Tag: kidnapp

  • ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಬೆಂಗಳೂರು: ತನ್ನ ಜೊತೆ ಬರಲು ನಿರಾಕರಿಸಿದ ಪ್ರಿಯತಮೆಯ ತಮ್ಮನನ್ನು ಪ್ರೇಮಿಯೊಬ್ಬ ಅಪಹರಿಸಿ ನೀನು ನನ್ನ ಜೊತೆ ಬರದಿದ್ದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

    kidnap

    ಆರೋಪಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯ ತಮ್ಮ ವೆಂಕಟೇಶ್‍ನನ್ನು ಆರೋಪಿ ಅಪಹರಿಸಿದ್ದಾನೆ. ಪ್ರಿಯತಮೆ ಬೇರೊಬ್ಬನ ಜೊತೆ ಮದುವೆ ಆಗಿದ್ದಳು. ಆದರೂ ಗಂಡನ ಬಿಟ್ಟು ಪ್ರಿಯಕರನ ಜೊತೆ ಸ್ವಲ್ಪ ದಿನ ಜೀವನ ಮಾಡಿದ್ದಾಳೆ. ಬಳಿಕ ರಾಜಿ ಪಂಚಾಯತಿ ಮಾಡಿ ಗಂಡನ ಮನೆಗೆ ಹೋಗಿದ್ದಾಳೆ. ನಂತರ ಗಂಡನನ್ನೂ ಬಿಟ್ಟು ತವರು ಮನೆ ಬಂದು ಸೇರಿಕೊಂಡಿದ್ದಳು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

    ಪ್ರಿಯತಮೆ ತವರು ಮನೆ ಸೇರಿರುವ ವಿಚಾರ ತಿಳಿದ ಆರೋಪಿ ತನ್ನ ಜೊತೆ ಬರುವಂತೆ ಪೀಡಿಸಿದ್ದಾನೆ. ಈ ವೇಳೆ ಪ್ರಿಯತಮೆ ಬರಲು ಒಪ್ಪದಿದ್ದಾಗ ಆಕೆಯ ತಮ್ಮನ ಕಿಡ್ನಾಪ್ ಮಾಡಿದ್ದಾನೆ. ಅಲ್ಲದೇ ನೀನು ನನ್ನ ಜೊತೆ ಬರದೇ ಹೋದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.  ಇದನ್ನೂ ಓದಿ: ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ ಟೆಕ್ಕಿ ಅರೆಸ್ಟ್

    kidnap

    ನಂತರ ವೆಂಕಟೇಶ್‍ನನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಎಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಆತನನ್ನು ಬಂಧಿಸಿ ಪ್ರಿಯತಮೆಯ ತಮ್ಮನ ಜೀವ ಉಳಿಸಿದ್ದಾರೆ.

  • ಒಂದು ಫೋನ್ ಕರೆಯಿಂದ ಉಜಿರೆ ಕಿಡ್ನಾಪರ್ಸ್ ಅರೆಸ್ಟ್

    ಒಂದು ಫೋನ್ ಕರೆಯಿಂದ ಉಜಿರೆ ಕಿಡ್ನಾಪರ್ಸ್ ಅರೆಸ್ಟ್

    – ಆರು ಆರೋಪಿಗಳ ಬಂಧನ
    – ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ್ದ ಉಜಿರೆಯ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ.

    ಡಿ.17ರ ಸಂಜೆ 6.15ರ ಹೊತ್ತಿಗೆ ಉಜಿರೆಯ ರಥಬೀದಿಯಲ್ಲಿರುವ ತನ್ನ ಮನೆಯ ಮುಂಭಾಗದಿಂದ ಕಿಡ್ನಾಪ್ ಆಗಿದ್ದ ಎಂಟು ವರ್ಷದ ಬಾಲಕ ಅನುಭವ್ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾನೆ. ಆರೋಪಿಗಳ ಸುಳಿವು ಸಿಗದೆ 30 ಗಂಟೆಗಳ ಕಾಲ ತಲೆಕೆಡಿಸಿಕೊಂಡಿದ್ದ ಪೊಲೀಸ್ ತಂಡಗಳಿಗೆ ಆ ಒಂದು ಫೋನ್ ಕಾಲ್ ಆರೋಪಿಗಳನ್ನು ಪತ್ತೆ ಹಚ್ಚೋಕೆ ನೆರವಾಗಿತ್ತು. ಇಂದು ಮುಂಜಾನೆ 3 ರಿಂದ 4 ಗಂಟೆಯ ಒಳಗಡೆ ದಾಳಿ ಮಾಡಿದ ಪೊಲೀಸ್ ತಂಡ 6 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿ ಬಾಲಕ ಅನುಭವ್ ನನ್ನು ರಕ್ಷಣೆ ಮಾಡಿದೆ.

    ಆ ಒಂದು ಫೋನ್ ಕರೆ ಕೊಟ್ಟಿತ್ತು ಸುಳಿವು:
    ಆರೋಪಿಗಳ ಸುಳಿವು ಸಿಗದೆ ನಿನ್ನೆ ರಾತ್ರಿವರೆಗೂ ತಲೆಕೆಡಿಸಿಕೊಂಡಿದ್ದ ಬೆಳ್ತಂಗಡಿ ಪೊಲೀಸರು, ಮುಂಜಾನೆ ವೇಳೆಗೆ ಆರೋಪಿಗಳನ್ನು ಬಂಧಿಸಿ ಬಾಲಕನನ್ನು ರಕ್ಷಣೆ ಮಾಡಲು ಯಶಸ್ವಿಯಾಗಿದ್ದಾರೆ. ಡಿ.17ರ ಸಂಜೆ ಬಾಲಕ ಅನುಭವ್ ಕಿಡ್ನಾಪ್ ಆದ ಬಳಿಕ ಅನುಭವ್ ತಾಯಿಗೆ ಅನಾಮಧೇಯ ವ್ಯಕ್ತಿಯಿಂದ ಕಾಲ್ ಬಂದಿತ್ತು. ಈ ವೇಳೆ ವ್ಯಕ್ತಿ 100 ಬಿಟ್ ಕಾಯಿನ್ ಅಂದ್ರೆ 17 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆ ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಬಾಲಕನ ತಂದೆ ಬಿಜೋಯ್‍ಗೆ ವ್ಯಕ್ತಿ ವಾಟ್ಸಪ್ ಚಾಟ್ ಮಾಡುತ್ತಿದ್ದ.

