Tag: kerala

  • ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ತಿರುವನಂತಪುರಂ: ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿರುತ್ತವೇ ಅಂತ ಮನೆಯಲ್ಲಿ ಇರುವ ಮಂದಿ ಗಮನಹರಿಸಿದೇ ಇರಬಾರದು. ಅಪ್ಪಿ ತಪ್ಪಿ ಮಕ್ಕಳ ಕಡೆ ಗಮನಕೊಡದಿದ್ರೆ ಆಪತ್ತಿಗೆ ಸಿಲುಕಿಕೊಳ್ತಾವೆ. ಇದಕ್ಕೆ ಸಾಕ್ಷಿ ಈ ವಿಡಿಯೋ.

    ಆಟವಾಡ್ತಿದ್ದ ಮಗು ಖಾಲಿ ಪಾತ್ರೆಯನ್ನು ತಗೆದುಕೊಂಡು ತಲೆ ಮೇಲೆ ಟೋಪಿ ಥರ ಹಾಕಿಕೊಂಡಿದೆ. ಆದ್ರೆ ಪಾತ್ರ ಮಾತ್ರ ವಾಪಸ್ ಬರಲೇ ಇಲ್ಲ. ಕೊನೆಗೆ ಮಗುವಿನ ಕಿರುಚಾಟ ನೋಡಿ ಪೋಷಕರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

    ಮಗುವಿನ ಸ್ಥಿತಿಯನ್ನು ನೋಡಿದ ವೈದ್ಯರು ಅಗ್ನಿಶಾಮಕ ದಳದ ಹತ್ತಿರ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಪಾತ್ರೆಯನ್ನು ಕತ್ತರಿಸಿ ಮಗುವನ್ನ ರಕ್ಷಣೆ ಮಾಡಿದ್ದಾರೆ.

    ಕೇರಳದ ಮಲಪ್ಪುರಂನಲ್ಲಿ ಈ ಘಟನೆ ಬುಧವಾರ ನಡೆದಿದೆ. ಕೇರಳ ಫೈರ್ ಫೋರ್ಸ್ ನವರು ಈ ವಿಡಿಯೋವನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 11 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

    https://youtu.be/T1FRHw3-hd8

     

  • ವೈರಲಾಯ್ತು ವಿದ್ಯಾರ್ಥಿಗಳ ಜೊತೆಗಿನ ಚರ್ಚ್ ಫಾದರ್ ಡಾನ್ಸ್ ವಿಡಿಯೋ

    ವೈರಲಾಯ್ತು ವಿದ್ಯಾರ್ಥಿಗಳ ಜೊತೆಗಿನ ಚರ್ಚ್ ಫಾದರ್ ಡಾನ್ಸ್ ವಿಡಿಯೋ

    ತಿರುವನಂತಪುರ: ಸಾಮಾನ್ಯವಾಗಿ ಚರ್ಚ್ ಫಾದರ್‍ಗಳು ಮನರಂಜನೆಗಿಂತ ದೂರವಿದ್ದು ಧರ್ಮಬೋಧನೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆದರೆ ದೇವರ ನಾಡು ಕೇರಳದಲ್ಲಿ ಫಾದರೊಬ್ಬರು ವಿದ್ಯಾರ್ಥಿಗಳ ಜೊತೆ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗಿದೆ.

    ಜುಲೈ 27ರಂದು ಒಂದು ನಿಮಿಷಕ್ಕೂ ಹೆಚ್ಚಿರುವ ಈ ವಿಡಿಯೋವನ್ನು ಶೈನ್ ಆಂಟನಿ ಎಂಬವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ತೋರಿಸಿದಂತೆ ಚರ್ಚ್ ಮುಂದೆ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುತ್ತಿದ್ದಂತೆಯೇ ಕೇರಳ ಚರ್ಚ್ ಫಾದರ್ ಮೆರ್ಟೋನ್ ಡಿ ಸಿಲ್ವಾ ಕೂಡ ಅವರೊಂದಿಗೆ ಸೇರಿಕೊಂಡು ಡ್ಯಾನ್ಸ್ ಮಾಡೋದರಲ್ಲಿ ಮಗ್ನರಾಗಿದ್ದಾರೆ. ಒಟ್ಟಿನಲ್ಲಿ ಯುವಜನತೆ ನಾಚುವಂತೆ ಫಾದರ್ ಸಖತ್ ಸ್ಟೆಪ್ ಹಾಕಿದ್ದ ಈ ವಿಡಿಯೋ ಸಖತ್ ವೈರಲ್ ಆಗಿದೆ. ಸದ್ಯ ಈ ವಿಡಿಯೋವನ್ನು 2ರಿಂದ 3 ಲಕ್ಷ ಜನ ವೀಕ್ಷಿಸಿದ್ದು, 3,974ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

    https://www.facebook.com/shineantonynas/videos/vb.669648868/10154883142443869/?type=2&theater

