Tag: Kode Muruga

  • ‘ಕೊಡೆಮುರುಗ’ನಿಗೆ ತಟ್ಟಿದ ಕೋವಿಡ್-19 ಬಿಸಿ – ಜುಲೈನಲ್ಲಿ ಮರು ಬಿಡುಗಡೆಗೆ ಚಿತ್ರತಂಡ ನಿರ್ಧಾರ

    ‘ಕೊಡೆಮುರುಗ’ನಿಗೆ ತಟ್ಟಿದ ಕೋವಿಡ್-19 ಬಿಸಿ – ಜುಲೈನಲ್ಲಿ ಮರು ಬಿಡುಗಡೆಗೆ ಚಿತ್ರತಂಡ ನಿರ್ಧಾರ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಕೋವಿಡ್ 19 ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಎರಡನೇ ಅಲೆಯ ಪರಿಣಾಮ ಹೆಚ್ಚಾಗದಂತೆ ಮುನ್ನೆಚ್ಚರಿಕೆಯ ನಿರ್ಬಂಧಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೊಳಿಸಲಾಗುತ್ತಿದೆ. ಈ ನಿರ್ಬಂಧಗಳಿಗೆ ಚಿತ್ರರಂಗ ಕೂಡ ಹೊರತಾಗಿಲ್ಲ.

    ಕೊರೊನಾ ಹರಡುವಿಕೆ ತಡೆಯಲು ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ನೈಟ್ ಕಫ್ರ್ಯೂ ಜಾರಿಗೆ ತಂದು ಜನರ ರಾತ್ರಿ ಓಡಾಟಕ್ಕೇ ಬ್ರೇಕ್ ಹಾಕಿದ್ರೂ ಕೂಡ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಹೀಗೆ ದಿನದಿಂದ ದಿನಕ್ಕೆ ಕೋವಿಡ್ 19 ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಚಿತ್ರಮಂದಿರಗಳೂ ಕೂಡ ಜನರಿಲ್ಲದೆ ಬಣಗುಟ್ಟತ್ತಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಎದುರಾಗಿದೆ. ಈ ಕಾರಣಕ್ಕಾಗಿ ಕಳೆದ ವಾರ ತೆರೆಕಂಡ `ಕೊಡೆಮುರುಗ’ ಸಿನಿಮಾವನ್ನು ಹಿಂಪಡೆದು ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

    ಈ ಬಗ್ಗೆ ಮಾತನಾಡಿರುವ `ಕೊಡೆಮುರುಗ’ ಚಿತ್ರದ ನಿರ್ದೇಶಕ ಸುಬ್ರಮಣ್ಯ ಪ್ರಸಾದ್, ಸಿನಿಮಾ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಶೇಕಡಾ 50ರಷ್ಟು ಆಸನಕ್ಕೆ ಅವಕಾಶ ನೀಡಿದ್ದರು ಕೂಡ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದಿದ್ದರಿಂದ ಜನ ಬರುತ್ತಿದ್ದರು. ಆದರೆ ಕೊರೊನಾ ಎರಡನೇ ಅಲೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗಿನ ಶೋಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಆದುದರಿಂದ ಕೋವಿಡ್ 19 ಸುಧಾರಣೆಗೆ ಬಂದ ಮೇಲೆ ಸಿನಿಮಾ ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದಿದ್ದಾರೆ.

