Tag: kerala

  • ಕೇರಳದಲ್ಲಿ ವರುಣನ ಆರ್ಭಟ – ಮುನ್ನಾರ್ ರೆಸಾರ್ಟ್ ನಲ್ಲಿ ಸಿಲುಕಿದ 60 ಪ್ರವಾಸಿಗರು

    ಕೇರಳದಲ್ಲಿ ವರುಣನ ಆರ್ಭಟ – ಮುನ್ನಾರ್ ರೆಸಾರ್ಟ್ ನಲ್ಲಿ ಸಿಲುಕಿದ 60 ಪ್ರವಾಸಿಗರು

    ತಿರುವನಂತಪುರಂ: ಕೇರಳದ ಭಾರೀ ಮಳೆಗೆ ಮುನ್ನಾರ್ ಎಂಬ ಜನಪ್ರಿಯ ಗಿರಿಧಾಮದ ಸಮೀಪದಲ್ಲಿರುವ ಇಡುಕ್ಕಿ ಪಾಲಿವಾಸಲ್ ರೆಸಾರ್ಟ್‍ನಲ್ಲಿ 20 ಮಂದಿ ವಿದೇಶಿಯರು ಸೇರಿದಂತೆ 60 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.

    ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಈ ಜರ್ಜರಿತ ಸ್ಥಿತಿಯಿಂದಾಗಿ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಪ್ರವಾಸಿಗರು ಎರಡು ದಿನಗಳಿಂದ ರೆಸಾರ್ಟ್ ನಲ್ಲಿ ಸಿಲುಕಿಕೊಂಡಿದ್ದಾರೆ. ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದು, ಪ್ರವಾಹ ಪೀಡಿತರನ್ನು ತಲುಪವಲ್ಲಿ ಪ್ರಯತ್ನ ನಡೆಸುತ್ತಿದೆ ಎಂದು ವರದಿಯಾಗಿದೆ.

    ರಾಜ್ಯದಲ್ಲಿ ಸಂಭವಿಸುತ್ತಿರುವ ಭಾರೀ ಮಳೆಯಿಂದಾಗಿ ಕೇರಳಕ್ಕೆ ಯಾರು ಭೇಟಿ ನೀಡಬಾರದೆಂದು ಯುನೈಟೆಡ್ ಸ್ಟೇಟ್ಸ್ ಮುನ್ನೆಚರಿಕೆಯನ್ನು ವಹಿಸಿದೆ. ನೈರುತ್ಯ ಮಾನ್ಸೂನ್ ಮಳೆಯಿಂದಾಗಿ ಕೇರಳದಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಈ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿದೆ. ಭಾನುವಾರ ಭಾರೀ ಮಳೆಯಾಗಿದ್ದು, ಇಡುಕ್ಕಿ ಮತ್ತು ಉತ್ತರದ ಭಾಗಗಳ ಗುಡ್ಡಗಾಡು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿತ್ತು. ಮಳೆಯ ಹಿನ್ನೆಲೆಯಲ್ಲಿ ಶಇಡುಕ್ಕಿ ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಸರ್ಕಾರ ಆದೇಶಿಸಿದೆ.

    ಕೇರಳ ರಾಜ್ಯ ವಿಕೋಪ ನಿರ್ವಹಣೆ ಅಧಿಕಾರಿಗಳು ಇಡುಕ್ಕಿ ವಝಾಥೋಪ್, ಮರಿಯಾಪುರಂ, ಕಂಜಿಕುಝಿ, ವತಿಕುಡಿ ಮತ್ತು ಕೊನಾಥಾಡಿ ಪಂಚಾಯತ್‍ಗಳಿಗೆ ಪ್ರಯಾಣಿಸದಂತೆ ನಾಗರಿಕರಿಗೆ ಸಲಹೆ ನೀಡಿದೆ. ತುಂಬಿ ಹರಿಯುತ್ತಿರುವ ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿಗಳ ಬಳಿ ಜನರು ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, 24 ಅಣೆಕಟ್ಟುಗಳ ಗೇಟ್‍ಗಳನ್ನು ತೆರೆಯಲಾಗಿದೆ.

    ಚೆರುಥೋನಿ ಪಟ್ಟಣದ ಜನರನ್ನು ಸ್ಥಳಾಂತರಿಸುವುದರೊಂದಿಗೆ ಚೆರೊಥೋನಿ ಅಣೆಕಟ್ಟಿನ ಎಲ್ಲಾ 5 ಗೇಟ್‍ಗಳನ್ನು ತೆರೆಯಲಾಗಿದೆ. ಪಟ್ಟಣದಲ್ಲಿರುವ ಸೇತುವೆ ಉತ್ತರ ಹಾಗೂ ದಕ್ಷಿಣ ಇಡುಕ್ಕಿ ಸಂಪರ್ಕಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ- ಭೀಕರ ಜಲಪ್ರವಾಹಕ್ಕೆ ಕೇರಳದಲ್ಲಿ 26 ಮಂದಿ ಮರಣ

    ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ- ಭೀಕರ ಜಲಪ್ರವಾಹಕ್ಕೆ ಕೇರಳದಲ್ಲಿ 26 ಮಂದಿ ಮರಣ

    – ರಾಜ್ಯ, ಕೇಂದ್ರದಿಂದ ನೆರವಿನ ಮಹಾಪೂರ

    ಬೆಂಗಳೂರು/ತಿರುವನಂತಪುರಂ: ಕರ್ನಾಟಕ ಮತ್ತು ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗ್ತಿದ್ದು, ಇನ್ನು ಮೂರು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ.

    ಈಗಾಗಲೇ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿವೆ. ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಅಧಿಕವಾಗಿದ್ದು, ಸದ್ಯ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗ್ತಿದೆ. ಹೊರ ಹರಿವು 1 ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆ ಇದ್ದು, ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಇದೇ ಮೊದಲ ಬಾರಿ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಯಾಗ್ತಿರೋದು. ಇತ್ತ, ತುಂಗಾ, ಭದ್ರಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಪ್ರವಾಸಿಗರು ನದಿ ತೀರದ ಪ್ರದೇಶಗಳಿಗೆ ಹೋಗಬಾರದೆಂದು ಚಿಕ್ಕಮಗಳೂರು ಪೊಲೀಸರು ಮನವಿ ಮಾಡಿದ್ದಾರೆ.

