Tag: keerthi gowda

  • ನಿರ್ಮಾಪಕಿಯಾದ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ

    ನಿರ್ಮಾಪಕಿಯಾದ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ

    ದುನಿಯಾ ವಿಜಯ್ (Duniya Vijay)  ನಟನೆಯಿಂದ ನಿರ್ದೇಶಕರ ಭಡ್ತಿ ಪಡೆದಿದ್ದರೆ, ಇದೀಗ ಅವರ 2ನೇ ಪತ್ನಿ ಕೀರ್ತಿ ಗೌಡ (Keerthi Gowda) ನಿರ್ಮಾಪಕಿಯಾಗುತ್ತಿದ್ದಾರೆ. ಅರ್ಜುನ್ ಎಂಟರ್ ಟೇನ್ಮೆಂಟ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ಮೊದಲ ಬಾರಿಗೆ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ.

    ಕೀರ್ತಿ ಗೌಡ ಅವರಿಗೆ ಸಿನಿಮಾ ರಂಗ ಹೊಸದೇನೂ ಅಲ್ಲ. ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ಹಲವಾರು ಚಿತ್ರಗಳಲ್ಲೂ ನಟಿಸಿದ್ದಾರೆ. ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದರು. ವಿಜಯ್ ಅವರ ಸಿನಿಮಾಗಳಿಗೆ ಸಹಾಯ ಮಾಡುತ್ತಿದ್ದರು. ಇದೀಗ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಮೊದಲ ನಿರ್ಮಾಣದ ಕಿರುಚಿತ್ರದಲ್ಲಿ ಬುಡಕಟ್ಟು ಮಕ್ಕಳ ಶಿಕ್ಷಣದ ಕುರಿತು ವಿಷಯ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವಂತಹ ಕೆಲಸಕ್ಕೆ ಅವರು ಮುಂದಾಗಿದ್ದಾರೆ.

     

    ಕೀರ್ತಿ ಗೌಡ ಕೇವಲ ನಟಿ ಮಾತ್ರವಲ್ಲ, ಸಂಗೀತದಲ್ಲೂ ಅವರಿಗೆ ಆಸಕ್ತಿಯಿದೆ. ಈ ಹಿಂದೆ ಹಿಂದೂಸ್ತಾನಿ ಸಂಗೀತ ಕಲಿಯುತ್ತಿರುವ ಕುರಿತು ಅವರು ಬರೆದುಕೊಂಡಿದ್ದರು. ಜೊತೆಗೆ ವಿಜಯ್ ಅವರ ಕಷ್ಟ, ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ  ವಿಜಯ್ ಅಭಿಮಾನಿಗಳ ಪಾಲಿಗೆ ನೆಚ್ಚಿನ ಅತ್ತಿಗೆ ಕೂಡ ಆಗಿದ್ದಾರೆ.

  • ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಬೆಂಗಳೂರು: ನಾಗರತ್ನ ಅವರು ದುನಿಯಾ ವಿಜಿ ಅವರ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮೋನಿಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ನಾಗರತ್ನ ಮನೆಯಲ್ಲಿ ಇಲ್ಲದ ಕಾರಣ ಅವರ ಮಗಳು ಮೋನಿಕಾರನ್ನು ವಶಕ್ಕೆ ಪಡೆದಿದ್ದರು. ಆದ್ದರಿಂದ ದುನಿಯಾ ವಿಜಿ ಮತ್ತು ಎರಡನೇ ಪತ್ನಿ ಕೀರ್ತಿಗೌಡ ಗಿರಿನಗರ ಪೊಲೀಸ್ ಠಾಣೆಯ ಬಳಿ ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಇಬ್ಬರು ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

