Tag: kerala

  • ಫೋಟೋ ತೆಗೆಯುತ್ತಿದ್ದಂತೆ ಉಸಿರಾಡಿದ ಸತ್ತಿದ್ದ ವ್ಯಕ್ತಿ – ಕೇರಳದಲ್ಲೊಂದು ವಿಚಿತ್ರ ಘಟನೆ

    ಫೋಟೋ ತೆಗೆಯುತ್ತಿದ್ದಂತೆ ಉಸಿರಾಡಿದ ಸತ್ತಿದ್ದ ವ್ಯಕ್ತಿ – ಕೇರಳದಲ್ಲೊಂದು ವಿಚಿತ್ರ ಘಟನೆ

    ತಿರುವನಂತಪುರಂ: ಫೋಟೋ ತೆಗೆಯುತ್ತಿದ್ದಂತೆ ಸತ್ತಿದ್ದಾನೆ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಉಸಿರಾಡಿರುವ ವಿಚಿತ್ರ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ಭಾನುವಾರ ಎರ್ನಾಕುಲಂನ ಫೋಟೋಗ್ರಾಫರ್ ಟಾಮಿ ಥೋಮಸ್ ಅವರಿಗೆ ಕರೆ ಮಾಡಿದ ಎಡಥಾಲಾ ಪೊಲೀಸರು, ಓರ್ವ ವ್ಯಕ್ತಿ ತನ್ನ ಮನೆಯಲ್ಲೇ ಸಾವನ್ನಪ್ಪಿದ್ದಾನೆ. ಹೀಗಾಗಿ ವಿಚಾರಣಾ ವರದಿಯನ್ನು ತಯಾರು ಮಾಡಲು ಅವನ ಶವದ ಫೋಟೋ ಬೇಕು. ಫೋಟೋ ತೆಗೆದುಕೊಡಿ ಎಂದು ಹೇಳಿದ್ದಾರೆ. ಅದರಂತೆ ಟಾಮಿ ಕೂಡ ಸ್ಥಳಕ್ಕೆ ಹೋಗಿದ್ದಾರೆ.

    ಪೊಲೀಸರ ಮಾತಿನಂತೆ ಮೃತ ವ್ಯಕ್ತಿಯ ಮನೆಗೆ ಹೋದ ಟಾಮಿ, ಮೃತದೇಹದ ಫೋಟೋ ತೆಗೆಲು ಆರಂಭ ಮಾಡಿದ್ದಾರೆ. ಈ ವೇಳೆ ಅವರಿಗೆ ಒಂದು ರೀತಿಯ ಧ್ವನಿ ಕೇಳಿಸಿದೆ. ಆದರೆ ಅದರ ಬಗ್ಗೆ ಗಮನ ಕೊಡದ ಟಾಮಿ ಫೋಟೋ ತೆಗೆಯುವಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರಿಗೆ ಮತ್ತೊಮ್ಮೆ ಜೋರಾಗಿ ಧ್ವನಿ ಕೇಳಿಸಿದೆ. ನಂತರ ಅವರು ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಗಮನಿಸಿದಾಗ, ಸತ್ತಂತೆ ಬಿದ್ದಿದ್ದ ವ್ಯಕ್ತಿಯ ದೇಹದಿಂದ ಶಬ್ದ ಬರುತ್ತಿರುವುದು ಅವರಿಗೆ ಗೊತ್ತಾಗಿದೆ.

    ದೇಹದಲ್ಲಿ ಶಬ್ದ ಬರುತ್ತಿದೆ ಎಂದರೇ ಈತ ಬದುಕಿದ್ದಾನೆ ಎಂದು ತಿಳಿದ ಫೋಟೋಗ್ರಾಫರ್ ಟಾಮಿ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಆತನನ್ನು ತ್ರಿಶೂರ್ ನಲ್ಲಿರುವ ಜುಬಿಲಿ ಮಿಷನ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತನನ್ನು ಐಸಿಯುನಲಿಟ್ಟು ಚಿಕಿತ್ಸೆ ಮಾಡಿದ್ದಾರೆ. ಈಗ ಆತ ಬದುಕುಳಿದಿದ್ದಾನೆ ಎಂದು ಪೊಲೀಸ್ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ವರದಿಯ ಪ್ರಕಾರ, ಪಾಲಕ್ಕಾಡ್ ಮೂಲದ ಶಿವದಾಸನ್ ಮನಾಲಿಮುಕ್ಕುವಿನ ಬಾಡಿಗೆ ವಸತಿಗೃಹದಲ್ಲಿ ಏಕಾಂಗಿಯಾಗಿ ವಾಸವಿದ್ದರು. ಶಿವದಾಸನ್ ತಲೆಗೆ ಪೆಟ್ಟಾಗಿ ಮನೆಯಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಈ ವೇಳೆ ಅವರ ಮನೆಗೆ ಬಂದ ಶಿವದಾಸನ್ ಅವರ ಪರಿಚಯಸ್ಥನೊಬ್ಬ, ಅವರು ಬಿದ್ದಿರುವುದನ್ನು ನೋಡಿ ಭಯದಿಂದ ಶಿವದಾಸನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಆತನನ್ನು ನೋಡಲು ಹೋಗದ ಪೊಲೀಸರು ಶವದ ಫೋಟೋ ತೆಗೆಸಲು ಫೋಟೋಗ್ರಾಫರ್ ಅನ್ನು ಕರೆದುಕೊಂಡು ಬಂದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಫೋಟೋಗ್ರಾಫರ್ ಟಾಮಿ, ನಾನು ಮನೆಗೆ ಹೋದಾಗ ಅವರು ಹಿಂಬದಿಯಾಗಿ ಬಿದ್ದಿದ್ದರು. ಅವರು ಏನೋ ಕೆಲಸ ಮಾಡಲು ಹೋಗಿ ಅವರ ಮಂಚಕ್ಕೆ ತಲೆಯನ್ನು ಬಡಿದುಕೊಂಡಿದ್ದಾರೆ. ಇದರಿಂದ ಪ್ರಜ್ಞೆತಪ್ಪಿದ್ದಾರೆ. ನಂತರ ನಾನು ಸ್ಥಳಕ್ಕೆ ಹೋದಾಗ ಫೋಟೋ ತೆಗೆಯಲು ಕತ್ತಲಿದೆ ಎಂದು ಲೈಟ್ ಆನ್ ಮಾಡಿದೆ. ಆಗ ಆತನ ಮೇಲೆ ಬೆಳಕು ಬಿದ್ದು ಆತನಿಗೆ ಎಚ್ಚರವಾಗಿದೆ. ನಾನು ಫೋಟೋ ಕ್ಲಿಕ್ ಮಾಡುವಾಗ ಆತ ಶಬ್ದ ಮಾಡಿದ. ಆಗ ನನಗೆ ಆತ ಬದುಕಿದ್ದಾನೆ ಎಂದು ಗೊತ್ತಾಯ್ತು ಎಂದು ಹೇಳಿದ್ದಾರೆ.