    ಕೇರಳದಲ್ಲಿನ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆ ಆಗಿದ್ದು, ಜನಜೀವನ ಅಕ್ಷರಶಃ ನರಕವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆರು ತಂಡಗಳನ್ನು ನಿಯೋಜಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ನಾಲ್ಕು ಹೆಚ್ಚುವರಿ ತಂಡಗಳನ್ನು ಕೋಝಿಕೋಡು ಬಳಿ ನಿಯೋಜಿಸಲಾಗಿದ್ದು, ದೆಹಲಿಯಲ್ಲಿರುವ ಎನ್‍ಡಿಆರ್‍ಎಫ್ ಸಹಾಯವಾಣಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿವೆ.

    26 ವರ್ಷಗಳ ಬಳಿಕ ಇಡುಕಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡ್ತಿರೋದ್ರಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಪ್ರವಾಹ ಪರಿಸ್ಥಿತಿ ಬಗ್ಗೆ ಕೇರಳ ಸಿಎಂ ಪಿಣರಾಯ್ ವಿಜಯನ್ ಬಳಿ ಮಾಹಿತಿ ಪಡೆದ ಪ್ರಧಾನಿ ಮೋದಿ ಎಲ್ಲಾ ಅಗತ್ಯ ನೆರವು ಒದಗಿಸುವುದಾಗಿ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಕೂಡ ಕೇರಳದ ನೆರವಿಗೆ ಧಾವಿಸಿದ್ದು, 10 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿ ರವಾನೆ ಮಾಡಲು ಹಾಗೂ ವೈದ್ಯರ ತಂಡ ಕಳುಹಿಸಿ ಕೊಡಲು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ತಿರುವನಂತಪುರಂ: ಕೇರಳ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಪೆರಿಯಾರ್ ನದಿಯು 2013ರ ನಂತರ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಅವಾಂತರಗಳಿಗೆ ಎಡೆಮಾಡಿಕೊಟ್ಟಿದೆ. ಮಾಹಿತಿಗಳ ಪ್ರಕಾರ ಇಡುಕ್ಕಿ ಜಿಲ್ಲೆಯ 11 ಮಂದಿ, ಮಲಪ್ಪುರಂನ 6 ಮಂದಿ, ಕೋಜಿಕೋಡು 2 ಹಾಗೂ ವಯನಾಡ್ ಜಿಲ್ಲೆಯಲ್ಲಿ 1 ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಪಲಕ್ಕಾಡ್, ವಯನಾಡ್ ಹಾಗೂ ಕೋಜಿಕೋಡು ಜಿಲ್ಲೆಗಳಲ್ಲಿ 7 ಮಂದಿ ನಾಪತ್ತೆಯಾಗಿದ್ದರೆಂದು ತಿಳಿದು ಬಂದಿದೆ.

    ನಾಪತ್ತೆಯಾದವರ ಶೋಧಕ್ಕೆ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆ  ನಡೆಸುತ್ತಿದೆ. ರಾಜ್ಯ ಸರ್ಕಾರವು ತುರ್ತು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೇನಾ ಹಾಗೂ ಎನ್.ಡಿ.ಆರ್.ಎಫ್ ಮೊರೆಹೋಗಿದ್ದು, ಸಾಕಷ್ಟು ರಕ್ಷಣಾ ತಂಡಗಳು ಈಗಾಗಲೇ ಕಾರ್ಯಚರಣೆ ನಡೆಸುತ್ತಿವೆ.

    ಇಡುಕ್ಕಿ ಡ್ಯಾಂ ನಿಂದ ನೀರನ್ನು ಹೊರಬಿಟ್ಟ ಪರಿಣಾಮ ಪೆರಿಯಾರ್ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ನೀರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದೊಳಗೂ ನುಗ್ಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಕೊಚ್ಚಿಯಿಂದ ತೆರಳಬೇಕಿದ್ದ ಹಾಗೂ ಆಗಮಿಸುವ ವಿಮಾನಗಳನ್ನು ಮಾರ್ಗಮಧ್ಯೆ ಬದಲಾವಣೆಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಸುರಿಯುತ್ತಿರುವ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಇಂದಿನಿಂದ ಎರ್ನಾಕುಲಂನ ಇಡಮಳಯಾರ್ ಜಲಾಶಯ ಹಾಗೂ ಕೋಜಿಕೋಡುವಿನ ಕಕ್ಕಾಯಂ ಜಲಾಶಯಗಳ ನೀರನ್ನು ಹೊರಬಿಡಲಾಗಿದೆ.

    ರಾಜ್ಯದ ಒಟ್ಟು 22 ಜಲಾಶಯಗಳು ತುಂಬಿದ್ದರ ಪರಿಣಾಮ ಜಲಾಶಯಗಳಿಂದ ಹೆಚ್ಚುವರಿ ಪ್ರಮಾಣದ ನೀರನ್ನು ನೀರನ್ನು ಹೊರಬಿಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಇಡುಕ್ಕಿ ಜಲಾಶಯವು ಬರೊಬ್ಬರಿ 26 ವರ್ಷಗಳ ಬಳಿಕ ತುಂಬಿದ್ದರ ಪರಿಣಾಮ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿದು ಬಿಡಲಾಗಿದೆ.

    ಕೇರಳ ಸರ್ಕಾರವು ಮುಂಜಾಗ್ರತ ಕ್ರಮವಾಗಿ ಕೋಜಿಕೋಡು, ವಯನಾಡ್, ಪಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಯ ಶಾಲಾ-ಕಾಲೇಜುಗಳಿ ರಜೆ ಘೋಷಿಸಿದೆ. ಅಲ್ಲದೇ ಅಲಪುಜಾದಲ್ಲಿ ನಡೆಯಲಿರುವ ಪ್ರಸಿದ್ಧ ದೋಣಿ ಸ್ಪರ್ಧೆಯನ್ನು ಸಹ ಮುಂದೂಡಲಾಗಿದೆ.

    https://twitter.com/pranavkichu10/status/1027470911111229440

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪತಿಯ ಮೇಲೆ ಪತ್ನಿಯಿಂದಲೇ ಹೈಟೆಕ್ ಬೇಹುಗಾರಿಕೆ: ಸಿಕ್ಕಿಬಿದ್ದಿದ್ದು ಹೇಗೆ? ಏನಿದು ಆ್ಯಪ್?

