Tag: Kollywood

  • ಚೆನ್ನೈನಲ್ಲಿ ದುಬಾರಿ ಬೆಲೆಯ ಮನೆ ಖರೀದಿಸಿದ ನಟ ವಿಜಯ್

    ಚೆನ್ನೈನಲ್ಲಿ ದುಬಾರಿ ಬೆಲೆಯ ಮನೆ ಖರೀದಿಸಿದ ನಟ ವಿಜಯ್

    ಕಾಲಿವುಡ್ ಸೂಪರ್ ಸ್ಟಾರ್ ವಿಜಯ್, ಇದೀಗ ಮತ್ತೊಂದು ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕಾಸ್ಟ್ಲಿ ಮನೆಯಲ್ಲೇ ವಾಸವಿರುವ ವಿಜಯ್, ಮತ್ತೊಂದು ದುಬಾರಿ ಮನೆಗೆ ಶಿಫ್ಟ್ ಆಗಲು ಬಯಸಿದ್ದಾರಂತೆ. ಕಾರಣ, ಈಗಿರುವ ಮನೆಯಲ್ಲಿ ಅವರಿಗೆ ಹಲವು ತೊಂದರೆಗಳು ಆಗುತ್ತಿವೆಯಂತೆ.

    ವಿಜಯ್ ಅವರು ಸದ್ಯ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಅವರ ಇಡೀ ಕುಟುಂಬ ಅದೇ ಮನೆಯಲ್ಲೇ ವಾಸ ಮಾಡುತ್ತಿದೆ. ಈ ರಸ್ತೆಯಲ್ಲಿ ಸಂಚಾರ ದಟ್ಟನೆಯ ಕಾರಣದಿಂದಾಗಿ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ದುಬಾರಿ ಅಪಾರ್ಟ್ಮೆಂಟ್ ವೊಂದನ್ನು ವಿಜಯ್ ಖರೀದಿಸಿದ್ದು ಆ ಮನೆಗೆ 35 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

    ಸದ್ಯ ವಾರಿಸು ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಜಯ್, ಸದಾ ಶಾಂತವಾಗಿಯೇ ವರ್ತಿಸುವಂತಹ ನಟ ಕೂಡ. ಅಂದಹಾಗೆ ಇವರ ನಟನೆಯ ವಾರಿಸು ಸಿನಿಮಾ ಸದ್ಯ ಶೂಟಿಂಗ್ ನಡೆಯುತ್ತಿದ್ದು, ಈ ಚಿತ್ರದಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ಆ್ಯಕ್ಷನ್ ಕಟ್

    ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ಆ್ಯಕ್ಷನ್ ಕಟ್

    ʻಲೂಸಿಯಾʼ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಲಿವುಡ್ ಸ್ಟಾರ್ ಫಯಾದ್ ಫಾಸಿಲ್‌ಗೆ ನಿರ್ದೇಶನ ಮಾಡುತ್ತಿರುವ ಬೆನ್ನಲ್ಲೇ ತಮಿಳಿನ ಸ್ಟಾರ್ ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

    ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಪವನ್ ಕುಮಾರ್, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿ ಫಯಾದ್‌ಗೆ ಪವನ್ ನಿರ್ದೇಶನ ಮಾಡುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿಯಾನ್ ವಿಕ್ರಮ್ ಮತ್ತು ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕಾಗಿ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.