    ಕೀರ್ತಿಗೌಡ ಅವರು ಮಾತನಾಡಿ, ಏನೇ ಪರಿಸ್ಥಿತಿ ಇರಬಹುದು ಇದೆಲ್ಲವನ್ನು ಮೀರಿ, ಯಾವುದೇ ಹೆಣ್ಣಿಗಾದರೂ ಈ ರೀತಿ ಹಲ್ಲೆ ಮಾಡಬಾದರು ಎಂದು ಮೋನಿಕಾ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ. ಅವರ ತಾಯಿ ಮಾಡಿದ ತಪ್ಪಿಗೆ, ಅಷ್ಟು ಚಿಕ್ಕ ಹುಡುಗಿಗೆ ಶಿಕ್ಷೆಯಾಗುವುದು ಬೇಡ. ಇಷ್ಟೆಲ್ಲಾ ನಡೆದಿದ್ದಕ್ಕೆ ಬೇಜಾರಿದೆ. 2-3 ವರ್ಷದಿಂದ ಒಟ್ಟಿಗೆ ಇದ್ದೆವು. ಆದರೆ ನಮ್ಮ ಮೇಲೆ ಹೊಡೆಸುವಷ್ಟು ದ್ವೇಷ ಇದೆ ಅಂತ ಗೊತ್ತಿರಲಿಲ್ಲ. ಈಗ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿ ಗಳಗಳನೇ ಅಳುತ್ತಾ ಹೋಗಿದ್ದಾರೆ.

    ಈ ವೇಳೆ ಮಾತನಾಡಿದ ವಿಜಿ ಪರ ವಕೀಲ ಶಿವಕುಮಾರ್, ನಾಗರತ್ನ ಅವರು ಇಷ್ಟಾದರೂ ಮಕ್ಕಳ ಭವಿಷ್ಯದ ಬಗ್ಗೆ ಲೆಕ್ಕಿಸದೆ ಈ ರೀತಿ ವರ್ತಿಸುತ್ತಿದ್ದಾರೆ. ಆದರೆ ನಾಗರತ್ನ ಅವರ ವಿರುದ್ಧ ಕೀರ್ತಿ ಅವರು ದೂರು ನೀಡಿದ್ದು, ವಿಜಯ್ ಅವರು ನೀಡಿಲ್ಲ. ಪ್ರಕರಣದಲ್ಲಿ ಮೋನಿಕಾ ಆರೋಪಿ ಆಗಿದ್ದರೆ. ಆದರೆ ದೂರಿನಲ್ಲಿ ಹೆಸರು ಕೈಬಿಟ್ಟರು ಪೊಲೀಸರು, ಕಾನೂನು ಅದನ್ನು ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ನಾಗರತ್ನ ಅವರು ಎಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಕಾನೂನು ನಿಯಮ ಅಡಿ ಎಲ್ಲವೂ ನಡೆಯಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H0T715sdeFM

  • ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ: ನಾಗರತ್ನ

    ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ: ನಾಗರತ್ನ

    ಬೆಂಗಳೂರು: ದುನಿಯಾ ವಿಜಯ್ ಅವರಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ. ಯಾರ ಜೀವನ ಹಾಳಾಗುತ್ತದೆ ಎನ್ನುವುದು ತಿಳಿಯುತ್ತದೆ. ಅವರ ಬಳಿ ಸಿನಿಮಾ ಇಲ್ಲದಿದ್ದರೆ ಬೇಕಾದರೆ ನಾನೇ ಸಿಡಿ ತರಿಸಿ ಕೊಡುತ್ತೇನೆ ಎಂದು ವಿಜಯ್ ಮೊದಲ ಪತ್ನಿ ನಾಗರತ್ನ ಹೇಳಿದ್ದಾರೆ.