  • ಶೃಂಗೇರಿ ಶ್ರೀಗಳಿಗೆ ಅವಮಾನ: ಕೇರಳ ಸರ್ಕಾರದಿಂದ ತಪ್ಪೊಪ್ಪಿಗೆ

    ಶೃಂಗೇರಿ ಶ್ರೀಗಳಿಗೆ ಅವಮಾನ: ಕೇರಳ ಸರ್ಕಾರದಿಂದ ತಪ್ಪೊಪ್ಪಿಗೆ

    ಅಲಪ್ಪುಳ: ಕೇರಳದಲ್ಲಿ ಶೃಂಗೇರಿ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಕರೆಸಿ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಮ್ಯುನಿಸ್ಟ್ ಸರ್ಕಾರದ ಇಬ್ಬರು ಸಚಿವರು ಶೃಂಗೇರಿ ಶ್ರೀಗಳನ್ನು ಭೇಟಿ ಮಾಡಿ ಸತ್ಕರಿಸಿದ್ದಾರೆ.

    ಲೋಕೊಪಯೋಗಿ ಸಚಿವ ಸುಧಾಕರನ್ ಹಾಗೂ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಅಲಪ್ಪುಳದ ಎಸ್ ಡಿವಿ ಸೆಂಟನರಿ ಹಾಲ್ ನಲ್ಲಿ ತಂಗಿದ್ದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರ ದರ್ಶನ ಪಡೆದರು. ಶ್ರೀಗಳನ್ನು ಭೇಟಿಯಾಗಿ ತನ್ನ ಸಚಿವರ ಪ್ರಮಾದಕ್ಕೆ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ಕೇರಳ ಸರ್ಕಾರ ಭಾರೀ ಟೀಕೆಗೆ ಗುರಿಯಾಗಿದ್ದ ಪ್ರಕರಣಕ್ಕೆ ತೇಪೆ ಹಚ್ಚಿದೆ.

    ಈ ಸಂದರ್ಭದಲ್ಲಿ ಶ್ರೀಗಳ ಕಾರ್ಯದರ್ಶಿ ಇಬ್ಬರು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಶ್ರೀಗಳು ಫಲಪುಷ್ಪ ಕಳುಹಿಸಿಕೊಟ್ಟಿದ್ದಾರೆ.

    ಏನಿದು ಪ್ರಕರಣ?
    ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಶೃಂಗೇರಿ ಮಠಾಧೀಶರಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಹಿರಿಯ ಶ್ರೀಗಳ ಪರವಾಗಿ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಿಸಿದ್ದರು. ಆದರೆ ಅವರು ವೇದಿಕೆಗೆ ಬರುವ ಹೊತ್ತಿಗೆ ಅವರಿಗೆ ಇರಿಸಲಾಗಿದ್ದ ಆಸನವನ್ನು ಕಿತ್ತುಕೊಳ್ಳಲಾಯಿತು ಎಂದು ಸ್ಥಳದಲ್ಲಿದ್ದ ಭಕ್ತಾದಿಗಳು ಆರೋಪಿಸಿದ್ದರು.

    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇರಳ ದೇವಸ್ವಂ ಸಚಿವ ಕಡನ್ನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್ ಶಾಸಕ ಶಿವಕುಮಾರ್, ಸ್ವಾಮೀಜಿಯವರಿಗೆಂದು ವೇದಿಕೆಯಲ್ಲಿ ಇರಿಸಲಾಗಿದ್ದ ಸಿಂಹಾಸನವನ್ನು ತೆಗೆಸಿದರು ಎಂದು ಮಾಧ್ಯಮಗಳು ವರದಿ ಮಾಡಿತ್ತು.