    ಇತ್ತೀಚೆಗಷ್ಟೇ ಸಿನಿಮಾ ಪ್ರಚಾರಕ್ಕೆ ಚಿಯಾನ್ ವಿಕ್ರಮ್ ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಪವನ್ ಕುಮಾರ್ ಅವರು ಭೇಟಿಯಾಗಿ, ತಮಗೆ ಕಥೆ ಹೇಳಿರುವುದರ ಬಗ್ಗೆ ಚಿಯಾನ್ ವಿಕ್ರಮ್ ರಿವೀಲ್ ಮಾಡಿದ್ದಾರೆ. ಪವನ್ ಕುಮಾರ್ ಬರೆದಿರುವ ಕಥೆ ತುಂಬಾ ಇಷ್ಟವಾಗಿದೆ. ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ವಿಕ್ರಮ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪವರ್‌ಫುಲ್‌ ಪಾತ್ರದಲ್ಲಿ ವಿಕ್ರಮ್‌ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಪವನ್ ಕುಮಾರ್ ದಕ್ಷಿಣದ ಸಿನಿಮಾಗಳಲ್ಲೂ ಛಾಪೂ ಮೂಡಿಸುತ್ತಿದ್ದಾರೆ. ಚಿಯಾನ್ ವಿಕ್ರಮ್ ಮತ್ತು ಪವನ್ ಕುಮಾರ್‌ಗೆ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ವಿರುದ್ಧ ಹಳೆಯ ಸೇಡು ತೀರಿಸಿಕೊಂಡ ನಿರೂಪಕಿ ಅನಸೂಯ

    ವಿಜಯ್ ದೇವರಕೊಂಡ ವಿರುದ್ಧ ಹಳೆಯ ಸೇಡು ತೀರಿಸಿಕೊಂಡ ನಿರೂಪಕಿ ಅನಸೂಯ

    ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನಸೂಯ ಮತ್ತು ವಿಜಯ್ ದೇವರಕೊಂಡ ನಡುವೆ ಜಟಾಪಟಿ ನಡೆದಿತ್ತು. ಮಹಿಳೆಯರ ಕುರಿತಾಗಿ ವಿಜಯ್ ದೇವರಕೊಂಡ ಅವಮಾನಕರ ರೀತಿಯಲ್ಲಿ ಸಂಭಾಷಣೆ ಹೇಳಿದರು ಎಂದು ವೇದಿಕೆಯ ಮೇಲೆಯೇ ಅನಸೂಯ ಆಕ್ಷೇಪಿಸಿದ್ದರು. ಈ ಘಟನೆಯಿಂದ ವಿಜಯ್ ಮುಜಗರ ಕೂಡ ಅನುಭವಿಸಿದ್ದರು. ಹೀಗಾಗಿ ಇಬ್ಬರ ಮಧ್ಯ ಮನಸ್ತಾಪ ಉಂಟಾಗಿತ್ತು.

    ಈ ಘಟನೆಯ ನಂತರ ವಿಜಯ್ ದೇವರಕೊಂಡ ಅವರ ಯಾವ ಕಾರ್ಯಕ್ರಮಕ್ಕೂ ಅನಸೂಯ ಇರುತ್ತಿರಲಿಲ್ಲ ಎನ್ನಲಾಗುತ್ತಿದೆ. ಮಹಿಳೆಯರ ಪರ ನಿಂತಿದ್ದಕ್ಕೆ ಅನಸೂಯ ಸಾಕಷ್ಟು ನೋವುಗಳನ್ನು ಅನುಭವಿಸಿದ್ದರಂತೆ. ಈ ಘಟನೆ ನಡೆದು ಹಲವು ವರ್ಷಗಳಾದರೂ, ವಿಜಯ್ ದೇವರಕೊಂಡ ಮೇಲಿನ ಕೋಪ ಹಾಗೆಯೇ ಇತ್ತು. ವಿಜಯ್ ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸೋಲುತ್ತಿದ್ದಂತೆಯೇ ಅನಸೂಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕರ್ಮ ಯಾವತ್ತಿದ್ದರೂ ವಾಪಸ್ಸು ಕೊಡುತ್ತೆ ಅಂದಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

    ಲೈಗರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಬಾಲಿವುಡ್ ಅಂಗಳದಲ್ಲೇ ಸಿನಿಮಾಗೆ ಅಷ್ಟೊಂದು ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಎಲ್ಲ ಕಾರಣದಿಂದಾಗಿ ಲೈಗರ್ ಸೋಲು ಎಂದು ಹೇಳಲಾಗುತ್ತಿದೆ. ಈ ಸೋಲನ್ನು ಅನಸೂಯ ಅವರು ಸಂಭ್ರಮಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 169ನೇ ಸಿನಿಮಾ ಜೈಲರ್ ಪೋಸ್ಟರ್ ರಿಲೀಸ್ ಆಗಿದೆ. ತಲೈವಾ ಲುಕ್ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ. ಜತೆಗೆ ನೆಚ್ಚಿನ ನಟ ಶಿವರಾಜ್‌ಕುಮಾರ್ ಪಾತ್ರದ ಲುಕ್ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ `ಜೈಲರ್’ ಚಿತ್ರದ ಮೂಲಕ ತಲೈವಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಲುಕ್ ಕೂಡ ರಿವೀಲ್ ಆಗಿದ್ದು, ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರಜನೀಕಾಂತ್ ಮಿಂಚಿದ್ದಾರೆ. ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು ಕೂಡ ರಜನೀಕಾಂತ್ ಗತ್ತಿಗೆ ಫ್ಯಾನ್ಸ್ ಫುಲ್ ಆಗಿದೆ. ಇದನ್ನೂ ಓದಿ:ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: ಗಾಡ್ ಫಾದರ್‌ಗೆ ಸಲ್ಲು ಬಾಯ್ ಸಾಥ್

    ತಲೈವಾ ನಟನೆಯ 169ನೇ ಈ ಸಿನಿಮಾಗೆ ರಜನಿಕಾಂತ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಕಾಣಿಸಿಕೊಳ್ಳುತ್ತಿರುವ ವಿಶೇಷ. ತಲೈವಾ ಜತೆ ಶಿವಣ್ಣ ಕೂಡ ಪ್ರಮುಖ ಪಾತ್ರಕ್ಕೆ ಸಾಥ್ ನೀಡಲಿದ್ದಾರೆ. ಇಂದಿನಿಂದ ಶೂಟಿಂಗ್ ಶುರುವಾಗಿದೆ. ತಲೈವಾ ಜತೆ ಬಾಹುಬಲಿ ಖ್ಯಾತಿ ರಮ್ಯಾ ಕೃಷ್ಣ ಕೂಡ ಸಾಥ್ ನೀಡಿದ್ದಾರೆ.

    ಜೈಲಿನಲ್ಲಿ ಕದೀಮರನ್ನು ಬೆಂಡೆತ್ತಲು ರಜನೀಕಾಂತ್ ಬರುತ್ತಿದ್ದಾರೆ. ತಲೈವಾ ಲುಕ್ ನೋಡಿ ಇದೀಗ ಫಿದಾ ಆಗಿರುವ ಫ್ಯಾನ್ಸ್, ಚಿತ್ರದಲ್ಲಿ ಶಿವಣ್ಣ ಲುಕ್ ಹೇಗಿರಬಹುದು ಎಂದು ಕಾತರದಿಂದ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಸೇರಲಿದ್ದಾರೆ ಖ್ಯಾತ ನಟಿ ತ್ರಿಷಾ: ಕುತೂಹಲ ಮೂಡಿಸಿದ ರಾಜಕೀಯ ನಡೆ

    ಕಾಂಗ್ರೆಸ್ ಸೇರಲಿದ್ದಾರೆ ಖ್ಯಾತ ನಟಿ ತ್ರಿಷಾ: ಕುತೂಹಲ ಮೂಡಿಸಿದ ರಾಜಕೀಯ ನಡೆ

    ಪುನೀತ್ ರಾಜ್ ಕುಮಾರ್ ನಟನೆಯ ಪವರ್ ಸೇರಿದಂತೆ ನಾನಾ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ತ್ರಿಷಾ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತಮಿಳು ನಾಡಿನಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೆಸರಾಂತ ಈ ನಟಿಯ ನಡೆಯ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಮುಂದಿನ ದಿನಗಳಲ್ಲಿ ತ್ರಿಷಾ ರಾಜಕಾರಣಕ್ಕೆ ಬರಲು ಒಲವು ತೋರಿದ್ದು, ಶೀಘ್ರದಲ್ಲೇ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ.