    ಕತ್ರಿಗುಪ್ಪೆಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಂದು ಮಾತನಾಡಲು ನಿಮ್ಮ ಮುಂದೆ ಬಂದಿದ್ದು, ನನ್ನ ಕುಟುಂಬ ಬೀದಿಗೆ ಬರಲು ಕಾರಣರಾಗಿರುವ ಕೀರ್ತಿ ಬಗ್ಗೆ ಮಾತನಾಡಲು ಬಂದಿದ್ದೇನೆ. ಆಕೆ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ಏನಕ್ಕೆ ವಿಜಯ್ ಆಕೆ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಎನ್ನುವುದು ತಿಳಿದಿದೆ. ಆಕೆ ಸ್ಲಂ ನಿಂದ ಬಂದಿದ್ದಾಳೆ. ಆದರೆ ನಾನು ವಿಜಯ್ ಅವರಿಗೆ ಡಿವೋರ್ಸ್ ಕೊಟ್ಟಿಲ್ಲ.  ವರ್ಷಕ್ಕೆ ಒಬ್ಬರೂ ಬರುತ್ತಾರೆ, ಹೋಗುತ್ತಾರೆ ಎಂದು ಸುಮ್ಮನಿದ್ದೆ. ಅದಕ್ಕೆ ಕೀರ್ತಿ ಜೊತೆ ಇದ್ದಾಗಲೂ ನಾನು ಪ್ರಶ್ನೆ ಮಾಡಿಲ್ಲ. ಕೀರ್ತಿ ಯಾರ ಯಾರ ನಿರ್ಮಾಪಕ ಜೊತೆ ಓಡಾಡಿದ್ದಾಳೆ ಎನ್ನುವುದರ ಬಗ್ಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ನನ್ನ ಮಕ್ಕಳು, ಕುಟುಂಬವನ್ನು ಬೀದಿಪಾಲು ಮಾಡಲೆಂದೇ ಕೀರ್ತಿ ಆಗಮಿಸಿದ್ದು, ವಿಜಯ್ ವರ್ಷಕ್ಕೆ ಒಬ್ಬರಂತೆ ಕರೆದುಕೊಂಡು ಬರುತ್ತಿದ್ದರು. ಈಕೆಯೂ ಹಾಗೇ ಎಂದುಕೊಂಡಿದ್ದೆ. ಆದರೆ ಮಾಧ್ಯಮಗಳಲ್ಲಿ 2ನೇ ಹೆಂಡತಿ ಎಂದು ಹೇಳುತ್ತಿದ್ದರೆ ಸುಮ್ಮನೆ ಇರುವುದು ಹೇಗೆ? ವಿಜಯ್ ಅವರಿಗೆ ಈ ಕುರಿತು ಸಾಕಷ್ಟು ಬಾರಿ ಹೇಳಿದರೂ ಅವರು ಮಾತು ಕೇಳಲಿಲ್ಲ. ಕೀರ್ತಿ ಕುರಿತು ಎಲ್ಲಾ ದಾಖಲೆ ಇದ್ದು, ಅವುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ನನ್ನ ಮಕ್ಕಳಿಗೆ ಅಪ್ಪ-ಅಮ್ಮ ಇಬ್ಬರು ಬೇಕು. ನಾನು ನನ್ನ ಮಕ್ಕಳು ಬೀದಿಗೆ ಬರೋ ಪರಿಸ್ಥಿತಿಯಲ್ಲಿದ್ದೇವೆ. ನಾನು ಆಸ್ತಿಗೆ ಬಂದವಳಲ್ಲ, ನನಗೆ ವಿಜಯ್ ಬೇಕಷ್ಟೇ ಎಂದರು.

    ಇದೇ ವೇಳೆ ವಿಜಯ್ ಮಾಡಿರುವ ಆರೋಪಗಳ ಕುರಿತು ಉತ್ತರಿಸಿದ ಅವರು, ಮಕ್ಕಳ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ. ಮನೆ ಮಾತ್ರ ನನ್ನ ಹೆಸರಿನಲ್ಲಿದೆ. ಆದರೆ ನಮ್ಮ ಕುಟುಂಬದ ಹೆಸರಿನಲ್ಲಿ ಮೂರು ಮನೆ ಇದ್ದು, ಅವೆಲ್ಲಾ ಏನಾಗಿದೆ ಗೊತ್ತಿಲ್ಲ. ಈಗ ಬಾಡಿಗೆ ಮನೆಯಲ್ಲಿ ಯಾಕೆ ಇದ್ದಾರೆ ಎನ್ನುವುದು ಗೊತ್ತಿಲ್ಲ. ನನ್ನ ಗಂಡ ಅಮಾಯಕ ಈ ಕುರಿತು ಅವರಿಗೆ ಏನು ಗೊತ್ತಿಲ್ಲ. ಅತ್ತೆ ಮಾವ ಅವರನ್ನು ನೋಡಿಕೊಳ್ಳೋಕೆ ಬಂದೆ ಎಂದು ಹೇಳುವ ಕೀರ್ತಿ ಈಗ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದರು.