    ಬಿಜೆಪಿ ಟೀಕಿಸಿತ್ತು: ಸಂಸದೆ ಶೋಭಾ ಕರಂದ್ಲಾಜೆ ಈ ವಿಚಾರವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿ ಕೇರಳ ಸರ್ಕಾರವನ್ನು ಟೀಕಿಸಿದ್ದರು.

    ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ಸ್ವಾಮೀಜಿಯವರನ್ನು ಅವರಿಗೆ ಮೀಸಲಾದ ಆಸನದಲ್ಲಿ ಆಸೀನರಾಗಲು ಬಿಡದೆ ಅವರ ಆಸನವನ್ನು ಕಿತ್ತುಕೊಂಡು ವೇದಿಕೆಯಲ್ಲೇ ಅವಮಾನ ಮಾಡಿದ ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್ ಶಾಸಕ ಶಿವಕುಮಾರ್ ನ ಈ ಕೀಳು ಮಟ್ಟದ ವರ್ತನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಹಾಗೂ ಕೇರಳದ ಮುಖ್ಯಮಂತ್ರಿ ಈ ಅವಮಾನಕಾರಿ ಘಟನೆಯ ಬಗ್ಗೆ ಶೃಂಗೇರಿ ಸಂಸ್ಥಾನದ ಸ್ವಾಮೀಜಿ ಯವರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸುತ್ತೇನೆ. ಇತ್ತೀಚೆಗೆ ದೇಶದಲ್ಲಿ ಜಾನುವಾರು ಹತ್ಯೆ ನಿಯಂತ್ರಣ ಕಾಯಿದೆ ಜಾರಿಗೆ ಬಂದಾಗ ಇದೇ ಕೇರಳದಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದ ಈ ಕಾಂಗ್ರೆಸ್- ಸಿಪಿಎಂ ಕೂಟಕ್ಕೆ ಇದು ” ವಿನಾಶಕಾಲೇ ವಿಪರೀತ ಬುದ್ಧಿಃ” ಎಂದು ಬರೆದಿದ್ದರು.

     

  • ಕೇರಳದಲ್ಲಿ ಶೃಂಗೇರಿ ಶ್ರೀಗಳಿಗೆ ಅವಮಾನ – ವೇದಿಕೆಯಿಂದ ಪೀಠ ತೆರವು ಮಾಡಿದ ಮುಜರಾಯಿ ಸಚಿವ

    ಕೇರಳದಲ್ಲಿ ಶೃಂಗೇರಿ ಶ್ರೀಗಳಿಗೆ ಅವಮಾನ – ವೇದಿಕೆಯಿಂದ ಪೀಠ ತೆರವು ಮಾಡಿದ ಮುಜರಾಯಿ ಸಚಿವ

    – ಟ್ವಿಟ್ಟರ್‍ನಲ್ಲಿ ಶೋಭಾ ಕರಂದ್ಲಾಜೆ ಆಕ್ರೋಶ

    ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿಗೆ ಅವಮಾನ ಮಾಡಲಾಗಿದೆ.

    ತಿರುವನಂತಪುರಂನಲ್ಲಿರುವ ಮಹಾವಿಷ್ಣು ದೇವಸ್ಥಾನ ಕೆರೆ ಅಭಿವೃದ್ಧಿಯ ಕಾಮಗಾರಿಯ ಲೋಕಾರ್ಪಣೆಗೆ ಸ್ವಾಮೀಜಿ ಹೋಗಿದ್ದರು. ಆದ್ರೆ ಶ್ರೀಗಳಿಗೆ ಮೀಸಲಾಗಿದ್ದ ಆಸನ ತೆಗೆದು ಎಡಪಂಥೀಯ ಸರ್ಕಾರದ ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್, ಕಾಂಗ್ರೆಸ್ ಶಾಸಕ ಶಿವಕುಮಾರ್ ದುರಂಹಕಾರ ಪ್ರದರ್ಶಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

