Tag: Kerala Women

  • ಯುಎಇಯಲ್ಲಿ ಕೇರಳದ ಮಹಿಳೆ ಆತ್ಮಹತ್ಯೆ; ಪತಿ, ಅತ್ತೆ-ಮಾವ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

    ಯುಎಇಯಲ್ಲಿ ಕೇರಳದ ಮಹಿಳೆ ಆತ್ಮಹತ್ಯೆ; ಪತಿ, ಅತ್ತೆ-ಮಾವ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

    – ಬೆಳ್ಳಗಿದ್ದಾಳೆಂದು ತಲೆಗೂದಲು ಕತ್ತರಿಸಿ ಕಪ್ಪಗಿದ್ದ ಪತಿ ಮನೆಯವರಿಂದ ಚಿತ್ರಹಿಂಸೆ

    ತಿರುವನಂತಪುರಂ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಮಗುವಿನೊಂದಿಗೆ ಕೇರಳದ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

    32 ವರ್ಷದ ಕೇರಳ ಮಹಿಳೆಯ ಪತಿ ಮತ್ತು ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಮೂಲದ ಸಂತ್ರಸ್ತೆ ವಿಪಂಚಿಕಾ ಮಣಿಯನ್ ಜುಲೈ 8 ರಂದು ತನ್ನ ಶಾರ್ಜಾ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಆಕೆಯ ಒಂದು ವರ್ಷದ ಮಗಳು ಕೂಡ ಸಾವನ್ನಪ್ಪಿದ್ದಾಳೆ. ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ವಿಧಿವಿಜ್ಞಾನ ವರದಿಯಿಂದ ಬಹಿರಂಗವಾಗಿದೆ. ಮೃತ ಮಹಿಳೆ ಬರೆದಿದ್ದಾರೆ ಎನ್ನಲಾದ ಮಲಯಾಳಂ ಭಾಷೆಯ ಕೈಬರಹದ ಪತ್ರವೊಂದು ಮನೆಯಲ್ಲಿ ಸಿಕ್ಕಿದೆ. ಮನೆಯಲ್ಲಿ ದೌರ್ಜನ್ಯ, ಚಿತ್ರಹಿಂಸೆ ನೀಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.

    ಪತಿ ನಿಧೀಶ್ ವಲಿಯವೀಟ್ಟಿಲ್ ಮತ್ತು ಅವರ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಮಗಳಿಗೆ ಆಕೆಯ ಪತಿ ಮತ್ತು ಅತ್ತೆ-ಮಾವ ಎಲ್ಲ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆಯ ತಾಯಿ ಶ್ಯಾಮಲಾ ಆರೋಪಿಸಿದ್ದಾರೆ.

    ಮಣಿಯನ್ ಮತ್ತು ವಲಿಯವೀಟ್ಟಿಲ್ 2020 ರಲ್ಲಿ ವಿವಾಹವಾದರು. ಸಂತ್ರಸ್ತೆಯ ಪತಿ ಮತ್ತು ಆಕೆಯ ಕುಟುಂಬದವರು ಕಪ್ಪು ವರ್ಣೀಯರಾಗಿದ್ದರು. ಬೆಳ್ಳಗಿದ್ದ ಆಕೆಯನ್ನು ಆಕರ್ಷಕವಾಗಿ ಕಾಣಬಾರದೆಂದು ತಲೆಗೂದಲನ್ನು ಕತ್ತರಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

  • ಪಾನೀಯದಲ್ಲಿ ವಿಷ ಬೆರೆಸಿ ಬಾಯ್‌ಫ್ರೆಂಡ್‌ ಕೊಲೆ ಮಾಡಿದ್ದ ಕೇರಳದ ಮಹಿಳೆಗೆ ಮರಣದಂಡನೆ

    ಪಾನೀಯದಲ್ಲಿ ವಿಷ ಬೆರೆಸಿ ಬಾಯ್‌ಫ್ರೆಂಡ್‌ ಕೊಲೆ ಮಾಡಿದ್ದ ಕೇರಳದ ಮಹಿಳೆಗೆ ಮರಣದಂಡನೆ

    ತಿರುವನಂತಪುರಂ: ಪಾನೀಯದಲ್ಲಿ ವಿಷ ಬೆರೆಸಿ ಬಾಯ್‌ಫ್ರೆಂಡ್‌ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇರಳದ ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

