Tag: kieron Pollard

  • IPL – 100 ಕ್ಯಾಚ್ ಹಿಡಿದು ಕಿಂಗ್ ಕೊಹ್ಲಿ ಸಾಧನೆ

    IPL – 100 ಕ್ಯಾಚ್ ಹಿಡಿದು ಕಿಂಗ್ ಕೊಹ್ಲಿ ಸಾಧನೆ

    ನವದೆಹಲಿ: ಆರ್‌ಸಿಬಿ (RCB) ಆಟಗಾರ ವಿರಾಟ್ ಕೊಹ್ಲಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinaswammy Stadium) ನಡೆದ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಹೊಸ ಸಾಧನೆ ಗೈದಿದ್ದಾರೆ.

    ಐಪಿಎಲ್ (IPL) ಪಂದ್ಯಗಳ ಫೀಲ್ಡರ್ ಆಗಿ 100 ಕ್ಯಾಚ್‍ಗಳನ್ನು ಪೂರ್ಣಗೊಳಿಸಿದ ಕೊಹ್ಲಿ, ಒಟ್ಟಾರೆ ನೂರು ಕ್ಯಾಚ್ ಹಿಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆದ ಎರಡು ಕ್ಯಾಚ್ ಆರ್‌ಸಿಬಿ ಪಾಲಿಗೆ ವರವಾದವು. ಇದನ್ನೂ ಓದಿ: ಜೈಸ್ವಾಲ್ ಕ್ಯಾಚ್ ಹಿಡಿದು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

    ಈಗ ವಿರಾಟ್ 228 ಪಂದ್ಯಗಳಲ್ಲಿ ಒಟ್ಟು 101 ಕ್ಯಾಚ್‍ಗಳನ್ನು ಪಡೆದಿದ್ದು, ಆಲ್‍ರೌಂಡರ್ ಕೀರಾನ್ ಪೊಲಾರ್ಡ್ (Kieron Pollard) 103 ಕ್ಯಾಚ್‍ಗಳು ಮತ್ತು ಬ್ಯಾಟರ್ ಸುರೇಶ್ ರೈನಾ (Suresh Raina) 204 ಪಂದ್ಯಗಳಲ್ಲಿ 109 ಕ್ಯಾಚ್‍ಗಳನ್ನು ಪಡೆದಿದ್ದಾರೆ. ನಂತರದ ಸ್ಥಾನಕ್ಕೆ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ.

     

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‍ಸಿಬಿ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. 190 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್

  • ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

    ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

    ಮುಂಬೈ: ಮುಂಬೈ ಇಂಡಿಯನ್ಸ್‌(Mumbai Indians) ತಂಡದ ಆಲ್‌ರೌಂಡರ್‌, ವಿಂಡೀಸ್‌ ಆಟಗಾರ ಕಿರನ್‌ ಪೋಲಾರ್ಡ್‌(Kieron Pollard) ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL) ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

    2010 ರಿಂದ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಪೋಲಾರ್ಡ್‌ ಇನ್ನು ಮುಂದೆ ಬ್ಯಾಟಿಂಗ್‌ ಕೋಚ್‌(Batting Coach) ಆಗಿ ಮುಂದುವರಿಯಲಿದ್ದಾರೆ.

    ಕೊನೆಯ ಸ್ಲಾಗ್‌ ಓವರ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದ ಪೋಲಾರ್ಡ್‌ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ದರಾಗಿದ್ದರು. ಸಿಕ್ಸರ್‌, ಬೌಂಡರಿ ಚಚ್ಚುವ ಮೂಲಕ ಮುಂಬೈ ತಂಡದ ಆಧಾರಸ್ತಂಭವಾಗಿ ಪಂದ್ಯದ ಫಲಿತಾಂಶವನ್ನೇ ಬದಲಾಯಿಸುತ್ತಿದ್ದರು. ಇದನ್ನೂ ಓದಿ: ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    “ನಾನು ಇನ್ನೂ ಕೆಲವು ವರ್ಷಗಳ ಕಾಲ ಆಟವಾಡಲು ಉದ್ದೇಶಿಸಿದ್ದರಿಂದ ಇದು ಸುಲಭವಾದ ನಿರ್ಧಾರವಲ್ಲ. ಮುಂಬೈ ಇಂಡಿಯನ್ಸ್‌ ಪರ ಆಡಿದ ಬಳಿಕ ಮತ್ತೆ ಎಂಐ ವಿರುದ್ಧ ಆಡಲು ಬಯಸುವುದಿಲ್ಲ. ಒಮ್ಮೆ ಎಂಐ ಪರ ಆಡಿದ ಬಳಿಕ ಯಾವಾಗಲೂ ನಾನು ಎಂಐ ಆಗಿರುತ್ತೇನೆ. ಎಂಐಗೆ ಭಾವನಾತ್ಮಕ ವಿದಾಯ ಅಲ್ಲ. ಮುಂಬೈ ಇಂಡಿಯನ್ಸ್‌ ತಂಡದ ಜೊತೆಗಿನ ಚರ್ಚೆಯ ಬಳಿಕ ನಾನು ಐಪಿಎಲ್‌ ಬದುಕಿಗೆ ನಿವೃತ್ತಿ ಹೇಳುತ್ತಿದ್ದೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

    ತಂಡದ ಮಾಲಕಿ ನೀತಾ ಅಂಬಾನಿ(Nita. M. Ambani) ಪೊಲಾರ್ಡ್‌ ಆಟವನ್ನು ಮೆಲುಕು ಹಾಕಿ ಶುಭ ಹಾರೈಸಿದ್ದಾರೆ.