    ಪತಿಯ ಮೇಲೆ ಪತ್ನಿಯಿಂದಲೇ ಹೈಟೆಕ್ ಬೇಹುಗಾರಿಕೆ: ಸಿಕ್ಕಿಬಿದ್ದಿದ್ದು ಹೇಗೆ? ಏನಿದು ಆ್ಯಪ್?

    ತಿರುವನಂತಪುರಂ: ಸ್ನೇಹಿತೆಯ ಪತಿಯ ಚಲನವಲನಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಆರೋಪದಡಿ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳ ತಿರುವನಂತಪುರಂ ನಲ್ಲಿ ನಡೆದಿದೆ.

    ಸ್ನೇಹಿತೆಯ ಪತಿಯ ಮೊಬೈಲ್ ನಲ್ಲಿ ರಿಯಲ್ ಟೈಮ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಅಳವಡಿಸಿದ ಬ್ಯಾಂಕ್ ಉದ್ಯೋಗಿ ಆತನ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಜಿತ್ ಎಸ್ (32) ಎಂಬಾತ ಟ್ರ್ಯಾಕ್ ವ್ಯೂ ಎಂಬ ಮೊಬೈಲ್ ಸೆಕ್ಯೂರಿಟಿ ಅಪ್ಲಿಕೇಶನ್ ಬಳಸಿ ಸ್ನೇಹಿತೆಯ ಪತಿಯ ಚಲನವಲನಗಳನ್ನು ದಾಖಲಿಸುತ್ತಿದ್ದ. ಈ ಮೂಲಕ ಸ್ನೇಹಿತೆಯ ಪತಿಯ ಲೋಕೇಶನ್, ಮೊಬೈಲ್ ನಲ್ಲಿ ದಾಖಲಾಗುವ ವಿಡಿಯೋ, ಫೋಟೋ ಮತ್ತು ಕಾಲ್ ರೆರ್ಕಾಡಿಂಗ್ ಮಾಹಿತಿಯನ್ನು ಪಡೆಯುತ್ತಿದ್ದರು.

    ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಿದ ಕೊಚ್ಚಿ ಪೊಲೀಸ್ ಕಮಿಷನರ್ ಹಿಮೇಂದ್ರನಾಥ್, ಕೇರಳದಲ್ಲಿ ಇಂತಹ ಪ್ರಕರಣ ಇದೇ ಮೊದಲ ಬಾರಿಗೆ ವರದಿಯಾಗಿದೆ. ಸದ್ಯ ಬಂಧಿಸಲಾಗಿರುವ ವ್ಯಕ್ತಿ ವಿಚಾರಣೆ ನಡೆಯುತ್ತಿದ್ದು, ಆತ ಈ ರೀತಿಯ ಮೊಬೈಲ್ ಅಪ್ಲಿಕೇಶನ್ ಬಳಸಿ ಮತ್ತಷ್ಟು ಜನರನ್ನು ಟ್ರ್ಯಾಕ್ ಮಾಡಿರುವ ಶಂಕೆ ಇದ್ದು, ಈ ಕುರಿತು ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಅದ್ವೈತ್ ಆರ್ ವಿ (25) ಹಾಗೂ ಶೃತಿ ದಂಪತಿಗಳಾಗಿದ್ದು, ಇಬ್ಬರ ದಾಂಪತ್ಯದಲ್ಲಿ 7 ಲಕ್ಷ ರೂ, ಹಣದ ಬಗ್ಗೆ ಗೊಂದಲ ನಿರ್ಮಾಣವಾಗಿತ್ತು. ಈ ಕಾರಣದಿಂದ ಶೃತಿ ಗೆ ಸಹಾಯ ಮಾಡಲು ಸ್ನೇಹಿತ ಅಜಿತ್ ಸಹಾಯ ಪಡೆದ ಶೃತಿ ಪತಿ ಅದ್ವೈತ್ ಮೊಬೈಲ್ ಫೋನ್ ನಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಸಿದ್ದಳು. ಈ ವೇಳೆ ಶೃತಿ 15 ದಿನಗಳು ಪತಿಯ ಮನೆ ತೊರೆದು ಹೋಗಿದ್ದಳು. ಇದಾದ ಬಳಿಕ ಪತ್ನಿ ಶೃತಿ ಮನೆಯಲ್ಲಿ ಇಲ್ಲದಿದ್ದರೂ ಪತಿ ಎಲ್ಲಾ ಚಲನವಲನ ಬಗ್ಗೆ ಮಾಹಿತಿ ನೀಡಿ ಪ್ರಶ್ನಿಸುತ್ತಿದ್ದಳು ಎಂದು ಅದ್ವೈತ್ ತಿಳಿಸಿದ್ದಾರೆ.

    ನಾನು ಭೇಟಿ ನೀಡಿದ್ದ ಸ್ಥಳ, ತೆಗೆದುಕೊಂಡ ಆಹಾರ ಹಾಗೂ ಮನೆಯ ರೂಮ್ ನಲ್ಲಿದ್ದ ವೇಳೆ ಏನು ಮಾಡುತ್ತಿದೆ ಎಲ್ಲಾ ಮಾಹಿತಿಯನ್ನು ನೀಡುತ್ತಿದ್ದಳು. ಈ ವೇಳೆ ನನಗೆ ಶಂಕೆ ವ್ಯಕ್ತವಾಗಿ ರೂಮ್‍ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಳಾ ಎನ್ನುವುದರ ಬಗ್ಗೆಯೂ ಪರಿಶೀಲಿಸಿದೆ. ಬಳಿಕ ಐಟಿ ತಜ್ಞರ ಬಳಿ ನನ್ನ ಮೊಬೈಲ್ ನೀಡಿ ಪರಿಶೀಲನೆ ನಡೆಸಿದ ವೇಳೆ ಪತ್ನಿಯ ಕೃತ್ಯ ತಿಳಿಯಿತು. ಪತ್ನಿ ಸ್ನೇಹಿತನ ಸಹಾಯದಿಂದ ನನ್ನ ಮೊಬೈಲ್ ಅನ್ನು ಆಕೆ ಟ್ರ್ಯಾಕ್ ಮಾಡುತ್ತಿದ್ದಳು ಎಂದು ಅದ್ವೈತ್ ತಿಳಿಸಿದ್ದಾರೆ.