    ಮಾಧ್ಯಮದ ಮುಂದೇ ವಿಜಯ್ ನನ್ನ ಪತಿ ಎಂದು ಪೋಸ್ ನೀಡಲು ಕೀರ್ತಿಗೆ ನಾಚಿಕೆ ಆಗಲ್ವಾ? ಅವಳ ನಡೆ ಮೀತಿ ಮೀರುತ್ತಿದೆ. ವಿಜಯ್ ಬಾಡಿಗೆ ಮನೆಗೆ ಹೋಗಲು ಕೀರ್ತಿಗೌಡ ಕಾರಣ. ಅಲ್ಲದೇ ಜೈಲಿಗೆ ಹೋಗಲು ಅವಳೇ ಕಾರಣ. ಅವಳು ದುಡ್ಡು ಮಾಡಲು ಬಂದಿದ್ದಾಳೆ. ಈ ಕುರಿತು ಎಲ್ಲಾ ದಾಖಲೆ ಸಂಗ್ರಹಿಸುತ್ತಿದ್ದೇನೆ. ಈ ಎಲ್ಲಾ ವಿಚಾರಗಳ ಸತ್ಯ ಇವತ್ತು ಅಲ್ಲದಿದ್ದರೂ ನಾಳೆ ವಿಜಿ ಅವರಿಗೆ ಗೊತ್ತಾಗುತ್ತೆ. ಅದಕ್ಕಾಗಿ ನಾನು ಕಾಯುತ್ತೇನೆ ಎಂದು ತಿಳಿಸಿದರು.

    ನನಗೆ ಇಬ್ಬರು ಎರಡು ಎರಡು ಹೆಣ್ಣು ಮಕ್ಕಳಿದ್ದಾರೆ. ಅವರ ಭವಿಷ್ಯ ಹಾಳಾಗಬಾರದೆಂದು ಸುಮ್ಮನಿದ್ದೆ. ಆದರೆ ನನಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಮುಂದೆ ಬರಬೇಕಾಯಿತು. ಕೀರ್ತಿ ಜೊತೆ ಇರುವ ಮಗು ಬಾಡಿಗೆ ಮಗು ಅದು ವಿಜಯ್ ಅವರದ್ದು ಅಲ್ಲ. ಈ ಕುರಿತು ವಿಜಯ್ ಅವರಿಗೆ ಅರ್ಥವಾದರೆ ಅವರೇ ನನ್ನ ಬಳಿ ಬಂದು ಮಾತನಾಡುತ್ತಾರೆ. ಯಾರಾದರು ವಿಜಯ್ 2ನೇ ಮದುವೆಗೆ ಹೋಗಿದ್ದೀರಾ? ಗಂಡ ಅಂತಾ ಹೇಗೆ ಹೇಳುತ್ತಾಳೆ? ಏನ್ ದಾಖಲೆ ಇದೆ? ಕೀರ್ತಿಗೌಡ ತಂದೆ ಯಾರು ಎಂದು ಮೊದಲು ಕೇಳಿ? ಯಾವತ್ತು ಕೀರ್ತಿಗೌಡ ನನ್ನ ಮಕ್ಕಳಿಗೆ ಚಿಕ್ಕಮ್ಮ ಅಲ್ಲ. ಏಕೆಂದರೆ ಇಟ್ಟುಕೊಂಡವರು ಎಲ್ಲರು ಚಿಕ್ಕಮ್ಮಂದಿರಲ್ಲ ಎಂದು ಕಿಡಿಕಾರಿದರು.