    “ಐಪಿಎಲ್‌ ಮೂರನೇ ಆವೃತ್ತಿಯಿಂದ ನಾವು ಪೊಲಾರ್ಡ್‌ ಸಂತೋಷ, ಬೆವರು ಮತ್ತು ಕಣ್ಣೀರನ್ನು ಹಂಚಿಕೊಂಡಿದ್ದೇವೆ. ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನಮ್ಮ ಚಾಂಪಿಯನ್ಸ್ ಲೀಗ್ ಟ್ರೋಫಿ ಮತ್ತು ಎಲ್ಲಾ 5 ಐಪಿಎಲ್‌ ವಿಜೇತ ತಂಡದ ಭಾಗವಾಗಿದ್ದಾರೆ. ಮೈದಾನದಲ್ಲಿ ಅವರ ಮ್ಯಾಜಿಕ್ ನೋಡುವುದನ್ನು ನಾವು ತಪ್ಪಿಸಿಕೊಳ್ಳುತ್ತೇವೆ. ಆದರೆ ಅವರು ಎಂಐ ತಂಡಕ್ಕೆ ಆಡುವುದನ್ನು ಮುಂದುವರಿಸುತ್ತಾರೆ. ಬ್ಯಾಟಿಂಗ್ ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಪೋಲಾರ್ಡ್‌ ಅವರ ಹೊಸ ಪ್ರಯಾಣವು ಅವರಿಗೆ ಇನ್ನೂ ಹೆಚ್ಚಿನ ವೈಭವ, ವಿಜಯ ತರಲಿ” ಎಂದು ನೀತಾ ಅಂಬಾನಿ ಶುಭ ಹಾರೈಸಿದ್ದಾರೆ.

    ಐಪಿಎಲ್‌ ಸಾಧನೆ:
    ಒಟ್ಟು 171 ಇನ್ನಿಂಗ್ಸ್‌ ಆಡಿರುವ ಪೋಲಾರ್ಡ್‌ 147.32 ಸ್ಟ್ರೈಕ್‌ ರೇಟ್‌ನಲ್ಲಿ 3,412 ರನ್‌ ಹೊಡೆದಿದ್ದಾರೆ. ಗರಿಷ್ಟ 87 ರನ್‌ ಹೊಡೆದಿರುವ ಇವರು 16 ಅರ್ಧಶತಕ ಬಾರಿಸಿದ್ದಾರೆ.

    107 ಇನ್ನಿಂಗ್ಸ್‌ನಲ್ಲಿ 69 ವಿಕೆಟ್‌ 103 ಕ್ಯಾಚ್‌ಗಳನ್ನು ಪಡೆದಿದ್ದಾರೆ. 44 ರನ್‌ಗಳಿಗೆ 4 ವಿಕೆಟ್‌ ಪಡೆದಿದ್ದು ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ಮುಂಬೈ: ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಲಕ್ನೋ ತಂಡದ ಬೌಲರ್ ಕೃನಾಲ್ ಪಾಂಡ್ಯ ಬೌಲಿಂಗ್‍ನಲ್ಲಿ ವಿಕೆಟ್ ಕಳೆದುಕೊಂಡ ಮುಂಬೈ ಬ್ಯಾಟ್ಸ್‌ಮ್ಯಾನ್‌ ಕೀರನ್ ಪೋಲಾರ್ಡ್ ಪೆವಿಲಿಯನ್‍ಗೆ ಹೆಜ್ಜೆಹಾಕುತ್ತಿದ್ದಂತೆ ಪಾಂಡ್ಯ ಮುತ್ತುಕೊಟ್ಟು ಸಂಭ್ರಮಿಸಿದ ಫೋಟೋ ವೈರಲ್ ಆಗುತ್ತಿದೆ.

    ಈ ಹಿಂದೆ ಕೃನಾಲ್ ಪಾಂಡ್ಯ ಮತ್ತು ಪೋಲಾರ್ಡ್ ಮುಂಬೈ ತಂಡದಲ್ಲಿ ಜೊತೆಯಾಗಿ ಆಡುತ್ತಿದ್ದರು. ಆದರೆ 15ನೇ ಅವೃತ್ತಿ ಐಪಿಎಲ್‍ನಲ್ಲಿ ಪೋಲಾರ್ಡ್ ಮುಂಬೈ ತಂಡದ ಪರ ಆಡುತ್ತಿದ್ದರೆ, ಪಾಂಡ್ಯ ಲಕ್ನೋ ಪರ ಆಡುತ್ತಿದ್ದಾರೆ. ಆದರೂ ಇವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ರೋಚಕ ಹಣಾಹಣಿ ನಡೆದಿತ್ತು. ಇದನ್ನೂ ಓದಿ: ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ಕೃನಾಲ್ ಪಾಂಡ್ಯ ವಿಕೆಟ್‍ನ್ನು ಪೋಲಾರ್ಡ್ ಕಿತ್ತಿದ್ದರು. ಆ ಬಳಿಕ ಮುಂಬೈ ತಂಡದ ಗೆಲುವಿಗಾಗಿ ಹೋರಾಡುತ್ತಿದ್ದ ಪೋಲಾರ್ಡ್ 19 ರನ್ (20 ಎಸೆತ, 1 ಸಿಕ್ಸ್) ಸಿಡಿಸಿ ಅಪಾಯಕಾರಿಯಾಗಿ ಗೋಚರಿಸುತ್ತಿದ್ದಾಗ ದಾಳಿಗಿಳಿದ ಕೃನಾಲ್ ಪಾಂಡ್ಯ, ಪೋಲಾರ್ಡ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿಕೆಟ್ ಪಡೆದ ಬಳಿಕ ಪೆವಿಲಿಯನ್‍ಗೆ ಹೊರಟ ಪೋಲಾರ್ಡ್ ಬಳಿ ತೆರಳಿದ ಪಾಂಡ್ಯ ಮುತ್ತು ಕೊಟ್ಟು ಸಂಭ್ರಮಿಸಿದರು. ಈ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಪೋಲಾರ್ಡ್ ವಿಕೆಟ್ ಸಿಗದೇ ಇದ್ದಿದ್ದರೆ ನನಗೆ ಜೀವನಪೂರ್ತಿ ಕಾಡುತ್ತಿತ್ತು. ಇದೀಗ 1-1 ಸಮಬಲಗೊಂಡಿದೆ. ಪೋಲಾರ್ಡ್ ಮಾತನಾಡದಂತಾಗಿದೆ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮೈಕಲ್ ಕ್ಲಾರ್ಕ್ ಸಂಬಂಧ ಕೆಡಲು ಐಪಿಎಲ್ ಕಾರಣ: ಸೈಮಂಡ್ಸ್

    ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕದಾಟ ಮತ್ತು ಲಕ್ನೋ ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯ ಫಲವಾಗಿ 36 ರನ್‍ಗಳಿಂದ ಗೆದ್ದಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ 8ನೇ ಸೋಲು ಕಂಡು ಮತ್ತೆ ನಿರಾಸೆ ಅನುಭವಿಸಿತು.

  • ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

    ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

    – ದಾಖಲೆಗೆ ಬೇಕಿದೆ 3 ಸಿಕ್ಸರ್
    – ಸಿಕ್ಸರ್ ಕಿಂಗ್ ಆಗಲಿರುವ ರೋಹಿತ್ ಶರ್ಮಾ

    ಅಬುಧಾಬಿ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದಾಖಲೆಯ ಹೊಸ್ತಿಲಿನಲ್ಲಿ ನಿಂತಿದ್ದಾರೆ. ಇನ್ನು ಕೇವಲ 3 ಸಿಕ್ಸರ್ ಹೊಡೆದರೆ 400 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

    ಐಪಿಎಲ್‍ನ ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್, ಇಂದು ಕೋಲ್ಕತ್ತಾ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕೋಲ್ಕತ್ತಾ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ರೆಕಾರ್ಡ್ ಹೊಂದಿರುವ ಹಿಟ್ ಮ್ಯಾನ್ ಈ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದರೆ ದಾಖಲೆ ನಿರ್ಮಿಸಲಿದ್ದಾರೆ. ಚುಟುಕು ಕ್ರಿಕೆಟ್‍ನಲ್ಲಿ 350 ಸಿಕ್ಸರ್ ಸಿಡಿಸಿರುವ ಶರ್ಮಾ ಭಾರತೀಯರಲ್ಲಿ ಮೊದಲಿಗರಾಗಿದ್ದಾರೆ. 324 ಸಿಕ್ಸರ್ ಸಿಡಿಸಿರುವ ಸುರೇಶ್ ರೈನಾ ಎರಡನೇ ಸ್ಥಾನದಲ್ಲಿದ್ದಾರೆ. 315 ಸಿಕ್ಸರ್ ಸಿಡಿಸಿರುವ ವಿರಾಟ್ 302 ಸಿಕ್ಸರ್ ಸಿಡಿಸಿರುವ ಧೋನಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್

    ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕನಾಗಿರುವ ರೋಹಿತ್ ಶರ್ಮಾ, 133 ಸಿಕ್ಸರ್‍ಗಳನ್ನು ಭಾರತದ ಪರವಾಗಿ ಚುಟುಕು ಕ್ರಿಕೆಟ್ ಆಡುವಾಗ ಸಿಡಿಸಿರುವುದು ವಿಶೇಷವಾಗಿದೆ.  ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ಸಿಕ್ಸರ್‌ಗಳ ಪಟ್ಟಿಯಲ್ಲಿ, 1043 ಸಿಕ್ಸರ್ ಸಿಡಿಸಿರುವ ಕೆರೆಬಿಯನ್ ಸ್ಟಾರ್ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. 756 ಸಿಕ್ಸರ್ ಹೊಡೆದಿರುವ ಕೀರನ್ ಪೊಲಾರ್ಡ್ ಎರಡನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ರಸೆಲ್ (509) 4ನೇ ಸ್ಥಾನದಲ್ಲಿ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ (485) 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ (467) 6ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (430) 7ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್  (399) ಭಾರತದ ರೋಹಿತ್ ಶರ್ಮಾ 397 ಸಿಕ್ಸರ್ ಸಿಡಿಸಿ ಕ್ರಮವಾಗಿ 8ನೇ ಸ್ಥಾನದಲ್ಲಿದ್ದಾರೆ.

  • ಕೊಹ್ಲಿ, ಪೊಲಾರ್ಡ್ ದಾಖಲೆ – ಈ ಬಾರಿಯ ಐಪಿಎಲ್ ನಿರೀಕ್ಷೆಗಳು ಏನು?

    ಕೊಹ್ಲಿ, ಪೊಲಾರ್ಡ್ ದಾಖಲೆ – ಈ ಬಾರಿಯ ಐಪಿಎಲ್ ನಿರೀಕ್ಷೆಗಳು ಏನು?

    ಚೆನ್ನೈ: ರಂಗಿನಾಟ ಐಪಿಎಲ್ ಟೂರ್ನಿಗೆ ಕೌಂಟ್‍ಡೌನ್ ಶುರುವಾಗಿದೆ. ಬೌಲರ್ ಎಸೆಯುವ ಉರಿಚೆಂಡನ್ನು ಸಿಕ್ಸರ್‍ ಗಟ್ಟುವ ಶೂರರು ಒಂದುಕಡೆಯಾದರೆ, ವೇಗ ಮತ್ತು ನಿಖರತೆಯಿಂದ ಎಂತಹ ದೈತ್ಯ ಬ್ಯಾಟ್ಸ್ ಮ್ಯಾನ್‍ನ್ನು ಖೆಡ್ಡಕ್ಕೆ ಬೀಳಿಸುವ ಬೌಲರ್‍ ಗಳು ಮತ್ತೊಂದೆಡೆ. ಹಕ್ಕಿಯಂತೆ ಹಾರಿ, ಚೆಂಡನ್ನು ಹಿಡಿಯುವ ಕ್ಷೇತ್ರ ರಕ್ಷಕ, ಆಟಗಾರರಿಗೆ ಧೈರ್ಯ ತುಂಬುವ ತರಬೇತುದಾರರು ಹೀಗೆ ಬಗೆಬಗೆಯ ಕ್ರಿಕೆಟ್ ರಸದೌತಣ ಉಣಬಡಿಸಲು ಐಪಿಎಲ್ ರಣಾಂಗಣ ಸಿದ್ಧವಾಗಿದೆ. ಈ ನಡುವೆ 14ನೇ ಆವೃತ್ತಿ ಐಪಿಎಲ್‍ನಲ್ಲಿ ಈ ಬಾರಿ ಕೆಲ ಆಟಗಾರರಿಂದ ಮತ್ತು ತಂಡಗಳಿಂದ ಈ ಅಂಶಗಳನ್ನು ನಿರೀಕ್ಷಿಸಬಹುದಾಗಿದೆ.

