Tag: kolkata

  • ಹಾವಿನ ಜೊತೆ ನಟಿಸಲು ಹೋಗಿ ಪ್ರಾಣ ಕಳೆದುಕೊಂಡ ನಟಿ!

    ಹಾವಿನ ಜೊತೆ ನಟಿಸಲು ಹೋಗಿ ಪ್ರಾಣ ಕಳೆದುಕೊಂಡ ನಟಿ!

    ಕೋಲ್ಕತ್ತಾ: ನಟಿಯೊಬ್ಬರು ಲೈವ್ ಆಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಹಸ್ನಾಬಾದ್ ನಲ್ಲಿ ನಡೆದಿದೆ.

    ಕಾಲಿದಾಸಿ ದೇವಿ (50) ಮೃತ ದುರ್ದೈವಿ. ಬುಧವಾರ ಈ ಘಟನೆ ನಡೆದಿದ್ದು, ಹಾವಿನ ದೇವತೆಯಾದ `ಮಾ ಮನಸಾ’ ಪಾತ್ರದಲ್ಲಿ ನಟಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ದೇವಿ ಅವರು ಪ್ರತಿ ವರ್ಷವೂ ಪ್ಲಾಸ್ಟಿಕ್ ಹಾವಿನೊಡನೆ ಅಭಿನಯಿಸುತ್ತಿದ್ದರು. ಆದರೆ ಈ ಬಾರಿ ಅವರು ಎರಡು ಜೀವಂತ ಹಾವುಗಳೊಂದಿಗೆ ಪಾತ್ರವನ್ನು ನಿರ್ವಹಿಸಲು ನಿರ್ಧರಿಸಿದ್ದರು.

    ಅದೇ ರೀತಿ ಹಾವಿನೊಂದಿಗೆ ಅಭಿನಯಿಸುವ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ದೇವಿ ಅವರು ಕುಸಿದು ಬಿದ್ದಿದ್ದಾರೆ. ನಂತರ ಸ್ಥಳಿಯ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅವರನ್ನು ಸಹನಟರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಹಾವು ಕಚ್ಚಿದ ತಕ್ಷಣ ಸಕಾಲಕ್ಕೆ ವೈದ್ಯಕೀಯ ನೆರವು ಒದಗಿಸಿದ್ದರೆ, ಆಕೆಯ ಜೀವವನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಥಿಯೇಟರ್ ನ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪೊಲೀಸರು ಜೀವಂತ ಹಾವಿನೊಂದಿಗೆ ಅಭಿನಯಿಸಲು ನೀವು ಹೇಗೆ ಅನುಮತಿ ನೀಡಿದ್ದೀರಿ ಎಂದು ಅವರನ್ನು ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ಹಾವುಗಳನ್ನು ಜೀವಂತವಾಗಿ ಪ್ರದರ್ಶನಕ್ಕೆ ಬಳಸುವ ಮೊದಲು ಅವುಗಳ ವಿಷಪೂರಿತ ಹಲ್ಲುಗಳನ್ನು ತೆಗೆದು ಹಾಕಲಾಗುತ್ತದೆ. ಜೊತೆಗೆ ಅದನ್ನು ದೃಢ ಪಡಿಸಿಕೊಂಡ ನಂತರ ಹಾವುಗಳನ್ನು ಬಳಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಸ್ಥಳೀಯ ವೈದ್ಯರು ಆಕೆಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಆದ್ದರಿಂದ ಆಕೆ ಮೃತಪಟ್ಟಿದ್ದಾಳೆ ಅವರನ್ನು ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಶುಭಮನ್ ಗಿಲ್ ನೋಡಿ ಕೆಲ ಹುಡುಗರು ಅಸೂಯೆ ಪಡ್ತಾರೆ: ದಿನೇಶ್ ಕಾರ್ತಿಕ್

    ಶುಭಮನ್ ಗಿಲ್ ನೋಡಿ ಕೆಲ ಹುಡುಗರು ಅಸೂಯೆ ಪಡ್ತಾರೆ: ದಿನೇಶ್ ಕಾರ್ತಿಕ್

    ಕೋಲ್ಕತ್ತಾ: ಕೆಕೆಆರ್ ಹಾಗೂ ಟೀಂ ಇಂಡಿಯಾ ಅಂಡರ್ 19 ತಂಡದ ಆಟಗಾರನಾಗಿರುವ ಶುಭಮನ್ ಗಿಲ್ ಸುತ್ತ ಹುಡುಗಿಯರು ಕಾಣಿಸಿಕೊಂಡ ವೇಳೆ ಇತರೇ ಹುಡುಗರು ಅಸೂಯೆ ಪಡುತ್ತಾರೆ ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕಾಲೆಳೆದಿದ್ದಾರೆ.