  • 2 ವರ್ಷ ಕಾದು ಮದುವೆ ಆದ್ರು – ಎರಡು ತಿಂಗಳಿಗೆ ದಂಪತಿ ಶವವಾಗಿ ಪತ್ತೆ

    2 ವರ್ಷ ಕಾದು ಮದುವೆ ಆದ್ರು – ಎರಡು ತಿಂಗಳಿಗೆ ದಂಪತಿ ಶವವಾಗಿ ಪತ್ತೆ

    – ರೂಮಿನಲ್ಲಿ ಸಿಕ್ಕ ಎರಡು ಡೆತ್‍ನೋಟ್ ವಶ
    – ಹಾಸಿಗೆ ಮೇಲೆ ಪತ್ನಿ, ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಪತ್ತೆ

    ತಿರುವನಂತಪುರಂ: ಕೇವಲ ಎರಡು ತಿಂಗಳ ಹಿಂದೆ ಮದುವೆಯಾದ ನವ ದಂಪತಿ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಪಂಥಾಲಂ ಮೂಲದ ಜಿಥಿನ್ (27) ಮತ್ತು ಪತ್ನಿ ದೇವಿಕಾ ದಾಸ್ (20) ಎಂದು ಗುರುತಿಸಲಾಗಿದೆ. ಚೆನ್ನಿತಾಲದ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಥಿನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇವಿಕಾ ದಾಸ್ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ.

    ಏನಿದು ಪ್ರಕರಣ?
    ಮೃತ ಜಿಥಿನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದನು. ಮೇ 6 ರಂದು ಪಂಥಲಂನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಜಿಥಿನ್ ಮತ್ತು ದೇವಿಕಾ ದಾಸ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಎರಡು ವರ್ಷದ ಹಿಂದೆ ಇಬ್ಬರು ಓಡಿ ಹೋಗಿದ್ದರು. ಆಗ ದೇವಿಕಾ ದಾಸ್ ಅಪ್ರಾಪ್ತೆಯಾಗಿದ್ದಳು. ಹೀಗಾಗಿ ಪೊಲೀಸರು ಜಿಥಿನ್ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದರು. ನಂತರ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದರು.

    ಈ ವೇಳೆ ಜಿಥಿನ್ ಜೊತೆ ಹೋಗಲು ಹುಡುಗಿ ಬಯಸಿದ್ದರಿಂದ ನ್ಯಾಯಾಲಯವು ಅವಳನ್ನು ಚೆರ್ಥಾಲಾ ಬಾಲಮಂದಿರದಲ್ಲಿ ಇರಿಸುವಂತೆ ಆದೇಶ ನೀಡಿತ್ತು. ಎರ್ನಾಕುಲಂನ ಖಾಸಗಿ ಮಾಲ್‍ನಲ್ಲಿ ದೇವಿಕಾ ದಾಸ್ ಕೆಲಸ ಮಾಡುತ್ತಿದ್ದಳು. ಅಂತಿಮವಾಗಿ ಈ ಜೋಡಿ ಎರಡು ತಿಂಗಳ ಹಿಂದೆ ವಿವಾಹವಾದರು.  ಚೆನ್ನಿತಾಲಾದ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.

    ಜಿಥಿನ್ ಪೇಂಟಿಂಗ್ ಕೆಲಸಕ್ಕೆ ಹಾಜರಾಗದ ಕಾರಣ ಗುತ್ತಿಗೆದಾರ ಅವರ ಮನೆಗೆ ಭೇಟಿ ನೀಡಿದ್ದಾಗ ದಂಪತಿ ಮೃತಪಟ್ಟಿರುವ ಬಗ್ಗೆ ಗೊತ್ತಾಗಿದೆ. ತಕ್ಷಣ ಆತ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳೆಯ ಮುಖ, ಕುತ್ತಿಗೆ ಮತ್ತು ಮೊಣಕೈಯಲ್ಲಿ ರಕ್ತದ ಕಲೆಗಳಿದ್ದವು. ಹೀಗಾಗಿ ಮರಣೋತ್ತರ ನಂತರವೇ ಸಾವಿಗೆ ನಿಖರ್ ಕಾರಣ ತಿಳಿದುಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತದೇಹ ಪತ್ತೆಯಾದ ರೂಮಿನಲ್ಲಿ ಪೊಲೀಸರು ಎರಡು ಡೆತ್‍ನೋಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಪತ್ರದಲ್ಲಿ ಜಿಥಿನ್, ದೇವಿಕಾಳನ್ನು ಉದ್ದೇಶಿಸಿ ಬರೆದಿದ್ದಾನೆಂದು ಎನ್ನಲಾಗಿದೆ. ದಂಪತಿ ಆರ್ಥಿಕ ಸಮಸ್ಯೆಯಲ್ಲಿದ್ದು, ಜಿಥಿನ್ ಬಯಸಿದಂತೆ ಹೆಂಡತಿಗೆ ಉತ್ತಮ ಜೀವನವನ್ನು ನೀಡಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. “ನಾನು ಬಯಸಿದ ಜೀವನವನ್ನು ಪಡೆಯಲು ಸಾಧ್ಯವಾಗಿಲ್ಲ ಮತ್ತು ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಸಮಯವನ್ನು ಅನುಭವಿಸಿದೆ’ ಎಂದು ಮತ್ತೊಂದು ಡೆತ್‍ನೋಟಿನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್

    ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್

    – ಮಹಿಳೆಯ ಕಾರ್ಯಕ್ಕೆ ಶಹಬ್ಬಾಸ್ ಎಂದ ನೆಟ್ಟಿಗರು

    ತಿರುವನಂತಪುರಳ: ಮಹಾಮಾರಿ ಕೊರೊನಾ ವೈರಸ್ ನಮ್ಮ ದೇಶವನ್ನು ವಕ್ಕರಿಸಿದ ಬಳಿಕ ಅನೇಕ ಮಾನವೀಯ ಕಾರ್ಯಗಳನ್ನು ನಾವು ಕಂಡಿದ್ದೇವೆ. ಹಾಗೆಯೇ ಇದೀಗ ಕೇರಳದಲ್ಲಿ ಮಹಿಳೆಯೊಬ್ಬರು ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿರುವುದು ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

    ಹೌದು. ಸುಪ್ರಿಯಾ ಎಂಬ ಮಹಿಳೆ ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿದ್ದಾರೆ. ಅಜ್ಜ ಬಸ್ಸಿನಲ್ಲಿ ತೆರಳಬೇಕಿತ್ತು. ಈ ವಿಚಾರ ತಿಳಿದ ಮಹಿಳೆ ಬಸ್ಸಿನ ಬಳಿ ಓಡೋಡಿ ಬಂದು ಬಸ್ಸು ನಿಲ್ಲಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳೆಯ ಕಾರ್ಯಕ್ಕೆ ನಟ-ನಟಿಯರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ..?
    ಅಜ್ಜ ಬಸ್ಸಿಗಾಗಿ ಕಾಯುತ್ತಿದ್ದರು. ಆದರೆ ಅದಾಗಲೇ ನಿಲ್ದಾಣಕ್ಕೆ ಬಂದ ಬಸ್ಸು ಹೊರಡಲಾರಭಿಸಿದೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದಿದ್ದು, ಕೂಡಲೇ ಹೊರಡಲು ಅಣಿಯಾದ ಬಸ್ಸನ್ನು ನಿಲ್ಲಿಸಿದ್ದಾರೆ. ಅಲ್ಲದೆ ಅಜ್ಜನ ಬಳಿ ಹೋಗಿ ಅವರ ಕೈಹಿಡಿದು ಬಸ್ಸಿನ ಬಳಿ ಕರೆತಂದು ಹತ್ತಿಸಿ ವಾಪಸ್ ಆಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಮಹಿಳೆಯ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದಾರೆ. ಅಂತೆಯೇ ಐಪಿಎಸ್ ಅಧಿಕಾರಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡು, ಈ ಜಗತ್ತು ಬದುಕಲು ಒಂದು ಉತ್ತಮ ಸ್ಥಳ ಎಂಬುದನ್ನು ಈ ಮಹಿಳೆ ತೋರಿಸಿದ್ದಾರೆ. ಅವರ ಈ ಕುರುಣೆ ತುಂಬಾ ಸುಂದರವಾಗಿದೆ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    41 ಸೆಕೆಂಡ್ ಇರುವ ಈ ವಿಡಿಯೋವನ್ನು ಸುಮಾರು 6.2 ಲಕ್ಷಕ್ಕಿಂತಯೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಕಮೆಂಟ್ ಮೂಲಕ ಎಲ್ಲರೂ ಮಹಿಳೆಯ ಕಾರ್ಯವನ್ನು ಮೆಚ್ಚಿ ಕೊಂಡಿದ್ದಾರೆ. ಮಹಿಳೆ ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

  • ಕೊರೊನಾ ಸೂಪರ್ ಸ್ಪ್ರೆಡರ್ಸ್ ನಿಯಂತ್ರಿಸಲು ಕೇರಳದಲ್ಲಿ ಕಮಾಂಡೋಗಳ ಬಳಕೆ

    ಕೊರೊನಾ ಸೂಪರ್ ಸ್ಪ್ರೆಡರ್ಸ್ ನಿಯಂತ್ರಿಸಲು ಕೇರಳದಲ್ಲಿ ಕಮಾಂಡೋಗಳ ಬಳಕೆ

    ತಿರುವನಂತಪುರಂ: ಕೊರೊನಾ ನಿಯಂತ್ರಣಕ್ಕೆ ಕೇರಳ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಗ್ರಾಮವೊಂದರಲ್ಲಿ 25 ಮಂದಿ ಕಮಾಂಡೋಗಳನ್ನು ನೇಮಕ ಮಾಡಿದೆ.