    ಹಣದ ಬೇಡಿಕೆಯನ್ನು ಹತ್ತು ಕೋಟಿಗಿಳಿಸಿ, ಮಾಧ್ಯಮ ಮತ್ತು ಪೊಲೀಸ್ ದೂರಿನ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದ. ಬಳಿಕ ಪೊಲೀಸರು ಆ ನಂಬರ್ ನ್ನು ಟ್ರೇಸ್ ಮಾಡಿದ್ದರು. ಮೊದಲು ಹಾಸನ, ಸಂಜೆ ಬೆಂಗಳೂರು ಭಾಗದ ನೆಟ್ವರ್ಕ್ ಲೊಕೇಶನ್ ನಲ್ಲಿ ಆಕ್ಟೀವ್ ಆಗಿದ್ದನ್ನು ನೋಟ್ ಮಾಡಿದ್ದರು. ನಿನ್ನೆ ರಾತ್ರಿ 9 ಗಂಟೆಯ ವೇಳೆ ಆ ನಂಬರ್ ಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹಳ್ಳಿ ಎಂಬಲ್ಲಿಂದ ಕಾಲ್ ಹೋಗಿದ್ದನ್ನು ಟ್ರ್ಯಾಕ್ ಮಾಡಿದ ಪೊಲೀಸರು ಇಂದು ಬೆಳಗ್ಗಿನ ಜಾವ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಅಪಹರಿಸಿದ್ದು ಹೇಗೆ?
    ಉಜಿರೆಯಿಂದ ಇಂಡಿಕಾ ಕಾರ್ ನಲ್ಲಿ ಬಾಲಕನನ್ನು ನಾಲ್ಕು ಮಂದಿ ಕಿಡ್ನಾಪ್ ಮಾಡಿದ್ದರು. ಉಜಿರೆಯಿಂದ ಕೋಲಾರದವರೆಗೆ ಸುಮಾರು 400 ಕಿ.ಮೀ. ದೂರವನ್ನು ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮಲ್, ಮೈಸೂರಿನ ಗಂಗಾಧರ್, ಮಂಡ್ಯದ ರಂಜಿತ್ ಮತ್ತು ಹನುಮಂತ್ ನಿನ್ನೆ ಸಂಜೆ 7.30ರ ವೇಳೆಗೆ ಕೋಲಾರದ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ ಎಂಬುವವರ ಮನೆಗೆ ತೆರಳಿ ಅಲ್ಲೇ ತಂಗಿದ್ದಾರೆ.

    ರಾತ್ರಿ ಮಂಜುನಾಥ್ ಮೊಬೈಲ್‍ನಿಂದ ಕಿಡ್ನಾಪರ್ಸ್ ಗ್ಯಾಂಗ್ ಬೆದರಿಕೆ ಬಂದ ನಂಬರ್ ಗೆ ಕಾಲ್ ಮಾಡಿದ್ದಾರೆ. ಬೆದರಿಕೆ ಕರೆ ಬಂದ ನಂಬರ್ ಗೆ ಕೂರ್ನಹೊಸಳ್ಳಿ ಗ್ರಾಮದಿಂದ ಕಾಲ್ ಬಂದಿದ್ದನ್ನು ಗಮನಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಪಿಜಿ ನೇತೃತ್ವದ ತಂಡ, ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ನೆರವಿನೊಂದಿಗೆ ಮುಂಜಾನೆ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಿಡ್ನಾಪ್ ಗ್ಯಾಂಗ್ ನ ಕಮಲ್ ಮತ್ತು ಗಂಗಾಧರ್ ಜೊತೆಗೆ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ ಮಂಜುನಾಥ್ ಮತ್ತು ಮಹೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕಿಡ್ನಾಪ್ ಮಾಡಿದ ಕಮಲ್ ಮತ್ತು ಕೂರ್ನಹೊಸಳ್ಳಿ ಗ್ರಾಮದ ಮಹೇಶ್ ಸ್ನೇಹಿತರಾಗಿದ್ದು, ಪ್ರಕರಣದಲ್ಲಿ ಕೈ ಜೋಡಿಸಿರೋದು ಬೆಳಕಿಗೆ ಬಂದಿದೆ.

    ಬಿಟ್ ಕಾಯಿನ್ ಕಿಡ್ನಾಪ್
    ಈ ಅಪಹರಣ ಪ್ರಕರಣದ ಹಿಂದೆ ಬಿಟ್ ಕಾಯಿನ್ ಸೇರಿದಂತೆ ಅನಧಿಕೃತ ದಂಧೆಯ ಜಾಲ ಇರೋದು ಗೊತ್ತಾಗಿದೆ. ಬಾಲಕ ಅನುಭವ್ ನ ತಂದೆ ಬಿಜೋಯ್ ಈ ಹಿಂದೆ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದರು. ಇದರ ಹಿನ್ನಲೆಯಲ್ಲೇ ಆರೋಪಿಗಳು ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟಿರುವ ಬಗ್ಗೆ ಶಂಕೆ ಪೊಲೀಸರಿಗಿದೆ.

