Tag: kolkata

  • 4 ಸಾವಿರ ಸಾಲ ಮರುಪಾವತಿಸುವುದಾಗಿ ಕರೆದು 16ರ ಹುಡುಗಿಯ ಅತ್ಯಾಚಾರಗೈದ

    4 ಸಾವಿರ ಸಾಲ ಮರುಪಾವತಿಸುವುದಾಗಿ ಕರೆದು 16ರ ಹುಡುಗಿಯ ಅತ್ಯಾಚಾರಗೈದ

    ಕೋಲ್ಕತ್ತಾ: ಸಾಲ ಮರುಪಾವತಿ ಮಾಡುವುದಾಗಿ 16 ವರ್ಷದ ಹುಡುಗಿಯನ್ನು ಮನೆಗೆ ಕರೆಸಿಕೊಂಡು ಕಾಮುಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

    ಕೋಲ್ಕತ್ತಾದ ಗೋವಿಂದಪುರ ಕಾಲೋನಿಯಲ್ಲಿ ಘಟನೆ ನಡೆದಿದ್ದು, ತಾನು ನೀಡಬೇಕಿದ್ದ 4 ಸಾವಿರ ರೂ. ಹಿಂದಿರುಗಿಸುವುದಾಗಿ ಬಾಲಕಿಯನ್ನು ಮನೆಗೆ ಕರೆದಿದ್ದು, ಈ ವೇಳೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಅಬೀರ್ ನಾಸ್ಕರ್ ಅಲಿಯಾಸ್ ನಾಂಟು ಎಂದು ಗುರುತಿಸಲಾಗಿದೆ. ಈ ಹಿಂದೆ ವನ್ಯಜೀವಿ ಕಾಯ್ದೆ ಉಲ್ಲಂಘನೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಈತ ಹಲ್ಲಿಗಳನ್ನು ಮಾರಾಟ ಮಾಡುವ ಪ್ರಕರಣದಲ್ಲಿ ಆರೋಪಿಯಾಗಿದ್ದ.

    ಆರೋಪಿ ಸಾಮಾಜಿಕ ಜಾಲತಾಣದಲ್ಲಿ 16ರ ಬಾಲೆಯನ್ನು ಪರಿಚಯಿಸಿಕೊಂಡಿದ್ದು, ಬಳಿಕ ಇಬ್ಬರು ಫೋನ್‍ನಲ್ಲಿ ಹಲವು ಬಾರಿ ಮಾತನಾಡಿದ್ದರು. ನಂತರ ಇಬ್ಬರಲ್ಲಿ ಗಾಢವಾದ ಸ್ನೇಹ ಬೆಳೆದಿತ್ತು. ಹೀಗಾಗಿ ನಾಂಟುನನ್ನು ನಂಬಿ ಹುಡುಗಿ 4 ಸಾವಿರ ರೂ.ಸಾಲವನ್ನು ನೀಡಿದ್ದಳು. ಆದರೆ 16ರ ಬಾಲೆಗೆ ಆರೋಪಿ ನಾಂಟು ಹಣ ಹಿಂದಿರುಗಿಸಿರಲಿಲ್ಲ.

    ಬಳಿಕ ಹಣ ನೀಡುವಂತೆ ಹುಡುಗಿ ಆರೋಪಿಗೆ ಒತ್ತಡ ಹಾಕಿದ್ದಾಳೆ. ಈ ವೇಳೆ ಮನೆಗೆ ಬಾ ಹಣ ಕೊಡುತ್ತೇನೆ ಎಂದು ನಾಂಟು ಹೇಳಿದ್ದಾನೆ. ಮನೆಗೆ ಬರುತ್ತಿದ್ದಂತೆ ನಾಂಟು ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ವಿಚಾರವನ್ನು ಬಾಯ್ಬಿಡದಂತೆ ಬೆದರಿಕೆ ಹಾಕಿದ್ದಾನೆ.

    ಹುಡುಗಿ ಮನೆಗೆ ಮರಳುತ್ತಿದ್ದಂತೆ ಕುಟುಂಬಸ್ಥರಿಗೆ ಘಟನೆ ಕುರಿತು ವಿವರಿಸಿದ್ದು, ಬಳಿಕ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಆರೋಪಿ ನಾಂಟುನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು. ಅವಳನ್ನು ಇದೀಗ ಮನೆಯಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಶೀಘ್ರವೇ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಮನೆಯಿಂದ ಹೊರ ಹಾಕಿದ ಮಕ್ಕಳು, ವೃದ್ಧ ಬೀದಿ ಪಾಲು- ಸಹಾಯಕ್ಕಾಗಿ ನೆಟ್ಟಿಗರ ಮನವಿ

    ಮನೆಯಿಂದ ಹೊರ ಹಾಕಿದ ಮಕ್ಕಳು, ವೃದ್ಧ ಬೀದಿ ಪಾಲು- ಸಹಾಯಕ್ಕಾಗಿ ನೆಟ್ಟಿಗರ ಮನವಿ

    – 50 ರೂ.ಗೆ ಪೇಂಟಿಂಗ್ ಮಾರಿ ಜೀವನ ಸಾಗಿಸುತ್ತಿರುವ ವೃದ್ಧ

    ಕೋಲ್ಕತ್ತಾ: ಇತ್ತೀಚೆಗೆ ಬಾಬಾ ಕಾ ಢಾಬಾ ಕುರಿತು ಸುದ್ದಿ ವೈರಲ್ ಆಗಿತ್ತು. ಇದೀಗ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಅಂತಹದ್ದೇ ಪ್ರಕರಣ ನಡೆದಿದ್ದು, ಮಕ್ಕಳು ಮನೆಯಿಂದ ಹೊರ ಹಾಕಿದ್ದಕ್ಕೆ 80 ವರ್ಷದ ವೃದ್ಧ 50-100 ರೂ.ಗೆ ತಾನು ಮಾಡಿದ ಪೇಂಟಿಂಗ್ ಮಾರಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರಿಗೆ ಗ್ರಾಹಕರ ಕೊರತೆ ಕಾಡುತ್ತಿದೆ. ಹೀಗಾಗಿ ನೆಟ್ಟಿಗರು ಈ ಕುರಿತು ಬೆಳಕು ಚೆಲ್ಲಿದ್ದಾರೆ.