    ಶ್ರೀಗಳಿಗೆ ಮಾಡಲಾದ ಅವಮಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

    https://twitter.com/ShobhaBJP/status/874521327566114816

    https://twitter.com/ShobhaBJP/status/874524051825229825

    ಇತ್ತ ತಮ್ಮ ಕ್ರಮವನ್ನು ಸಚಿವ ಕಡಕಂಪಲ್ಲಿ ಸುರೇಂದ್ರನ್ ಸಮರ್ಥಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಅತಿಥಿಗಳಿಗೆ ಕೂರಲು ಜಾಗ ಸಾಕಾಗುತ್ತಿರಲಿಲ್ಲ. ಈ ಬಗ್ಗೆ ತಿಳಿದು ವಿಶೇಷ ಕುರ್ಚಿಯನ್ನು ತೆಗೆಸಿದೆ. ಅಲ್ಲಿ ಮಂತ್ರಿಗಳಿಗಾಗಲಿ, ಸ್ವಾಮೀಜಿಗಳಿಗಾಗಲೀ ವಿಶೇಷ ಕುರ್ಚಿಯನ್ನು ಹಾಕೋ ಅಗತ್ಯವಿರಲಿಲ್ಲ. ಸ್ವಾಮೀಜಿಗೆ ಹಾಕಿದ್ದ ವಿಶೇಷ ಕುರ್ಚಿಯನ್ನು ಬಿಜೆಪಿ ಶಾಸಕ ಒ. ರಾಜಗೋಪಾಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಕುಮ್ಮನಂ ರಾಜಶೇಖರನ್ ಸಹಾಯದಿಂದ ತೆಗೆಸಿದೆ. ವೇದಿಕೆಯಲ್ಲಿ ಎಲ್ಲರಿಗೂ ಕೂರಲು ಕಷ್ಟ ಆಗ್ತಿತ್ತು ಅನ್ನೋದನ್ನು ಅವರೂ ಅರ್ಥ ಮಾಡಿಕೊಂಡಿದ್ದರು ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

    ವಿಶೇಷ ಪೀಠ ತೆಗೆಸಿದ್ದರ ಕಾರಣ ಕಾರ್ಯಕ್ರಮಕ್ಕೆ ಬಂದಿದ್ದ ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿ ವೇದಿಕೆ ಹತ್ತಲಿಲ್ಲ.

  • ವಿಡಿಯೋ: ಮಹಿಳೆಯ ಕಣ್ಣಿನಿಂದ 70 ಮಿ.ಮೀ ಉದ್ದದ ಹುಳು ಹೊರತೆಗೆದ ವೈದ್ಯರು

    ವಿಡಿಯೋ: ಮಹಿಳೆಯ ಕಣ್ಣಿನಿಂದ 70 ಮಿ.ಮೀ ಉದ್ದದ ಹುಳು ಹೊರತೆಗೆದ ವೈದ್ಯರು

    ತಿರುವನಂತಪುರಂ: ಮಹಿಳೆಯೊಬ್ಬರ ಕಿವಿಯಿಂದ ಜೇಡರ ಹುಳು ಹೊರಬಂದ ವಿಡಿಯೋವನ್ನ ನೋಡಿದ್ರಿ. ಈಗ ಕೇರಳದ ಎರ್ನಾಕುಲಂ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಕಣ್ಣಿನಿಂದ ಸುಮಾರು 70 ಮಿ.ಮೀ ಉದ್ದದ ಹುಳುವನ್ನ ವೈದ್ಯರು ಹೊರತೆಗೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    56 ವರ್ಷದ ಲಲಿತಾ ಎಂಬವರು ಕಣ್ಣಿನ ಒಳಗೆ ಹಾಗೂ ಕಣ್ಣಿನ ಸುತ್ತಲೂ ನವೆಯಾಗುತ್ತಿದೆ ಅಂತ ವೈದ್ಯರ ಬಳಿ ಹೋಗಿದ್ದರು. ವೈದ್ಯರು ಲಲಿತಾ ಅವರ ಕಣ್ಣನ್ನ ಪರೀಕ್ಷಿಸಿ, ನಂತರ ಶಸ್ತ್ರಚಿಕಿತ್ಸೆ ಮಾಡಿ ಕಣ್ಣಿನಲ್ಲಿದ್ದ ಡಿರೋಫಿಲಾರಿಯಾ ಜಾತಿಗೆ ಸೇರಿದ 70 ಮಿ.ಮೀ ಉದ್ದದ ಹುಳುವನ್ನ ಹೊರತೆಗೆದಿದ್ದಾರೆ. ಈ ಹುಳು ಆನೆಕಾಲು ರೋಗ ಉಂಟುಮಾಡುತ್ತದೆ ಎನ್ನಲಾಗಿದೆ.