    ಈ ಪ್ರಕರಣಕ್ಕೆ ಸ್ಥಳೀಯರೂ ಶಾಮೀಲಾಗಿರುವ ಬಗ್ಗೆಯೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳನ್ನು ಮತ್ತು ಬಾಲಕನನ್ನು ಬೆಳ್ತಂಗಡಿ ಪೊಲೀಸರು ಕೋರ್ಟ್ ಗೆ ಹಸ್ತಾಂತರಿಸಿದ್ದಾರೆ. ಹೆಚ್ಚಿನ ತನಿಖೆಗೆ ಬೆಳ್ತಂಗಡಿಗೆ ಕರೆ ತಂದಿದ್ದಾರೆ. ಒಟ್ಟಿನಲ್ಲಿ ಭಾರೀ ಆತಂಕ ಮೂಡಿಸಿದ್ದ ಅಪಹರಣ ಪ್ರಕರಣ 34 ಗಂಟೆಗಳ ಬಳಿಕ ಸಮಾಧಾನದ ಅಂತ್ಯ ಕಂಡಿದೆ. ಆದರೆ ಈ ಪ್ರಕರಣ ಹಲವು ಆಯಾಮಗಳನ್ನು ಪಡೆದಿದ್ದು, ಪೊಲೀಸ್ ತನಿಖೆ ಮತ್ತಷ್ಟು ಜನರಿಗೆ ಕಂಟಕವಾಗುವುದರಲ್ಲಿ ಸಂಶಯವಿಲ್ಲ.

  • ಜೈಲಿನಿಂದ ಬಂದು ಅಪ್ರಾಪ್ತೆಯ ಕಿಡ್ನಾಪ್, ರೇಪ್ – ವಿಡಿಯೋ ಮಾಡಿ, ದೇವರು ನನ್ನ ಕ್ಷಮಿಸುವನು ಎಂದ

    ಜೈಲಿನಿಂದ ಬಂದು ಅಪ್ರಾಪ್ತೆಯ ಕಿಡ್ನಾಪ್, ರೇಪ್ – ವಿಡಿಯೋ ಮಾಡಿ, ದೇವರು ನನ್ನ ಕ್ಷಮಿಸುವನು ಎಂದ

    ವಾಷಿಂಗ್ಟನ್: ಕಾಮುಕನೊಬ್ಬ ಪೆರೋಲ್ ಮೂಲಕ ಜೈಲಿನಿಂದ ಹೊರ ಬಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು ವಿಕೃತಿ ಮರೆದಿರುವ ಘಟನೆ ಉತಾಹ್‍ನ ವೆಸ್ಟ್ ವ್ಯಾಲಿ ಸಿಟಿಯಲ್ಲಿ ನಡೆದಿದೆ.

    ಆರೋಪಿಯನ್ನು ಕ್ರೀಡ್ ಕೋಲ್ ಲುಜಾನ್ (43) ಎಂದು ಗುರುತಿಸಲಾಗಿದೆ. ಈತ ಕೊಲೆ ಪ್ರಯತ್ನ ಮಾಡಿದ್ದರಿಂದ ಜೈಲಿಗೆ ಹೋಗಿದ್ದನು. ಆದರೆ ಇತ್ತೀಚೆಗೆ ಪೆರೋಲ್‍ನಲ್ಲಿ ಜೈಲಿನಿಂದ ಹೊರ ಬಂದಿದ್ದನು. ಆದರೆ ಜೈಲಿನಿಂದ ಹೊರಬಂದ ಕೂಡಲೇ ಆರೋಪಿ ಅಪ್ರಾಪ್ತ ಬಾಲಕಿಯನ್ನು ಹಾಡಹಗಲೇ ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು ‘ದೇವರು ನನ್ನನ್ನು ಕ್ಷಮಿಸುವನು’ ಎಂದು ಬಾಲಕಿಗೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಜನವರಿ 27 ರಂದು 15 ವರ್ಷದ ಬಾಲಕಿ ಮಧ್ಯಾಹ್ನ 2.15ಕ್ಕೆ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದಳು. ಅದೇ ಸಮಯದಲ್ಲಿ ಆರೋಪಿ ಲುಜಾನ್ ಬಾಲಕಿಯನ್ನು ಬಲವಂತವಾಗಿ ತನ್ನ ಕಾರಿನ ಬಳಿ ಎಳೆದುಕೊಂಡು ಹೋಗಿದ್ದಾನೆ. ನಂತರ ಆರೋಪಿ ಬಾಲಕಿಗೆ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಅಪಹರಿಸಿದ್ದಾನೆ. ಆರೋಪಿ ಕಾರಿನ ಮುಂಭಾಗದ ಸೀಟಿನ ಕೆಳಗೆ ಬಾಲಕಿಯ ಕೈ-ಕಾಲನ್ನ ಕಟ್ಟಿ ಕಿಡ್ನಾಪ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ನಡೆದ ಒಂದು ಗಂಟೆಯಲ್ಲೇ ತಾಯಿ ತನ್ನ ಮಗಳು ಮನೆಯಿಂದ ಶಾಲೆಗೆ ಹೋಗಿದ್ದಾಳೆ. ಆದರೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆ ಪ್ರದೇಶ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬ ಬಾಲಕಿಯನ್ನು ತನ್ನ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ ವಿಡಿಯೋ ಸೆರೆಯಾಗಿದೆ.

