Tag: Kidnapped

  • ಅಡ್ರೆಸ್ ಕೇಳುವ ನೆಪದಲ್ಲಿ ಬಂದು ಬಾಲಕಿ ಕಿಡ್ನ್ಯಾಪ್‌ – ವಿವಿಧೆಡೆ ಕರೆದೊಯ್ದು ಅತ್ಯಾಚಾರ, ಓರ್ವ ಅರೆಸ್ಟ್‌

    ಅಡ್ರೆಸ್ ಕೇಳುವ ನೆಪದಲ್ಲಿ ಬಂದು ಬಾಲಕಿ ಕಿಡ್ನ್ಯಾಪ್‌ – ವಿವಿಧೆಡೆ ಕರೆದೊಯ್ದು ಅತ್ಯಾಚಾರ, ಓರ್ವ ಅರೆಸ್ಟ್‌

    ಲಕ್ನೋ: ತರಕಾರಿ (Vegetables) ಖರೀದಿಸಲು ಹೊರಗೆ ಹೋಗಿದ್ದ 13 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್‌ ಮಾಡಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವುದಾಗಿ ಪೊಲೀಸರು (UP Police) ತಿಳಿಸಿದ್ದಾರೆ.

    ಏನಿದು ಘಟನೆ?
    ಕಳೆದ ಏಪ್ರಿಲ್‌ 26ರಂದು ಸಂಜೆ ಬಾಲಕಿ ತರಕಾರಿ ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದಳು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲ್ಲೇ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ‌ ಅಡ್ರಸ್‌ ಕೇಳುವ ನೆಪದಲ್ಲಿ ಬಾಲಕಿಯನ್ನ ಮಾತನಾಡಿಸಿದ್ದಾನೆ. ಆಕೆ ಅಡ್ರಸ್‌ ಹೇಳಲು ಮುಂದಾಗುತ್ತಿದ್ದಂತೆ ಕಾರಿನಲ್ಲಿದ್ದ ವಿಷ್ಣು ಎನ್ನುವ ವ್ಯಕ್ತಿ ಆಕೆಯನ್ನ ಕಾರಿನೊಳಗೆ ಎಳೆದುಕೊಂಡು ಕಿಡ್ನ್ಯಾಪ್‌ (Kidnapped) ಮಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

    ಸ್ವಲ್ಪ ಮುಂದೆ ಹೋದ ನಂತ್ರ ಮೆಡಿಕಲ್‌ ಸ್ಟೋರ್‌ನಲ್ಲಿ ನೀರು ಮತ್ತು ಔಷಧಿಗಳನ್ನ ತೆಗೆದುಕೊಂಡಿದ್ದಾರೆ. ಬಳಿಕ ನೀರಿನಲ್ಲಿ ಪ್ರಜ್ಞೆ ತಪ್ಪುವ ಔಷಧ ಬೆರಸಿ ಬಲವಂತವಾಗಿ ಬಾಲಕಿಗೆ ಕುಡಿಸಿದ್ದಾರೆ. ಕುಡಿದ ಬಳಿಕ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ನಂತರ ಹೋಟೆಲ್‌ಗೆ ಕರೆದೊಯ್ದು ನಕಲಿ ಐಡಿ ಕೊಟ್ಟು, ಬೆರಳಚ್ಚಿನಿಂದ ಸಹಿ ಪಡೆದಿದ್ದಾರೆ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಮರುದಿನ ಆರೋಪಿ ವಿಷ್ಣು ಮತ್ತು ಸಹವರ್ತಿ ನಾರಾಯಣ್‌ ಇಬ್ಬರೂ ಸೇರಿ ಬಾಲಕಿಯನ್ನ ದಾರಿಯಲ್ಲಿ ಬಿಟ್ಟುಬಂದಿದ್ದಾರೆ. ನಂತರ ಸಂಜಯ್‌ ಎಂಬಾತ ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಗೆ‌ ಕೂಲ್‌ಡ್ರಿಂಗ್ಸ್‌ ಕೊಟ್ಟಿದ್ದಾನೆ, ಕುಡಿಯುತ್ತಿದ್ದಂತೆ ಆಕೆ ಪ್ರಜ್ಞೆತಪ್ಪಿದ್ದು, ಆತನೂ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಗ್ಗೆ ಆಕೆ ಎಚ್ಚರಗೊಂಡು ತನ್ನ ಫೋನ್‌ ಕೇಳಿದಾಗ ಸಿಮ್‌ಕಾರ್ಡ್‌ ಇಲ್ಲದೇ ಬರೀ ಫೋನ್‌ ಕೊಟ್ಟು ಕಳಿಸಿದ್ದಾನೆ.