    ಸದ್ಯ ಬಂಧಿತ ಅಜಿತ್ ನೀಡಿರುವ ಮಾಹಿತಿ ಅನ್ವಯ, ಶೃತಿ ಪತಿಯ ಮೇಲೆ ಅನುಮಾನದಿಂದ ಅವರ ಎಲ್ಲಾ ಚಲನವಲನ ಬಗ್ಗೆ ಮಾಹಿತಿ ಪಡೆಯಲು ಕೇಳಿದ್ದರು. ಈ ಮೂಲಕ ಸಂಗ್ರಹಿಸಿದ ಮಾಹಿತಿ ಅನ್ವಯ ಪತಿಯ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಲು ಬಳಕೆ ಮಾಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಪತ್ನಿಯ ಈ ಕೃತ್ಯದಿಂದ ಅಘಾತಕ್ಕೆ ಒಳಗಾಗಿರುವ ಅದ್ವೈತ್ ಯಾವ ಉದ್ದೇಶದಿಂದ ಈ ರೀತಿ ನಡೆಸಿದ್ದಾಳೆ ಎಂಬುದು ತಿಳಿಯುತ್ತಿಲ್ಲ. ಇದು ನಮ್ಮ 6 ವರ್ಷದ ಮಗಳ ಜೀವನವನ್ನು ನಾಶ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಟ್ರ್ಯಾಕ್ ವ್ಯೂ ಹೇಗೆ ಕಾರ್ಯನಿರ್ವಹಿಸುತ್ತದೆ:
    ಟ್ರ್ಯಾಕ್ ವ್ಯೂ ಎಂಬ ಮೊಬೈಲ್ ಆ್ಯಪ್ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಬಳಕೆ ಮಾಡಲಾಗುತ್ತದೆ. ಈ ಆ್ಯಪನ್ನ ವ್ಯಕ್ತಿಯ ಮೊಬೈಲ್ ನಲ್ಲಿ ಅಳವಡಿಸಿದರೆ ಆತ ಮೊಬೈಲ್ ಮೂಲಕ ನಡೆಸುವ ಎಲ್ಲಾ ಮಾಹಿತಿ ಸಂಗ್ರಹಿಸಬಹುದಾಗಿದೆ.

    ಮುಖ್ಯವಾಗಿ ವ್ಯಕ್ತಿಯ ಲೋಕೇಶನ್ ಅನ್ನು ಮೊಬೈಲ್ ಜಿಪಿಎಸ್ ಆಫ್ ಇದ್ದರೂ ಟ್ರ್ಯಾಕ್ ಮಾಡಬಹುದು. ಗೂಗಲ್ ಮ್ಯಾಪ್ ಬಳಸಿ ಆತನ ಸ್ಥಳವನ್ನು ನಿಖರವಾಗಿ ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೇ ಈ ಆಪ್ ಮೂಲಕ 6 ತಿಂಗಳ ಕಾಲ ಮೊಬೈಲ್ ಹಿಸ್ಟರಿಯನ್ನು ಬ್ಯಾಕಪ್ ಮಾಡಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೇರಳ ಸಿಎಂ ನಿವಾಸದಲ್ಲಿ ಚಾಕು ಹಿಡಿದು ಪ್ರತಿಭಟಿಸಿದ ವ್ಯಕ್ತಿ!

    ಕೇರಳ ಸಿಎಂ ನಿವಾಸದಲ್ಲಿ ಚಾಕು ಹಿಡಿದು ಪ್ರತಿಭಟಿಸಿದ ವ್ಯಕ್ತಿ!

    ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೆಹಲಿ ನಿವಾಸದ ಮುಂದೆ ಚಾಕು ಹಿಡಿದು ಪ್ರತಿಭಟನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

    ಭಾರೀ ಭದ್ರತೆಯ ನಡುವೆಯೇ ಮುಖ್ಯಮಂತ್ರಿ ನಿವಾಸದ ಒಳಗೆ ಚಾಕು ಹಿಡಿದು ಬಂದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಹಿಡಿಯಲು ಮುಂದಾದರು. ಆದರೆ ವ್ಯಕ್ತಿ ನಾನು ಯಾರಿಗೆ ಏನು ಮಾಡುವುದಿಲ್ಲ. ನೀವು ಹಿಂದಕ್ಕೆ ಹೋಗಿ ಎಂದು ಅಧಿಕಾರಿಯೊಬ್ಬರಿಗೆ ತಾಕೀತು ಮಾಡುತ್ತಿದ್ದರು.

    ನನಗೆ ಮುಖ್ಯಮಂತ್ರಿಯ ಬಳಿ ಯಾವುದೇ ಕೆಲಸವಿಲ್ಲ ಎನ್ನುತ್ತ, ಮನವಿ ಪತ್ರಗಳನ್ನು ತೋರಿಸಿ ನಾನು ಉನ್ನತ ಅಧಿಕಾರಿಗಳವರೆಗೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ವ್ಯಕ್ತಿಯ ವರ್ತನೆಯಿಂದ ವಿಚಲಿತರಾದ ಭದ್ರತಾ ಸಿಬ್ಬಂದಿ, ಆತನ ಜೊತೆಗೆ ಒಬ್ಬ ಅಧಿಕಾರಿ ಮಾತನಾಡುವಂತೆ ನಿಂತಿದ್ದಾರೆ. ಉಳಿದ ಕೆಲ ಭದ್ರತಾ ಸಿಬ್ಬಂದಿ ವ್ಯಕ್ತಿಯ ಹಿಂಬದಿಯಿಂದ ಗಟ್ಟಿಯಾಗಿ ಹಿಡಿದು, ಚಾಕು ಕಸಿದುಕೊಂಡಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ವೇಳೆ ಸಿಎಂ ಪಿಣರಾಯಿ ವಿಜಯನ್ ಅಲ್ಲಿಯೇ ಇದ್ದರೂ, ಸ್ಥಳಕ್ಕೆ ಬಂದು ವಿಚಾರಿಸಲಿಲ್ಲ ಎಂದು ವರದಿಯಾಗಿದೆ.

