Tag: kerala

  • ಝೀರೋ ಆ್ಯಂಗಲ್ ಗೋಲ್ ಹೊಡೆದು ನೆಟ್ಟಿಗರ ಹುಬ್ಬೇರಿಸಿದ 10ರ ಪೋರ

    ಝೀರೋ ಆ್ಯಂಗಲ್ ಗೋಲ್ ಹೊಡೆದು ನೆಟ್ಟಿಗರ ಹುಬ್ಬೇರಿಸಿದ 10ರ ಪೋರ

    ತಿರುವನಂತಪುರಂ: ಕೇರಳದ 10 ವರ್ಷದ ಫುಟ್ಬಾಲ್ ಆಟಗಾರ ಝೀರೋ ಆ್ಯಂಗಲ್ ಗೋಲ್ ಹೊಡೆಯುವ ಮೂಲಕ ಫುಟ್ಬಾಲ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

    ಕೇರಳದ ಫುಟ್ಬಾಲ್ ಆಟಗಾರ ಡ್ಯಾನಿ ಗೋಲ್ ದಾಖಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಡ್ಯಾನಿ ತಾಯಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಮಾಜಿ ಫುಟ್ಬಾಲ್ ಆಟಗಾರ ಐ.ಎಂ.ವಿಜಯನ್ ಕೂಡ ವಿಡಿಯೋ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮೀನಂಗಡಿಯಲ್ಲಿ ಆಲ್ ಕೇರಳ ಕಿಡ್ಸ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯ ಫೆಬ್ರವರಿ 9ರಂದು ನಡೆದಿತ್ತು. ಈ ಪಂದ್ಯದಲ್ಲಿ ಕೇರಳ ಫುಟ್ಬಾಲ್ ತರಬೇತಿ ಕೇಂದ್ರ (ಕೆಎಫ್‍ಟಿಸಿ) ಪರ ಆಡಿದ ಡ್ಯಾನಿ ಹ್ಯಾಟ್ರಿಕ್ ಗೋಲ್ ಗಳಿಸಿದರು.

    ಟೂರ್ನಿಯಲ್ಲಿ ಡ್ಯಾನಿ 13 ಗೋಲು ಗಳಿಸಿದ್ದು, ಅವರನ್ನು ಟೂರ್ನಿಯ ಶ್ರೇಷ್ಠ ಆಟಗಾರ ಎಂದು ಆಯ್ಕೆ ಮಾಡಲಾಯಿತು. ವಿಡಿಯೋವನ್ನು ನೋಡಿದ ನೆಟ್ಟಿಗರು, ಬಾಲಕ ಡ್ಯಾನಿ ಅವರನ್ನು ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ ಹೋಲಿಸಿದ್ದಾರೆ.

    ಐ.ಎಂ.ವಿಜಯನ್ ಅವರು ಟ್ವೀಟ್ ಮಾಡಿದ ಬಾಲಕ ಡ್ಯಾನಿ ವಿಡಿಯೋವನ್ನು 20,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 490ಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಜೊತೆಗೆ ನೆಟ್ಟಿಗರು ಡ್ಯಾನಿಯನ್ನು ಹೊಗಳಿದ್ದಾರೆ. ಭಾರತೀಯ ಫುಟ್‍ಬಾಲ್‍ಗೆ ಇದರ ಬಗ್ಗೆ ಹೆಚ್ಚು ಪ್ರಜ್ಞೆ ಇಲ್ಲ. ಬಹುಶಃ ಅವರು ಈ ವೀಡಿಯೊವನ್ನು ನೋಡುವ ಮೂಲಕ ಸ್ಫೂರ್ತಿ ಪಡೆದುಕೊಳ್ಳುತ್ತಾರೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

    https://twitter.com/IMVijayan1/status/1227129072322375680

  • ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ಒಲಿಯಿತು 12 ಕೋಟಿ ರೂ. ಬಂಪರ್ ಲಾಟರಿ

    ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ಒಲಿಯಿತು 12 ಕೋಟಿ ರೂ. ಬಂಪರ್ ಲಾಟರಿ

    – ಬಡತನದಿಂದ ಬಳಲುತ್ತಿದ್ದ ಕುಟುಂಬದ ಕೈಹಿಡಿದ ಲಾಟರಿ
    – ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿ ಆದ ಕೋಟ್ಯಧಿಪತಿ

    ತಿರುವನಂತಪುರಂ: ಹಣವಿಲ್ಲದೆ ಸಾಲ ಪಡೆಯಲು ಬ್ಯಾಂಕಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 12 ಕೋಟಿ ರೂ. ಲಾಟರಿ ಹೊಡೆದು ಕೋಟ್ಯಧಿಪತಿ ಆಗಿದ್ದಾರೆ.

    ಕೇರಳದ ಕುರುಚಿಯಾ ರಾಜನ್ ಅವರಿಗೆ 12 ಕೋಟಿ ರೂ. ಲಾಟರಿ ಹೊಡೆದಿದೆ. ಹಿಂದೆ ಮೂರು ಬಾರಿ ಮಾಡಿದ್ದ ಸಾಲ ಇನ್ನೂ ತೀರಿಸಿರಲಿಲ್ಲ, ಆದರೆ ಹಣ ಅವಶ್ಯಕತೆ ಇದ್ದ ಕಾರಣಕ್ಕೆ ನಾಲ್ಕನೇ ಬಾರಿಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ರಾಜನ್ ಹೋಗುತ್ತಿದ್ದರು. ಆದರೆ ಬ್ಯಾಂಕಿಗೆ ಹೋಗುವ ದಾರಿಯಲ್ಲೇ ರಾಜನ್ ಕೋಟ್ಯಧಿಪತಿ ಆಗಿದ್ದಾರೆ.