    ಈ ಬಾರಿಯ ಐಪಿಎಲ್‍ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಇದರಲ್ಲಿ ಪ್ರತಿ ಆವೃತ್ತಿಗಳಲ್ಲಿ ಪ್ರಶಸ್ತಿಗೆಲ್ಲಲು ವಿಫಲವಾಗುತ್ತಿರುವ ಅಭಿಮಾನಿಗಳ ನೆಚ್ಚಿನ ಆರ್‌ಸಿಬಿ ತಂಡ ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ತಂಡದಲ್ಲಿ ವಿರಾಟ್ ಕೊಹ್ಲಿ, ಎ.ಬಿ.ಡಿ ವಿಲಿಯರ್ಸ್, ಮ್ಯಾಕ್ಸ್ ವೇಲ್, ಜೇಮಿಸನ್, ಮುಂತಾದ ಘಟಾನುಘಟಿ ಆಟಗಾರರು ಇದ್ದಾರೆ. ಹಾಗಾಗಿ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಹಾಟ್ ಫೇವ್‍ರೇಟ್ ತಂಡವಾಗಿ ಗುರುತಿಸಿಕೊಂಡಿದೆ.

    ಆರ್‌ಸಿಬಿ ಕಪ್ ಗೆಲ್ಲುವ ಫೇವ್‍ರೇಟ್ ತಂಡವಾಗಿ ಗುರುತಿಸಿಕೊಂಡಿರುವುದು ಒಂದು ಅಂಶವಾದರೆ ಇತ್ತ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಆರ್‌ಸಿಬಿ ಪರ 192 ಪಂದ್ಯಗಳನ್ನು ಆಡಿರುವ ಕೊಹ್ಲಿ ಇನ್ನು 8 ಪಂದ್ಯಗಳನ್ನು ಆಡಿದರೆ ಐಪಿಎಲ್‍ನಲ್ಲಿ 200 ಪಂದ್ಯಗಳನ್ನು ಆಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಈ ಮೊದಲು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 200 ಪಂದ್ಯಗಳನ್ನು ಆಡಿದ್ದಾರೆ. ಹಾಗಾಗಿ ಕೊಹ್ಲಿ ಮೇಲು ಈ ಒಂದು ನಿರೀಕ್ಷೆ ಇಡಬಹುದು. ಇದನ್ನು ಓದಿ ಐಪಿಎಲ್‍ನಲ್ಲಿ ಮತ್ತೊಂದು ದಾಖಲೆ ಬರೆಯಲು ಸಿದ್ಧರಾದ ವಿರಾಟ್ ಕೊಹ್ಲಿ 

    ಜಯದ ನಾಗಾಲೋಟದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ 2019 ಮತ್ತು 2020 ರ ಆವೃತ್ತಿಯ ಐಪಿಎಲ್‍ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ. ಮುಂಬೈ ತಂಡ ಈ ಬಾರಿ ಮತ್ತೆ ಪ್ರಶಸ್ತಿಗಾಗಿ ಎದುರುನೋಡುತ್ತಿದೆ. ಈ ಬಾರಿ ಪ್ರಶಸ್ತಿ ಗೆದ್ದರೆ ಸತತ ಮೂರು ಬಾರಿ ಪ್ರಶಸ್ತಿ ಗೆದ್ದ ವಿಶೇಷ ಸಾಧನೆಗೆ ಮುಂಬೈ ಪಾತ್ರವಾಗಲಿದೆ ಹಾಗಾಗಿ ಈ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಈ ರೀತಿ ನಡೆದರೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ನಾಯಕನಾಗಿ ನೂತನ ದಾಖಲೆಗೆ ಪಾತ್ರರಾಗುತ್ತಾರೆ.

    ಮುಂಬೈ ತಂಡದ ಸ್ಟಾರ್ ಆಟಗಾರ ಕೀರನ್ ಪೊಲಾರ್ಡ್ ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಸೇರಿ ಒಟ್ಟು 534 ಟಿ20 ಪಂದ್ಯಗಳನ್ನು ಆಡಿದ್ದು ಆಡಿರುವ ಪಂದ್ಯಗಳಲ್ಲಿ 293 ವಿಕೆಟ್ ಮತ್ತು 10 ಸಾವಿರ ರನ್ ಸಿಡಿಸಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಇನ್ನು 7 ವಿಕೆಟ್ ಕಬಳಿಸಿದರೆ ಟಿ20 ಕ್ರಿಕೆಟ್‍ನಲ್ಲಿ 300 ವಿಕೆಟ್ ಮತ್ತು 10 ಸಾವಿರ ರನ್ ಸಿಡಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಹಾಗಾಗಿ ಇದು ಕೂಡ ಬಾರಿ ನಿರೀಕ್ಷೆ ಹುಟ್ಟಿಸಿದೆ.

    ಇಲ್ಲಿರುವ ನಿರೀಕ್ಷೆಗಳೊಂದಿಗೆ ಹಲವು ದಾಖಲೆಗಳು ನಿರೀಕ್ಷೆಗಳು ಅಭಿಮಾನಿಗಳ ಪಟ್ಟಿಗಳಲ್ಲಿದ್ದು, ಇವೆಲ್ಲವು ಯಾವರೀತಿ ನಡೆಯಲಿದೆ ಎಂಬುದನ್ನು ಏಪ್ರಿಲ್ 9 ರಿಂದ ಮೇ 30 ವರೆಗೆ ನೋಡಿ ಆನಂದಿಸಬಹುದಾಗಿದೆ.

  • 6 ಬಾಲ್ 6-ಸಿಕ್ಸ್ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಪೋಲಾರ್ಡ್

    6 ಬಾಲ್ 6-ಸಿಕ್ಸ್ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಪೋಲಾರ್ಡ್

    ಆ್ಯಂಟಿಗಾ: ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್ 6 ಬಾಲ್ ಗೆ 6 ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರಾನ್ ಪೋಲಾರ್ಡ್ ಶ್ರೀಲಂಕಾದ ಬೌಲರ್ ಅಖಿಲ ಧನಂಜಯ್ ಬೌಲಿಂಗ್ ನಲ್ಲಿ 6 ಬಾಲ್ ಗೆ 6 ಸಿಕ್ಸರ್ ಸಿಡಿಸುವ ಮೂಲಕ, ಅಂತರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಹರ್ಷಲ್ ಗಿಬ್ಸ್ ನಂತರ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    2007 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್, ಇಂಗ್ಲೆಂಡ್ ನ ಬಾಲರ್ ಫ್ಲಿಂಟಾಪ್ ಅವರ 6 ಎಸೆತವನ್ನು ಸಿಕ್ಸರ್ ಗಟ್ಟಿ  ದಾಖಲೆ ನಿರ್ಮಿಸಿದ್ದರು, ಆ ಬಳಿಕ ಹರ್ಷಲ್ ಗಿಬ್ಸ್ ನೆದರ್ ಲ್ಯಾಂಡ್ ವಿರುದ್ಧ 6 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು.

    ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಪೋಲಾರ್ಡ್ ಮೊದಲು ಫಿಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ಅವರ ನಿರ್ಧಾರದಂತೆ ಉತ್ತಮ ಬೌಲಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳು ಶ್ರೀಲಂಕಾವನ್ನು 131 ರನ್ ಗಳಿಗೆ ಕಟ್ಟಿಹಾಕಿತು.

    132 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ 3,1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ಗಳಿಸಿತ್ತು ಈ ಹಂತದಲ್ಲಿ ದಾಳಿಗಿಳಿದ ಅಖಿಲ ಧನಂಜಯ ಲೂಯಿಸ್, ಗೇಲ್ ಮತ್ತು ಪೂರನ್ ಅವರ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ನಂತರ ಬ್ಯಾಟಿಂಗ್ ಇಳಿದ ಟಿ-20 ಸ್ಪೇಷಲಿಷ್ಟ್ ಬ್ಯಾಟ್ಸ್‍ಮ್ಯಾನ್ ಕೀರಾನ್ ಪೊಲಾರ್ಡ್ ಅಖಿಲ ಧನಂಜಯ ಅವರ ಆರನೇ ಓವರ್ ನ ಎಲ್ಲಾ ಆರು ಎಸೆತಗಳನ್ನು ಸಿಕ್ಸರ್‍ ಗಟ್ಟಿ ಅಬ್ಬರಿಸಿದರು. ಪೊಲಾರ್ಡ್ 38 ರನ್ (11 ಎಸೆತ, 6 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 13.1 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಗಳನ್ನು ಚೆಸ್ ಮಾಡಿ ಪಂದ್ಯವನ್ನು ಗೆದ್ದುಕೊಂಡಿದೆ.

  • ಪೊಲಾರ್ಡ್ ಚಾಲೆಂಜ್ ಸ್ವೀಕರಿಸಿದ ದಿನೇಶ್ ಕಾರ್ತಿಕ್

    ಪೊಲಾರ್ಡ್ ಚಾಲೆಂಜ್ ಸ್ವೀಕರಿಸಿದ ದಿನೇಶ್ ಕಾರ್ತಿಕ್

    ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ದೈತ್ಯ ಆಲ್‍ರೌಂಡರ್ ಕೀರನ್ ಪೊಲಾರ್ಡ್ ಅವರು ನೀಡಿದ ಚಾಲೆಂಜ್ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಸ್ವೀಕರಿಸಿದ್ದಾರೆ.

    ಕಳೆದ ಮಂಗಳವಾರ ಮುಂಬೈ ಇಂಡಿಯನ್ಸ್ ತಂಡ ಕೀರನ್ ಪೊಲಾರ್ಡ್ ಅವರು ತಮ್ಮ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಂದ ಚಾಲೆಂಜ್ ತೆಗೆದುಕೊಂಡು ತಮ್ಮ ಗಡ್ಡಕ್ಕೆ ಹೊಸ ಲುಕ್ ಕೊಟ್ಟಿದ್ದರು. ನಂತರ ಅವರು ಈ ಚಾಲೆಂಜ್ ಅನ್ನು ಮಾಡುವಂತೆ ದಿನೇಶ್ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದರು.

    https://www.instagram.com/p/CGB2ehXAs6N/?utm_source=ig_embed

    ಗುರುವಾರ ಪೊಲಾರ್ಡ್ ಅವರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಅನ್ನು ಸ್ವೀಕಾರ ಮಾಡಿದ ದಿನೇಶ್ ಕಾರ್ತಿಕ್ ಅವರು, ತಮ್ಮ ಗಡ್ಡಕ್ಕೆ ಹೊಸ ರೂಪವನ್ನು ಕೊಟ್ಟು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೊಸ ಸೀಸನ್, ಹೊಸ ಲೆವೆಲಿಗೆ ಹೋಗುವ ಸಮಯವಿದು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪೊಲಾರ್ಡ್ ಅವರ ಚಾಲೆಂಜ್ ಅನ್ನು ಪೂರ್ಣಗೊಳಿಸಿದ್ದಾರೆ.

    ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್-2020ಯಲ್ಲಿ ಐದು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರು ಪಂದ್ಯಗಳನ್ನು ಗೆದ್ದು, ಎರಡು ಪಂದ್ಯಗಳನ್ನು ಸೋತು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ಜೊತೆಗೆ ಕೆಕೆಆರ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿದೆ. ಐದು ಪಂದ್ಯಗಳಲ್ಲೂ ನಾಯಕ ದಿನೇಶ್ ಕಾರ್ತಿಕ್ ಅವರು ಉತ್ತಮ ಪ್ರದರ್ಶನ ನೀಡುವುದರಲ್ಲಿ ವಿಫಲವಾಗಿದ್ದಾರೆ.

    ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿದ್ದರೂ ಕೂಡ, ಆಡಿದ ಆರು ಪಂದ್ಯಗಳಲ್ಲಿ ನಾಲ್ಕುರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋತು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬಾರಿ ಐಪಿಎಲ್‍ನಲ್ಲಿ ಅಬ್ಬರಿಸುತ್ತಿರುವ ಕೀರನ್ ಪೊಲಾರ್ಡ್ ಅವರು, ಮುಂಬೈ ಮಧ್ಯಮ ಕ್ರಮಾಂಕದ ಆಧಾರ ಸ್ಥಂಭವಾಗಿದ್ದಾರೆ. ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ಮೂರಲ್ಲೂ ಪೊಲಾರ್ಡ್ ಮಿಂಚುತ್ತಿದ್ದಾರೆ.