    ಕಲಾವಿದರಾದ ಸುನಿಲ್ ಪಾಲ್ ಅವರಿಗೆ 80 ವರ್ಷ ವಯಸ್ಸಾಗಿದ್ದು, ತಮ್ಮ ಸುಂದರವಾದ ಪೇಂಟಿಂಗ್‍ಗಳೊಂದಿಗೆ ಕೋಲ್ಕತ್ತಾದ ಗೋಲ್ ಪಾರ್ಕ್ ಬಳಿಯ ಗರಿಯಾಹತ್ ರಸ್ತೆಯ ಆಕ್ಸಿಸ್ ಬ್ಯಾಂಕ್ ಬಳಿ ಕುಳಿತಿರುತ್ತಾರೆ. ತಾವೇ ರಚಿಸಿದ ಪೇಂಟಿಂಗ್‍ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಸುನಿಲ್ ಪಾಲ್ ಅವರು, ಗ್ರಾಹಕರಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಕಂಡ ನೆಟ್ಟಿಗರು ಅವರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ಅವರ ಬಳಿ ಪೇಂಟಿಂಗ್ ಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಸುನಿಲ್ ಪಾಲ್ ಅವರ ಬಳಿ ಅತ್ಯದ್ಭುತ ಪೇಂಟಿಂಗ್ ಕಲೆ ಇದ್ದು, ಇದೇ ಚಿತ್ರಗಳನ್ನು ಬೇರೆಡೆ ಮಾರಿದರೆ ಸಾವಿರಾರು ರೂಪಾಯಿ ಸಂಪಾದಿಸಬಹುದು. ಆದರೆ ಸೂಕ್ತ ಮಾರುಕಟ್ಟೆ ಸಿಗದೆ ಸುನಿಲ್ ಅವರು ರಸ್ತೆ ಬದಿ ಮಾರಾಟ ಮಾಡುತ್ತಿದ್ದಾರೆ. ಅದೂ ಸಹ ಕೇವಲ 50-100 ರೂ.ಗೆ ಮಾರುತ್ತಿದ್ದು, ಇಷ್ಟಾದರೂ ಯಾರೂ ಕೊಳ್ಳುತ್ತಿಲ್ಲ. ಅವರು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.

     

    View this post on Instagram

     

    A post shared by Krishna Šeth (@krishnasethh)

    ಪಾಲ್ ಅವರನ್ನು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ. ಮನೆಯಿಂದ ಹೊರ ಬಂದ ಬಳಿಕ ಹತಿ ಬಗಾನ್‍ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಅವರೇ ರಚಿಸಿದ ಪೇಂಟಿಂಗ್‍ಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ದಯವಿಟ್ಟು ಯಾರಾದರೂ ಈ ವೃದ್ಧಗೆ ಸಹಾಯ ಮಾಡಿ, ಬುಧವಾರ ಹಾಗೂ ಶನಿವಾರ ಇವರು ಗೋಲ್ ಪಾರ್ಕ್ ಬಳಿ ಕುಳಿತಿರುತ್ತಾರೆ ಎಂದು ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮಾಡುತ್ತಿದ್ದು, ಖಂಡಿತವಾಗಿಯೂ ನಾವು ಅವರನ್ನು ಭೇಟಿಯಾಗುತ್ತೇವೆ. ಪೇಂಟಿಂಗ್ಸ್ ಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

  • ಹಿರಿಯ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ

    ಹಿರಿಯ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ

    ಕೋಲ್ಕತ್ತಾ: ಬೆಂಗಾಳಿ ಹಿರಿಯ ನಟ ಸೌಮಿತ್ರ ಚಟರ್ಜಿ(85) ಅವರು ಇಂದು ವಿಧಿವಶರಾಗಿದ್ದಾರೆ.

    ಕಳೆದ ಒಂದು ತಿಂಗಳಿಂದ ಕೋಲ್ಕತ್ತಾದ ಬೆಲ್ಲೆವ್ಯೂ ನರ್ಸಿಂಗ್ ಹೋಮ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೌಮಿತ್ರ ಚಟರ್ಜಿ, ಇಂದು ಕೊನೆಯುಸಿರೆಳೆದಿದ್ದಾರೆ. ಅಕ್ಟೋಬರ್ 6ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಬಳಿಕ ಗುಣಮುಖರಾಗಿದ್ದರು. ನೆಗೆಟಿವ್ ವರದಿ ಬಂದ ಬಳಿಕ ಅವರನ್ನು ಐಟಿಯುನಲ್ಲಿರಿಸಿ ಚಿಕಿತ್ಸೆ ನಿಡಲಾಗುತ್ತಿತ್ತು.

    ತಜ್ಞ ವೈದ್ಯರ ತಂಡ ಸೌಮಿತ್ರ ಅವರಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡುತ್ತಿತ್ತು. ಕೊರೊನಾ ವೈರಸ್ ಪರಿಣಾಮದಿಂದಾಗಿ ಅವರಿಗೆ ದ್ವಿತೀಯ ಹಂತದ ಸೋಂಕುಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಕೊರೊನಾದಿಂದ ಗುಣಮುಖರಾದರೂ ಚೇತರಿಸಿಕೊಳ್ಳಲಿಲ್ಲ.

    ಅವರ ಸಾವಿನ ಕುರಿತು ನರ್ಸಿಂಗ್ ಹೋಮ್ ಅಧೀಕೃತ ಪ್ರಕಟಣೆ ಹೊರಡಿಸಿದ್ದು, ಭಾರವಾದ ಹೃದಯದಿಂದ ಇದನ್ನು ಘೋಷಿಸುತ್ತಿದ್ದೇವೆ. ಸೌಮಿತ್ರ ಚಟ್ಟೋಪಾಧ್ಯಾಯ ಅವರು ಮಧ್ಯಾಹ್ನ 12.15ಕ್ಕೆ ಬೆಲ್ಲೆವ್ಯೂ ಕ್ಲಿನಿಕ್‍ನಲ್ಲಿ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ ಎಂದು ಆಸ್ಪತ್ರೆ ತಿಳಿಸಿದೆ.