    ತಮ್ಮ ಮನೆಯ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದ್ದ ಕಾರಣಕ್ಕೆ ರಾಜನ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅಲ್ಲದೆ ತಮ್ಮ ಮಗಳ ಮದುವೆಗೂ ಕೂಡ ಸಾಲ ಮಾಡಿದ್ದರು. ಆದರೆ ನಾಲ್ಕನೇ ಬಾರಿಗೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋಗುವ ಮುನ್ನ 300 ರೂ. ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ.

    ನಾನು ಯಾವಾಗಲೂ ಲಾಟರಿ ಖರೀದಿಸುತ್ತಿರುತ್ತೇನೆ ಎಂದು ನನ್ನ ಪತ್ನಿ ನನ್ನ ಜೊತೆ ಜಗಳವಾಡುತ್ತಿದ್ದಳು. ಅದಕ್ಕೆ ನಾನು ಲಾಟರಿ ಖರೀದಿಸಿದ್ದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆದರೆ ಮಂಗಳವಾರ ಬೆಳಗ್ಗೆ ಕುತೂಹಲದಿಂದ ಕಾಯುತ್ತಿದ್ದೆ. ಆಗ ನಾನು ಖರೀದಿಸಿದ ಲಾಟರಿ ಉಪಯೋಗಕ್ಕೆ ಬಂದಿದ್ದು, ಹಣವಿಲ್ಲದೆ ಸಾಲ ಪಡೆಯಲು ಹೋಗುತ್ತಿದ್ದ ನನಗೆ ಕೋಟಿಗಟ್ಟಲೆ ಹಣ ಸಿಕ್ಕಿದೆ ಎಂದರು.

    ಲಾಟರಿಯಿಂದ ಹಣ ಬಂದಿದ್ದರಿಂದ ನನಗೆ ಸಿಕ್ಕಾಪಟ್ಟೆ ಸಂತೋಷವಾಗಿದೆ ಎಂದು ರಾಜನ್ ಹೀಳಿದ್ದರು. ಈ ಬಗ್ಗೆ ಕುಟುಂಬಸ್ಥರಿಗೆ ತಿಳುತ್ತಿದ್ದಂತೆ ಖುಷಿಯಾಗಿದೆ ಎಂದು ರಾಜನ್ ಅವರ ಕುಟುಂಬವೂ ಸಂತೋಷ ವ್ಯಕ್ತಪಡಿಸಿದ್ದಾರೆ.

  • ಚೀನಾದಲ್ಲಿ ಕೊರೊನಾಗೆ 908 ಮಂದಿ ಬಲಿ – ಕೇರಳದಲ್ಲೂ ಹೆಚ್ಚಿದ ಭೀತಿ

    ಚೀನಾದಲ್ಲಿ ಕೊರೊನಾಗೆ 908 ಮಂದಿ ಬಲಿ – ಕೇರಳದಲ್ಲೂ ಹೆಚ್ಚಿದ ಭೀತಿ

    ಬೀಜಿಂಗ್: ದಿನೇ ದಿನೇ ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 800 ಮಂದಿ ಚೀನಾದಲ್ಲಿ ಕೊರೊನಾಗೆ ಸಾವನ್ನಪ್ಪಿದ್ದರೆ ಈ ಸಂಖ್ಯೆ ಸೋಮವಾರ 908ಕ್ಕೆ ತಲುಪಿದೆ.

    ಭಾನುವಾರ 3 ಸಾವಿರ ಹೊಸ ಪ್ರಕರಣ ಚೀನಾದಲ್ಲಿ ದಾಖಲಾಗಿದ್ದು, ಈವರೆಗೆ ಚೀನಾದಲ್ಲಿ ಒಟ್ಟು 40 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಚೀನಾದಲ್ಲಿ ಭೀತಿ ಹೆಚ್ಚಿಸಿದ್ದು, ಈ ಬಗ್ಗೆ ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದ್ದು, ಸೋಂಕು ಹರಡದಂತೆ ನಿಗವಹಿಸುತ್ತಿದೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

    2002-2003ರಲ್ಲಿ ಸಾರ್ಸ್ ಹೆಸರಿನ ವೈರಸ್ ಚೀನಾದಲ್ಲಿ 650 ಮಂದಿಯನ್ನು ಬಲಿ ಪಡೆದಿತ್ತು. ಆದರೆ ಕೊರೊನಾ ವೈರಸ್ ಈ ದಾಖಲೆ ಮುರಿದು ತನ್ನ ಕರಾಳತೆಯನ್ನು ಮುಂದುವರಿಸಿದೆ. ಚೀನಾದಿಂದ ಸುಮಾರು 20 ಇತರೆ ರಾಷ್ಟ್ರಗಳಿಗೂ ಕೊರೊನಾ ಹರಡಿದೆ. ಈ ಹಿನ್ನೆಲೆ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಪ್ರಯಾಣಿಕರು ಮತ್ತು ಚೀನಾಗೆ ತೆರಳುವ ಪ್ರಯಾಣಿಕರ ಮೇಲೂ ನಿರ್ಬಂಧ ವಿಧಿಸಲಾಗಿದ್ದು, ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಈ ಸೋಂಕಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಶೀಘ್ರವೇ ಚೀನಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದ್ದು, ಈ ಭೀಕರ ವೈರಸ್‍ಗೆ ಔಷಧ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ.