    ಐಪಿಎಲ್ ಚೊಚ್ಚಲ ಪಂದ್ಯಕ್ಕೆ ತಂಡದ ಪರ ಶುಭಮನ್ ಗಿಲ್ ಅವರಿಗೆ ದಿನೇಶ್ ಕಾರ್ತಿಕ್ ಸ್ವಾಗತ ಕೋರಿ ಮಾತನಾಡಿದರು. ಪಂದ್ಯಕ್ಕೂ ಮುನ್ನ ನಡೆದ ಮಾತುಕತೆಯಲ್ಲಿ ಇಬ್ಬರ ನಡುವೆ ಈ ಚರ್ಚೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಪಂದ್ಯವಾಡಿದ ಗಿಲ್ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗಿಲ್ ಆಕರ್ಷಕ ಅರ್ಧಶತಕ ಗಳಿಸಿದ್ದರು. ಕೇವಲ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಮೂಲಕ ಅಂಡರ್ 19 ವಿಶ್ವಕಪ್ ನಲ್ಲಿ ತೋರಿದ ಪ್ರದರ್ಶನವನ್ನು ಐಪಿಎಲ್‍ನಲ್ಲೂ ಮುಂದುವರೆಸಿದರು.

  • ಮೆಟ್ರೋದಲ್ಲಿಯೇ ತಬ್ಬಿಕೊಂಡು ಮುದ್ದಾಡಿದ ಜೋಡಿಗೆ ಸಾರ್ವಜನಿಕರಿಂದ ಥಳಿತ

    ಮೆಟ್ರೋದಲ್ಲಿಯೇ ತಬ್ಬಿಕೊಂಡು ಮುದ್ದಾಡಿದ ಜೋಡಿಗೆ ಸಾರ್ವಜನಿಕರಿಂದ ಥಳಿತ

    ಕೋಲ್ಕತ್ತಾ: ಮೆಟ್ರೋ ರೈಲಿನಲ್ಲಿ ಜೋಡಿ ತಬ್ಬಿಗೊಂಡು ಮುದ್ದಾಡಿದ್ದಕ್ಕೆ ಸಾರ್ವಜನಿಕರು ಅವರನ್ನು ಥಳಿಸಿರುವ ಘಟನೆ ಕೋಲ್ಕತ್ತಾದ ದಮ್ ದಮ್ ಮೆಟ್ರೋ ಸ್ಟೇಷನ್‍ನಲ್ಲಿ ನಡೆದಿದೆ.

    ಮೆಟ್ರೋದಲ್ಲಿ ಪ್ರಯಾಣಿಸುವಾಗ ಈ ಜೋಡಿ ತಬ್ಬಿಕೊಂಡಿದ್ದರು. ಈ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರು ಕೋಪಗೊಂಡು ಜೋಡಿಗೆ ಕರೆದು ಪ್ರಶ್ನಿಸಿದ್ದಾರೆ. ಆಗ ಯುವಕ ಹಾಗೂ ವೃದ್ಧನ ನಡುವೆ ವಾಗ್ವಾದ ನಡೆದಿದೆ. ವೃದ್ಧ ಹಾಗೂ ಆ ಜೋಡಿಯ ಮಧ್ಯೆ ಜಗಳ ಆರಂಭವಾದಾಗ ಸಹ ಪ್ರಯಾಣಿಕರು ವೃದ್ಧನನ್ನು ಬೆಂಬಲಿಸಿ ಜೋಡಿಯನ್ನು ನಿಂದಿಸಿದ್ದಾರೆ.

    ಈ ಜಗಳ ವಿಕೋಪಕ್ಕೆ ತೆರಳಿ ಜೋಡಿ ದಮ್ ದಮ್ ಸ್ಟೇಷನ್‍ನಲ್ಲಿ ಇಳಿಯುತ್ತಿದ್ದಂತೆ ಸಾರ್ವಜನಿಕರು ಯುವಕನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವಕನನ್ನು ಥಳಿಸುವಾಗ ಯುವತಿ ಆತನನ್ನು ರಕ್ಷಿಸಲು ಮುಂದಾಗಿದ್ದು, ಜನರು ಆಕೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರು ಹಲ್ಲೆ ನಡೆಸುವಾಗ ನೀವು ಏಕೆ ಒಂದು ರೂಮ್‍ನ್ನು ತೆಗೆದುಕೊಳ್ಳುವುದ್ದಿಲ್ಲ ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಈ ವೇಳೆ ನಿಲ್ದಾಣದಲ್ಲಿದ್ದ ಕೆಲವರು ಯುವಕ-ಯುವತಿಯನ್ನು ರಕ್ಷಿಸಿ ಕಳುಹಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಬಗ್ಗೆ ತನಿಖೆ ನಡೆಸಲಾಗವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಯವಕ-ಯುವತಿಯ ಮೇಲೆ ಹಲ್ಲೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  • 16ರ ಹರೆಯದ ರಾಷ್ಟ್ರ ಮಟ್ಟದ ಈಜುಗಾರ್ತಿ ನೇಣಿಗೆ ಶರಣು!

    16ರ ಹರೆಯದ ರಾಷ್ಟ್ರ ಮಟ್ಟದ ಈಜುಗಾರ್ತಿ ನೇಣಿಗೆ ಶರಣು!

