Tag: Kerala Congress

  • ನಿಮಗೆ ನಾಚಿಕೆಯಾಗಬೇಕು – ಕೇರಳ ಕಾಂಗ್ರೆಸ್‌ ವಿರುದ್ಧ ಪ್ರೀತಿ ಝಿಂಟಾ ಕೆಂಡಾಮಂಡಲ

    ನಿಮಗೆ ನಾಚಿಕೆಯಾಗಬೇಕು – ಕೇರಳ ಕಾಂಗ್ರೆಸ್‌ ವಿರುದ್ಧ ಪ್ರೀತಿ ಝಿಂಟಾ ಕೆಂಡಾಮಂಡಲ

    ನವದೆಹಲಿ: ನಿಮಗೆ ನಾಚಿಕೆಯಾಗಬೇಕು ಎಂದು ಬಾಲಿವುಡ್‌ ನಟಿ ಪ್ರೀತಿ ಝಿಂಟಾ (Preity Zinta) ಕೇರಳ ಕಾಂಗ್ರೆಸ್‌ (Kerala Congress) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕೇರಳ ಕಾಂಗ್ರೆಸ್‌ ನ್ಯೂ ಇಂಡಿಯಾ ಕೋಆಪರೇಟಿವ್‌ ಬ್ಯಾಂಕ್‌ (New India Cooperative Bank) ಅಕ್ರಮದ ವಿಚಾರವನ್ನು ಪ್ರಸ್ತಾಪಿಸಿ ಪ್ರೀತಿ ಝಿಂಟಾ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಈ ಆರೋಪಕ್ಕೆ ಪ್ರೀತಿ ಝಿಂಟಾ ಗರಂ ಆಗಿ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗದುಕೊಂಡಿದ್ದಾರೆ.

    ಕೇರಳ ಕಾಂಗ್ರೆಸ್‌ ಹೇಳಿದ್ದೇನು?
    ಪ್ರೀತಿ ಝಿಂಟಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ನೀಡಿದ್ದಾರೆ. ಪ್ರೀತಿ ಝಿಂಟಾ ನ್ಯೂ ಇಂಡಿಯಾ ಕೋಆಪರೇಟಿವ್‌ ಬ್ಯಾಂಕ್‌ನಿಂದ 18 ಕೋಟಿ ರೂ. ಸಾಲ ಮಾಡಿದ್ದರು. ಈ ಸಾಲವನ್ನು ಮನ್ನಾ ಮಾಡಲಾಗಿದೆ. ಕಳೆದ ವಾರ ಬ್ಯಾಂಕ್‌ ದಿವಾಳಿಯಾಗಿದ್ದು ಠೇವಣಿದಾರರು ತಮ್ಮ ಹಣಕ್ಕಾಗಿ ಬೀದಿಗಿಳಿದಿದ್ದಾರೆ ಎಂದು ಪೋಸ್ಟ್‌ ಮಾಡಿತ್ತು.  ಇದನ್ನೂ ಓದಿ: 37 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಗೋವಿಂದ, ಸುನೀತಾ ಅಹುಜಾ?

     

    ಪ್ರೀತಿ ಝಿಂಟಾ ಹೇಳಿದ್ದೇನು?
    ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾನೇ ನಿರ್ವಹಿಸುತ್ತೇನೆ. ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು ನನಗಾಗಿ ಯಾವುದೇ ಸಾಲ ಮನ್ನಾ ಮಾಡಿಲ್ಲ. ಒಂದು ರಾಜಕೀಯ ಪಕ್ಷ ಅಥವಾ ಅವರ ಪ್ರತಿನಿಧಿಯು ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಮತ್ತು ನನ್ನ ಹೆಸರು ಮತ್ತು ಚಿತ್ರಗಳನ್ನು ಬಳಸಿಕೊಂಡು ಕೆಟ್ಟ ಗಾಸಿಪ್ ತೊಡಗಿರುವುದು ನನಗೆ ಆಘಾತವನ್ನುಂಟು ಮಾಡಿದೆ. ತೆಗೆದುಕೊಂಡ ಸಾಲವನ್ನು 10 ವರ್ಷಗಳ ಹಿಂದೆ ಸಂಪೂರ್ಣವಾಗಿ ಮರುಪಾವತಿಸಲಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!

