Tag: kavya shastry

  • ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ತಂದ ಹೊಸ ಕಥೆ ‘ಜಾನಕಿ ಸಂಸಾರ’

    ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ತಂದ ಹೊಸ ಕಥೆ ‘ಜಾನಕಿ ಸಂಸಾರ’

    ನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ ಪರಿಕಲ್ಪನೆಗಳೊಂದಿಗೆ ಮನರಂಜನೆಯ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ’.

    ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರೂ ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜೊತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ. ಸದಾಕಾಲ ಮನೆ ಮಂದಿಯನ್ನು ಒಗ್ಗಟ್ಟಾಗಿಡಲು ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ, ಮುಂದೆ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

    ‘ಜಾನಕಿ ಸಂಸಾರ’ (Janaki Samsara) ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, ‘ಕೃಷ್ಣರುಕ್ಮಿಣಿ’ ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ರವರು (Anjana Srinivas) 13 ವರ್ಷಗಳ ಬಳಿಕ ಮತ್ತೊಮ್ಮೆ ನಿಮ್ಮನ್ನೆಲ್ಲ ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಸೂರಜ್ ಹೊಳಲು, ಕಾವ್ಯ ಶಾಸ್ತ್ರಿ(Kavya Shastry), ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.

    ಶುರುವಾಗುತ್ತಿದೆ ನೋವು-ನಲಿವನು ತೂಗೋ ಹೊಸ ಧಾರಾವಾಹಿ ‘ಜಾನಕಿ ಸಂಸಾರ’ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ತಪ್ಪದೇ ವೀಕ್ಷಿಸಿ.

  • ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ‘ಬಿಗ್ ಬಾಸ್’ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastry) ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ರಾಧಿಕಾ ಸೀರಿಯಲ್‌ಗೆ ಗುಡ್ ಬೈ ಹೇಳಿದ ಬಳಿಕ ಈಗ ಮತ್ತೆ ‘ಜಾನಕಿ ಸಂಸಾರ’ (Janaki Samsara) ಎಂಬ ಸೀರಿಯಲ್ ಮೂಲಕ ಬರಲಿದ್ದಾರೆ. ಹೀರೋಯಿನ್ ಆಗಿ ಮಿಂಚಿದ್ದ ನಟಿ ಈಗ ವಿಲನ್ ಆಗಿ ಅಬ್ಬರಿಸಲಿದ್ದಾರೆ.

    ‘ಕೃಷ್ಣ ರುಕ್ಮಿಣಿ’ ಖ್ಯಾತಿಯ ನಟಿ ಅಂಜನಾ ಶ್ರೀನಿವಾಸ್ ನಟನೆಯ ‘ಜಾನಕಿ ಸಂಸಾರ’ಕ್ಕೆ ಕಾವ್ಯಾ ಕಾಲಿಟ್ಟಿದ್ದಾರೆ. ಸಾಕಷ್ಟು ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದ ಕಾವ್ಯಾ ಈಗ ವಿಲನ್ ಆಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ:ಬಂಪರ್ ಆಫರ್ ಬಾಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ

    ಕಾವ್ಯಾ ಶಾಸ್ತ್ರಿ ಅದ್ಭುತ ನಟಿ ಎಂಬುದರಲ್ಲಿ ಮಾತಿಲ್ಲ. ಹಲವು ವರ್ಷಗಳಿಂದ ಚಿತ್ರರಂಗಲ್ಲಿ ನಿರೂಪಕಿ, ನಟಿಯಾಗಿ ಪಳಗಿದ್ದಾರೆ. ವಿಲನ್ ಆಗಿ ಬರುತ್ತಿರುವ ಕಾವ್ಯಾರನ್ನು ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಂದಹಾಗೆ, ಮೇ 6ರಂದು 8 ಗಂಟೆಗೆ ಜಾನಕಿ ಸಂಸಾರ ಪ್ರಸಾರವಾಗಲಿದೆ.

    ಈ ಹಿಂದೆ ಶುಭವಿವಾಹ, ಬಿಗ್ ಬಾಸ್ ಸೀಸನ್- 4 (Bigg Boss Kannada 4) ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಕಾವ್ಯಾ ಶಾಸ್ತ್ರಿ ಕಳೆದ ವರ್ಷ ರಾಧಿಕಾ ಸೀರಿಯಲ್‌ಗೆ ಕಾರಣಾಂತರಗಳಿಂದ ಅರ್ಧಕ್ಕೆ ಕೈಬಿಟ್ಟಿದ್ದಾರೆ.

  • Bigg Boss: ಹೆಣ್ಣು ಮಕ್ಕಳ ಚಾರಿತ್ರ್ಯವಧೆಗೆ ಕಾವ್ಯ ಶಾಸ್ತ್ರಿ ಬೇಸರ

    Bigg Boss: ಹೆಣ್ಣು ಮಕ್ಕಳ ಚಾರಿತ್ರ್ಯವಧೆಗೆ ಕಾವ್ಯ ಶಾಸ್ತ್ರಿ ಬೇಸರ

    ಟಿ, ನಿರೂಪಕಿ ಕಾವ್ಯ ಶಾಸ್ತ್ರಿ (Kavya Shastry) ಇದೀಗ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಶೋ ಮಕ್ಕಳಿಗೆ ತೋರಿಸದಂತೆ ನಟಿ ಮನವಿ ಮಾಡಿದ್ದಾರೆ. ಈ ಕುರಿತ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಿಮಿಕ್ರಿ ಮಾಡಿದ ತುಕಾಲಿ ಸಂತು

    ಈ ಬಾರಿ ಕನ್ನಡದ ಬಿಗ್ ಬಾಸ್ ಸೀಸನ್ (Bigg Boss Kannada 10) ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ‍್ಯವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು, ಹೆದರಿಸುವುದು, ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ-ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರು ಇದನ್ನೂ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕಾವ್ಯಾ ಶಾಸ್ತ್ರಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Kavya Shastry (@kaavya.shastry)

    ನಾನು ಯಾವುದೇ ಕಾರ್ಯಕ್ರಮದ ವಿರುದ್ಧವಾಗಿಲ್ಲ. ಚಿಕ್ಕ ಮಕ್ಕಳನ್ನು ಹೊಂದಿರುವ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಯಾವ ವಯೋಮಾನದ ಪ್ರೇಕ್ಷಕರಿಗೆ ಇದು ಸೂಕ್ತ ಎಂಬ ಸೂಚನೆಯನ್ನು ಸೀರಿಯಲ್‌ಗಳು ಕೂಡ ನೀಡುತ್ತವೆ. ಆದರೂ ಆ ಸೂಚನೆಯಲ್ಲಿ ನಿರ್ಲಕ್ಷಿಸಿ ನಾವು ಮನೆಯಲ್ಲಿ ಅದನ್ನು ವೀಕ್ಷಿಸುತ್ತೇವೆ. ನಿಮ್ಮ ಮಗು ಉದ್ದೇಶಪೂರ್ವಕವಾಗಿ ಇಂಥ ನೆಗೆಟಿವ್ ಕಂಟೆಂಟ್ ನೋಡದೇ ಇರಬಹುದು. ಕೇವಲ ಆಡಿಯೋ ಕೂಡ ಮಗುವಿನ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಎನರ್ಜಿಯನ್ನು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ನಟಿ ಪೋಸ್ಟ್ ಮಾಡಿದ್ದಾರೆ.

    ಶುಭವಿವಾಹ (Shubhavivah), ರಾಧಿಕಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮತ್ತು ಸಿನಿಮಾಗಳಲ್ಲಿ ಕಾವ್ಯ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಕಾವ್ಯ ಶಾಸ್ತ್ರಿ ಸ್ಪರ್ಧಿಯಾಗಿ ಗಮನ ಸೆಳೆದರು. ಭುವನ್, ರೇಖಾ, ಕಾರುಣ್ಯ, ನಿರಂಜನ್ ದೇಶಪಾಂಡೆ, ಶಾಲಿನಿ ಕೂಡ ಈ ಸೀಸನ್‌ನಲ್ಲಿ ಇದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿಗೆ ‘ರಾಧಿಕಾ’ ಸೀರಿಯಲ್‌ ಬಿಟ್ಟೆ- ನಟಿ ಕಾವ್ಯಾ ಶಾಸ್ತ್ರಿ

    ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿಗೆ ‘ರಾಧಿಕಾ’ ಸೀರಿಯಲ್‌ ಬಿಟ್ಟೆ- ನಟಿ ಕಾವ್ಯಾ ಶಾಸ್ತ್ರಿ

    ಟಿ ಕಾವ್ಯಾ ಶಾಸ್ತ್ರಿ (Kavya Shastry) ಅವರು ರಾಧಿಕಾ (Radhika) ಸೀರಿಯಲ್‌ನಿಂದ ಹೊರಬಂದಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಉತ್ತರ ನೀಡಿದ್ದಾರೆ. ಸೀರಿಯಲ್, ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸಿದ ಕಾವ್ಯಾ ಶಾಸ್ತ್ರಿ ಅವರು ರಾಧಿಕಾ ಸೀರಿಯಲ್ ಅರ್ಧಕ್ಕೆ ಕೈ ಬಿಟ್ಟಿದ್ಯಾಕೆ ಎಂದು ಮೌನ ಮುರಿದ್ದಾರೆ.

     

    View this post on Instagram

     

    A post shared by Kaavya Shastry (@kaavya.shastry)

    ‘ರಾಧಿಕಾ’ ಧಾರಾವಾಹಿಯ ಮುಖ್ಯಪಾತ್ರಧಾರಿ ರಾಧಿಕಾ ಆಗಿ ಕಾವ್ಯಾ ಶಾಸ್ತ್ರಿ ನಟಿಸುತ್ತಿದ್ದರು. 400 ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದರು. ನರ್ಸ್ ಪಾತ್ರಕ್ಕೆ ಕಾವ್ಯ ಜೀವತುಂಬಿದ್ದರು. ಸಡನ್ ಆಗಿ ಈ ಸೀರಿಯಲ್ ಕೈಬಿಟ್ಟಿದ್ಯಾಕೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ.

     

    View this post on Instagram

     

    A post shared by Prashanth Agari (@agari_photo_studio)

    ನನಗೆ ‘ರಾಧಿಕಾ’ ಸೀರಿಯಲ್‌ನ ಬಿಟ್ಟೆ ಅಂತ ಅನೇಕರು ಕೇಳುತ್ತಿದ್ದಾರೆ. ಇದು ವಾಹಿನಿ, ಪ್ರೊಡಕ್ಷನ್ ಹೌಸ್, ನಾನು ಸೇರಿ ತೆಗೆದುಕೊಂಡ ನಿರ್ಧಾರವಿದು. ಎಲ್ಲೋ ಒಂದು ಕಡೆ ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿ, ಚಾನೆಲ್, ಪ್ರೊಡಕ್ಷನ್ ಹೌಸ್, ಕಲಾವಿದರ ನಡುವಿನ ಸಾಮರಸ್ಯದಲ್ಲಿ ಒಂದಷ್ಟು ತಕರಾರು ಇತ್ತು. ಎಲ್ಲ ಸೇರಿ ಈ ಪಾತ್ರಕ್ಕೆ ನನ್ನ ಅಗತ್ಯತೆ ಮುಗಿದಿದೆ. ರಾಧಿಕಾ ಪಾತ್ರಕ್ಕೆ ಮುಂದೆ ಬರುವವರು ಸಮರ್ಥವಾಗಿ ನಟಿಸ್ತಾರೆ ಅಂತ ನಮ್ಮೆಲ್ಲರಿಗೂ ಅನಿಸಿತು. ಹಾಗಾಗಿ ನಾನು ಧಾರಾವಾಹಿ ಬಿಟ್ಟೆ. ಇರಲಿ ಇನ್ನೊಂದು ಪಾತ್ರ, 20 ವರ್ಷಗಳಿಂದ ನೀವು ನನ್ನನ್ನು ನೋಡುತ್ತಿದ್ದೀರಿ, ಇನ್ಮುಂದೆಯೂ ನೋಡ್ತೀರಿ ಎಂದು ಅಭಿಮಾನಿಗಳ ಪ್ರಶ್ನೆಗೆ ನಟಿ ಕಾವ್ಯಾ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್ ಮುಕ್ತಾಯ : ಡಿಕೆಶಿ ಎಪಿಸೋಡ್ ಲಾಸ್ಟ್

     

    View this post on Instagram

     

    A post shared by Kaavya Shastry (@kaavya.shastry)

    ಒಮ್ಮೊಮ್ಮೆ ಕಲಾವಿದರಿಗೆ ರೂಮ್, ಬಾತ್‌ರೂಮ್ ವ್ಯವಸ್ಥೆ ಇರೋದಿಲ್ಲ. ನಿತ್ಯ ಮೂರು ಕ್ಯಾಮೆರಾ ಇಟ್ಟುಕೊಂಡು ಶೂಟಿಂಗ್ ಮಾಡೋದು ತುಂಬ ಕಷ್ಟ ಆಗತ್ತೆ. ಕಲಾವಿದರು ಈ ರೀತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಹೀರೋಯಿನ್‌ಗಳನ್ನು ಬದಲಾಯಿಸಿದರೆ, ಟಿಆರ್‌ಪಿ ಚೆನ್ನಾಗಿ ಬರುತ್ತದೆ ಅಂತ ಕೆಲವರು ಅಂದುಕೊಂಡಿರುತ್ತಾರೆ. ನಮ್ಮ ಸಮಸ್ಯೆಗಳನ್ನು ಕೇಳದೆ ಪ್ರೊಡಕ್ಷನ್ ಹೌಸ್, ವಾಹಿನಿಯವರು ಕಲಾವಿದರನ್ನು ಕೈಬಿಡುವ ನಿರ್ಧಾರಕ್ಕೆ ಬಂದಿರುತ್ತಾರೆ ಎಂದು ನಟಿ ಮಾತನಾಡಿದ್ದಾರೆ.

    ಈ ಧಾರಾವಾಹಿಯಲ್ಲಿಯೂ ಕೂಡ ನನ್ನ ಸಮಸ್ಯೆಯನ್ನು ಯಾರೂ ಕೇಳಲಿಲ್ಲ. ನನಗೆ ಒಂದು ಮಾತು ಹೇಳದೆ ನನ್ನ ಪಾತ್ರಕ್ಕೆ ಬೇರೆ ಕಡೆ ಆಡಿಷನ್ ಮಾಡುತ್ತಿರೋದು ನನಗೆ ತಿಳಿಯಿತು. ಅದನ್ನು ನೋಡಿ ನನಗೆ ಅವಮಾನ ಆಯ್ತು. ಹಾಗಾಗಿ ‘ರಾಧಿಕಾ’ ಸೀರಿಯಲ್‌ನಿಂದ ಹೊರ ಬಂದೆ ಎಂದಿದ್ದಾರೆ.