    ಪೊಲೀಸರು ಸಂಜೆಯಷ್ಟರಲ್ಲಿ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿ ಲುಜನ್ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾನೆ. ಲುಜನ್ ತನ್ನ ಮನೆಗೆ ಕರೆದುಕೊಂಡು ಹೋಗಿ ತಿನ್ನಲು ತಿಂಡಿ ಕೊಟ್ಟಿದ್ದನು. ನಂತರ ಮಧ್ಯಾಹ್ನ 3 ಗಂಟೆಯೊಳಗೆ ಮನೆಗೆ ಕಳುಹಿಸುವುದಾಗಿ ಹೇಳಿದ್ದನು. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿಕೊಂಡನು. ಕೊನೆಯಲ್ಲಿ ‘ದೇವರು ತನ್ನನ್ನು ಕ್ಷಮಿಸುವವನು’ ಎಂದು ಹೇಳಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

    ಸದ್ಯಕ್ಕೆ ಪೊಲೀಸರು ಲುಜಾನ್ ನನ್ನು ಬಂಧಿಸಿದ್ದು, ಕಿಡ್ನಾಪ್, ಲೈಂಗಿಕ ಕಿರುಕುಳ ಸೇರಿದಂತೆ ಅನೇಕ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ 3ನೇ ಜಿಲ್ಲಾ ನ್ಯಾಯಾಲಯವು ಲುಜನ್‍ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

  • ಮುತ್ತಪ್ಪ ರೈ ಹೆಸರಲ್ಲಿ ಕಿಡ್ನಾಪ್ ಮಾಡಿದ ರೌಡಿಶೀಟರ್ ಕೋರ್ಟಿಗೆ ಶರಣು

    ಮುತ್ತಪ್ಪ ರೈ ಹೆಸರಲ್ಲಿ ಕಿಡ್ನಾಪ್ ಮಾಡಿದ ರೌಡಿಶೀಟರ್ ಕೋರ್ಟಿಗೆ ಶರಣು

    ಬೆಂಗಳೂರು: ಜೈ ಕರ್ನಾಟಕದ ಮುಖ್ಯಸ್ಥ ಮುತ್ತಪ್ಪ ರೈ ಹೆಸರಲ್ಲಿ ಕಿಡ್ನಾಪ್ ಮಾಡಿದ್ದ ಖತರ್ನಾಕ್ ರೌಡಿಶೀಟರ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

    ಹುಳಿಮಾವು ನಿವಾಸಿ ಮುನಿಯಪ್ಪನವರನ್ನು ಕಿಡ್ನಾಪ್ ಮಾಡಿದ್ದ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಪ್ಟನ್ ರಾಜ ಪೊಲೀಸರಿಗೆ ಹೆದರಿ ಕೋರ್ಟಿಗೆ ಶರಣಾಗಿದ್ದಾನೆ. ಈತ ಜೂನ್ 19 ರಂದು ಮುನಿಯಪ್ಪನವರನ್ನು ಕಿಡ್ನಾಪ್ ಮಾಡಿ 6 ಕೋಟಿ ರೂ. ಬೇಡಿಕೆ ಇಟ್ಟಿದ್ದ.

    ಈ ಕಿಡ್ನಾಪ್‍ಗೆ ಮುನಿಯಪ್ಪನವರ ಆಪ್ತ ಸ್ನೇಹಿತ ಗೋಪಾಲ ಸಾಥ್ ನೀಡಿದ್ದು, ಸಿನಿಮಾ ಶೈಲಿಯಲ್ಲಿ ಸ್ಕೆಚ್ ರೆಡಿ ಮಾಡಿ ಕಿಡ್ನಾಪ್ ಮಾಡಿಸಿದ್ದ. ಗೋಪಾಲ ಹೇಳಿದ್ದಂತೆ ಮುನಿಯಪ್ಪನನ್ನು ಕಿಡ್ನಾಪ್ ಮಾಡಿದ್ದ ರಾಜ ಒಂದು ದಿನ ಮೈಸೂರಿನಲ್ಲಿ ಅವರನ್ನು ಲಾಕ್ ಮಾಡಿ ಇಟ್ಟುಕೊಂಡಿದ್ದ. ಈ ವಿಚಾರ ಹೊರಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ರಾಜ, ಒಂದು ದಿನದ ನಂತರ ಮೈಸೂರು ರಸ್ತೆಯಲ್ಲಿ ಮುನಿಯಪ್ಪನನವರನ್ನು ಬಿಟ್ಟು ಕಳುಹಿಸಿದ್ದ.

    ಈ ವೇಳೆ ಪ್ಲಾನ್‍ನಂತೆ ಮೈಸೂರು ರಸ್ತೆಯಲ್ಲಿ ಕಾದು ಕುಳಿತಿದ್ದ ಗೋಪಾಲ, ಅಣ್ಣ ನಿನ್ನನ್ನು ಬಿಡುಗಡೆ ಮಾಡಿಸಲು ರೌಡಿಗಳಿಗೆ 5 ಕೋಟಿ ನೀಡಿದ್ದೇನೆ ಎಂದು ಮುನಿಯಪ್ಪಗೆ ಹೇಳಿ ನಂಬಿಸಿದ್ದ. ನಂತರ ಆ ಹಣವನ್ನು ಪಡೆಯಲು ಮುನಿಯಪ್ಪನವರ ಜಮೀನು ಮಾರಿಸಿದ್ದ ಗೋಪಾಲ ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ.

    ಗೋಪಾಲ ಹೆಚ್ಚಿಗೆ ಹಣ ಕೇಳಿದಾಗ ಅನುಮಾನಗೊಂಡ ಮುನಿಯಪ್ಪನವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ವಿಚಾರಣೆ ಮಾಡಿದಾಗ ಗೋಪಾಲನ ಅಸಲಿ ಬಣ್ಣ ಬಯಲಾಗಿದೆ. ಇದರ ಜೊತೆಗೆ ಸಹಾಯ ಮಾಡಿದ್ದ ಕಿಡ್ನಾಪರ್ ರಾಜನಿಗೂ ಮೋಸ ಮಾಡಿದ್ದ ಗೋಪಾಲ ರಾಜನ ಬಳಿ ನಾಲ್ಕು ಕೋಟಿ ಡೀಲ್ ಎಂದು ಹೇಳಿ ಮುನಿಯಪ್ಪನಿಂದ ಆರು ಕೋಟಿ ಕಿತ್ತಿದ್ದ. ಅದಲ್ಲದೇ ರಾಜಗೆ ಒಂದು ರೂಪಾಯಿ ಕೊಡದೆ ಗೇಮ್ ಆಡಿದ್ದ ಎನ್ನಲಾಗಿದೆ.