    ಇಂತಹದ್ದೇ ಘಟನೆ ಇಂದು ಜಮ್ಮುದಲ್ಲಿ ನಡೆದಿದ್ದು, ಜಮ್ಮು ಕಾಶ್ಮಿರ್ ಮುಖ್ಯಮಂತ್ರಿ ಫಾರುಕ್ ಅಬ್ದುಲ್ ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಾರು ನುಗ್ಗಿಸಿದ್ದರಿಂದ ಭದ್ರತಾ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಣ್ಣ ಬಂಡೀಪುರದಲ್ಲಿ ಫ್ಲೈಓವರ್ ಬಗ್ಗೆ ಮಾತನಾಡಿದ್ರೆ, ತಮ್ಮ ಇಲ್ಲ ಅಂದ್ರು!

    ಅಣ್ಣ ಬಂಡೀಪುರದಲ್ಲಿ ಫ್ಲೈಓವರ್ ಬಗ್ಗೆ ಮಾತನಾಡಿದ್ರೆ, ತಮ್ಮ ಇಲ್ಲ ಅಂದ್ರು!

    ಬೆಂಗಳೂರು: ಬಂಡೀಪುರದಲ್ಲಿ ಫ್ಲೈ ಓವರ್ ರಸ್ತೆ ನಿರ್ಮಾಣದ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅದು ಸುಳ್ಳು, ಸುಮ್ಮನೆ ಈ ಕುರಿತು ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಬಂಡೀಪುರದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೂ ಏಕೆ ಫ್ಲೈ ಓವರ್ ರಸ್ತೆ ನಿರ್ಮಾಣದ ಕುರಿತು ಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ವೇಳೆ ರಸ್ತೆ ಸಂಚಾರ ಪುನರಾರಂಭಕ್ಕೆ ಅವಕಾಶ ನೀಡುವುದು ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಫ್ಲೈ ಓವರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎನ್ನುವುದು ಸುಳ್ಳು ಮಾಹಿತಿ ಎಂದು ಹೇಳಿದರು.

    ರೇವಣ್ಣ ಹೇಳಿದ್ದು ಏನು?
    ಬಂಡೀಪುರ ರಕ್ಷಿತಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಗುರುವಾರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಚಿವ ರೇವಣ್ಣ, ಈ ಕುರಿತು ಕೇರಳ ಸರ್ಕಾರ ಸುಪ್ರೀಂಗೆ ಹೋಗಿದೆ. ಅದನ್ನು ಗಮನದಲ್ಲಿಟ್ಟು ಇದರ ಕುರಿತು ಸೂಕ್ತವಾಗಿ ಕ್ರಮ ಕೈಗೊಳ್ಳುತ್ತೇವೆ. ಬಂಡೀಪುರ ಅರಣ್ಯದಲ್ಲಿಯೂ ಕೆಲವೆಡೆಗಳಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಕಾಡು ಪ್ರಾಣಿಗಳ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಕಾಮಗಾರಿ ಮಾಡುವ ಕುರಿತು ಚರ್ಚಿಸಲಾಗುವುದು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಮುಖ್ಯ ಕಾರ್ಯದರ್ಶಿ ಜೊತೆ ಈ ಕುರಿತು ಸಭೆಯ ನಂತರ ಓಡಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಅಂತ ಅವರು ತಿಳಿಸಿದ್ದರು. ಇದನ್ನು ಓದಿ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ- ಕೇರಳದ ಲಾಬಿಗೆ ಮಣಿದ್ರಾ ಸಿಎಂ? ಏನಿದು ವಿವಾದ?

    ಬಂಡೀಪುರದಲ್ಲಿ ರಾತ್ರಿ 9 ಗಂಟೆಗೆ 6 ವಾಹನ ಸಂಚಾರ ನಿಷೇಧಿಸಲಾಗಿದ್ದು, ಜುಲೈ 18ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ನಡೆದ ಸಭೆಯ ವೇಳೆ ಸಿಎಂ ಹಾಗೂ ಸಚಿವ ರೇವಣ್ಣ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಕಾರ್ಯದರ್ಶಿ ವೈ.ಎಸ್ ಮಲ್ಲಿಕ್ ಜು.21 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಕರಣ ಈಗ ಸುಪ್ರೀಂಕೋರ್ಟ್‍ನಲ್ಲಿದ್ದರೂ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ವನ್ಯಜೀವಿ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

  • ವೈರಲ್ ಆಯ್ತು ಕೇರಳ ಶಾಸಕಿಯ ರಾಮಾಯಣ ಪಠಣ: ವಿಡಿಯೋ ನೋಡಿ

    ವೈರಲ್ ಆಯ್ತು ಕೇರಳ ಶಾಸಕಿಯ ರಾಮಾಯಣ ಪಠಣ: ವಿಡಿಯೋ ನೋಡಿ

    ತಿರುವನಂತಪುರಂ: ಕೇರಳದ ಸಿಪಿಎಂ ಶಾಸಕಿಯೊಬ್ಬರು ರಾಮಾಯಣ ವಾಚನ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಕೇರಳದಲ್ಲಿ ಬೆಳೆಯುತ್ತಿರುವ ಆರೆಸ್ಸೆಸ್ ಹಾಗೂ ಬಿಜೆಪಿಯ ಪ್ರಾಬಲ್ಯವನ್ನು ಎದುರಿಸಲು ಸಿಪಿಎಂ ಸೇರಿದಂತೆ ಎಡಪಂಥೀಯ ಸಂಘಟನೆಗಳು ರಾಮಾಯಣ ವಾಚನ ಮತ್ತು ರಾಮಾಯಣ ಕುರಿತ ವಿಚಾರ ಸಂಕಿರಣಗಳನ್ನು ಆಯೋಜಿಸಲು ಮುಂದಾಗಿರುವ ಬೆನ್ನಲ್ಲೇ ಶಾಸಕಿಯ ವಿಡಿಯೋ ಸಾಕಷ್ಟು ಸುದ್ದಿ ಮಾಡಿದೆ.