    ನಿರ್ದೇಶಕ ಸುಬ್ರಮಣ್ಯ ಪ್ರಸಾದ್. ಸರ್ಕಾರದ ಆದೇಶವನ್ನು ಗೌರವಿಸುತ್ತ, ಸಾರ್ವಜನಿಕರ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು `ಕೊಡೆಮುರುಗ’ ಸಿನಿಮಾವನ್ನು ಚಿತ್ರಮಂದಿರದಿಂದ ಹಿಂಪಡೆದಿದ್ದು, ಜುಲೈ ತಿಂಗಳಲ್ಲಿ ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. `ಕೊಡೆಮುರುಗ’ ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ಚೊಚ್ಚಲ ಸಿನಿಮಾ. ಮುನಿಕೃಷ್ಣ ಹಾಗೂ ನಿರ್ದೇಶಕ ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾವಾಗಿದ್ದು ಕೆ. ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ರುದ್ರಮುನಿ ಬೆಳಗೆರೆ ಛಾಯಾಗ್ರಹಣ ಚಿತ್ರಕ್ಕಿದೆ.

  • ರಿಲೀಸ್ ಆಯ್ತು ‘ಕೊಡೆ ಮುರುಗ’ ಟ್ರೈಲರ್‌ – ಪಂಚಿಂಗ್ ಡೈಲಾಗ್ ಮೂಲಕ ಬಿದ್ದುಬಿದ್ದು ನಗಿಸಿದ ಕಿರುತೆರೆ ಕಲಾವಿದರು

    ರಿಲೀಸ್ ಆಯ್ತು ‘ಕೊಡೆ ಮುರುಗ’ ಟ್ರೈಲರ್‌ – ಪಂಚಿಂಗ್ ಡೈಲಾಗ್ ಮೂಲಕ ಬಿದ್ದುಬಿದ್ದು ನಗಿಸಿದ ಕಿರುತೆರೆ ಕಲಾವಿದರು

    ಬೆಂಗಳೂರು: “ಹೊಸ ಕಥೆ,, ಖಡಕ್ ಡೈಲಾಗ್..ಇಡೋ ಶಾರ್ಟ್..ಹೊಡೆಯೋ ಮ್ಯೂಸಿಕ್ ಎಲ್ಲವೂ ಸರಿ ಇದ್ರೆ ಎಲ್ಲರೂ ಹೀರೋಗಳೇ’’ ಇದು ಕೊಡೆ ಮುರುಗ ಟ್ರೈಲರ್ ನ ನಿರೂಪಣೆಯ ಝಲಕ್.. ಹೀರೋ ಆಗಬೇಕು ಅಂದ್ರೆ ಸ್ಮಾರ್ಟ್ ಆಗಿರಬೇಕು, ಸ್ಟೈಲೀಶ್ ಆಗಿರಬೇಕು ಎಲ್ಲದಕ್ಕಿಂತ ಮುಖ್ಯವಾಗಿ ನೋಡೋದಿಕ್ಕೆ ಚೆನ್ನಾಗಿರಬೇಕು. ಹೀಗೆ ಇದ್ದವರು ಮಾತ್ರ ಹೀರೋನಾ…? ಕೂದಲಿಲ್ಲದ, ಉದ್ದ ಮೀಸೆಯ ಕಪ್ಪುಗಿರುವ ವ್ಯಕ್ತಿ ಹೀರೋ ಆಗಬಹುದು ಅನ್ನೋದನ್ನೋ ತೋರಿಸಿಕೊಡೋದಿಕ್ಕೆ ಹೊರಟಿರುವ ಸಿನಿಮಾವೇ ಕೊಡೆ ಮುರುಗ..

    ಗಾಂಧಿನಗರದ ರೆಗ್ಯುಲರ್ ಕಾನ್ಸೆಪ್ಟ್ ಬಿಟ್ಟು ವಿಭಿನ್ನವಾಗಿ ಮಾಡಿರುವ ಸಿನಿಮಾ ಕೊಡೆ ಮುರುಗ. ಟೈಟಲ್ , ಪೋಸ್ಟರ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾದ ಟ್ರೈಲರ್ ಸಖತ್ ಮಜಾವಾಗಿ ಮೂಡಿ ಬಂದಿದೆ. ಪ್ರೇಕ್ಷಕರನ್ನು ಬಿದ್ದು ಬಿದ್ದು ನಗಿಸುವ ಕಾಮಿಡಿ, ಆಗಾಗೇ ಬರುವ ಪಂಚಿಂಗ್ ಡೈಲಾಗ್.. ವಿಷ್ಯುವಲ್ ಕ್ವಾಲಿಟಿ, ಮ್ಯೂಸಿಕ್ ಎಲ್ಲವೂ ಸಿಂಪಲಿ ಸೂಪರ್ ಆಗಿ ಮೂಡಿ ಬಂದಿದೆ.

