Tag: kavitha

  • ಕ್ಯಾಂಡಲ್ ಲೈಟ್ ಡಿನ್ನರ್​ನಲ್ಲಿ ಶಶಿಯಿಂದ ಕವಿತಾಗೆ ಲವ್ ಪ್ರಪೋಸ್

    ಕ್ಯಾಂಡಲ್ ಲೈಟ್ ಡಿನ್ನರ್​ನಲ್ಲಿ ಶಶಿಯಿಂದ ಕವಿತಾಗೆ ಲವ್ ಪ್ರಪೋಸ್

    ಬೆಂಗಳೂರು: ಬಿಗ್‍ಬಾಸ್ 6ನೇ ಆವೃತ್ತಿ ಮುಗಿಯಲು ಇನ್ನೂ ಎರಡು ವಾರಗಳು ಬಾಕಿ ಇದೆ. ಆದರೆ ಈ ವೇಳೆ ಸ್ಪರ್ಧಿ ಕವಿತಾ ಅವರಿಗೆ ರೈತ ಶಶಿಕುಮಾರ್ ಪ್ರಪೋಸ್ ಮಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ಈ ವಾರದಲ್ಲಿ ಅತಿಥಿಗಳಾಗಿ ಪ್ರಥಮ್, ಕೀರ್ತಿ, ಸಂಜನಾ, ಕೃಷಿ ಮತ್ತು ಸಮೀರ್ ಆಚಾರ್ಯ ಅವರು ಆಗಮಿಸಿದ್ದಾರೆ. ಈ ಹಳೆಯ ಸ್ಪರ್ಧಿಗಳನ್ನು ವಿಶೇಷವಾದ ಕೋಣೆಯಲ್ಲಿರಿಸಿದ್ದು, ಟಿವಿ ಮೂಲಕ ಒಬ್ಬರೊಬ್ಬರನ್ನು ಮಾತಾಡುವ ವ್ಯವಸ್ಥೆ ಮಾಡಲಾಗಿತ್ತು. ಮನೆಗೆ ಆಗಮಿಸಿರುವ ಅತಿಥಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ.

    ಪಪ್ರೋಸ್ ಮಾಡಿದ್ರು:
    ಕವಿತಾ ಮತ್ತು ಶಶಿ ಕ್ಯಾಂಡಲ್ ಲೈಡ್ ಡಿನ್ನರ್ ನಲ್ಲಿದ್ದರು. ಈ ವೇಳೆ ಅತಿಥಿ ಪ್ರಥಮ್ ನಿರಂತರವಾಗಿ ಏನು ಮಾಡಬೇಕು ಎಂಬುದನ್ನು ಕವಿತಾ ಅವರಿಗೆ ಸೂಚನೆ ನೀಡುತ್ತಿದ್ದರು. ಯಾರಿಗೂ ತಿಳಿಯದಂತೆ ಕವಿತಾ ಬಿಗ್‍ಬಾಸ್ ನೀಡಿರುವ ರಹಸ್ಯ ಇಯರ್‍ಫೋನ್ ಧರಿಸಿ ಅದನ್ನು ತಮ್ಮ ಕೂದಲುಗಳಿಂದ ಮರೆಮಾಡಿಕೊಂಡಿದ್ದರು. ಈ ಟಾಸ್ಕ್ ಬಗ್ಗೆ ಶಶಿ ಸೇರಿದಂತೆ ಉಳಿದ ಯಾರಿಗೂ ತಿಳಿದಿರಲಿಲ್ಲ.

    ಡಿನ್ನರ್ ಪಾರ್ಟಿ ಶುರುವಾದ ನಂತರ ಪ್ರಥಮ್ ಹೇಳಿದ ರೀತಿಯೇ ಕವಿತಾ ಮಾತನಾಡತೊಡಗಿದರು. ಮೊದಲಿಗೆ ಚಮಚವನ್ನು ಕೆಳಗೆ ಬೀಳಿಸಿ ಅದನ್ನು ಶಶಿ ಎತ್ತಿಕೊಡುವಾಗ ನಿಮ್ಮಿಬ್ಬರ ಗ್ಲಾಸ್ ಬದಲಾಯಿಸಬೇಕು ಎಂದು ಹೇಳಿದ್ದರು. ಅದೇ ರೀತಿ ಕವಿತಾ ಶಶಿ ಚಮಚ ತೆಗೆದುಕೊಡುವಾಗ ಗ್ಲಾಸ್ ಬದಲಾಯಿಸುತ್ತಾರೆ. ಹೀಗೆ ಕೆಲವು ಸಮಯದವರೆಗೂ ಪ್ರಥಮ್ ಹೇಳಿದ ರೀತಿಯೇ ಕವಿತಾ ಟಾಸ್ಕ್ ಮಾಡಿದ್ದಾರೆ.

    ಪ್ರಥಮ್ ಎದ್ದು ನಿಂತು ಲವ್ ಪ್ರಪೋಸ್ ಮಾಡುವಂತೆ ಕೇಳು ಎಂದು ಕವಿತಾಗೆ ಹೇಳುತ್ತಾರೆ. ಕವಿತಾ ಕೂಡ ಶಶಿಗೆ ಐ ಲವ್ ಯು ಹೇಳುವಂತೆ ಹೇಳುತ್ತಾರೆ. ಆಗ ಶಶಿ ಎದ್ದು ನಿಂತು ಕಣ್ಣು ಮುಚ್ಚಿಕೊಂಡು ಕವಿತಾಗೆ ‘ಐ ಲವ್ ಯು’ ಎಂದು ಪ್ರಪೋಸ್ ಮಾಡುತ್ತಾರೆ. ಹೀಗೆ ಕವಿತಾ ಕೇಳುವ ಎಲ್ಲ ಪ್ರಶ್ನೆಗಳಿಗೂ ಶಶಿ ಉತ್ತರಿಸುತ್ತಾ ಹೋಗಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಶಶಿ ಮತ್ತು ಕವಿತಾ ಡಿನ್ನರ್ ನಲ್ಲಿ ತೊಡಗಿದ್ದರೆ, ಆ್ಯಂಡಿ ಹೊರತುಪಡಿಸಿ ಉಳಿದೆಲ್ಲ ಸ್ಪರ್ಧಿಗಳು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ್ಯಂಡಿ ಮಾತ್ರ ಬಾಗಿಲ ಬಳಿ ಬೆಡ್ ಶೀಟ್ ಹೊದ್ದುಕೊಂಡು ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಮನೆಗೆ ಆಗಮಿಸಿದ್ದ ವಿಶೇಷ ಅತಿಥಿಗಳು ಈ ವಾರ ಧನರಾಜ್ ಅವರನ್ನು ಸೇವ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಂಡ್ರ್ಯೂ ವಿಷಯಕ್ಕೆ ಸ್ನೇಹಿತ ಶಶಿ ಮೇಲೆ ಕವಿತಾ ಗರಂ

    ಆಂಡ್ರ್ಯೂ ವಿಷಯಕ್ಕೆ ಸ್ನೇಹಿತ ಶಶಿ ಮೇಲೆ ಕವಿತಾ ಗರಂ

    ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಕವಿತಾ ತಮ್ಮ ಸ್ನೇಹಿತ ಶಶಿ ಮೇಲೆ ಗರಂ ಆಗಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ಬಾರಿ ‘ಬಿಗ್‍ಬಾಸ್ ನಗರ’ ಟಾಸ್ಕ್ ನೀಡಿದರು. ಈ ಟಾಸ್ಕ್ ನಲ್ಲಿ ಬಿಗ್ ಬಾಸ್ ಆಂಡ್ರ್ಯೂ ಹಾಗೂ ನಯನ ಅವರನ್ನು ನಿಯಮ ರೂಪಿಸುವ ಅಧಿಕಾರಿಯಾಗಿ ಮಾಡಿದರು. ನವೀನ್ ಹಾಗೂ ಅಕ್ಷತಾರನ್ನು ಆಟೋ ಚಾಲಕರಾಗಿ ಮಾಡಿ ಮನೆಯ ಉಳಿದ ಸದಸ್ಯರನ್ನು ನಾಗರಿಕರಾಗಿ ಮಾಡಿದರು.

    ಈ ಟಾಸ್ಕ್ ನಲ್ಲಿ ಅಡುಗೆ ವಿಷಯಕ್ಕಾಗಿ ಅಧಿಕಾರಿಗಳ ಹಾಗೂ ನಾಗರಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಂಡ್ರ್ಯೂ ತಮಗೆ ಇಷ್ಟ ಬಂದಂತೆ ನಿಯಮಗಳನ್ನು ರೂಪಿಸುತ್ತಿದ್ದರು. ಈ ನಿಯಮಗಳ ಬಗ್ಗೆ ಧ್ವನಿ ಎತ್ತದೆ ಆಂಡ್ರ್ಯೂ ಮಾತಿಗೆ ಒಪ್ಪಿಗೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿ ಕವಿತಾ ಶಶಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

    ನಿಯಮ ರೂಪಿಸುವ ಅಧಿಕಾರಿಯಾಗಿದ್ದ ಆಂಡ್ರ್ಯೂ ತನಗೆ ಇಷ್ಟ ಬಂದಂತೆ ನಿಯಮಗಳನ್ನು ಬದಲಾಯಿಸುತ್ತಿದ್ದರು. ಹಾಗಾಗಿ ಕವಿತಾ, ಆಂಡ್ರ್ಯೂ ಮೇಲೆ ಕೋಪಗೊಂಡಿದ್ದರು. ಶಶಿ ಈ ನಿಯಮಗಳ ಬಗ್ಗೆ ಸರಿಯಾಗಿ ಮಾತನಾಡಿಲ್ಲ. ಶಶಿ ಸರಿಯಾಗಿ ಮಾತನಾಡಿದ್ದರೆ, ನಾನು ರಾತ್ರಿಯಿಡಿ ಜೈಲಲ್ಲಿ ಕಾಲ ಕಳೆಯುತ್ತಿರಲಿಲ್ಲ ಎಂದು ಶಶಿ ವಿರುದ್ಧ ಗರಂ ಆಗಿದ್ದಾರೆ.

    ಅಧಿಕಾರಿಗಳಿಗೆ ಅಧಿಕಾರ ಇರುವುದರಿಂದ ಅವರು ನಿಯಮಗಳನ್ನು ಬದಲಾಯಿಸುತ್ತಿದ್ದಾರೆ. ಅಡುಗೆ ಮಾಡುವ ವಿಚಾರದಲ್ಲಿ ಇಡೀ ತಂಡ ತೆಗೆದುಕೊಂಡ ನಿರ್ಧಾರ ಪರವಾಗಿ ನಾನು ನಿಂತೆ. ನಾನು ಯಾವುದೇ ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಶಿ, ಕವಿತಾಗೆ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಲ್ಲಿಯೇ ಹಾರ ಬದ್ಲಾಯಿಸಿಕೊಂಡ್ರು ಕವಿತಾ-ರಾಕೇಶ್!

    ಬಿಗ್ ಮನೆಯಲ್ಲಿಯೇ ಹಾರ ಬದ್ಲಾಯಿಸಿಕೊಂಡ್ರು ಕವಿತಾ-ರಾಕೇಶ್!

    ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವಾಗಲೂ ಒಂದು ಜೋಡಿ ಮಧ್ಯೆ ಗಾಸಿಪ್ ಹರಿದಾಡುತ್ತಿದೆ. ಅದೇ ರೀತಿ ಬಿಗ್‍ಬಾಸ್ ಸೀನಸ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಯಾವಾಗಲೂ ಜೊತೆಯಲ್ಲಿರುತ್ತಾರೆ. ಆದ್ದರಿಂದ ಇವರಿಬ್ಬರ ಬಗ್ಗೆ ಗಾಸಿಪ್ ಇದೆ. ಆದರೆ ಈಗ ಸ್ಪರ್ಧಿ ಕವಿತಾ ಮತ್ತು ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

    ಬಿಗ್‍ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೂ ಒಂದು ಟಾಸ್ಕ್ ನೀಡಿತ್ತು. ಅದೆನೆಂದರೆ ‘ಇಷ್ಟ ಕಷ್ಟ’. ಈ ಟಾಸ್ಕ್ ನ ಪ್ರಕಾರ ತಮಗೆ ಇಷ್ಟ ಆಗುವ ಒಬ್ಬರಿಗೆ ಸ್ಪರ್ಧಿಗಳು ಹಾರ ಹಾಕಬೇಕಿತ್ತು. ಇಷ್ಟ ಪಡದ ಇಬ್ಬರು ಸದಸ್ಯರ ಮುಖಕ್ಕೆ ಸ್ಪರ್ಧಿಗಳು ಮಸಿ ಬಳಿಯಬೇಕಿತ್ತು.

    ಕಳೆದ ವಾರ ಆಂಡ್ರ್ಯೂ ಮತ್ತು ಕವಿತಾ ಮಧ್ಯೆ ಜಗಳವಾಗಿತ್ತು. ಇದರಿಂದ ಮನೆಯಲ್ಲಿ ಎಲ್ಲರಿಗೂ ಬೇಸರವಾಗಿತ್ತು. ಕೊನೆಗೆ ಕವಿತಾ ಅವರು ಆಂಡ್ರ್ಯೂ ಬಳಿ ಕ್ಷಮೆ ಕೇಳಿದ್ದರು. ಇದರಿಂದ ರಾಕೇಶ್ ಕವಿತಾ ಗುಣವನ್ನು ಅಭಿನಂದಿಸಿ ಹಾರ ಹಾಕಿದರು. ಇತ್ತ ಬೇಸರದಿಂದ ಇದ್ದ ಕವಿತಾ ಜೊತೆ ಸಂತೋಷದಿಂದ ಮಾತನಾಡಿದ್ದಕ್ಕೆ ಕವಿತಾ ಕೂಡ ರಾಕೇಶ್‍ಗೆ ಹಾರ ಹಾಕಿದರು. ಹೀಗಾಗಿ ‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಕವಿತಾ-ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

    ‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಬರೀ ಕವಿತಾ-ರಾಕೇಶ್ ಮಾತ್ರ ಹಾರ ಹಾಕಿಲ್ಲ. ಶಶಿ-ಧನರಾಜ್ ಹಾಗೂ ರಶ್ಮಿ-ಮುರಳಿ ಕೂಡ ಪರಸ್ಪರ ಹಾರ ಹಾಕಿಕೊಂಡಿದ್ದಾರೆ.

    ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಗಾಸಿಪ್ ಇದೆ ಎಂದು ಮಾತನಾಡಿಕೊಳ್ಳುತ್ತಿದಾಗ, ‘ನಾವಿಬ್ಬರು ಒಳ್ಳೆಯ ಗೆಳೆಯರು’ ಎಂದು ರಾಕೇಶ್ ಎಲ್ಲರ ಮುಂದೆ ಸ್ಪಷ್ಟಪಡಿಸಿದ್ದರು. ಆಗ ಕೂಡಲೇ ಅಕ್ಷತಾ ‘ಐ ಲವ್ ಯು ರಾಕಿ” ಅಂತ ಬಹಿರಂಗವಾಗಿ ಹೇಳಿದ್ದರು. ಇದರಿಂದ ಸ್ಪರ್ಧಿಗಳು ಗೊಂದಲಕ್ಕೀಡಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

    ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

    ಬೆಂಗಳೂರು: ತೆಲುಗು ಸಿನೆಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗ್ತಿದೆ ಅನ್ನೋ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲುಗು ನಟಿ ಶ್ರೀ ರೆಡ್ಡಿ ವಿರುದ್ಧ ಗರಂ ಆಗಿದ್ದ ಸ್ಯಾಂಡಲ್ ವುಡ್ ನಟಿ ಕವಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಇತ್ತೀಚೆಗಷ್ಟೇ ತೆಲುಗು ನಟಿ ಶ್ರೀ ರೆಡ್ಡಿ, ಟಾಲಿವುಡ್ ನಲ್ಲಿ ಬಹಳ ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗತ್ತೆ ಜೊತೆಗೆ ಲೈಂಗಿಕ ಕಿರುಕುಳ ಸರ್ವೇ ಸಾಮಾನ್ಯವಾಗಿದೆ ಅಂತ ಆರೋಪಿಸಿದ್ರು. ಅಲ್ಲದೇ ನಟಿ ಅರೆಬೆತ್ತಲೆಯಾಗಿ ಪ್ರತಿಭಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ರು. ಇದ್ರ ಬೆನ್ನಲ್ಲೇ, ಈ ಕುರಿತು ಸ್ಯಾಂಡಲ್‍ವುಡ್ ನಟಿ ಕವಿತಾ, ಅರೆಬೆತ್ತಲೆಯಾದ ವಿಡಿಯೋ ಮಾಡಿದ್ರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

    ಯಾವುದೇ ಇಂಡಸ್ಟ್ರಿ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಿ ಮಾತನಾಡಬೇಕು. ಇಲ್ಲವಾದಲ್ಲಿ ಆಯಾ ಸಿನೆಮಾ ಇಂಡಸ್ಟ್ರಿಗಳ ಲೆಜೆಂಡ್ ಗಳಿಗೆ ಅವಮಾನಮಾಡಿದಂತಾಗತ್ತೆ ಅಂತ ನಟಿ ಕವಿತಾ, ತೆಲುಗು ನಟಿ ಶ್ರೀರೆಡ್ಡಿಗೆ ವಿಡಿಯೋ ಮೂಲಕ ಟಾಂಗ್ ಕೊಟ್ಟಿದ್ರು. ಈ ಬೆನ್ನಲ್ಲೇ ನಟಿ ಕವಿತಾ ಅವರಿಗೆ ಜೀವ ಬೆದರಿಕೆ ಕರೆಗಳು ಬರ್ತಿವೆಯಂತೆ. 24 ಗಂಟೆಗಳೊಳಗಾಗಿ ನೀನು ಪೋಸ್ಟ್ ಮಾಡಿರುವ ವಿಡಿಯೋ ಡಿಲೀಟ್ ಮಾಡ್ಬೇಕು. ಅಲ್ಲದೇ ನೀನು ಅಪ್ ಲೋಡ್ ಮಾಡಿರುವ ವಿಡಿಯೋ ಬಗ್ಗೆ ಕ್ಷಮೆಯಾಚಿಸಿ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡ್ಬೇಕು. ಇಲ್ಲವಾದಲ್ಲಿ ನಿನ್ನ ಕಥೆ ಮುಗಿಸಲಾಗತ್ತೆ ಅಂತ ಅಪರಿಚಿತ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡ್ತಿದ್ದಾರಂತೆ. ಇದನ್ನೂ ಓದಿ: ಶ್ರೀ ರೆಡ್ಡಿ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ಟಾಲಿವುಡ್ ನಟಿ

    ಈ ಕುರಿತು ನಟಿ ಕವಿತಾ ಶುಕ್ರವಾರ ತಡರಾತ್ರಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲು ಬಂದಿದ್ರು. ಆದ್ರೆ ಅದು ಅವರ ವ್ಯಾಪ್ತಿಗೆ ಬಾರದ ಕಾರಣ ಉಪ್ಪಾರಪೇಟೆ ಪೊಲೀಸರು ದೂರು ಪಡೆಯದೇ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಲಹೆ ನೀಡಿ ಕಳುಹಿಸಿದ್ದಾರೆ. ಹೀಗಾಗಿ ಇಂದು ನಟಿ ಕವಿತಾ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಪೊಲೀಸರಿಗೆ ದೂರು ನೀಡಲಿದ್ದಾರೆ. ಇದನ್ನೂ ಓದಿ: ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್