Tag: kiccha sudeeep

  • Kiccha 46 ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್- ಸುದೀಪ್ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

    Kiccha 46 ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್- ಸುದೀಪ್ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

    ಸ್ಯಾಂಡಲ್‌ವುಡ್ ಬಾದಷಾ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾ, ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಅಂತಾ ಬ್ಯುಸಿಯಾಗಿದ್ರು. ವಿಕ್ರಾಂತ್ ರೋಣನಾಗಿ ಮಿಂಚಿದ ಮೇಲೆ ಕಿಚ್ಚ ಕೊಂಚ ಸೈಲೆಂಟ್ ಆಗಿದ್ರು. ಈಗ ಕಿಚ್ಚನ 46ನೇ ಸಿನಿಮಾದ ಅಪ್ಡೇಟ್ ಕೊಡುವ ಮೂಲಕ ಸುದೀಪ್ ಸುದ್ದಿ ಯಲ್ಲಿದ್ದಾರೆ. ಸುದೀಪ್ ಹೊಸ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಹಂಚಿಕೊಂಡಿದ್ದಾರೆ.

    ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ ಸಿನಿಮಾದ ಅದ್ದೂರಿ ಟೈಟಲ್ ಲಾಂಚ್ ನಂತರ ತಮ್ಮ ಸಿನಿಮಾ ಬಗ್ಗೆ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹಳ ದಿನಗಳ ಬಳಿಕ ಅವರು ಕಿಚ್ಚ 46ನೇ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿದರು. ಈಗ ಈ ಸಿನಿಮಾ ತಂಡದಿಂದ ಹೊಸ ಅಪ್​ಡೇಟ್​ ನೀಡಲಾಗಿದೆ. ಈ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕವನ್ನು ಬಹಿರಂಗ ಮಾಡಲಾಗಿದೆ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ‘ಕಿಚ್ಚ 46’ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್​ ಅವರು ಮೂರು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಆ ಪೈಕಿ ‘ವಿ ಕ್ರಿಯೇಷನ್ಸ್​’ನ ಕಲೈಪುಲಿ ಎಸ್​. ಧಾನು ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ಅವರು ಪ್ರೋಮೋ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಇದನ್ನೂ ಓದಿ: ಜನವರಿಯಲ್ಲಿ ಅರ್ಜುನ್ ಸರ್ಜಾ ಮಗಳ ಮದುವೆ: ಮಾವನ ಮನೆಯಿಂದ ಅಧಿಕೃತ ಘೋಷಣೆ

    ಕಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್​’ ಜೊತೆ ಕಿಚ್ಚ ಸುದೀಪ್ ​ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್​ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್​. ಧಾನು ಅವರಿಗೆ ಇದೆ. ಇದನ್ನೂ ಓದಿ: ಶ್ರುತಿ ಹಾಸನ್ ಸೈಕೋ, ಡ್ರಗ್ಸ್ ವ್ಯಸನಿ : ಟ್ವೀಟ್ ಮಾಡಿದ ಉಮೈರ್ ಸಂಧು

    ಒಂದು ವರ್ಷಗಳ ಕಾಯುವಿಕೆಯ ಬಳಿಕ ಸುದೀಪ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಹೊಸ ಅಪ್‌ಡೇಟ್‌ನ ಪ್ರಕಾರ, ಕಿಚ್ಚ-46 ನ ಮೊದಲ ಟೀಸರ್‌ ಇದೇ ಜುಲೈ 2 ರಂದು ಬೆಳಗ್ಗೆ 11.46ಕ್ಕೆ ರಿವೀಲ್‌ ಆಗಲಿದೆ. ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ಕಾಂತಾರ ನಟಿ ಸಪ್ತಮಿ ಗೌಡ, ವಾಸುಕಿ ವೈಭವ್, ಅನುಪ್ ಭಂಡಾರಿ, ವಿನಯ್ ರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಮುಂತಾದ ಕನ್ನಡದ ಪ್ರಮುಖ ಕಲಾವಿದರನ್ನು ಒಳಗೊಂಡ ವಿಶೇಷ ವೀಡಿಯೊದೊಂದಿಗೆ ಚಿತ್ರ ನಿರ್ಮಾಪಕರು ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Breaking – ಸ್ಯಾಂಡಲ್ ವುಡ್ ಹಿರಿಯ ನಟ, ನಿರ್ದೇಶಕ ಸಿ.ವಿ.ಶಿವಶಂಕರ್ ವಿಧಿವಶ