    ಒಂದಷ್ಟು ಸೀರಿಯಲ್ ಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಕೊಡೆ ಮುರುಗ ಸಿನಿಮಾದ ಮೂಲಕ ಗೆಲುವಿನ ನಗೆ ಬೀರುವ ಮುನ್ಸೂಚನೆ ನೀಡಿದ್ದಾರೆ. ಗಾಂಧಿನಗರದಲ್ಲಿ ನಡೆಯುವ ಕೆಲ ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸುವ ಕಲೆಯನ್ನು ಅದ್ಭುತವಾಗಿ ನಿರೂಪಿಸಿದ್ದಾರೆ ಸುಬ್ರಹ್ಮಣ್ಯ. ಕೇವಲ ನಿರ್ದೇಶನ ಮಾತ್ರವಲ್ಲ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದಾರೆ.

    ಇನ್ನು, ಅಗ್ನಿಸಾಕ್ಷಿ ಧಾರವಾಹಿಯಲ್ಲಿ ವಿಲನ್ ಆಗಿ ಗುರುತಿಸಿಕೊಂಡಿದ್ದ ಮುರುಗ ಉರೂಫ್ ಮುನಿಕೃಷ್ಣ , ಪಲ್ಲವಿ ಗೌಡ , ಕುರಿ ಪ್ರತಾಪ್, ಸ್ವಾತಿ ಗುರುದತ್, ತುಮಕೂರು ಮೋಹನ್ ಸೇರಿದಂತೆ ಅನೇಕ ಕಿರುತೆರೆ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರುವ ಇವರೆಲ್ಲಾ ಪಕ್ಕ ನೂರಷ್ಟು ಮನರಂಜನೆ ನೀಡಲಿದ್ದಾರೆ.

    ಕೊಡೆಮುರುಗ ಚಿತ್ರ ಕೆ.ಆರ್.ಕೆ ಬ್ಯಾನರ್ ನಡಿ ನಿರ್ಮಾಣವಾಗಿದೆ. ಮಮ್ಮಿ ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ಮನರಂಜನೆ ಮಾತ್ರವಲ್ಲದೇ ಸಿನಿಪ್ರೇಕ್ಷಕರಿಗೆ ಒಂದು ಮೆಸೇಜ್ ಕೊಡಲು ರೆಡಿಯಾಗಿರುವ ಕೊಡೆ ಮುರುಗ ಸಿನಿಮಾ ಏಪ್ರಿಲ್ 9ಕ್ಕೆ ಬೆಳ್ಳಿತೆರೆಮೇಲೆ ಎಂಟ್ರಿ ಕೊಡ್ತಿದೆ. ಸೋ ಮಿಸ್ ಮಾಡದೆ ಸಿನಿಮಾ ನೋಡಿ ಎಂಜಾಯ್ ಮಾಡಿ. ಹೊಸಬರಿಗೆ ಪ್ರೋತ್ಸಾಹ ಕೊಡಿ.

  • ‘ಮುರುಗ ನಾನು ಮುರುಗಿ ನೀನು’ ಅಂತ ಇಂಪ್ರೆಸ್ ಮಾಡ್ತಿದೆ ‘ಕೊಡೆ ಮುರುಗ’ ಸಾಂಗ್!

    ‘ಮುರುಗ ನಾನು ಮುರುಗಿ ನೀನು’ ಅಂತ ಇಂಪ್ರೆಸ್ ಮಾಡ್ತಿದೆ ‘ಕೊಡೆ ಮುರುಗ’ ಸಾಂಗ್!

    ಕಿರುತೆರೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ಸಿನಿಮಾ ‘ಕೊಡೆ ಮುರುಗ’. ಈಗಾಗಲೇ ಪೋಸ್ಟರ್, ಟ್ರೇಲರ್, ಹಾಡಿನಿಂದ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ‘ಮುರುಗ ನಾನು ಮುರುಗಿ ನೀನು’ ಎಂಬ ಹಾಡಿಗೆ ಜೋಡಿಹಕ್ಕಿ, ಸೇವಂತಿ ಖ್ಯಾತಿ ಪಲ್ಲವಿ ಕುಣಿದಿದ್ದಾರೆ. ಜೊತೆಗೆ ಮುರುಗ, ಸುಬ್ರಮಣಿ ಸೇರಿದಂತೆ ಅನೇಕರು ಹಾಡಿ ಹೆಜ್ಜೆ ಹಾಕಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಈ ಹಾಡು ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಯೋಗರಾಜ್ ಭಟ್ ಬರೆದಿರುವ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಹಾಗೂ ಶಾಶ್ವತಿ ಹಾಡಿದ್ದಾರೆ.

    ಈ ಸಿನಿಮಾದಲ್ಲಿ ವಿಲನ್ ನನ್ನೇ ಒಂದು ರೀತಿಯಲ್ಲಿ ಹೀರೋ ಆಗಿ ಮಾಡಲು ಹೊರಟಿರುತ್ತಾರೆ. ಖಳನಾಯಕನ ಹೆಸರನ್ನೇ ಟೈಟಲ್ ಇಟ್ಟಿರುವುದು ಇದಕ್ಕೆ ಇಂಬು ನೀಡಿದೆ. ಹೀರೋ ಆಗಬೇಕು ಎಂದು ಕನಸು ಕಾಣುವ ಮುರುಗನ ನಾನಾ ಅವತಾರಗಳು ಈ ಹಾಡಿನಲ್ಲಿ ವ್ಯಕ್ತವಾಗುತ್ತಿವೆ. ಅವನ ಸುತ್ತಲಿನವರು ಬೈದರು ನಗುತ್ತಾ, ವಿನಮ್ರದಿಂದ ಬೈದಾಗ ಹೀರೋ ಗುಂಗಲ್ಲಿರುವ ಮುರುಗನಿಗೆ ಅರ್ಥವೇ ಆಗುವುದಿಲ್ಲ. ಇಡೀ ಹಾಡಲ್ಲಿ ಮನರಂಜನೆ ಇರುವುದು ಎದ್ದು ಕಾಣುತ್ತಿದೆ. ಸಿನಿಮಾದಲ್ಲೂ ಕೂಡ ಹಾಸ್ಯ ತುಂಬಿರುವುದು ಈಗಾಗಲೇ ಟ್ರೇಲರ್ ನಿಂದ ಗೊತ್ತಾಗಿತ್ತು. ಇದೀಗ ಹಾಸ್ಯಮಯ ಹಾಡೊಂದು ರಿಲೀಸ್ ಆಗಿದ್ದು, ಮುರುಗ ನಾನು ಮುರುಗಿ ನೀನು ಎಂಬ ಹಾಡಿಗೆ ಜನ ತಮ್ಮದೇ ವಾಕ್ಯ ಸೇರಿಸಿ ಹಾಡಲು ಶುರು ಮಾಡಿದ್ದಾರೆ. ಅಷ್ಟು ಸಖತ್ತಾಗಿದೆ ‘ಕೊಡೆ ಮುರುಗ’ ಸಿನಿಮಾದ ಈ ಹಾಡು.