    ಘಟನೆ ನಡೆದು ಸುಮಾರು ಎರಡು ವರ್ಷಗಳ ನಂತರ, ಗ್ರೀಷ್ಮಾ ಎಂಬ ಮಹಿಳೆಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ಈಕೆ ತನ್ನ 23 ವರ್ಷದ ಗೆಳೆಯ ಶರೋನ್ ರಾಜ್‌ಗೆ ವಿಷ ನೀಡಿ ಕೊಲೆ ಮಾಡಿದ್ದಳು. ಬಳಿಕ ಆಕೆಯೂ ವಿಷ ಸೇವಿಸಿದ್ದಳು. ಕೊನೆಗೆ ಆಕೆ ಬದುಕುಳಿದಿದ್ದಳು.

    ಕಳೆದ ವಾರ ಕೊಲೆಗೆ ಗ್ರೀಷ್ಮಾ ಮತ್ತು ಆಕೆಯ ಚಿಕ್ಕಪ್ಪನನ್ನು ದೋಷಿಗಳೆಂದು ತೀರ್ಪು ನೀಡಿದ ಸ್ಥಳೀಯ ನ್ಯಾಯಾಲಯವು, ಆರೋಪಿಗಳ ವಯಸ್ಸನ್ನು ಅಪರಾಧದ ಗಂಭೀರತೆಗಿಂತ ಹೆಚ್ಚಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಗ್ರೀಷ್ಮಾ ಕೇರಳದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಅತ್ಯಂತ ಕಿರಿಯ ಮಹಿಳೆ.

    2022 ರಲ್ಲಿ, ಗ್ರೀಷ್ಮಾ ತನ್ನ ಗೆಳೆಯನಿಗೆ ಪ್ಯಾರಾಕ್ವಾಟ್ ಎಂಬ ಕಳೆನಾಶಕ ಬೆರೆಸಿದ ಪಾನೀಯವನ್ನು ನೀಡಿದ್ದಳು. 11 ದಿನಗಳ ನಂತರ ಬಹು ಅಂಗಾಂಗ ವೈಫಲ್ಯದಿಂದ ಆತ ಸಾವನ್ನಪ್ಪಿದ್ದ. ತಮಿಳುನಾಡಿನ ಸೇನಾ ಸಿಬ್ಬಂದಿಯೊಂದಿಗೆ ಗ್ರೀಷ್ಮಾಳ ವಿವಾಹ ನಿಶ್ಚಯವಾಗಿತ್ತು. ಆದರೆ, ಆಕೆಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಬಾಯ್‌ಫ್ರೆಂಡ್‌ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಆಕೆ ಕೊಲೆಗೆ ಸಂಚು ರೂಪಿಸಿದ್ದಳು.

    ಗ್ರೀಷ್ಮಾ ಈ ಹಿಂದೆಯೂ ಹಣ್ಣಿನ ರಸದಲ್ಲಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಬೆರೆಸಿ ರಾಜ್‌ಗೆ ವಿಷ ನೀಡಲು ಪ್ರಯತ್ನಿಸಿದ್ದಳು. ಆದರೆ ಅದರ ಕಹಿ ರುಚಿಯಿಂದಾಗಿ ಕುಡಿಯಲು ನಿರಾಕರಿಸಿದ್ದ. ಇದರಿಂದ ಕೊಲೆ ಯತ್ನ ವಿಫಲವಾಗಿತ್ತು.