  • ಮುಂಬೈ ತಂಡಕ್ಕೆ 1 ರನ್‌ ನೀಡಿಲ್ಲ ಯಾಕೆ – ಬಿಸಿ ಬಿಸಿ ಚರ್ಚೆ

    ಮುಂಬೈ ತಂಡಕ್ಕೆ 1 ರನ್‌ ನೀಡಿಲ್ಲ ಯಾಕೆ – ಬಿಸಿ ಬಿಸಿ ಚರ್ಚೆ

    – ವಿಶ್ವಕಪ್‌ ಫೈನಲ್‌ನಲ್ಲಿ ಸಮಸ್ಯೆಯಾದ್ರೆ ತಂಡಕ್ಕೆ ನಷ್ಟ
    – ಕೂಡಲೇ ಐಸಿಸಿ ನಿಯಮವನ್ನು ಬದಲಾಯಿಸಬೇಕು

    ಅಬುದಾಬಿ: ಗುರುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧ ಮುಂಬೈ ತಂಡ 48 ರನ್‌ಗಳಿಂದ ಜಯಗಳಿಸಿದರೂ ಒಂದು ರನ್‌ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

    17ನೇ ಓವರಿನ ಕೊನೆಯ ಎಸೆತವನ್ನು ಪೊಲಾರ್ಡ್‌ ಎದುಸಿದ್ದರು. ಶಮಿ ಎಸೆದ ಬಾಲ್‌ ಎಡಗಡೆಗೆ ಹೋಯಿತು. ಕೂಡಲೇ ಪಾಂಡ್ಯ ಮತ್ತು ಪೊಲಾರ್ಡ್‌ ಒಂದು ರನ್‌ ಓಡತೊಡಗಿದರು. ಶಮಿ ಎಲ್‌ಬಿ ಔಟ್‌ಗೆ ಮನವಿ ಮಾಡಿದ್ದ ಕಾರಣ ಅಂಪೈರ್‌ ಔಟ್‌ ಎಂದು ತೀರ್ಪು ನೀಡಿದರು.

    ಪೊಲಾರ್ಡ್‌ ಕ್ರೀಸ್‌ ತಲುಪಿದ ಬಳಿಕ ತೀರ್ಪನ್ನು ಪುನರ್‌ ಪರಿಶೀಲನೆ ಮಾಡುವಂತೆ ಅಂಪೈರ್ ಮನವಿ ಮಾಡಿಕೊಂಡರು. ಅಲ್ಟ್ರಾ ಎಡ್ಜ್‌ ವೇಳೆ ಬಾಲ್‌ ಬ್ಯಾಟಿಗೆ ಬಡಿದು ಎಡಗಡೆಗೆ ಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಳಿಕ ಅಂಪೈರ್‌ ನಾಟೌಟ್‌ ತೀರ್ಪು ನೀಡಿದರು. ಇದನ್ನೂ ಓದಿ: ಸೂಪರ್ ಓವರ್‌ನಲ್ಲೂ ಟೈ ಆದ್ರೆ ಫಲಿತಾಂಶ ನಿರ್ಧಾರ ಹೇಗೆ?

    ಪ್ರಶ್ನೆ ಯಾಕೆ?
    ಅಂಪೈರ್‌ ನಾಟೌಟ್‌ ತೀರ್ಪು ನೀಡಿದ ಬೆನ್ನಲ್ಲೇ ಈಗ ಚರ್ಚೆ ಆರಂಭವಾಗಿದೆ. ಒಂದು ವೇಳೆ ಇಬ್ಬರು ಬ್ಯಾಟ್ಸ್‌ ಮನ್‌ಗಳು ಒಂದು ರನ್‌ ಓಡದೇ ಇದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಇಲ್ಲಿ ಒಂದು ರನ್‌ ಓಡಿದ್ದಾರೆ. ಅಷ್ಟೇ ಅಲ್ಲದೇ ಬ್ಯಾಟ್‌ ತುದಿಗೆ ಬಾಲ್‌ ಬಡಿದಿರುವುದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಹೀಗಾಗಿ ಒಂದು ರನ್‌ ಮುಂಬೈಗೆ ಮತ್ತು ಪೊಲಾರ್ಡ್‌ಗೆ ನೀಡಬೇಕು. ನ್ಯಾಯಬದ್ಧವಾಗಿ 1 ರನ್‌ ಓಡಿದ್ದರೂ 1 ರನ್‌ ನೀಡಿಲ್ಲ ಯಾಕೆ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಕ್ರಿಕೆಟ್‌ ಅಭಿಮಾನಿಗಳು ಬಿಸಿಸಿಐ ಮತ್ತು ಐಸಿಸಿಯನ್ನು ಪ್ರಶ್ನಿಸುತ್ತಿದ್ದಾರೆ.

     

    ಮಾಜಿ ಕ್ರಿಕೆಟಿಗ, ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ ಅವರು, ಪೊಲಾರ್ಡ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಕ್ಕೆ 1 ರನ್‌ ಸಿಗಲಿಲ್ಲ. ಎಲ್‌ಬಿಡಬ್ಲ್ಯೂ ನೀಡಿದರು. ಮರುಪರಿಶೀಲನೆಯ ವೇಳೆ ಇನ್‌ಸೈಡ್‌ ಎಡ್ಜ್‌ ಆಗಿರುವುದು ದೃಢವಾಯಿತು. ಆದರೆ ಅವರು ಸುಲಭವಾಗಿ ಓಡಿದ ರನ್‌ ಕೌಂಟ್‌ ಆಗಲಿಲ್ಲ. ಪ್ರೀತಿಯ ಐಸಿಸಿ ಮುಂದೆ ಯಾವುದಾದರೂ ವಿಶ್ವಕಪ್‌ ವೇಳೆ ಈ ನಿಯಮದಿಂದ ಒಂದು ತಂಡಕ್ಕೆ ಸಮಸ್ಯೆಯಾಗಬಹುದು. ಈ ವಿಚಾರದ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಬೇಕಿದೆ ಎಂದು ಬರೆದುಕೊಂಡಿದ್ದಾರೆ.