    ಹುಡುಗಿಯ ಪ್ರಕಾರ, ಆರೋಪಿ ವಿಷ್ಣು ತನ್ನ ಸಹಚರ ನಾರಾಯಣ್‌ಗೆ ಕರೆ ಮಾಡಿ, ಇಬ್ಬರೂ ಸೇರಿ ಹುಡುಗಿಯನ್ನು ದಾರಿಯಲ್ಲಿ ಬಿಟ್ಟು ಬಂದನು. ಸಂಜಯ್ ಎಂಬ ಮತ್ತೊಬ್ಬ ವ್ಯಕ್ತಿ ಅವಳನ್ನು ಕರೆದುಕೊಂಡು ಹೋಗಿ ತನ್ನ ಮನೆಗೆ ಕರೆದೊಯ್ದನು. ಅಲ್ಲಿಂದ ಸಂಜಯ್‌ ಬಾಲಕಿಯನ್ನ ತನ್ನ ಸಹೋದರನ ಮನೆಗೆ ಕರೆದೊಯ್ದು ತನ್ನ ಸಹೋದರನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಜಡ್ಜ್‌ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸಿಜೆಐ ಕೈ ಸೇರಿದ ತನಿಖಾ ವರದಿ

    ಸಂತ್ರಸ್ತ ಬಾಲಕಿಯ ಪೋಷಕರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಬಾಲಕಿ ತನ್ನ ಅಜ್ಜಿಯೊಂದಿಗೆ ಹಳ್ಳಿಯಲ್ಲಿದ್ದಳು. ಏಪ್ರಿಲ್‌ 26ರಂದು ಕಾಣೆಯಾಗಿ ಮೇ 1ರಂದು ಪತ್ತೆಯಾಗಿದ್ದಳು. ಈ ಸಮಯದಲ್ಲಿ ಅನೇಕ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ಶಿವರಾಮ್ ಸಿಂಗ್ ಹೇಳಿದ್ದಾರೆ.

    ಬಾಲಕಿ ಹಾಗೂ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್

  • 7 ಎಕರೆ ಆಸ್ತಿಗಾಗಿ ಕಿಡ್ನಾಪ್ ಆಗಿದ್ದ 98ರ ಅಜ್ಜಿ ಓಣಿಯಲ್ಲಿ ಪತ್ತೆ

    7 ಎಕರೆ ಆಸ್ತಿಗಾಗಿ ಕಿಡ್ನಾಪ್ ಆಗಿದ್ದ 98ರ ಅಜ್ಜಿ ಓಣಿಯಲ್ಲಿ ಪತ್ತೆ

    ಹಾವೇರಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಿಂದ ಕಿಡ್ನಾಪ್  ಮಾಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಗ್ರಾಮದ ಓಣಿಯಲ್ಲಿ ಈಗ ಅಜ್ಜಿ ಪತ್ತೆಯಾಗಿದ್ದಾರೆ.

    ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ಅಜ್ಜಿಯನ್ನ ಗ್ರಾಮದ ಓಣಿಯಲ್ಲಿ ಬಿಟ್ಟು ಹೋಗಿದ್ದಾರೆ. ದೇವಕ್ಕನ ಸಂಬಂಧಿಕರು ಈಗ ಅಜ್ಜಿಯನ್ನ ಆಡೂರು ಪೊಲೀಸ್ ಠಾಣೆ ಕರೆದುಕೊಂಡು ಬಂದಿದ್ದಾರೆ. ಅಜ್ಜಿಯನ್ನ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಕಿಡ್ನಾಪ್ ಮಾಡಿದ ಆರೋಪಿಗಳನ್ನ ಬಂಧಿಸಿ ತಕ್ಕಶಿಕ್ಷೆ ಕೊಡಿಸಬೇಕು ಎಂದು ಅಜ್ಜಿಯ ಸಂಬಂಧಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು

    ನಡೆದಿದ್ದೇನು?: ಕಳೆದ ನಾಲ್ಕು ದಿನಗಳ ಹಿಂದೆ 5 ಮಂದಿ ಸೇರಿಕೊಂಡು ವೃದ್ಧೆಯನ್ನ ಕಿಡ್ನಾಪ್ ಮಾಡಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೇವಕ್ಕ ಅವರಿಗೆ ಸಂತಾನ ಇಲ್ಲದ್ದರಿಂದ ತನ್ನ ಜಮೀನನ್ನ ಮಾಣಿಕಪ್ಪ ದುಂಡಣ್ಣನವರಿಗೆ  ಆಸ್ತಿಯನ್ನ ಬರೆದು ಕೊಟ್ಟಿದ್ದರು. ಹಲವು ವರ್ಷಗಳಿಂದ ವೃದ್ಧೆಯನ್ನ ಆರೈಕೆ ಮಾಡಿಕೊಂಡು ಮಾಣಿಕಪ್ಪ ಕುಟುಂಬಸ್ಥರು ಬಂದಿದ್ದರು. ಅದರೆ ವೃದ್ಧೆಯ ಸಂಬಂಧಿಕರಾಗಿರೋ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ಅಜ್ಜಿಯನ್ನ ಆಸ್ತಿಯಾಗಿ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಅಜ್ಜಿ ಪತ್ತೆಯಾಗಿದ್ದು, ಪೊಲೀಸರು ಅಜ್ಜಿಯನ್ನು ವಿಚಾರಣೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