    ಕೋಲ್ಕತ್ತಾ: 16 ವರ್ಷದ ರಾಷ್ಟ್ರೀಯ ಮಟ್ಟದ ಈಜುಗಾರ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

    ಮೌಪ್ರಿಯಾ ಮಿತ್ರಾ (16) ಆತ್ಮಹತ್ಯೆಗೆ ಶರಣಾದ ಆಟಗಾರ್ತಿ. ಈಕೆ ಪಶ್ಚಿಮ ಬಂಗಾಳದ ಗರ್ಲ್ಸ್ ಹೈಸ್ಕೂಲ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹೂಗ್ಲಿಯ ತಮ್ಮ ನಿವಾಸದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಚಿನ್ಸುರಾ ಇಮಾಂಬರಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮಿತ್ರಾ ನಿವಾಸದಿಂದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮಿತ್ರಾ ಕೊಲಂಬೊದಲ್ಲಿ ನಡೆದ 2016 ರ ದಕ್ಷಿಣ ಏಷ್ಯಾದ ಅಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಗೆದ್ದಿದ್ದರು. ಜೂನ್ ತಿಂಗಳಲ್ಲಿ ನಡೆಯುವ ಪುಣೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

    ಮಿತ್ರಾ ಸೋಮವಾರ ಬೆಳಗ್ಗೆ ಚಿನ್ಸುರಾದಲ್ಲಿ ಈಜು ಅಭ್ಯಾಸಕ್ಕೆ ಹೋಗಿದ್ದರು. ಸುಮಾರು 11 ಗಂಟೆಗೆ ಮಳೆ ಬರುತ್ತಿದ್ದು, ಆ ಸಂದರ್ಭದಲ್ಲಿ ಅವರು ಮನೆಗೆ ಹಿಂದಿರುಗಿದ್ದರು. ಮನೆಗೆ ಬಂದ ನಂತರ  ತನ್ನ ರೂಮಿಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ. ಈ ವೇಳೆ ಮಿತ್ರಾ ಪೋಷಕರು 1ನೇ ಮಹಡಿಯಲ್ಲಿದ್ದರು.

    ಮಿತ್ರಾ 2016ರ ಸೌತ್ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಹೈಬೋರ್ಡ್ ಚಿನ್ನದ ಪದಕ ಮತ್ತು 3 ಎಮ್ ಸ್ಪ್ರಿಂಗ್ ಬೋರ್ಡ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 16 ರ ವಯಸ್ಸಿಲ್ಲಿಯೇ 2016 ಜೂನಿಯರ್ ನ್ಯಾಷನಲ್ ಆಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಉನ್ನತ ಬೋರ್ಡ್ ಚಿನ್ನ, 3ಎಮ್ ಸ್ಪ್ರಿಂಗ್ ಬೋರ್ಡ್ ಬೆಳ್ಳಿ ಮತ್ತು 1 ಎಮ್ ಸ್ಪ್ರಿಂಗ್ ಬೋರ್ಡ್ ಕಂಚಿನ ಪದಕವನ್ನು ಗೆದ್ದಿದ್ದಾರೆ.

    ಈ ಘಟನೆ ಸಂಬಂಧ ಕುಟುಂಬ ದೂರು ದಾಖಲಿಸಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣವನ್ನು ತಿಳಿದು ಬರುತ್ತದೆ. ನಂತರ ತನಿಖೆಯನ್ನು ಮುಂದುವರೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮದುವೆಯಲ್ಲಿ ವರನನ್ನೇ ಅರೆಸ್ಟ್ ಮಾಡಿಸಿದ ವಧು!

    ಮದುವೆಯಲ್ಲಿ ವರನನ್ನೇ ಅರೆಸ್ಟ್ ಮಾಡಿಸಿದ ವಧು!

    ಕೋಲ್ಕತ್ತಾ: ಮದುವೆ ಮನೆಯಲ್ಲಿ ವರನೊಬ್ಬ ಕುಡಿದು ಬಂದು ಅಸಭ್ಯವಾಗಿ ವರ್ತಿಸಿದ್ದಕ್ಕೆ ವಧು ಮದುವೆ ನಿಲ್ಲಿಸಿ ಆತನನ್ನು ಅರೆಸ್ಟ್ ಮಾಡಿಸಿದ ಘಟನೆ ಪಶ್ಚಿಮ ಬಂಗಾಳದ ಬಂಹುರಾ ಜಿಲ್ಲೆಯಲ್ಲಿ ನಡೆದಿದೆ.

    ಬುದ್ಹಾರ್ ಸಹೀಶ್ ಶಾಲೆಯಲ್ಲಿ ಶಿಕ್ಷಕನಾಗಿದ್ದು ಆತನ ಮದುವೆ ಏಪ್ರಿಲ್ 20ರಂದು ನಿಗದಿಯಾಗಿತ್ತು. ತನ್ನ ಮದುವೆಯ ದಿನವೇ ಸಹೀಶ್ ತನ್ನ ಸಂಬಂಧಿಕರ ಜೊತೆ ಕುಡಿದು ಮದುವೆ ಮನೆಗೆ ಬಂದಿದ್ದನು. ಭಯಂಕರ ನಶೆಯಲ್ಲಿದ ಸಹೀಶ್ ಸರಿಯಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ.