    ಆಸ್ಪತ್ರೆ ವಕ್ತಾರರು ಈ ಕುರಿತು ಮಾಹಿತಿ ನೀಡಿದ್ದು, ಅಕ್ಟೋಬರ್ 28ರಂದು ನಾವು ದ್ವಿತೀಯ ಹಂತದ ಸೋಂಕು ಹಾಗೂ ಅದರ ಪರಿಣಾಮಗಳ ವಿರುದ್ಧ ಹೋರಾಡಿದ್ದೆವು. ಸೂಕ್ಷ್ಮತೆ ಆಧರಿಸಿ ಎಲ್ಲ ರೀತಿಯ ಆ್ಯಂಟಿಬಯಾಟಿಕ್ ಹಾಗೂ ಆ್ಯಂಟಿ ಫಂಗಲ್ ಮೆಡಿಸಿನ್‍ಗಳನ್ನು ನೀಡಿದ್ದೇವೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎಂದು ನಂಬಿದ್ದೆವು. ಅಲ್ಲದೆ ಬೇಗ ಗುಣಮುಖರಾಗುತ್ತಾರೆ ಎಂದುಕೊಂಡಿದ್ದೆವು. ಆದರೆ ಪೂತ್ರಪಿಂಡದ ಕೆಲಸ ಹಿಂದಕ್ಕೆ ತಳ್ಳಿತು. ಹೀಗಾಗಿ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಸೌಮಿತ್ರ ಚಟರ್ಜಿ ಅವರು ಪ್ರಸಿದ್ಧ ಕಲಾವಿದರಾಗಿದ್ದು, ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ 2018ರಲ್ಲಿ ಫ್ರಾನ್ಸ್ ಉನ್ನತ ನಾಗರಿಕ ಗೌರವ ಲೀಜನ್ ಆಫ್ ಆನರ್ ಗೆ ಪಾತ್ರರಾಗಿದ್ದಾರೆ.

  • ರಾತ್ರೋರಾತ್ರಿ ಶ್ರೀಮಂತಳಾದ ಅಜ್ಜಿ – ಅದೃಷ್ಟ ಬದಲಿಸಿದ ಸತ್ತ ಮೀನು

    ರಾತ್ರೋರಾತ್ರಿ ಶ್ರೀಮಂತಳಾದ ಅಜ್ಜಿ – ಅದೃಷ್ಟ ಬದಲಿಸಿದ ಸತ್ತ ಮೀನು

    – ಒಂದೇ ಮೀನು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ

    ಕೋಲ್ಕತ್ತಾ: ನದಿಯಲ್ಲಿ ಬರೋಬ್ಬರಿ 52 ಕೆಜಿ ತೂಕದ ಸತ್ತ ಮೀನು ಹಿಡಿದ ನಂತರ ಅಜ್ಜಿಯೊಬ್ಬರು ರಾತ್ರೋರಾತ್ರಿ ಶ್ರೀಮಂತರಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ದಕ್ಷಿಣ 24 ಪರಗಣ ಜಿಲ್ಲೆಯ ಸುಂದರ್‌ಬನ್ಸ್ ಪ್ರದೇಶದ ಸಾಗರ್ ದ್ವೀಪದ ಗ್ರಾಮದ ನಿವಾಸಿ ಪುಷ್ಪಾ ಕಾರ್ ಗೆ ಭಾರೀ ತೂಕದ ಸತ್ತ ಮೀನೊಂದು ಸಿಕ್ಕಿದೆ. ಆ ಮೀನನ್ನು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಮೀನನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂಪಾಯಿಯಂತೆ ಮಾರಾಟ ಮಾಡಲಾಯಿತು. ಒಂದೇ ಮೀನನ್ನು 3 ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಪುಷ್ಪಾ ಕಾರ್ ಮೀನುಗಾರಿಕೆಗೆ ಹೋಗುವಾಗ ಆಕಸ್ಮಿಕವಾಗಿ ನದಿಯಿಂದ ದೊಡ್ಡ ಮೀನು ತೇಲಿ ಬರುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಪುಷ್ಪಾ ಕಾರ್ ನದಿಗೆ ಹಾರಿದ್ದು, ಮೀನನ್ನು ನದಿಯ ತೀರಕ್ಕೆ ಎಳೆದುಕೊಂಡು ಬಂದಿದ್ದಾರೆ. ಅಜ್ಜಿಗೆ ಮೀನನ್ನು ತೀರಕ್ಕೆ ತರಲು ಸ್ವಲ್ಪ ಸಮಯ ಮತ್ತು ಶ್ರಮ ಬೇಕಾಯಿತು. ನಂತರ ಆ ಮೀನನ್ನು ಭೋಲಾ ಮೀನು ಎಂದು ಗುರುತಿಸಲಾಗಿದೆ. ಬಳಿಕ ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸ್ಥಳೀಯರು ಸಹಾಯ ಮಾಡಿದ್ದರು.

    ಅಂದಹಾಗೆ ಆ ದೈತ್ಯ ಮೀನು ಬಹುಶಃ ಹಾದುಹೋಗುವ ಹಡಗಿಗೆ ಡಿಕ್ಕಿ ಹೊಡೆದು ಸತ್ತು ಹೋಗಿರಬಹುದು. ಒಂದು ವೇಳೆ ಮೀನು ಕೊಳೆಯಲು ಪ್ರಾರಂಭಿಸದಿದ್ದರೆ ಇನ್ನೂ ಹೆಚ್ಚಿನ ಹಣ ಪಡೆಯಬಹುದಿತ್ತು ಎಂದು ಸ್ಥಳೀಯ ಮೀನು ವ್ಯಾಪಾರಿಗಳು ಹೇಳಿದ್ದಾರೆ.

    “ಮೀನು ನನಗೆ ಜಾಕ್‍ಪಾಟ್ ಆಗಿ ಪರಿಣಮಿಸಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂ.ಗೆ ಮಾರಾಟ ಮಾಡುವ ಮೂಲಕ ನಾನು 3 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಇಂತಹ ದೈತ್ಯ ಮೀನನ್ನು ನಾನು ನೋಡಿಲ್ಲ. ಇದನ್ನು ಬಂಗಾಳಿ ಭಾಷೆಯಲ್ಲಿ ‘ಭೋಲಾ’ ಮೀನು ಎಂದು ಕರೆಯಲಾಗುತ್ತದೆ” ಎಂದು ಅಜ್ಜಿ ಹೇಳಿದ್ದಾರೆ.

