರದಲ್ಲಿ ಸತೀಶ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾದ ಪೆÇೀಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಚಿತ್ರತಂಡ ಕೂಡ ಸತೀಶ್ ನೀನಾಸಂ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡಿದೆ.

    ತಮಿಳು ಖ್ಯಾತ ನಟ ಸಸಿಕುಮಾರ್, ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಬಿಂದು ಮಾಧವಿ, ವಾಣಿ ಭೋಜನ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ನಾಸರ್, ಜಯಪ್ರಕಾಶ್ ಪಗೈವಾನುಕ್ಕು ಅರುಲ್ವಾಯ್ ಚಿತ್ರತಂಡದಲ್ಲಿದ್ದು, ಗಿಬ್ರನ್ ಸಂಗೀತ ನಿರ್ದೇಶನ, ಕಾರ್ತಿಕ್ ತಿಳ್ಳೈ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಈಗಾಗಲೇ ಪಗೈವಾನುಕ್ಕು ಅರುಲ್ವಾಯ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸತೀಶ್ ನೀನಾಸಂ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಥ್ರಿಲ್ಲರ್ ಕಥಾಹಂದರ ಒಳಗೊಂಡಿರೋ ಈ ಚಿತ್ರ ಬಹುತೇಕ ಚಿತ್ರೀಕರಣ ಜೈಲಿನಲ್ಲೇ ನಡೆಯಲಿದೆ. ನೀನಾಸಂ ಸತೀಶ್ ಕೂಡ ಖೈದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

     

    ಕನ್ನಡ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಸತೀಶ್ ನೀನಾಸಂ ಇತ್ತೀಚೆಗೆ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದಾರೆ. ಅಲ್ಲದೆ ದಸರಾ, ಮ್ಯಾಟ್ನಿ ಸಿನಿಮಾ ಶೂಟಿಂಗ್ ಕೂಡ ಲಿಸ್ಟ್‍ನಲ್ಲಿದ್ದು, ಸತೀಶ್, ಶ್ರದ್ದಾ ಶ್ರೀನಾಥ್ ಜೋಡಿಯ ಗೋದ್ರಾ ಸಿನಿಮಾ ಬಿಡುಗಡೆಯಾಗಬೇಕಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಸತೀಶ್ ನೀನಾಸಂ ಇದೀಗ ಕಾಲಿವುಡ್‍ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ತಲೈವಾ- ಮೋದಿ ಸೇರಿದಂತೆ ಗಣ್ಯರಿಂದ ವಿಶ್

    ಹುಟ್ಟುಹಬ್ಬದ ಸಂಭ್ರಮದಲ್ಲಿ ತಲೈವಾ- ಮೋದಿ ಸೇರಿದಂತೆ ಗಣ್ಯರಿಂದ ವಿಶ್

     – 70 ನೇ ವಸಂತಕ್ಕೆ ಕಾಲಿಟ್ಟ ರಜನಿ

    ಮುಂಬೈ: 70 ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮದಲ್ಲಿರುವ ತಲೈವಾ ರಜನಿಕಾಂತ್‍ಗೆ ಅಭಿಮಾನಿಗಳು ಮತ್ತು ಗಣ್ಯಾತಿಗಣ್ಯರಿಂದ ಶುಭಾಶಯಗಳ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಂದಿದೆ.

    ಪ್ರಧಾನಿ ನರೇಂದ್ರ ಮೋದಿ ‘ಪ್ರೀತಿಯ ರಜನಿಕಾಂತ್ ಅವರೇ, ನಿಮಗೆ ಜನ್ಮದಿನದ ಶುಭಾಶಯಗಳು. ನೀವು ಸುದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸುವಂತಾಗಲಿ’ ಎಂದು ಮೋದಿ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ‘ಕನ್ನಡ ನಾಡಿನ ಮಗನೊಬ್ಬ ಇಂದು ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ವರ್ಗವನ್ನೇ ಸಂಪಾದಿಸಿರುವ ಜನಪ್ರಿಯ ನಟ. ಸಾಧನೆ ಶಿಖರವೇರಿ, ಸಾಧನೆಯ ಹಸಿವಿರುವವರಿಗೆ ಮಾದರಿಯಾಗಿ ನಿಂತ ನಟ ರಜನಿಕಾಂತ್ ಅವರಿಗೆ ಜನ್ಮದಿನವಿಂದು. ಸಿನಿಮಾ ಅಷ್ಟೇ ಅಲ್ಲದೇ ಜನಸೇವೆಯಲ್ಲೂ ತೊಡಗಿರುವ ನಿಜವಾದ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಕಲವಾಗಿ ಜನ್ಮದಿನದ ಶುಭಾಷಯ ಕೋರಿದ್ದಾರೆ.