    ಸಹೀಶ್ ನನ್ನು ಈ ರೀತಿ ನೋಡಿದ ಆತನ ಪೋಷಕರು ದಂಗಾಗಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಮಂಟಪದಲ್ಲಿ ವರ ಹಾಗೂ ವಧು ಕುಳಿತುಕೊಳ್ಳಲು ಇಟ್ಟಿದ್ದ ಸ್ಟೂಲ್‍ನನ್ನು ಕಾಲಿನಿಂದ ಒದ್ದಿದ್ದಾನೆ. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುರೋಹಿತರನ್ನು ಕೆಟ್ಟ ಪದಗಳಲ್ಲಿ ನಿಂದಿಸಿ ಜೋರಾಗಿ ಕಿರುಚಾಡಿದ್ದಾನೆ ಎಂದು ವರದಿಯಾಗಿದೆ.

    ಈ ಶಾಸ್ತ್ರ-ಸಂಪ್ರದಾಯಗಳಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ವಧುವನ್ನು ನನ್ನ ಜೊತೆ ಕರೆದುಕೊಂಡು ಹೋಗಲು ಬಿಡು ಎಂದು ಕಿರುಚಾಡಿದ್ದಾನೆ. ಈ ವರ್ತನೆ ಕಂಡು ಶಾಕ್ ಆದ ವಧು ಸಹೀಶ್ ಜೊತೆಗಿನ ತನ್ನ ಮದುವೆಯನ್ನು ಮುರಿದಿದ್ದಾಳೆ. ನಂತರ ವಧುವಿನ ತಂದೆ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವರ ಹಾಗೂ ಆತನ ಸಹೋದರನನ್ನು ವಶಕ್ಕೆ ಪಡೆದರು. ಕುಡಿದ ನಶೆಯಲ್ಲಿದ್ದ ಇಬ್ಬರೂ ದೂರು ದಾಖಲಾಗುವರೆಗೂ ಪೊಲೀಸರ ವಶದಲ್ಲೇ ಇದ್ದರು ಎಂದು ವರದಿಯಾಗಿದೆ.

    ಮದುವೆಗೆ ಬಂದಿದ್ದ ಅತಿಥಿಗಳು ವಧುವಿನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಹೀಶ್‍ನ ಕುಟುಂಬದವರು ವರದಕ್ಷಿಣೆ ಆಗಿ ಪಡೆದ ಬೈಕ್, ಹಾಸಿಗೆ, ಡ್ರೆಸಿಂಗ್ ಟೇಬಲ್, ತಿಜೋರಿ ಹಾಗೂ ಉಳಿದ ವಸ್ತುಗಳನ್ನು ವಧುವಿನ ಕುಟುಂಬಕ್ಕೆ ಹಿಂತಿರುಗಿಸಿದ್ದರು.

  • ಔಟಾದ ಕೊಹ್ಲಿಯನ್ನು ನಿಂದಿಸಿದ ಬೌಲರ್ ರಾಣಾ – ವಿಡಿಯೋ ವೈರಲ್

    ಔಟಾದ ಕೊಹ್ಲಿಯನ್ನು ನಿಂದಿಸಿದ ಬೌಲರ್ ರಾಣಾ – ವಿಡಿಯೋ ವೈರಲ್

    ಕೊಲ್ಕತ್ತಾ: ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ತನ್ನ ಬೌಲಿಂಗ್ ನಲ್ಲಿ ಔಟ್ ಆದ ಕೊಹ್ಲಿಯನ್ನು ರಾಣಾ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಒಬ್ಬ ಕಿರಿಯ ಆಟಗಾರ ಭಾರತ ತಂಡದ ನಾಯಕನನ್ನು ನಿಂದಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ರಾಣಾ ಒಂದು ಓವರ್ ಎಸೆದು 11 ರನ್ ನೀಡಿ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ವಿಕೆಟ್ ಪಡೆದಿದ್ದರು.

    2 ವಿಕೆಟ್ ಕಳೆದು ಕೊಂಡು 127 ರನ್ ಗಳಿಸಿದ್ದ ಆರ್‌ಸಿಬಿ ಹಠಾತ್ ಎರಡು ವಿಕೆಟ್ ಕಳೆದುಕೊಂಡ ಪರಿಣಾಮ 14.3 ಓವರ್ ಗಳಲ್ಲಿ 127 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಮೊದಲ ಪಂದ್ಯದಲ್ಲೇ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಶರಣಾಗಿದ್ದು, 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಕೆಕೆಆರ್ ಶುಭಾರಂಭ ಮಾಡಿದೆ. 177 ರನ್ ಗಳ ಸವಾಲನ್ನು ಪಡೆದ ಕೋಲ್ಕತ್ತಾ 18.5 ಓವರ್ ಗಳಲ್ಲಿ 177 ರನ್ ಹೊಡೆಯುವ ಮೂಲಕ ಜಯದ ಖಾತೆ ತೆರೆದಿದೆ.

    ಆರ್‌ಸಿಬಿ ಗುರಿ ಬೆನ್ನತ್ತಿದ ಕೆಕೆಆರ್ ಆರಂಭಿಕ ಆಘಾತ ಕ್ರಿಸ್ ಲಿನ್ (5) ಪಡೆದ ಬಳಿಕವೂ ಸುನೀಲ್ ನರೇನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್ 4 ಬೌಂಡರಿಗಳಿಂದ ಅರ್ಧ ಶತಕ ಹೊಡೆದು ಔಟಾದರು. ಈ ವೇಳೆ ಉಮೇಶ್ ಯಾದವ್ ಮಿಂಚಿನ ದಾಳಿ ನಡೆಸಿ ನರೇನ್ (50), ರಾಬಿನ್ ಉತ್ತಪ್ಪ (13) ವಿಕೆಟ್ ಪಡೆದು ಕೆಕೆಆರ್ ವೇಗಕ್ಕೆ ಕಡಿವಾಣ ಹಾಕಿದರು.

    ಬಳಿಕ ಕ್ರೀಸಿಗಿಳಿದ ನಾಯಕ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ ತಲಾ ಎರಡು ಬೌಂಡರಿ, ಸಿಕ್ಸರ್ ಸಿಡಿಸಿದ್ದ ರಾಣಾ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಉರುಳುತ್ತಿದ್ದರೂ ದಿನೇಶ್ ಕಾರ್ತಿಕ್ ಔಟಾಗದೇ 35 ರನ್(29 ಎಸೆತ, 4 ಬೌಂಡರಿ) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಆರ್‌ಸಿಬಿ ಪರ ಬ್ಯಾಟಿಂಗ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಳಿಕ ಕ್ರೀಸಿಗಿಳಿದ ನಾಯಕ ಕೊಹ್ಲಿ, ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಜೊತೆ ಸೇರಿ ಬಿರುಸಿನ ಬ್ಯಾಟಿಂಗ್ ಮಾಡಿದರು. ಈ ವೇಳೆ 27 ಎಸೆತಗಳಲ್ಲಿ 43 ರನ್ ಗಳಿಸಿದ್ದ ಮೆಕಲಮ್ ಸುನೀಲ್ ನರೈನ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಎರಡನೇ ವಿಕೆಟ್ ಗೆ ಕೊಹ್ಲಿ, ಮೆಕಲಮ್ ಜೋಡಿ 41 ರನ್ ಜೊತೆಯಾಟ ನೀಡಿತ್ತು.

    ಬಳಿಕ ಸ್ಫೋಟಕ ಆಟಗಾರ ಎಬಿಡಿ 22 ಎಸೆತಗಳಲ್ಲಿ 5 ಸಿಕ್ಸರ್, 1 ಬೌಂಡರಿ ನೆರವಿನಿಂದ 44 ರನ್ ಸಿಡಿಸಿ 3ನೇ ವಿಕೆಟ್ ಗೆ 64 ರನ್ ಸೇರಿಸಿದರು. ಈ ವೇಳೆ 15ನೇ ಓವರ್‍ನ ಎಸೆದ ನಿತೀಶ್ ರಾಣಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು. ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ 33 ಎಸೆತಗಳಲ್ಲಿ 31 ರನ್ ಗಳಿಸಿದ್ದ ವೇಳೆ ಇದೇ ಓವರ್ ನಲ್ಲಿ ಬೌಲ್ಡ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಸರ್ಫರಾಜ್ ಖಾನ್ (6) ಬಂದಷ್ಟೇ ವೇಗದಲ್ಲಿ ಔಟಾದರು. ಇನ್ನಿಂಗ್ಸ್ ಕೊನೆಯಲ್ಲಿ ಮಂದೀಪ್ ಸಿಂಗ್ ಬಿರುಸಿನ ಆಟವಾಡಿ ಕೇವಲ 18 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ನೆರವಿನಿಂದ 37 ರನ್ ಸಿಡಿಸಿ ತಂಡದ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

    ರೈಡರ್ಸ್ ಪರ ವಿನಯ್ ಕುಮಾರ್, ನಿತೀಶ್ ರಾಣಾ, 2 ಪಡೆದರೆ. ಜಾನ್ಸನ್ ಚಾವ್ಲಾ, ಸುನೀಲ್ ನರೇನ್ ತಲಾ ಒಂದು ವಿಕೆಟ್ ಪಡೆದರು.

    https://twitter.com/VinayTr85616518/status/983006469254721536

  • ನರೇನ್ ಸ್ಫೋಟಕ ಅರ್ಧಶತಕ- ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ

    ನರೇನ್ ಸ್ಫೋಟಕ ಅರ್ಧಶತಕ- ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ

    ಕೋಲ್ಕತ್ತಾ: ಮೊದಲ ಪಂದ್ಯದಲ್ಲೇ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಶರಣಾಗಿದೆ. 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಕೆಕೆಆರ್ ಶುಭಾರಂಭ ಮಾಡಿದೆ.

    177 ರನ್ ಗಳ ಸವಾಲನ್ನು ಪಡೆದ ಕೋಲ್ಕತ್ತಾ 18.5 ಓವರ್ ಗಳಲ್ಲಿ 177 ರನ್ ಹೊಡೆಯುವ ಮೂಲಕ ಜಯದ ಖಾತೆ ತೆರೆಯಿತು.