    ಮೀನು ಕೊಳೆಯಲು ಪ್ರಾರಂಭಿಸಿದ್ದರಿಂದ ತಿನ್ನಲೂ ಸಾಧ್ಯವಿಲ್ಲ. ಜೊತೆಗೆ ಈ ಗಾತ್ರದ ಮೀನುಗಳ ಮಾಂಸವು ರಬ್ಬರ್ ಆಗಿರುವುದರಿಂದ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಬ್ಲಬ್ಬರ್ ಎಂದು ಕರೆಯಲ್ಪಡುವ ಮೀನಿನ ಕೊಬ್ಬನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆಗ್ನೇಯ ಏಷ್ಯಾದ ದೇಶಗಳಿಗೆ ಬ್ಲಬ್ಬರ್ ನಂತಹ ಮೀನಿನ ಅಂಗಗಳನ್ನು ರಫ್ತು ಮಾಡಲಾಗುತ್ತದೆ. ಅಲ್ಲದೇ ಈ ಮೀನುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಸಹ ಬಳಸಿಕೊಳ್ಳಲಾಗುತ್ತದೆ.

  • ಕೋವಿಡ್ ಬಂದ್ರೆ ನಾನು ಮಮತಾ ಬ್ಯಾನರ್ಜಿಯನ್ನ ತಬ್ಬಿಕೊಳ್ತೇನೆ: ಬಿಜೆಪಿ ಕಾರ್ಯದರ್ಶಿ

    ಕೋವಿಡ್ ಬಂದ್ರೆ ನಾನು ಮಮತಾ ಬ್ಯಾನರ್ಜಿಯನ್ನ ತಬ್ಬಿಕೊಳ್ತೇನೆ: ಬಿಜೆಪಿ ಕಾರ್ಯದರ್ಶಿ

    ಕೋಲ್ಕತ್ತಾ: ಕೋವಿಡ್ -19 ಸೋಂಕಿಗೆ ಒಳಗಾಗಿದರೆ ನಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುವುದಾಗಿ ನೂತನವಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ಈ ಹೇಳಿಕೆಯನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಹಜ್ರಾ ಮತ್ತು ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವನ್ನು ಕೂಡ ಕಾಪಾಡಲಿಲ್ಲ. ಈ ಬಗ್ಗೆ ಅನುಪಮ್ ಹಜ್ರಾ ಬಳಿ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಹಜ್ರಾ, “ನಮ್ಮ ಪಕ್ಷದ ಕಾರ್ಯಕರ್ತರು ಕೊರೊನಾಕ್ಕಿಂತ ದೊಡ್ಡ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ” ಎಂದಿದ್ದಾರೆ.

    ಒಂದು ವೇಳೆ ನನಗೆ ಕೊರೊನಾ ವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆ. ಕೋವಿಡ್ ರೋಗಿಗಳ ಕುಟುಂಬಗಳ ನೋವನ್ನು ಅನುಭವಿಸುವಂತೆ ಮಾಡಲು ಈ ಮಾಡುವುದಾಗಿ ಹಜ್ರಾ ತಿಳಿಸಿದ್ದಾರೆ.

    ಕೋವಿಡ್‍ಗೆ ಬಲಿಯಾದವರ ಅಂತ್ಯಕ್ರಿಯೆ ನಡೆಯುವ ರೀತಿ ಕರುಣಾಜನಕವಾಗಿದೆ. ಅವರ ದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಯಿತು. ನಾವು ಸತ್ತ ಬೆಕ್ಕುಗಳನ್ನು ಅಥವಾ ನಾಯಿಗಳನ್ನು ಸಹ ಆ ರೀತಿ ಪರಿಗಣಿಸುವುದಿಲ್ಲ. ಅಲ್ಲದೇ ಕೊರೊನಾನಿಂದ ಮೃತಪಟ್ಟವರ ಮುಖವನ್ನು ಕೂಡ ಅವರ ಕುಟುಂಬದವರಿಗೆ ತೋರಿಸುತ್ತಿಲ್ಲ ಎಂದು ಹಜ್ರಾ ಹೇಳಿದ್ದಾರೆ.

    ಟಿಎಂಸಿಯ ಹಿರಿಯ ಮುಖಂಡ ಸೌಗತಾ ರಾಯ್ ಈ ಹೇಳಿಕೆಯನ್ನು ಖಂಡಿಸಿದ್ದು, ಇಂತಹ ಮಾತುಗಳು ಮತ್ತು ಹೇಳಿಕೆಗಳು ಬಿಜೆಪಿ ಮುಖಂಡರಿಂದ ಮಾತ್ರ ಬರಬಹುದು. ಇದು ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

    ಟಿಎಂಸಿ ಹಜ್ರಾ ಹೇಳಿಕೆಯ ವಿರುದ್ಧ ಸಿಲಿಗುರಿಯಲ್ಲಿ ಪೊಲೀಸ್ ದೂರು ದಾಖಲಿಸಿದೆ. ನಾವು ಅನುಪಮ್ ಹಜ್ರಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ. ಕೂಡಲೇ ಅವರ ವಿರುದ್ಧ ಕ್ರಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದೇವೆ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

  • ಪೋಷಕರನ್ನ ನೋಡಲು ಹೋದ ಪತ್ನಿ ಲಾಕ್ – ಅತ್ತೆ ಮನೆ ಮುಂದೆ ಪತಿ ಧರಣಿ

    ಪೋಷಕರನ್ನ ನೋಡಲು ಹೋದ ಪತ್ನಿ ಲಾಕ್ – ಅತ್ತೆ ಮನೆ ಮುಂದೆ ಪತಿ ಧರಣಿ

    – ಪ್ರೇಯಸಿಗೆ 18 ವರ್ಷ ಆಗುತ್ತಿದ್ದಂತೆ ಮದುವೆ

    ಕೋಲ್ಕತ್ತಾ: ಪತ್ನಿಯನ್ನ ತನ್ನ ಮನೆಗೆ ವಾಪಸ್ ಕಳಿಸುವಂತೆ 28 ವರ್ಷದ ಯುವಕನೊಬ್ಬ ಅತ್ತೆ-ಮಾವನ ಮನೆಯ ಮುಂದೆ ಧರಣಿ ಕುಳಿತಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.