    ತಮಿಳು ಸಿನಿಮಾ ರಂಗದ ನಟ ನಟಿಯರು ಸಿನಿಮಾ ರಂಗಕ್ಕೆ ಬರುವುದು ಹೊಸದೇನೂ ಅಲ್ಲ.  ತಮಿಳು ನಾಡಿನಲ್ಲಿ ಅತೀ ಹೆಚ್ಚು ಬಾರಿ ಮುಖ್ಯಮಂತ್ರಿಗಳು ಆಗಿದ್ದು ಸಿನಿಮಾ ರಂಗದವರೇ ಎನ್ನುವುದು ಇತಿಹಾಸ. ಹಾಗಾಗಿ ತ್ರಿಷಾ ಅವರ ನಡೆ ಅಚ್ಚರಿಗೂ ಕಾರಣವಾಗಿದೆ. ಈಗಾಗಲೇ ಅವರು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದು, ಮುಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ತಮಿಳು ನಾಡಿನಲ್ಲಿ ಡಿಎಂಕೆ, ಅಣ್ಣಾಡಿಎಂಕೆ ಅಂತ ಪ್ರಬಲ ಪಕ್ಷಗಳು ಇದ್ದರೂ, ಇದೇ ಪಕ್ಷದ ಮೂಲಕ ಜಯಲಲಿತಾ ಸೇರಿದಂತೆ ಹಲವು ಸಿನಿಮಾ ನಟ ನಟಿಯರು ಗುರುತಿಸಿಕೊಂಡಿದ್ದರೂ, ತ್ರಿಷಾ ಮಾತ್ರ ನ್ಯಾಷನಲ್ ಪಾರ್ಟಿ ಸೇರುತ್ತಿರುವ ಮೂಲಕ ವಿಭಿನ್ನ ಹಾದಿ ಕಂಡುಕೊಂಡಿದ್ದಾರೆ. ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ಕಾರಣವನ್ನು ಅವರೇ ಮುಂದಿನ ದಿನಗಳಲ್ಲಿ ಹೇಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ನಯನತಾರಾ

    ಪತಿ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ನಯನತಾರಾ

    ಕಾಲಿವುಡ್ ಸ್ಟಾರ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ವಿದೇಶಕ್ಕೆ ಹಾರಿದ್ದಾರೆ. ಬಾರ್ಸಿಲೋನದ ಬೀದಿ ಬೀದಿಗಳಲ್ಲಿ ನಯನತಾರಾ ದಂಪತಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಪತಿ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ನಯನತಾರಾ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Vignesh Shivan (@wikkiofficial)

    ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ತಿಂಗಳು ಕಳೆದಿದೆ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದತ್ತ ಗಮನ ನೀಡುತ್ತಿರುವ ನಯನತಾರಾ ಸದ್ಯ ಪತಿಯ ಜತೆ ಸ್ಪೇನ್‌ಗೆ ಹಾರಿದ್ದಾರೆ. ಬಾರ್ಸಿಲೋನದ ಸುಂದರ ಪ್ರದೇಶಗಳಿಗೆ ನಯನತಾರಾ ದಂಪತಿ ಸುತ್ತಾಡುತ್ತಿದ್ದಾರೆ. ವಿಘ್ನೇಶ್ ಶಿವನ್, ಪತ್ನಿ ನಯನತಾರಾಗೆ ಹಣೆಗೆ ಮುತ್ತು ಕೊಟ್ಟಿದ್ದಾರೆ. ಈ ಫೋಟೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನವಜೋಡಿಯ ರೊಮ್ಯಾಂಟಿಕ್ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಬಿಪಾಶಾ ಬಸು ಪ್ರೆಗ್ನೆಂಟ್, ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ನಟಿ

     

    View this post on Instagram

     

    A post shared by Vignesh Shivan (@wikkiofficial)

    ಈ ವರ್ಷ ಜೂನ್ 9ರಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಹಾರಿದ್ದರು. ಬಳಿಕ ಶಾರುಖ್ ಖಾನ್ ನಟನೆಯ `ಜವಾನ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ ಬಾರ್ಸಿಲೋನದಲ್ಲಿ ನಯನತಾರಾ ದಂಪತಿ ಪ್ರವಾಸವನ್ನ ಏಂಜಾಯ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಸ್ಪೇನ್‌ನ ಬಾರ್ಸಿಲೋನಗೆ ಹಾರಿದ್ದಾರೆ. ಬಾರ್ಸಿಲೋನದ ಬೀದಿ ಬೀದಿಗಳಲ್ಲಿ ನಯನತಾರಾ ದಂಪತಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Vignesh Shivan (@wikkiofficial)

    ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ತಿಂಗಳು ಕಳೆದಿದೆ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದತ್ತ ಗಮನ ನೀಡುತ್ತಿರುವ ನಯನತಾರಾ ಸದ್ಯ ಪತಿಯ ಜತೆ ಸ್ಪೇನ್‌ಗೆ ಹಾರಿದ್ದಾರೆ. ಬಾರ್ಸಿಲೋನದ ಸುಂದರ ಪ್ರದೇಶಗಳಿಗೆ ನಯನತಾರಾ ದಂಪತಿ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

     

    View this post on Instagram

     

    A post shared by Vignesh Shivan (@wikkiofficial)

    ಈ ವರ್ಷ ಜೂನ್ 9ರಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಹಾರಿದ್ದರು. ಬಳಿಕ ಶಾರುಖ್ ಖಾನ್ ನಟನೆಯ `ಜವಾನ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ ಬಾರ್ಸಿಲೋನದಲ್ಲಿ ನಯನತಾರಾ ದಂಪತಿ ಪ್ರವಾಸವನ್ನ ಏಂಜಾಯ್ ಮಾಡ್ತಿದ್ದಾರೆ.

    Live Tv

  • ಗೋಲ್ಡನ್ ಲೆಗ್ ಕೃತಿ ಶೆಟ್ಟಿಗೆ ಸೋಲಿನ ಬಗ್ಗೆ ಟೀಕೆ

    ಗೋಲ್ಡನ್ ಲೆಗ್ ಕೃತಿ ಶೆಟ್ಟಿಗೆ ಸೋಲಿನ ಬಗ್ಗೆ ಟೀಕೆ

    ರಾವಳಿ ಬ್ಯೂಟಿ ಕೃತಿ ಶೆಟ್ಟಿ, ಕೆರಿಯರ್ ಹೊಸತರಲ್ಲೇ ಸೂಪರ್ ಸಕ್ಸಸ್ ಕಂಡಿರುವ ನಟಿ. ಆದರೆ ಇತ್ತೀಚೆಗೆ ಕೃತಿ ನಟಿಸಿರುವ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಗೋಲ್ಡನ್ ಲೆಗ್ ನಟಿ ಎಂದು ಕರೆದ ನೆಟ್ಟಿಗರೇ ಈಗ ಐರೆನ್ ಲೆಗ್ ನಾಯಕಿ ಅಂತಾ ಕರೆಯುತ್ತಿದ್ದಾರೆ.

    `ಸೂಪರ್ 30′ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ತೆರೆಹಂಚಿಕೊಂಡ ಬ್ಯೂಟಿ ಕೃತಿ ಶೆಟ್ಟಿ, ಬಳಿಕ `ಉಪ್ಪೇನಾ’ ಚಿತ್ರದ ಯಶಸ್ಸಿನ ನಂತರ ಸೌತ್‌ನ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಹಿಟ್ ನಟಿ ಎನಿಸಿಕೊಂಡ್ರು. ಈಗ ಇತ್ತೀಚೆಗೆ ಕೃತಿ ನಟಿಸಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ಹಾಗಾಗಿ ನಟಿಯ ಚಿತ್ರಗಳ ಸೋಲಿಗೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಸೋನು ಶ್ರೀನಿವಾಸ್ ಗೌಡಗೆ ಟ್ರೋಲ್ ಆಗಿ ಫೇಮಸ್ ಆಗುವ ಆಸೆ: ಉದಯ್ ಸೂರ್ಯ