    ಆಕಾಶ್‌ ಚೋಪ್ರಾ ಅವರ ಈ ವಿಚಾರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವಿಶ್ವಕಪ್‌ ಫೈನಲ್‌ ವೇಳೆ ಒಂದು ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್‌ ಬೇಕಿದ್ದಾಗ ಒಂದು ವೇಳೆ ಈ ರೀತಿಯಾದರೆ ಏನು ಕಥೆ? ಅಂಪೈರ್‌ ಔಟ್‌ ಎಂದು ಘೋಷಿಸಿ ನಂತರ ನಾಟೌಟ್‌ ಎಂದರೆ ಆ ತಂಡ ಸೋಲು ಕಾಣುತ್ತದೆ. 2019ರ ವಿಶ್ವಕಪ್ ಫೈನಲ್‌ ನಿರ್ಧಾರದಂತೆ ಈ ನಿಯಮ ಸಹ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬ್ಯಾಟಿಂಗ್‌ ತಂಡ ಔಟ್‌ ನಿರ್ಧಾರವನ್ನು ಪುನರ್‌ ಪರಿಶೀಲನೆ ಮಾಡುವಂತೆ ಕೇಳಿದ ಬಳಿಕ ಅಂಪೈರ್‌ ನಾಟೌಟ್‌ ತೀರ್ಪು ನೀಡಿದರೂ ಈ ಎಸೆತದಿಂದ ಪಡೆದ ರನ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಅಂಪೈರ್‌ ಎಲ್‌ಬಿ ಔಟ್‌ ತೀರ್ಪು ನೀಡುವ ಸಮಯದಲ್ಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಓಡುತ್ತಿರುತ್ತಾರೆ.  ಈ ಕಾರಣಕ್ಕೆ ಈ ರನ್‌ ಸೇರ್ಪಡೆಯಾಗುವುದಿಲ್ಲ.

    https://twitter.com/ProudBhupesh910/status/1311693961736540160

    ಪಂಜಾಬ್‌ ವಿರುದ್ಧ 20 ಎಸೆತಗಳಲ್ಲಿ 47 ರನ್‌(3 ಬೌಂಡರಿ, 4 ಸಿಕ್ಸರ್)‌ ಸಿಡಿಸಿದ ಪೊಲಾರ್ಡ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.

    ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಏನಾಗಿತ್ತು?
    2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್‌ ಪಂದ್ಯ ಸೂಪರ್ ಓವರ್‌ನಲ್ಲೂ ಟೈ ಆಗಿತ್ತು. ಆದರೆ ಅತಿ ಹೆಚ್ಚು ಬೌಂಡರಿ ಹೊಡೆದಿದ್ದ ಕಾರಣ ಇಂಗ್ಲೆಂಡ್ ವಿಶ್ವಕಪ್ ಜಯಿಸಿತ್ತು. ವಿಶ್ವಕಪ್‍ನಂತಹ ಮಹತ್ವದ ಪಂದ್ಯದಲ್ಲಿ ಬೌಂಡರಿ ಆಧಾರದ ಮೇಲೆ ಪಂದ್ಯ ನಿರ್ಧರಿಸುವುದಕ್ಕೆ ಘಟಾನುಘಟಿ ಆಟಗಾರರೇ ಭಾರೀ ವಿರೋಧ ವ್ಯಕ್ತಪಡಿಸಿದರು. ಟೀಕೆ ವ್ಯಕ್ತವಾದ ಬಳಿಕ ಐಸಿಸಿ 2020ರ ಫೆಬ್ರವರಿಯಲ್ಲಿ ಸೂಪರ್ ಓವರ್ ನಿಯಮಗಳನ್ನು ಬದಲಾವಣೆ ಮಾಡಿತು.

  • ಸರಣಿಗೂ ಮುನ್ನವೇ ಪೊಲಾರ್ಡ್ ವಿರುದ್ಧ ರೋಹಿತ್ ಗರಂ

    ಸರಣಿಗೂ ಮುನ್ನವೇ ಪೊಲಾರ್ಡ್ ವಿರುದ್ಧ ರೋಹಿತ್ ಗರಂ

    ನವದೆಹಲಿ: ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು, ವೆಸ್ಟ್ ಇಂಡೀಸ್ ಸರಣಿಗೂ ಮುನ್ನವೇ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ವಿರುದ್ಧ ಗರಂ ಆಗಿದ್ದಾರೆ.

    ಮುಂದಿನ ತಿಂಗಳು ಡಿಸೆಂಬರ್ 6 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಸೆಣಸಡಲಿದ್ದು, ಇದಕ್ಕೂ ಮುನ್ನವೇ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ರೋಹಿತ್ ಪೊಲಾರ್ಡ್ ಟ್ವಿಟ್ಟರ್ ನಲ್ಲಿ ಸಿಟ್ಟಾಗಿದ್ದಾರೆ.

    https://twitter.com/KieronPollard55/status/1200304765361516544

    ಮುಂಬರುವ ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿಗೆ ಅಭಿಮಾನಿಗಳನ್ನು ಸೆಳೆಯಲು ಸ್ಟಾರ್ಸ್ ಸ್ಪೋರ್ಟ್ ವಾಹಿನಿ ಒಂದು ಜಾಹೀರಾತನ್ನು ರೆಡಿ ಮಾಡಿದೆ. ಈ ಜಾಹೀರಾತಿನಲ್ಲಿ ಮಲಗಿದ್ದ ರೋಹಿತ್ ಶರ್ಮಾ ಅವರಿಗೆ ಬೆಳಗ್ಗೆ ನಾಲ್ಕು ಗಂಟೆಯ ವೇಳೆ ಒಂದು ಕರೆ ಬರುತ್ತದೆ. ಇದಕ್ಕೆ ಉತ್ತರಿಸಿದ ರೋಹಿತ್‍ಗೆ, ಇದು ವೇಕಪ್ ಕಾಲ್. ಪೊಲಾರ್ಡ್ ಈ ಕರೆ ಮಾಡಲು ಹೇಳಿದರು ಎನ್ನುವ ಧ್ವನಿ ಕೇಳುತ್ತದೆ. ಈ ಕಾಲ್ ಬಂದ ಕೂಡಲೇ ಕೋಪಗೊಂಡ ರೋಹಿತ್ ಫೋನ್ ಅನ್ನು ಟೇಬಲ್‍ಗೆ ಕುಕ್ಕುತ್ತಾರೆ.