    ಅಲೋಕ್ ಮಲ್ಲಿಕ್ ಇಂದು ಬೆಳಗ್ಗೆಯಿಂದ ಅತ್ತೆ-ಮಾವನ ಮನೆಯ ಹೊರಗೆ ಪತ್ನಿಗಾಗಿ ಧರಣಿ ಕುಳಿತಿದ್ದಾನೆ. ಅಲೋಕ್ ತಾನು ಪ್ರೀತಿಸಿದ ಹುಡುಗಿ ಸಂಗೀತಾ ಘೋಷ್‍ಗೆ 18 ವರ್ಷ ತುಂಬಿದ ನಂತರ ಇತ್ತೀಚೆಗೆ ವಿವಾಹವಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಸಂಗೀತಾ ತನ್ನ ಕುಟುಂಬದ ವಿರೋಧದ ನಡುವೆಯೂ ಅಲೋಕ್ ಜೊತೆಗೆ ವಿವಾಹವಾಗಿದ್ದಳು. ಅಲೋಕ್ ಫೋಟೋಗ್ರಾಫ್ ಸ್ಟುಡಿಯೋ ಇಟ್ಟುಕೊಂಡಿದ್ದನು. ಇವರ ವಿವಾಹವು ದೇವಾಲಯವೊಂದರಲ್ಲಿ ಹಿಂದೂ ಆಚರಣೆಗಳ ಪ್ರಕಾರ ನಡೆದಿದೆ. ಅದನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ.

    ಇತ್ತೀಚೆಗೆ ಸಂಗೀತಾ ತನ್ನ ಪೋಷಕರನ್ನು ನೋಡಲು ಸೋನಾಖಾಲಿ ಗ್ರಾಮದಲ್ಲಿರುವ ಮನೆಗೆ ಹೋಗಿದ್ದಳು. ಆದರೆ ಆಕೆಯ ಕುಟುಂಬವು ಮತ್ತೆ ಸಂಗೀತಾಳನ್ನು ವಾಪಸ್ ಪತಿಯ ಮನೆಗೆ ಹೋಗಲು ಬಿಡುತ್ತಿಲ್ಲ. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಿ ಬೇರೆಡೆಗೆ ಕಳುಹಿಸಿದ್ದಾರೆ. ಹೀಗಾಗಿ ನನ್ನ ಪತ್ನಿಯನ್ನು ಕಳುಹಿಸಬೇಕು ಎಂದು ಅಲೋಕ್ ಹೇಳಿದ್ದಾನೆ.

    ಅಲೋಕ್ ವಿವಾಹದ ಫೋಟೋಗಳು ಮತ್ತು ಮದುವೆ ಪ್ರಮಾಣಪತ್ರ ಹಿಡಿದು ಅತ್ತೆ-ಮಾವನ ಮನೆಯ ಮುಂದೆ ಧರಣಿ ಕುಳಿತಿದ್ದಾನೆ. ನನ್ನ ಪತ್ನಿಯನ್ನು ಪೋಷಕರು ಅಪರಿಚಿತ ಸ್ಥಳಕ್ಕೆ ಕಳುಹಿಸುತ್ತಿದ್ದಂತೆ ಧರಣಿ ಕುಳಿತುಕೊಂಡೆ. ಅವರು ನನ್ನ ಪತ್ನಿಯನ್ನ ಮನೆಗೆ ವಾಪಸ್ ಕಳುಹಿಸುವರೆಗೂ ಧರಣಿಯನ್ನು ಮುಂದುವರಿಸುತ್ತೇನೆ ಎಂದು ಅಲೋಕ್ ಹೇಳಿದ್ದಾನೆ.

    ಸಂಗೀತಾಳನ್ನು ತನ್ನ ಜೊತೆ ಕಳುಹಿಸಲು ಸ್ಥಳೀಯರು ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾನೆ. ಇತ್ತೀಚೆಗೆ ಸಂಗೀತಾ ಕುಟುಂಬವು ಅಲೋಕ್ ವಿರುದ್ಧ ಹರಿಂಗಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾವು ಆಕೆಯ ಪತಿಯನ್ನು ಸಹ ವಿಚಾರಣೆ ಮಾಡಿದ್ದೇವೆ. ಇಂದು ಮುಂಜಾನೆ ಅಲೋಕ್ ಮನೆಯ ಹೊರಗೆ ಧರಣಿ ಕುಳಿತಿದ್ದಾನೆ. ನಂತರ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲೇ ಜಮಾಯಿಸಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

  • ಸೋಲುಂಡ ತಂಡಗಳ ಫೈಟ್- ಹೈದರಾಬಾದ್, ಕೋಲ್ಕತ್ತಾ ನಡ್ವೆ ಗೆಲುವು ಯಾರಿಗೆ?

    ಸೋಲುಂಡ ತಂಡಗಳ ಫೈಟ್- ಹೈದರಾಬಾದ್, ಕೋಲ್ಕತ್ತಾ ನಡ್ವೆ ಗೆಲುವು ಯಾರಿಗೆ?

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯ ಡೆಬ್ಯು ಪಂದ್ಯದಲ್ಲಿ ಸೋಲುಂಡಿರುವ ಸನ್‌ರೈಸ‌ರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಎರಡೂ ತಂಡಗಳಲ್ಲಿ ಕೆಲ ಬದಲಾವಣೆಗಳುವ ಸಾಧ್ಯತೆ ಇದೆ.

    ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ 49 ರನ್‍ಗಳಿಂದ ಕಳೆದುಕೊಂಡರೆ, ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್ 10 ರನ್‍ಗಳಿಂದ ಸೋಲುಂಡಿತ್ತು. ಇಂದು ಸೋಲಿನ ಕಹಿ ಅನುಭವಿಸಿದ್ದ ಇತ್ತಂಡಗಳು ಮುಖಾಮುಖಿ ಆಗುತ್ತಿರುವುದರಿಂದ ಯಾರಿಗೆ ಗೆಲುವು ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ: ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಇದುವರೆಗೂ ಇತ್ತಂಡಗಳು 17 ಬಾರಿ ಮುಖಾಮುಖಿಯಾಗಿದ್ದು, 10 ಕೋಲ್ಕತ್ತಾ, 7 ಪಂದ್ಯಗಳಲ್ಲಿ ಹೈದರಾಬಾದ್ ಗೆಲವು ಪಡೆದಿದೆ. ಅನುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ 2 ಪಂದ್ಯಗಳನ್ನು ಗಮನಿಸುವುದಾದರೇ ಪಿಚ್ ಬ್ಯಾಟ್ಸ್ ಮನ್ ಮತ್ತು ಬೌಲರ್ ಗಳಿಗೆ ಸಹಕಾರಿಯಾಗಿದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಕ್ರೀಡಾಂಗಣದಲ್ಲಿ ಸರಾಸರಿ 150 ಮೊತ್ತದಲ್ಲಿ ಟಾರ್ಗೆಟ್ ಲಭಿಸಿದೆ.

    ಟೂರ್ನಿಯ ಆರಂಭದಲ್ಲೇ ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಗಾಯದ ಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದ ಪರಿಣಾಮ ಹೈದರಾಬಾದ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಮಾರ್ಷ್ ಸ್ಥಾನಕ್ಕೆ ಜೇಸನ್ ಹೋಲ್ಡರ್ ಆಗಮಿಸಿದ್ದಾರೆ. ಗಾಯದ ಸಮಸ್ಯೆಯಿಂದ 2017ರ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದ ಮಾರ್ಷ್ 2ನೇ ಬಾರಿಗೆ ಐಪಿಎಲ್‍ನಿಂದ ದೂರವಾಗಿದ್ದಾರೆ.

    ಕೋಲ್ಕತ್ತಾ ತಂಡ ವಿಶ್ವದರ್ಜೆಯ ಆಟಗಾರರನ್ನು ಹೊಂದಿದ್ದು, ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಕಮಿನ್ಸ್, ಸುನಿಲ್ ನಾರಾಯಣ್ ಸೇರಿದಂತೆ ಪಂದ್ಯ ಗೆಲ್ಲಿಸಿಕೊಡುವ ಸಾಮಥ್ರ್ಯವಿರುವ ಆಟಗಾರರನ್ನು ಹೊಂದಿದೆ. ಯುವ ಆಟಗಾರ ಶುಭಮನ್ ಗಿಲ್, ನಿತೀಶ್ ರಾಣಾ ಸೇರಿದಂತೆ ಮಾರ್ಗನ್ ಅವರು ತಮ್ಮ ಲಯಕ್ಕೆ ಮರಳಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಕಮಿನ್ಸ್ ಕಳೆದ ಪಂದ್ಯದಲ್ಲಿ ಭರವಸೆ ಮೂಡಿಸಿದ್ದು, ಶಿವಂ ಮಾವಿ, ಕುಲದೀಪ್ ಯಾದವ್ ತಂಡದ ಗೆಲುವಿಗೆ ಕಾಣಿಕೆ ನೀಡಬೇಕಿದೆ.

    ಹೈದರಾಬಾದ್ ತಂಡ ಉತ್ತಮ ಬ್ಯಾಟಿಂಗ್ ಲೈನ್‍ಅಪ್ ಹೊಂದಿದ್ದರು ಕೂಡ ಕಳೆದ ಪಂದ್ಯದಲ್ಲಿ ಆರ್ ಸಿಬಿ ಬೌಲಿಂಗ್ ವಿರುದ್ಧ ದಿಢೀರ್ ಕುಸಿತ ಕಂಡಿತ್ತು. ವಾರ್ನರ್ ಅನೂಹ್ಯ ರೀತಿಯಲ್ಲಿ ರನೌಟ್ ಆಗಿದ್ದು ಬಹುದೊಡ್ಡ ಪೆಟ್ಟು ನೀಡಿತ್ತು. ಕೇವಲ 32 ಎಸೆಗಳಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್ ಸೋಲುಂಡಿತ್ತು. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್‍ಗೆ ಅವಕಾಶ ಲಭಿಸೋ ನಿರೀಕ್ಷೆ ಇದೆ. ಭುವನೇಶ್ವರ್ ನೇತೃತ್ವದ ಬೌಲಿಂಗ್ ಪಡೆಯಲ್ಲಿ ಖಲೀಲ್ ಅಹಮದ್, ರಶೀದ್ ಖಾನ್, ಸಿದ್ಧಾರ್ಥ್ ಕೌಲ್ ಮಿಂಚುವ ಅಗತ್ಯವಿದೆ.

    ಸಂಭಾವ್ಯ ತಂಡ:

    ಹೈದರಾಬಾದ್: ಸುನಿಲ್ ನರೇನ್, ಶುಭ್‍ಮನ್ ಗಿಲ್, ನಿತಿಶ್ ರಾಣಾ, ಮಾರ್ಗನ್, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ನಾಯಕ), ಕಮಿನ್ಸ್, ಕುಲ್ದೀಪ್ ಯಾದವ್, ಸಂದೀಪ್, ಶಿವಂ ಮಾವಿ, ನಿಖಿಲ್ ನಾಯ್ಕ್.

    ಕೋಲ್ಕತ್ತಾ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ಸ್ಟೋವ್, ಮನೀಷ್ ಪಾಂಡೆ, ವಿಜಯ್ ಶಂಕರ್, ಪ್ರಿಯಮ್ ಗಾರ್ಗ್, ಅಭಿಶೇಕ್ ಶರ್ಮಾ, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್.