    ತಿರುವನಂತಪುರಂ ಸಮೀಪದ ಸಮುದ್ರ ತೀರ ಪ್ರದೇಶದ ಪೂಂತುರ ಗ್ರಾಮದಲ್ಲಿ ಕೊರೊನಾ ಸೂಪರ್ ಸ್ಪ್ರೆಡರ್ಸ್ ನಿಂದ ಕೇರಳದ ಮೊದಲ ಕ್ಲಸ್ಟರ್ ಆಗಿ ಪರಿವರ್ತನೆ ಆಗಿದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಪ್ರೆಡರ್ಸ್ ಗಳನ್ನು ನಿಯಂತ್ರಿಸಲು ಕಮಾಂಡೋಗಳನ್ನು ಬಳಸಿಕೊಳ್ಳಲಾಗುತ್ತಿದೆ.

    ಗ್ರಾಮಕ್ಕೆ ಕಮಾಂಡೋ, ಅಂಬುಲೆನ್ಸ್, ಪೊಲೀಸ್, ವಾಹನಗಳನ್ನು ಭಾರೀ ಸಂಖ್ಯೆಯಲ್ಲಿ ಕಳುಹಿಸಿದೆ. ಅಲ್ಲದೇ ಗ್ರಾಮದಲ್ಲಿ ಸ್ಪೀಕರ್ ಗಳ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಅನಗತ್ಯವಾಗಿ ಮನೆಯಿಂದ ಹೊರ ಬರುವ ಗ್ರಾಮಸ್ಥರನ್ನು ಅಂಬುಲೆನ್ಸ್ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ.

    ಒಬ್ಬರಿಂದ ಆರು ಜನರಿಗೆ ಸೋಂಕು ಹಬ್ಬಿದರೆ ಅವರನ್ನು ಸೂಪರ್ ಸ್ಪ್ರೆಡರ್ ಎಂದು ಭಾವಿಸಲಾಗುತ್ತದೆ. ಕೇರಳದಲ್ಲಿ ಮೊದಲ ಕ್ಲಸ್ಟರ್ ಆಗಿ ಪೂಂತುರ ಗ್ರಾಮ ಪರಿವರ್ತನೆ ಆಗುತ್ತಿದೆ. ಈ ಗ್ರಾಮದಲ್ಲಿ ಹಲವರು ಸೂಪರ್ ಸ್ಪ್ರೆಡರ್ ಗಳನ್ನು ಗುರುತಿಸಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

    ಸೂಪರ್ ಸ್ಪ್ರೆಡರ್ ಗಳಲ್ಲಿ ಮೊದಲು ಆ ಪ್ರದೇಶದ ಮೀನು ವ್ಯಾಪಾರಿ ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಕುಮಾರಿಚಂದ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ. ಕೋವಿಡ್ ಸೋಂಕಿನ ಪತ್ತೆ ಕಾರ್ಯದಲ್ಲಿ ಪಾಸಿಟಿವ್ ವರದಿ ಬಂದಿರುವವರು ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಅಲ್ಲದೇ ಪೂಂತುರ ಗ್ರಾಮದ ನಿವಾಸಿಗಳಾಗಿದ್ದರು. ಈ ಪ್ರದೇಶ ಕೆಲ ವಾರ್ಡ್ ಗಳಲ್ಲಿ ಸೋಂಕಿನ ಹರಡುವಿಕೆ ಹೆಚ್ಚಾಗಿತ್ತು. ಐದು ದಿನಗಳಲ್ಲಿ 600 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, 119ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ.

    ಒಬ್ಬ ಮೀನುಗಾರನಿಗೆ ಪಾಟಿಸಿವ್ ಪ್ರಕರಣ ಬಂದಿದ್ದು, ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 120 ಮಂದಿ ಹಾಗೂ ಆತನನ್ನು ಭೇಟಿ ಮಾಡಿದ್ದ 150 ಮಂದಿಯನ್ನು ಗುರುತಿಸಲಾಗಿದೆ. ಪರಿಣಾಮ ಆ ಪ್ರದೇಶದಲ್ಲಿ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ನಿರ್ವಹಿಸಲಾಗುತ್ತಿದೆ. ಗ್ರಾಮದ ಹಲವು ವಾರ್ಡ್ ಗಳಲ್ಲಿ ಕೊರೊನಾ ಭಾರೀ ಸಂಖ್ಯೆಯಲ್ಲಿ ವ್ಯಾಪಿಸಿರುವ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

  • ಮದ್ವೆ ಆಗೋದಾಗಿ ನಂಬಿಸಿ ‘ಜೋಶ್’ ಸಿನಿಮಾ ಖ್ಯಾತಿಯ ನಟಿಗೆ ಬ್ಲ್ಯಾಕ್‍ಮೇಲ್- ಆರೋಪಿಗಳು ಅರೆಸ್ಟ್

    ಮದ್ವೆ ಆಗೋದಾಗಿ ನಂಬಿಸಿ ‘ಜೋಶ್’ ಸಿನಿಮಾ ಖ್ಯಾತಿಯ ನಟಿಗೆ ಬ್ಲ್ಯಾಕ್‍ಮೇಲ್- ಆರೋಪಿಗಳು ಅರೆಸ್ಟ್

    ತಿರುವನಂತಪುರಂ: ದಕ್ಷಿಣ ಭಾರತದ ನಟಿ ಶಮ್ನಾ ಕಾಸಿಮ್ ಅವರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ನಟಿ ಕಾಸಿಮ್‍ನ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಕೆಲವು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದರು. ನಾಲ್ವರು ಆರೋಪಿಗಳು ತ್ರಿಶೂರ್ ಮೂಲದವರಾಗಿದ್ದು, ನಟಿಗೆ ಮದುವೆ ಆಗುವುದಾಗಿ ನಂಬಿಸಿ ಹಣ ಸೂಲಿಗೆ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