  • ಮಗುವಿನ ಚಿಕ್ಕಪ್ಪನ ಜೊತೆ ಗೆಳತಿ ಎಸ್ಕೇಪ್ – ಆಕೆಗಾಗಿ ಪ್ರೇಮಿಯಿಂದ ಮಗು ಕಿಡ್ನಾಪ್

    ಮಗುವಿನ ಚಿಕ್ಕಪ್ಪನ ಜೊತೆ ಗೆಳತಿ ಎಸ್ಕೇಪ್ – ಆಕೆಗಾಗಿ ಪ್ರೇಮಿಯಿಂದ ಮಗು ಕಿಡ್ನಾಪ್

    ಲಕ್ನೋ: ಸತತ 42 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಉತ್ತರಪ್ರದೇಶದ ಪೊಲೀಸ್ ಸಿಬ್ಬಂದಿ ಕಿಡ್ನಾಪ್ ಆಗಿದ್ದ 15 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಯ ಪ್ರೇಯಸಿ ಒಂದೂವರೆ ವರ್ಷದ ಮಗುವಿನ ಚಿಕ್ಕಪ್ಪನೊಂದಿಗೆ ಓಡಿಹೋಗಿದ್ದಳು. ಆದ್ದರಿಂದ ಮಗುವನ್ನು ಕಿಡ್ನಾಪ್ ಮಾಡಿ ತನ್ನ ಗೆಳತಿಯನ್ನು ವಾಪಸ್ ಕರೆಸುವಂತೆ ತಂದೆಗೆ ಒತ್ತಡ ಹಾಕುವ ಸಲುವಾಗಿ ಮಗುವನ್ನು ಅಪಹರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಕರೇಂಡಾ ನಿವಾಸಿ ಮಗುವಿನ ತಂದೆ ಮನ್ಸೂರ್ ಅಲಿ ಈ ಕುರಿತು ದೂರು ದಾಖಲಿಸಿದ್ದಾರೆ. ನಮ್ಮ ದೂರದ ಸಂಬಂಧಿ ನನ್ಹೆ ಎಂಬಾತ ಸಹಚರನ ಸಹಾಯದಿಂದ ನನ್ನ ಮಗನನ್ನು ಅಪಹರಿಸಿದ್ದಾನೆ. ಆತನ ಗೆಳತಿ ಮಗುವಿನ ಚಿಕ್ಕಪ್ಪ ಜೊತೆ ಓಡಿಹೋಗಿದ್ದಾಳೆ. ಹೀಗಾಗಿ ಮಗುವನ್ನು ಬಿಡುಗಡೆ ಮಾಡಬೇಕಾದರೆ ಗೆಳತಿಯನ್ನು ವಾಪಸ್ ಕರೆಸುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಮಗುವಿನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

    ಪೊಲೀಸರು ಕೂಡಲೇ ಪ್ರತಾಪಗಢದ ನನ್ಹೆ ಮತ್ತು ಆತನ ಸಹಚರ ದಿಲ್ದಾರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಅಪಹರಣದ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಮಾಹಿತಿದಾರರಿಂದ ಸುಳಿವು ಪಡೆದ ನಂತರ ಅಪಹರಣಕಾರರು ಕರೇಲಿ ಪ್ರದೇಶದಲ್ಲಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಸ್ಥಳಕ್ಕೆ ಹೋಗಿ 42 ಗಂಟೆಗಳ ಒಳಗೆ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.

    ನನ್ಹೆ ವಿದೇಶದಲ್ಲಿಯೇ ಇರುತ್ತಿದ್ದನು. ಸೋಷಿಯಲ್ ಮೀಡಿಯಾದ ಮೂಲಕ ಪ್ರಯಾಗರಾಜ್ ಮೂಲದ ಯುವತಿಯೊಂದಿಗೆ ಆತ ಸಂಬಂಧ ಬೆಳೆಸಿಕೊಂಡಿದ್ದನು. ಅಲ್ಲದೇ ಭಾರತಕ್ಕೆ ಮರಳಿದ ನಂತರ ಮದುವೆಯಾಗುವುದಾಗಿ ಅವಳಿಗೆ ಭರವಸೆ ನೀಡಿದ್ದನು. ಈ ಮಧ್ಯೆ ಯುವತಿಗೆ ಮಗುವಿನ ಚಿಕ್ಕಪ್ಪ ಸಲ್ಮಾನ್ ಸ್ನೇಹವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ತಿಳಿದ ಆರೋಪಿ ಹೇಗಾದರೂ ಮಾಡಿ ಗೆಳತಿಯನ್ನು ವಾಪಸ್ ಪಡೆಯಲೇಬೇಕೆಂದು ಈ ರೀತಿ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

  • ಗಂಡನಿಂದ ದೂರವಾಗಲೂ ಕೊರೊನಾ ಕಿಡ್ನಾಪ್ ಪ್ಲಾನ್- ಇದು ಬೆಂಗ್ಳೂರು ಟು ದೆಹಲಿ ಕಥೆ

    ಗಂಡನಿಂದ ದೂರವಾಗಲೂ ಕೊರೊನಾ ಕಿಡ್ನಾಪ್ ಪ್ಲಾನ್- ಇದು ಬೆಂಗ್ಳೂರು ಟು ದೆಹಲಿ ಕಥೆ

    – ಪರಿಚಿತನ ಸಹಾಯದಿಂದ ಮನೆಯಿಂದ ಎಸ್ಕೇಪ್
    – ಆಂಬ್ಯುಲೆನ್ಸ್ ನಲ್ಲಿ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್