    ಲಲಿತಾ ಅವರಿಗೆ ಲೋಕಲ್ ಅನಸ್ತೇಶಿಯಾ ನೀಡಿ 10 ನಿಮಿಷಗಳ ಸರ್ಜರಿ ಮೂಲಕ ಹುಳುವನ್ನ ಹೊರತೆಗೆಯಲಾಗಿದೆ. ಸರ್ಜರಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದ್ದು, ನೋಡುಗರ ಮೈ ಜುಮ್ಮೆನಿಸುವಂತಿದೆ.

    ಇದನ್ನೂ ಓದಿ: ತಲೆನೋವೆಂದು ಬೆಂಗಳೂರಿನ ಆಸ್ಪತ್ರೆಗೆ ಹೋದಾಗ ಕಿವಿಯಿಂದ ಹೊರಬಂತು ಜೇಡ!- ವಿಡಿಯೋ ವೈರಲ್

  • ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಸಿಹಿ ಸುದ್ದಿ

    ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಸಿಹಿ ಸುದ್ದಿ

    ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಕಾವೇರಿ ಕಣಿವೆಯ ಪ್ರದೇಶಗಳಿಗೆ ಸಿಹಿ ಸುದ್ದಿ. ಒಂದು ವಾರಕ್ಕೆ ಮೊದಲೇ ನೆರೆಯ ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಿರುವ ಕಾವೇರಿ ಕಣಿವೆ ಪ್ರದೇಶಕ್ಕೆ ಮುಂಗಾರು ಪ್ರವೇಶದಿಂದ ಅನುಕೂಲಕರವಾಗಿದೆ.

    ಈಗಾಗಲೇ ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದು, ಡೆಡ್ ಸ್ಟೋರೆಜ್ ತಲುಪಿದೆ. ಲಭ್ಯವಿರುವ ನೀರು ಮುಂದಿನ ತಿಂಗಳು 15ನೇ ತಾರೀಖಿನವರೆಗೆ ಸಾಕಾಗಲಿದೆ. ಆದರೆ ಒಂದು ವಾರಕ್ಕೆ ಮೊದಲೇ ಮುಂಗಾರು ಪ್ರವೇಶದಿಂದ ಜಲಕ್ಷಾಮ ಬಗೆಹರಿಯುವ ನಿರೀಕ್ಷೆ ಇದೆ.

    ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದರೆ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆಗಳಿವೆ.

  • ಮುಂಗಾರು ಚುರುಕಾಯ್ತು! – ದಕ್ಷಿಣ ಕೇರಳದಲ್ಲಿ ಎಡೆ ಬಿಡದೆ ಸುರಿಯುತ್ತಿದೆ ಮಳೆ

    ಮುಂಗಾರು ಚುರುಕಾಯ್ತು! – ದಕ್ಷಿಣ ಕೇರಳದಲ್ಲಿ ಎಡೆ ಬಿಡದೆ ಸುರಿಯುತ್ತಿದೆ ಮಳೆ

    ತಿರುವನಂತಪುರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ನೈಋತ್ಯ ಮಾರುತವು ಕೇರಳ ಹಾಗೂ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿದ್ದು ಈ ಬಾರಿಯ ಮುಂಗಾರು ಮಳೆ ಅಧಿಕೃತವಾಗಿ ಶುರುವಾಗಿದೆ.

    ಬಿರು ಬಿಸಿಲಿನಿಂದ ತತ್ತರಿಸುತ್ತಿದ್ದ ಕೇರಳದ ಜನತೆಗೆ ಮಂಗಳವಾರ ಮುಂಜಾನೆಯಿಂದ ಆರಂಭವಾದ ಮಳೆ ರಿಲೀಫ್ ನೀಡಿದೆ. ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಿದೆ ಎಂದು ಕೇರಳ ಹವಾಮಾನ ಇಲಾಖೆ ಹೇಳಿದೆ.

    ಮುಂಗಾರು ಮಾರುತ ಪ್ರವೇಶ ಮಾಡಿದ್ದರಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಕಣ್ಣೂರು, ಮಲಪ್ಪುರಂ, ಕೋಯಿಕ್ಕೋಡ್‍ನಲ್ಲಿ ಮುಂಜಾನೆ ಬಿರುಸಿನ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದ ವೈಕಂ ಹಾಗೂ ಮಾವೇಲಿಕ್ಕರ ಎಂಬಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ 4 ದಿನಗಳ ಕಾಲ ಕೇರಳದಾದ್ಯಂತ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳ ಹಾಗೂ ಲಕ್ಷದ್ವೀಪದಲ್ಲಿ ಜೋರಾಗಿ ಸುರಿಯುತ್ತಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

  • ಬೆಂಗ್ಳೂರು ಬೀಫ್ ಫೆಸ್ಟ್ ಗೆ ಪೊಲೀಸರ ಬ್ರೇಕ್!