    ಕೇರಳದ ಕಾಯಂಕುಳಂ ವಿಧಾನಸಭಾ ಕ್ಷೇತ್ರದ ಶಾಸಕಿ ಯು. ಪ್ರತಿಭಾ ಹರಿ ಅವರು ಕರ್ಕಾಟಕ ಮಾಸದ ಆಚರಣೆಗಳ ಭಾಗವಾಗಿ ರಾಮಾಯಣ ವಾಚನ ಮಾಡುತ್ತಿರುವ ವೀಡಿಯೋ ಒಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ ಅದನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ಆ ವೀಡಿಯೋವನ್ನು 1.32 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

    ಸಾಮಾನ್ಯವಾಗಿ ಎಡಪಂಥೀಯ ವಿಚಾರಧಾರೆಯವರು ಲೆನಿನ್, ಮಾರ್ಕ್ಸ್ ಮುಂತಾದ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಓದುವುದು ಸಾಮಾನ್ಯ. ಆದರೆ ಸಿಪಿಎಂ ಶಾಸಕಿಯೊಬ್ಬರು ರಾಮಾಯಣ  ವಾಚಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

     

    https://www.youtube.com/watch?v=4yt2tO8BIbY

  • ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಕೇರಳ ಇದ್ದರೆ, ಬಿಹಾರ ಕೊನೆಯ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ ಎಂದು ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೆರ್ಸ್ ಸೆಂಟರ್ (ಪಿಎಸಿ) ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದಲ್ಲಿ ಪಟ್ಟಿಯನ್ನು ಇಂದು ಬಿಡುಗೊಡೆಗೊಳಿಸಿದೆ.

    ಸೂಚಂಕ್ಯ ಆಧಾರದ ಅಡಿಯಲ್ಲಿ ಕೇರಳ ಮೊದಲ ಸ್ಥಾನಗಳಿಸಿದೆ. 2016ರಿಂದಲೂ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಕೇರಳ ಮೊದಲ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಅತಿ ದೊಡ್ಡ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ನಂತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ ಟಾಪ್ 5ರ ಸ್ಥಾನದಲ್ಲಿವೆ. ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ಕೊನೆಯ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

    ಅತಿ ಚಿಕ್ಕ ರಾಜ್ಯಗಳ ಪೈಕಿ (2 ಕೋಟಿಗಿಂತಲೂ ಕಡಿಮೆ ಜನಸಂಖ್ಯೆ) ಹಿಮಾಚಲ ಪ್ರದೇಶ ಮೊದಲ ಸ್ಥಾನ ಪಡೆದರೆ, ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ನಂತರದ ಸ್ಥಾನಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಪಡೆದುಕೊಂಡಿವೆ. ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯ ಚಿಕ್ಕ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿವೆ.

    ವರದಿ ಹೇಗೆ ತಯಾರಿಸಲಾಗುತ್ತೆ?
    ಮೂಲಭೂತ ಸೌಲಭ್ಯ, ಸಾಮಾಜಿಕ ರಕ್ಷಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗು ಮಾನವ ಅಭಿವೃದ್ಧಿ ಸೇರಿದಂತೆ ದೇಶಾದ್ಯಂತ ಹತ್ತು ಅಂಶಗಳನ್ನು ಕುರಿತು ಪಿಎಸಿ ವರದಿಗೂ ಮುನ್ನ ಅಧ್ಯಯನ ನಡೆಸುತ್ತದೆ. ಜನಸಂಖ್ಯೆ ಆಧಾರದ ಮೇಲೆ ದೊಡ್ಡ ಮತ್ತು ಸಣ್ಣ ರಾಜ್ಯಗಳು ಎಂದು ಎರಡು ವರ್ಗ ಮಾಡಿ ಅಧ್ಯಯನ ನಡೆಸಲಾಗುತ್ತದೆ. 2 ಕೋಟಿಗಿಂತ ಹೆಚ್ಚಿಗೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವನ್ನು ದೊಡ್ಡ ರಾಜ್ಯ ಎಂದು ವಿಭಾಗಿಸಲಾಗುತ್ತದೆ. ಒಟ್ಟು 30 ಮುಖ್ಯ ವಿಷಯಗಳು ಮತ್ತು 100 ಸೂಚಕಗಳು ಅಂದಾಜು ಮಾಡಲ್ಪಟ್ಟ, ಸರ್ಕಾರದ ಮಾಹಿತಿಯ ಮೇಲೆ ಈ ವರದಿ ಅವಲಂಬಿಸಿರುತ್ತದೆ.

    2016ರಿಂದಲೂ ಪಿಎಸಿ ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗೊಳಿಸುತ್ತಾ ಬಂದಿದೆ. ಈ ವರದಿಯ ದತ್ತಾಂಶಗಳ ಆಧಾರದ ಮೇಲೆ ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ದಿಕ್ಸೂಚಿಯಾಗಲಿದೆ. 1994ರಲ್ಲಿ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಯಾಮುವೆಲ್ ಪೌಲ್ ಪಿಎಸಿ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.

  • ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಓಕೆ ಎಂದ ಕೇರಳ ಸರ್ಕಾರ

    ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಓಕೆ ಎಂದ ಕೇರಳ ಸರ್ಕಾರ

    – 4 ಬಾರಿ ಅಭಿಪ್ರಾಯ ಬದಲಾಗಿದ್ದೇಕೆ ಎಂದು ಸುಪ್ರೀಂ ಪ್ರಶ್ನೆ
    – ‘ಅಧಿಕಾರ ಬದಲಾದಂತೆ ಅಭಿಪ್ರಾಯಗಳೂ ಬದಲಾಗುತ್ತದೆ’
    – ಸುಪ್ರೀಂ ಕೋರ್ಟ್ ಮುಂದೆ ಕೇರಳ ಸರ್ಕಾರ ಉತ್ತರ

    ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಮಹಿಳೆಯರ ದೇಗುಲ ಪ್ರವೇಶದ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ನಡೆದ ವಿಚಾರಣೆ ವೇಳೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ತನ್ನ ಅಭಿಪ್ರಾಯ ತಿಳಿಸಿದೆ.

    ಕೇರಳ ಸರ್ಕಾರ ನಾಲ್ಕನೇ ಬಾರಿ ತನ್ನ ನಿರ್ಧಾರವನ್ನು ಬದಲಾಯಿಸಿದೆಯಲ್ಲಾ ಎಂಬ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಶ್ನೆಗೆ ಉತ್ತರಿಸಿದ ಕೇರಳ ಸರ್ಕಾರದ ಪರ ವಕೀಲರು, ಅಧಿಕಾರ ಬದಲಾದಾಗ ಸರ್ಕಾರದ ನಿರ್ಧಾರಗಳೂ ಬದಲಾಗುತ್ತವೆ ಎಂದು ಹೇಳಿದರು.

    ಶಬರಿಮಲೆ ದೇಗುಲದಲ್ಲಿ ದೇವರ ಆರಾಧನೆಗೆ ಎಲ್ಲರಿಗೂ ಸಮಾನವಾದ ಅಧಿಕಾರವಿದೆ. ಹೀಗಿದ್ದಾಗ ಯಾವ ಆಧಾರದಲ್ಲಿ ಪ್ರವೇಶ ನಿಷೇಧಿಸುತ್ತೀರಿ. ರಾಜ್ಯ ಸರ್ಕಾರದ ಈ ನಡೆ ಸಂವಿಧಾನ ವಿರೋಧಿ. ಜನ ಸಾಮಾನ್ಯರಿಗೆ ದೇಗುಲ ತೆರೆದಾಗ ಅಲ್ಲಿಗೆ ಎಲ್ಲರೂ ಹೋಗುವಂತಾಗಬೇಕು. ಇಲ್ಲಿನ ಆಡಳಿತ ವರ್ಗ ಮಹಿಳೆಯರಿಗೆ ನಿಷೇಧ ಹೇರುತ್ತಿರುವುದು ಯಾಕೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ರೋಹಿಂಟನ್ ಫಾಲಿ ನಾರಿಮನ್, ನ್ಯಾ. ಎ.ಎಂ ಖಾನ್ವಿಲ್ಕರ್, ನ್ಯಾ. ಡಿವೈ ಚಂದ್ರಚೂಡ್ ಹಾಗೂ ನ್ಯಾ. ಇಂದು ಮಲ್ಹೋತ್ರಾ ಒಳಗೊಂಡ ಸಾಂವಿಧಾನಿಕ ಪೀಠ ಪ್ರಶ್ನಿಸಿತು.

    ಪ್ರಾರ್ಥನೆ ಸಲ್ಲಿಸುವಾಗ ಪುರುಷರಿಗುವಷ್ಟೇ ಸಮಾನತೆ ಮಹಿಳೆಯರಿಗೂ ಇರುತ್ತದೆ. ಈ ಅವಕಾಶ ತಡೆಯಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ನ್ಯಾ. ಡಿ.ವೈ.ಚಂದ್ರಚೂಡ್ ಹೇಳಿದರು.

    ಮಹಿಳೆಯರ ಋತುಸ್ರಾವದ ಕಾಲಘಟ್ಟ ಎಂದು 10ರಿಂದ 50 ವರ್ಷದವರೆಗಿನ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ಆಮಿಕಸ್ ಕ್ಯೂರಿ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್, ಹೆಣ್ಣು ಮಕ್ಕಳಿಗೆ 10 ವರ್ಷಕ್ಕೂ ಮೊದಲೇ ಋತುಸ್ರಾವ ಆರಂಭವಾಗಬಹುದು. 50 ವರ್ಷದ ನಂತರವೂ ಇದು ಮುಂದುವರಿಯಬಹುದು ಎಂದು ಹೇಳಿದೆ. ದೇವಸ್ಥಾನ ಎನ್ನುವುದು ಯಾವತ್ತೂ ಖಾಸಗಿ ಸ್ವತ್ತಲ್ಲ. ಅದು ಸಾರ್ವಜನಿಕ ಆಸ್ತಿ. ಸಾರ್ವಜನಿಕ ಆಸ್ತಿಗೆ ಯಾರಿಗೆ ಯಾವಾಗ ಬೇಕಾದರೂ ಪ್ರವೇಶ ಮಾಡಬಹುದು ಎಂದು ಹೇಳಿದೆ.

    ನಮಗೆ ಪೂಜೆ ಮಾಡಲು ಅವಕಾಶ ಬೇಡ, ನಮಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿ ಎಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ ಹ್ಯಾಪಿ ಟು ಬ್ಲೀಡ್ ಸಂಘಟನೆ ಕೋರ್ಟ್ ಮುಂದೆ ವಾದ ಮಂಡಿಸಿತು.

    ಶಬರಿಮಲೆ ದೇಗುಲದಲ್ಲಿ ಮಹಿಳೆಯರಿಗೂ ಪ್ರಾರ್ಥನೆಗೆ ಅವಕಾಶ ನೀಡಬೇಕೆನ್ನುವುದು ಸರ್ಕಾರದ ಅಭಿಪ್ರಾಯ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಫಿಡವಿಟ್ ನಾವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದೇವೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

    ಏನಿದು ಪ್ರಕರಣ?: ಕೇರಳದ ಶಬರಿಮಲೆ ದೇವಾಲಯದಲ್ಲಿ 800 ವರ್ಷಗಳಿಂದ ನಡೆದು ಬಂದಿರುವ ಮಹಿಳೆಯರ ಪ್ರವೇಶ ನಿಷೇಧ ಆಚರಣೆಯನ್ನು ವಿರೋಧಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರ, ದೇವಾಲಯ ಆಡಳಿತ ಮಂಡಳಿ, ಪತ್ತನಂತಿಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿತ್ತು.