    ಬೆಂಗಳೂರು: ಕೋವಿಡ್ 19 ಆಂಬ್ಯುಲೆನ್ಸ್ ನಿಂದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಲಾಗಿದೆ ಎಂಬ ಪ್ರರಕಣಕ್ಕೆ ಟ್ವಿಸ್ಟ್ ಲಭಿಸಿದ್ದು, ಪತಿಯಿಂದ ದೂರವಾಗಲೂ ಮಹಿಳೆ ಸ್ವಯಂ ಅಪಹರಣದ ನಾಟಕ ಮಾಡಿದ್ದಳು ಎಂದು ತಿಳಿದುಬಂದಿದೆ. ಸದ್ಯ ಆಕೆ ದೆಹಲಿಯಲ್ಲಿ ಸುರಕ್ಷಿತವಾಗಿದ್ದಾಳೆ ಎಂಬ ಮಾಹಿತಿ ಲಭಿಸಿದೆ.

    ಘಟನೆ ಕುರಿತಂತೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿ ಆಂಬ್ಯುಲೆನ್ಸ್ ನಲ್ಲಿ ತೆರಳಿದ್ದ ಯುವತಿ ಕಾಣೆಯಾಗಿದ್ದರು ಎಂದು ಸೆ.11 ರಂದು ಪ್ರತಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ ಸಾರ್ವಜನಿಕರು ಅನಗತ್ಯವಾಗಿ ಭೀತಿಗೆ ಒಳಗಾಗದೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬಹುದು.

    ಕುಟುಂಬದ ವೈಯುಕ್ತಿಕ ಸಮಸ್ಯೆಯಿಂದ ಘಟನೆ ನಡೆದಿದೆ. ಕಾಣೆಯಾದ ಮಹಿಳೆ ತಾನು ಸ್ವ-ಇಚ್ಛೆಯಿಂದ ಪರಿಚಿತರ ಸಹಾಯದೊಂದಿಗೆ ತೆರಳಿರುವುದು ಖಚಿತವಾಗಿದೆ. ಇದಕ್ಕೂ ಕೊರೊನಾ ಪರೀಕ್ಷೆ ನಡೆಸುವ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಾರ್ವಜನಿಕರು ಆತಂಕ, ಭಯಕ್ಕೊಳಗಾಗದೇ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಏನಿದು ಘಟನೆ: ಸೆ.3 ರಂದು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮಹಿಳೆ ಸ್ವತಃ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಸೆ.4 ರಂದು ಆಕೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಂಬ್ಯುನೆಲ್ಸ್ ವ್ಯವಸ್ಥೆ ಮಾಡಿ ಮಹಿಳೆಗೆ ಮಾಹಿತಿ ನೀಡಿದ್ದರು. ಆ ಬಳಿಕ ಯುವತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪತಿ ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ವರದಿಯಾಗಿತ್ತು.

    ಆದರೆ ಘಟನೆ ಕುರಿತು ಘಟನೆಯ ಕುರಿತು ವರದಿಯಾದ ಬಳಿಕ ಸ್ಪಷ್ಟನೆ ನೀಡಿದ್ದ ಬಿಬಿಎಂಪಿ, ತಾವು ಆ ವ್ಯಾಪ್ತಿಯಲ್ಲಿ ಯಾವುದೇ ಕೋವಿಡ್ ಪರೀಕ್ಷೆ ನಡೆಸಿಲ್ಲ. ಅಲ್ಲದೇ ಆಂಬ್ಯುಲೆನ್ಸ್ ಕೂಡ ಕಳುಹಿಸಿಕೊಟ್ಟಿಲ್ಲ ಎಂದು ಹೇಳಿತ್ತು. ಯಾವುದೇ ರೋಗಿಯ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸದೆ ಅವರನ್ನು ಆಂಬ್ಯುಲೆನ್ಸ್ ಮೂಲಕ ಕರೆತರುವುದಿಲ್ಲ. ಸಂದೇಶದಲ್ಲಿ ಆಂಬ್ಯುಲೆನ್ಸ್ ಚಾಲಕನ ಮೊಬೈಲ್ ಸಂಖ್ಯೆ, ಗುರುತಿನ ಚೀಟಿ ಮಾಹಿತಿ ಇರುತ್ತದೆ. ಅಲ್ಲದೇ ಎಲ್ಲಾ ಆಂಬ್ಯುಲೆನ್ಸ್ ಗಳಿಗೆ ಜಿಪಿಎಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