    ಕೇರಳದಲ್ಲೂ ಕೊರನಾ ಭೀತಿ:
    ಕೇರಳದಲ್ಲೂ ಕೊರೊನಾ ವೈರಸ್ ಭೀತಿ ಮುಂದುವರಿದಿದೆ. 3,252 ಮಂದಿಯನ್ನು ಪರಿಶೀಲನೆಯಲ್ಲಿ ಇಡಲಾಗಿದೆ. ಕೊರೊನಾ ವೈರಸ್ ಭೀತಿ ತಗುಲಿದೆ ಎಂದು ಹೇಳಲಾದ 345 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 326 ಮಂದಿಗೆ ಕೊರನಾ ವೈರಸ್ ಸೋಂಕು ತಗುಲಿಲ್ಲ ಎನ್ನುವುದು ಧೃಡಪಟ್ಟಿದೆ. ಇದನ್ನೂ ಓದಿ: ಕೊರೊನಾ ವೈರಸ್‍ನಿಂದ ಆಸ್ಪತ್ರೆ ಸೇರಿದ ತಂದೆ – ಹಸಿವಿನಿಂದ ಬಳಲಿ ಶವವಾದ ವಿಶೇಷಚೇತನ ಮಗ

    ಔಷಧಿ ಕಂಡುಹಿಡಿಯುತ್ತಿರುವ ಭಾರತೀಯ ವಿಜ್ಞಾನಿ:
    ಆಸ್ಟ್ರೇಲಿಯಾದ ಪ್ರಮುಖ ವೈಜ್ಞಾನಿಕ ಸಂಸ್ಥೆಯಾದ ಸಿಎಸ್‍ಐಆರ್‍ಓ(ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ)ಯಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ನೇತೃತ್ವವನ್ನು ಭಾರತೀಯ ವಿಜ್ಞಾನಿ ಎಸ್.ಎಸ್ ವಾಸನ್ ವಹಿಸಿದ್ದಾರೆ. ವಾಸನ್ ಅವರು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಸ್ಕಾಲರ್ ಹಾಗೂ ಬೆಂಗಳೂರಿನ ಐಐಎಸ್‍ಸಿ(ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

    ಇವರ ನೇತೃತ್ವದ ತಂಡ ಆಸ್ಟ್ರೇಲಿಯಾದ ಸಿಎಸ್‍ಐಆರ್‍ಓನಲ್ಲಿ ಚಿಕಿತ್ಸಾತ್ಮಕವಾಗಿ ಮೊದಲ ಹಂತದಲ್ಲಿ ಕೊರೊನಾ ವೈರಸ್‍ಗಳನ್ನು ಬೆಳೆಸಿದೆ. ಮಾನವ ದೇಹದಿಂದ ಪಡೆದ ಸ್ಯಾಂಪಲ್ ಕೊರೊನಾ ವೈರಸ್‍ಗಳನ್ನು ವಿನಾಶಗೊಳಿಸಲು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಎಸ್.ಎಸ್ ವಾಸನ್ ತಂಡದ ನೇತೃತ್ವದಲ್ಲೇ ಡೆಂಗ್ಯೂ, ಚಿಕನ್ ಗುನ್ಯಾ ಸೇರಿ ಹಲವು ರೋಗಗಳಿಗೆ ಔಷಧಿ ಕಂಡುಹಿಡಿಯಲಾಗಿತ್ತು.

  • ಕೊರೊನಾ ವೈರಸ್ ಆತಂಕ – ಕೊಡಗು ಜಿಲ್ಲೆಯಲ್ಲಿಯೂ ಹೈ ಅಲರ್ಟ್

    ಕೊರೊನಾ ವೈರಸ್ ಆತಂಕ – ಕೊಡಗು ಜಿಲ್ಲೆಯಲ್ಲಿಯೂ ಹೈ ಅಲರ್ಟ್

    ಮಡಿಕೇರಿ: ವಿಶ್ವಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗದಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

    ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆಯಲ್ಲಿ 6 ಬೆಡ್‍ಗಳ ವಿಶೇಷ ವಾರ್ಡ್, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲೂ ತಲಾ ಎರಡು ಬೆಡ್‍ಗಳ ಒಂದೊಂದು ವಿಶೇಷ ವಾರ್ಡ್ ಸಿದ್ಧಗೊಳಿಸಲಾಗಿದೆ. ಕೇರಳ, ಅಸ್ಸಾಂ ಸೇರಿದಂತೆ ಹೊರರಾಜ್ಯಗಳಿಂದ ಕಾರ್ಮಿಕರು ಕೊಡಗಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಕೊಡಗಿನ ಕಾಫಿ ತೋಟದ ಮಾಲೀಕರಿಗೂ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಅಲ್ಲದೆ ಕೇರಳ ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿತ 3 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಮುಂದಿನ 15 ದಿನಗಳ ಕಾಲ ಕೇರಳದಿಂದ ಯಾವುದೇ ಕಾರ್ಮಿಕರನ್ನು ಕರೆತರುವಂತಿಲ್ಲ ಮತ್ತು ಇಲ್ಲಿರುವ ಕಾರ್ಮಿಕರನ್ನು ಕಳುಹಿಸದಂತೆ ಆರೋಗ್ಯ ಇಲಾಖೆ ಸೂಚಿಸಿ, ನೋಟಿಸ್ ನೀಡಿದೆ.

    ಕೊಡಗು ಪ್ರವಾಸಿ ತಾಣಗಳ ಜಿಲ್ಲೆಯಾಗಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುವುದರಿಂದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಅರಿವು ಮೂಡಿಸಲು ಬಿತ್ತಿಪತ್ರಗಳನ್ನು, ಕರಪತ್ರಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

  • ಭಾರತಕ್ಕೂ ವಕ್ಕರಿಸಿದ ಕರೋನಾ ವೈರಸ್ ಮಹಾಮಾರಿ- ಮೊದಲ ಕೇಸ್ ದಾಖಲು

    ಭಾರತಕ್ಕೂ ವಕ್ಕರಿಸಿದ ಕರೋನಾ ವೈರಸ್ ಮಹಾಮಾರಿ- ಮೊದಲ ಕೇಸ್ ದಾಖಲು

    ನವದೆಹಲಿ: ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ದೇಶದಲ್ಲಿ ಮೊದಲ ಪ್ರಕರಣ ದಾಖಲಾಗಿದೆ.

    ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಕೇರಳ ವಿದ್ಯಾರ್ಥಿಯೊಬ್ಬನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಸದ್ಯ ಆತನಿಗೆ ಕೇರಳದ ತ್ರಿಶ್ಯೂರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

    ಭಾರತದಾದ್ಯಂತ ಸುಮಾರು 900 ಜನರು ಪರೀಕ್ಷೆಗೆ ಒಳಪಡಿಸಲಾಗಿದೆ. ಕೇರಳದಲ್ಲಿ ವೀಕ್ಷಣೆಯಲ್ಲಿರುವ 806 ಜನರಲ್ಲಿ 10 ಮಂದಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳಲ್ಲಿದ್ದರೆ, ಉಳಿದವರು ಮನೆಯಿಂದಲೇ ಆಸ್ಪತ್ರೆಗಳ ಸಂಪರ್ಕದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಕನಿಷ್ಠ 27 ಜನರನ್ನು ವೀಕ್ಷಣೆಗೆ ಒಳಪಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರಲ್ಲಿ 10 ಜನರನ್ನು ಪ್ರತ್ಯೇಕಿಸಲಾಗಿದೆ. ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ ಪಂಜಾಬ್‍ನ ಮೊಹಾಲಿಯ ನಿವಾಸಿ 28 ವರ್ಷದ ಯುವಕನನ್ನು ಚಂಡೀಗಢ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ.

    ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ತ್ರಿಪುರದ ಮುನೀರ್ ಎಂಬಾತ ಕರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ಕರೋನಾ ವೈರಸ್ ಇದುವರೆಗೂ 17 ದೇಶಗಳಿಗೆ ವ್ಯಾಪಿಸಿದ್ದು, 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 8 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಈ ಬೆನ್ನಲ್ಲೇ ಶುಕ್ರವಾರ ವುಹಾನ್‍ನಿಂದ ಭಾರತೀಯರ ಮೊದಲ ತಂಡವನ್ನು ಏರ್‌ಲಿಫ್ಟ್‌ ಮಾಡಲು ಸಕಲ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ನಡೆಸಿದೆ.

    ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಕರೋನಾ ವೈರಸ್ ದೇಶದೊಳಗೆ ಪ್ರವೇಶಿಸದಂತೆ ರಷ್ಯಾ ಮುನ್ನೆಚ್ಚೆರಿಕಾ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ರಷ್ಯಾ ಚೀನಾದೊಂದಿಗೆ ಇರುವ 2,600 ಮೈಲಿ ಗಡಿಯನ್ನು ಮುಚ್ಚುತ್ತಿದೆ.

    ಚೀನಾದ ಹುಬೈ ಪ್ರಾಂತ್ಯದ ರಾಜಧಾನಿಯಾದ ವುಹಾನ್ ಕೊರೊನಾವೈರಸ್ ಕೇಂದ್ರವಾಗಿದೆ. ಈ ವೈರಸ್ ಈಗ ವಿಶ್ವದ ಅನೇಕ ಭಾಗಗಳಲ್ಲಿ ಹರಡುತ್ತಿದೆ. ಚೀನಾದ ಕೊರೊನಾವೈರಸ್ ರೋಗದಿಂದ ರಾಷ್ಟ್ರವ್ಯಾಪಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೆ ಏರಿದ್ದು, ಹುಬೈ ಪ್ರಾಂತ್ಯದಲ್ಲಿ 38 ಸಾವುನೋವುಗಳು ವರದಿಯಾಗಿವೆ.

    ವೈರಸ್ ಹೇಗೆ ಹರಡುತ್ತದೆ?
    ಮಹಾಮಾರಿ ಕರೋನಾ ವೈರಸ್ ಹರಡುವ ನಿರ್ದಿಷ್ಟ ವಿಧಾನಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ವೈರಸ್ ಬಹುಶಃ ಮೂಲತಃ ಪ್ರಾಣಿ ಮೂಲದಿಂದ ಹೊರಹೊಮ್ಮಿದೆ. ಆದರೆ ಈಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಎಷ್ಟು ಸುಲಭವಾಗಿ ಹರಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಸೋಂಕು ತಗಲುತ್ತದೆ ಎಂದು ವರದಿಯಾಗಿದೆ.

  • ತ್ಯಾಜ್ಯ ಸುರಿಯಲು ಕರ್ನಾಟಕವನ್ನು ಡಂಪಿಂಗ್ ಯಾರ್ಡ್ ಮಾಡಿಕೊಂಡ ಕೇರಳ

    ತ್ಯಾಜ್ಯ ಸುರಿಯಲು ಕರ್ನಾಟಕವನ್ನು ಡಂಪಿಂಗ್ ಯಾರ್ಡ್ ಮಾಡಿಕೊಂಡ ಕೇರಳ

    ಮೈಸೂರು: ಕರ್ನಾಟಕದ ಗಡಿ ಗ್ರಾಮಗಳನ್ನು ಕೇರಳ ಕಸ ಹಾಕೋ ಜಾಗ ಮಾಡಿಕೊಂಡಿದ್ಯಾ? ಕೇರಳದ ಈ ಕಾರ್ಯಕ್ಕೆ ಕರ್ನಾಟಕದವರೆ ಸಾಥ್ ನೀಡುತ್ತಿದ್ದಾರಾ? ಇಂತಹ ಪ್ರಶ್ನೆಗೆ ಹೌದು ಎನ್ನುವಂತಹ ಉತ್ತರ ಸಾಕ್ಷಿ ಸಮೇತ ಸಿಕ್ಕಿದೆ.