    ಕಾಲಿವುಡ್ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಸಾಧನೆ ಮಾಡಿರುವ ರಜನಿಕಾಂತ್ ಅವರಿಗೆ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲೂ ನಟಿಸುವ ಮೂಲಕ ಜನಮನ ಗೆದ್ದಿದ್ದಾರೆ. 70ನೇ ವರ್ಷಕ್ಕೆ ಕಾಲಿಟ್ಟಿರುವ ಅವರ ಬರ್ತ್‍ಡೇ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ರಜನಿ ಅವರ ಫೆÇೀಟೋ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.

    ರಜನಿಕಾಂತ್ ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್ ವಾಡ್. 5ನೇ ವಯಸ್ಸಿನಲ್ಲಿ ರಜನಿ ಅವರ ತಾಯಿ ತೀರಿಹೋದರು. ಅದಾದ ಬಳಿಕ ಅವರ ಪ್ರಾಥಮಿಕ ಶಿಕ್ಷಣ ಆಚಾರ್ಯ ಪಾಠಶಾಲೆಯಲ್ಲಿ, ನಂತರ ಕರ್ನಾಟಕ ರಾಮಕೃಷ್ಣ ವಿದ್ಯಾಲಯದಲ್ಲಿ ಮುಂದುವರಿಸಿದರು. ಸಿನಿಮಾ ರಂಗ ಪ್ರವೇಶಿಸಿದ ಶಿವಾಜಿ ರಾವ್ ನಂತರ ರಜನಿಕಾಂತ್ ಆಗಿ ಗುರುತಿಸಿಕೊಳ್ಳುತ್ತಾರೆ.

    ಸಿನಿಜರ್ನಿ:
    ರಜಿನಿಕಾಂತ್ ಸಿನಿಮಾ ಜರ್ನಿ ಬಹಳ ವಿಚಿತ್ರ ಮತ್ತು ವಿಭಿನ್ನವಾಗಿದೆ. ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸಿನಿಮಾ ಎಂದರೆ ರಜನಿಗೆ ಪಂಚಪ್ರಾಣ. ಜೊತೆಗೆ ಸಿನಿಮಾದಲ್ಲೂ ನಟಿಸುವ ಆಸೆ ಇತ್ತು. ಇವರ ಸಿನಿಮಾ ಪ್ರೀತಿಯನ್ನು ಕಣ್ಣಾರೆ ಕಂಡ ಗೆಳೆಯ ರಾಜ್ ಬಹದ್ದೂರ್ ಮದ್ರಾಸ್ ಫಿಲಂ ಇನ್ಟಿಟ್ಯೂಟ್‍ನಲ್ಲಿ ತರಬೇತಿ ತೆಗೆದುಕೊ ಎಂದು ಹುರಿದುಂಬಿಸಿದರು. ನಂತರ ಸಿನಿಮಾದಲ್ಲಿ ನಟಿಸುತ್ತಾ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡರು. ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲಿ ರಜನಿ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಹಿರಿಯ ನಟರೊಂದಿಗೆ ಹೆಜ್ಜೆ ಹಾಕಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ, ಖಳನಟನಾಯಿಗಿಯೂ ಸಿನಿಮಾದಲ್ಲಿ ಪಾತ್ರನಿರ್ವಹಿಸಿದ್ದಾರೆ.

    ರಜಿನಿ ಕಾಂತ್ ಅವರಿಗೆ ಯಾವುದೇ ಪಾತ್ರಕೊಟ್ಟರು ಆ ಪಾತ್ರಕ್ಕೆ ಜೀವ ತುಂಬುವ ನಟನೆಯನ್ನು ಮಾಡುತ್ತಿದ್ದರು. ಅಭಿಮಾನಿಗಳಿಗೆ ರಜಿನಿಕಾಂತ್ ಮತ್ತು ಅವರ ನಟನೆ ಎಂದರೆ ಬಲು ಇಷ್ಟ. ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ದ ದೊಡ್ಡ ಬಜೆಟ್ ಸಿನಿಮಾದ ಮೂಲಕ ಮತ್ತು ಅವರದೇ ಶೈಲಿಯಲ್ಲಿ ಡೈಲಾಗ್ ಡೆಲಿವರಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ಈಗಲೂ ಕಾಲಿವುಡ್ ಸಿನಿಮಾ ರಂಗದಲ್ಲಿ ರಜನಿಕಾಂತ್‍ಗೆ ಭಾರೀ ಬೇಡಿಕೆಯಿದೆ.