    ಸದ್ಯ ಮಹಿಳೆ ದೆಹಲಿಯ ಪಹರ್ ಗಂಜ್ ಪ್ರದೇಶದಲ್ಲಿ ಇರುವ ಮಾಹಿತಿ ಲಭ್ಯವಾಗಿದ್ದು, ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಆಗಿರುವ ಆಕೆ ಪತಿಯೊಂದಿಗೆ ವೈಯುಕ್ತಿಕ ವಿವಾದವಿದ್ದ ಕಾರಣ ಮನೆಯನ್ನು ತೊರೆಯಲು ಪ್ಲಾನ್ ಮಾಡಿ ಸ್ನೇಹಿತನ ಸಹಾಯದಿಂದ ತೆರಳಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಆಕೆ ತಾನು ಸುರಕ್ಷಿತವಾಗಿದ್ದು, ಪತಿಯೊಂದಿಗೆ ಇರುವ ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾಳೆ. ಅಲ್ಲದೇ ಆಕೆಯ ಫೋನ್ ಕರೆಯ ಧ್ವನಿಯನ್ನು ರೆಕಾರ್ಡ್ ಮಾಡಿ ಪೊಲೀಸರು ಆಕೆಯ ಪತಿಗೆ ಕೇಳಿಸಿದ್ದು, ಆ ಧ್ವನಿ ತನ್ನ ಪತ್ನಿಯದ್ದು ಎಂದು ಆತ ದೃಢಪಡಿಸಿದ್ದಾನೆ.

    ಇತ್ತ ಸತ್ಯವನ್ನು ಮರೆಮಾಚಿ, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಕ್ಕಾಗಿ ಕುಟುಂಬದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದಾಗಿ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಿಶೇಷ ಅಧಿಕಾರಿ ಪಿ.ಮಣಿವಣ್ಣನ್ ಅವರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • ಹಲ್ಲೆಗೆ ಮುಂದಾದ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ ಪೊಲೀಸರು

    ಹಲ್ಲೆಗೆ ಮುಂದಾದ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ ಪೊಲೀಸರು

    ಬೆಂಗಳೂರು: ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳಿಗೆ ಮಾದನಾಯಕನಹಳ್ಳಿ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ.

    ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್‍ ಗಳಾಗಿರುವ ಚಂದನ್ ಮತ್ತು ಶರಣ್ ಮೇಲೆ ಮಾದನಾಯಕನಹಳ್ಳಿ ಸಿಪಿಐ ಸತ್ಯನಾರಾಯಣ್ ಅವರು ಗುಂಡು ಹಾರಿಸಿದ್ದಾರೆ.

    ಆರೋಪಿಗಳು ಕಳೆದ ಜುಲೈ 23 ರಂದು ಮಂಜುನಾಥ್ ಎಂಬುವರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅವರನ್ನು ಕೊಲೆ ಮಾಡಿದ್ದರು. ಈ ಆರೋಪಿಗಳು ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಫಾರೆಸ್ಟ್ ಗೇಟ್ ಬಳಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಪೇದೆ ಮನಗುಂಡಿ ಮತ್ತು ಪಿ.ಎಸ್.ಐ ಮುರಳಿ ಅವರು ಮೇಲೆ ಹಲ್ಲೆ ಮಾಡಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಸಿಪಿಐ ಸತ್ಯನಾರಾಯಣ್ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಆರೋಪಿಗಳು ಹಾಗೂ ಪೊಲೀಸರನ್ನು ಮಾಗಡಿ ರಸ್ತೆಯ ಅನುಪಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೋಳಿ ಹಬ್ಬದಂದು ಹಿಂದೂ ಸಹೋದರಿಯರ ಅಪಹರಣ, ಮತಾಂತರ