    ಪ್ರೀತಿ ಝಿಂಟಾ ಸ್ಪಷ್ಟನೆಗೆ ಕೇರಳ ಕಾಂಗ್ರೆಸ್‌ ದೀರ್ಘ ಪೋಸ್ಟ್‌ ಮಾಡಿ ಪ್ರತ್ಯುತ್ತರ ನೀಡಿದೆ. ಮಾಧ್ಯಮವೊಂದರ ವರದಿಯನ್ನು ಉಲ್ಲೇಖಿಸಿ ಈ ಪೋಸ್ಟ್‌ ಮಾಡಲಾಗಿದೆ. ಕುಖ್ಯಾತ ಐಟಿ ಸೆಲ್‌ಗೆ ತಮ್ಮ ಖಾತೆಯನ್ನು ಹಸ್ತಾಂತರಿಸಿದ ಇತರ ಸೆಲೆಬ್ರಿಟಿಗಳಿಗಿಂತ ಭಿನ್ನವಾಗಿ ನೀವು ನಿಮ್ಮ ಸ್ವಂತ ಖಾತೆಯನ್ನು ನಿರ್ವಹಿಸುತ್ತಿದ್ದೀರಿ ಎಂದು ತಿಳಿದುಕೊಳ್ಳಲು ಸಂತೋಷವಾಯಿತು ಎಂದು ಹೇಳಿದೆ.

     

  • ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

    ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

    ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಮಾತ್ರ ಕಾಸ್ಟಿಂಗ್ ಕೌಚ್ ಇಲ್ಲ.. ಕೇರಳ ರಾಜಕಾರಣದಲ್ಲೂ ಇದು ಹಾಸುಹೊಕ್ಕಾಗಿದ್ಯಂತೆ. ಕೇರಳ ಕಾಂಗ್ರೆಸ್ ಘಟಕದಲ್ಲಿ ಕ್ಯಾಸ್ಟಿಂಗ್ ಕೌಚ್ (Casting Couch) ರೀತಿಯ ಪರಿಸ್ಥಿತಿಗಳಿವೆ ಎಂದು ಕಾಂಗ್ರೆಸ್ ನಾಯಕಿ ಸಿಮಿ ರೋಸ್‌ಬೆಲ್ ಜಾನ್ (Simi Rosebell John) ಬಾಂಬ್‌ ಸಿಡಿಸಿದ್ದಾರೆ. ಈ ಬೆನ್ನಲ್ಲೇ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC)ಯು ರೋಸ್‌ಬೆಲ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

    ಪಕ್ಷದಲ್ಲಿ ತುಂಬಾ ಹೆಣ್ಮಕ್ಕಳು, ಪುರುಷ ನಾಯಕರಿಂದ ಆಕ್ಷೇಪಾರ್ಹವಾದ ರೀತಿ ಕಿರುಕುಳ ಎದುರಿಸ್ತಿದ್ದಾರೆ. ಉನ್ನತ ಹುದ್ದೆಗಳ ಆಸೆ ತೋರಿಸಿ ಪಕ್ಷದ ಕೆಲವು ಹಿರಿಯ ನಾಯಕರು, ಮಹಿಳಾ ನಾಯಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ಭಯಾನಕ ಅನುಭವಗಳನ್ನು ಕೆಲವರು ತಮ್ಮ ಬಳಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಗತ್ಯ ಸಾಕ್ಷ್ಯಗಳು ನನ್ನ ಬಳಿಯಿವೆ. ಸಮಯ ಬಂದಾಗ ಅವುಗಳನ್ನು ಬಯಲು ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ಕೆಲ ಮಹಿಳಾಮಣಿಗಳು ಅರ್ಹತೆ ಇಲ್ಲದಿದ್ದರೂ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಹೈಕಮಾಂಡ್‌ಗೆ ಆಪ್ತವಾಗಿರುವ ಮಂದಿಗೆ ಅವಕಾಶ ಸಿಕ್ತಿವೆ ಎಂದು ಆರೋಪಿಸಿದ್ದಾರೆ. ಸಿಮಿ ರೋಸ್‌ಬೆಲ್ ಮಾತು ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿವೆ. ಕಾಂಗ್ರೆಸ್‌ನಲ್ಲೂ ಆಂತರಿಕ ಸಂಘರ್ಷಕ್ಕೆ ಕಾರಣವಾಗಿವೆ. ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ – 9 ಸಾವು, ಜನಜೀವನ ಅಸ್ತವ್ಯಸ್ತ