    ಈ ಹಿಂದೆ ಮಮ್ಮಿ ಎಂಬ ಸೂಪರ್ ಸಿನಿಮಾ ನೀಡಿದ್ದ ಕೆ.ಆರ್.ಕೆ ಬ್ಯಾನರ್ ನಲ್ಲಿ ಕೆ ರವಿಕುಮಾರ್ ಅವರೇ ‘ಕೊಡೆ ಮುರುಗ’ ಸಿನಿಮಾವನ್ನು ನಿರ್ಮಿಸಿದ್ದಾರೆ. ರವಿಕುಮಾರ್ ಗೆ ಅಶೋಕ್ ಶಿರಾಲಿ ಸಾಥ್ ನೀಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ನಾಯಕರಾಗಿದ್ದು, ಕಥೆ ಬರೆದು ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮುರುಗ ಮತ್ತೊಬ್ಬ ನಟನಾಗಿ ಸಿನಿಮಾದಲ್ಲಿ ಮಿಂಚಿದ್ದಾರೆ. ಉಳಿದಂತೆ ಪಲ್ಲವಿ ಗೌಡ, ಸ್ವಾತಿ ಗುರುದತ್, ತುಮಕೂರು ಮೋಹನ್, ರಂಗಿತರಂಗ ಅರವಿಂದ್, ಕುರಿ ಪ್ರತಾಪ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

  • ಭರಪೂರ ಮನೋರಂಜನೆ ಜೊತೆಗೆ ಮೆಸೇಜ್ ನೀಡೋಕೆ ಬರ್ತಿದ್ದಾನೆ ‘ಕೊಡೆಮುರುಗ’!

    ಭರಪೂರ ಮನೋರಂಜನೆ ಜೊತೆಗೆ ಮೆಸೇಜ್ ನೀಡೋಕೆ ಬರ್ತಿದ್ದಾನೆ ‘ಕೊಡೆಮುರುಗ’!

    ಸ್ಯಾಂಡಲ್‍ವುಡ್‍ನಲ್ಲಿ ಭಿನ್ನ, ವಿಭಿನ್ನ ಪ್ರಯತ್ನಗಳು ನಡೆಯುತ್ತನೆ ಇರುತ್ತೆ. ಹಲವಾರು ಪ್ರತಿಭಾವಂತ ನಿರ್ದೇಶಕರು ಹೊಸತನದೊಂದಿಗೆ ಪ್ರಯೋಗಗಳನ್ನು ಮಾಡ್ತಾನೆ ಇರ್ತಾರೆ. ಆದ್ರೆ ಎಲ್ಲಾ ಪ್ರಯತ್ನಗಳನ್ನು ಪ್ರೇಕ್ಷಕ ಒಪ್ಪಿದ್ರೆ ಮಾತ್ರ ಗೆಲುವು ಸಿಗೋದು. ಆ ರೀತಿಯ ವಿಭಿನ್ನ ಪ್ರಯತ್ನದಲ್ಲಿ ಆರಂಭದಲ್ಲೇ ಗೆದ್ದ ಚಿತ್ರ ‘ಕೊಡೆಮುರುಗ’.

    ಸೋಶಿಯಲ್ ಮೀಡಿಯಾದಲ್ಲಿ ಈ ‘ಕೊಡೆಮುರುಗ’ನ ಹವಾ ಜೋರಾಗಿದೆ. ಈಗಾಗಲೇ ಕೈಲಾಶ್ ಖೇರ್ ಹಾಡಿರುವ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ಲಿರಿಕಲ್ ಸಾಂಗ್ ವಿಡಿಯೋ ಯುಟ್ಯೂಬ್‍ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು, ಟ್ರೈಲರ್ ಕೂಡ ಸೂಪರ್ ಹಿಟ್ ಆಗಿದೆ. ಈ ಚಿತ್ರದ ವೆರಿ ಇಂಟ್ರಸ್ಟಿಂಗ್ ಸಂಗತಿಯೊಂದಿದೆ. ಅದೇನಪ್ಪಾ ಅಂದ್ರೆ, ಎಲ್ರೂ ತಮ್ಮ ಸಿನಿಮಾ ನಾಯಕನ ಹೆಸ್ರನ್ನು ಟೈಟಲ್ ಆಗಿ ಇಟ್ರೆ ಈ ಚಿತ್ರತಂಡ ಮಾತ್ರ ಚಿತ್ರದ ಖಳನಟನ ಹೆಸ್ರನ್ನೆ ಟೈಟಲ್ ಆಗಿ ಇಟ್ಟಿರೋದು ಕೊಡೆಮುರುಗ ಚಿತ್ರದ ಸ್ಪೆಷಾಲಿಟಿ.

