Tag: KGF-2

  • ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ತ್ತೀಚೆಗಷ್ಟೇ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್ ನೆಚ್ಚಿನ ಚಾಚಾ ಪಾತ್ರದಲ್ಲಿ ಕಾಣಿಸಿಕೊಂಡಿರುವ, ಕನ್ನಡದ ಹೆಸರಾಂತ ನಟ ಹರೀಶ್ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಯೂಟ್ಯೂಬ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಾವು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಈಗಾಗಲೇ ಸಖತ್ ಬಳಲುತ್ತಿರುವ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.

    ಮೊದಲು ಹರೀಶ್ ರೈ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಈ ಥೈರಾಯ್ಡ್ ಮುಂದೆ ಕ್ಯಾನ್ಸರ್ ಆಗಿ ಬದಲಾಗಿದೆಯಂತೆ. ಈಗದು ಗಂಭೀರ ಸ್ಥಿತಿಯಲ್ಲಿ ಇರುವುದರಿಂದ ಆರ್ಥಿಕ ಮುಗ್ಗಟ್ಟಿನ ನಡುವೆಯೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಹರೀಶ್ ರೈ ಮಾತನಾಡಿದ್ದಾರೆ. ತಾವು ಆರ್ಥಿಕ ಸಂಕಷ್ಟದಲ್ಲಿ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಹರೀಶ್ ರೈ, ನೆಗೆಟಿವ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಕೆಜಿಎಫ್ 2 ಸಿನಿಮಾದಲ್ಲಿ ಅವರದ್ದು ಪಾಸಿಟಿವ್ ಪಾತ್ರವಾಗಿತ್ತು. ಹಾಗಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈ ಗೆಲುವನ್ನು ಅವರು ಸಂಭ್ರಮಿಸಬೇಕು ಎನ್ನುವಷ್ಟರಲ್ಲಿ ಕ್ಯಾನ್ಸರ್ ಅವರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ಜೋಡಿ ಹಕ್ಕಿ, ತಾಯವ್ವ, ಸಂಜು ವೆಡ್ಸ್ ಗೀತಾ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಹರೀಶ್, ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

    ಹರೀಶ್ ರೈ ಅವರಿಗೆ ಕ್ಯಾನ್ಸರ್ ಆಗಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಆ ವಿಡಿಯೋವನ್ನು ನಟ ಅನಿರುದ್ಧ ಪೋಸ್ಟ್ ಮಾಡಿದ್ದು, ನಟನಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಕ್ಯಾನ್ಸರ್ ನಿಂದ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ದಿನಗಣನೆ: ಸೆ.2ಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್

    ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ದಿನಗಣನೆ: ಸೆ.2ಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಕೆಜಿಎಫ್ 2 ನಂತರ ರಾಕಿಂಗ್ ಸ್ಟಾರ್ ಯಶ್ ಯಾವ ಮತ್ತು ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿದೆ. ನರ್ತನ್, ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಚಿತ್ರಗಳ ಹೆಸರು ಕೇಳಿ ಬಂದರೂ, ಯಾವುದೂ ಅಂತಿಮವಾಗಿಲ್ಲ. ಅಲ್ಲದೇ, ಹಲವು ನಿರ್ಮಾಪಕರು ಕೂಡ ಯಶ್ ಸಿನಿಮಾ ಮಾಡಲು ಮುಂದೆ ಬಂದರೂ, ರಾಕಿಭಾಯ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಹಾಗಾಗಿ ಮುಂದಿನ ಸಿನಿಮಾ ಯಾವುದು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

    ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ನರ್ತನ್ ನಿರ್ದೇಶನದ ಸಿನಿಮಾ ಹೆಸರು ಘೋಷಣೆ ಆಗಬೇಕಿತ್ತು. ಕಳೆದ ಎರಡು ವರ್ಷಗಳಿಂದ ಯಶ್ ಗಾಗಿಯೇ ನರ್ತನ್ ಕಥೆ ಬರೆಯುತ್ತಿದ್ದಾರೆ. ಇದೇ ಸಿನಿಮಾ ಅಂತಿಮವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಸಿನಿಮಾವನ್ನೂ ಯಶ್ ಮುಂದೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ.   ಇದನ್ನೂ ಓದಿ:ಊಟದಲ್ಲಿನ ಗರಂ ಮಸಾಲಾ ಥರ ಸೋನು ಶ್ರೀನಿವಾಸ್ ಗೌಡ: ಹೀಗ್ಯಾಕೆ ಅಂದ್ರು ಬಿಗ್ ಬಾಸ್ ಮನೆಮಂದಿ

    ಸದ್ಯ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದ್ದು, ಸೆಪ್ಟಂಬರ್ 2 ರಂದು ಯಶ್ ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಗಳು ಈಗಾಗಲೇ ಹಲವು ಬಾರಿ ಬಂದರೂ, ಈ ಬಾರಿ ಮಿಸ್ ಆಗುವುದಕ್ಕೆ ಚಾನ್ಸೇ ಇಲ್ಲ ಎಂದು ಹೇಳಲಾಗುತ್ತಿದೆ. ಸೆಪ್ಟಂಬರ್ 2 ರಂದು ರಾಕಿ ಭಾಯ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನೇ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯಾದರೂ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

    Live Tv
    [brid partner=56869869 player=32851 video=960834 autoplay=true]

  • ಸಾವಿರಾರು ಕೋಟಿ ಬಾಚಿದ ‘ಕೆಜಿಎಫ್ 2’ ಸಿನಿಮಾ ಆಗಸ್ಟ್ 20ರಂದು ಜೀ  ಕನ್ನಡದಲ್ಲಿ ಪ್ರಸಾರ

    ಸಾವಿರಾರು ಕೋಟಿ ಬಾಚಿದ ‘ಕೆಜಿಎಫ್ 2’ ಸಿನಿಮಾ ಆಗಸ್ಟ್ 20ರಂದು ಜೀ ಕನ್ನಡದಲ್ಲಿ ಪ್ರಸಾರ

    ಕೆಜಿಎಫ್ ಚಾಪ್ಟರ್ 2, ಇಡೀ ಜಗತ್ತು ಒಮ್ಮೆಲೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆಯ ಇಂಡಿಯಾದ ಬ್ಲಾಕ್ ಬಸ್ಟರ್  ಸಿನಿಮಾ. ಕಥೆ, ತಾಂತ್ರಿಕತೆ ,ಶ್ರೀಮಂತಿಕೆ ಮತ್ತು ಕಲಾವಿದರ ಆಯ್ಕೆಯಲ್ಲಿ ಚಾಪ್ಟರ್ 1ನ್ನೇ ಮೀರಿಸುವಂತೆ ತೆರೆಗೆ ಅಪ್ಪಳಿಸಿದ ಈ ಚಿತ್ರ ಬಿಡುಗಡೆಗೊಂಡ ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಗಿದ್ದು ಈಗ ಇತಿಹಾಸ . ಇದೀಗ ಈ ಸಿನಿಮಾ ಕನ್ನಡ ಕಿರುತೆರೆಗೆ ಸಿರಿತನವನ್ನು ಪರಿಚಯಿಸಿದ ಕನ್ನಡಿಗರ ನೆಚ್ಚಿನ ನಂಬರ್ 1 ಮನರಂಜನಾ ವಾಹಿನಿ  ಜೀ ಕನ್ನಡದಲ್ಲಿ ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ .

    ಸ್ಯಾಂಡಲ್ ವುಡ್ ಜೊತೆಗೆ ಅತ್ಯುತ್ತಮ ನಂಟು ಹೊಂದಿರುವ ಜೀ ಕನ್ನಡ ವಾಹಿನಿ ತಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶ್ರೇಷ್ಟ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಹೆಗ್ಗಳಿಕೆ ಹೊಂದಿದೆ. ಕೆಜಿಎಫ್ 2 ಚಿತ್ರದಲ್ಲೂ ಹಲವಾರು ಜೀ ಕುಟುಂಬದ ಕಲಾವಿದರು ನಟಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಗೆಲುವಿನ ಸರದಾರ ರಾಕಿಂಗ್ ಸ್ಟಾರ್ ಯಶ್ , ಶ್ರೀನಿಧಿ ಶೆಟ್ಟಿ , ಸಂಜಯ್ ದತ್ ,ರವೀನಾ ಟಂಡನ್ , ಮಾಳವಿಕಾ ,ವಸಿಷ್ಠ ಸಿಂಹ ,ಪ್ರಕಾಶ್ ರಾಜ್  ಹೀಗೆ ದೇಶ ಕಂಡ ಅದ್ಭುತ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಪ್ರಶಾಂತ್ ನೀಲ್ ಅವರ ಅತ್ಯದ್ಭುತ ನಿರ್ದೇಶನವಿದೆ. ಚಂದನವನದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್  ಇದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣದ ಜವಾಬ್ಧಾರಿ ಹೊತ್ತಿದ್ದರೇ  ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ . ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಚಾಪ್ಟರ್ 1 ನಿಂದಲೇ ಕನ್ನಡ ಚಿತ್ರರಂಗದ ದಿಕ್ಕು ಬದಲಿಸುವ ಸೂಚನೆ ನೀಡಿದ್ದ ಕೆಜಿಎಫ್ ಇದೀಗ ಚಾಪ್ಟರ್ 2 ನಿಂದ ಅದನ್ನು ನಿಜವಾಗಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಯಶಸ್ಸಿನ ಸವಾರಿ ಮಾಡಲು ಶುರುಮಾಡಿ 1000 ಕೋಟಿಗೂ ಹೆಚ್ಚು ಆದಾಯ ಗಳಿಸಿ ದಾಖಲೆ ಸೃಷ್ಟಿಸಿದ್ದಷ್ಟೇ  ಅಲ್ಲದೇ ಶತದಿನೋತ್ಸವವನ್ನು ಆಚರಿಸಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.

    ಹಬ್ಬಗಳ ಮಾಸ ಶ್ರಾವಣದಲ್ಲಿ ಕಿರು ಪರದೆಯ ಮೇಲೆ ಕೆಜಿಎಫ್ 2 ಅಬ್ಬರ ಆರಂಭವಾಗುತ್ತಿದ್ದು ಈಗಾಗಲೇ ಬಿಡುಗಡೆಯಾಗಿರುವ ವಿಶಿಷ್ಟ ಶೈಲಿಯ ಪ್ರೋಮೋಗಳು ವೀಕ್ಷಕರು ಈ ಸಿನಿಮಾ ಹಬ್ಬವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ.  ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ಅನ್ನು ಮನೆಮಂದಿಯೆಲ್ಲಾ ಕೂತು ನೋಡಿ ಈ ಸಿನಿಮೋತ್ಸವವನ್ನು ಆಚರಿಸಿ , ಆನಂದಿಸಿ. ಜೀ ಕನ್ನಡದ ಇತರೆ ಕಾರ್ಯಕ್ರಮಗಳಿಗೆ ನೀಡುವ ಪ್ರೋತ್ಸಾಹವನ್ನು ಮುಂದುವರೆಸಿ.

     

    Live Tv
    [brid partner=56869869 player=32851 video=960834 autoplay=true]

  • ಟಿವಿಯಲ್ಲೂ ಅಬ್ಬರಿಸೋಕೆ ರೆಡಿಯಾದ ‘ಕೆಜಿಎಫ್ 2’ ರಾಕಿಭಾಯ್

    ಟಿವಿಯಲ್ಲೂ ಅಬ್ಬರಿಸೋಕೆ ರೆಡಿಯಾದ ‘ಕೆಜಿಎಫ್ 2’ ರಾಕಿಭಾಯ್

    ಭಾರತೀಯ ಸಿನಿಮಾ ರಂಗದಲ್ಲಿ ಸರ್ವ ದಾಖಲೆಗಳನ್ನು ಪುಡಿ ಪುಡಿ ಮಾಡಿ, ಕನ್ನಡ ಸಿನಿಮಾ ರಂಗವನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋದ ಕೆಜಿಎಫ್ 2 ಸಿನಿಮಾ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ. ಸಾವಿರಾರು ಕೋಟಿ ಗಳಿಸಿ, ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿದೆ. ಕೇವಲ ಥಿಯೇಟರ್ ನಲ್ಲಿ ಮಾತ್ರವಲ್ಲ, ಓಟಿಟಿಯಲ್ಲೂ ಅದು ಅಪಾರ ಸಂಖ್ಯೆಯಲ್ಲಿ ನೋಡುಗರ ಗಮನ ಸೆಳೆದಿದೆ. ಥಿಯೇಟರ್ ಮತ್ತು ಓಟಿಟಿಯಲ್ಲಿ ಭಾರೀ ಗೆಲುವು ಕಂಡಿರುವ ಕೆಜಿಎಫ್ 2 ಇದೀಗ ಟಿವಿಯಲ್ಲೂ ಪ್ರಸಾರವಾಗಲಿದೆ.

    KGF 2 Yash (4)

    ಜೀ ಕನ್ನಡ ವಾಹಿನಿಯು ಕೆಜಿಎಫ್ 2 ಸಿನಿಮಾದ ಹಕ್ಕುಗಳನ್ನು ಪಡೆದಿದ್ದು, ಅತೀ ಶೀಘ್ರದಲ್ಲೇ ಈ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಹಾಗಂತ ವಾಹಿನಿಯು ಇನ್ನೂ ದಿನಾಂಕವನ್ನು ನಿಗಧಿ ಮಾಡಿಲ್ಲ. ಆದರೆ, ‘ಅವನು ಬರ್ತಿದ್ದಾನೆ, ಅದೂ ಒನ್ ವೇ ನಲ್ಲಿ’ ಎಂದು ಕ್ಯಾಪ್ಸನ್ ಕೊಡುವ ಮೂಲಕ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ. ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಟ್ರೈಲರ್ ಕೂಡ ಸಖತ್ತಾಗಿ ರಂಜಿಸುತ್ತಿದೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಕೆಜಿಎಫ್ 2 ಸಿನಿಮಾವನ್ನು ಈಗಾಗಲೇ ಬಹುತೇಕ ಸಿನಿ ಪ್ರೇಕ್ಷಕರು ನೋಡಿದ್ದರೂ, ಟಿವಿಯಲ್ಲೂ ಕೂಡ ಅತ್ಯಧಿಕ ನಂಬರ್ ಬರುತ್ತದೆ ಎಂದು ಹೇಳಲಾಗುತ್ತಿದೆ. ಅನೇಕರು ಮರುವೀಕ್ಷಣೆ ಮಾಡುವುದರಿಂದ ಸಹಜವಾಗಿಯೇ  ನೋಡುಗರ ಸಂಖ್ಯೆಯೂ ಹಿಗ್ಗಲಿದೆ ಎನ್ನುವುದು ಲೆಕ್ಕಾಚಾರ. ಸದ್ಯ ಟ್ರೈಲರ್ ಮಾತ್ರ ಬಿಟ್ಟಿದ್ದು, ಪ್ರಸಾರದ ದಿನಾಂಕವನ್ನು ಅತೀ ಶೀಘ್ರದಲ್ಲೇ ವಾಹಿನಿ ಘೋಷಣೆ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಹೇರ್ ಸ್ಟೈಲ್ ಚೇಂಜ್

    ಮುಂದಿನ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಹೇರ್ ಸ್ಟೈಲ್ ಚೇಂಜ್

    ವಿಶ್ವ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೆ ಎಲ್ಲರಿಗೂ ಕಣ್ಣಿದೆ. ಹಾಗೆಯೇ ಮುಂಬರುವ ಚಿತ್ರದಲ್ಲಿ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೂಡ ಇದೆ. ಹಾಗಾದ್ರೆ ಯಶ್ ಮುಂದಿನ ಸಿನಿಮಾ ಯಾವುದು ಎಂಬುದರ ಡಿಟೈಲ್ಸ್ ಇಲ್ಲಿದೆ.

    `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಮುಂದೇನು ಮಾಡುತ್ತಾರೆ. ಯಶ್ ಮುಂದಿನ ನಡೆಯೇನು ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿದೆ. ಈಗಾಗಲೇ ನರ್ತನ್ ಸಿನಿಮಾಗೆ ಯಶ್ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ. ರಾಕಿಭಾಯ್ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ ಎಂಬುದನ್ನ ಅಧಿಕೃತವಾಗಿ ತಿಳಿಸಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

    ಇನ್ನು ಇತ್ತಿಚೆಗೆ ಮೈಸೂರಿನ ಯುವಜನ ಮಹೋತ್ಸವ ಕಾರ್ಯಕ್ರಮಕ್ಕೆ ಯಶ್ ಭಾಗಿಯಾಗಿದ್ದರು. ಈ ವೇಳೆ ತಮ್ಮ ಹೊಸ ಹೇರ್ ಸ್ಟೈಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಸಿನಿಮಾ ಬಗ್ಗೆ ಕುತೂಹಲವಿರಲಿ, ಯಾವ ಸಿನಿಮಾ, ಯಾವ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂಬುದನ್ನ ಕಾದುನೋಡಿ ಎಂದು ಯಶ್ ಮಾತನಾಡಿದ್ದಾರೆ. ಮುಂದಿನ ಚಿತ್ರದ ಬಗ್ಗೆ ಯವುದೇ ರೀತಿಯ ಸುಳಿವು ಕೊಡದೇ, ಡಿಫರೆಂಟ್ ಲುಕ್‌ನಲ್ಲಿ ಬರುತ್ತೇನೆ ಎಂಬ ಸುಳಿವು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಖಿ ಹಬ್ಬದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಮಕ್ಕಳು

    ರಾಖಿ ಹಬ್ಬದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಮಕ್ಕಳು

    ನ್ಯಾಷನಲ್ ಸ್ಟಾರ್ ಆಗಿ ಮಿರ ಮಿರ ಅಂತಾ ಮಿಂಚ್ತಿರುವ ಯಶ್ ಮನೆಯಲ್ಲಿ ಇದೀಗ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಕಿಂಗ್ ಸ್ಟಾರ್ ಮಕ್ಕಳು ಕೂಡ ರಾಖಿ ಹಬ್ಬ ಆಚರಿಸಿ, ಸಂಭ್ರಮಿಸಿದ್ದಾರೆ. ಈ ಖುಷಿಯ ಕ್ಷಣಗಳ ಫೋಟೋವನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ದೇಶಾದ್ಯಂತ ರಾಖಿ ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸಹೋದರಿ ನಂದಿನಿ ಜತೆ ರಾಖಿ ಹಬ್ಬ ಆಚರಿಸಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಮಕ್ಕಳು ಕೂಡ ರಕ್ಷೆಯ ಬಂಧನ ರಾಖಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮ ಫೋಟೋವನ್ನ ಅಭಿಮಾನಿಗಳೊಂದಿಗೆ ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:`ಬಾಹುಬಲಿ’ ಸೀನ್ ರೀಕ್ರಿಯೇಟ್ ಮಾಡಿದ ಕಾಜಲ್ ಅಗರ್‌ವಾಲ್

     

    View this post on Instagram

     

    A post shared by Radhika Pandit (@iamradhikapandit)

    ಇಬ್ಬರು ಒಟ್ಟಿಗೆ ನಗುತ್ತಾರೆ, ಜಗಳ ಆಡುತ್ತಾರೆ, ಒಟ್ಟಿಗೆ ಇರುತ್ತಾರೆ ಎಂದು ರಾಖಿ ಹಬ್ಬದ ದಿನ ಚೆಂದದ ಅಡಿಬರಹವನ್ನ ಬರೆದು ರಾಧಿಕಾ ಪಂಡಿತ್‌ ಶೇರ್‌ ಮಾಡಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಮಕ್ಕಳು ಐರಾ ಮತ್ತು ಯಥರ್ವ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ತಂದೆ-ತಾಯಿ ಮೆಚ್ಚುವ ರೀತಿ ನಾನು ಕಾಲೇಜು ಜೀವನ ಕಳೆಯಲಿಲ್ಲ: ರಾಕಿಂಗ್‌ ಸ್ಟಾರ್

    ನನ್ನ ತಂದೆ-ತಾಯಿ ಮೆಚ್ಚುವ ರೀತಿ ನಾನು ಕಾಲೇಜು ಜೀವನ ಕಳೆಯಲಿಲ್ಲ: ರಾಕಿಂಗ್‌ ಸ್ಟಾರ್

    ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ಮೈಸೂರಿನ ಯುವಜನೋತ್ಸವ ಕಾರ್ಯದಲ್ಲಿ ಭಾಗಿದ್ದಾರೆ. ಈ ವೇಳೆ ಗುರಿ, ಸಾಧನೆ, ಆತ್ಮ ವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣ ಪಡೆದ ವಿಶ್ವ ವಿದ್ಯಾನಿಲಯದಲ್ಲಿ ರಾಕಿಂಗ್ ಯಶ್‌ಗೆ ಸನ್ಮಾನ ಕೂಡ ಮಾಡಲಾಗಿದೆ.

    ಅರಮನೆ ನಗರಿ ಮೈಸೂರಿನಲ್ಲಿ ಯುವಜನೋತ್ಸವ ಕಾರ್ಯಕ್ರಮದ ಸಡಗರ ಜೋರಾಗಿದ್ದು, ಈ ಸಂಭ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಕ್ಷಿಯಾಗಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿ, ಅಶ್ವತ್ಥ ನಾರಾಯಣ್, ಯೂನಿವರ್ಸಿಟಿ ಕುಲಪತಿಗಳು ಭಾಗಿಯಾಗಿದ್ದಾರೆ. ಈ ವೇಳೆ ಸಭೆಯನ್ನ ಉದ್ದೇಶಿಸಿ ಯಶ್ ಮಾತನಾಡಿದ್ದಾರೆ.

    ಇದು ನನ್ನೂರು ಮೈಸೂರು,‌ ನನ್ನ ವಿದ್ಯಾರ್ಥಿ ಜೀವನದಲ್ಲಿ ಗೊಂದಲದಲ್ಲಿ, ಯಾಮಾರಿಕೊಂಡು ಉಡಾಫೆಯಲ್ಲಿ ಬಾಲ್ಯ ಕಳೆದೆ. ನನ್ನ ತಂದೆ ತಾಯಿ ಮೆಚ್ಚುವ ರೀತಿ ನಾನು ಬಾಲ್ಯ ಮತ್ತು ಕಾಲೇಜು ಜೀವನ ಕಳೆಯಲಿಲ್ಲ. ಒಳ್ಳೆಯದು ಮಾಡ್ತೀನಿ ಅಂತಾ ಯೋಚಿಸಿ ನಿಜಕ್ಕೂ ಒಳ್ಳೆಯದಾಗುತ್ತೆ. ನಮ್ಮೊಳಗೆ ಒಂದು ಸರಕಾರ ಇರಬೇಕು. ಆ ಸರಕಾರಕ್ಕೆ ಒಂದು ಗುರಿ ಇದ್ದರೆ ನಾವು ನಮ್ಮ ನಮ್ಮ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಬಹುದು. ಸಾಧನೆ ಮಾಡಬೇಕು ಅಂತಾ ಎಲ್ಲವನೂ ತ್ಯಾಗ ಮಾಡಬೇಕು ಎಂದು ಹೇಳುವುದಿಲ್ಲ. ಕಾಲೇಜ್ ದಿನಗಳಲ್ಲಿ ಮಜಾನೂ ಮಾಡಿ, ಚಿಕ್ಕ ಚಿಕ್ಕ ಖುಷಿ ಅನುಭವಿಸಿ. ಸ್ನೇಹಿತರ ಜತೆ ಜೋಕ್ ಮಾಡಿ ನಗುನಗುತ್ತಾ ಬದುಕಿ ಎಂದು ಯಶ್ ಮಾತನಾಡಿದ್ದಾರೆ. ಇದನ್ನೂ ಓದಿ:`ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

    ಬಳಿಕ ನಟ ಯಶ್ ಅವರ ಸಾಧನೆಯನ್ನ ಗುರುತಿಸಿ, ಸಿಎಂ ಬೊಮ್ಮಾಯಿ, ಅಶ್ವತ್ಥ ನಾರಾಯಣ್, ಯೂನಿವರ್ಸಿಟಿ ಕುಲಪತಿಗಳಿಂದ ಯಶ್‌ಗೆ ಸನ್ಮಾನ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • `ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

    `ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

    ನ್ಯಾಷನಲ್ ಸ್ಟಾರ್ ಯಶ್ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಯಶ್ ಮನೆಯಲ್ಲಿ ರಕ್ಷಾ ಬಂಧನ ಹಬ್ಬವನ್ನ ಆಚರಿಸಿದ್ದಾರೆ. ಸದ್ಯ ಹಬ್ಬದ ಸಂಭ್ರಮದ ಫೋಟೋವನ್ನ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ದೇಶಾದ್ಯಂತ ರಾಖಿ ಹಬ್ಬವನ್ನು ಆಚರಿಸುತ್ತಿದ್ದಾರೆ. `ಕೆಜಿಎಫ್’ ಸ್ಟಾರ್ ಯಶ್ ಮನೆಯಲ್ಲೂ ರಾಖಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿವರ್ಷದಂತೆ ಈ ವರ್ಷವು ಕೂಡ ರಾಖಿ ಹಬ್ಬವನ್ನ ಆಚರಿಸಿದ್ದಾರೆ. ಸಹೋದರ ಸಹೋದರಿಯ ಬಂಧವನ್ನ ತೋರಿಸುವಂತಹ ಹಬ್ಬ ಇದಾಗಿದ್ದು, ಈ ಹಬ್ಬವನ್ನ ಯಶ್ ಮತ್ತು ಸಹೋದರಿ ನಂದಿನಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಕಮಲಿ’ ಖ್ಯಾತಿಯ ಅಂಕಿತಾ

     

    View this post on Instagram

     

    A post shared by Yash (@thenameisyash)

    ಸಹೋದರ ಯಶ್‌ಗೆ ಆರತಿ ಬೆಳಗಿದ ನಂತರ ರಾಖಿ ಕಟ್ಟಿ, ಖುಷಿ ಖುಷಿಯಿಂದ ಹಬ್ಬ ಆಚರಿಸಿದ್ದಾರೆ. ಈ ಫೋಟೋಗಳನ್ನ ಯಶ್ ಕೂಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕಿ ಭಾಯ್‌ನ ಗುಣಗಾನ ಮಾಡಿದ ಸುದೀಪ್: ಯಶ್ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ

    ರಾಕಿ ಭಾಯ್‌ನ ಗುಣಗಾನ ಮಾಡಿದ ಸುದೀಪ್: ಯಶ್ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ

    `ಕೆಜಿಎಫ್ 2′ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಬಗ್ಗೆ `ವಿಕ್ರಾಂತ್ ರೋಣ’ ಸ್ಟಾರ್ ಕಿಚ್ಚ ಮಾತನಾಡಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಯಶ್ ಮತ್ತು ಕಿಚ್ಚನ ನಡುವೆ ತಂದಿಟ್ಟು ತಮಾಷೆ ನೋಡುವವರಿಗೆ ಕಿಚ್ಚನ ಈ ಉತ್ತರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    `ವಿಕ್ರಾಂತ್ ರೋಣ’ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಸುದೀಪ್ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಯಶ್ ಕುರಿತು ಮಾತನಾಡಿದ ಕಿಚ್ಚನ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಿರೂಪಕ, ನೀವು ಯಶ್ ಅವರನ್ನ ಯಾವುದೇ ಕಾರ್ಯಕ್ರಮ ಪರಿಚಯಿಸಬೇಕಾದರೆ ಹೇಗೆ ಸ್ವಾಗತ ಮಾಡುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

    ಯಶ್ ಬಹಳ ಎನರ್ಜಿಟಿಕ್ ಆಕ್ಟರ್, ಅದ್ಬುತ ಕನಸುಗಾರ, ಸಾಧಕ ಎಂದಿದ್ದಾರೆ. ಈ ಪದಗಳಿಂದಲೇ  ಅವರನ್ನ ಸ್ವಾಗತಿಸುತ್ತೇನೆ ಎಂದು ಸುದೀಪ್ ಮಾತನಾಡಿದ್ದಾರೆ. ಕಿಚ್ಚನ ಈ ಮಾತು ಕೇಳಿ ಯಶ್ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ. ಈ ಮೂಲಕ ಯಶ್ ಸಾಧನೆಯ ಬಗ್ಗೆ ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದಿಂದ ಕೈತಪ್ಪಿ ಹೋಗ್ತಾರಾ ನ್ಯಾಷನಲ್ ಸ್ಟಾರ್ ಯಶ್?

    ಕನ್ನಡದಿಂದ ಕೈತಪ್ಪಿ ಹೋಗ್ತಾರಾ ನ್ಯಾಷನಲ್ ಸ್ಟಾರ್ ಯಶ್?

    ಕೆಜಿಎಫ್ 2 ಸಿನಿಮಾದ ಯಶಸ್ಸಿನ ನಂತರ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ರಾಶಿ ರಾಶಿ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಅವರ ಮುಂದಿನ ಸಿನಿಮಾ ನರ್ತನ್ ಮಾಡಲಿದ್ದಾರೆ ಎನ್ನುವುದರಿಂದ ಹಿಡಿದು, ಅವರು ತಮಿಳು ನಿರ್ದೇಶಕ ಶಂಕರ್ ಅವರ ಚಿತ್ರಕ್ಕೂ ಸಹಿ ಮಾಡಿದ್ದಾರೆ ಎನ್ನುವತನಕ ಸುದ್ದಿಗಳಿವೆ. ಆದರೆ, ಯಶ್ ಈವರೆಗೂ ಹೊಸ ಸಿನಿಮಾದ ಬಗ್ಗೆ ತುಟಿ ಬಿಚ್ಚಿಲ್ಲ.

    ಈಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಸುದ್ದಿ ಹರಡಿದೆ. ಸದ್ಯಕ್ಕೆ ನರ್ತನ್ ಅವರ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲವಾದ್ದರಿಂದ ಅವರು ತಮಿಳು ನಿರ್ದೇಶಕರಿಗೆ ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ ಈ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನುವ ಸುದ್ದಿಯೂ ಜೊತೆಗಿದೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

    ನರ್ತನ್ ಜೊತೆ ಮಾಡಬೇಕಿದ್ದ ಸಿನಿಮಾವನ್ನು ಈ ತಮಿಳು ನಿರ್ದೇಶಕರ ಸಿನಿಮಾ ನಂತರ ಮಾಡಲಿದ್ದಾರಂತೆ ಯಶ್. ಅಲ್ಲಿವರೆಗೂ ನರ್ತನ್ ಬೇರೆ ನಟರಿಗೆ ಸಿನಿಮಾ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆ ತಮಿಳು ನಿರ್ದೇಶಕ ಕಂಡಿತಾ ಶಂಕರ್ ಅಲ್ಲವಂತೆ. ಆದರೆ, ಶಂಕರ್ ಅವರಷ್ಟೇ ಖ್ಯಾತಿ ಪಡೆದ ನಿರ್ದೇಶಕರು ಯಶ್ ಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಯಶ್ ಏನು ಸ್ಪಷ್ಟನೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]