    ಸಿಮಿ ರೋಸ್‌ಬೆಲ್ ವಿರುದ್ಧ ಕೆಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿಯ ಮಹಿಳಾ ಮುಖಂಡರು, ಪಿಸಿಸಿಯ ಮಹಿಳಾ ಪದಾಧಿಕಾರಿಗಳು ಮತ್ತು ಮಹಿಳಾ ಕಾಂಗ್ರೆಸ್ ಮುಖ್ಯಸ್ಥರು ಹೈಕಮಾಂಡ್‌ಗೆ ದೂರು ನೀಡಿದೆ. ಆದ್ರೆ, ಈ ಆರೋಪಗಳೆಲ್ಲಾ ಸುಳ್ಳು ಎಂದು ಕೇರಳ ಕಾಂಗ್ರೆಸ್ ಘಟಕ ತಿಳಿಸಿದೆ. ಅಲ್ಲದೇ, ತನಿಖೆಗೂ ಮುಂದಾಗಿದೆ. ಇದನ್ನೂ ಓದಿ: ಮಹಾ ಮಳೆಗೆ ಅವಾಂತರ – ಸೋಮವಾರ ಬೀದರ್‌ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

  • ತುಂಬದ ವಂದೇ ಭಾರತ್ ರೈಲು, 50%ಗೂ ಅಧಿಕ ಖಾಲಿ – ದತ್ತಾಂಶದೊಂದಿಗೆ ಆರೋಪಿಸಿದ ಕಾಂಗ್ರೆಸ್‌

    ತುಂಬದ ವಂದೇ ಭಾರತ್ ರೈಲು, 50%ಗೂ ಅಧಿಕ ಖಾಲಿ – ದತ್ತಾಂಶದೊಂದಿಗೆ ಆರೋಪಿಸಿದ ಕಾಂಗ್ರೆಸ್‌

    ನವದೆಹಲಿ: ಅತ್ಯಧಿಕ ಪ್ರಯಾಣ ದರ ಹಿನ್ನೆಲೆ ಭಾರತದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳು (Vande Bharat Trains) 50% ಗೂ ಕಡಿಮೆ ಪ್ರಯಾಣಿಕರನ್ನು ಹೊಂದಿವೆ ಎಂದು ಕೇರಳ ಕಾಂಗ್ರೆಸ್ (Kerala Congress) ಘಟಕ ಆರೋಪಿಸಿದೆ. IRCTC ಬುಕ್ಕಿಂಗ್ ದತ್ತಾಂಶ ಉಲ್ಲೇಖಿಸಿದ್ದು, ವಂದೇ ಭಾರತ್ ರೈಲುಗಳು 50% ಖಾಲಿ ಅಥವಾ ಭಾಗಶಃ ಖಾಲಿ ಸೀಟುಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.

    ರೈಲು ಹೊರಡುವ ಕೆಲವೇ ಗಂಟೆಗಳ ಮೊದಲು IRCTC ಯಿಂದ ಪಡೆದ ಈ ಡೇಟಾವು ತತ್ಕಾಲ್ ಬುಕಿಂಗ್ ಅನ್ನು ಹೊರತುಪಡಿಸಿ ಕೇವಲ ಸಾಮಾನ್ಯ ವರ್ಗದ ಮೇಲೆ ಕೇಂದ್ರೀಕರಿಸುತ್ತದೆ. ರಜೆಯ ಋತುವಿನಲ್ಲಿ ದೇಶಾದ್ಯಂತ ಜನರ ಹೆಚ್ಚಿನ ಪ್ರಯಾಣದ ಹೊರತಾಗಿಯೂ, ವಂದೇ ಭಾರತ್‌ಗಾಗಿ ಬುಕ್ಕಿಂಗ್‌ಗಳು ಆಶ್ಚರ್ಯಕರವಾಗಿ ಕಡಿಮೆಯಾಗಿವೆ ಎಂದು ಅದು ಹೇಳಿದೆ. ಇದನ್ನೂ ಓದಿ: ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ

    ಈ ಡೇಟಾವು ಆರ್ಥಿಕ ಅಸಮಾನತೆಗಳಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಶ್ರೀಮಂತ ಪ್ರದೇಶಗಳು ವಂದೇ ಭಾರತ ಪ್ರಯಾಣದ ಹೆಚ್ಚಿನ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಆದರೆ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳು ಈ ದುಬಾರಿ ಸೇವೆಗಳನ್ನು ಪಡೆಯಲು ಹೆಣಗಾಡುತ್ತವೆ. ಇತರ ರೈಲುಗಳಲ್ಲಿ ವೇಟಿಂಗ್ ಲಿಸ್ಟ್‌ಗಳನ್ನು ತೋರಿಸಿದರೆ ವಂದೇ ಭಾರತ್ ರೈಲುಗಳಲ್ಲಿ ಅನೇಕ ಸೀಟುಗಳು ಖಾಲಿ ಉಳಿದಿವೆ ಎಂದು ಕೇರಳ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

    ಮುಂಬೈ-ಸೋಲಾಪುರ ವಂದೇ ಭಾರತ್‌ನಲ್ಲಿ 277 ಸೀಟುಗಳು ಖಾಲಿ ಇವೆ. ಆದರೆ ಇದೇ ಮಾರ್ಗದ ಬಹುತೇಕ ಎಲ್ಲಾ ರೈಲುಗಳು ವೇಟಿಂಗ್ ಲಿಸ್ಟ್‌ನಲ್ಲಿವೆ. ಇದರರ್ಥ ರೈಲುಗಳಿಗೆ ಭಾರಿ ಬೇಡಿಕೆಯಿದೆ. ಆದರೆ ಇದು ದುಬಾರಿ ರೈಲಿಗಳಿಗೆ ಅಲ್ಲ. ವಂದೇ ಭಾರತ್ ರೈಲುಗಳ ಟಿಕೆಟ್ ದರವನ್ನು ಗರೀಬ್ ರಥಕ್ಕೆ ಹೋಲಿಸಿ ಗರೀಬ್ ರಥವು 770 ರೂ.ಗಳಲ್ಲಿ ಟಿಕೆಟ್‌ ದರ ಇದ್ದರೆ ಇದೇ ಪ್ರಯಾಣಕ್ಕೆ ವಂದೇ ಭಾರತ್‌ನ 1,720 ರೂ ನಿಗದಿಪಡಿಸಿದೆ. ಇದು ಸಾಮಾನ್ಯ ಪ್ರಯಾಣಿಕರಿಗೆ ನಿಷೇಧಿಸುತ್ತದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಮೂವರು ಭಯೋತ್ಪಾದಕರ ಹತ್ಯೆ

    ದರ ವಂದೇ ಭಾರತ್‌ನ ನಿಜವಾದ ಸಮಸ್ಯೆಯಾಗಿದೆ. ನಮ್ಮ ಹೆಚ್ಚಿನ ಜನಸಂಖ್ಯೆಯು ದರ ನಿಭಾಯಿಸಲು ಸಾಧ್ಯವಾದಾಗ ಮಾತ್ರ ವಂದೇ ಭಾರತ್ ಲಾಭ ಜನರಿಗೆ ಆಗಲಿದೆ ಎಂದ ಕಾಂಗ್ರೆಸ್, ತುಂಬಿದ ಸಾಮಾನ್ಯ ರೈಲಿನ ವೀಡಿಯೋ ಪೋಸ್ಟ್ ಮಾಡಿ ಇದು ಸರ್ಕಾರದ ದುರಂತ. ಈ ದುಬಾರಿ ರೈಲುಗಳು ಖಾಲಿಯಾಗಿ ಓಡುವುದನ್ನು ನೀವು ನೋಡುತ್ತೀರಿ ಎಂದು ಟೀಕಿಸಿದೆ.