Tag: Kerebete

  • ಐವತ್ತರ ಸಂಭ್ರಮದಲ್ಲಿ ಕೆರೆಬೇಟೆ: ನೆಲದ ಘಮಲಿನ ಕಥೆಗೆ ಜೈ ಹೋ

    ಐವತ್ತರ ಸಂಭ್ರಮದಲ್ಲಿ ಕೆರೆಬೇಟೆ: ನೆಲದ ಘಮಲಿನ ಕಥೆಗೆ ಜೈ ಹೋ

    ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದ ಕೆರೆಬೇಟೆ (Kerebete) ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟಗಳು ಒಂದೆರಡಲ್ಲ. ಇಲ್ಲಿ ನೋಡಿದವರಿಗೆಲ್ಲ ಇಷ್ಟವಾದ ಚಿತ್ರವೊಂದನ್ನು ಉಳಿಸಿಕೊಳ್ಳುವುದು ಅದೆಷ್ಟು ಕಷ್ಟ ಎಂಬುದಕ್ಕೆ ಈ ಸಿನಿಮಾ ಕಣ್ಣೆದುರಿನ ಉದಾಹರಣೆ. ಬಹುಶಃ ಬೇರೆ ಯಾರೇ ಆಗಿದ್ದರೂ ಕೆರೆಬೇಟೆ ಬಿಡುಗಡೆಗೊಂಡ ಎರಡನೇ ವಾರದ ಹೊತ್ತಿಗೆಲ್ಲ ಕಣ್ಮರೆಯಾಗುತ್ತಿತ್ತು. ಆದರೆ ನಾಯಕ ನಟ ಗೌರಿಶಂಕರ್, ನಿರ್ಮಾಪಕ ಜೈಶಂಕರ್ ಹಾಗೂ ನಿರ್ದೇಶಕ ರಾಜ್ ಗುರು ಅವಿರತವಾಗಿ ಪ್ರಯತ್ನಿಸಿದ್ದಾರೆ. ಜಿದ್ದಿಗೆ ಬಿದ್ದಂತೆ ಪ್ರೇಕ್ಷಕರನ್ನು ತಲುಪುತ್ತಾ, ಸಿನಿಮಾ ಮಂದಿರಗಳಲ್ಲಿ ಉಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿಯೇ ಇದೀಗ ಕೆರೆಬೇಟೆ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿಕೊಂಡಿದೆ.

    ಒಂದು ಅಚ್ಚುಕಟ್ಟಾದ ಕಾರ್ಯಕ್ರಮದ ಮೂಲಕ ಐವತ್ತು ದಿನ ದಾಟಿದ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಸಿನಿಮಾ ಭಾಗವಾಗಿ ಕಾರ್ಯನಿರ್ವಹಿಸಿದವರಿಗೆಲ್ಲ ನೆನಪಿನ ಕಾಣಿಕೆ ಕೊಡುವ ಮೂಲಕ ಅರ್ಥವತ್ತಾದ ನಡೆ ಅನುಸರಿಸಲಾಗಿದೆ. ಇದೇ ವೇದಿಕೆಯಲ್ಲಿ ಗೌರಿಶಂಕರ್ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮ ಬ್ಯಾನರಿನಲ್ಲಿ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಅಂದಿದ್ದಾರೆ. ಈ ಅವಧಿಯಲ್ಲಿ ಒಳ್ಳೆ ನಿರ್ದೇಶನ, ಕಥೆ, ಒಂದೊಳ್ಳೆ ಬ್ಯಾನರ್ ಸಿಕ್ಕರೆ ನಾಯಕ ನಟನಾಗಿ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ರಾಜಹಂಸದಿಂದ ಇಲ್ಲೀವರೆಗೆ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮಾಸೆಯಂತೆ ನಟನಾಗಿ ಮುಂದುವರೆಯಲು ಅವರು ತೀರ್ಮಾನಿಸಿದ್ದಾರೆ. ಈ ಐವತ್ತು ದಿನಗಳ ಮೈಲಿಗಲ್ಲು ತಲುಪಿಕೊಂಡ ಯಾನ ಸಾಮಾನ್ಯದ್ದೇನಲ್ಲ. ಗೌರಿಶಂಕರ್ ಕೆರೆಬೇಟೆಯನ್ನು ಸೋಲಲು ಬಿಡದಂತೆ ಶಕ್ತಿ ಮೀರಿ ಶ್ರಮಿಸಿದ್ದರು. ಅವರ ಒಂದೊಂದು ಪಟ್ಟುಗಳೂ ಕೂಡಾ ಪ್ರೇಕ್ಷಕರನ್ನು ಮುಟ್ಟಿ ಮೋಡಿ ಮಾಡಿದ್ದು ಸತ್ಯ. ಒಂದು ಸಮಸ್ಯೆ ಬಗೆಹರಿದಾಕ್ಷಣವೇ ಮತ್ತೊಂದು ಸವಾಲೆದುರಾಗೋ ಸ್ಥಿತಿಯನ್ನೆಲ್ಲ ಚಿತ್ರತಂಡ ಒಗ್ಗಟ್ಟಿನಿಂದ ಎದುರಿಸಿದೆ. ಈ ಕಾರಣದಿಂದಲೇ ಐವತ್ತರ ಸಂಭ್ರಮ ಸಾಧ್ಯವಾಗಿದೆ.

    ಕನ್ನಡ ಚಿತ್ರರಂಗದಲ್ಲೀಗ ಪ್ರತಿಕೂಲ ವಾತಾವರಣವಿದೆ. ಅದೆಲ್ಲವನ್ನೂ ಹೇಗೆ ಅವುಡುಗಚ್ಚಿ ಎದುರಿಸಬೇಕು, ಜೈಸಿಕೊಳ್ಳಬೇಕೆಂಬುದಕ್ಕೆ ಕೆರೆಬೇಟೆ ಚಿತ್ರತಂಡ ತಾಜಾ ಉದಾಹರಣೆಯಾಗಿ ಕಾಣಿಸುತ್ತದೆ. ಇದೆಲ್ಲವೂ ಸಾಧ್ಯವಾಗಿದ್ದರ ಹಿಂದಿರೋದು ಈ ಸಿನಿಮಾದೊಳಗಿರುವ ಗಟ್ಟಿ ಕಂಟೆಂಟಿನ ಕಾರಣದಿಂದಲೇ. ಮಲೆನಾಡಿನ ಅಸ್ಮಿತೆಯಂತಿರೋ ಕೆರೆಬೇಟೆಯೆಂಬ ಆಚರಣೆಯ ಸುತ್ತ ರೂಪುಗೊಂಡ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಡೆಗೂ ಸೋಲು ಗೆಲುವಿನಾಚೆಗೆ ಒಂದೊಳ್ಳೆ ಚಿತ್ರವಾಗಿ ಕೆರೆಬೇಟೆ ದಾಖಲಾಗಿದೆ. ಕಷ್ಟಪಟ್ಟು ಇದೆಲ್ಲವನ್ನೂ ಸಾಧ್ಯವಾಗಿಸಿಕೊಂಡ ಚಿತ್ರತಂಡವನ್ನು ಅಭಿನಂದಿಸದಿರಲು ಸಾಧ್ಯವೇ?

     

    ಜನಮನ ಟಾಕೀಸ್ ಮೂಲಕ ಜೈಶಂಕರ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಘಶಕರಾಗಿ ಬರವಸೆ ಮೂಡಿಸಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ತನ್ನೊಳಗಿನ ಕಸುವು, ಕೊಂಚವೂ ಆಚೀಚೆ ಕದಲದ ಶತಪ್ರಯತ್ನಗಳಿಂದಲೇ ಕೆರೆಬೇಟೆ ಐವತ್ತು ದಿನಗಳನ್ನು ದಾಟಿಕೊಂಡಿದೆ.