    ಕೃತಿ ಶೆಟ್ಟಿ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಲೇ `ಗೋಲ್ಡನ್ ಲೆಗ್’ ಅನ್ನೋ ಪಟ್ಟ ಕೊಟ್ಟಿದ್ದರು. ಆದ್ರೀಗ ಈ ನಟಿ `ಗೋಲ್ಡನ್ ಲೆಗ್’ ಅನ್ನೋ ಚಾರ್ಮ್ ಅನ್ನು ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಎರಡು ಸಿನಿಮಾಗಳು. ರಾಮ್ ಪೋತಿನೇನಿ ಅಭಿನಯದ `ದಿ ವಾರಿಯರ್’ ಹಾಗೂ ನಿತಿನ್ ಜೊತೆ ನಟಿಸಿದ್ದ `ಮಾಚೆರ್ಲಾ ನಿಯೊಜಕವರ್ಗಂ’ ಸಿನಿಮಾಗಳು ಬಾಕ್ಸಾಫೀಸ್ ಮೋಡಿ ಮಾಡಲು ಸೋತಿವೆ. ಈ ಕಾರಣಕ್ಕೆ ಕೃತಿ ಶೆಟ್ಟಿಯನ್ನು ಟೀಕೆ ಮಾಡಲು ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಜ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಸಲಹುತ್ತಿರುವ `ಪಾರು’

    ನಿಜ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಸಲಹುತ್ತಿರುವ `ಪಾರು’

    ಕಿರುತೆರೆಯ ಬ್ಯೂಟಿ ಪಾರು ಅಲಿಯಾಸ್ ಮೋಕ್ಷಿತ್ ಪೈ ಸದ್ಯ `ಪಾರು’ ಧಾರಾವಾಹಿ ಜತೆ ತಮಿಳಿನ ಸೀರಿಯಲ್‌ನಲ್ಲೂ ಬ್ಯುಸಿಯಾಗಿದ್ದಾರೆ. ಸೀರಿಯಲ್‌ನಲ್ಲಿ ಸಹೋದರ ಗಣಿಗೆ ಪ್ರೀತಿಯ ಅಕ್ಕನಾಗಿರುವ ಪಾರು, ರಿಯಲ್ ಲೈಫ್‌ನಲ್ಲಿರುವ ವಿಶೇಷ ಚೇತನ ತಮ್ಮನಿಗೆ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Mokshitha Pai (@mokshitha22)

    ಟಿವಿಲೋಕದ ನಂಬರ್ ಒನ್ ಶೋಗಳಲ್ಲಿ ಒಂದಾಗಿರುವ ಪಾರು ಧಾರಾವಾಹಿಯಲ್ಲಿ ತೆರೆಯ ಮೇಲೆ ನಟಿಸುವವರ ನಿಜ ಜೀವನದಲ್ಲಿ ಒಂದಲ್ಲ ಒಂದು ಕಷ್ಟ ಇರುತ್ತೆ. ಎಲ್ಲವನ್ನೂ ಮರೆತು ನಗುತ್ತಾ ನಟನೆ ಮಾಡುತ್ತಾ ಇರುತ್ತಾರೆ. ಮೋಕ್ಷಿತಾ ಅವರ ಜೀವನದಲ್ಲೂ ಹಾಗೆ, ಅವರಿಗೆ ರಿಯಲ್ ಲೈಫ್‌ನಲ್ಲಿ ವಿಕಲ ಚೇತನ ತಮ್ಮನಿದ್ದು, ಪಾರುನೇ ಅವನನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಮುಜುಗರ ಪಟ್ಟುಕೊಳ್ಳದೇ, ತಮ್ಮನ ಪಾಲನೆ ಮಾಡುತ್ತಾರೆ. ಇದನ್ನೂ ಓದಿ:ಹೊಂಬಾಳೆ ಬ್ಯಾನರ್ ಮುಂದಿನ ಚಿತ್ರಕ್ಕೆ `ಮಹಾನಟಿ’ ಕೀರ್ತಿ ಸುರೇಶ್ ನಾಯಕಿ

     

    View this post on Instagram

     

    A post shared by Mokshitha Pai (@mokshitha22)

