Tag: Karnataka Text Books Controvercy

  • ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು: ಕಾಂಗ್ರೆಸ್‌ ಟೀಕೆ

    ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು: ಕಾಂಗ್ರೆಸ್‌ ಟೀಕೆ

    ಬೆಂಗಳೂರು: ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು ಎಂದು ಟ್ವೀಟ್‌ ಮಾಡಿ ಕಾಂಗ್ರೆಸ್‌ ಕಾಲೆಳೆದಿದೆ.

    ಟ್ವೀಟ್‌ನಲ್ಲೇನಿದೆ?
    ನಾಡಿನ ಗೌರವಾನ್ವಿತ ಮಠಾಧೀಶರು, ಸಾಹಿತಿಗಳು ಹಲವು ಪತ್ರ ಬರೆದರೂ ಸ್ಪಂದಿಸದ ಶಿಕ್ಷಣ ಸಚಿವರು ಸುನಿಲ್‌ ಕುಮಾರ್‌ ಅವರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಸರ್ಕಾರಕ್ಕೆ ಮಠಾಧೀಶರ ಮೇಲೆ ಗೌರವವಿಲ್ಲ, ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಅದೇಶವೇ ಮೇಲು ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ನನಗೆ ಯಾವ ಉತ್ಸವವು ಬೇಡ: ಡಿಕೆಶಿ

    ಪಠ್ಯ ಪರಿಷ್ಕರಣೆ ವಿರೋಧಿಸಿದ ಆದಿಚುಂಚನಗಿರಿ ಶ್ರೀಗಳು, ಪಂಡಿತಾರಾಧ್ಯ ಶ್ರೀಗಳು, ಜಯಮೃತ್ಯುಂಜಯ ಶ್ರೀಗಳು, ಲಿಂಗಾಯತ ಮಠಾಧೀಶರು, ನಾಡಿನ ಹಲವು ಸಾಹಿತಿಗಳು ಪತ್ರ ಬರೆದರೂ ಉತ್ತರಿಸದ ಶಿಕ್ಷಣ ಸಚಿವರು, ಸಚಿವ ಸುನಿಲ್ ಕುಮಾರ್‌ರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಬಿಜೆಪಿಯ ಗೌರವ ಯಾರ ಮೇಲೆ? ಆದ್ಯತೆ ಯಾವುದಕ್ಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

    ಬ್ರಹ್ಮಶ್ರೀ ನಾರಾಯಣ ಗುರು ಅವರ ಪಠ್ಯವನ್ನು ಕನ್ನಡ ಭಾಷಾ ವಿಷಯದ ಬದಲಾಗಿ ಸಮಾಜ ವಿಜ್ಞಾನ ವಿಷಯದಲ್ಲಿ ಅಳವಡಿಸುವಂತೆ ಕೋರಿ ಸಚಿವ ಸುನಿಲ್‌ ಕುಮಾರ್‌ ಅವರು ಪತ್ರ ಬರೆದಿದ್ದರು. ಅದಕ್ಕೆ ತಕ್ಷಣ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸರ್ಕಾರಿ ಆದೇಶ ಕೂಡ ಹೊರಡಿಸಿದ್ದರು. ಈ ಕ್ರಮವನ್ನು ಕಾಂಗ್ರೆಸ್‌ ಟೀಕಿಸಿದೆ. ಇದನ್ನೂ ಓದಿ: ಕುಮಾರಸ್ವಾಮಿ ಹೊಸ ಹೀರೋಯಿನ್: ಸಿಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

  • ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎನ್ನುವ ಬಿಜೆಪಿಯವರು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ?: ಕಾಂಗ್ರೆಸ್

    ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎನ್ನುವ ಬಿಜೆಪಿಯವರು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ?: ಕಾಂಗ್ರೆಸ್

    ಬೆಂಗಳೂರು: ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಅಂದು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ? ತಪ್ಪಿದ್ದರೆ ಅಂದೇ ಪ್ರಶ್ನಿಸಬಹುದಿತ್ತಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದೆ.