    ರಜನಿಕಾಂತ್ ಕನ್ನಡ ಸಿನಿಮಾಗಳು:
    ರಜನಿಕಾಂತ್ ಕನ್ನಡದಲ್ಲಿ ಕಥಾಸಂಗಮ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್, ಕುಂಕುಮ ರಕ್ಷ, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ಸವಾಲಿಗೆ ಸವಾಲ್, ತಪ್ಪಿದ ತಾಳ, ಪ್ರಿಯ, ಘರ್ಜನೆ ಸಿನಿಮಾದಲ್ಲಿ ನಟಿಸಿದ್ದಾರೆ.ತಮಿಳಿನಲ್ಲಿ ಅನೇಕ ಸಿನಿಮಾದಲ್ಲಿ ನಟಿಸಿದ ರಜನಿಕಾಂತ್ ಸದ್ಯ ಅನ್ನಾಥೆ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅದರೊಂದಿಗೆ ರಾಜಕೀಯದತ್ತ ಕೂಡ ಗಮನ ಹರಿಸಿದ್ದಾರೆ.

  • ಮರಿನಾ ಸಿನ್ಮಾ ಖ್ಯಾತಿಯ ನಟ ಥೆನ್ನರಸು ಸೂಸೈಡ್

    ಮರಿನಾ ಸಿನ್ಮಾ ಖ್ಯಾತಿಯ ನಟ ಥೆನ್ನರಸು ಸೂಸೈಡ್

    -ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
    -3 ವರ್ಷ ಹಿಂದೆ ಪ್ರೀತಿಸಿದ ಯುವತಿ ಜೊತೆ ಮದ್ವೆ

    ಚೆನ್ನೈ: 2012ರಲ್ಲಿ ಬಿಡುಗಡೆಯಾಗಿದ್ದ ಮರಿನಾ ಸಿನಿಮಾ ಖ್ಯಾತಿಯ ನಟ ಥೆನ್ನರಸು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ನಟ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    ಶಿವಕಾರ್ತಿಕೇಯನ್ ಮತ್ತು ಓವಿಯಾ ನಟನೆಯ ಮರಿನಾ ಸಿನಿಮಾ 2012ರಲ್ಲಿ ಸಖತ್ ಸದ್ದು ಮಾಡಿತ್ತು. ಮರಿನಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಥೆನ್ನರಸು ತಮ್ಮ ಸಹಜ ನಟನೆಯ ಮೂಲಕ ನೋಡುಗರಿಗೆ ಇಷ್ಟವಾಗಿದ್ದರು. ಮರಿನಾ ಬಳಿಕ ತಮಿಳಿನ ಹಲವು ಸಿನಿಮಾಗಳಲ್ಲಿ ಥೆನ್ನರಸು ನಟಿಸಿ ಸೈ ಅನ್ನಿಸಿಕೊಂಡಿದ್ದರು.

    ಮೂರು ವರ್ಷಗಳ ಹಿಂದೆ ಥೆನ್ನರಸು ಪ್ರೀತಿಸಿದ ಯುವತಿಯನ್ನ ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಸಹ ಇದೆ. ಮದ್ಯದ ದಾಸನಾಗಿದ್ದ ಥೆನ್ನರಸು ಮನೆಯಲ್ಲಿ ಪತ್ನಿ ಜೊತೆ ಸದಾ ಜಗಳವಾಡುತ್ತಿದ್ದರು. ಇಂದು ಸಹ ಪತಿ-ಪತ್ನಿ ನಡುವೆ ವಾಕ್ಸಮರ ನಡೆದಿದೆ. ಕೊನೆಗೆ ಕೋಣೆ ಸೇರಿದ ಥೆನ್ನರಸು ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಟರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರೋ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಟರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ನಟನ ನಿಧನಕ್ಕೆ ಕಾಲಿವುಡ್ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.