    ಆರ್‌ಸಿಬಿ ಗುರಿ ಬೆನ್ನತ್ತಿದ ಕೆಕೆಆರ್ ಆರಂಭಿಕ ಆಘಾತ ಕ್ರಿಸ್ ಲಿನ್ (5) ಪಡೆದ ಬಳಿಕವೂ ಸುನೀಲ್ ನರೇನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್ 4 ಬೌಂಡರಿಗಳಿಂದ ಅರ್ಧ ಶತಕ ಹೊಡೆದು ಔಟಾದರು. ಈ ವೇಳೆ ಉಮೇಶ್ ಯಾದವ್ ಮಿಂಚಿನ ದಾಳಿ ನಡೆಸಿ ನರೇನ್ (50), ರಾಬಿನ್ ಉತ್ತಪ್ಪ (13) ವಿಕೆಟ್ ಪಡೆದು ಕೆಕೆಆರ್ ವೇಗಕ್ಕೆ ಕಡಿವಾಣ ಹಾಕಿದರು.

    ಬಳಿಕ ಕ್ರೀಸಿಗಿಳಿದ ನಾಯಕ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ ತಲಾ ಎರಡು ಬೌಂಡರಿ, ಸಿಕ್ಸರ್ ಸಿಡಿಸಿದ್ದ ರಾಣಾ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಉರುಳುತ್ತಿದ್ದರೂ ದಿನೇಶ್ ಕಾರ್ತಿಕ್ ಔಟಾಗದೇ 35 ರನ್(29 ಎಸೆತ, 4 ಬೌಂಡರಿ) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಆರ್ ಸಿ ಬಿ ಪರ ಬ್ಯಾಟಿಂಗ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಳಿಕ ಕ್ರೀಸಿಗಿಳಿದ ನಾಯಕ ಕೊಹ್ಲಿ, ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಜೊತೆ ಸೇರಿ ಬಿರುಸಿನ ಬ್ಯಾಟಿಂಗ್ ಮಾಡಿದರು. ಈ ವೇಳೆ 27 ಎಸೆತಗಳಲ್ಲಿ 43 ರನ್ ಗಳಿಸಿದ್ದ ಮೆಕಲಮ್ ಸುನೀಲ್ ನರೈನ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಎರಡನೇ ವಿಕೆಟ್ ಗೆ ಕೊಹ್ಲಿ, ಮೆಕಲಮ್ ಜೋಡಿ 41 ರನ್ ಜೊತೆಯಾಟ ನೀಡಿತ್ತು.

    ಬಳಿಕ ಸ್ಫೋಟಕ ಆಟಗಾರ ಎಬಿಡಿ 22 ಎಸೆತಗಳಲ್ಲಿ 5 ಸಿಕ್ಸರ್, 1 ಬೌಂಡರಿ ನೆರವಿನಿಂದ 44 ರನ್ ಸಿಡಿಸಿ 3ನೇ ವಿಕೆಟ್ ಗೆ 64 ರನ್ ಸೇರಿಸಿದರು. ಈ ವೇಳೆ 15ನೇ ಓವರ್‍ನ ಎಸೆದ ನಿತೀಶ್ ರಾಣಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು. ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ 33 ಎಸೆತಗಳಲ್ಲಿ 31 ರನ್ ಗಳಿಸಿದ್ದ ವೇಳೆ ಇದೇ ಓವರ್ ನಲ್ಲಿ ಬೌಲ್ಡ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಸರ್ಫರಾಜ್ ಖಾನ್ (6) ಬಂದಷ್ಟೇ ವೇಗದಲ್ಲಿ ಔಟಾದರು. ಇನ್ನಿಂಗ್ಸ್ ಕೊನೆಯಲ್ಲಿ ಮಂದೀಪ್ ಸಿಂಗ್ ಬಿರುಸಿನ ಆಟವಾಡಿ ಕೇವಲ 18 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ನೆರವಿನಿಂದ 37 ರನ್ ಸಿಡಿಸಿ ತಂಡದ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

    ರೈಡರ್ಸ್ ಪರ ವಿನಯ್ ಕುಮಾರ್, ನಿತೀಶ್ ರಾಣಾ, 2 ಪಡೆದರೆ. ಜಾನ್ಸನ್ ಚಾವ್ಲಾ, ಸುನೀಲ್ ನರೇನ್ ತಲಾ ಒಂದು ವಿಕೆಟ್ ಪಡೆದರು.

  • 50 ಸಾವಿರ ಪಿಂಚಣಿಗಾಗಿ ತಾಯಿಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟ ಮಗ!

    50 ಸಾವಿರ ಪಿಂಚಣಿಗಾಗಿ ತಾಯಿಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟ ಮಗ!

    ಕೋಲ್ಕತ್ತಾ: ಮಗನೊಬ್ಬ ತಾಯಿಯ ಪಿಂಚಣಿ ಪಡೆಯಲು ಆಕೆಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟಿದ್ದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಸುಬ್ರೂತ್ ಮಜುಮ್ಮ್ ದಾರ್ ಪೆನ್ಷನ್ ಗಾಗಿ ತಾಯಿಯ ಮೃತದೇಹವನ್ನು ಫ್ರಿಡ್ಜ್ ನಲ್ಲಿಟ್ಟ ಮಗ. ಮೃತ ಮಹಿಳೆ ಭಾರತ ಆಹಾರ ನಿಗಮ(ಎಫ್‍ಸಿಐ)ನಿವೃತ್ತ ಅಧಿಕಾರಿಯಾಗಿದ್ದು, ತಿಂಗಳಿಗೆ 50 ಸಾವಿರ ರೂ. ಪೆನ್ಷನ್ ಪಡೆಯುತ್ತಿದ್ದರು. ಮೃತ ತಾಯಿಯ ಮಗ ಪೆನ್ಷನ್‍ಗಾಗಿ ತನ್ನ ಆಕೆಯ ಮೃತದೇಹವನ್ನು 3 ವರ್ಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟದ್ದನು. ನಂತರ ತಿಂಗಳು ತಿಂಗಳು ಪೆನ್ಷನ್‍ಗಾಗಿ ಆತ ತನ್ನ ತಾಯಿಯ ಹೆಬ್ಬೆಟ್ಟನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ.

    ಪ್ರತಿ ತಿಂಗಳು ತನ್ನ ತಾಯಿಗೆ ಸಿಗುತ್ತಿದ್ದ ಪೆನ್ಷನ್ ಹಣವನ್ನು ಮಗ ಬ್ಯಾಂಕಿನಿಂದ ತೆಗೆಯುತ್ತಿದ್ದನು. ಮಹಿಳೆ ಸಾವಿನ ಮೂರು ವರ್ಷಗಳ ಕಾಲ ಹೀಗೆ ನಡೆಯುತ್ತಿತ್ತು. ಮೂರು ವರ್ಷ ಮೃತದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದನು ಎಂದು ಪೊಲೀಸರು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂರು ವರ್ಷದಿಂದ ಮಗ ಶವವನ್ನು ಫ್ರಿಡ್ಜ್ ನಲ್ಲಿಟ್ಟಿರುವುದು ನನಗೆ ತಿಳಿದಿತ್ತು ಎಂದು ಮಹಿಳೆಯ ಪತಿ ತಿಳಿಸಿದ್ದಾರೆ.

    ಇನ್ನೂ ಆರೋಪಿಗಳಿಬ್ಬರು ತಮ್ಮ ಜೊತೆ ಮಾತನಾಡುತ್ತಿರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಮಾಧ್ಯಮದಲ್ಲಿ ತಿಳಿಸಿದ್ದಾರೆ. ಮಹಿಳೆ ಮೃತಪಟ್ಟ ವಿಷಯ ತಿಳಿದಿತ್ತು ಆದರೆ ಅಂತ್ಯಸಂಸ್ಕಾರ ಮಾಡಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

    ಕೃತ್ಯದ ಬಗ್ಗೆ ಮೂಲಗಳ ಖಚಿತ ಮಾಹಿತಿ ತಿಳಿದು ಸುಬ್ರೂತ್ ಮಜುಮ್ಮ್‍ದಾರ್ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹವನ್ನು ವಶಕ್ಕೆ ಪಡೆದು ಮಗ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಶವದ ಪಕ್ಕದಲ್ಲೇ ಕಾದು ಕುಳಿತ ಪುತ್ರ!

    ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಶವದ ಪಕ್ಕದಲ್ಲೇ ಕಾದು ಕುಳಿತ ಪುತ್ರ!

    ಕೋಲ್ಕತಾ: ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಪುತ್ರನೊಬ್ಬ ಶವದ ಪಕ್ಕದಲ್ಲೇ ಕಾದು ಕುಳಿತ ಘಟನೆ ಭಾನುವಾರ ಕೋಲ್ಕತಾದ ಬೌಬಜಾರ್ ನಲ್ಲಿ ನಡೆದಿದೆ.

    ಹೆತ್ತ ತಾಯಿಗಾಗಿ ಆಕೆಯ ಮೃತದೇಹದ ಬಳಿ 30 ವರ್ಷದ ಪುತ್ರ ಕಾದು ಕುಳಿತ್ತಿದ್ದು, ಈಗ ಆತನಿಗೆ ಮಾತನಾಡಲು ಹಾಗೂ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಚ್ಚಿಪರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶಶಿಬುಸನ್ ದೇ ಸ್ಟ್ರೀಟ್‍ನಲ್ಲಿರುವ ಈತನ ಮನೆಯಿಂದ ಮೃತದೇಹದ ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ನಮಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ನಾವು ಆತನ ಮನೆಯ ಬಾಗಿಲನ್ನು ಹೊಡೆದು ಒಳಗೆ ಹೋದೆವು. ನಂತರ ಮಂಚದ ಮೇಲಿದ್ದ ಮಹಿಳೆಯ ಮೃತದೇಹವನ್ನು ನೋಡಿದ್ದೇವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಿ, ನಂತರ ಅನ್ನ, ನೀರು ಬಿಟ್ಟು ಕುಳಿತ ಆ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ತಾಯಿ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

  • ವೈದ್ಯನಂತೆ ನಟಿಸಿದ ಎಸಿ ಮೆಕ್ಯಾನಿಕ್- ಆಂಬುಲೆನ್ಸ್ ನಲ್ಲೇ ಬಾಲಕನ ಸಾವು

    ವೈದ್ಯನಂತೆ ನಟಿಸಿದ ಎಸಿ ಮೆಕ್ಯಾನಿಕ್- ಆಂಬುಲೆನ್ಸ್ ನಲ್ಲೇ ಬಾಲಕನ ಸಾವು

    ಕೋಲ್ಕತಾ: ಎಸಿ(ಏರ್ ಕಂಡೀಷನರ್) ಮೆಕ್ಯಾನಿಕ್‍ವೊಬ್ಬ ವೈದ್ಯನಂತೆ ನಟಿಸಿ 16 ವರ್ಷದ ಬಾಲಕನ ಸಾವಿಗೆ ಕಾರಣನಾದ ಘಟನೆ ಕೋಲ್ಕತ್ತಾದಲ್ಲಿ ಗುರುವಾರದಂದು ನಡೆದಿದೆ.

    ಅರಿಜಿತ್(16) ಮೃತ ಬಾಲಕ. ವೈದ್ಯನಂತೆ ನಟಿಸಿ ವಂಚಿಸಿದ ಆರೋಪದಡಿ ಎಸಿ ಮೆಕ್ಯಾನಿಕ್ ಸರ್ಫರಾಜ್ ಮತ್ತು ಆಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಆಂಬುಲೆನ್ಸ್ ನಲ್ಲಿ ಮೆಕ್ಯಾನಿಕ್‍ಗೆ ಲೈಫ್ ಸಪೋರ್ಟಿಂಗ್ ಸಿಸ್ಟಂ ಸರಿಯಾಗಿ ಉಪಯೋಗಿಸಲು ಬರದೇ ಬಾಲಕನ ಪರಿಸ್ಥಿತಿ ಹದಗೆಟ್ಟು ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ಅರಿಜಿತ್ ಸಾವನ್ನಪ್ಪಿದ್ದ ಎಂದು ಕೊಲ್ಕತ್ತಾದ ವೈದ್ಯರು ದೃಢಪಡಿಸಿದ್ದಾರೆ.

    ಏನಿದು ಘಟನೆ?: ಅರಿಜಿತ್ ತಂದೆ ರಂಜಿತ್ ದಾಸ್ ಅವರು ಸರ್ಫರಾಜ್ ಉದಿನ್‍ಗೆ 8,000 ರೂ. ಹಣ ನೀಡಿ ತನ್ನ ಮಗನನ್ನು ಖಾಸಗಿ ಆಸ್ಪತ್ರೆಯಿಂದ ಕೋಲ್ಕತ್ತಾ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದರು. ಆಂಬುಲೆನ್ಸ್ ನಲ್ಲಿ ಲೈಫ್ ಸಪೋರ್ಟಿಂಗ್ ಸಿಸ್ಟಂ ಹೇಗೆ ಬಳಸಬೇಕೆಂದು ಮೆಕ್ಯಾನಿಕ್ ಗೆ ತಿಳಿದಿರಲಿಲ್ಲ. ಆರಿಜಿತ್ ತಂದೆ ರಂಜಿತ್ ದಾಸ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅವರೊಬ್ಬ ದೊಡ್ಡ ವೈದ್ಯರು ಎಂದು ಹೇಳಿದ್ರು. ಆಂಬುಲೆನ್ಸ್ ನಲ್ಲಿ ಯಾವುದೇ ಅಡಚಣೆ ಇದ್ದರೆ ಅವರಿಗೆ ಚಿಕಿತ್ಸೆ ಕಷ್ಟವಾಗುತ್ತಾದೆಂದು ಕುಟುಂಬಸ್ಥರನ್ನ ಆಂಬುಲೆನ್ಸ್ ನಲ್ಲಿ ಹೋಗಲು ಅನುಮತಿಸದೆ ನಮ್ಮನ್ನು ಕಾರ್ ನಲ್ಲಿ ಹೋಗುವಂತೆ ಹೇಳಿದರು ಎಂದು ತಿಳಿಸಿದ್ದಾರೆ.

    ರಂಜಿತ್ ದಾಸ್ ಅವರು ಪೂರ್ವ ಜಾದವ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ 26 ವರ್ಷದ ಮೆಕ್ಯಾನಿಕ್ ನನ್ನು ಬಂಧಿಸಲಾಗಿದೆ. ಬದ್ರ್ವಾನ್ ನ ಆಂಬ್ಯುಲೆನ್ಸ್ ಚಾಲಕ ಮತ್ತು ಅನ್ನಪೂರ್ಣ ನರ್ಸಿಂಗ್ ಹೋಮ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯವರು ವೈದ್ಯ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು ಇದಕ್ಕಾಗಿ 16 ಸಾವಿರ ರೂ. ಹಣ ಪಡೆದಿದ್ದರು ಎಂದು ವರದಿಯಾಗಿದೆ.

    ನಿರ್ಲಕ್ಷ್ಯ ಮತ್ತು ವಂಚನೆ ಆರೋಪದಡಿ ಸರ್ಫರಾಜ್ ಮತ್ತು ಆಂಬುಲೆನ್ಸ್ ಚಾಲಕನನ್ನು ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನ ಶುಕ್ರವಾರದಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಿದ್ದಾರೆ.