     

    ಮಾರ್ಚ್ ತಿಂಗಳಲ್ಲಿ ಮದುವೆಯ ಬಗ್ಗೆ ಮಾತನಾಡಲು ಈ ಗ್ಯಾಂಗ್‍ನ ಒಬ್ಬ ವ್ಯಕ್ತಿ ನಟಿಯ ತಂದೆಯನ್ನು ಭೇಟಿ ಮಾಡಿದ್ದನು. ಈ ವೇಳೆ ವರ ದುಬೈನಲ್ಲಿ ಬಿಸಿನೆಸ್ ಮಾಡುತ್ತಿದ್ದಾನೆ. ಕೇರಳದ ಕೋಳಿಕೋಡ್‍ನಲ್ಲಿ ಕುಟುಂಬದವರು ವಾಸಿಸುತ್ತಿದ್ದಾರೆ ಎಂದು ನಂಬಿಸಿದ್ದಾನೆ. ನಕಲಿ ಪ್ರೋಫೈಲ್ ಕೂಡ ರೆಡಿ ಮಾಡಿದ್ದು, ನಟಿ ಕಾಸಿಮ್‍ಗೆ ಅಲ್ವರ್ ಅಲಿ ಎಂದು ಪರಿಯಚ ಮಾಡಿಕೊಂಡು ಫೋನಿನಲ್ಲಿ ಮಾತನಾಡಿದ್ದಾನೆ.

    ನಂತರ ಈ ಗ್ಯಾಂಗ್ ಕೊಚ್ಚಿಯಲ್ಲಿರುವ ನಟಿಯ ಮನೆಗೆ ಭೇಟಿ ನೀಡಿ ಮದುವೆ ಬಗ್ಗೆ ಮಾತುಕತೆ ಮಾಡಿದ್ದರು. ಮಾತುಕತೆ ಮುಗಿಸಿ ಮನೆಯಿಂದ ಹೋಗುವಾಗ ಅವರ ಮನೆ ಮತ್ತು ಕಾರ್ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದರು.

    ನಂತರ ಗ್ಯಾಂಗ್‍ನ ಓರ್ವ ಫೋನ್ ಮಾಡಿ ನಟಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ನೀಡಲು ನಿರಾಕರಿಸಿದರೆ ಹಳೆಯ ಕೆಲವು ವಿಡಿಯೋಗಳನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ನಟಿ ಹಣ ಕೊಡಲು ನಿರಾಕರಿಸಿದ್ದಾರೆ. ಆಗ ಆರೋಪಿ ತಂದೆಗೆ ನಿರಂತರವಾಗಿ ಫೋನ್ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊನೆಯ ನಟಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ಮತ್ತು ನಟಿಗೆ ಮಾಡಿದ ಫೋನ್ ಡಿಟೈಲ್ಸ್ ಮೂಲಕ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ.

    ನಮ್ಮಂತೆ ಬೇರೆ ಯಾರೂ ಇಂತಹವರ ಮೋಸದ ಬಲೆಗೆ ಬೀಳಬಾರದು. ಅದಕ್ಕಾಗಿಯೇ ನಾನು ನನ್ನ ಪೋಷಕರಿಗೆ ದೂರು ನೀಡಲು ಹೇಳಿದೆ. ಅವರು ಹಣ ಸುಲಿಗೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ನಟಿ ಹೇಳಿದ್ದಾರೆ.

    ನಟಿ ಶಮ್ನಾ ಕಾಸಿಮ್ ಅವರು ಪೂರ್ಣ ಹೆಸರಿನ ಮೂಲಕ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. 2007ರಲ್ಲಿ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಜೋಶ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ.

  • ಕೇರಳದ ಆರೋಗ್ಯ ಸಚಿವೆಗೆ ಗೌರವ ಸಲ್ಲಿಸಿದ ವಿಶ್ವಸಂಸ್ಥೆ

    ಕೇರಳದ ಆರೋಗ್ಯ ಸಚಿವೆಗೆ ಗೌರವ ಸಲ್ಲಿಸಿದ ವಿಶ್ವಸಂಸ್ಥೆ

    ನ್ಯೂಯಾರ್ಕ್: ಹೆಮ್ಮಾರಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಿದ್ದಕ್ಕಾಗಿ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್‌ ಅವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ.

    ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷರ ನೇತೃತ್ವ ವಹಿಸಿದ್ದ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ ಪಾಲ್ಗೊಂಡಿದ್ದರು. ಜೂನ್ 23ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಕೋವಿಡ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಿಂದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ಮಾತ್ರ ಆಹ್ವಾನ ಸಿಕ್ಕಿತ್ತು.

    ಈ ವೇಳೆ ಮಾತನಾಡಿದ ಕೆ.ಕೆ.ಶೈಲಜಾ ಟೀಚರ್‌, 2018-19ರ ನಡುವೆ ನಿಪಾ ವೈರಸ್ ಮತ್ತು ಎರಡು ಪ್ರವಾಹಗಳು ಸಂಭವಿಸಿ ರಾಜ್ಯವನ್ನು ತಲ್ಲಣಗೊಳಿಸಿತ್ತು. ಈ ವೇಳೆ ಕೈಗೊಂಡ ತಂತ್ರಗಳು ಕೋವಿಡ್-19 ಅನ್ನು ಸಮಯೋಚಿತವಾಗಿ ನಿಭಾಯಿಸಲು ಸಹಾಯಕವಾಯಿತು ಎಂದು ತಿಳಿಸಿದರು.

    “ವುಹಾನ್‍ನಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾದ ತಕ್ಷಣವೇ ಎಚ್ಚೆತ್ತ ಕೇರಳ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ, ಸೂಚನೆಯನ್ನು ಅನುಸರಿಸಲು ಆರಂಭಿಸಿತು. ವಿದೇಶದಿಂದ ಪ್ರತಿಯೊಬ್ಬರನ್ನ ಕ್ವಾರಂಟೈನ್ ಮಾಡುವುದು ಸೇರಿದಂತೆ ವಿವಿಧ ನಿಯಮಗಳನ್ನು ಅನುಸರಿಸಿದ್ದರಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿತು” ಎಂದು ವಿವರಿಸಿದರು.

    ಕಾರ್ಯಕ್ರಮದಲ್ಲಿ ಕೆ.ಕೆ.ಶೈಲಜಾ ಹಾಗೂ ಕೊರೊನಾ ನಿಯಂತ್ರಣಕ್ಕೆ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿ, ಗೌರವ ಸಲ್ಲಿಸಿತು. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜನಿ ಮೊಹಮ್ಮದ್ ಬಂಡೆ, ಇಥಿಯೋಪಿಯಾದ ಅಧ್ಯಕ್ಷ ಸಾಹ್ಲೆ ವರ್ಕ್ ಸೂಡ್, ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಡೆನೊಮಮ್ ಗೆಬ್ರಿಯೇಶಿಯಸ್, ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಲಿಯು ಶೆನ್ಮಿನ್, ಕೊರಿಯಾದ ಆಂತರಿಕ ಮತ್ತು ಭದ್ರತಾ ಸಚಿವ ಚಿನ್ ಯಂಗ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

  • ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ: ಕೇರಳ ಕೈ ನಾಯಕ

    ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ: ಕೇರಳ ಕೈ ನಾಯಕ

    ತಿರುವನಂತಪುರಂ: ಕೇರಳದ ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಎಂ. ರಾಮಚಂದ್ರನ್ ಅವರು ಹೇಳಿದ್ದಾರೆ.

    ಶುಕ್ರವಾರ ಮಾತನಾಡಿದ್ದ ರಾಮಚಂದ್ರನ್, ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ಇದಾದ ನಂತರ ಕೈ ನಾಯಕನ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿ ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಲಾಗಿತ್ತು.

    ಈಗ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ ರಾಮಚಂದ್ರನ್, ನಾನು ಏನು ಹೇಳಿದ್ದೇನೆ ಅದು ಸರಿ. ನಾನು ಯಾರನ್ನೂ ಅವಮಾನ ಮಾಡಿಲ್ಲ. ನಾನು ಹೇಳಿದ್ದರ ಪರವಾಗಿ ನಾನು ನಿಲ್ಲುತ್ತೇನೆ. ನಾನು ಯಾರನ್ನೂ ಕ್ಷಮೆ ಕೇಳಲು ಹೋಗುವುದಿಲ್ಲ. ಕೆಲ ವಿದೇಶಿ ಮಾಧ್ಯಮಗಳು ಅವರನ್ನು ‘ರಾಕ್‍ಸ್ಟಾರ್’ ಮತ್ತು ಕೊರೊನಾವನ್ನು ಕೊಂದವರು ಎಂದು ಬಣ್ಣಿಸುತ್ತಾರೆ. ಹಾಗೆಯೇ ನಾನು ಕೂಡ ರಾಣಿಗೆ ಹೊಲಿಸಿದ್ದೇನೆ ಅದರಲ್ಲೇನು ತಪ್ಪಿದೆ ಎಂದು ಪ್ರಶ್ನೆ ಮಾಡಿದ್ದಾರೆ.

    ನಾನು ಒಂದು ಹೆಣ್ಣಿನ ವಿರುದ್ಧ ಹೇಳಿಕೆಯನ್ನು ನೀಡುವ ವ್ಯಕ್ತಿಯಲ್ಲ. ನಾನು ಯಾವಾಗಲೂ ಮಹಿಳೆಯರ ಕಲ್ಯಾಣ ಮತ್ತು ಗೌರವಕ್ಕಾಗಿ ಮುಂದೆ ನಿಲ್ಲುವಂತಹ ವ್ಯಕ್ತಿ. ಹೀಗಾಗಿ ನಾನು ಕ್ಷಮೆ ಕೇಳಲ್ಲ ಎಂದು ರಾಮಚಂದ್ರನ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಕೈ ನಾಯಕ ಈ ಹೇಳಿಕೆ ಸರಿಯಿಲ್ಲ. ಒಂದು ಪಕ್ಷದ ನಾಯಕನಾಗಿ ಒಂದು ಮಹಿಳೆಯ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಬಾರದು. ಅವರು ಕ್ಷಮೆ ಕೇಳಲೇ ಬೇಕು ಎಂದು ಕೇರಳದ ಕೆಲ ನಾಯಕರು ಆಗ್ರಹಿಸಿದ್ದರು.

