Tag: Kirpan

  • ಕಿರ್ಪಾನ್‌ ಹೊಂದಿದ್ದಕ್ಕೆ ಅಮೆರಿಕ ಪೊಲೀಸರಿಂದ ಸಿಖ್‌ ವಿದ್ಯಾರ್ಥಿ ಬಂಧನ

    ಕಿರ್ಪಾನ್‌ ಹೊಂದಿದ್ದಕ್ಕೆ ಅಮೆರಿಕ ಪೊಲೀಸರಿಂದ ಸಿಖ್‌ ವಿದ್ಯಾರ್ಥಿ ಬಂಧನ

    ವಾಷಿಂಗ್ಟನ್‌: ಕಿರ್ಪಾನ್‌ (ಚಾಕು ಮಾದರಿಯ ಆಯುಧ) ಹೊಂದಿದ್ದ ಸಿಖ್‌ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ (America) ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

    ಚಾರ್ಲೋಟ್‌ನಲ್ಲಿರುವ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಸಿಖ್ ವಿದ್ಯಾರ್ಥಿಯನ್ನು (Sikh) ಕಿರ್ಪಾನ್ (Kirpan) ಹೊಂದಿದ್ದಕ್ಕಾಗಿ ಕ್ಯಾಂಪಸ್‌ನಲ್ಲಿ ಬಂಧಿಸಲಾಯಿತು. ಈ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    https://twitter.com/thatsamaan/status/1573422591246753794?ref_src=twsrc%5Etfw%7Ctwcamp%5Etweetembed%7Ctwterm%5E1573422591246753794%7Ctwgr%5Eea4f17f8ab20a01ac1336ef5da1a519562491b09%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-sikh-student-with-kirpan-arrested-in-us-university-3375600

    ಕಿರ್ಪಾನ್‌ ತೆಗೆಯಲು ನಿರಾಕರಿಸಿದ್ದಕ್ಕೆ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಯಾರೋ ಪೊಲೀಸರಿಗೆ ಕರೆ ಮಾಡಿ ನನ್ನ ಬಗ್ಗೆ ದೂರಿದ್ದಾರೆ ಎಂದು ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿ ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾನೆ.

    ಅಮೆರಿಕ ಪೊಲೀಸರ ವರ್ತನೆಗೆ ವಿಶ್ವದಾದ್ಯಂತ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸಿಖ್‌ ಧರ್ಮ ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಪ್ರತಿಯೊಬ್ಬರಿಗೂ ಸಾಮಾನ್ಯ ಜ್ಞಾನವಾದರೂ ಇರಬೇಕು ಎಂದು ಒಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕ್ಷಿಪ್ರ ಕಾಂತ್ರಿ – ಗೃಹ ಬಂಧನದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌?

    ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಸಿಖ್‌ ಯುವಕ ಕಿರ್ಪಾನ್‌ ಹೊಂದಿದ್ದಕ್ಕೆ ಆತನನ್ನು ಬಂಧಿಸಿರುವುದು ನಿರಾಶಾದಾಯಕವಾಗಿದೆ. ಇದು ಖಂಡನೀಯ. ಸಿಖ್ ವಿದ್ಯಾರ್ಥಿಗಳ ಬಗ್ಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳ ತಾರತಮ್ಯ ಧೋರಣೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಖ್ಖರು ಈಗ ವಿಮಾನ ನಿಲ್ದಾಣಗಳಲ್ಲಿ ಕಿರ್ಪನ್‍ಗಳನ್ನು ಒಯ್ಯಬಹುದು: ಕೇಂದ್ರದ ಹೊಸ ರೂಲ್ಸ್

    ಸಿಖ್ಖರು ಈಗ ವಿಮಾನ ನಿಲ್ದಾಣಗಳಲ್ಲಿ ಕಿರ್ಪನ್‍ಗಳನ್ನು ಒಯ್ಯಬಹುದು: ಕೇಂದ್ರದ ಹೊಸ ರೂಲ್ಸ್

    ನವದೆಹಲಿ: ವಿಮಾನಯಾನ ಭದ್ರತಾ ನಿಯಂತ್ರಕ ಬಿಸಿಎಎಸ್(ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ) ಸಿಖ್ ವಾಯುಯಾನ ವಲಯದ ಉದ್ಯೋಗಿಗಳಿಗೆ ವಿಮಾನ ನಿಲ್ದಾಣದ ಆವರಣದೊಳಗೆ ಸಿಖ್‍ನ ಕಿರ್ಪನ್ ತೆಗೆದುಕೊಂಡು ಹೋಗಬಹುದು ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ.