    ಈ ವಿಚಾರದಲ್ಲಿ ಜೈಲಿಗೆ ಹೋಗಿದ್ದ ಗೋಪಾಲ ಈಗ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದಾನೆ. ಆದರೆ ಘಟನೆ ನಂತರ ತಲೆ ಮರೆಸಿಕೊಂಡಿದ್ದ ರಾಜ ಪೊಲೀಸರಿಗೆ ಹೆದರಿ ಭಾನುವಾರ ಬಂದು ಕೋರ್ಟಿಗೆ ಶರಣಾಗಿದ್ದಾನೆ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆಗಾಲೇ ಎರಡು ಕೋಟಿಯನ್ನು ಗೋಪಾಲನಿಂದ ವಶ ಪಡಿಸಿಕೊಂಡಿದ್ದಾರೆ.

  • ಪಿವಿ ಸಿಂಧುವನ್ನು ಮದುವೆಯಾಗ್ತೀನಿ, ಇಲ್ಲ ಅಂದ್ರೆ ಕಿಡ್ನಾಪ್ – ಡಿಸಿಗೆ 70ರ ವೃದ್ಧನ ಬೇಡಿಕೆ

    ಪಿವಿ ಸಿಂಧುವನ್ನು ಮದುವೆಯಾಗ್ತೀನಿ, ಇಲ್ಲ ಅಂದ್ರೆ ಕಿಡ್ನಾಪ್ – ಡಿಸಿಗೆ 70ರ ವೃದ್ಧನ ಬೇಡಿಕೆ

    ಚೆನ್ನೈ: ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರೊಂದಿಗೆ ವಿವಾಹ ಮಾಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ ಎಂದು 70 ವರ್ಷದ ವೃದ್ಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆದಿದೆ.

    ಡಿಸಿ ಅವರಿಗೆ ಅರ್ಜಿ ಸಲ್ಲಿಸಿದ ವೃದ್ಧನ ಹೆಸರು ಮಲೈಸ್ವಾಮಿ. ಆದರೆ ಅರ್ಜಿಯಲ್ಲಿ ಆತ ತನಗೆ ಕೇವಲ 16 ವರ್ಷ ಎಂದು ನಮೂದಿಸಿದ್ದು, ಸಿಂಧುರೊಂದಿಗೆ ವಿವಾಹಕ್ಕೆ ಬೇಕಾದ ಸಿದ್ಧತೆ ನಡೆಸಿಕೊಡಿ ಎಂದು ಕೋರಿದ್ದಾರೆ. ಅಲ್ಲದೇ ಮದುವೆ ಸಿದ್ಧತೆ ಮಾಡದಿದ್ದರೆ ಸಿಂಧುರನ್ನ ಅಪಹರಣ ಮಾಡುವುದಾಗಿಯೂ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಜನರ ಸಮಸ್ಯೆಗಳನ್ನು ಕೇಳಲು ಸಭೆಯನ್ನು ಏರ್ಪಡಿಸುತ್ತಾರೆ. ಈ ಸಭೆಗೆ ಆಗಮಿಸಿದ್ದ ಮಲೈಸ್ವಾಮಿ ಅವರು ಸಿಂಧು ಆಡುವ ಶೈಲಿ ತನಗೆ ಬಹಳ ಇಷ್ಟವಾಗಿದ್ದು, ಆಕೆಯನ್ನು ತನ್ನ ಮದುವೆಯಾಗುವ ಯೋಚನೆ ಇದೆ ಎಂದು ಇಬ್ಬರ ಫೋಟೋಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

    ಅರ್ಜಿಯಲ್ಲಿ ತಾನು 2004 ರಲ್ಲಿ ಜನಿಸಿರುವುದಾಗಿ ಹೇಳಿರುವ ಮಲೈಸ್ವಾಮಿ ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದಾರೆ. ಇಂತಹ ವಿಚಿತ್ರ ಅರ್ಜಿ ಪಡೆದಿರುವ ಜಿಲ್ಲಾಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ಜನರು ಕ್ಷಣ ಕಾಲ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಸಿಂಧುರೊಂದಿಗೆ ತನ್ನ ಮದುವೆ ಮಾಡಲೇ ಬೇಕು ಎಂದು ವೃದ್ಧ ಮಲೈಸ್ವಾಮಿ ಪಟ್ಟು ಹಿಡಿದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ಜೈಲಿನಲ್ಲೇ ಕೂತು ಕಿಡ್ನ್ಯಾಪ್ ಸ್ಕೆಚ್ ಹಾಕಿದ್ದ ರೌಡಿಶೀಟರ್ ಆ್ಯಂಡ್ ಟೀಂ ಅರೆಸ್ಟ್

    ಜೈಲಿನಲ್ಲೇ ಕೂತು ಕಿಡ್ನ್ಯಾಪ್ ಸ್ಕೆಚ್ ಹಾಕಿದ್ದ ರೌಡಿಶೀಟರ್ ಆ್ಯಂಡ್ ಟೀಂ ಅರೆಸ್ಟ್

    ಬೆಂಗಳೂರು: ಜೈಲಿನಲ್ಲೇ ಇದ್ದುಕೊಂಡು ಕಂಟ್ರಾಕ್ಟ್‌ರ್ ಒಬ್ಬರನ್ನು ಕಿಡ್ನ್ಯಾಪ್ ಮಾಡಿಸಿದ್ದ ರೌಡಿಶೀಟರ್ ಮತ್ತು ಅವನ ಸಹಚರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಕೆಪಿ ಅಗ್ರಹಾರದಲ್ಲಿ ರೌಡಿಶೀಟರ್ ಆಗಿರುವ ನಟರಾಜ ಅಲಿಯಾಸ್ ಮುಳ್ಳ ಮತ್ತು ಅವನ ಸಹಚರರಾದ ಕಾರ್ತಿಕ್, ಭೈರೇಗೌಡ, ಸುರೇಶ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ನಟರಾಜ ಪರಪ್ಪನ ಅಗ್ರಹಾರ ಸೇರಿದ್ದ.