    ಎಂ.ರಾಮಚಂದ್ರನ್ ಹೇಳಿದ್ದೇನು?
    ಆರೋಗ್ಯ ಸಚಿವೆ ಶೈಲಜಾ ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ. ಈ ಹಿಂದೆ ರಾಮಚಂದ್ರನ್, ನಿಫಾ ವೈರಸ್ ವೇಳೆಯೂ ಇದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆರೋಗ್ಯ ಸಚಿವೆ ಶೈಲಜಾ ಟೀಚರ್, ಕೋಝಿಕೋಡ್ ನಲ್ಲಿ `ಅತಿಥಿ ಕಲಾವಿಧೆ’ ಆಗಿದ್ದರು. ನಿಫಾ ರಾಜಕುಮಾರಿ ಆಗಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

  • ಕೇರಳದ ಆರೋಗ್ಯ ಮಂತ್ರಿಯನ್ನು ‘ಕೋವಿಡ್ ರಾಣಿ’ ಎಂದ ಕಾಂಗ್ರೆಸ್ ಮುಖಂಡ

    ಕೇರಳದ ಆರೋಗ್ಯ ಮಂತ್ರಿಯನ್ನು ‘ಕೋವಿಡ್ ರಾಣಿ’ ಎಂದ ಕಾಂಗ್ರೆಸ್ ಮುಖಂಡ

    – ಕ್ಷಮೆ ಕೇಳುವಂತೆ ಆಗ್ರಹ

    ತಿರುವನಂತಪುರ: ಕೇರಳದ ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್ ವಿವಾದಾತ್ಮಹ ಹೇಳಿಕೆ ನೀಡಿದ್ದು, ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರು ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಎಂ.ರಾಮಚಂದ್ರನ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಎಂ.ರಾಮಚಂದ್ರನ್ ಹೇಳಿಕೆಯನ್ನು ಖಂಡಿಸಿರುವ ಸಿಪಿಐ(ಎಂ) ಲಿಂಗ ಅಸಮಾನತೆಯಿಂದ ಕೂಡಿದೆ. ಹಾಗಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

    ಈ ಹಿಂದೆ ರಾಮಚಂದ್ರನ್, ನಿಫಾ ವೈರಸ್ ವೇಳೆಯೂ ಇದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆರೋಗ್ಯ ಸಚಿವೆ ಶೈಲಜಾ ಟೀಚರ್, ಕೋಝಿಕೋಡ್ ನಲ್ಲಿ ‘ಅತಿಥಿ ಕಲಾವಿಧೆ’ ಆಗಿದ್ದರು. ನಿಫಾ ರಾಜಕುಮಾರಿ ಆಗಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

    ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್ ಈ ಕುರಿತು ಪ್ರತಿಕ್ರಿಯಸಿದ್ದು, ಕೇರಳದ ಕೆಪಿಸಿಸಿ ಅಧ್ಯಕ್ಷರು ಆರೋಗ್ಯ ಮಂತ್ರಿ ಶೈಲಜಾ ಅವರನ್ನು ನಿಫಾ ರಾಜಕುಮಾರಿ ಮತ್ತು ಕೋವಿಡ್ ರಾಣಿ ಮಾಡಲು ಹೊರಟಿದ್ದಾರೆ. ಒಬ್ಬ ನಾಯಕ ಇಷ್ಟು ಕೆಳ ಮಟ್ಟಕ್ಕೆ ಇಳಿಯಲು ಸಾಧ್ಯನಾ? ಇಂತಹ ಕೀಳು ಮಟ್ಟದ ಹೇಳಿಕೆಗಳಿಂದ ಸರ್ಕಾರ ಮತ್ತು ಶೈಲಜಾ ಟೀಚರ್ ಅವರಿಗೆ ಸಿಗುವ ಗೌರವ ಕಡಿಮೆ ಆಗಲ್ಲ. ಮಹಾಮಾರಿ ಕೊರೊನಾ ನಿಯಂತ್ರಿಸಿದ್ದಕ್ಕೆ ಶೈಲಜಾ ಅವರಿಗೆ ಕಾಂಗ್ರೆಸ್ ನಿಂದ ಇಂತಹ ಮಾತುಗಳು ಕೇಳುವಂತಾಗಿದೆ ಎಂದು ಕಿಡಿ ಕಾರಿದ್ದಾರೆ.

  • ಕೇರಳ ರಣಜಿ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‍ಗೆ ಸ್ಥಾನ!

    ಕೇರಳ ರಣಜಿ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‍ಗೆ ಸ್ಥಾನ!

    ತಿರುವನಂತಪುರಂ: ಟೀಂ ಇಂಡಿಯಾ ವಿಶ್ವಕಪ್ ಗೆದ್ದ ತಂಡದ ಬೌಲರ್ ಎಸ್.ಶ್ರೀಶಾಂತ್ ಕ್ರಿಕೆಟ್‍ಗೆ ಮತ್ತೆ ಕಮ್‍ಬ್ಯಾಕ್ ಮಾಡುವ ಮಾರ್ಗ ತೆರೆದುಕೊಂಡಿದೆ. ಫಿಕ್ಸಿಂಗ್ ಆರೋಪದ ಕಾರಣ 37 ವರ್ಷದ ಕ್ರಿಕೆಟಿಗ ಶ್ರೀಶಾಂತ್ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಸದ್ಯ ಬಿಸಿಸಿಐ ವಿಧಿಸಿದ್ದ ನಿಷೇಧದ ಶಿಕ್ಷೆ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ಇತ್ತ ನಿಷೇಧದ ಅವಧಿ ಮುಕ್ತಾಯವಾಗುತ್ತಿದಂತೆ ಮತ್ತೆ ಶ್ರೀಶಾಂತ್ ಅವರನ್ನು ತಂಡಕ್ಕೆ ಪರಿಗಣಿಸಲು ಕೇರಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

    ರಣಜಿ ಟ್ರೋಪಿಗಾಗಿ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಪ್ರಕಟಿಸಿರುವ ಸಂಭವನೀಯ ರಣಜಿ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರನ್ನು ಸೇರಿಸಿದೆ. ಆದರೆ ಶ್ರೀಶಾಂತ್ ಕಮ್‍ಬ್ಯಾಕ್ ಆತನ ಫಿಟ್ನೆಸ್ ಮೇಲೆ ನಿರ್ಧಾರವಾಗಲಿದೆ. ಸಂಸ್ಥೆ ನಿರ್ವಹಿಸುವ ಫಿಟ್ನೆಸ್ ಪರೀಕ್ಷೆಯಲ್ಲಿ ಶ್ರೀಶಾಂತ್ ಉರ್ತೀರ್ಣರಾದರೆ ಮತ್ತೆ ಕ್ರೀಡಾಂಗಣದಲ್ಲಿ ಮಿಂಚುವ ಅವಕಾಶ ಲಭಿಸಲಿದೆ.

    ಇತ್ತ ಕೆಸಿಎ ನಿರ್ಣಯದ ಕುರಿತು ಸಂತಸ ವ್ಯಕ್ತಪಡಿಸಿರುವ ಶ್ರೀಶಾಂತ್, ಕೆಸಿಎಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ದೊರೆತಿರುವ ಅವಕಾಶದಿಂದ ನನ್ನ ಉತ್ಸಾಹ ಹೆಚ್ಚಾಗಿದೆ. ರಣಜಿ ಆಡುವ ಅವಕಾಶ ಕೊಟ್ಟ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಫಿಟ್ನೆಸ್ ಸಾಬೀತು ಪಡಿಸಿ ಮತ್ತೆ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುತ್ತೇನೆ. ಎಲ್ಲಾ ವಿವಾದಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಕೆಸಿಎ ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಾಜಿ ಬೌಲರ್ ಟಿನು ಯೊಹಾನನ್ ಅವರನ್ನು ತಂಡದ ಕೋಚ್ ಆಗಿ ನೇಮಿಸಿತ್ತು. ಈ ವೇಳೆ ಶ್ರೀಶಾಂತ್ ಕಮ್ ಬ್ಯಾಕ್ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರು, ಶ್ರೀಶಾಂತ್ ಕಮ್‍ಬ್ಯಾಕ್ ತಂಡಕ್ಕೆ ಮತ್ತಷ್ಟು ಬಲವನ್ನು ನೀಡಲಿದೆ. ಆದರೆ ಆತನ ಫಿಟ್ನೆಸ್ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಶ್ರೀ ತಂಡಕ್ಕೆ ಬಂದರೇ ಆತನ ಅನುಭವ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.

     

    View this post on Instagram

     

    #nevergiveup #cricket #love #india #kerala #PRIDE “personal responsibility in delivering excellence “

    A post shared by Sree Santh (@sreesanthnair36) on

  • ಬ್ಯಾಂಕ್‍ನಿಂದ ಹೊರಗೆ ಓಡುವ ಭರದಲ್ಲಿ ಗಾಜಿನ ಡೋರಿಗೆ ಡಿಕ್ಕಿ- ಮಹಿಳೆ ಸಾವು

    ಬ್ಯಾಂಕ್‍ನಿಂದ ಹೊರಗೆ ಓಡುವ ಭರದಲ್ಲಿ ಗಾಜಿನ ಡೋರಿಗೆ ಡಿಕ್ಕಿ- ಮಹಿಳೆ ಸಾವು

    ತಿರುವನಂತಪುರಂ: ಬ್ಯಾಂಕ್‍ನಿಂದ ಹೊರಗೆ ಓಡುವ ಭರದಲ್ಲಿ ಮಹಿಳೆಯೊಬ್ಬರು ಗಾಜಿನ ಡೋರಿಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಕೇರಳದ ಪೆರುಂಬವೂರ್ ನಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಪೆರುಂಬವೂರಿನ ಬೀನಾ ಜಿಜು ಪಾಲ್ (46) ಎಂದು ಗುರುತಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಪೆರುಂಬವೂರ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೀನಾ ವಹಿವಾಟು ನಡೆಸಲು ಬ್ಯಾಂಕಿಗೆ ಭೇಟಿ ನೀಡಿದ್ದರು. ಬಳಿಕ ಬ್ಯಾಂಕ್‍ನಿಂದ ವೇಗವಾಗಿ ಹೊರಗೆ ಹೆಜ್ಜೆ ಹಾಕುತ್ತಿದ್ದಾಗ ಗಾಜಿನ ಬಾಗಿಲು ಇದೆ ಎನ್ನುವುದನನ್ನೇ ಮರೆತಿದ್ದರು. ಪರಿಣಾಮ ಡಿಕ್ಕಿ ಗೊಡೆದಿದ್ದರಿಂದ ಎದೆಗೆ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೆ ಗಾಜು ಬೀನಾ ಅವರ ಹೊಟ್ಟೆಗೆ ಚುಚ್ಚಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಹಿಳೆ ಬೈಕ್‍ನಲ್ಲಿ ಕೀ ಬಿಟ್ಟು ಬ್ಯಾಂಕ್ ಒಳಗೆ ಬಂದಿದ್ದರು. ಹೀಗಾಗಿ ಬ್ಯಾಂಕ್‍ನಿಂದ ಹೊರಗೆ ವೇಗವಾಗಿ ಹೋಗುತ್ತಿದ್ದಾಗ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬ್ಯಾಂಕಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

    ಮಹಿಳೆಯು ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದ ಬಳಿಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿ ಕುಸಿದು ಬಿದ್ದರು. ನಂತರ ಬ್ಯಾಂಕ್ ಸಿಬ್ಬಂದಿ ಆಕೆಯನ್ನು ಕುರ್ಚಿ ಮೇಲೆ ಕೂರಿಸಿ ಆರೈಕೆ ಮಾಡುವ ಪ್ರಯತ್ನಿಸಿದರು. ಈ ಮಧ್ಯೆ ತೀವ್ರ ರಕ್ತಸ್ರಾವ ಕಂಡ ಗಾಬರಿಗೊಂಡ ಸಿಬ್ಬಂದಿ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಬೀನಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.