  • ಒಪ್ಪಿಗೆಯಿಲ್ಲದೆ ಫೋಟೋ ಬಳಕೆ- ಆ್ಯಪ್ ಕಂಪನಿ ವಿರುದ್ಧ ಸಂಸದೆ ದೂರು

    ಒಪ್ಪಿಗೆಯಿಲ್ಲದೆ ಫೋಟೋ ಬಳಕೆ- ಆ್ಯಪ್ ಕಂಪನಿ ವಿರುದ್ಧ ಸಂಸದೆ ದೂರು

    ಕೋಲ್ಕತ್ತಾ: ವಿಡಿಯೋ ಚಾಟ್ ಆ್ಯಪ್ ‘ಫ್ಯಾನ್ಸಿಯೂ’ ಪ್ರಚಾರಕ್ಕಾಗಿ ಒಪ್ಪಿಗೆಯಿಲ್ಲದೆ ನನ್ನ ಫೋಟೋವನ್ನು ಬಳಸಿದೆ ಎಂದು ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಕೋಲ್ಕತ್ತಾ ಪೊಲೀಸರಿಗೆ ದೂರು ನೀಡಿದ್ದಾರೆ.

    ನಟಿ ನುಸ್ರತ್ ಜಹಾನ್ ಟ್ವೀಟ್ ಮಾಡುವ ಮೂಲಕ ತಮ್ಮ ಫೋಟೋವನ್ನು ಬಳಸಿರುವುದಾಗಿ ದೂರು ನೀಡಿದ್ದಾರೆ. ಅಲ್ಲದೇ ವಿಡಿಯೋ ಚಾಟ್ ಆ್ಯಪ್‍ಗಾಗಿ ಜಾಹೀರಾತಿ ನೀಡಿರುವ ಸ್ಕ್ರೀನ್‍ಶಾಟ್ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಿದ್ದಾರೆ. ನಂತರ ಈ ಟ್ವೀಟನ್ನು ಕೋಲ್ಕತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

    “ಒಪ್ಪಿಗೆಯಿಲ್ಲದೆ ಫೋಟೋಗಳನ್ನು ಬಳಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಹೀಗಾಗಿ ಕೋಲ್ಕತಾ ಪೊಲೀಸ್ ಸೈಬರ್ ಸೆಲ್ ಈ ಬಗ್ಗೆ ಗಮನಹರಿಸುವಂತೆ ನಾನು ವಿನಂತಿಸುತ್ತೇನೆ. ಇದನ್ನು ಕಾನೂನುಬದ್ಧವಾಗಿ ತೆಗೆದುಕೊಳ್ಳಲು ನಾನು ಸಿದ್ಧ” ಎಂದು ಜಹಾನ್ ಟ್ವೀಟ್ ಮಾಡಿದ್ದಾರೆ.

    ಅಲ್ಲದೇ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ನಟಿ, ಸಂಸದೆ ನುಸ್ರತ್ ಜಹಾನ್ ಮನವಿಗೆ ಹಿರಿಯ ಅಧಿಕಾರಿಯೊಬ್ಬರು ಸ್ಪಂದಿಸಿದ್ದು, ಸೈಬರ್ ಸೆಲ್ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ತಮ್ಮ ನಿವಾಸದ ಬಾತ್‍ರೂಮಿನಲ್ಲೇ ಖ್ಯಾತ ಫ್ಯಾಷನ್ ಡಿಸೈನರ್ ಮೃತದೇಹ ಪತ್ತೆ

    ತಮ್ಮ ನಿವಾಸದ ಬಾತ್‍ರೂಮಿನಲ್ಲೇ ಖ್ಯಾತ ಫ್ಯಾಷನ್ ಡಿಸೈನರ್ ಮೃತದೇಹ ಪತ್ತೆ

    – ವಿಶೇಷವಾಗಿ ಪುರುಷರ ಉಡುಪನ್ನು ತಯಾರಿಸುತ್ತಿದ್ರು

    ಕೋಲ್ಕತ್ತಾ: ಖ್ಯಾತ ಫ್ಯಾಷನ್ ಡಿಸೈನರ್ ಶರ್ಬಾರಿ ದತ್ತಾ (63) ಮೃತದೇಹ ಅವರ ಮನೆಯಲ್ಲಿನ ಬಾತ್‍ರೂಮಿನಲ್ಲಿಯೇ ಪತ್ತೆಯಾಗಿದೆ.

    ಕೋಲ್ಕತ್ತಾದ ಬೋರ್ಡ್ ಸ್ಟ್ರೀಟ್‍ನಲ್ಲಿರುವ ನಿವಾಸದ ಬಾತ್‍ರೂಮಿನಲ್ಲಿ ಶರ್ಬಾರಿ ದತ್ತಾ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12.25ಕ್ಕೆ ಪತ್ತೆಯಾಗಿದ್ದು, ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಮರಣೋತ್ತರ ವರದಿಯ ನಂತರವೇ ಶರ್ಬಾರಿ ದತ್ತಾ ಸಾವಿಗೆ ನಿಖರ ಕಾರಣ ತಿಳಿದು ಬರುತ್ತದೆ.

    ಈ ಬಗ್ಗೆ ಮಾಹಿತಿ ಪಡೆದ ನಂತರ ಕೋಲ್ಕತಾ ಪೊಲೀಸರು ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ. ಶರ್ಬಾರಿ ದತ್ತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಯಾವುದೇ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ ಎಂದು ಶರ್ಬಾರಿ ದತ್ತಾ ಕುಟುಂಬ ಸದಸ್ಯರು ತಿಳಿಸಿದ್ದಾರೆ.

    ಶರ್ಬಾರಿ ದತ್ತಾ ಬಂಗಾಳಿ ಕವಿ ಅಜಿತ್ ದತ್ತಾ ಅವರ ಪುತ್ರಿಯಾಗಿದ್ದು, ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದಿದ್ದರು. ನಂತರ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶರ್ಬಾರಿ ದತ್ತಾ ವಿದ್ಯಾರ್ಥಿಯಾಗಿದ್ದಾಗ ಅನೇಕ ನೃತ್ಯ, ನಾಟಕಗಳಲ್ಲಿ ಭಾಗವಹಿಸಿದ್ದರು. ಬಳಿಕ ದತ್ತಾ ಫ್ಯಾಷನ್ ಉದ್ಯಮದಲ್ಲಿ ಅದರಲ್ಲೂ ವಿಶೇಷವಾಗಿ ಪುರುಷರ ಉಡುಪುಗಳ ತಯಾರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು.