    ಹೋಳಿ ಹಬ್ಬದಂದು ಹಿಂದೂ ಸಹೋದರಿಯರ ಅಪಹರಣ, ಮತಾಂತರ

    ಇಸ್ಲಾಮಾಬಾದ್: ಹೋಳಿ ಹಬ್ಬದ ದಿನದಂದು ಇಬ್ಬರು ಅಪ್ರಾಪ್ತ ಹಿಂದೂ ಸಹೋದರಿಯರನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

    ಮತಾಂತರಗೊಂಡ ಸಹೋದರಿಯರು ಘೋಟ್ಕಿ ಜಿಲ್ಲೆಯವರಾಗಿದ್ದು, ಓರ್ವ ಬಾಲಕಿ 13 ವರ್ಷ ಹಾಗೂ ಆಕೆಯ ಸಹೋದರಿ 15 ವರ್ಷದವಳಾಗಿದ್ದಾಳೆ. ಪ್ರಭಾವಿ ವ್ಯಕ್ತಿಗಳ ಗುಂಪೊಂದು ಹೋಳಿ ಹಬ್ಬದ ದಿನವೇ ಬಾಲಕಿಯರನ್ನು ಅಪಹರಣ ಮಾಡಿತ್ತು. ಬಳಿಕ ಬಾಲಕಿಯರ ವಿವಾಹದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು.

    ‘ಇಸ್ಲಾಂ ಧರ್ಮಕ್ಕೆ ಸೇರುವಂತೆ ಯಾರೂ ನಮಗೆ ಬಲವಂತ ಮಾಡಿಲ್ಲ. ಮತಾಂತರವಾಗಲು ಹಾಗೂ ವಿವಾಹವಾಗುಂತೆ ಒತ್ತಡ ಹೇರಿಲ್ಲ’ ಎಂದು ಬಾಲಕಿಯರು ಮತ್ತೊಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಬಾಲಕಿಯರನ್ನು ಅಪಹರಿಸಿ ಮತಾಂತರ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ಆರಂಭಿಸಿದ್ದಾರೆ. ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಭರವಸೆಗಳನ್ನು ಪ್ರತಿಭಟನೆ ಮೂಲಕ ಮತ್ತೆ ನೆನಪು ಮಾಡಿದ್ದಾರೆ.

    ಈ ಘಟನೆಯ ಕುರಿತು ವಿವರ ನೀಡುವಂತೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಸೂಚನೆ ನೀಡಿರುವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಪ್ರಧಾನಿ ಇಮ್ರಾಮ್ ಖಾನ್ ಅವರು ಘಟನೆಯ ಕುರಿತು ಗಮನಹರಿಸಬೇಕು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಪಾಕಿಸ್ತಾನ ಹಿಂದೂ ಸೇವಾ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಧಂಜೇಶ್ ಧಂಜಾ ಮನವಿ ಮಾಡಿಕೊಂಡಿದ್ದಾರೆ.

    ಬಲವಂತವಾಗಿ ಮತಾಂತರಗೊಳಿಸುವ ವಿರುದ್ಧ ಮಸೂದೆ ಜಾರಿಗೆ ತರವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮುಂದಾಗಬೇಕಿದೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್ ಕಾರ್ಯಕಾರಿ ಎಂಪಿಎ ನಂದ ಕುಮಾರ್ ಗೋಕ್ಲಾನಿ ಒತ್ತಾಯಿಸಿದ್ದಾರೆ.