    ಜೈಲಿನಲ್ಲಿ ಇದ್ದುಕೊಂಡೆ ಕಂಟ್ರಾಕ್ಟ್‌ರ್ ಶಾಂತಕುಮಾರ್ ಎಂಬವರನ್ನು ತನ್ನ ಸಹಚರರಿಗೆ ಸೂಚನೆ ನೀಡಿ ಕಿಡ್ನ್ಯಾಪ್ ಮಾಡಿಸಿದ್ದ. ಜೈಲಿನಿಂದಲೇ ಫೋನ್ ಮೂಲಕ ಸಂಪರ್ಕಿಸಿ ಕಿಡ್ನ್ಯಾಪ್ ಮಾಡಿಸಿದ್ದ ನಟರಾಜ ಕಂಟ್ರಾಕ್ಟ್‌ರ್ ನಿಂದ ಎರಡೂವರೇ ಲಕ್ಷ ಪಡೆದು ಕಳುಹಿಸಿದ್ದನು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಪಿ ಅಗ್ರಹಾರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

  • ಸೋನಾಲಿ ಬೇಂದ್ರೆ ಕಿಡ್ನಾಪ್‍ಗೆ ಸ್ಕೆಚ್ ಹಾಕಿದ್ದ ಶೋಯೆಬ್ ಅಖ್ತರ್

    ಸೋನಾಲಿ ಬೇಂದ್ರೆ ಕಿಡ್ನಾಪ್‍ಗೆ ಸ್ಕೆಚ್ ಹಾಕಿದ್ದ ಶೋಯೆಬ್ ಅಖ್ತರ್

    ಮುಂಬೈ: ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಖ್ತರ್ ಆ ದಿನಗಳಲ್ಲೇ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅಂದರೆ ಇಷ್ಟ ಎಂದು ಹೇಳಿ ಸಾಕಷ್ಟು ಸುದ್ದಿಯಾಗಿದ್ದರು. ಆದರೆ ಅಂದು ನೇರ ಅಖ್ತರ್‍ಗೆ ಟಾಂಗ್ ನೀಡಿದ್ದ ಬೇಂದ್ರೆ ನನಗೆ ಅಖ್ತರ್ ಯಾರು ಎಂದು ಗೊತ್ತೆ ಇಲ್ಲ ಎಂದಿದ್ದರು.

    ಸದ್ಯ ಮತ್ತೆ ಸಂದರ್ಶನವೊಂದರಲ್ಲಿ ಬೇಂದ್ರೆ ಬಗ್ಗೆ ಮಾತನಾಡಿರುವ ಶೋಯೆಬ್ ಅಖ್ತರ್, ತನ್ನ ಪ್ರೀತಿಗಾಗಿ ಆಕೆಯನ್ನು ಕಿಡ್ನಾಪ್ ಮಾಡವ ಯೋಚನೆ ಮಾಡಿದ್ದೆ ಎಂದು ತಿಳಿಸಿದ್ದಾರೆ.

    ಬಾಲಿವುಡ್‍ನ ‘ಇಂಗ್ಲಿಷ್ ಬಾಬು ದೇಸಿ ಮೆಮ್’ ಎಂಬ ಸಿನಿಮಾದಲ್ಲಿ ಸೋನಾಲಿ ಬೇಂದ್ರೆರ ನಟನೆಯನ್ನು ನೋಡಿದ್ದ ಅಖ್ತರ್, ಹಲವು ಬಾರಿ ನಟಿ ಎಂದರೆ ನನಗೆ ಇಷ್ಟ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೇ ಸೋನಾಲಿ ಬೇಂದ್ರೆಯವರ ಫೋಟೋವನ್ನು ಪಾಕೆಟ್‍ನಲ್ಲಿ ಇಟ್ಟುಕೊಂಡು ಓಡಾಡುತ್ತಿದೆ. ಒಂದೊಮ್ಮೆ ತನ್ನ ಪ್ರೀತಿಯನ್ನ ನಿರಾಕರಿಸಿದರೆ, ಕಿಡ್ನಾಪ್ ಮಾಡುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

    ಹಲವು ಸಂದರ್ಭದಲ್ಲಿ ಶೋಯೆಬ್ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿದ್ದ ಸೋನಾಲಿ ಬೇಂದ್ರೆ, ನಾನು ಕ್ರಿಕೆಟ್ ಅಭಿಮಾನಿ ಅಲ್ಲ. ನನಗೆ ಅಖ್ತರ್ ಯಾರು ಎಂಬುವುದೇ ತಿಳಿದಿಲ್ಲ ಎಂದಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಸೋನಾಲಿ ಬೇಂದ್ರೆ ಇತ್ತಿಚೇಗಷ್ಟೇ ನೂಯಾರ್ಕ್ ನಿಂದ ಭಾರತಕ್ಕೆ ಮರಳಿದ್ದಾರೆ.