    ಕೇರಳದ ಮೆಡಿಕಲ್ ತ್ಯಾಜ್ಯಗಳನ್ನು ಅಕ್ರಮವಾಗಿ ಲಾರಿಗಳ ಮೂಲಕ ಕರ್ನಾಟಕದ ಗಡಿ ಗ್ರಾಮಗಳಲ್ಲಿ ಸುರಿಯುತ್ತಿರುವುದು ಪತ್ತೆಯಾಗಿದೆ. ಹೀಗೆ ಕಸ ತಂದು ಸುರಿಯುತ್ತಿದ್ದ ಲಾರಿಗಳನ್ನು ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಂಜನಗೂಡಿನ ಅಡಕನಹಳ್ಳಿ ಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಮೆಡಿಕಲ್ ತ್ಯಾಜ್ಯ ಸುರಿಯಲಾಗುತ್ತಿತ್ತು. ಸುಮಾರು 2 ಟನ್‍ನಷ್ಟು ಮೆಡಿಕಲ್ ತ್ಯಾಜ್ಯ ತಂದು ಸುರಿಯುವ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಪೊಲೀಸರು ಹಿಡಿದು, 2 ಲಾರಿ ಹಾಗೂ ಟಿ.ನರಸೀಪುರದ ಮೂಲದ ಅಬ್ದುಲ್ ಜಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಐವರು ಆರೋಪಿಗಳು ಪರಾರಿಯಾಗಿದ್ದಾರೆ.

  • ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕೇರಳ ಪೊಲೀಸ್

    ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕೇರಳ ಪೊಲೀಸ್

    ತಿರುವನಂತಪುರಂ: ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ಹೇಳಿಕೆ ನೀಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಶೋಭಾ ಕರಂದ್ಲಾಜೆ ಅವರು, ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್‍ನ ಹಿಂದೂಗಳಿಗೆ ನೀರು ಸರಬರಾಜು ನಿರಾಕರಿಸಲಾಗಿದೆ. ಈ ಪ್ರದೇಶದಲ್ಲಿ ಸೇವಾ ಭಾರತಿ ನೀರು ಸರಬರಾಜು ಮಾಡುತ್ತಿದೆ ಎಂದು ಜನವರಿ 22ರಂದು ಟ್ವೀಟ್ ಮಾಡಿದ್ದರು.

    https://twitter.com/ShobhaBJP/status/1220006329768538112

    ಈ ಟ್ವೀಟ್ ಆಧರಿಸಿ ಕೇರಳ ಪೊಲೀಸರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ ಆಧಾರದವಾಗಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಕ್ಕಳ ಹುಟ್ಟುಹಬ್ಬಕ್ಕೆ ನೇಪಾಳಕ್ಕೆ ಪ್ರವಾಸ ತೆರಳಿ ಶವವಾದ ಕುಟುಂಬ

    ಮಕ್ಕಳ ಹುಟ್ಟುಹಬ್ಬಕ್ಕೆ ನೇಪಾಳಕ್ಕೆ ಪ್ರವಾಸ ತೆರಳಿ ಶವವಾದ ಕುಟುಂಬ

    ನೇಪಾಳ: ಮೂರು ಮಕ್ಕಳ ಹುಟ್ಟುಹಬ್ಬಕ್ಕೆಂದು ನೇಪಾಳಕ್ಕೆ ಪ್ರವಾಸ ತೆರಳಿದ್ದ ಕೇರಳದ ಕೊಚ್ಚಿ ಮೂಲದ ಕುಟುಂಬವೊಂದು ಹೋಟೆಲ್‍ವೊಂದರಲ್ಲಿ ದುರಂತ ಸಾವಿಗೀಡಾಗಿದೆ.

    ಮೃತರನ್ನು ತಿರುವನಂತಪುರ ನಿವಾಸಿ ಪ್ರವೀಣ್ ಮತ್ತು ಅವರ ಪತ್ನಿ ಸರಣ್ಯ ಹಾಗೂ ಅವರ ಮೂರು ಮಕ್ಕಳಾದ ಅರ್ಚ, ಶ್ರೀಭದ್ರ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ. ಈ ಮ ಮೂವರು ಮಕ್ಕಳ ವಯಸ್ಸು ಬೇರೆಯಾದರೂ ಜನವರಿ ಒಂದೇ ತಿಂಗಳಲ್ಲಿ ಮೂವರು ಜನಿಸಿದ್ದರು. ಹೀಗಾಗಿ ಅವರ ಹುಟ್ಟುಹಬ್ಬ ಆಚರಿಸಲು ನೇಪಾಳ ಪ್ರವಾಸಕ್ಕೆ ತೆರಳಿದ್ದು, ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ.

    ಜನವರಿ 3 ರಂದು ಶ್ರೀಭದ್ರ, 15 ರಂದು ಅಭಿನವ್ ಮತ್ತು 31ರಂದು ಅರ್ಚ ಹುಟ್ಟುಹಬ್ಬವಿತ್ತು. ಕೊನೆಯ ಮಗ ಅಭಿನವ್ ಎಲಮಕ್ಕರದಲ್ಲಿರುವ ಸರಸ್ವತಿ ವಿದ್ಯಾನಿಕೇತನದಲ್ಲಿ ಎಲ್‍ಕೆಜಿ ಓದುತ್ತಿದ್ದ. ಮಗಳು ಶ್ರೀಭದ್ರ ಕಳೆದ ಗುರುವಾರ ಶಾಲೆಯಿಂದ ಮನೆಗೆ ಮರಳಲು ತುಂಬಾ ಖುಷಿಯಾಗಿದ್ದಳು. ನಮ್ಮ ಡ್ಯಾಡಿ ಬಂದಿದ್ದಾರೆ. ನಾವು ನೇಪಾಳ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಒಂದು ವಾರದ ಬಳಿಕ ಊರಿಗೆ ವಾಪಸ್ ಬರುತ್ತೇವೆ ಎಂದು ಹೇಳಿದ್ದಳು ಎನ್ನಲಾಗಿದೆ.