    ಟ್ವೀಟ್‍ನಲ್ಲಿ ಏನಿದೆ?
    ಬರಗೂರು ಸಮಿತಿಯ ಪಠ್ಯದಲ್ಲಿ ಲೋಪವಿತ್ತು ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಅಂದು ಸದನದಲ್ಲಿ ಅನುಮೋದನೆ ಪಡೆಯುವಾಗ ಬ್ಲೂ ಫಿಲ್ಮ್ ನೋಡ್ತಿದ್ರಾ? ತಪ್ಪಿದ್ದರೆ ಅಂದೇ ಪ್ರಶ್ನಿಸಬಹುದಿತ್ತಲ್ಲ? ಇವರು ಪರಿಷ್ಕರಿಸಿದ್ದನ್ನು ಸದನದ ಮುಂದೆ ತರುವ ಧೈರ್ಯವಿಲ್ಲವೇ? ಈಗ ಇಂತಹ ಸುಳ್ಳಿನ ಸರ್ಕಸ್ ನಡೆಸುತ್ತಿರುವುದು ಏಕೆ? ಈ ಸರ್ಕಾರ ಪರಿಷ್ಕರಿಸಿದ ಇಡೀ ಪಠ್ಯವೇ ಅವಾಂತರಗಳ ಮೂಟೆಯಾಗಿದೆ. ಇದನ್ನೂ ಓದಿ: ಆನ್‌ಲೈನ್ ಕ್ಲಾಸ್‌ನಲ್ಲಿ ಹೋಂ ವರ್ಕ್ ಬದಲಿಗೆ ಅಶ್ಲೀಲ ವೀಡಿಯೋ ಕಳಿಸಿ ತಗಲಾಕ್ಕೊಂಡ 6ನೇ ಕ್ಲಾಸ್ ವಿದ್ಯಾರ್ಥಿ

    ಕಾಸರಗೋಡು ಹೋರಾಟವನ್ನೂ ಸಹ ತಿರುಚಲಾಗಿದೆ, ಕಯ್ಯಾರ ಕಿಂಞಣ್ಣ ರೈ ಬದಲಿಗೆ ಗೋವಿಂದ ಪೈ ಅವರ ಹೆಸರು ಸೇರಿಸಿದ ಈ ತಿರುಚಿವಿಕೆ ಏಕೆ ಬಿ.ಸಿ ನಾಗೇಶ್ ಮತ್ತು ಬಿಜೆಪಿ ಅವರೇ? ಬಂಟ ಸಮುದಾಯದ ಮೇಲೆ ಅಷ್ಟೊಂದು ಅಸಹನೆ ಇದೆಯೇ ಬಿಜೆಪಿಗೆ? ಗೊಂದಲಗಳಿಗೆ ಪಠ್ಯಗಳನ್ನು ವಾಪಸ್ ಪಡೆಯುವುದೇ ಪರಿಹಾರ. ಪಠ್ಯ ಪರಿಷ್ಕರಣೆ ಮಾಡಲು ಮುಂದಾಗಿದ್ದ ಸರ್ಕಾರದ ಸ್ಥಿತಿ ಬಾಯಲ್ಲಿ ಬಿಸಿ ತುಪ್ಪ ಇಟ್ಟುಕೊಂಡಂತಾಗಿದೆ. ತಪ್ಪು ಮಾಡಲು ಒಂದು ಸಮಿತಿ, ತಪ್ಪನ್ನು ಸರಿಪಡಿಸಲು ಮತ್ತೊಂದು ಸಮಿತಿ, ಅವರು ಮಾಡುವ ತಪ್ಪನ್ನು ಸರಿಪಡಿಸಲು ಇನ್ನೊಂದು ಸಮಿತಿಯೇ. ಕುಂಠಿತಗೊಳ್ಳುವ ಮಕ್ಕಳ ಶಿಕ್ಷಣಕ್ಕೆ, ಆರ್ಥಿಕ ನಷ್ಟಕ್ಕೆ ಹೊಣೆ ಯಾರು? ಇಷ್ಟು ಹಠ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದನ್ನೂ ಓದಿ: ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಟ್ಟುಕೊಂಡ ರೆಬೆಲ್ ಶಾಸಕರ ಗುಂಪು

    Live Tv