    ದತ್ತಾ ಅವರು ಬಣ್ಣ ಬಣ್ಣದ ಬಂಗಾಳಿ ಧೋತಿಗಳು ಮತ್ತು ಡಿಸೈನರ್ ಪಂಜಾಬಿ ಕುರ್ತಾಗಳನ್ನು ಕಸೂತಿಯೊಂದಿಗೆ ತಯಾರಿಸುತ್ತಿದ್ದರು. ಇವರು ತಯಾರಿಸಿದ್ದ ಉಡುಪನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನೂ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಧರಿಸಿದ್ದರು.

    ಶರ್ಬಾರಿ ದತ್ತಾ ನಿಧನದ ನಂತರ ಸೋಶಿಯಲ್ ಮೀಡಿಯಾದಲ್ಲಿ ಗಾಯಕರು, ನಟ-ನಟಿಯರು, ನಿರ್ದೇಶಕರು ಮತ್ತು ಅಭಿಮಾನಿಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

  • ಮೊಬೈಲ್ ಚಾರ್ಜರ್ ವಯರ್‌ನಿಂದ ಪತಿಯ ಕೊಲೆ – ವಕೀಲೆಗೆ ಜೀವಾವಧಿ ಶಿಕ್ಷೆ

    ಮೊಬೈಲ್ ಚಾರ್ಜರ್ ವಯರ್‌ನಿಂದ ಪತಿಯ ಕೊಲೆ – ವಕೀಲೆಗೆ ಜೀವಾವಧಿ ಶಿಕ್ಷೆ

    – ನಾನು ಕೊನೆಯವರೆಗೂ ಹೋರಾಡುತ್ತೇನೆ

    ಕೋಲ್ಕತ್ತಾ: ಮೊಬೈಲ್ ಚಾರ್ಜರ್ ವಯರ್‌ನಿಂದ ಪತಿಯ ಕತ್ತು ಬಿಗಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ವಕೀಲೆಗೆ ಪಶ್ಚಿಮ ಬಂಗಾಳದ ಪ್ರಥಮ ದರ್ಜೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ವಕೀಲೆ ಅನಿಂದಿತಾ ಪಾಲ್‍ಗೆ ಶಿಕ್ಷೆಗೆ ಒಳಗಾಗಿದ್ದು, ಜೀವಾವಧಿ ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಲಾಗಿದೆ. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ತ್ವರಿತ ನ್ಯಾಯಾಲಯವು ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

    ಅಪರಾಧಿ ಸಾಕ್ಷ್ಯಗಳ ನಾಶಕ್ಕೂ ಕಾರಣ ಆಗಿದ್ದಾಳೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಭಾಸ್ ಚಟರ್ಜಿ, ಇದು ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿ ಮರಣದಂಡನೆ ಶಿಕ್ಷೆ ವಿಧಿಸುವಂತೆ ವಾದ ಮಾಡಿಸಿದ್ದರು. ಆದರೆ ಅಪರಾಧಿ ಮೂರು ವರ್ಷದ ಮಗುವನ್ನು ಹೊಂದಿದ್ದರಿಂದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ ಪ್ರತ್ಯಕ್ಷ ದರ್ಶಿಗಳಿಲ್ಲದ ಕಾರಣ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆಕೆಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.

    ನ್ಯಾಯಾಲಯದಿಂದ ಅನಿಂದಿತಾಳನ್ನು ಜೈಲು ವ್ಯಾನ್‍ಗೆ ಕರೆದುಕೊಂಡು ಹೋಗುತ್ತಿದ್ದಾಗ “ನಾನು ಕೊನೆಯವರೆಗೂ ಈ ಪ್ರಕರಣದಲ್ಲಿ ಹೋರಾಡುತ್ತೇನೆ” ಎಂದು ಹೇಳಿದ್ದಾಳೆ.

    ಏನಿದು ಪ್ರಕರಣ?
    ವಕೀಲೆಯಾಗಿದ್ದ ಅನಿಂದಿತಾ ಪಾಲ್, ರಜತ್ ಡೇ ಜೊತೆ ವಿವಾಹವಾಗಿದ್ದಳು. ಪತಿಯೂ ಕೂಡ ವಕೀಲರಾಗಿದ್ದರು. ಆದರೆ 2018ರ ನವೆಂಬರ್ 24 ಮಧ್ಯರಾತ್ರಿ ಕೊಲ್ಕತ್ತಾದ ತಮ್ಮ ನ್ಯೂ ಟೌನ್ ಫ್ಲ್ಯಾಟ್‍ನಲ್ಲಿ ಮೊಬೈಲ್ ಫೋನ್ ಚಾರ್ಜರ್ ವಯರ್‌ನಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ದಂಪತಿಯ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇದೇ ರಜತ್ ಡೇ ಕೊಲೆಗೆ ಕಾರಣವಾಗಿತ್ತು.

    ಅನಿಂದಿತಾ ಬೇರೆ ರೂಮಿನಲ್ಲಿ ಮಲಗಿದ್ದಳು. ಆಗ ಪತಿಯ ರೂಮಿನಿಂದ ಏನೋ ಶಬ್ದ ಕೇಳಿದಾಗ ಓಡಿ ಹೋಗಿ ನೋಡಿದ್ದಳು. ಆಗ ಆಕೆಯ ಪತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಅನಿಂದಿತಾ ಪಾಲ್ ಪರ ವಕೀಲ ಪಿನಾಕ್ ಮಿತ್ರಾ ವಾದ ಮಂಡಿಸಿದ್ದರು.

    ರಜತ್ ಡೇ ಅವರ ತಂದೆ ಅನಿಂದಿತಾ ಪಾಲ್ ತನ್ನ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಎಫ್‍ಐಆರ್ ದಾಖಲಿಸಿದ್ದರು. ನಂತರ ಪೊಲೀಸರು ವಿಚಾರಣೆ ಮಾಡಿ ನವೆಂಬರ್ 29 ರಂದು ಆಕೆಯನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ಮತ್ತು ವಾದಗಳು ಈ ವರ್ಷದ ಮಾರ್ಚ್ ನಲ್ಲಿ ಪೂರ್ಣಗೊಂಡಿತ್ತು. ಅಪರಾಧಿ ಅನಿಂದಿತಾ ಪಾಲ್ ಮತ್ತು ಅವರ ಪತಿ ಇಬ್ಬರೂ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದರು.