Tag: karnatakaElections2018

  • ಮತ್ತೆ ನಮ್ಮ ಪಕ್ಷಕ್ಕೆ ಬಾ, ಮಂತ್ರಿ ಮಾಡ್ತೀನಿ: ಬಿ.ಸಿ.ಪಾಟೀಲ್‍ಗೆ ಬಿಎಸ್‍ವೈ ಬಿಗ್ ಆಫರ್

    ಮತ್ತೆ ನಮ್ಮ ಪಕ್ಷಕ್ಕೆ ಬಾ, ಮಂತ್ರಿ ಮಾಡ್ತೀನಿ: ಬಿ.ಸಿ.ಪಾಟೀಲ್‍ಗೆ ಬಿಎಸ್‍ವೈ ಬಿಗ್ ಆಫರ್

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರ ಬಂದಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ.

    ಇತ್ತ ಕಾಂಗ್ರೆಸ್‍ನ ಕೆಲ ಶಾಸಕರಿಗೆ ಬಿಜೆಪಿ ನಾಯಕರು ಆಫರ್ ಮಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವ್ರಿಗೆ ಆಫರ್ ಕೊಟ್ಟಿರುವ ವಿ.ಎಸ್.ಉಗ್ರಪ್ಪ ಆಡಿಯೋವನ್ನು ಬಿಡುಗಡೆ ಮಾಡಿದ್ರು. ಕೆಲವು ಗಂಟೆಗಳ ಹಿಂದೆಯೇ ಆಫರ್ ಆಡಿಯೋ ಬಿಡುಗಡೆ ಮಾಡ್ತಿದ್ದು, ಬಿಜೆಪಿ ನಾಯಕರು ಅದು ನಮ್ಮ ಧ್ವನಿ ಅಲ್ಲ ಅಂತಾ ಹೇಳಿ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ.

    ನನ್ನ ಮೇಲೆ ನಿನಗೆ ವಿಶ್ವಾಸವಿದೆ ತಾನೇ, ಕೊಚ್ಚಿನ್ ಗೆ ಹೋಗುವುದನ್ನು ಬಿಟ್ಟು ಹಿಂದಕ್ಕೆ ಬಾ. ಒಂದು ವೇಳೆ ನೀನು ಕೊಚ್ಚಿನ್ ಗೆ ಹೋದ್ರೆ ನೀನು ನಮ್ಮ ಕೈಗೆ ಸಿಗಲ್ಲ ಅಂತಾ ಬಿಎಸ್ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ರಿವೀಲ್ ಮಾಡಿದೆ.

    ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಗೆ ಸಚಿವ ಸ್ಥಾನದ ಆಮಿಷ ಒಡ್ಡುತ್ತಿರುವ ಆಡಿಯೋ ಕ್ಲಿಪ್ ಮತ್ತು ವಿವರ ಇಲ್ಲಿದೆ.

    ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದುನಿಮಿಷ ಸಾಹೇಬರು ಮಾತನಾಡುತ್ತಾರೆ
    ಬಿಎಸ್ ವೈ: ಹಲೋ?ಹಲೋ..
    ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ ? ಹೇಳಿ? ನಮಸ್ಕಾರ…
    ಬಿಎಸ್ ವೈ: ಹಲೋ? ಹಲೋ?ಎಲ್ಲಿದ್ದೀಯಪ್ಪಾ??
    ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ?. ಕೊಚ್ಚಿನ್ ಗೆ ಹೋಗುತ್ತಿದ್ದೇವೆ? ಬಸ್ ನಲ್ಲಿದ್ದೇನೆ.

    ಬಿಎಸ್‍ವೈ: ಹೋಗಬಾರದಿತ್ತು..! ಬಾರಯ್ಯ ನೀನು ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ? ನಿನಗೇನು ಬೇಕೋ ಅದನ್ನು ಮಾಡುತ್ತೇನೆ.
    ಬಿ.ಸಿ. ಪಾಟೀಲ್: ಆಯಿತು ಅಣ್ಣಾ?ನೀವು ಮೊದಲೇ ಒಂದೂ ಚೂರು ಹೇಳಿದ್ದರೇ?
    ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!
    ಬಿ.ಸಿ. ಪಾಟೀಲ್: ಹೌದು?
    ಬಿ.ಎಸ್.ವೈ: ನೀನು ಹೋಗಬೇಡ? ಬಂದು ಬಿಡು?
    ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..

    ಬಿ.ಎಸ್.ವೈ: ಮನೆವ್ರು? ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!
    ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್ ಅಂತಾ?
    ಬಿ.ಎಸ್. ವೈ: ಯು ವಿಲ್ ಬಿಕಂ ದ ಮಿನಿಸ್ಟರ್ ದಟ್ಸ್ ಆಲ್!
    ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ? ನನ್ನ ಜತೆ ಇಬ್ಬರು ಮೂವರು ಇದ್ದಾರೆ!
    ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ?? ಕರೆದು ಕೊಂಡು ಬಾ
    ಬಿ.ಸಿ. ಪಾಟೀಲ್ : ಖಂಡಿತ? ಖಂಡಿತ
    ಬಿ.ಎಸ್. ವೈ: ಹಾಗಾದರೆ ಹೋಗ ಕೂಡದು ನೀನು ವಾಪಾಸ್ ಬಾ

    ಬಿ.ಸಿ. ಪಾಟೀಲ್ : ಆಯ್ತಣ್ಣಾ?ಆಯ್ತಣ್ಣಾ!
    ಬಿ.ಎಸ್. ವೈ: ಒಂದು ಸಾರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ
    ಬಿ.ಸಿ. ಪಾಟೀಲ್: ಆಯ್ತಣ್ಣಾ? ಆಯ್ತಣ್ಣಾ?
    ಬಿ.ಎಸ್. ವೈ: ಈಗೇನು ಮಾಡ್ತೀಯಾ? ಹೇಳು
    ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ? ನಾನು ಐದು ನಿಮಿಷದಲ್ಲಿ ಹೇಳ್ತೀನಿ ಅಣ್ಣಾ
    ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು
    ಬಿ.ಸಿ. ಪಾಟೀಲ್: ಆಯ್ತಣ್ಣಾ? ಆಯ್ತಣ್ಣಾ

  • ಆಂಧ್ರದಲ್ಲಿ ಏನಾಯ್ತು ಗೊತ್ತಲ್ಲ, 25 ಕೋಟಿ ಕೊಡ್ತೀನಿ ನಮ್ಮ ಕಡೆ ಬಾ: ಶ್ರೀರಾಮುಲು ಧಮಾಕಾ ಆಫರ್

    ಆಂಧ್ರದಲ್ಲಿ ಏನಾಯ್ತು ಗೊತ್ತಲ್ಲ, 25 ಕೋಟಿ ಕೊಡ್ತೀನಿ ನಮ್ಮ ಕಡೆ ಬಾ: ಶ್ರೀರಾಮುಲು ಧಮಾಕಾ ಆಫರ್

    ಬೆಂಗಳೂರು: ಇದೂವರೆಗೂ ಬಿಜೆಪಿಯ ಜನಾರ್ದನ ರೆಡ್ಡಿ, ಬಿ.ಜೆ.ಪುಟ್ಟಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಆಫರ್ ಕೊಟ್ಟಿರುವ ಆಡಿಯೋಗಳನ್ನು ಕೇಳಿದ್ದಾಯಿತು. ಇದೀಗ ಬಿಜೆಪಿ ಶಾಸಕ ಶ್ರೀರಾಮುಲು ಮತ್ತು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಆಫರ್ ನೀಡಿದ್ದಾರೆ ಎನ್ನಲಾದ ಆಡಿಯೋ ರಿಲೀಸ್ ಆಗಿದೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‍ಗೆ ಆಫರ್ ನೀಡಿರುವ ಆಡಿಯೋವನ್ನ ಕಾಂಗ್ರೆಸ್ ರಿಲೀಸ್ ಮಾಡಿದೆ. ಕೇಂದ್ರದಲ್ಲಿಯೇ ನಮ್ಮ ಸರ್ಕಾರವಿದೆ ಬಂದು ಬಿಡಿ. ಕೇಂದ್ರ ಸರ್ಕಾರ ನಮ್ಮದೇ ಇದೆ ಯಾವುದೇ ಅಮಾನತು ಆಗಲ್ಲ ಎಂದು ಭರವಸೆಯನ್ನು ನೀಡಿದ್ದಾರೆ.

    ಆಡಿಯೋದಲ್ಲಿ ಏನಿದೆ?
    ಶ್ರೀರಾಮುಲು: ನಾನು ರಾಮುಲು ಮಾತಡ್ತಾ ಇದ್ದೇನೆ..
    ಬಿ.ಸಿ. ಪಾಟೀಲ್: ಹಾ? ನಮಸ್ಕಾರ ಹೇಳಿ ಅಣ್ಣಾ? ಬ್ರದರ್
    ಶ್ರೀರಾಮುಲು: ಏನು ಎಕ್ಸ್ ಪೆಕ್ಟ್ ಮಾಡ್ತೀರಾ?
    ಬಿ.ಸಿ.ಪಾಟೀಲ್: `ಸಾಹೇಬ್ರು’ ಹಂಗೆ ಹೇಳಿದ್ರು? ಆದರೆ ಅಮೌಂಟ್ ಬಗ್ಗೆ ಏನೂ ಹೇಳಲಿಲ್ಲ.
    ಶ್ರೀರಾಮುಲು: ಹೇಳಿ ಏನು ಅಮೌಂಟ್ ಎಕ್ಸ್ ಪೆಕ್ಟ್ ಮಾಡ್ತೀರಾ?
    ಬಿ.ಸಿ. ಪಾಟೀಲ್: ನೀವೇ ಹೇಳಬೇಕು.
    ಶ್ರೀರಾಮುಲು: 25 ಅಂತ ಹೇಳಿದ್ದೆ.

    ಬಿ.ಸಿ. ಪಾಟೀಲ್: ನನ್ನ ಜತೆಯಲ್ಲಿ 3-4 ಜನರಿದ್ದಾರೆ? ಅವರಿಗೆ ಕ್ಲಾರಿಫೈ ಮಾಡಬೇಕು
    ಶ್ರೀರಾಮುಲು: ಅವರಿಗೆ 10ರಿಂದ 15 ಕೊಡ್ತೀವಿ
    ಬಿ.ಸಿ. ಪಾಟೀಲ್: ಅಣ್ಣಾ? ಅಣ್ಣಾ?ಅವರ ಪೊಸಿಷನ್ ಏನು?
    ಶ್ರೀರಾಮುಲು: ಅವರನ್ನೂ ಮಂತ್ರಿ ಮಾಡ್ತೀವಿ?
    ಬಿ.ಸಿ. ಪಾಟೀಲ್: ನನ್ನ ಕ್ಷೇತ್ರದಲ್ಲಿ ಯು.ಬಿ. ಬಣಕಾರ್ ಇದ್ದು, ಅವರು ತುಂಬಾ ಸ್ಟ್ರಾಂಗ್ ಇದ್ದಾರೆ? ಅವರು ಮತ್ತೊಂದು ಪಕ್ಷಕ್ಕೆ ಹೋಗಿ ನನ್ನ ವಿರುದ್ಧ ಚುನಾವಣೆಗೆ ನಿಂತರೆ??
    ಶ್ರೀರಾಮುಲು: ಡೋಂಟ್ ವರಿ? ಎಲೆಕ್ಶನ್ ಇರುವುದಿಲ್ಲ?ನಾವು ನಮ್ಮದೇ ಸ್ಪೀಕರ್ ಎಲೆಕ್ಟ್ ಮಾಡ್ತೀವಿ. ಮೆಜಾರಿಟಿ ಪ್ರೂವ್ ಮಾಡ್ತೀವಿ. ಆಂಧ್ರ ಪ್ರದೇಶ್ ದಲ್ಲಿ ಏನಾಯ್ತು ಗೊತ್ತಲ್ಲಾ ಅಣ್ಣಾ? ಎಂಎಲ್ ಎ ಗಳನ್ನು ಅಮಾನತ್ತು ಮಾಡೋದಿಲ್ಲ. ನಮ್ಮದೇ.. ಸೆಂಟ್ರಲ್ ಗೌರ್ನಮೆಂಟ್ ಕೂಡ ಇದೆ. ನಮ್ಮದೇ ಎಲೆಕ್ಶನ್ ? ಗಿಲೆಕ್ಶನ್ ಏನೂ ಇರಲ್ಲ. ನಾನು ಫೋನ್ ಈಗ ಮುರಳೀಧರ್ ರಾವ್ ಗೆ ಕೊಡ್ತೀನೀ? ಅವರಹತ್ತಿರ ಮಾತಾಡಿ?

    ಬಿ.ಸಿ.ಪಾಟೀಲ್: ಅವೆಲ್ಲಾ ಏನೂ ಬೇಡಾ ಬ್ರದರ್?
    ಶ್ರೀರಾಮುಲು: ಇಲ್ಲಾ ಮಾತನಾಡಿ?
    ಬಿ.ಸಿ.ಪಾಟೀಲ್: ಓ.ಕೆ. ಓ.ಕೆ. ಓ.ಕೆ. ಬ್ರದರ್
    ಮುರಳಿಧರ ರಾವ್: ನೀವು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ?ನೀವು ಎಲೆಕ್ಶನ್ ಗೆ ಹೋಗುವ ಅಗತ್ಯವೇ ಬಾರದು
    ಬಿ.ಸಿ. ಪಾಟೀಲ್: ನನ್ನ ಜತೆ 3ರಿಂದ ನಾಲ್ಕು ಶಾಸಕರಿದ್ದು, ಅವರ ಪರವಾಗಿ ನಾನೇ ಕೇಳಬೇಕು? ನೀವು ಒಂದು ಫಿಗರ್ ಹೇಳಿ?
    (ರಾಮುಲು ಮಧ್ಯಪ್ರವೇಶ)
    ಶ್ರೀರಾಮುಲು: ಪಾಟೀಲ್ ಸಾಹೇಬರೆ ನಾನು ಈಗಾಗಲೇ 15 ಹೇಳಿದ್ದೇನೆ. ಇವರ ಬಳಿ ನೀವು ಫಿಗರ್ ಕೇಳಬೇಡಿ
    ಮುರಳಿಧರರಾವ್: ನಾವು ರೆಡಿ ಇದ್ದೇವೆ. ಯಾರಿಗೂ ಎಲೆಕ್ಶನ್ ಇಲ್ಲ?ಎಲ್ಲಾ ಸ್ಪೀಕರ್ ಗೆ ಬಿಟ್ಟಿದ್ದು? ಎಲ್ಲ ರಾಜ್ಯಗಳಲ್ಲೂ ಇದೇ same. ನಾವು ನಿಮ್ಮೊಂದಿಗೆ ಎಂದಿಗೂ ಇದ್ದೇವೆ. ಇದು ನನ್ನ ಮಾತು? ಆಂಧ್ರ ತೆಲಂಗಾಣದಲ್ಲೂ ಹೀಗೆ ಆಗಿತ್ತು?

    ಬಿ.ಸಿ. ಪಾಟೀಲ್: ಸಾರ್ ನಾನು ಇಲ್ಲೂ ಮಿನಿಸ್ಟರ್ ಆಗ್ತೀನೀ ಸಾರ್?
    ಮುರಳೀಧರ್ ರಾವ್: ಸಾರ್? ನೂರಾ ನಾಲ್ಕೇ ಸ್ಟೇಬಲ್ ಆಗಿಲ್ಲ ಅಂದರೆ? 38 ಹೇಗೆ ಸ್ಟೇಬಲ್ ಆಗುತ್ತದೆ.
    ಬಿ.ಸಿ. ಪಾಟೀಲ್: ಯೆಸ್ ಸಾರ್. ಯೆಸ್ ಸಾರ್?!!

  • ಮೋದಿಗೆ ದೇಶವನ್ನು ಮುನ್ನಡೆಸುವ ಅನುಭವದ ಕೊರತೆಯಿದೆ- ಸಂಸದೆ ರೇಣುಕಾ ಚೌಧರಿ

    ಮೋದಿಗೆ ದೇಶವನ್ನು ಮುನ್ನಡೆಸುವ ಅನುಭವದ ಕೊರತೆಯಿದೆ- ಸಂಸದೆ ರೇಣುಕಾ ಚೌಧರಿ

    ರಾಯಚೂರು: ಪ್ರಧಾನಿ ಮೋದಿ ಅವರಿಗೆ ದೇಶವನ್ನು ಮುನ್ನಡೆಸುವ ಅನುಭವದ ಕೊರತೆಯಿದೆ. ಅದರಿಂದಾಗಿಯೇ ದೇಶ ಆರ್ಥಿಕ ದುಸ್ಥಿತಿಗೆ ತಲುಪಿದೆ ಅಂತ ಕಾಂಗ್ರೆಸ್ ಹಿರಿಯ ಮುಖಂಡೆ ಹಾಗೂ ಮಾಜಿ ಸಂಸದೆ ರೇಣುಕಾ ಚೌಧರಿ ಆರೋಪಿಸಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ ಅಂತ ಸಂಸದೆ ಆರೋಪಿಸಿದ್ದಾರೆ.

    ಪ್ರಧಾನಿ ಹುದ್ದೆಗೆ ತಕ್ಕಂತೆ ಮೋದಿ ವರ್ತನೆಯಿಲ್ಲ. ರಾಜ್ಯದ ಚುನಾವಣೆಯಲ್ಲಿ ಪ್ರಚಾರಕರಂತೆ ಮಾತನಾಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮಕ್ಕಳ ಮೇಲೆ ದಾಳಿ ಬಗ್ಗೆ ಪ್ರಧಾನಿಗೆ ಕಾಳಜಿಯಿಲ್ಲ. ದೇಶದಲ್ಲಿನ ಎಲ್ಲಾ ಅಹಿತಕರ ಘಟನೆ ಬದಿಗಿರಿಸಿ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ದೇಶದ ಆಗುಹೋಗುಗಳ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದರು.

  • ಹಿಂದೂ ವಿರೋಧಿಯಾಗಿದ್ದಲ್ಲಿ ನಾನೇ ಸರ್ವನಾಶವಾಗ್ಲಿ- ಕಾಯಿ ಇಟ್ಟು ಕಾಂಗ್ರೆಸ್ ಅಭ್ಯರ್ಥಿ ಆಣೆ

    ಹಿಂದೂ ವಿರೋಧಿಯಾಗಿದ್ದಲ್ಲಿ ನಾನೇ ಸರ್ವನಾಶವಾಗ್ಲಿ- ಕಾಯಿ ಇಟ್ಟು ಕಾಂಗ್ರೆಸ್ ಅಭ್ಯರ್ಥಿ ಆಣೆ

    ಕಾರವಾರ: ಭಟ್ಕಳದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ದೇವಸ್ಥಾನಗಳಲ್ಲಿ ದೇವರಿಗೆ ಕಾಯಿ ಇಟ್ಟು ಆಣೆ ಪ್ರಮಾಣ ಮಾಡಿದ್ದಾರೆ.

    ನಾನು ಹಿಂದುತ್ವದ ವಿರುದ್ಧವಿದ್ದರೆ ಸರ್ವನಾಶವಾಗಿ ಹೋಗಲಿ. ಇಲ್ಲವೇ ಯಾರು ನನ್ನ ವಿರುದ್ಧ ಹಿಂದೂ ವಿರೋಧಿ ಎಂದು ಹಬ್ಬಿಸುತ್ತಿದ್ದಾರೋ ಅವರು ಸರ್ವನಾಶವಾಗಲಿ. ನಾನು ಹಿಂದೂ ವಿರೋಧಿಯಲ್ಲ. ಕಸಾಯಿ ಖಾನೆ ಮಾಡಲು ಹೊರಟಿಲ್ಲ. ಇವೆಲ್ಲವನ್ನೂ ನನ್ನ ತೇಜೋವಧೆಗಾಗಿ ವಾಟ್ಸಪ್, ಫೇಸ್‍ಬುಕ್ ಅಲ್ಲದೇ ಸ್ಥಳೀಯ ಪತ್ರಿಕೆಗಳಲ್ಲೂ ಸುಳ್ಳು ಸುದ್ದಿ ಮಾಡಿ ನಾನೊಬ್ಬ ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಾನು ಯಾವತ್ತೂ ಹಿಂದೂ ವಿರೋಧಿಯಲ್ಲ, ನಾನು ಹಿಂದೂ ವಿರೋಧವಾಗಿ ಕೆಲಸ ಮಾಡಿದ್ದರೆ ಸರ್ವನಾಶವಾಗಿ ಹೋಗಲಿ, ಇಲ್ಲವೇ ಅವರು ಸರ್ವನಾಶವಾಗಬೇಕೆಂದು ಇಡಗುಂಜಿ ಗ್ರಾಮದ ನೀಲಗೋಡು ಯಕ್ಷ ಚೌಡೇಶ್ವರಿ ದೇವರಿಗೆ ತೆಂಗಿನ ಕಾಯಿಗಳನ್ನಿಟ್ಟು ಮಂಕಾಳು ವೈದ್ಯ ಪ್ರಮಾಣ ಮಾಡಿದ್ದಾರೆ.

    ಪ್ರಚಾರಕ್ಕೆ ತೆರಳಿದ ಪ್ರತಿ ಗ್ರಾಮದ ಶಕ್ತಿ ದೇವರಿಗೆ ಕಾಯಿಗಳನ್ನಿಟ್ಟು ಮಂಕಾಳು ವೈದ್ಯ ಪ್ರಮಾಣ ಮಾಡುತ್ತಿರುವುದು ವಿಶೇಷ.