    ಬೆಂಗ್ಳೂರು ಬೀಫ್ ಫೆಸ್ಟ್ ಗೆ ಪೊಲೀಸರ ಬ್ರೇಕ್!

    ಬೆಂಗಳೂರು: ಕೇಂದ್ರ ಸರ್ಕಾರದ ಜಾನುವಾರು ಹತ್ಯೆ ಹಾಗು ಮಾರಾಟ ನಿಷೇಧ ಆದೇಶ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇವತ್ತು ಭಾರೀ ಗೋ ಜಟಾಪಟಿ ನಡೀತು. ಟೌನ್‍ಹಾಲ್ ಮುಂದೆ ಎಸ್‍ಎಫ್‍ಐ ಪ್ರತಿಭಟನೆಗೆ ಅನುಮತಿ ಕೇಳಿತ್ತು. ಆದ್ರೆ, ಕೇರಳ ಮಾದರಿ ಬೀಫ್ ಫೆಸ್ಟ್ ನಡೆಸಲು ಮುಂದಾದಾಗ ಪೊಲೀಸರು ಅನುಮತಿ ನೀಡಿರಲಿಲ್ಲ. ಆದ್ರೆ ಸಂಜೆ ಹೊತ್ತಿಗೆ ಆಗಮಿಸಿದ ಎಸ್‍ಎಫ್‍ಐ ಕಾರ್ಯಕರ್ತರು ಬೀಫ್ ತಿಂದು ಪ್ರತಿಭಟನೆ ನಡೆಸಲು ಮುಂದಾದ್ರು. ತಡೆಯಲು ಬಂದ ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು.

    ಇದಕ್ಕೂ ಮುನ್ನ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ಮಾಡ್ತಿದ್ದಾರೆ ಎಂದು ವಿಷಯ ತಿಳಿದು ಎಸ್‍ಎಫ್‍ಐ ವಿರುದ್ಧವಾಗಿ ಪ್ರತಿಭಟನೆಗೆ ಗೋ ಪರಿಪಾಲಕ ಸಂಘಟನೆಯವರು ಆಗಮಿಸಿದರು. ಎಸ್‍ಎಫ್‍ಐ ಪ್ರತಿಭಟನಾಕಾರರು ಆಗಮಿಸುವ ಮುನ್ನವೇ ಆಗಮಿಸಿದ ಇವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಈ ಸಂಘಟನೆಯ ಜೊತೆಯಲ್ಲಿ ಬಂದಿದ್ದ ಮಹಿಳೆಯರನ್ನೂ ಪೊಲೀಸರು ಬಂಧಿಸಿದರು. ಒಂದು ಹಂತದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವಂತ ಸನ್ನಿವೇಶ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದಾಗ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದ್ರು. ಈ ಮೂಲಕ ಬೆಂಗಳೂರು ಬೀಫ್ ಫೆಸ್ಟ್ ನಡೆಸಲು ಮುಂದಾಗಿದ್ದ ಎಸ್‍ಎಫ್‍ಐ ಹಾಗೂ ಎಡಪಕ್ಷಗಳ ಕಾರ್ಯಕ್ರಮ ಠುಸ್ ಆಯಿತು.

    ದೇಶದ ಬೇರೆ ಕಡೆ ಏನಾಯ್ತು?: ದೇಶಾದ್ಯಂತ ವಿರೋಧ-ಪರವಾದ ನಡೀತಿದೆ. ವಿಶೇಷ ಏನಂದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಆದೇಶವನ್ನ ಪಾಲನೆ ಮಾಡೋಕೆ ಆಗಲ್ಲ. ಮೇಘಾಲಯದ ಬಿಜೆಪಿಯವರೆಲ್ಲಾ ದನದ ಮಾಂಸ ತಿಂತೇವೆ. ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದನದ ಮಾಂಸ ಮಾರಾಟವನ್ನ ಇನ್ನಷ್ಟು ಸರಳ ಮಾಡ್ತೇವೆ ಅಂತ ಬಿಜೆಪಿ ಮುಖಂಡ ಬರ್ನಾಡ್ ಮರಾಕ್ ಹೇಳಿದ್ದಾರೆ.

    ಕೇಂದ್ರದ ಆದೇಶದ ವಿರುದ್ಧವಾಗಿ ಕೇರಳ ರಾಜ್ಯ ತನ್ನದೇ ಪ್ರತ್ಯೇಕ ಕಾನೂನು ಜಾರಿಗೆ ಮುಂದಾಗಿದೆ. ನಾವೇನು ತಿನ್ನಬೇಕು ಅನ್ನೋದನ್ನ ದೆಹಲಿ ಅಥವಾ ನಾಗಪುರ ನಿರ್ಧರಿಸಲು ಸಾಧ್ಯವಿಲ್ಲ. ಅವರು ನಿರ್ಧರಿಸಿದರೆ ಅದನ್ನು ನಾವು ಪಾಲನೆ ಮಾಡಲ್ಲ ಅಂತ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

    ಇನ್ನು ಕೇಂದ್ರ ರಾಜ್ಯದ ಅಧಿಕಾರವನ್ನ ಕತ್ತರಿಸ್ತಿದೆ. ರಾಜ್ಯಗಳ ವಿಚಾರದಲ್ಲಿ ಅನವಶ್ಯಕ ಮೂಗು ತೂರಿಸೋದು ಬೇಡ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಎಚ್ಚರಿಸಿದ್ರು. ಆದ್ರೆ, ಕೇರಳದ ಕಣ್ಣೂರಿನಲ್ಲಿ ನಿನ್ನೆ ಸಾರ್ವಜನಿಕವಾಗಿ ದನ ಕಡಿದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ನಡೆಯನ್ನ ರಾಹುಲ್ ಗಾಂಧಿ ಖಂಡಿಸಿದ್ದು, ಕೆಲ ಕಾರ್ಯಕರ್ತರನ್ನ ಪಕ್ಷದಿಂದ ವಜಾ ಮಾಡಿದ್ದಾರೆ. ಇನ್ನು, ಚೆನ್ನೈನಲ್ಲಿ ಪ್ರಗತಿಪರರು ಹಾಗೂ ಅಲ್ಪಸಂಖ್ಯಾತ ಸಮುದಾಯ ಜನ ಮಳೆಯ ಮಧ್ಯೆನೂ ಭಾರಿ ಪ್ರತಿಭಟನೆ ನಡಿಸಿದ್ರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ಕೆಲವು ಮಹತ್ವದ ಬದಲಾವಣೆಗೆ ಮುಂದಾಗಿದೆ. ಜಾನುವಾರುಗಳ ಪಟ್ಟಿಯಿಂದ ಎಮ್ಮೆ, ಕೋಣಗಳನ್ನ ಹೊರಗಿಡಲು ನಿರ್ಧರಿಸಿದೆ ಅಂತ ಮೂಲಗಳಿಂದ ತಿಳಿದುಬಂದಿದೆ.

     

  • ರಸ್ತೆಯಲ್ಲೇ ಗೋ ಹತ್ಯೆ ಮಾಡಿದ ಕೇರಳದ ಯೂತ್ ಕಾಂಗ್ರೆಸ್ ಸದಸ್ಯರ ನಡೆಗೆ ರಾಹುಲ್ ಗಾಂಧಿ ಖಂಡನೆ

    ರಸ್ತೆಯಲ್ಲೇ ಗೋ ಹತ್ಯೆ ಮಾಡಿದ ಕೇರಳದ ಯೂತ್ ಕಾಂಗ್ರೆಸ್ ಸದಸ್ಯರ ನಡೆಗೆ ರಾಹುಲ್ ಗಾಂಧಿ ಖಂಡನೆ

    ನವದೆಹಲಿ: ಕೇರಳದ ಕೆಲ ಯೂತ್ ಕಾಂಗ್ರೆಸ್ ಸದಸ್ಯರು ಶನಿವಾರದಂದು ನಡು ರಸ್ತೆಯಲ್ಲೇ ಗೋಹತ್ಯೆ ಮಾಡಿದ್ದನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೇರಳದಲ್ಲಿ ನಿನ್ನೆ ನಡೆದಿರುವ ಘಟನೆ ನಿಜಕ್ಕೂ ಅನಾಗರಿಕವಾದುದು. ಇದನ್ನು ನಾನಗಲೀ, ಕಾಂಗ್ರೆಸ್ ಪಕ್ಷವಾಗಲೀ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

    ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದನ್ನು ವಿರೋಧಿಸಿ ಕೇರಳದಲ್ಲಿ ಶನಿವಾರದಂದು ನಡೆದಿದ್ದ ಪ್ರತಿಭಟನೆ ವೇಳೆ ಕೆಲ ಯೂತ್ ಕಾಂಗ್ರೆಸ್ ಸದಸ್ಯರು ನಡು ರಸ್ತೆಯಲ್ಲೇ ಗೋವನ್ನು ಕಡಿದಿದ್ದರು.

    ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಯುವ ಮೋರ್ಚಾದ ದೂರಿನನ್ವಯ ಕೇರಳ ಪೊಲೀಸರು ಕೆಲ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

  • ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್

    ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್

    – ಬಂಧಿತರ ಬಳಿ ಇತ್ತು ಆಧಾರ್, ವೋಟರ್ ಐಡಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳು ಮತ್ತು ಓರ್ವ ಕೇರಳ ಮೂಲದ ವ್ಯಕ್ತಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

    ಸಮೀರಾ ಅಬ್ದುಲ್ ರೆಹಮಾನ್, ಕಿರೋನ್ ಗುಲಾಂ ಅಲಿ, ಖಾಸೀಫ್ ಶಂಶುದ್ದೀನ್ ಪಾಕ್ ಪ್ರಜೆಗಳಾಗಿದ್ದರೆ, ಮೊಹಮ್ಮದ್ ಶಿಹಾಬ್ ಕೇರಳ ಮೂಲದ ವ್ಯಕ್ತಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಇವರ ಬಳಿ ಆಧಾರ್ ಮತ್ತು ವೋಟರ್ ಐಡಿ ದಾಖಲೆಗಳು ಇರುವುದು ಪತ್ತೆಯಾಗಿದೆ.

    ಪಾಕಿಸ್ತಾನದಿಂದ ಬಹರೇನ್ ತೆರಳಿ ಅಲ್ಲಿಂದ ನೇಪಾಳಕ್ಕೆ ಬಂದು ಭಾರತನ್ನು ಇವರು ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಈಗ ಸಿಕ್ಕಿದೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಕುಮಾರಸ್ವಾಮಿ ಲೇಔಟ್ ನಲ್ಲಿ ನೆಲೆಸಿದ್ದ ಇವರ ಚಲನವಲನಗಳು ಸ್ವಲ್ಪ ಅನುಮಾನ ಮೂಡಿಸುತ್ತಿತ್ತು. ಅನುಮಾನ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಅನ್ವಯ ಕಳೆದ 15 ದಿನಗಳಿಂದ ಪೊಲೀಸರು ಈ ನಾಲ್ವರ ಚಲನವಲನದ ಮೇಲೆ ಒಂದು ಕಣ್ಣನ್ನು ಇಟ್ಟಿದ್ದರು. ಚಲನವಲನದ ಮೇಲೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಈಗ ಬೆಳಕಿಗೆ ಬಂದಿದೆ. ಈಗ ಸಿಕ್ಕಿರುವುದು ಪ್ರಾಥಮಿಕ ಮಾಹಿತಿಯಾಗಿದ್ದು, ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆಯಿದೆ.

    ಬಂಧಿತರಿಗೆ ಕೇರಳ ಮೂಲದ ವ್ಯಕ್ತಿಯ ಪರಿಚಯವಾಗಿದ್ದು ಹೇಗೆ? ಅಷ್ಟೇ ಅಲ್ಲದೇ ಭಾರತಕ್ಕೆ ಬಂದ ಎರಡೇ ತಿಂಗಳಿನಲ್ಲಿ ಇವರಿಗೆ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ ವಿಚಾರಣೆ ವೇಳೆ ಉತ್ತರ ಸಿಗಲಿದೆ.

    ಭಾರತದ ಮಹಾನಗರಗಳ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ನಡೆಸಲು ಸಿದ್ಧತೆ ನಡೆಸಲು ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಈ ಹಿಂದೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಂಧಿತರಿಗೆ ಉಗ್ರರ ಜೊತೆಗೆ ನಂಟು ಇದೆಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ.