Tag: Kavyashree

  • ರೂಪೇಶ್ ರಾಜಣ್ಣ ಸ್ವಾರ್ಥ ಬುದ್ದಿಗೆ ಶಿಕ್ಷೆ ಕೊಟ್ರು ಸುದೀಪ್‌

    ರೂಪೇಶ್ ರಾಜಣ್ಣ ಸ್ವಾರ್ಥ ಬುದ್ದಿಗೆ ಶಿಕ್ಷೆ ಕೊಟ್ರು ಸುದೀಪ್‌

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ತಮ್ಮ ಖಡಕ್ ಧ್ವನಿ, ಕನ್ನಡದ ಬಗ್ಗೆ ಇರುವ ಅಭಿಮಾನ ಹೀಗೆ ಸಾಕಷ್ಟು ವಿಷ್ಯವಾಗಿ ರೂಪೇಶ್ ರಾಜಣ್ಣ ಹೈಲೈಟ್ ಆಗಿದ್ದಾರೆ. ವೀಕೆಂಡ್ ಪಂಚಾಯಿತಿಯಲ್ಲಿ ರಾಜಣ್ಣಗೆ ಕಿಚ್ಚ ಸುದೀಪ್ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಕಾವ್ಯಶ್ರೀಗೆ ಮನವೊಲಿಸಿ ಊಟ ಮಾಡಿಸುವ ಟಾಸ್ಕ್ ಕೊಟ್ಟಿದ್ದಾರೆ.

    ಸೂಪರ್ ಸಂಡೇ ವಿತ್ ಸುದೀಪ್(Super Sunday With Sudeep) ಕಾರ್ಯಕ್ರಮದಲ್ಲಿ, ಸ್ಪರ್ಧಿಗಳಿಗೆ ಕಿಚ್ಚ ಟಾಸ್ಕ್ ಕೊಟ್ಟಿದ್ದರು. ಯಾರು ಸ್ವಾರ್ಥಿ, ಯಾರು ಹೆಚ್ಚು ಕೇರಿಂಗ್ ಎಂಬ ಟಾಸ್ಕ್‌ನಲ್ಲಿ ರೂಪೇಶ್ ರಾಜಣ್ಣ ಅತೀ ಹೆಚ್ಚು ವೋಟ್ ಪಡೆದಿದ್ದರು. ತಮ್ಮ ಅನಿಸಿಕೆಯನ್ನ ಮನೆಮಂದಿ ಈ ವೇಳೆ ಕಿಚ್ಚನ ಮುಂದೆ ಹಂಚಿಕೊಂಡಿದ್ದರು. ರಾಜಣ್ಣಗೆ ಸ್ವಾರ್ಥಿ ಪಟ್ಟ ಸಿಕ್ಕಿದ್ರೆ, ಕೇರಿಂಗ್ ವಿಷ್ಯಕ್ಕೆ ಕಾವ್ಯಶ್ರೀಗೆ ಮನೆಮಂದಿ ಮತ ಹಾಕಿದ್ದರು. ಹಾಗಾಗಿ ಸುದೀಪ್ ಮತ್ತೊಂದು ಟಾಸ್ಕ್ ಕೊಟ್ಟರು.

    ರಾಜಣ್ಣ ಅವರು ಕಾವ್ಯಶ್ರೀಗೆ ಊಟ ಮಾಡಿಸಬೇಕು. ಕಾವ್ಯ ಊಟ ಮಾಡದೇ ರಾಜಣ್ಣನವರು ಊಟ ಮಾಡುವಂತಿಲ್ಲ ಎಂದು. ಅದರಂತೆ ರಾಜಣ್ಣ ಕಾವ್ಯಶ್ರೀಗೆ ಊಟ ಮಾಡಿಸಿದ್ದಾರೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಬೇರೆಯವರಿಗೆ ಊಟ ಮಾಡಿಸುತ್ತಿದ್ದೇನೆ. ಅದಕ್ಕೆ ಖುಷಿಯಾಗುತ್ತಿದೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಉದ್ಯಮಿ, Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

    ಇನ್ನೂ ಕಾವ್ಯರನ್ನ ಮಗುವಿನ ರೀತಿ ಊಟ ಮಾಡಿಸುತ್ತಿದ್ದಾರೆ. ಈ ವೇಳೆ ಕಾವ್ಯಶ್ರೀ ರಾಜಣ್ಣಗೆ ಆಟ ಆಡಿಸಿದ್ದಾರೆ. ಊಟ ಮಾಡಿಸಲು ಅವರ ಹಿಂದೆಯೇ ರೂಪೇಶ್ ಓಡಾಡಿದ್ದಾರೆ. ಇದರ ಜೊತೆಗೆ ರೂಪೇಶ್ ರಾಜಣ್ಣ ಅವರಿಗೆ ಒಂದು ದಿನ ಅಡುಗೆ ಮಾಡುವ ಟಾಸ್ಕ್ ಕೂಡ ಸುದೀಪ್ ಕೊಟ್ಟಿದ್ದಾರೆ. ರಾಜಣ್ಣ ಅಡುಗೆ ಮನೆ ಮಂದಿ ದಂಗಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮೂಡಬಿದಿರೆಯ ಆಳ್ವಾಸ್‍ನ 10ನೇ ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ. ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವಿನ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಮೂಡಬಿದ್ರೆಯಲ್ಲಿ ಪ್ರತಿಭಟನೆ ಮಾಡಿದ್ರೆ, ಡಿವೈಎಫ್‍ಐ ಮತ್ತು ಎಸ್‍ಎಫ್‍ಐ ಕಾರ್ಯಕರ್ತರು ಮಂಗಳೂರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.

    ಈ ಹಿನ್ನೆಲೆಯಲ್ಲಿ ಶನಿವಾರದ ಪಬ್ಲಿಕ್ ಟಿವಿ ಬಿಗ್‍ಬುಲೆಟಿನ್‍ನಲ್ಲಿ ಈ ಕುರಿತಂತೆ ಚರ್ಚೆ ನಡೀತು. ಪಬ್ಲಿಕ್ ಟಿವಿ ಪ್ರಶ್ನೆಗಳಿಗೆ ಉತ್ತರಿಸಿದ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ನಾನು ಕೂಡ ಆಗ್ರಹಿಸುತ್ತೇನೆ. ಅವರಿಗಷ್ಟೇ ಅಲ್ಲದೇ ನನ್ನ ಸಂಸ್ಥೆಗೂ ನ್ಯಾಯ ಬೇಕು ಅಂದ್ರು.

    ಮೋಹನ್ ಆಳ್ವ ನೀಡಿದ ಉತ್ತರಕ್ಕೆ ಕಾವ್ಯಶ್ರೀಯ ತಾಯಿ ಕೂಡ ಸಹಮತ ವ್ಯಕ್ತಪಡಿಸಿದ್ರು. ನಮಗೆ ಪ್ರವೀಣ್ ಮೇಲೆ ಡೌಟ್ ಇದೆ. ತನಿಖೆ ನಡೆಯಬೇಕು ಅಂದ್ರು. ಇದೇ ವೇಳೆ ಮಾತಾಡಿದ ವಿದ್ಯಾರ್ಥಿ ಸಂಘಟನೆ ಮುಖಂಡ ದಿನಕರ್ ಶೆಟ್ಟಿ, ದೈಹಿಕ ಶಿಕ್ಷಕ ಪ್ರವೀಣ್ ರನ್ನು ಕೆಲಸದಿಂದ ತೆಗೆದುಹಾಕುವಂತೆ ಆಗ್ರಹಿಸಿದ್ರು. ಇದಕ್ಕೆ ಉತ್ತರಿಸಿದ ಆಳ್ವ, ಮೊನ್ನೆಯೇ ಆ ಕೆಲಸ ಮಾಡಿದ್ದೇನೆ ಅಂದ್ರು.

    ಇದನ್ನೂ ಓದಿ: ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ 

    https://www.youtube.com/watch?v=75vzrVm8Z6w

    https://www.youtube.com/watch?v=O1dTEqQsZ80

    ಇದನ್ನೂ ಒದಿ: ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ 

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಇದನ್ನೂ ಓದಿ: ಮಂಗ್ಳೂರಿನ ಆಳ್ವಾಸ್ ನಲ್ಲಿ SSLC ವಿದ್ಯಾರ್ಥಿನಿ ನಿಗೂಢ ಸಾವು- ಕೊಲೆ ಎಂದು ಪೋಷಕರ ಆರೋಪ