  • ನೆಲದ ಘಮಲಿನ ಕಥೆಯೊಂದಿಗೆ ‘ಕೆರೆಬೇಟೆ’ಗಿಳಿದ ಡೈರೆಕ್ಟರ್ ರಾಜ್ ಗುರು

    ನೆಲದ ಘಮಲಿನ ಕಥೆಯೊಂದಿಗೆ ‘ಕೆರೆಬೇಟೆ’ಗಿಳಿದ ಡೈರೆಕ್ಟರ್ ರಾಜ್ ಗುರು

    ಒಂದು ಸಿನಿಮಾ ಬಿಡುಗಡೆಯ ಅಂಚಿಗೆ ಬಂದು ನಿಂತಿದೆಯೆಂದರೆ ಅದರ ಹಿಂದೆ ಹತ್ತಾರು ಜನರ ಶ್ರಮ, ಕನಸು, ಶ್ರದ್ಧೆಗಳಿರುತ್ತವೆ. ವಾರವೊಂದಕ್ಕೆ ದಂಡಿ ದಂಡಿ ಸಿನಿಮಾಗಳು ತೆರೆಗಾಣುತ್ತಿರುವ ಈ ಹೊತ್ತಿನಲ್ಲಿ ಅದರ ಭಾಗವಾಗಿರುವವರ ಖಾಸಗೀ ಕಥೆ ಕೇಳಲು, ಬೆನ್ತಟ್ಟಿ ಪ್ರೋತ್ಸಾಹಿಸಲು ಯಾರಿಗೂ ಪುರಸೊತ್ತಿಲ್ಲ. ಸೋಲು ಗೆಲುವುಗಳಾಚೆಗೆ ಒಂದು ಸಿನಿಮಾದ ಹಿಂದೆ ಹತ್ತಾರು ಮನಮುಟ್ಟುವ ಕಥೆಗಳಿರುತ್ತವೆ. ಕಡುಗಷ್ಟ ಸುತ್ತಿಕೊಂಡರೂ ಇಡೀ ಬದುಕನ್ನು ಕನಸಿಗೋಸ್ಕರವೇ ಪಣಕ್ಕಿಟ್ಟಂತೆ ಬದುಕುವ ಅಪರೂಪದ ವ್ಯಕ್ತಿತ್ವಗಳೂ ಸಿನಿಮಾಗಳ ಹಿನ್ನೆಲೆಯಲ್ಲಿರುತ್ತವೆ. ಅಂಥಾದ್ದೊಂದು ಸಿನಿಮಾ ವ್ಯಾಮೋಹವಿಟ್ಟುಕೊಂಡು ಹದಿನೇಳು ವರ್ಷಗಳ ಕಾಲ ಶತಪ್ರಯತ್ನ ನಡೆಸಿ, ಹಂತ ಹಂತವಾಗಿ ಪಳಗಿಕೊಂಡು `ಕೆರೆಬೇಟೆ’ (Kerebete) ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದವರು ರಾಜ್ ಗುರು.

    ಇದೀಗ ಎಲ್ಲ ದಿಕ್ಕುಗಳಲ್ಲಿಯೂ ಕೆರೆಬೇಟೆಯ ಬಗ್ಗೆ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಬಿಡುಗಡೆಗೆ ದಿನಗಣನೆ ಶುರುವಾಗಿರುವ ಈ ಹೊತ್ತಿನಲ್ಲಿ ಸಿನಿಮಾ ರಂಗದವರೂ ಕೂಡಾ ನಿರ್ದೇಶಕ ರಾಜ್ ಗುರು ಕಸುಬುದಾರಿಕೆಯ ಬಗ್ಗೆ ಮೆಚ್ಚುಗೆ, ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಇನ್ನು ಪ್ರೇಕ್ಷಕರತ್ತ ಕಣ್ಣು ಹಾಯಿಸಿದರೆ ಅಲ್ಲಿಯೂ ಕೂಡಾ ಕೆರೆಬೇಟೆಯೆಡೆಗಿನ ನಿರೀಕ್ಷೆಯ ಹೊಳಪು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೆಲ್ಲದರ ಹಿಮ್ಮೇಳದಲ್ಲಿ ಖುಷಿಗೊಂಡಿರುವ ರಾಜ್ ಗುರು, ತಮ್ಮ ಇಷ್ಟೂ ವರ್ಷಗಳ ಶ್ರಮ, ಕನಸು, ಪಟ್ಟ ಪಡಿಪಾಟಲುಗಳೆಲ್ಲ ಸಾರ್ಥಕವಾಗೋ ಘಳಿಗೆ ಹತ್ತಿರಾದ ಖುಷಿಯಲ್ಲಿದ್ದಾರೆ.

    ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರಾದ ರಾಜ್ ಗುರು (Rajaguru) ಪತ್ರಿಕೋದ್ಯಮ ಪದವೀಧರರೂ ಹಾದು. ಒಂದಷ್ಟು ಕಾಲ ದಿನಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸಿದ್ದವರಿಗೆ ತನ್ನ ಬದುಕೇನಿದ್ದರೂ ಸಿನಿಮಾಕ್ಕಷ್ಟೇ ಮೀಸಲೆಂಬ ದೃಢ ನಿರ್ಧಾರ ಅಂಟಿಕೊಂಡಿತ್ತು. ಹಾಗೆ ಗಾಂಧಿನಗರದತ್ತ ಬಂದು, ಸಣ್ಣ ಪುಟ್ಟ ಅವಕಾಶಗಳಿಗೆ ಕೈಚಾಚುತ್ತಾ ಅಲೆದಾಡಿದ ದಿನಗಳು, ಅರೆಹೊಟ್ಟೆಯ ಸಂಕಟ, ಕನಿಷ್ಠ ಒಂದು ಸೂರಿಗೂ ದಿಕ್ಕಿಲ್ಲದ ಯಾತನಾಮಯ ಕ್ಷಣಗಳೆಲ್ಲವನ್ನೂ ಕಂಡುಂಡವರು ರಾಜ್ ಗುರು. ಕಡೆಗೂ 2008ರಲ್ಲಿ ತೆರೆಗಂಡಿದ್ದ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೊಲಿದಿತ್ತು. ನಿರ್ದೇಶಕ ಎ ಆರ್ ಬಾಬು ಗರಡಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿದ್ದ ರಾಜ್ ಗುರು ಆ ನಂತರ ಗೆಳೆಯ ಪವನ್ ಒಡೆಯರ್ ಜೊತೆಗೂ ಕಾರ್ಯನಿರ್ವಹಿಸಿದ್ದಾರೆ.

    ಹೀಗೆ ಹದಿನೇಳು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದ ರಾಜ್ ಗುರು ಪಾಲಿಗೆ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಅಂದರೆ ಅದೆಂಥಾದ್ದೋ ಸೆಳೆತ. ನೆಲಮೂಲದ ಕಥೆಗಳನ್ನು ಅದ್ಭುತವಾಗಿ ದೃಷ್ಯವಾಗಿಸುವ ವೆಟ್ರಿ ಮಾರನ್ ರಾಜ್ ಗುರುಗೆ ಸಾರ್ವಕಾಲಿಕ ಸ್ಫೂರ್ತಿ. ಅವರ ಹಾದಿಯಲ್ಲಿಯೇ ನೆಲದ ಕಥೆಗಳನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ಹೇಳಬೇಕೆಂಬ ಉದ್ದೇಶದಿಂದಲೇ ಅವರು, ಮಲೆನಾಡು ಸೀಮೆಯ ಕೆರೆಬೇಟೆ ಕಥೆಯನ್ನು ಸಿದ್ಧಪಡಿಸಿದ್ದರು. ಆ ನಂತರ ಮಲೆನಾಡಿನವರೇ ಆದ ಗೌರಿಶಂಕರ್ ಅವರ ತುಂಬು ಸಹಕಾರದಿಂದ ಈ ಚಿತ್ರ ಅಣಿಗೊಂಡಿದೆ. ಈ ಮೂಲಕ ತನ್ನ ವೃತ್ತಿಬದುಕು ದಿಕ್ಕು ಬದಲಿಸುತ್ತೆ, ದೊಡ್ಡ ಮಟ್ಟದ ಗೆಲುವು ಲಭಿಸುತ್ತದೆಂಬ ನಂಬಿಕೆ ರಾಜ್ ಗುರು ಅವರಲ್ಲಿದೆ.