  • ಸ್ಟಾರ್ ಹೋಟೆಲ್ ಮಹಿಳಾ ಉದ್ಯೋಗಿಯಿಂದ ಉದ್ಯಮಿ ಕಿಡ್ನಾಪ್

    ಸ್ಟಾರ್ ಹೋಟೆಲ್ ಮಹಿಳಾ ಉದ್ಯೋಗಿಯಿಂದ ಉದ್ಯಮಿ ಕಿಡ್ನಾಪ್

    – ರೇಪ್ ಬೆದರಿಕೆ ಒಡ್ಡಿ 30 ಲಕ್ಷಕ್ಕೆ ಡಿಮ್ಯಾಂಡ್

    ನವದೆಹಲಿ: ಖಾಸಗಿ ಕಂಪನಿಯ ಉದ್ಯಮಿಯನ್ನು ಅಪಹರಣ ಮಾಡಿದ ಆರೋಪದಲ್ಲಿ ಸ್ಟಾರ್ ಹೋಟೆಲ್ ಮಹಿಳಾ ಉದ್ಯೋಗಿ ಸೇರಿದಂತೆ 6 ಮಂದಿಯನ್ನ ಪೊಲೀಸರು ಬಂಧಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಚಾಣಕ್ಯಪುರಿ ಪ್ರದೇಶದ ಪಂಚತಾರಾ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರು ಮಹಿಳೆಯರು ಕೃತ್ಯದಲ್ಲಿ ಭಾಗಿಯಾಗಿದ್ದು, 6 ಗಂಟೆಗಳ ಕಾಲ ನಾಟಕೀಯ ಬೆಳವಣಿಗೆಗಳಲ್ಲಿ ಕೊನೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿ ಉದ್ಯಮಿಯನ್ನು ರಕ್ಷಣೆ ಮಾಡಿದ್ದಾರೆ.

    ಏನಿದು ಪ್ರಕರಣ: 64 ವರ್ಷದ ಉದ್ಯಮಿಯೊಬ್ಬರು ಮುಂಬೈಯಿಂದ ದೆಹಲಿಗೆ ಕೆಲಸ ನಿಮಿತ್ತ ಆಗಮಿಸಿದ್ದರು. ಈ ವೇಳೆ ಅನಾಮಿಕ ಮಹಿಳೆಯಿಂದ ಕರೆ ಸ್ವೀಕರಿಸಿದ ಅವರು ಹೋಟೆಲ್ ಕೊಠಡಿಯಲ್ಲಿ ಮಹಿಳೆಯನ್ನು ಭೇಟಿ ಮಾಡಲು ನಿರ್ಧಸಿದ್ದರು. ಉದ್ಯಮಿ ಹೋಟೆಲ್ ಕೊಠಡಿಗೆ ತೆರಳುತ್ತಿದಂತೆ ಅಲ್ಲಿಗೆ ಮತ್ತೆ 3 ಮಹಿಳೆಯರು ಆಗಮಿಸಿದ್ದರು.

    ಮಹಿಳೆ ಉದ್ಯಮಿಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಲು ಒಪ್ಪಿಸಿದ್ದು, ಆ ಬಳಿಕ ಮನೆಗೆ ತೆರಳಿದ ವೇಳೆ ತನ್ನ ನೈಜ ಸ್ವರೂಪವನ್ನು ತೆರೆದಿಟ್ಟಿದ್ದಾಳೆ. ತನ್ನ ಮಗಳ ಮೇಲೆ ಉದ್ಯಮಿ ರೇಪ್ ಮಾಡಿದ್ದಾನೆ ಎಂದು ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕಿ, 30 ಲಕ್ಷ ರೂ.ಗಳನ್ನು ನಮಗೆ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾಳೆ. ಇದರಿಂದ ಹೆದರಿದ ಆತ ತನ್ನ ಸಂಸ್ಥೆಯ ನೌಕರನಿಗೆ ಕರೆ ಮಾಡಿ ಹಣ ತರಲು ತಿಳಿಸಿದ್ದಾನೆ.

    ಉದ್ಯಮಿ ಏಕಾಏಕಿ ಹಣ ತರಲು ಹೇಳಿದ್ದ ಬಗ್ಗೆ ಅನುಮಾನಗೊಂಡ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹೋಟೆಲ್ ಬಳಿ ಇದ್ದ ಸಿಸಿಟಿವಿ ದೃಶ್ಯ ಹಾಗೂ ಉದ್ಯಮಿ ತೆರಳಿದ್ದ ಕಾರಿನ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.

  • ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

    ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

    ಬೆಂಗಳೂರು: ಬಿಗ್‍ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅವರನ್ನು ಕಿಡ್ನಾಪ್ ಕೇಸ್ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣ ಸಂಬಂಧ ಸುನಾಮಿ ಕಿಟ್ಟಿ ಸೇರಿ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸುನೀಲ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಏನಿದು ಪ್ರಕರಣ?
    ಸುನಾಮಿ ಕಿಟ್ಟಿಯ ಗೆಳೆಯ ಸುನೀಲ್ ಪತ್ನಿಯನ್ನು ತೌಶಿಕ್ ಎಂಬಾತ ಪ್ರೀತಿಸುತ್ತಿದ್ದನು. ಫೆಬ್ರವರಿ 28 ರಂದು ತೌಶಿಕ್ ತನ್ನ ಪ್ರಿಯತಮೆಯೊಂದಿಗೆ ಬಾರ್ ಗೆ ಊಟಕ್ಕೆ ಬಂದಿದ್ದನು. ಈ ವಿಚಾರ ತಿಳಿದು ಕಿಟ್ಟಿ ಗ್ಯಾಂಗ್, ಸುನೀಲ್ ಪತ್ನಿಯ ಪ್ರಿಯಕರ ಯಾರೆಂದು ತಿಳಿದುಕೊಳ್ಳಲು ಮುಂದಾಗಿದ್ದರು. ಆದ್ರೆ ಇದೇ ವೇಳೆ ತೌಶಿಕ್ ಬಾರ್ ನಿಂದ ಬಿಲ್ ಕೊಡದೇ ಗಡಿಬಿಡಿಯಲ್ಲಿ ಪರಾರಿಯಾಗಿದ್ದನು. ಈ ಪ್ರಯತ್ನದಲ್ಲಿ ಬಾರ್ ಸಪ್ಲೈಯರ್ ಗಿರೀಶ್ ನನ್ನೇ ತೌಶಿಕ್ ಎಂದು ಭಾವಿಸಿ ಕಿಟ್ಟಿ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ಅಲ್ಲದೇ ಹೊರಮಾವು ಬಳಿ ಸುನೀಲ್ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ಯಾ ಎಂದು ಪ್ರಶ್ನಿಸಿ ಗಿರೀಶ್ ಮೇಲೆ ಹಲ್ಲೆ ಕೂಡ ಮಾಡಿತ್ತು. ಈ ವೇಳೆ ಗಿರೀಶ್, ಸುನೀಲ್ ಯಾರು? ಅವರ ಪತ್ನಿ ಯಾರು ಎಂದು ಪ್ರಶ್ನಿಸಿದ್ರು.

    ಕಿಟ್ಟಿ ಗ್ಯಾಂಗ್ ತೌಶಿಕ್ ಫೋಟೋ ತೋರಿಸಿದ್ದಾರೆ. ಈ ವೇಳೆ ಗಿರೀಶ್, ಇವರು ನಮ್ಮ ಬಾರ್ ಗೆ ಬರ್ತಾರೆ ಅಂತ ಹೇಳಿದ್ರು. ಅಲ್ಲದೇ ತೌಶಿಕ್ ಬಿಲ್ ಕೊಡದೇ ಹೋಗಿದ್ದನ್ನು ಕೂಡ ಗಿರೀಶ್, ಸುನಾಮಿ ಕಿಟ್ಟಿ ಮುಂದೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಿಟ್ಟಿ ಗ್ಯಾಂಗ್, ಗಿರೀಶ್ ಕೈಯಲ್ಲಿಯೇ ತೌಶಿಕ್ ಗೆ ಕರೆ ಮಾಡಿಸಿ ಬಿಲ್ ಕೊಡುವಂತೆ ಹೇಳಿಸಿತ್ತು. ಅಂತೆಯೇ ಬಿಲ್ ಕೊಡಲು ಗೊರಗುಂಟೆ ಪಾಳ್ಯದ ಸಿಗ್ನಲ್ ಬಳಿ ಬರುವುದಾಗಿ ತೌಶಿಕ್ ತಿಳಿಸಿದ್ದನು. ಈ ವೇಳೆ ಗಿರೀಶ್ ನನ್ನು ಗೊರಗುಂಟೆಪಾಳ್ಯಕ್ಕೆ ಕರೆದುಕೊಂಡು ಹೋಗಿ ಗನ್ ಇಟ್ಟಿದ್ದ ಸುನಾಮಿ ಕಿಟ್ಟಿ ಗ್ಯಾಂಗ್, ನಾವು ಹೇಳಿದಂತೆ ಕೇಳು ಎಂದು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.

    ಹಣ ಕೊಡಲು ಬರುತ್ತಿದ್ದಂತೆಯೇ ಕಿಟ್ಟಿ ಗ್ಯಾಂಗ್ ಗೊರಗುಂಟೆ ಪಾಳ್ಯದಲ್ಲಿ ತೌಶಿಕ್ ನನ್ನು ಕಿಡ್ನಾಪ್ ಮಾಡಿ ಬಳಿಕ ಇಬ್ಬರನ್ನು ಹೊರಮಾವು ಬಳಿಯ ತೋಟದ ಮನೆಗೆ ಕರೆದೊಯ್ದು ಹಲ್ಲೆಮಾಡಿದ್ದಾರೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇತ್ತ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಇತರರು ಈ ಸಂಬಂಧ ದೂರು ದಾಖಲಿಸುತ್ತಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ ಪೊಲೀಸರು, ಬಾರ್ ನ ಸಿಸಿಟಿವಿ ಆಧರಿಸಿ, ಸುನಾಮಿ ಕಿಟ್ಟಿಯ ಫೋನ್ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಈತ ಆ ಬಾರ್ ಗೆ ಹೋಗಿ ಪ್ರತೀದಿನ ಕುಡಿಯುತ್ತಿದ್ದನು. ಆದ್ರೆ ಕಳೆದ ಎರಡು ದಿನಗಳಿಂದ ಕಿಟ್ಟಿ ಬಾರ್ ಗೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ಕಿಟ್ಟಿ ಮೇಲೆ ಸಂಶಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ಕಿಟ್ಟಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆಯೂ ಕೇಸ್ ದಾಖಲಾಗಿದೆ.

  • ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ಲಕ್ನೋ: ಉತ್ತರಪ್ರದೇಶದ ಬುಲಂದರ್ ಶಹರ್ ನಲ್ಲಿ ಜ. 2ರಂದು ನಡೆದ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರನ್ನು ಜುಲ್ಫೀಕರ್ ಅಬ್ಬಸಿ ಹಾಗೂ ದಿಲ್ ಶದ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಬುಲಂದರ್ ಶಹರ್ ನ ಸಿಕಂದ್ರಾಬಾದ್ ನಿವಾಸಿಗಳು ಎನ್ನಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಇಸ್ರೈಲಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

    ಆರೋಪಿಗಳು ಮೊದಲು ಸಿನಿಮಾ ನೋಡಿದ್ದಾರೆ. ನಂತರ ಮದ್ಯಪಾನ ಸೇವಿಸಿ, ಬಳಿಕ ಬುಲಂದರ್ ಶಹರ್ ರಾಷ್ಟ್ರೀಯ ಹೆದ್ದಾರಿ 91ರಲ್ಲಿ 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಆರೋಪಿಗಳು ತಮಾಷೆಗಾಗಿ ಈ ಕೃತ್ಯ ಎಸಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಬಾಲಕಿ ಟ್ಯೂಷನ್ ನಿಂದ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಆಕೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ಬಳಿಕೆ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ನಂತ್ರ ಶವವನನ್ನು ಗ್ರೇಟರ್ ನೋಯ್ಡಾದಲ್ಲಿರೋ ಬಿಲ್ ಅಕ್ಬರ್ ಪುರ್ ಗ್ರಾಮದಲ್ಲಿನ ಕಾಲುವೆಗೆ ಎಸೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

    ಸದ್ಯ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕಿಯನ್ನು ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ ಪೊಲೀಸರು ಇದೊಂದು ಲವ್ ಕೇಸ್ ಎಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ನಿರಾಕರಿಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.