Tag: Kempe Gowda Jayanti

  • ಪಬ್ಲಿಕ್ ಟಿವಿ ನಿರೂಪಕಿ ದಿವ್ಯಜ್ಯೋತಿಗೆ ಕೆಂಪೇಗೌಡ ಪ್ರಶಸ್ತಿ

    ಪಬ್ಲಿಕ್ ಟಿವಿ ನಿರೂಪಕಿ ದಿವ್ಯಜ್ಯೋತಿಗೆ ಕೆಂಪೇಗೌಡ ಪ್ರಶಸ್ತಿ

    ಬೆಂಗಳೂರು: ಪಬ್ಲಿಕ್ ಟಿವಿ ನಿರೂಪಕಿ ದಿವ್ಯಜ್ಯೋತಿ ಅವರಿಗೆ ಈ ಬಾರಿಯ ಕೆಂಪೇಗೌಡ ಪ್ರಶಸ್ತಿ ಸಿಕ್ಕಿದೆ. ಮಾಧ್ಯಮ ಕ್ಷೇತ್ರ ವಿಭಾಗದಲ್ಲಿ ದಿವ್ಯಜ್ಯೋತಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರು:
    ನಾಗರಾಜು, ರವಿಶಂಕರ್ ಭಟ್, ರಾಮಕೃಷ್ಣ, ಸುದರ್ಶನ್, ಶಿವರಾಮ್, ರಾಘವೇಂದ್ರ ಗಣಪತಿ, ಧ್ಯಾನ ಪೂಣಚ್ಚ, ರಾಮಚಂದ್ರ ಎನ್.ಎಸ್. ಚೇತನ್, ದಿವ್ಯ ಜ್ಯೋತಿ, ರವಿ ಗಾಣಿಗ, ಉಲ್ಲಾಸ್, ಎಂಸಿ.ಶೋಭ, ಪ್ರಸನ್ನ, ಸತೀಶ್ ಆಚಿಜಿನಪ್ಪ, ಸಾಹುಕಾರ್ ಎಸ್ ಚಂದ್ರಶೇಖರ್ ರಾವ್, ಹರಿಕುಮಾರ್, ಗೋವಿಂದ ಮೂರ್ತಿ, ವೆಂಕಟೇಶ್ ದಿನಕರನ್, ತಿನಗರ ವೇಲು, ಸಿದ್ಧರಾಜು ಸೋಸಲೆ, ತಾರನಹಳ್ಳಿ ಚಂದ್ರಶೇಖರ್, ವಿ.ವಿ.ಸತ್ಯನಾರಾಯಣ, ಸೋಮಣ್ಣ ಮಾಚಿಮಾದ, ಪ್ರಸನ್ ಕುಮಾರ್, ಬಾಲಕೃಷ್ಣ.ಯು, ಮಂಗಳಾ ನಾಗರಾಜು, ಎಂ.ಎಸ್.ಮಣಿ, ಬಿ.ಜಿ.ಶೇಖರ್ ಗೌಡ, ಶ್ರೀವತ್ಸ. ಬಿ.ಆರ್, ಮು.ವೆಂಕಟೇಶಯ್ಯ, ಕೆ.ಎಂ.ಜೆಕ್ರಿಯಾ, ಪ್ರವೀಣ್ ಕುಮಾರ್.

    ಒಟ್ಟು ಈ ಬಾರಿ 244 ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ಬಿಬಿಎಂಪಿ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೆಂಪೇಗೌಡ ಜಯಂತಿ ಮುಂದೂಡುವಂತೆ ಸಿಎಂ ಸೂಚನೆ

    ಕೆಂಪೇಗೌಡ ಜಯಂತಿ ಮುಂದೂಡುವಂತೆ ಸಿಎಂ ಸೂಚನೆ

    ಬೆಂಗಳೂರು: ಜುಲೈ 18 ರಂದು ನಿಗದಿಯಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯ ಸರ್ಕಾರ ಮತ್ತೇ ಮುಂದೂಡಿಕೆ ಮಾಡಿದೆ.

    ಸಮಯದ ಅಭಾವ ಹಿನ್ನೆಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಜುಲೈ 18 ರಂದು ಕಾರ್ಯಕ್ರಮ ಬೇಡ. ಬೇರೊಂದು ದಿನ ಆಚರಣೆ ಮಾಡಿ ಎಂದು ಸೂಚಿಸಿದ್ದಾರೆ.

    ಕೆಂಪೇಗೌಡ ಜಯಂತಿ ನಿಮಿತ್ತ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಿಎಂ ಕುಮಾರಸ್ವಾಮಿ ಅವರ ಸೂಚನೆಯಿಂದಾಗಿ ಕಾರ್ಯಕ್ರಮದ ದಿನಾಂಕವನ್ನು ಮುಂದುಡಲಾಗಿದೆ.