     

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ಗೆಲುವಿನ ನಿರೀಕ್ಷೆಯೊಂದಿಗೆ ‘ಕೆರೆಬೇಟೆ’ಗಿಳಿದ ಗೌರಿಶಂಕರ್

    ಗೆಲುವಿನ ನಿರೀಕ್ಷೆಯೊಂದಿಗೆ ‘ಕೆರೆಬೇಟೆ’ಗಿಳಿದ ಗೌರಿಶಂಕರ್

    ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರ ಬಿಡುಗಡೆಗೊಳ್ಳಲು ಕೆಲ ಸಿನಿಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಒಂದೊಳ್ಳೆ ಕಥೆ, ಒಡಲಲ್ಲಿರಬಹುದಾದ ವಿಶೇಷತೆಗಳ ಮೂಲಕ ಕೆರೆಬೇಟೆಯೀಗ (Kerebete) ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇದರೊಂದಿಗೆ ಒಂದಷ್ಟು ವರ್ಷಗಳ ಅಂತರದ ನಂತರ ಗೌರಿಶಂಕರ್ ಎಸ್ ಆರ್ ಜಿ ಮತ್ತೆ ನಾಯಕನಾಗಿ, ವಿಶಿಷ್ಟ ಗೆಟಪ್ಪಿನಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಗೌರಿಶಂಕರ್ (Gowrishankar) ಪಾಲಿಗಿದು ನಿಜಕ್ಕೂ ನಿರ್ಣಾಯಕ ಚಿತ್ರ. ಒಂದೆಡೆ ನಿರ್ದೇಶನ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿ, ಮತ್ತೊಂದೆಡೆಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹಂಚಿಕೊಂಡು ನಾಯಕನಾಗಿ ನಟಿಸಿರುವ ಗೌರಿಶಂಕರ್ ಪುಷ್ಕಳ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    ಪಿಯುಸಿ ಮುಗಿಸಿಕೊಂಡಾಕ್ಷಣವೇ ಸಿನಿಮಾ ಕನಸು ಹೊತ್ತು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದವರು ಗೌರಿಶಂಕರ್. ನಟನಾಗುವ ಕನಸಿಟ್ಟುಕೊಂಡೇ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಲಾರಂಭಿಸಿದ ಅವರು ಅರಸು ಮುಂತಾದ ಹಿಟ್ ಸಿನಿಮಾಗಳ ಭಾಗವಾಗಿ ಕೆಲಸ ಮಾಡಿದ್ದಾರೆ. ಹೀಗೆ ನಿರ್ದೇಶನ ವಿಭಾಗದಲ್ಲಿದ್ದುಕೊಂಡು ಆ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದ ಗೌರಿಶಂಕರ್ ನಂತರ ನಾಲಕ್ಕು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ನಂತರ ಅಣಜಿ ನಾಗರಾಜ್ ನಿರ್ಮಾಣದ ಜೋಕಾಲಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಆ ಚಿತ್ರ ಭಾರೀ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಬಳಿಕ ಒಂದಷ್ಟು ಗ್ಯಾಪಿನ ನಂತರ ರಾಜಹಂಸ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದ ಗೌರಿಶಂಕರ್ ಅವರಿಗೆ ಮೆಚ್ಚುಗೆಯಷ್ಟೇ ಸಿಕ್ಕಿತ್ತು. ಸಿನಿಮಾ ಚೆನ್ನಾಗಿದ್ದರೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.

    ಇಂಥಾ ಹಲವಾರು ನಿರಾಸೆಗಳನ್ನು ಕಂಡೂ ಸಿನಿಮಾ ವ್ಯಾಮೋಹಕ್ಕೆ ಅಂಟಿಕೊಂಡಿರುವ ಗೌರಿಶಂಕರ್, ಅತ್ಯಂತ ಶ್ರದ್ಧೆಯಿಂದ ಪೊರೆದಿರುವ ಚಿತ್ರ ಕೆರೆಬೇಟೆ. ರಾಜ್ ಗುರು ಆರಂಭಿಕವಾಗಿ ಒಂದೆಳೆ ಕಥೆ ಹೇಳಿದಾಗಲೇ ಅದು ಗೌರಿಶಂಕರ್ ಅವರಿಗೆ ಹಿಡಿಸಿತ್ತಂತೆ. ಅದು ಮಲೆನಾಡು ಸೀಮೆಯ ಕಥೆಯಾದ್ದರಿಂದ ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ಖುದ್ದು ಅವರೇ ವಹಿಸಿಕೊಂಡಿದ್ದರು. ವರ್ಷಗಟ್ಟಲೆ ಶ್ರಮ ವಹಿಸಿ ಒಟ್ಟಿಗೆ ಕೂತು ಸ್ಕ್ರೀನ್ ಪ್ಲೇ ಸಿದ್ಧಪಡಿಸಿದ್ದರು. ಕಡೆಗೂ ಚಿತ್ರೀಕರಣದ ಅಖಾಡಕ್ಕಿಳಿದು ಅಂದುಕೊಂಡಂತೆಯೇ ಮಾಡಿ ಮುಗಿಸಿದ್ದಾರೆ. ಆ ನಂತರದಲ್ಲಿ ಹಾಡು, ಟ್ರೈಲರ್ ಗಳ ಮೂಲಕ, ಕಥೆಯ ಆತ್ಮಕ್ಕೆ ತಕ್ಕುದಾದ ಪ್ರಚಾರದ ಪಟ್ಟುಗಳ ಮೂಲಕ ಕೆರೆಬೇಟೆಯನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತಂದುಬಿಟ್ಟಿದ್ದಾರೆ.

    ಯಾವುದರಲ್ಲಿಯೂ ರಾಜಿಯಾಗದಂತೆ ರಿಚ್ ಆಗಿ ಈ ಚಿತ್ರ ಮೂಡಿಬಂದಿರುವ ಖುಷಿ ಗೌರಿಶಂಕರ್ ಅವರಿಗಿದೆ. ಕಿಚ್ಚಾ ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್, ದಿನಕರ್ ತೂಗುದೀಪ, ಡಾಲಿ ಧನಂಜಯ್, ಜಯಣ್ಣರಂಥವರೆಲ್ಲರ ತುಂಬು ಸಹಕಾರ ಸಿಕ್ಕಿರೋದರಿಂದ ಗೌರಿಶಂಕರ್ ನಿರಾಳವಾಗಿದ್ದಾರೆ. ಸದ್ಯದ ಮಟ್ಟಿಗಂತೂ ಪ್ರೇಕ್ಷಕರೆಲ್ಲರ ಈ ವಾರದ ಪ್ರಧಾನ ಆಕರ್ಷಣೆಯಾಗಿ ಕೆರೆಬೇಟೆ ಚಿತ್ರ ಕಂಗೊಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ ಗ್ರಾಮೀಣ ಭಾಗದ ಕಥೆ ಹೊಂದಿರುವ ಚಿತ್ರ ಕೆರೆಬೇಟೆ. ಇದು ಪ್ರತೀ ವರ್ಗದ ಪ್ರೇಕ್ಷಕರಿಗೂ ಬೇರೆಯದ್ದೇ ಅನುಭೂತಿ ತುಂಬಲಿದೆ. ನಿರೀಕ್ಷೆಯಿಟ್ಟು ಬಂದ ಪ್ರತೀ ಪ್ರೇಕ್ಷಕರನ್ನೂ ಸಂತೃಪ್ತಗೊಳಿಸಲಿದೆ ಎಂಬ ನಂಬಿಕೆ ಗೌರಿಶಂಕರ್ ಅವರಲ್ಲಿದೆ.

     

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ‘ಕೆರೆಬೇಟೆ’ ಅನುಭವಕ್ಕೆ ಥ್ರಿಲ್ ಆದ ಚಿಲ್ಲರ್ ಮಂಜು

    ರಾಜಗುರು ಬಿ ನಿರ್ದೇಶನದ `ಕೆರೆಬೇಟೆ’ (Kerebete) ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣಲಿದೆ. ಕನ್ನಡ ಚಿತ್ರರಂಗದಲ್ಲಿ ಅದ್ಯಾವ ತೆರನಾದ ಕ್ರೇಜ್ ಸೃಷ್ಟಿಯಾಗಿದ್ದರೂ, ಅದೆಂಥಾ ಅಲೆ ಮೂಡಿಕೊಂಡಿದ್ದರೂ ಸಹಜ ಶೈಲಿಯ ಗ್ರಾಮ್ಯ ಕಥಾನಕಗಳಿಗಾಗಿ ಕಾಯುವವರಿದ್ದಾರೆ. ಆ ಬಗೆಯ ಸಿನಿಮಾಗಳು ಅಪರೂಪಕ್ಕೊಮ್ಮೆ ಪ್ರತ್ಯಕ್ಷವಾಗಿ ದೊಡ್ಡ ಮಟ್ಟದಲ್ಲಿ ಗೆದ್ದ ಉದಾಹರಣೆಗಳೂ ಇದ್ದಾವೆ. ಆ ಸಾಲಿಗೆ ಕೆರೆಬೇಟೆ ಕೂಡಾ ದಾಖಲಾಗುವಂಥಾ ದಟ್ಟ ಸೂಚನೆಗಳು ಸದ್ಯಕ್ಕೆ ಕಾಣಿಸುತ್ತಿವೆ. ಕಥೆ ಮಾತ್ರವಲ್ಲದೇ, ಆಯಾ ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿರುವ ಪಾತ್ರ ವರ್ಗದ ವಿಚಾರದಲ್ಲಿಯೂ ಈ ಚಿತ್ರ ವಿಶೇಷತೆಗಳಿಂದ ಕೂಡಿದೆ. ಹಾಸ್ಯ ಸಂಬಂಧಿತ ಶೋಗಳಲ್ಲಿ ಪ್ರಸಿದ್ಧಿ ಪಡೆದ ಕಲಾವಿದರೂ ಇಲ್ಲಿದ್ದಾರೆ. ಅದರಲ್ಲಿ ಮಜಾ ಭಾರತ, ಗಿಚ್ಚಿಗಿಲಿಗಿಲಿ ಖ್ಯಾತಿಯ ಚಿಲ್ಲರ್ ಮಂಜು (Chillar Manju) ಕೂಡಾ ಸೇರಿಕೊಂಡಿದ್ದಾರೆ.

    ಚಿಲ್ಲರ್ ಮಂಜು ತಮ್ಮದೇ ಆದ ಶೈಲಿ, ಮ್ಯಾನರಿಸಂ, ಕಾಮಿಡಿ ಟೈಮಿಂಗ್ ಮೂಲಕ ಜನಮನ ಸೆಳೆದ ಕಲಾವಿದ. ಮಜಾ ಭಾರತ ಶೋನಿಂದ ಬಂದು, ಇತ್ತೀಚೆಗೆ ಗಿಚ್ಚಿಗಿಲಿಗಿಲಿ ಮೂಲಕವೂ ಮಂಜು ಮಜವಾದ ಕಾಮಿಡಿಯ ಕಿಚ್ಚು ಹಚ್ಚಿದ್ದಾರೆ. ಅಂಥಾ ಕಲಾವಿದ ಕೆರೆಬೇಟೆಯಲ್ಲೊಂದು ಪಾತ್ರ ನಿರ್ವಹಿಸಿದ್ದಾರೆಂದರೆ ಸಹಜವಾಗಿಯೇ ಅದರತ್ತ ಕುತೂಹಲ ಮೂಡಿಕೊಳ್ಳುತ್ತದೆ. ಈ ಸಿನಿಮಾ ಚಿತ್ರೀಕರಣ ಮತ್ತು ತಮ್ಮ ಪಾತ್ರದ ಸುತ್ತಲಿನ ಒಂದಷ್ಟು ವಿವರಗಳನ್ನು ಖುದ್ದು ಚಿಲ್ಲರ್ ಮಂಜು ಹಂಚಿಕೊಂಡಿದ್ದಾರೆ.

    ಇದೀಗ ಕಾಮಿಡಿ ಶೋಗಳ ಪ್ರಭೆಯಲ್ಲಿಯೇ ಚಿಲ್ಲರ್ ಮಮಂಜು ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂಥಾ ಕಾಮಿಡಿ ಕಾರ್ಯಕ್ರಮಗಳ ದೆಸೆಯಿಂದಲೇ ಅವರಿಗೆ ಕೆರೆಬೇಟೆಯಲ್ಲೊಂದು ಪಾತ್ರವಾಗುವ ಅವಕಾಶ ಕೂಡಿ ಬಂದಿದೆ. ಒಟ್ಟಾರೆ ಕಥೆ, ತಮ್ಮ ಪಾತ್ರದ ವಿವರಗಳನ್ನು ಕೇಳಿ ಖುಷಿಯಾಗಿ ಒಪ್ಪಿಕೊಂಡಿದ್ದ ಚಿಲ್ಲರ್, ಕೆರೆಬೇಟೆ ಅಖಾಡದಲ್ಲಿನ ಪ್ರತೀ ಕ್ಷಣಗಳನ್ನೂ ಸಂಭ್ರಮಿಸಿದ್ದಾರಂತೆ. ಅಂದಹಾಗೆ, ಇಲ್ಲಿ ಹಾಲ ಎಂಬ ಪಾತ್ರವನ್ನು ಚಿಲ್ಲರ್ ನಿರ್ವಹಿಸಿದ್ದಾರೆ. ಅದು ಸದಾ ಕಾಲವೂ ನಾಯಕನ ಜೊತೆಗಿರುವ ಪಾತ್ರ. ಮೂಲರ್ತ ಹಾನಗಲ್ ನವರಾದ ಚಿಲ್ಲರ್ ಮಂಜುಗೆ ಮಲೆನಾಡಿನ ಒಂದಷ್ಟು ಸಂಪ್ರದಾಯ, ಆಚರಣೆಗಳು ಪರಿಚಿತವಾಗಿದ್ದವು. ಇದೀಗ ಕೆರೆಬೇಟೆಯ ಮೂಲಕ ಮಲೆನಾಡು ಶೈಲಿಯ ಪಾತ್ರವಾದ ತುಂಬು ಸಂಭ್ರಮ ಅವರಲ್ಲಿದೆ.

     

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ‘ಕೆರೆಬೇಟೆ’ಗಾಗಿ ಖಾಕಿ ತೊಟ್ಟ ಸಂಪತ್ ಮೈತ್ರೇಯ

    ಸಿನಿಮಾ ಜಗತ್ತಿನಲ್ಲಿ ಬಹುಬೇಗನೆ ಅವಕಾಶ ಗಿಟ್ಟಿಸಿಕೊಂಡು, ಪ್ರಸಿದ್ಧಿ ಪಡೆಯಬೇಕೆಂಬ ಹಂಬಲ ಹೊತ್ತು ನೂಕುನುಗ್ಗಲಿನಲ್ಲಿ ನಿಂತವರು ಯಥೇಚ್ಚವಾಗಿ ಕಾಣಸಿಗುತ್ತಾರೆ. ಅಂಥಾ ಜಂಗುಳಿಯ ಇಕ್ಕೆಲದಲ್ಲಿ ತಮ್ಮದೇ ಆದ ಗುರಿ, ಗುಣಮಟ್ಟ ಕಾಯ್ದುಕೊಂಡ ಮತ್ತೊಂದು ಸಣ್ಣ ಗುಂಪೂ ಕಾಣ ಸಿಗುತ್ತದೆ. ಅದು ಯಾವ ಪಾತ್ರಕ್ಕಾದರೂ ಸೈ ಎಂಬ ನಟನಾ ಚಾತುರ್ಯವಿರುವವರ ಬಳಗ. ಸದ್ಯದ ಮಟ್ಟಿಗೆ ಆ ಬಳಗದ ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮಿರುವವರು ಸಂಪತ್ ಮೈತ್ರೇಯ (Sampath Maitreya). ರಂಗಭೂಮಿಯನ್ನೇ ಉಸಿರಾಗಿಸಿಕೊಂಡು, ಸಾಮಾಜಿಕ ಸ್ಥಿತ್ಯಂತರಗಳಿಗೆ ರಂಗದ ಮೂಲಕ ಕಣ್ಣಾಗುತ್ತಾ ಬಂದಿರುವ ಸಂಪತ್ ಮೈತ್ರೇಯ, ಗೌರಿಶಂಕರ್ ನಾಯಕನಾಗಿ ನಟಿಸಿರುವ `ಕೆರೆಬೇಟೆ’ (Kerebete) ಚಿತ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ನಟಿಸಿದ್ದಾರೆ.

    ಈವತ್ತಿಗೂ ರಂಗಭೂಮಿಯನ್ನೇ ಮೊದಲ ಆದ್ಯತೆಯಾಗಿಸಿಕೊಂಡಿರುವ ಸಂಪತ್ ಮೈತ್ರೇಯ, ಕಿರುತೆರೆ, ಹಿರಿತೆರೆ ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತರು. ಸಿನಿಮಾ ವಿಚಾರಕ್ಕೆ ಬಂದರೆ, ಅಲ್ಲಿಯೂ ಪ್ರಯೋಗಾತ್ಮಕ ಚಿತ್ರಗಳಿಗೆ, ಪಾತ್ರಗಳಿಗೆ ಮಾತ್ರವೇ ಅವರು ಮೊದಲ ಆದ್ಯತೆ ಕೊಡುತ್ತಾ ಸಾಗಿ ಬಂದಿದ್ದಾರೆ. ಕೆರೆಬೇಟೆಯಲ್ಲಿ ಬಲು ಮಹತ್ವ ಹೊಂದಿರೋ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರಕ್ಕೆ ಕಲಾವಿದರ ಅನ್ವೇಷಣೆಯಲ್ಲಿದ್ದಾಗ ಗೌರಿಶಂಕರ್ (Gowrishankar) ಮತ್ತು ನಿರ್ದೇಶಕ ರಾಜಗುರು ಅವರ ಪ್ರಧಾನ ಆಯ್ಕೆಯಾಗಿದ್ದದ್ದು ಸಂಪತ್ ಮೈತ್ರೇಯ. ಇಂಥಾದ್ದೊಂದು ಆಫರ್ ಬಂದಾಗ, ನೆಲದ ಘಮಲಿನ ಕಥೆ, ಆ ಪಾತ್ರದ ಖದರ್ ಕಂಡು ಖುಷಿಯಾಗಿಯೇ ನಟಿಸಲು ಒಪ್ಪಿಕೊಂಡಿದ್ದರಂತೆ.

    ಕೆರೆಬೇಟೆ ಮಲೆನಾಡು ಭಾಗದ ಕಥೆ ಹೊಂದಿರುವ ಚಿತ್ರ. ಈಗ ಕಾಣಿಸಿರುವಂತೆ ಪ್ರೀತಿಯ ಸುತ್ತ ಮಾತ್ರವೇ ಸುತ್ತುತ್ತದೆ ಅಂದುಕೊಳ್ಳುವಂತಿಲ್ಲ. ಮಲೆನಾಡು ಭಾಗದ ಜನಜೀವನ, ಸಂಸ್ಕøತಿ, ಬದುಕಿನ ಕ್ರಮ, ರಾಜಕೀಯ, ಸಿಟ್ಟು, ದ್ವೇಷ ಸೇರಿದಂತೆ ಅಂದಾಜಿಗೆ ನಿಲುಕದ ಅದೆಷ್ಟೋ ಅಂಶಗಳಿಂದ ಈ ಸಿನಿಮಾ ರೂಪುಗೊಂಡಿದೆ. ಅದರಲ್ಲಿ ಅತ್ಯಂತ ಮಹತ್ವದ ತನಿಖಾಧಿಕಾರಿಯ ಪಾತ್ರವನ್ನು ಸಂಪತ್ ನಿರ್ವಹಿಸಿದ್ದಾರೆ. ಒಟ್ಟಾರೆ ಕಥೆ, ಅದಕ್ಕೆ ದೃಷ್ಯ ರೂಪ ನೀಡಿರುವ ರೀತಿ ಮತ್ತು ಚಿತ್ರತಂಡದ ಅತೀವ ಸಿನಿಮಾ ಪ್ರೀತಿಯ ಬಗ್ಗೆ ಸಂಪತ್ ಅವರಲ್ಲೊಂದು ಬೆರಗಿದೆ. ಅವರೇ ಖುದ್ದಾಗಿ ಹೇಳಿಕೊಂಡಿರುವ ಒಂದಷ್ಟು ಮಾಹಿತಿಗಳನ್ನು ಆಧರಿಸಿ ಹೇಳೋದಾದರೆ, ಕೆರೆಬೇಟೆ ಅಪರೂಪದ ಗೆಲುವಿನ ರೂವಾರಿಯಾಗೋ ಲಕ್ಷಣಗಳು ದಟ್ಟವಾಗಿವೆ.

     

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ‘ಕೆರೆಬೇಟೆ’ಯಲ್ಲಿ ಕಾಮಿಡಿ ಕಿಲಾಡಿ ರಾಕೇಶ್ ಕಚಗುಳಿ

    ನೆಲಮೂಲದ ಕಥೆ ಹೊಂದಿರೋ `ಕೆರೆಬೇಟೆ’ (Kerebete) ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಫುಲ್ ಮೀಲ್ಸ್ ನಂತಿದೆ ಎಂಬ ವಿಚಾರ ಈಗಾಗಲೇ ಪಕ್ಕಾ ಆಗಿದೆ. ಮಲೆನಾಡು ಫ್ಲೇವರಿನಲ್ಲಿ ಮಿಂದೆದ್ದಂಥಾ ಕಥೆ ಮತ್ತು ಅದೇ ವಾತಾವರಣದಲ್ಲಿ ಉತ್ಪತ್ತಿಯಾದಂತಿರೋ ಕಾಮಿಡಿಯ ಸಾಥ್… ಇವಿಷ್ಟು ಅಂಶಗಳೊಂದಿಗೆ ಕೆರೆಬೇಟೆ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದೆ ಎಂಬ ನಂಬಿಕೆಯೂ ಬಲಗೊಂಡಿದೆ. ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿಯೂ ಆಯಾ ಭಾಷಾ ಶೈಲಿಗನುಗುಣವಾಗಿ ಹಾಸ್ಯಗಳಿದ್ದಾವೆ. ಆ ದಿಸೆಯಲ್ಲಿ ನೋಡಹೋದರೆ, ಮಲೆನಾಡು ಭಾಗದ ಹಾಸ್ಯಕ್ಕೆ ಬೇರೆಯದ್ದೇ ಮುದವಿದೆ. ಅದನ್ನು ಅಕ್ಷರಶಃ ಆವಾಹಿಸಿಕೊಂಡಂತಿರುವ ಪಾತ್ರಕ್ಕೆ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ (Rakesh Pujari) ಜೀವ ತುಂಬಿದ್ದಾರೆ.

    ಕಾಮಿಡಿ ಕಿಲಾಡಿಗಳು ಶೋ ಮೂಲಕ ಅನೇಕ ಕಲಾವಿದರು ಚಿತ್ರರಂಗಕ್ಕೆ, ಕಿರುತೆರೆಗೆ ಆಗಮಿಸಿದ್ದಾರೆ. ಆ ಶೋ ಮೂಲಕ ಬೆಳಕು ಕಂಡು ಸದ್ಯ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಬ್ಯುಸಿಯಾಗಿರುವವರು ರಾಕೇಶ್ ಪೂಜಾರಿ. ದಕ್ಷಿಣ ಕನ್ನಡ ಮೂಲದ ರಾಕೇಶ್ ಕಾಮಿಡಿಗೆ ಒಂದಷ್ಟು ಅಭಿಮಾನಿ ಬಳಗವಿದೆ. ಅವರೆಲ್ಲರೂ ಇದೀಗ ಕೆರೆಬೇಟೆಯತ್ತ ಕಣ್ಣಿಟ್ಟು ಕೂತಿದ್ದಾರೆ. ರಾಕೇಶ್ ಇಲ್ಲಿ ಕೋದ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಕನ ಆಸುಪಾಸಲ್ಲಿ ಸುಳಿದಾಡುತ್ತಾ, ಹೆಜ್ಜೆ ಹೆಜ್ಜೆಗೂ ನಗು ಚಿಮ್ಮಿಸುತ್ತಾ, ಒಂದಷ್ಟು ಎಡವಟ್ಟು, ತಿರುವುಗಳಿಗೆ ಕಾರಣೀಭೂತವಾಗುವ ಈ ಪಾತ್ರ ರಾಕೇಶ್ ಪಾಲಿಗೆ ಭಿನ್ನ ಅನುಭವವನ್ನು ಕಟ್ಟಿಕೊಟ್ಟಿದೆ.

    ದಕ್ಷಿಣ ಕನ್ನಡ ಮತ್ತು ಮಲೆನಾಡು ಒಂದಕ್ಕೊಂದು ಹೊಂದಿಕೊಂಡಂತಿರೋ ಪ್ರದೇಶ. ಇಲ್ಲಿನ ಸಂಸ್ಕೃತಿ, ಜನಜೀವನದಲ್ಲಿಯೂ ಸಾಮ್ಯತೆಯಿದೆ. ಆದರೆ, ಒಂದಕ್ಕೊಂದು ಅಪರಿಚಿತವಾದ ಆಚರಣೆಗಳು ಇಲ್ಲಿದ್ದಾವೆ. ಘಟ್ಟದ ಮೇಲಿನ ಅಂಥಾ ವಾತಾವರಣದ ಭಾಗವಾಗಿ, ಅದರಲ್ಲೊಂದು ಪಾತ್ರವಾಗುವ ಅವಕಾಶವನ್ನು ರಾಕೇಶ್ ಸಂಭ್ರಮಿಸಿದ್ದಾರಂತೆ. ಅದರಲ್ಲಿಯೂ ಬೇರೆಯದ್ದೇ ಚಹರೆ ಹೊಂದಿರೋ ಈ ಕಥೆ ಮತ್ತು ಅದರ ಪಾತ್ರ ಸಿನಿಮಾರಂಗದಲ್ಲಿನ ತನ್ನ ಮುಂದಿನ ಹೆಜ್ಜೆಗಳಿಗೆ ಹೊಸ ಆವೇಗ ನೀಡುತ್ತದೆಂಬ ದೃಢ ನಂಬಿಕೆ ರಾಕೇಶ್ ರಲ್ಲಿದೆ. ಈಗಾಗಲೇ, ಅನೇಕ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳನ್ನು ಮಾಡಿರುವ ರಾಕೇಶ್, ಕೋದನ ಗೆಟಪ್ಪಿನಲ್ಲಿ ಪ್ರೇಕ್ಷಕರ ಮುಂದೆ ಬರುವ ಕ್ಷಣಗಳು ಹತ್ತಿರಾಗಿವೆ.

     

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • `ಕೆರೆಬೇಟೆ’ಯ ಖಡಕ್ ಪೊಲೀಸ್: ರಂಗಭೂಮಿ ಪ್ರತಿಗೊಂದು ಅವಕಾಶ

    `ಕೆರೆಬೇಟೆ’ಯ ಖಡಕ್ ಪೊಲೀಸ್: ರಂಗಭೂಮಿ ಪ್ರತಿಗೊಂದು ಅವಕಾಶ

    ರಂಗಭೂಮಿಯಿಂದ ಬಂದ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲೊಂದು ವಿಶೇಷವಾದ ಸ್ಥಾನಮಾನವಿದೆ. ಹಾಗೆ ಬಂದ ಪ್ರತಿಭಾನ್ವಿತರು ತಮ್ಮ ನಟನೆಯ ಕಸುವಿನಿಂದಲೇ ನೆಲೆ ಕಂಡುಕೊಂಡು, ಪ್ರಸಿದ್ಧಿ ಪಡೆದದ್ದಿದೆ. ಸದ್ಯದ ಮಟ್ಟಿಗೆ ಈ ವಾರ ಬಿಡುಗಡೆಗೊಳ್ಳುತ್ತಿರುವ `ಕೆರೆಬೇಟೆ’ (Kerebete) ಚಿತ್ರದ ಮೂಲಕ ಆ ಸಾಲಿಗೆ ಸೇರ್ಪಡೆಗೊಳ್ಳುವ ತವಕದಲ್ಲಿರುವವರು ರಘು ರಾಜಾನಂದ (Raghu Rajananda). ಇದುವರೆಗೂ ರಂಗಭೂಮಿ ನಟನಾಗಿದ್ದುಕೊಂಡು, ದೇಶಾದ್ಯಂತ ನಾಟಕ ಪ್ರದರ್ಶನ ನೀಡಿದ್ದ ರಘು ಪಾಲಿಗೆ ರಾಜಗುರು ಬಿ ನಿರ್ದೇಶನದ, ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರದಲ್ಲಿ ಚೆಂದದ್ದೊಂದು ಪಾತ್ರ ಸಿಕ್ಕಿದೆ. ಇದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ರಂಗಭೂಮಿ ಪ್ರತಿಭೆಯ ಆಗಮನವಾದಂತಿದೆ.

    ನಿರ್ದೇಶಕರು ಈ ಸಿನಿಮಾದ ಸಬ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಕಟ್ಟುಮಸ್ತಾದ ಕಲಾವಿದನ ಹುಡುಕಾಟದಲ್ಲಿದ್ದಾಗ, ಅವರ ಕಣ್ಣಿಗೆ ಬಿದ್ದವರು ರಘು ರಾಜಾನಂದ. ನಟನೆಯ ಛಾತಿ ಮಾತ್ರವಲ್ಲದೇ ದೈಹಿಕವಾಗಿಯೂ ಆ ಪಾತ್ರಕ್ಕೆ ಸರಿಹೊಂದುವಂತಿದ್ದ ರಘು ರಾಜಾನಂದರಿಗೆ ಆ ಪಾತ್ರ ಮರುಮಾತಿಲ್ಲದಂತೆ ನಿಕ್ಕಿಯಾಗಿತ್ತು. ಅದು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಕೇಸೊಂದನ್ನು ಅಮೂಲಾಗ್ರವಾಗಿ ತನಿಖೆ ನಡೆಸುವ, ಒಟ್ಟಾರೆ ಸಿನಿಮಾದಲ್ಲಿ ಅನೇಕ ರೋಚಕ ತಿರುವುಗಳಿಗೆ ಕಾರಣವಾಗುವ ಆ ಪಾತ್ರ ಸಿಕ್ಕ ಖುಷಿ ರಘು ಅವರಲ್ಲಿದೆ.

    ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಯುತ್ತಿದ್ದ ಚಿತ್ರೀಕರಣದ ಚಟುವಟಿಕೆಗಳು ರಘು ರಾಜಾನಂದರ ಸಿನಿಮಾ ಯಾನಕ್ಕೆ ಮತ್ತಷ್ಟು ಅನುಭವ ಕಟ್ಟಿಕೊಟ್ಟಿದೆ. ಮೊದಲ ಕೇಳಿದ ಕಥೆ, ತನ್ನ ಕಲ್ಪನೆ ಮೀರಿ ದೃಶ್ಯರೂಪ ಧರಿಸಿದ ಪರಿ ಕಂಡು ಒಂದು ಪಾತ್ರವಾಗಿ ರಘು ಸಂಭ್ರಮಿಸಿದ್ದಾರೆ. ಇದೊಂದು ಹಿಟ್ ಚಿತ್ರವಾಗಿ ದಾಖಲಾಗುತ್ತದೆಂಬ ನಂಬಿಕೆ, ಈ ಪಾತ್ರದ ಮೂಲಕವೇ ಸಿನಿಮಾ ರಂಗದಲ್ಲಿ ತನ್ನ ಮುಂದೊಂದು ನಿಖರ ದಾರಿ ತೆರೆದುಕೊಂಡಿತೆಂಬ ನಿರೀಕ್ಷೆ ರಘು ಅವರಲ್ಲಿದೆ. ಈಗಾಗಲೇ ಹೊಸಕೋಟೆಯ ರಂಗವಿಜಯ ನಾಟಕ ತಂಡದ ಭಾಗವಾಗಿದ್ದುಕೊಂಡು ಹಲವಾರು ಪಾತ್ರಗಳನ್ನು ರಘು ನಿರ್ವಹಿಸಿದ್ದಾರೆ. ಆ ಅನುಭವವನ್ನು ಒಟ್ಟುಗೂಡಿಸಿ ಕೆರೆಬೇಟೆಯಲ್ಲಿನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ತೃಪ್ತ ಭಾವವೂ ಅವರಲ್ಲಿದೆ.

     

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ‘ಕೆರೆಬೇಟೆ’ಯ ಅಖಾಡದಲ್ಲೊಬ್ಬ ಗಟ್ಟಿಗಿತ್ತಿ ಗೌರಮ್ಮ

    ‘ಕೆರೆಬೇಟೆ’ಯ ಅಖಾಡದಲ್ಲೊಬ್ಬ ಗಟ್ಟಿಗಿತ್ತಿ ಗೌರಮ್ಮ

    ಗೌರಿಶಂಕರ್ (GowriShankar) ನಾಯಕನಾಗಿ ನಟಿಸಿಒರುವ ಕೆರೆಬೇಟೆ (Kerebete) ಚಿತ್ರ ಇದೇ ಮಾರ್ಚ್ 15ರಂದು ತೆರೆಗಾಣಲಿದೆ. ಮಲೆನಾಡು ಭಾಗದಲ್ಲಿ ಘಟಿಸುವ ಗಟ್ಟಿ ಕಥೆಯನ್ನೊಳಗೊಂಡಿರುವ ಸುಳಿವಂತೂ ಈಗಾಗಲೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ರಾಜ್ ಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಪ್ರತಿಭಾನ್ವಿತ ಕಲಾವಿದರದ್ದೊಂದು ದಂಡೇ ಇದೆ. ಒಟ್ಟಾರೆ ಕಥೆ, ತಾಂತ್ರಿಕತೆ ಮುಂತಾದವುಗಳದ್ದೇ ಒಂದು ತೂಕವಾದರೆ, ಆಯಾ ಪಾತ್ರಗಳಿಗೆ ಜೀವ ತುಂಬಿರುವ ಕಲಾವಿದರು ಕೆರೆಬೇಟೆಯ ನಿಜವಾದ ಶಕ್ತಿ. ಈಗಾಗಲೇ ಕಿರುತೆರೆ, ಹಿರಿತೆರೆ ಪ್ರೇಕ್ಷಕರಿಗೆಲ್ಲ ಚಿರಪರಿಚಿತರಾಗಿರುವ ಹರಿಣಿ ಶ್ರೀಕಾಂತ್ ಕೆರೆಬೇಟೆಯ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಹರಿಣಿ (Harini) ತೊಂಭತ್ತರ ದಶಕದಿಂದೀಚೆಗೆ ನಿರಂತರವಾಗಿ ನಟಿಯಾಗಿ ಚಾಲ್ತಿಯಲ್ಲಿದ್ದುಕೊಂಡು, ಥರ ಥರದ ಪಾತ್ರಗಳ ಮೂಲಕ ಮನಗೆದ್ದವರು. ಹಲವಾರು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಸದಾ ನೆನಪಿನಲ್ಲುಳಿಯುವಂಥಾ ಪಾತ್ರಗಳಿಗೆ ಹರಿಣಿ ಜೀವ ತಗುಂಬಿದ್ದಾರೆ. ಅದರಲ್ಲಿಯೂ ಧಾರಾವಾಹಿಯಿದ್ದರೂ, ಸಿನಿಮಾವಾಗಿದ್ದರೂ ಅಮ್ಮನ ಪಾತ್ರಗಳೇ ಹರಿಣಿಯವರನ್ನು ಅರಸಿ ಬರುತ್ತವೆ. ಅದೇ ರೀತಿ ಕೆರೆಬೇಟೆ ಚಿತ್ರದಲ್ಲಿಯೂ ಅವರು ಅಮ್ಮನ ಪಾತ್ರವನ್ನೇ ನಿರ್ವಹಿಸಿದ್ದಾರೆ.

    ಹರಿಣಿ ಪಾಲಿಗೆ ಅಮ್ಮನ ಪಾತ್ರಗಳು ಮಾಮೂಲು. ಆದರೆ ಕೆರೆಬೇಟೆಯ ನಾಯಕನ ಅಮ್ಮನ ಪಾತ್ರವನ್ನು ಆವಾಹಿಸಿಕೊಂಡಿದ್ದು ಮಾತ್ರ ಅವರ ಪಾಲಿಗೆ ವಿಶಿಷ್ಟ ಅನುಭೂತಿ. ಯಾಕೆಂದರೆ, ಅದು ಮಲೆನಾಡಿನ ಗುಣಲಕ್ಷಣಗಳನ್ನು ಹೊಂದಿರುವ ಗಟ್ಟಿಗಿತ್ತಿ ಹೆಣ್ಣುಮಗಳ ಪಾತ್ರ. ನಾಯಕನ ತಾಯಿ ಗೌರಮ್ಮನ ಪಾತ್ರವನ್ನವರು ತೀವ್ರವಾಗಿ ಒಳಗಿಳಿಸಿಕೊಂಡು ನಟಿಸಿದ್ದಾರಂತೆ. ಹಾಗಂತ ಅದು ಸಲೀಸಿನ ಸಂಗತಿ ಆಗಿರಲಿಲ್ಲ. ಮಲೆನಾಡು ಸೀಮೆಯ ಒಂದಷ್ಟು ಹಿರಿಯ ಮಹಿಳೆಯರ ಹಾವಭಾವಗಳನ್ನು ಕಂಡು, ಅಭ್ಯಸಿಸಿದ ನಂತರವೇ ಹರಿಣಿ ಈ ಪಾತ್ರವಾಗಿದ್ದಾರೆ. ಇನ್ನುಳಿದಂತೆ, ಆ ಭಾಗದ ಟಿಪಿಕಲ್ ಶೈಲಿಯ ಮಲೆನಾಡು ಭಾಷೆಯನ್ನೂ ಕೂಡಾ ಹರಿಣಿ ಇಷ್ಟಪಟ್ಟು ಕಲಿತುಕೊಂಡಿದ್ದಾರಂತೆ. ಈ ಎಲ್ಲದರಿಂದಾಗಿ ಆ ಪಾತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ಹರಿಣಿ ಅವರ ಅಭಿಪ್ರಾಯ.

    ಹರಿಣಿ ಪಾಲಿಗೆ ಕೆರೆಬೇಟೆ ಚಿತ್ರವಾಗಿಯಷ್ಟೇ ಅಲ್ಲದೇ, ಭಾವನಾತ್ಮಕವಾಗಿಯೂ ವಿಶೇಷ ಸಿನಿಮಾ. ಅವರು ಮೂಲತಃ ಚಿಕ್ಕಮಗಳೂರಿನವರು. ಮಲೆನಾಡಿನಲ್ಲಿಯೇ ಅವರ ಮೂಲ ಬೇರುಗಳು ಹಬ್ಬಿಕೊಂಡಿವೆ. ಹಾಗಿದ್ದರೂ ಕೂಡಾ ಹರಿಣಿ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೆ. ತಾನು ಮಲೆನಾಡು ಮೂಲದವರೆಂಬ ಹೆಮ್ಮೆಯನ್ನು ಸದಾ ಕಾಯ್ದುಕೊಂಡು ಬಂದಿದ್ದ ಹರಿಣಿ ಪಾಲಿಗೆ ಕೆರೆಬೇಟೆಯ ಮೂಲಕ ಮಲೆನಾಡಿನ ಗರ್ಭದಲ್ಲಿಯೇ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ಇದುವರೆಗೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿದ್ದರೂ, ಕೆರೆಬೇಟೆಯ ನಾಯಕನ ಅಮ್ಮನ ಪಾತ್ರ ಹರಿಣಿ ಪಾಲಿಗೆ ವಿಶೇಷವಾಗಿ ಒಳಗಿಳಿದಿದೆ. ಇಂಥಾದ್ದೊಂದು ಅಪರೂಪದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿರುವ ತುಂಬಿ ಸಂಭ್ರಮ ಅವರಲ್ಲಿದೆ.

     

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ

  • ಕೆರೆಬೇಟೆಯ ಹಾಡು ಬಿಡುಗಡೆಗೊಳಿಸಿದರು ಅಶ್ವಿನಿ ಪುನೀತ್ ರಾಜ್‌ಕುಮಾರ್!

    ಕೆರೆಬೇಟೆಯ ಹಾಡು ಬಿಡುಗಡೆಗೊಳಿಸಿದರು ಅಶ್ವಿನಿ ಪುನೀತ್ ರಾಜ್‌ಕುಮಾರ್!

    ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete) ಚಿತ್ರ ಬಿಡುಗಡೆಗೊಳ್ಳಲು ದಿನಗಣನೆ ಶುರುವಾಗಿದೆ. ಮಲೆನಾಡು ಸೀಮೆಯ ಭಾಷಾ ಸೊಗಡು, ಅಲ್ಲಿನದ್ದೇ ವಿಶಿಷ್ಟ ಕಥೆಯನ್ನೊಳಗೊಂಡಿರುವ ‘ಕೆರೆಬೇಟೆ’ ಈ ವಾರದ ಬಹುನಿರೀಕ್ಷಿತ ಚಿತ್ರವಾಗಿ ಈಗಾಗಲೇ ದಾಖಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಅಂಥಾದ್ದೊಂದು ಭರವಸೆಯನ್ನು ಪಸರಿಸುವಲ್ಲಿ ಗೆಲುವು ಕಂಡಿದೆ. ರಾಜಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡೊಂದು ಇದೀಗ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಒಂದು ಅಚ್ಚುಕಟ್ಟಾದ ಇವೆಂಟ್ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಈ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಚಿತ್ರತಂಡವೆಲ್ಲ ಭಾಗಿಯಾಗಿದ್ದ ಈ ಇವೆಂಟ್‌ಗೆ ಪ್ರೀತಿಯಿಂದ ಆಗಮಿಸಿದ ಅಶ್ವಿನಿ ಅವರು ‘ಕಣ್ಣುಗಳೇ ಕಳೆದು ಹೋದಾಗ’ ಎಂಬ ಹಾಡನ್ನು ಲೋಕಾರ್ಪಣೆಗೊಳಿಸಿದ್ದಾರೆ. ನಂತರ ಚಿತ್ರತಂಡದೊಂದಿಗೆ ಕಲೆತು ಸಂಭ್ರಮಿಸಿದ್ದಾರೆ. ಅಶ್ವಿನಿ ಬೆಂಬಲದಿಂದಾಗಿ ಬಿಡುಗಡೆಯ ಅಂಚಿನಲ್ಲಿ ‘ಕೆರೆಬೇಟೆ’ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಹಾಡುಗಳ ಮೂಲಕವೂ ಕೆರೆಬೇಟೆ ಕುತೂಹಲ ಮೂಡಿಸಿತ್ತು. ಈಗ ಲಾಂಚ್ ಆಗಹಿರುವ ಈ ಹಾಡಂತೂ ವಿರಹದ ಉರಿಯನ್ನು ಎದೆತುಂಬಾ ಹರವಿ ಕೂತಿರುವ ಯುವ ಮನಸುಗಳನ್ನು ಒಂದೇ ಸಲಕ್ಕೆ ಸೆಳೆಯುವಂತಿದೆ.

    ಇತ್ತೀಚಿನ ದಿನಗಳಲ್ಲಿ ‘ಕಾಂತಾರ’ (Kantara) ಖ್ಯಾತಿಯ ಪ್ರಮೋದ್ ಮರವಂತೆ (Pramod Maravante) ಚಿತ್ರ ಸಾಹಿತಿಯಾಗಿ ಮಿಂಚುತ್ತಿದ್ದಾರೆ. ಈ ಹಾಡಿಗೂ ಅವರೇ ಸಾಹಿತ್ಯ ಒದಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದ ಹಾಡುಗಳ ಸಾಲಿನಲ್ಲಿ ಈ ಗೀತೆ ಬೇರೆಯದ್ದೇ ಸ್ಥಾನ ಗಿಟ್ಟಿಸಿಕೊಳ್ಳುವಷ್ಟು ಶಕ್ತವಾಗಿ ಮೂಡಿ ಬಂದಿದೆ. ಮತ್ತೆ ಮತ್ತೆ ಗುನುಗಿಸಿಕೊಳ್ಳುವ ಛಾತಿ ಇರುವ ಈ ಹಾಡಿನ ಬಗ್ಗೆ ಮೆಚ್ಚುಗೆಯೂ ಮೂಡಿಕೊಳ್ಳಲಾರಂಭಿಸಿದೆ. ಒಟ್ಟಾರೆಯಾಗಿ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವ ಈ ಹೊತ್ತಿನಲ್ಲಿ, ಈ ಹಾಡಿನೊಂದಿಗೆ ಕೆರೆಬೇಟೆಯೆಡೆಗಿನ ಕೌತುಕ ಮತ್ತಷ್ಟು ತೀವ್ರಗೊಂಡಿದೆ.

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, `ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ಕಿಚ್ಚ ಸುದೀಪ್ ಮೆಚ್ಚಿದ ‘ಕೆರೆಬೇಟೆ’ ಟ್ರೈಲರ್

    ಕಿಚ್ಚ ಸುದೀಪ್ ಮೆಚ್ಚಿದ ‘ಕೆರೆಬೇಟೆ’ ಟ್ರೈಲರ್

    ನೆಲಮೂಲದ ಕಥಾನಕದ ಸುಳಿವಿನೊಂದಿಗೆ ಮೂಡಿ ಬಂದಿರುವ ಕೆರೆಬೇಟೆ (Kerebete) ಟ್ರೈಲರ್ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದೆ. ಸಾಮಾನ್ಯವಾಗಿ, ಒಂದಿಡೀ ಚಿತ್ರದ ಆತ್ಮವನ್ನು ಕೆಲವೇ ನಿಮಿಷಗಳಲ್ಲಿ ಕಾಣಿಸಿ, ಆಸಕ್ತಿ ಮೂಡಿಸೋದು ಸವಾಲಿನ ಸಂಗತಿ. ಕೆರೆಬೇಟೆ ಚಿತ್ರತಂಡ ಅದರಲ್ಲಿ ಯಶ ಕಂಡಿದೆ. ವಿಶೇಷವೆಂದರೆ, ಇದೀಗ ಕಿಚ್ಚಾ ಸುದೀಪ್ ಕೆರೆಬೇಟೆ ಟ್ರೈಲರ್ ವೀಕ್ಷಿಸಿದ್ದಾರೆ. ಅದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಗೆಲುವಾಗಲೆಂದು ಶುಭ ಹಾರೈಸಿದ್ದಾರೆ.

    ಈ ಸಿನಿಮಾವನ್ನು ರೂಪಿಸಿರುವ ಶೈಲಿಯನ್ನು ಮೆಚ್ಚಿಕೊಂಡಿರುವ ಕಿಚ್ಚಾ ಸುದೀಪ್, ಟ್ರೈಲರ್ ನೋಡಿದ ಮೇಲೆ ಈ ಸಿನಿಮಾದಲ್ಲಿ ಏನೋ ಇದೆ ಎಂಬ ಭರವಸೆ ಮೂಡಿಕೊಳ್ಳುತ್ತೆ ಎಂದಿದ್ದಾರೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಚೆಂದದ ಕಂಟೆಂಟು ಹೊಂದಿರುವ ಚಿತ್ರವಾಗಿಯೂ ಕೆರೆಬೇಟೆ ಗಮನ ಸೆಳೆಯುತ್ತದೆ. ಟ್ರೈಲರ್ ಮೂಲಕವೇ ಇಂಥಾದ್ದೊಂದು ಕುತೂಹಲ ಹುಟ್ಟುಹಾಕಿರೋದು ಮೆಚ್ಚುವಂಥಾ ಸಂಗತಿ ಎನ್ನುತ್ತಲೇ, ನಿರ್ಮಾಪಕ ಜೈಶಂಕರ್, ನಾಯಕ ನಟ ಗೌರಿಶಂಕರ್ (Gowrishankar), ನಿರ್ದೇಶಕ ರಾಜ್‍ಗುರು ಸೇರಿದಂತೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ಕಿಚ್ಚಾ ಸುದೀಪ್ (Sudeep) ಅವರ ಈ ಮೆಚ್ಚುಗೆಯ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿವೆ. ಈಗಾಗಲೇ ಚಿತ್ರತಂಡ ಹೊಸಾ ಕಾನ್ಸೆಪ್ಟಿನೊಂದಿಗೆ ರಾಜ್ಯದ ಉದ್ದಗಲಕ್ಕೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಚಿತ್ರದ ಆಂತರ್ಯಕ್ಕನುಗುಣವಾಗಿ, ಮಲೆನಾಡಿನ ಶೈಲಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಚಿತ್ರತಂಡಕ್ಕೆ ಎಲ್ಲೆಡೆಯೂ ಉತ್ತಮ ಸ್ವಾಗತ, ಪ್ರತಿಕ್ರಿಯೆ ಸಿಗುತ್ತಿದೆ. ಒಟ್ಟಾರೆಯಾಗಿ ಬಿಡುಗಡೆಯ ಅಂಚಿನಲ್ಲಿ ಕೆರೆಬೇಟೆಯ ಸುತ್ತೆಲ್ಲ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಸುದೀಪ್ ಅವರ ಮೆಚ್ಚುಗೆಯ ಮಾತುಗಳಂತೂ ಮತ್ತಷ್ಟು ಪ್ರೇಕ್ಷಕರು ಕೆರೆಬೇಟೆಯಲ್ಲ ಕುತೂಹಲದ ಕಣ್ಣಿಡುವಂತೆ ಮಾಡಿದೆ.

    ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ.

     

    ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.