    ಈ ವಿಡಿಯೋವನ್ನು ಕೀರನ್ ಪೊಲಾರ್ಡ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಗುಡ್ ಮಾರ್ನಿಂಗ್ ಬ್ರೋಹಿತ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಸರಣಿಗೆ ನಿಮಗೆ ವೇಕಪ್ ಕಾಲ್ ಬಂದಿದೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಪೊಲಾರ್ಡ್ ಅವರ ಈ ಟ್ವೀಟ್ ಗೆ ಕಮೆಂಟ್ ಮಾಡಿರುವ ರೋಹಿತ್ ಶರ್ಮಾ ಮೂರು ಕೆಂಪು ಬಣ್ಣದ ಕೋಪಗೊಂಡ ಎಮೋಜಿ ಹಾಕಿದ್ದಾರೆ. ಈ ಟ್ವೀಟ್ ಬಳಿಕ ಪೊಲಾರ್ಡ್ ರೋಹಿತ್ ಶರ್ಮಾ ಅವರನ್ನು ಅನ್‍ಫಾಲೋ ಮಾಡಿದ್ದಾರೆ.

    ಮೊದಲು ಉಭಯ ತಂಡಗಳ ನಡುವಿನ ಮೊದಲ ಟಿ-20 ಡಿಸೆಂಬರ್ 6 ರಂದು ಹೈದರಾಬಾದ್‍ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಮುಂದಿನ ಎರಡು ಪಂದ್ಯಗಳು ತಿರುವನಂತಪುರಂ (ಡಿಸೆಂಬರ್ 8) ಮತ್ತು ಮುಂಬೈ ವಾಖೆಂಡೆ ಮೈದಾನದಲ್ಲಿ (ಡಿಸೆಂಬರ್ 11) ನಡೆಯಲಿವೆ. ನಂತರ ಮೂರು ಏಕದಿನ ಪಂದ್ಯಗಳು ಚೆನ್ನೈ (ಡಿಸೆಂಬರ್ 15), ವಿಶಾಖಪಟ್ಟಣಂ (ಡಿಸೆಂಬರ್ 18) ಮತ್ತು ಕಟಕ್ (ಡಿಸೆಂಬರ್ 22) ನಲ್ಲಿ ನಡೆಯಲಿವೆ.

    ಭಾರತದ ಏಕದಿನ ತಂಡ
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್, ಶಿವಮ್ ದುಬೆ, ಕೇದರ್ ಜಾಧವ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕಲದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

    ಭಾರತದ ಟಿ-20 ತಂಡ
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ) ಸಂಜು ಸ್ಯಾಮ್ಸನ್, ಕೆ.ಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಕಲದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

  • ಬ್ಯಾಟ್ ಮೇಲಕ್ಕೆ ಎಸೆದು ವೈಡ್ ಗೆರೆಯಲ್ಲಿ ನಿಂತಿದ್ದಕ್ಕೆ ಪೋಲಾರ್ಡ್‌ಗೆ ದಂಡ!

    ಬ್ಯಾಟ್ ಮೇಲಕ್ಕೆ ಎಸೆದು ವೈಡ್ ಗೆರೆಯಲ್ಲಿ ನಿಂತಿದ್ದಕ್ಕೆ ಪೋಲಾರ್ಡ್‌ಗೆ ದಂಡ!

    ಹೈದರಾಬಾದ್: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕೀರಾನ್ ಪೋಲಾರ್ಡ್ ಆನ್ ಫೀಲ್ಡ್ ನಲ್ಲಿ ತೋರಿದ ವರ್ತನೆಗೆ ಪಂದ್ಯದ ರೆಫ್ರೀ ಪಂದ್ಯದ ಶೇ.25 ರಷ್ಟು ಶುಲ್ಕವನ್ನು ದಂಡ ವಿಧಿಸಿದ್ದಾರೆ.

    ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ಮುಂಬೈ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಘಟನೆ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೋ ಬೌಲ್ ಮಾಡಿದ್ದರು. ಈ ಹಂತದಲ್ಲಿ ಮೊದಲ 2 ಎಸೆತಗಳು ಡಾಟ್ ಆಗಿದ್ದು, ಆದರೆ 3ನೇ ಎಸೆತ ವೈಡ್ ಎಂದು ಭಾವಿಸಿ ಹೊಡೆಯದೇ ಬಿಟ್ಟಿದ್ದರು. ಆದರೆ ಅಂಪೈರ್ ವೈಡ್ ಘೋಷಿಸಿರಲಿಲ್ಲ. ಇದಕ್ಕೆ ಅಸಮಾಧಾನಗೊಂಡ ಪೋಲಾರ್ಡ್ ಬ್ಯಾಟನ್ನು ಮೇಲಕ್ಕೆ ಎಸೆದು ಸಿಟ್ಟು ಹೊರ ಹಾಕಿದ್ದರು.

    4ನೇ ಎಸೆತದ ವೇಳೆ ಪೋಲಾರ್ಡ್ ಆಫ್ ಸೈಡ್ ವೈಡ್ ಗೆರೆ ಬಳಿ ಬ್ಯಾಟ್ ಹಿಡಿದು ನಿಂತಿದ್ದರು. ಬ್ರಾವೋ ಬೌಲಿಂಗ್ ಮಾಡುವ ವೇಳೆ ಬ್ಯಾಟಿಂಗ್ ತಯಾರಾಗಿ ನಿಂತು ಕೊನೆ ಕ್ಷಣದಲ್ಲಿ ಕ್ರೀಸಿನಿಂದ ಹೊರ ನಡೆದಿದ್ದರು. ಈ ವರ್ತನೆಯನ್ನು ನೋಡಿದ ಇಬ್ಬರು ಅಂಪೈರ್ ಪೊಲಾರ್ಡ್ ಬಳಿ ಬಂದು ಮಾತುಕತೆ ನಡೆಸಿದ್ದರು.

    ಅಂಪೈರ್ ನಿರ್ಧಾರದ ವಿರುದ್ಧ ನಡೆದುಕೊಂಡ ಪರಿಣಾಮ ರೆಫ್ರಿ ಪಂದ್ಯದ ಶೇ.25 ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಪೋಲಾರ್ಡ್ ಲೆವಲ್ 1 ನಿಯಮವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.