    ಒಂದ್ ಕಡೆ ಮನೆ ಮಗ ಸಂಚಿತ್ ಸಂಜೀವ್ ಚೊಚ್ಚಲ ನಿರ್ದೇಶನ, ನಟನೆಯ ಜಿಮ್ಮಿ ಸಿನಿಮಾಗೆ ಸುದೀಪ್ ಸಾಥ್ ನೀಡ್ತಿದ್ದಾರೆ. ತಮ್ಮ ಸಲಹೆಗಳ ಮೂಲಕ ಬೆಂಬಲಿಸುತ್ತಿದ್ದಾರೆ‌. ಇನ್ನೊಂದ್ ಕಡೆ ತಮ್ಮ Kiccha 46 ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡಲು ಸುದೀಪ್ ರೆಡಿಯಾಗಿದ್ದಾರೆ. ಅಭಿಮಾನಿಗಳು ಕೂಡ ಕಿಚ್ಚನ ಅವತಾರ ನೋಡಲು ಕಾತರದಿಂದ ಕಾಯ್ತಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಅವಕಾಶ ಕೊಟ್ಟ ಗುಂಟೂರು ಖಾರಂ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಸಾನ್ಯ – ರೂಪೇಶ್ ಶೆಟ್ಟಿ ಮಧ್ಯೆ ಬರಲು ಕಾವ್ಯಶ್ರೀಗೆ ಸಲಹೆ ಕೊಟ್ಟಿದ್ಯಾರು ಗೊತ್ತಾ?‌ ದೊಡ್ಮನೆಯಲ್ಲಿ ಬಿಗ್‌ ಟ್ವಿಸ್ಟ್

    ಸಾನ್ಯ – ರೂಪೇಶ್ ಶೆಟ್ಟಿ ಮಧ್ಯೆ ಬರಲು ಕಾವ್ಯಶ್ರೀಗೆ ಸಲಹೆ ಕೊಟ್ಟಿದ್ಯಾರು ಗೊತ್ತಾ?‌ ದೊಡ್ಮನೆಯಲ್ಲಿ ಬಿಗ್‌ ಟ್ವಿಸ್ಟ್

    ಟಿವಿ ಬಿಗ್ ಬಾಸ್ (Bigg Boss Kannada) ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆಯುತ್ತಾ ಮುಂದೆ ಸಾಗುತ್ತಿದೆ. ಮನೆಯ ಸಾಕಷ್ಟು ವಿಚಾರಗಳು ಹೈಲೆಟ್ ಆಗುತ್ತಿದೆ. ದೊಡ್ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಜೋಡಿ ಗಮನ ಸೆಳೆಯುತ್ತಿದೆ. ಈ ಜೋಡಿಯ ಮಧ್ಯೆ ಕಾವ್ಯಶ್ರೀ ಬರಲು ಸಲಹೆ ಕೊಟ್ಟಿದ್ದೆ ಗುರೂಜಿ ಎಂಬುದು ವೀಕೆಂಡ್‌ನಲ್ಲಿ ರಿವೀಲ್ ಆಗಿದೆ. ಕಾವ್ಯಶ್ರೀ ಮತ್ತು ತನ್ನ ಜೋಡಿ ದರ್ಶ್‌ ಚಂದ್ರಪ್ಪ ಗುರೂಜಿ ಕೊಟ್ಟಿರುವ ಸಲಹೆ ನೋಡುಗರನ್ನ ಮೋಡಿ ಮಾಡಿದೆ.

    ಬಿಗ್ ಬಾಸ್ ಮನೆಯ ಆಟ ಒಂದು ವಾರ ಕಳೆದು ಎರಡನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳು ಜೋಡಿಯಾಗಿ ಮೊದಲ ವಾರದ ಟಾಸ್ಕ್ ಅನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಸ್ಪರ್ಧಿಗಳಿಗೆ ಗುರೂಜಿ ಕೊಟ್ಟಿರುವ ಟಿಪ್ಸ್ ವೀಕೆಂಡ್ ಪಂಚಾಯಿತಿಯಲ್ಲಿ ಸಖತ್ ಚರ್ಚೆ ಆಗಿದೆ. ಈ ಕುರಿತು ಸ್ವತಃ ಸುದೀಪ್ (Actor Sudeep) ಅವರೇ ಮಾತನಾಡಿದ್ದಾರೆ. ಇದನ್ನೂ ಓದಿ:ರಾಕೇಶ್ ಅಡಿಗ ಮಾಡಿದ ಎಡವಟ್ಟಿಗೆ ಸಿಡಿದೆದ್ದ ಸಂಬರ್ಗಿ