    ಇನ್ನು ಧಾರಾವಾಹಿಯಲ್ಲಿ ಗಣಿ ಎಂಬ ತಮ್ಮನಿದ್ದಾನೆ. ಪಾರುಗೆ ಗಣಿ ಅಂದ್ರೆ ತುಂಬಾ ಇಷ್ಟ. ಧಾರಾವಾಹಿಯಲ್ಲಿ ಇವರಿಗೆ ತಾಯಿ ಇಲ್ಲದ ಕಾರಣ, ಗಣಿಯನ್ನು ಪಾರು ಅಮ್ಮನಂತೆ ನೋಡಿಕೊಳ್ಳುತ್ತಿದ್ದಾಳೆ. ಗಣಿಗೆ ಅಕ್ಕ ಪಾರು ಅಂದ್ರೆ ಪ್ರಾಣ. ಅಲ್ಲದೇ ರಿಯಲ್ ಲೈಫ್ ನಲ್ಲೂ ಗಣಿ ಮೋಕ್ಷಿತ ಅವರಿಗೆ ತಮ್ಮನಂತೆ ಆಗಿ ಬಿಟ್ಟಿದ್ದಾನೆ. ಪಾರು ಈ ಬಾರಿಯ ರಕ್ಷಾ ಬಂಧನವನ್ನು ಇಬ್ಬರು ತಮ್ಮಂದಿರೊಂದಿಗೆ ಆಚರಿಸಿದ್ದಾರೆ. ಒಂದು ಅವರ ನಿಜವಾದ ತಮ್ಮ.ʻಪಾರುʼ ಧಾರಾವಾಹಿ ಕೊಟ್ಟ ಸಹೋದರ ಗಣಿ, ಇಬ್ಬರಿಗೂ ರಾಖಿಯನ್ನು ಕಟ್ಟಿ, ಸಿಹಿ ತಿನ್ನಿಸಿ ಸಂಭ್ರಮ ಪಟ್ಟಿದ್ದಾರೆ. ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಮಾರ್ಕ್ ಆ್ಯಂಟನಿ’ ಚಿತ್ರೀಕರಣದಲ್ಲಿ ನಟ ವಿಶಾಲ್‌ಗೆ ಗಂಭೀರ ಗಾಯ

    `ಮಾರ್ಕ್ ಆ್ಯಂಟನಿ’ ಚಿತ್ರೀಕರಣದಲ್ಲಿ ನಟ ವಿಶಾಲ್‌ಗೆ ಗಂಭೀರ ಗಾಯ

    ಕಾಲಿವುಡ್ ನಟ ವಿಶಾಲ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರೀಕರಣದಲ್ಲಿ ಸ್ಟಂಟ್ ಮಾಡುವಾಗ ಏಟು ಮಾಡಿಕೊಂಡಿದ್ದರು. ಇದೀಗ ಶೂಟಿಂಗ್ ವೇಳೆಯಲ್ಲಿ ವಿಶಾಲ್‌ಗೆ ಗಂಭೀರ ಗಾಯವಾಗಿದೆ.

    ಬಹುನಿರೀಕ್ಷಿತ `ಮಾರ್ಕ್ ಆ್ಯಂಟನಿ’ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಈ ಚಿತ್ರದ ಶೂಟಿಂಗ್ ವೇಳೆ ಮತ್ತೆ ಅವಘಡ ಸಂಭವಿಸಿದೆ. ಫೈಟ್ ಸೀನ್ ಚಿತ್ರೀಕರಿಸುವಾಗ ನಟ ವಿಶಾಲ್‌ಗೆ ಮತ್ತೆ ಪೆಟ್ಟಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:`ವಾಮನ’ ಧನ್ವೀರ್‌ಗೆ ಜೊತೆಯಾದ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ

     

    View this post on Instagram

     

    A post shared by Vishal (@actorvishalofficial)

    ಅದಿಕ್ ರವಿಚಂದ್ರನ್ ನಿರ್ದೇಶನದ `ಮಾರ್ಕ್ ಆ್ಯಂಟನಿ’ ವಿಶಾಲ್ ಪೊಲೀಸ್ ಅಧಿಕಾರಿಯಾಗಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯಾಗಿ ರೀತು ವರ್ಮಾ ಸಾಥ್ ನೀಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟ ಸೂರ್ಯ ಕೂಡ ಕಾಣಿಸಿಕೊಳ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]