    ‘ಕೊಡೆಮುರುಗ’ ಚಿತ್ರಕ್ಕೆ ಸುಬ್ರಮಣ್ಯ ಪ್ರಸಾಧ್ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ಸಾಕಷ್ಟು ಅನುಭವ ಇರುವ ಇವ್ರಿಗೆ ಇದು ಮೊದಲನೇ ಸಿನಿಮಾ. ಮಾಮೂಲಾಗಿ ಸಿನಿಮಾ ಶೂಟಿಂಗ್ ಆದ್ಮೇಲೆ ಟ್ರೈಲರ್ ರಿಲೀಸ್ ಮಾಡೋ ನಿರ್ದೇಶಕರನ್ನ ನೋಡಿರ್ತೀವಿ ಆದ್ರೆ ಸುಬ್ರಮಣ್ಯ ಪ್ರಸಾಧ್ ಮಾತ್ರ ಮೊದ್ಲು ಟ್ರೈಲರ್ ರಿಲೀಸ್ ಮಾಡಿ ಆಮೇಲೆ ಚಿತ್ರ ನಿರ್ದೇಶನ ಮಾಡಿ ಅಚ್ಚರಿ ಮೂಡಿಸಿದ್ರು.

    ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಮುರುಗ ಅಲಿಯಾಸ್ ಮುನಿಕೃಷ್ಣ ಹಾಗೂ ಚಿತ್ರದ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮುನಿಕೃಷ್ಣ ಚಿತ್ರದಲ್ಲಿ ಖಳನಟನಾಗಿ ಸಮಾಜದ ಕೆಟ್ಟ ಮುಖಗಳನ್ನು ಪ್ರತಿನಿಧಿಸುವ ಕೊಡೆಮುರುಗ ಪಾತ್ರದಲ್ಲಿ ಬಣ್ಣಹಚ್ಚಿದ್ರೆ, ನಿರ್ದೇಶಕ ಸುಬ್ರಮಣ್ಯ ಪ್ರಸಾಧ್ ಸಮಾಜದಲ್ಲಿರುವ ಪಾಸಿಟಿವ್ ವ್ಯಕ್ತಿಗಳ ಪಾತ್ರವನ್ನು ಚಿತ್ರದಲ್ಲಿ ನಿಭಾಯಿಸಿದ್ದಾರೆ. ಇನ್ನು ನಾಯಕಿಯಾಗಿ ಪಲ್ಲವಿ ಗೌಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.

    ಹೀರೋ, ಹೀರೋಯಿಸಂ ಇದ್ಯಾವುದು ಇಲ್ಲದೆ ಕಥೆಯೇ ಹೀರೋ ಆಗಿರೋ ಕೊಡೆಮುರುಗ ಚಿತ್ರ ಕೆ.ಆರ್.ಕೆ ಬ್ಯಾನರ್ ನಡಿ ನಿರ್ಮಾಣವಾಗಿದೆ. ಮಮ್ಮಿ ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ಭರಪೂರ ಮನೋರಂಜನೆ ಜೊತೆ ಒಂದೊಳ್ಳೆ ಮೆಸೇಜ್ ಕೊಡೋಕೆ ಸಜ್ಜಾಗಿರೋ ಈ ಚಿತ್ರ ಮಾರ್ಚ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.