    ಮಕ್ಕಳನ್ನು ಪ್ರತಿದಿನವು ಅವರ ತಾತ ಶಾಲೆ ಡ್ರಾಪ್ ಮಾಡುತ್ತಿದ್ದರು. ಆದರೆ ಕಳೆದ ಗುರುವಾರ ತಂದೆ ಪ್ರವೀಣ್ ತಾವೇ ಹೋಗಿ ಮಕ್ಕಳನ್ನು ಶಾಲೆಗೆ ಬಿಟ್ಟು, ಪ್ರವಾಸದ ಬಗ್ಗೆ ಶಿಕ್ಷಕರಿಗೆ ಹೇಳಿ ರಜೆ ಕೊಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ ಮಕ್ಕಳನ್ನು ಕರೆದುಕೊಂಡು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ನೇಪಾಳಕ್ಕೆ ಬಂದಿದ್ದರು. ಆದರೆ ನೇಪಾಳದ ಹೋಟೆಲ್‍ವೊಂದರಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ರೂಮಿನೊಳಗೆ ಇಡಲಾಗಿದ್ದ ಔಟ್‍ಡೋರ್ ಹೀಟರ್ ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೇವನೆಯಿಂದ ಈ ಕುಟುಂಬ ಸಾವನ್ನಪ್ಪಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

  • ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ

    ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ

    – ನೀನು ಹೇಗೆ ಇದ್ರೂ ನಾನ್ ಪ್ರೀತಿಸ್ತೀನಿ
    – ಕಣ್ಣೀರು ತರಿಸೋ ನಿಜವಾದ ಪ್ರೇಮ ಕಥೆ

    ತಿರುವನಂತಪುರಂ: ಯುವಕನೊಬ್ಬ ತನ್ನ ಶಿಕ್ಷಣದ ಕನಸನ್ನೇ ಬಿಟ್ಟು ಕೂಲಿ ಕೆಲಸ ಮಾಡಿ, ಕ್ಯಾನ್ಸರ್ ನಿಂದ ಬಳಲುತ್ತಿದ್ದ  ಪ್ರಿಯತಮೆಯನ್ನು ಗುಣಪಡಿಸಿದ್ದಾನೆ.  ಇಂದು ಈ ಪ್ರೇಮಿಗಳು ಮದುವೆಯಾಗಿ ಸಂತಸದಿಂದ ಜೀವನ ನಡೆಸುತ್ತಿದ್ದಾರೆ.

    ಕೇರಳದ ಮಲಪ್ಪೂರಂನ ಸಚಿನ್ ಮತ್ತು ಭವ್ಯಾ ಪ್ರೇಮಿಗಳು ಕ್ಯಾನ್ಸರ್ ಗೆದ್ದು ಮದುವೆಯಾಗಿದ್ದಾರೆ. ಸಚಿನ್ ಮತ್ತು ಭವ್ಯಾ ಇಬ್ಬರಿಗೂ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾಗ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದು, 8 ತಿಂಗಳವರೆಗೂ ಇವರ ಸ್ನೇಹ ಮುಂದುವರಿಯಿತು. ಆದರೆ ಇವರಿಬ್ಬರ ಸ್ನೇಹವನ್ನು ಭವ್ಯಾ ಪೋಷಕರು ಅಪಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಇನ್ಮುಂದೆ ಸಚಿನ್ ಜೊತೆ ಮಾತಾಡಬಾರದೆಂದು ಎಚ್ಚರಿಕೆ ಕೂಡ ಕೊಟ್ಟಿದ್ದರು.

    ಪೋಷಕರ ಮಾತಿಗೆ ಬೆಲೆ ಕೊಟ್ಟ ಭವ್ಯಾ, ಸಚಿನ್ ಜೊತೆ ಮಾತಾಡುವುದನ್ನು ನಿಲ್ಲಿಸಿದ್ದಳು. ಈ ವೇಳೆ ಸಚಿನ್ ಮತ್ತು ಭವ್ಯಾ ಒಬ್ಬರಿಗೊಬ್ಬರು ಬಿಟ್ಟಿರಲಾರದೆ ಮತ್ತೆ ಮಾತನಾಡಲು ಶುರು ಮಾಡಿದರು. ಆಗ ಅವರಿಬ್ಬರಿಗೆ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದು ಅರಿವಾಗಿದೆ. ನಂತರ ಮನೆಯವರಿಗೆ ತಿಳಿಯದಂತೆ ಭೇಟಿಯಾಗುತ್ತಿದ್ದರು. ಶಿಕ್ಷಣ ಮುಗಿದ ಬಳಿಕ ಭವ್ಯಾ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲವು ದಿನಗಳ ನಂತರ ಭವ್ಯಾಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಮೊದಲು ಭವ್ಯಾ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನೋವು ಹೆಚ್ಚಾದ ಕಾರಣ ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದಾಳೆ. ಆಗ ಭವ್ಯಾಗೆ ಬೆನ್ನುಮೂಳೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

    ಈ ವಿಚಾರವನ್ನು ತಿಳಿದು ಭವ್ಯಾ ದುಃಖಿತಳಾಗಿದ್ದಳು. ಆಗ ಸಚಿನ್, ಭವ್ಯಾಳಿಗೆ ಧೈರ್ಯ ತುಂಬಿದ್ದಾನೆ. ನಿನ್ನ ಜೊತೆ ನಾನಿದ್ದೇನೆ. ಹಣ ಎಷ್ಟಾದರೂ ಖರ್ಚು ಆಗಲಿ. ನಿನ್ನನ್ನು ನಾನು ಉಳಿಸಿಕೊಳ್ಳುತ್ತೇನೆ, ಭಯಪಡಬೇಡ ಎಂದು ಭರವಸೆ ನೀಡಿದ್ದಾನೆ. ಕೊನೆಗೆ ಸಚಿನ್ ಭವ್ಯಾ ಮನೆಯವರಿಗೂ ತಿಳಿಯದಂತೆ ಆಕೆಯನ್ನು ಆಸ್ಪತ್ರೆಗೆ ಪ್ರತಿವಾರ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿ, ಪ್ರಾಥಮಿಕ ಚಿಕಿತ್ಸೆ ಕೊಡಿಸುತ್ತಿದ್ದನು. ಒಂದು ದಿನ ಈ ವಿಚಾರ ಮನೆಯವರಿಗೆ ತಿಳಿದಿದೆ. ಮಗಳಿ ಕ್ಯಾನ್ಸರ್ ಇರುವ ಬಗ್ಗೆ ತಿಳಿದು ಆಘಾತಗೊಂಡಿದ್ದರು. ಕೊನೆಗೆ ಸಚಿನ್ ಒಳ್ಳೆಯ ಗುಣವನ್ನು ನೋಡಿ ಭವ್ಯಾ ಪೋಷಕರು ಮೆಚ್ಚಿಕೊಂಡಿದ್ದರು.

    ಸಚಿನ್, ಭವ್ಯಾಳನ್ನು ಬಿಟ್ಟು ಒಂದು ಕ್ಷಣವೂ ಎಲ್ಲೂ ಹೋಗುತ್ತಿರಲಿಲ್ಲ. ಸದಾ ಆಕೆಯ ಜೊತೆ ಇದ್ದುಕೊಂಡು ಧೈರ್ಯ ಹೇಳುತ್ತಿದ್ದನು. ಕೊನೆಗೆ ಕ್ಯಾನ್ಸರ್ ಇದ್ದರೂ ಕಳೆದು ವರ್ಷ ಮಾರ್ಚ್ ತಿಂಗಳಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭವ್ಯಾಗೆ ದಿನ ಕಳೆದಂತೆ ತಲೆ ಕೂದಲು ಉದುರಲು ಆರಂಭಿಸಿತು. ಆಗ ಭವ್ಯಾ ಅದನ್ನು ನೋಡಿ ನೋವು ಪಡುತ್ತಿದ್ದಳು. ಈ ವೇಳೆ ಸಚಿನ್, ಪ್ರೀತಿ ಎಂಬುದು ಮನಸ್ಸಿಗೆ ಸಂಬಂಧಿಸಿರುತ್ತದೆ. ದೈಹಿಕವಾಗಿ ಅಲ್ಲ. ನೀನು ಹೇಗೆ ಇದ್ದರೂ ಯಾವಾಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಧೈರ್ಯ ತುಂಬಿದ್ದನು.

    ಭವ್ಯಾ ತಿಂಗಳಲ್ಲಿ ಸುಮಾರು 10 ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಗಿತ್ತು. ಕೊನೆಗೆ ಸಚಿನ್ ಮತ್ತು ಭವ್ಯಾ ಸೆಪ್ಟೆಂಬರ್ ತಿಂಗಳಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಪೋಷಕರ ಅನುಮತಿ ಪಡೆದ ನಂತರ ಪ್ರೇಮಿಗಳು ಮದುವೆಯಾದರು. ನಾನು ಯಾವಾಗಲೂ ಅವಳೊಂದಿಗೆ ಇದ್ದರೆ ಸಂತೋಷವಾಗಿರುತ್ತಾಳೆ. ಹೀಗಾಗಿ ನಾನು ಮದುವೆಯಾದೆ ಎಂದು ಸಚಿನ್ ಹೇಳಿದ್ದನು.

    ಸಚಿನ್ ಸ್ನಾತಕೋತ್ತರ ಪದವಿಯನ್ನು ಮಾಡಬೇಕೆಂಬ ಕಸನು ಕಂಡಿದ್ದನು. ಆದರೆ ತನ್ನ ಪ್ರಿಯತಮೆಗಾಗಿ ಆ ಕನಸ್ಸನ್ನು ಬಿಟ್ಟು ಆಕೆಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದನು. ಆದರೆ ಭವ್ಯಾ ಚಿಕಿತ್ಸೆ ಅಧಿಕ ಹಣ ಬೇಕಾಗಿತ್ತು. ಇತ್ತ ಆಕೆಯ ಮನೆಯವರು ಆರ್ಥಿಕವಾಗಿ ದುರ್ಬಲರಾಗಿದ್ದರು. ಕೊನೆಗೆ ಅವರ ಮದುವೆಗೆ ಬಂದವರು ಹಣದ ಸಹಾಯ ಮಾಡಿದರು. ನಂತರ ಸ್ನೇಹಿತರು, ಪರಿಚಯಸ್ಥರು ಮತ್ತು ಕುಟುಂಬದವರು ಸಹಾಯ ಮಾಡಿದರು. ಕೊನೆಗೆ ಸಚಿನ್, ಭವ್ಯಾಗೆ ಉತ್ತಮ ಚಿಕಿತ್ಸೆ ಕೊಡಿಸಿದ್ದಾನೆ.

    ಇತ್ತೀಚೆಗೆ ಭವ್ಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕ್ಯಾನ್ಸರ್ ಕಾಯಿಲೆಯಿಂದ ಸುಧಾರಿಸಿಕೊಳ್ಳುತ್ತಿದ್ದಾಳೆ. “ನಮ್ಮ ಸ್ನೇಹಿತರು ನಮಗೆ ಸಾಕಷ್ಟು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಸಚಿನ್ ಮತ್ತು ಭವ್ಯಾ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