    ಓಟಿಟಿಯಿಂದ ಟಿವಿ ಬಿಗ್ ಬಾಸ್‌ನಲ್ಲೂ ಆರ್ಯವರ್ಧನ್ ಗುರೂಜಿ(Aryavardhan Guruji) ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ದರ್ಶ್ ಚಂದ್ರಪ್ಪ ಮತ್ತು ಕಾವ್ಯಶ್ರೀಗೆ ಗುರೂಜಿ ನೀಡಿರುವ ಸಲಹೆ ಮನೆಯವರ ನಗುವಿಗೆ ಕಾರಣವಾಗಿದೆ. ದರ್ಶ್ ನೀವು ನೋಡಲು ಚೆನ್ನಾಗಿದ್ದೀರಾ. ನೀವು ಹುಡುಗಿರ ಹಿಂದೆ ಹೋಗಬೇಡಿ. ಹುಡುಗಿಯರೇ ನಿಮ್ಮ ಹಿಂದೆ ಬರುತ್ತಾರೆ. ಮನೆಯಲ್ಲಿ ಹೈಲೆಟ್ ಆಗಲು ಯಾವುದಾದರೂ ಹುಡುಗಿಯನ್ನ ಕ್ಯಾಚ್ ಹಾಕಿಕೊಳ್ಳಿ. ಹೀಗೆ ಮಾಡಿದ್ದರೆ ನೀವು ಸಾಕಷ್ಟು ದಿನ, ಈ ಮನೆಯಲ್ಲಿ ಉಳಿದುಕೊಳ್ಳಬಹುದು ಎಂದಿದ್ದಾರೆ. ಜೊತೆಗೆ ಹುಡುಗಿರೇ ಮೊದಲು ಕೈ ಕೊಟ್ಟು ಹೋಗುತ್ತಾರೆ ಎಂಬ ಸಲಹೆಯನ್ನ ಕೂಡ ನೀಡಿದ್ದಾರೆ.

    ಇನ್ನೂ ಕಾವ್ಯಶ್ರೀಗೆ, ನೀನು ರೂಪೇಶ್ (Roopesh) ಮತ್ತು ಸಾನ್ಯ (Sanya) ಜೊತೆ ಇರಲು ಬಿಡಬೇಡ. ಅವನ ಜೊತೆ ಇದ್ದು ಸಾನ್ಯಗೆ ಕೋಪ ಬರಿಸು ಎಂದು ಟಿಪ್ಸ್ ಕೊಟ್ಟಿದ್ದಾರೆ. ಅವರಿಬ್ಬರು ಹತ್ತಿರವಾಗದಂತೆ ನೋಡಿಕೋ ಎಂದಿದ್ದಾರೆ ಈ ಬಗ್ಗೆ ಸ್ವತಃ ಕಾವ್ಯ ವೀಕೆಂಡ್‌ನಲ್ಲಿ ಕಿಚ್ಚನ ಮುಂದೆ ರಿವೀಲ್ ಮಾಡಿದ್ದಾರೆ. ಗುರೂಜಿ ಹೇಳಿಕೊಟ್ಟ ಟಿಪ್ಸ್ ಕೇಳಿ, ಸಾನ್ಯ ಅಯ್ಯರ್ ಜೋರಾಗಿ ಚಪ್ಪಾಳೆ ಹೊಡೆದಿದ್ದಾರೆ. ಇನ್ನೂ ಗುರೂಜಿ ಸರಿಯಾದ ಟಿಪ್ಸ್ ಕೊಟ್ಟಿದ್ದಾರೆ ಎಂದು ರೂಪೇಶ್‌ಗೆ ಹೇಳಿ ಕಿಚಾಯಿಸಿದ್ದಾರೆ. ಈ ವೇಳೆ ರೂಪೇಶ್ ಜೊತೆ ಮನೆಮಂದಿ ಎಲ್ಲರೂ ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]