    ನನ್ನ ಗಂಡ ಹೇಗೆ ಮತ್ತೆ ನನ್ನ ಬಳಿ ಬರುತ್ತಾರೆ ಎಂಬುವುದು ನನಗೆ ಗೊತ್ತಿದೆ. ಅವರ ಮೇಲೆ ಈಗಲೂ ನನಗೆ ನಂಬಿಕೆ ಇದೆ. ಆದರೆ ಅವರು ಕಳೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಮಾತಿನಂತೆ ವಕೀಲರ ದಾಖಲೆ ಬಿಡುಗಡೆ ಮಾಡಲು ತಿಳಿಸಿ. ಈ ಕುರಿತು ಎಲ್ಲಾ ಮಾಹಿತಿ ಲಭ್ಯವಾದ ಬಳಿಕ ದಾಖಲೆ ಸಮೇತ ಉತ್ತರಿಸುತ್ತೇನೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿ ವೇಳೆ ವಿಜಯ್ ಹಾಗೂ ಕೀರ್ತಿ ಕುರಿತ ದಾಖಲೆ, ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಸುದ್ದಿಗೋಷ್ಠಿಯಲ್ಲಿ ಯಾವುದೇ ದಾಖಲೆ ಬಿಡುಗಡೆ ಮಾಡದೇ ಜಾರಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಿ ಜೈಲಿಗೆ ಹೋಗೋದಕ್ಕೆ ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ- ಮೊದಲ ಪತ್ನಿ ಗುಡುಗು

    ವಿಜಿ ಜೈಲಿಗೆ ಹೋಗೋದಕ್ಕೆ ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ- ಮೊದಲ ಪತ್ನಿ ಗುಡುಗು

    ಬೆಂಗಳೂರು: `ಜಯಮ್ಮನ ಮಗ’ ದುನಿಯಾ ವಿಜಿ ಬಾಳಲ್ಲಿ ಪತ್ನಿಯರ ಫೈಟ್ ಆರಂಭವಾಗಿದೆ. ಇದೀಗ ಎರಡನೇ ಪತ್ನಿ ಕೀರ್ತಿ ಗೌಡ ವಿರುದ್ಧ ಮೊದಲ ಪತ್ನಿ ನಾಗರತ್ನ ಗುಡುಗಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೊದಲ ಪತ್ನಿ ನಾಗರತ್ನ, ಕೀರ್ತಿ ಗೌಡ ಯಾವಾಗ ವಿಜಿ ಜೀವನದಲ್ಲಿ ಬಂದಳೋ ಅವತ್ತಿಂದ್ಲೇ ನಮ್ಮ ಮನೆಯಲ್ಲಿ ದರಿದ್ರ ಆರಂಭವಾಗಿದೆ. ಖಳನಟರಿಬ್ಬರು ನೀರು ಪಾಲಾದ್ರು. ಅವಾಗ ದೊಡ್ಡ ಸುದ್ದಿಯೇ ಆಗೋಯ್ತು. ಹೀಗೆ ಅವತ್ತಿಂದ ಬರೀ ಕೇಸ್ ಗಳೇ ಆಗಿ ಹೋಯಿತು. ಬರೀ ರಗಳೆಗಳೇ ಆಗಿ ಹೋಗಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ. ಕೀರ್ತಿ ಗೌಡ ಹೆಂಡತಿಯಲ್ಲ, ನಾನು ವಿಜಿ ಹೆಂಡತಿ. ಅವಳು ವಿಜಿ ಹೆಂಡತಿಯಾಗಲು ಯಾವುದೇ ಸಾಕ್ಷಿಯಿಲ್ಲ. ನಾನು ನನ್ನ ಮಕ್ಕಳ ಬಳಿ ಯಾಕೆ ಹೋಗಬಾರದು? ನಿನ್ನೆ ನನ್ನ ಮಕ್ಕಳನ್ನು ನೋಡಲು ಹೋಗಿದ್ದೆ. ಆವಾಗ ಆಕೆ ನನ್ನ ಮೇಲೆ ರೇಗಾಡಿದಳು, ಇದರಿಂದ ಸಿಟ್ಟುಗೊಂಡು ನಾನು ಆಕೆಗೆ ಎರಡೇಟು ಹೊಡೆದೆ ಅಂದ್ರು.

    ನನಗೆ ಹಾಗೂ ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಇದೆ. ಇದರಿಂದ ನಮಗೆ ಓಡಾಡಲು ಭಯ ಆಗ್ತಿದೆ. ನಮಗೆ ಏನಾದ್ರೂ ಆದರೆ ವಿಜಿಯೇ ಜವಾಬ್ದಾರಿ. ಹೀಗಾಗಿ ಕೀರ್ತಿ ಗೌಡ ನ್ನ ಮೇಲೆ ಕೈ ಮಾಡಿದ ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದೇನೆ ಅಂತ ಹೇಳಿದ್ರು.

    ಸುಮಾರು 2 ವರ್ಷದಿಂದ ಬರೀ ಕೇಸ್, ಕಂಪ್ಲೆಂಟ್, ಸ್ಟೇಷನ್ ಇದೇ ಆಗಿದೆ. ಒಬ್ರೂ ಬುದ್ಧಿ ಹೇಳುವವರು ಇಲ್ಲ. ನಾನೂ ಕೂಡ ಹೇಳಲು ತುಂಬಾನೇ ಪ್ರಯತ್ನಪಟ್ಟೆ. ಆದ್ರೆ ನಾನೇ ಕೆಟ್ಟವಳಾದೆ. ಮನೆಯಲ್ಲಿ ದೊಡ್ಡವರಿರುತ್ತಾರೆ. ಅವರಾದ್ರೂ ಸ್ವಲ್ಪ ತಿಳುವಳಿಕೆ ಹೇಳಬೇಕು. ಅವರು ಹೇಳುತ್ತಿಲ್ಲ. ದಾರಿ ತಪ್ಪಿಸಿ ಹಾಳು ಮಾಡುತ್ತಿದ್ದಾರೆ. ಒಂದು ಕಡೆ ನಾನು, ಇನ್ನೊಂದು ನನ್ನ ಮಕ್ಕಳು. ಈಗ ಯಾರೋ ಬಂದವಳು ಸ್ವಲ್ಪ ದಿವಸ ಇರುತ್ತಾಳೆ ಹೋಗುತ್ತಾಳೆ. ಅವರೆಲ್ಲ ಬರೋದು ದುಡ್ಡಿಗೆ. ಇರೋದ್ದಿಕ್ಕೆ ಸಂಸಾರ ಮಾಡವುದಿಕ್ಕೆ ಯಾರೂ ಬರಲ್ಲ. ನಮಗೆ ಮೂರು ಮಕ್ಕಳಿದ್ದಾರೆ. ನಮಗೆ ವಿಧಿಯಿಲ್ಲ ಹೀಗಾಗಿ ನಾವು ಸಂಸಾರ ಮಾಡಲೇಬೇಕು. ನಮಗೆ ಅವರು ಕೊನೆಯವರೆಗೆ ಬೇಕೇ ಬೇಕು ಅಂತ ಹೇಳಿದ್ರು.

    ಇವರೆಲ್ಲ ಎಂಜಾಯ್ ಮಾಡ್ಕೊಂಡು ಎರಡು ದಿವಸ ಇದ್ದು ಹೋಗುತ್ತಾರೆ. ಇವರೆಲ್ಲ ಬುದ್ಧಿ ಹೇಳಲ್ಲ. ಬದಲಾಗಿ ಹಾದಿ ತಪ್ಪಿಸಿ ಜೈಲಿಗೆ ಕಳುಹಿಸುತ್ತಾರೆ. ಬುದ್ಧಿ ಹೇಳಲು ಒಳ್ಳೆ ಫ್ರೆಂಡ್ಸ್ ಒಬ್ಬರೂ ಬರಲ್ಲ. ಎಲ್ಲಾ ಈ ಖಚಡಗಳೇ ಬರೋದು. ಹೀಗಾಗಿ ಈ ತರ ಬೀದಿಗೆ ಬಂದು ನಿಂತುಕೊಳ್ಳುತ್ತಾರೆ. ವಿಜಿಯವರಿಗೂ ಬುದ್ಧಿ ಇಲ್ಲ. ಅವರಿಗೂ ಯಾವುದು ಸರಿ ಯಾವುದು ಸರಿ ಎನ್ನುವುದು ಗೊತ್ತಿಲ್ಲ. ನಾನು ಸರಿಯಾಗೇ ಮಾತಾಡ್ತೀನಿ. ನಾನು ಇರೋದೇ ಹೀಗೆ. ವಿಜಿಯೇನು ಚಿಕ್ಕಮಗುವೇ? ಇವತ್ತು ಹೋಗಿ ಜೈಲಿನಲ್ಲಿ ಕುಳಿತ್ತಿದ್ದಾರೆ ಅಲ್ವಾ? ಇಂದು ನನಗೆ ಹಾಗೂ ನನ್ನ ಮಕ್ಕಳಿಗೆ ಯಾರು ಗತಿ? ಒಟ್ಟಿನಲ್ಲಿ ನನ್ನ ಸಂಸಾರವೇ ಹಾದಿ ತಪ್ಪಿಸಿಬಿಟ್ಟರು ಅಂತ ಅಳಲು ತೋಡಿಕೊಂಡರು.

    ಅತ್ತೆ-ಮಾವನ ವಿರುದ್ಧ ಕಿಡಿ:
    ನಾನು ಡೈವರ್ಸ್ ಮಾಡಿಕೊಂಡಿಲ್ಲ. ಎಲ್ಲೂ ಒಂದು ಸಹಿ ಮಾಡಿಕೊಟ್ಟಿಲ್ಲ. 1 ರೂಪಾಯಿ ಅವರಿಂದ ದುಡ್ಡು ಇಸ್ಕೊಂಡಿಲ್ಲ. ಯಾವ ಆಸ್ತಿಗೂ ಕಾಂಪ್ರಮೈಸ್ ಆಗಿಲ್ಲ. ಏನೂ ಇಲ್ಲದೇ ಇರೋವಾಗ ಅವರ ಜೊತೆ ಬಂದಿದ್ದೀನಿ. ಏನೂ ಇಲ್ಲದೇ ಇದ್ರೂ ನಾನು ಜೀವನ ಮಾಡ್ತೀನಿ. ನನ್ನ ಮಾವ ನನ್ನ ವಿರುದ್ಧ, ನಾಗರತ್ನ ಏನಕ್ಕೂ ಬರಲ್ಲ. ಯಾಕಂದ್ರೆ ಅವಳಿಗೆ ಈಗಾಗಲೇ ಹಣ, ಆಸ್ತಿ ಎಲ್ಲ ಕೊಟ್ಬಿಟ್ಟಿದ್ದೀವಿ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ವಿಜಯ್ ತಂದೆಯ ವಿರುದ್ಧ ಕಿಡಿಕಾರಿದ್ರು.

    ನಾನು ವಿಜಿಯವರನ್ನು ಒಳ್ಳೆಯ ಸ್ಟೇಜಲ್ಲಿ ನೋಡಬೇಕು ಅಂದುಕೊಂಡಿದ್ದೆ. ಆದ್ರೆ ಅದನ್ನು ಅವರ ಕೈಯಾರೆ ಅವರೇ ಹಾಳು ಮಾಡಿಕೊಂಡ್ರು. ಆದ್ರೆ ಅವರಿಗೆ ಬುದ್ಧಿ ಇದ್ಯೋ ಇಲ್ಲವೋ ಗೊತ್ತಿಲ್ಲ. ಅವರ ಜೊತೆಯಲ್ಲಿರೋರೇ ಅವರನ್ನು ಹಾಳು ಮಾಡಿದ್ರು. ಅವರಿಗೆ ಇರೋ ಫ್ರೆಂಡ್ಸ್ ಎಲ್ಲರೂ ಮನೆ ಹಾಳರೇ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಸಂಸಾರವನ್ನು ಸರಿಪಡಿಸೋಣ ಅಂತ ತಿಳುವಳಿಕೆ ಹೇಳೋ ಒಬ್ಬೇ ಒಬ್ಬ ಫ್ರೆಂಡ್ ಕೂಡ ಅವರಲ್ಲಿಲ್ಲ ಅಂತ ಅಂತ ವಿಜಿ ಫ್ರೆಂಡ್ಸ್ ಬಗ್ಗೆ ನಾಗರತ್ನ ಗರಂ ಆದ್ರು.

    ಎದೆ ಉದ್ದ ಬೆಳೆದು ನಿಂತಿರೋ ಮಕ್ಕಳ ಅಪ್ಪ ಇಂದು ಜೈಲಿಗೆ ಹೋಗಿದ್ದಾರೆ. ಈ ಸಮಯದಲ್ಲಿ ನಾನೂ ಇಲ್ಲ ಅಂದಿದ್ದರೆ ನನ್ನ ಮಕ್ಕಳಿಗೆ ಸಮಾಧಾನ ಹೇಳೋರು ಯಾರಿದ್ದಾರೆ? ನಮಗೂ ನೋವಾಗುತ್ತೆ. ಕಾಲೇಜಿಗೆ ಹೋಗಿ ಬರುತ್ತಾರೆ. ನಾಳೆ ಅವರ ಫ್ರೆಂಡ್ಸ್ ಕೇಳುತ್ತಾರೆ. ಆವಾಗ ಅವರಿಗೂ ಬೇಸರವಾಗಲ್ವ ಅಂತ ಪ್ರಶ್ನಿಸಿದ ಅವರು, ವಿಜಯ್ ನನ್ನ ಅರ್ಥ ಮಾಡಿಕೊಳ್ಳಲಿ. ಮೊದಲಿನಂತೆ ಸಿನಿಮಾಗಳನ್ನು ಮಾಡಿ ಅವರು ಎತ್ತರಕ್ಕೆ ಬೆಳೆಯಲಿ. ಅವರಿಗೆ ನಾನು ಸಪೋರ್ಟ್ ಮಾಡುತ್ತೇನೆ. ಹಾರೈಸುತ್ತೇನೆ. ಸಂತೋಷ ಪಡುತ್ತೇನೆ ಅಂತ ಹೇಳಿದ್ರು.

    ನಾನು ಅತ್ತೆ, ಮಾವ ಯಾರನ್ನೂ ನಂಬಲ್ಲ. ಯಾಕಂದ್ರೆ ಅವರೆಲ್ಲರಿಗೂ ನನ್ನ ಮಕ್ಕಳನ್ನು ಕಂಡ್ರೆ ಆಗಲ್ಲ. ಹೀಗಾಗಿ ಅವರು ನನಗೆ ಹಾಗೂ ನನ್ನ ಮಕ್ಕಳಿಗೆ ಏನ್ ಬೇಕಾದ್ರೂ ಮಾಡಬಹುದು. ಅಜ್ಜಿ-ತಾತ ಏನೂ ಕೊಡದೇ ಇದ್ರು ಪರವಾಗಿಲ್ಲ. ಅವರು ಮಕ್ಕಳಿಗೆ ಪ್ರೀತಿ ಕೊಡಬೇಕು. ಆದ್ರೆ ಅವರು ದ್ವೇಷ ಸಾಧಿಸುತ್ತಾರೆ ಅಂತ ಅವರು ದುಃಖ ತೋಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CXoYbpWrkoU

    https://www.youtube.com/watch?v=ALFMC4BI448