  • ಮಸೀದಿಯಲ್ಲಿ ಹಿಂದೂ ಜೋಡಿಯ ವಿವಾಹ- ಸೌರ್ಹಾದತೆಯ ಅಪರೂಪದ ಮದ್ವೆ

    ಮಸೀದಿಯಲ್ಲಿ ಹಿಂದೂ ಜೋಡಿಯ ವಿವಾಹ- ಸೌರ್ಹಾದತೆಯ ಅಪರೂಪದ ಮದ್ವೆ

    ತಿರುವನಂತಪುರಂ: ದೇಶದೆಲ್ಲೆಡೆ ಪೌರತ್ವ ಕಾಯ್ದೆಯ ಬಗ್ಗೆ ಪ್ರತಿಭಟನೆ ನಡೆಯುತ್ತಿದೆ. ಆದರೆ ಕೇರಳದಲ್ಲಿ ಹಿಂದೂ ಮತ್ತು ಮುಸ್ಲಿಂ ಸೌರ್ಹಾದತೆಯ ಒಂದು ಅಪರೂಪದ ಮದುವೆ ನಡೆದಿದೆ. ಮಸೀದಿ ಸಮಿತಿಯೊಂದು ಹಿಂದೂ ಜೋಡಿಯ ಮದುವೆಯನ್ನು ಸರಳವಾಗಿ ಮಸೀದಿಯೊಳಗೆ ಹಿಂದೂ ಸಂಪ್ರದಾಯದಂತೆ ಮಾಡಿರುವ ಅಪರೂಪದ ಘಟನೆ ನಡೆದಿದೆ.

    ವಧು ಆಶಾ ಮತ್ತು ವರ ಶರತ್ ಜೋಡಿಯ ವಿವಾಹ ಸೌಹಾರ್ದತೆಗೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಭಾನುವಾರ ಈ ಜೋಡಿಯ ಮದುವೆ ನಡೆದಿದ್ದು, ಚೇರಾವಲ್ಲಿ ಮುಸ್ಲಿಂ ಜಮಾತ್ ಮಸೀದಿ ಈ ದಂಪತಿಗೆ ಮದುವೆ ಮಾಡಿಸಿದೆ.

    ವಧು ಆಶಾ ತಂದೆ ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರಿಗೆ ಮೂವರು ಹೆಣ್ಣುಮಕ್ಕಳಿದ್ದರು. ಇವರಲ್ಲಿ ಆಶಾ ಹಿರಿಯರಾಗಿದ್ದರು. ತಂದೆಯ ಸಾವಿನಿಂದ ಈ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ವಧುವಿನ ತಾಯಿ ಬಿಂದು ಮಸೀದಿ ಸಮಿತಿ ಬಳಿ ಸಹಾಯ ಕೇಳಿದ್ದಾರೆ. ತಕ್ಷಣ ಮಸೀದಿ ಸಮಿತಿ ಮದುವೆಗೆ ಹಣ ನೀಡಲು ಒಪ್ಪಿಗೆ ಸೂಚಿದ್ದಲ್ಲದೆ, ಮದುವೆ ನಡೆಸಲು ಸ್ಥಳವನ್ನು ಕೂಡ ನೀಡಿತ್ತು.

    ಮಸೀದಿ ಸಮಿತಿಯೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಮದುವೆಯನ್ನು ಮಾಡಿಸಿದೆ. ಇವರಿಬ್ಬರ ಮದುವೆಗಾಗಿ ಮಸೀದಿಯ ಒಳಗೆ ಸಣ್ಣ ಮಂಟಪವನ್ನು ನಿರ್ಮಾಣ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಸಮಿತಿಯು 10 ಗ್ರಾಂ ಚಿನ್ನ ಮತ್ತು 2 ಲಕ್ಷ ರೂಪಾಯಿಯನ್ನು ನವ ಜೋಡಿಗೆ ಉಡುಗೊರೆಯಾಗಿ ನೀಡಿದೆ. ದಂಪತಿಯ ಕುಟುಂಬಸ್ಥರಲ್ಲದೆ ಎರಡೂ ಧರ್ಮದ ಸ್ನೇಹಿತರು ಹಾಗೂ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.

    ಇದು ಕೋಮು ಸೌಹಾರ್ದತೆಯನ್ನು ಸೂಚಿಸುವ ಅಪರೂಪದ ಮದುವೆಯಾಗಿದೆ. ಹಿಂದೂ ಆಚರಣೆಗಳ ಪ್ರಕಾರ ಮದುವೆ ನಡೆಯಿತು. ಬಿರಿಯಾನಿ ಜೊತೆಗೆ ಸಸ್ಯಾಹಾರಿ ಊಟವನ್ನು ಕೂಡ ಮಾಡಿಸಲಾಗಿತ್ತು. ಸುಮಾರು 1,000 ಜನರಿಗೆ ಆಹಾರ ವ್ಯವಸ್ಥೆ ಮಾಡಲಾಗಿತ್ತು ಎಂದು ಸಮಿತಿಯ ಕಾರ್ಯದರ್ಶಿ ನುಜುಮುದ್ದೀನ್ ಅಲುಮ್ಮುಟ್ಟಿಲ್ ತಿಳಿಸಿದ್ದಾರೆ.

    ಈ ಕುರಿತಾಗಿ ಟ್ವೀಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಈ ವಿವಾಹ ಕೇರಳದ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. ಚೇರಾವಲ್ಲಿ ಮುಸ್ಲಿಂ ಜಮಾತ್ ಮಸೀದಿ ಆಶಾ ಮತ್ತು ಶರತ್ ಹಿಂದೂ ಜೋಡಿಯ ಮದುವೆಯನ್ನು ಆಯೋಜಿಸಿತ್ತು. ವಧುವಿನ ತಾಯಿ ಸಹಾಯ ಕೇಳಿದ ತಕ್ಷಣ ಮಸೀದಿ ಸಮಿತಿ ಅವರಿಗೆ ಸಹಾಯದ ಹಸ್ತ ನೀಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೇ ನವ ವಿವಾಹಿತರಿಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಮದುವೆಯಲ್ಲಿ ಭಾಗಿಯಾಗಿದ್ದ ಕುಟುಂಬದವರು, ಮಸೀದಿ ಅಧಿಕಾರಿಗಳು ಮತ್ತು ಎರಡು ಧರ್ಮದ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದ್ದಾರೆ.