    ಬಿಸಿಎಎಸ್ ಮಾರ್ಚ್ 4 ರಂದು, ವಿಮಾನ ನಿಲ್ದಾಣದೊಳಗೆ ಸಿಖ್ ಧರ್ಮದವರು ಕಿರ್ಪನ್ ತರಲು ನಿಷೇಧವನ್ನು ಹೇರಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಾರ್ಚ್ 12 ರಂದು, ಬಿಸಿಎಎಸ್ ಈ ಬಗ್ಗೆ ನಿಷೇಧವನ್ನು ತೆಗೆದುಹಾಕಿತು. ಕಿರ್ಪಾನ್ ಸಿಖ್ ಧರ್ಮದ ಒಂದು ಆಚರಣೆ ಮತ್ತು ಸಂಪ್ರದಾಯವಾಗಿದೆ. ಈ ಹಿನ್ನೆಲೆ ಕಿರ್ಪಾನ್‍ನನ್ನು ಸಿಖ್ ಪ್ರಯಾಣಿಕರು ಮಾತ್ರ ಸಾಗಿಸಬಹುದು. ಆದರೆ ಬ್ಲೇಡ್‍ನ ಉದ್ದವು ಆರು ಇಂಚುಗಳನ್ನು ಮೀರಬಾರದು ಮತ್ತು ಒಟ್ಟು ಉದ್ದವು ಒಂಬತ್ತು ಇಂಚುಗಳನ್ನು ಮೀರಬಾರದು ಎಂದು ಆದೇಶವನ್ನು ಹೊರಡಿಸಲಾಗಿತ್ತು. ಇದನ್ನೂ ಓದಿ:  ದಿಢೀರ್ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ಕೊಟ್ಟು ಕುತೂಹಲ ಕೆರಳಿಸಿದ ವಿಜಯೇಂದ್ರ

    ಭಾರತದೊಳಗೆ ಭಾರತೀಯ ವಿಮಾನದಲ್ಲಿ ಪ್ರಯಾಣಿಸುವಾಗ ಕಿರ್ಪನ್‍ಗೆ ಅನುಮತಿಸಲಾಗಿದೆ. ಈ ವಿನಾಯಿತಿಯು ಸಿಖ್ ಪ್ರಯಾಣಿಕರಿಗೆ ಮಾತ್ರ. ವಿಮಾನ ನಿಲ್ದಾಣದಲ್ಲಿ(ಸಿಖ್ ಸೇರಿದಂತೆ) ಮತ್ತು ಯಾವುದೇ ಟರ್ಮಿನಲ್, ದೇಶೀಯ ಅಥವಾ ಅಂತರಾಷ್ಟ್ರೀಯ ಟರ್ಮಿನಲ್‍ನಲ್ಲಿ ಕೆಲಸ ಮಾಡುವ ಯಾವುದೇ ಉದ್ಯೋಗಿಗಳಿಗೆ ಕಿರ್ಪನ್ ವೈಯಕ್ತಿಕವಾಗಿ ಸಾಗಿಸಲು ಅನುಮತಿಸಲಾಗುವುದಿಲ್ಲ ಎಂದು ದಾಖಲೆಗಳಲ್ಲಿ ತಿಳಿಸಲಾಗಿದೆ.

    ಮಾರ್ಚ್ 9 ರಂದು, ಎಸ್‍ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದು, ಮಾರ್ಚ್ 4 ರ ಆದೇಶವು ಸಿಖ್ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:  ರಿವಾಲ್ವರ್ ಬಳಸಿ ನಾಲ್ಕು ತಿಂಗಳ ಗರ್ಭಿಣಿ ಪತ್ನಿಗೆ ಗುಂಡು ಹಾರಿಸಿದ ಕಾನ್‍ಸ್ಟೆಬಲ್ 

    ಕಿರ್ಪನ್ ಅಂದರೆ ಏನು?
    ಕಿರ್ಪನ್ ಎಂಬುದು ಒಂದು ಧಾರ್ಮಿಕ ಚಾಕುವಾಗಿದೆ. ಇದು ವಿಧ್ಯುಕ್ತ ಚಾಕುವಾಗಿದ್ದು, ಪ್ರಪಂಚದಾದ್ಯಂತದ ಸಿಖ್ಖರ ಸಾಂಪ್ರದಾಯಿಕ ದೈನಂದಿನ ಉಡುಪಿನ ಭಾಗವಾಗಿದೆ. ಇದನ್ನು ಸಿಖ್ ಧಾರ್ಮಿಕ ಗ್ರಂಥದಲ್ಲಿಯೂ ಬರೆದಿದ್ದು, ಸಿಖ್‍ರ ಅವಿಭಾಜ್ಯ ಅಂಗವಾಗಿದೆ.