    ಅರ್ಜಿದಾರರ ಪರ ಸಲಹೆಗಾರ ಪ್ರಕಾಶ್ ಗುಪ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಮಹಿಳೆಯರ ದೇವಾಲಯದ ಪ್ರವೇಶದ ಬಗ್ಗೆ ತಾರತಮ್ಯ ತೋರುವುದು ಹಿಂದೂ ಧರ್ಮದ ಭಾಗವಲ್ಲ. ಯಾವುದೇ ಮಹಿಳೆಯ ನೋಟದಿಂದ ಯಾರ ಬ್ರಹ್ಮಚರ್ಯದ ಮೇಲೂ ಪರಿಣಾಮ ಬೀರುವುದಿಲ್ಲ. ಅದ್ದರಿಂದ ಅಂತಹ ಆಚರಣೆಗಳಿಗೆ ಅರ್ಥವಿಲ್ಲ ಎಂದು ಹೇಳಿದ್ದಾರೆ.

    ಸಂವಿಧಾನದ 14ನೇ ವಿಧಿ ಸಮಾನತೆಯ ಹಕ್ಕು. 15ನೇ ವಿಧಿ ಧರ್ಮ, ಜಾತಿ, ಲಿಂಗ ಅಥವಾ ಸ್ಥಳದ ಆಧಾರ ಮೇಲೆ ಅಸಮಾನತೆ ತೋರುವಂತಿಲ್ಲ. 17ನೇ ವಿಧಿ ಅಸ್ಪೃಶ್ಯತೆಯನ್ನು ಆಚರಣೆ ಮಾಡುವುದನ್ನು ನಿಷೇಧಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

  • ಟೋಲ್ ಕೇಳಿದ್ದಕ್ಕೆ ಗೇಟ್ ಮುರಿದ ಶಾಸಕ: ದರ್ಪದ ವಿಡಿಯೋ ನೋಡಿ

    ಟೋಲ್ ಕೇಳಿದ್ದಕ್ಕೆ ಗೇಟ್ ಮುರಿದ ಶಾಸಕ: ದರ್ಪದ ವಿಡಿಯೋ ನೋಡಿ

    ತಿರುವನಂತಪುರಂ: ಟೋಲ್ ಶುಲ್ಕ ಕಟ್ಟಿ ಎಂದು ಹೇಳಿದ್ದಕ್ಕೆ ಕೇರಳದ ಶಾಸಕರೊಬ್ಬರು ಪ್ಲಾಜಾದಲ್ಲೇ ಗುಂಡಾವರ್ತನೆ ತೋರಿದ್ದು ವಿಡಿಯೋ ವೈರಲ್ ಆಗಿದೆ.

    ಕೇರಳದ ಪಕ್ಷೇತರ ಶಾಸಕ ಪಿ.ಸಿ.ಜಾರ್ಜ್ ಮತ್ತು ಸಹಚಚರು ತ್ರಿಶ್ಯೂರ್ ನಲ್ಲಿರುವ ಟೋಲ್ ಪ್ಲಾಜಾದ ಶುಲ್ಕ ನೀಡಲು ನಿರಾರಿಸಿ, ಸಿಬ್ಬಂದಿಯ ಮಾತನ್ನು ಕೇಳದೇ ಸ್ವಯಂ ಚಾಲಿತ ಗೇಟ್ ಮುರಿದು ದರ್ಪ ಮೆರೆದಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಟೋಲ್ ಪ್ಲಾಜಾ ಸಿಬ್ಬಂದಿ ಪ್ರತಿ ವಾಹನ ತಡೆದು ಶುಲ್ಕ ಪಡೆಯುವಂತೆ ಮಂಗಳವಾರ ರಾತ್ರಿ ಕಾರನ್ನು ತಡೆದಿದ್ದಾರೆ. ಕಾರನ್ನು ನಿಲ್ಲಿಸಿದ್ದಕ್ಕೆ ಇಳಿದು ಬಂದ ಶಾಸಕ ಪಿ.ಸಿ.ಜಾರ್ಜ್ ತಡೆ ಹಾಕುವ ಸ್ವಯಂ ಚಾಲಿತ ಗೇಟ್ ಮುರಿದು ಹಣ ಕೇಳಿದ ಟೋಲ್ ಗೇಟ್ ಸಿಬ್ಬಂದಿಯನ್ನು ಹೆದರಿಸಿದ್ದಾರೆ. ಅಷ್ಟೇ ಅಲ್ಲದೇ ಅರ್ಧ ಸ್ವಯಂ ಚಾಲಿತ ಗೇಟನ್ನು ಮುರಿದಿದ್ದಾರೆ.

    ಅರ್ಧ ತುಂಡಾಗಿದ್ದರಿಂದ ಕಾರು ಮುಂದಕ್ಕೆ ಹೋಗಲು ಅಡ್ಡಿಯಾಗುತಿತ್ತು. ಈ ವೇಳೆ ಸಹಚರರು ಸ್ವಯಂ ಚಾಲಿತ ಗೇಟ್ ಮೇಲೆತ್ತಲು ಹೇಳಿದ್ದರು. ಇದಕ್ಕೆ ಒಪ್ಪದ ಸಿಬ್ಬಂದಿಗೆ ಶಾಸಕರ ಸಹಚರರು ಬೆದರಿಕೆ ಹಾಕಿ, ಗೇಟ್ ಅನ್ನು ಸಂಪೂರ್ಣವಾಗಿ ಮುರಿದಿದ್ದಾರೆ. ಕೊನೆಗೂ ಹಣ ನೀಡದೇ ಶಾಸಕ ಹಾಗೂ ಆತನ ಸಹಚರರು ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ.