Tag: Karnataka State Warehousing Corporation

  • ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೇಮಕ ಆದೇಶ – ಸಿಎಂ ಸಹಿಯನ್ನೇ ನಕಲು ಮಾಡಿದ ಕಿರಾತಕರು

    ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೇಮಕ ಆದೇಶ – ಸಿಎಂ ಸಹಿಯನ್ನೇ ನಕಲು ಮಾಡಿದ ಕಿರಾತಕರು

    ಯಾದಗಿರಿ: ರಾಜ್ಯ ಉಗ್ರಾಣ ನಿಗಮ (Karnataka State Warehousing Corporation) ಅಧ್ಯಕ್ಷ ಸ್ಥಾನ ನೇಮಕ ಆದೇಶದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರ (Siddaramaiah) ಹೆಸರಲ್ಲಿ ನಕಲಿ ಸಹಿ ಮಾಡಿದ ಪ್ರಕರಣ ಯಾದಗಿರಿಯಲ್ಲಿ (Yadgir) ಬೆಳಕಿಗೆ ಬಂದಿದೆ.

    ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅಬ್ದುಲ್ ನಬಿ ಕಾಡ್ಲೂರ್‍ರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿ ಆದೇಶ ಹೊರಡಿಸಿರುವಂತೆ ನಕಲಿ ಆದೇಶ ಪ್ರತಿಯನ್ನ ಸೃಷ್ಟಿಸಿರುವ ಆರೋಪಿಗಳು ಅದನ್ನು ವೈರಲ್ ಮಾಡಿದ್ದಾರೆ. ಜನ ನಕಲಿ ಆದೇಶವನ್ನು ನಿಜ ಎಂದು ನಂಬಿದ್ದು, ಸಾಕಷ್ಟು ಗೊಂದಲಕ್ಕೆ ಸಹ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: ನಾಸೀರ್ ಹುಸೇನ್‍ರನ್ನು ಆರೋಪಿ ನಂ.4 ಎಂದು ಪರಿಗಣಿಸಿ ಕ್ರಮ ಕೈಗೊಳ್ಳಿ: ವಿಜಯೇಂದ್ರ

    ಇತ್ತೀಚೆಗಷ್ಟೇ ನಿಧನರಾದ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಫೆ.25 ರಂದು ರಾಜಾ ವೆಂಕಟಪ್ಪ ನಾಯಕ ನಿಧನರಾದ ಮೇಲೆ ಉಗ್ರಾಣ ನಿಗಮದ ಅದ್ಯಕ್ಷ ಸ್ಥಾನ ತೆರುವಾಗಿತ್ತು. ಕೇವಲ ಮೂರು ದಿನದಲ್ಲಿ ತೆರವಾದ ಸ್ಥಾನಕ್ಕೆ ಅಬ್ದುಲ್ ನಬಿ ಕಾಡ್ಲೂರ್ ಅವರನ್ನ ನೇಮ ಮಾಡಿರುವ ನಕಲಿ ಆದೇಶದ ಪ್ರತಿ ಹೊರ ಬಂದಿದೆ. ಈ ನಕಲಿ ಆದೇಶ ಪ್ರತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಹಿ ಹೋಲುವಂತೆ ನಕಲು ಮಾಡಿರುವುದು ಈಗ ಬಯಲಾಗಿದೆ.

    ಮಾ.1 ರಂದು ಉಗ್ರಾಣ ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿರುವ ನಕಲು ಪ್ರತಿ ವೈರಲ್ ಆಗಿದೆ. ಕಳೆದ 4-5 ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿರುವ ಸಿಎಂ ನಕಲು ಆದೇಶ ಪ್ರತಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

  • ವಿಧಾನಸೌಧಕ್ಕೆ ಮತ್ತೆ ಇಲಿ, ಹೆಗ್ಗಣ ಕಾಟ- ಇಲಿ ಹಿಡಿಯೋಕೆ ಕೊಡ್ತಾರಂತೆ 18 ಲಕ್ಷ ರೂ.!

    ವಿಧಾನಸೌಧಕ್ಕೆ ಮತ್ತೆ ಇಲಿ, ಹೆಗ್ಗಣ ಕಾಟ- ಇಲಿ ಹಿಡಿಯೋಕೆ ಕೊಡ್ತಾರಂತೆ 18 ಲಕ್ಷ ರೂ.!

    ಬೆಂಗಳೂರು: ವಿಧಾನಸೌಧದಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹಿಡಿಯಲು ಸರ್ಕಾರ ವಾರ್ಷಿಕ 15ರಿಂದ 18 ಲಕ್ಷ ರೂ. ಪ್ರತ್ಯೇಕ ಅನುದಾನ ನೀಡಲು ನಿರ್ಧರಿಸಿದೆಯಂತೆ. ಅಷ್ಟೇ ಅಲ್ಲ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸಲಾಗಿದೆ.

    ಇಲಿ ಶಿಕಾರಿಗೆ ಮಾಡಿರೋ ವೆಚ್ಚ:
    ಇಲಿಗಳ ಶಿಕಾರಿಗೆ 2013-14ರಲ್ಲಿ 3.49 ಲಕ್ಷ ರೂ. ವೆಚ್ಚ ಮಾಡಿದರೆ. 2014-15ರಲ್ಲಿ ಸುಮಾರು 4.96 ಲಕ್ಷ ರೂ., 2015-16ನೇ ಸಾಲಿನಲ್ಲಿ 4.96 ಲಕ್ಷ ರೂ., ಈ ವರ್ಷ ಉಗ್ರಾಣ ಇಲಾಖೆಗೆ 15ರಿಂದ 18 ಲಕ್ಷ ರೂ. ಅನುದಾನ ನೀಡಲು ತೀರ್ಮಾನ ಮಾಡಲಾಗಿದ್ದು, 5 ವರ್ಷಗಳಲ್ಲಿ ಒಟ್ಟು 25 ಲಕ್ಷ ರೂ. ಖರ್ಚು ಮಾಡಲಾಗಿದೆ.

    ಆಪರೇಷನ್ ಮೂಷಿಕ ನಡೆಸೋದಕ್ಕೆ ಈಗ ವಿಧಾನಸೌಧದಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಒಟ್ಟು 900 ಸರ್ಕಾರಿ ಕೊಠಡಿಯಲ್ಲಿ ಮೈಕು -ಡಾಕ್ಯುಮೆಂಟುಗಳನ್ನು ಹರಿದುಹಾಕುವ ಇಲಿಗಳ ಉಪಟಳಕ್ಕೆ ಎಲ್ಲರೂ ಕಂಗಾಲಾಗಿದ್ದಾರೆ. ವಿಧಾನಸೌಧ ಅಷ್ಟೇ ಅಲ್ಲದೆ ವಿಕಾಸಸೌಧ ಸೇರಿದಂತೆ ಬಹುಮಹಡಿ ಕಟ್ಟಡದಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಅವುಗಳನ್ನು ಹಿಡಿಯುವ ಕೆಲಸವನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸಲು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.

    ಈಗಾಗಲೇ ಖಾಸಗಿ ಏಜೆನ್ಸಿಗಳಿಂದ ಕಾರ್ಯ ಪೂರ್ಣವಾಗಿಲ್ಲ. ಈಗ ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಉಗ್ರಾಣ ಇಲಾಖೆ ಅಧಿಕಾರಿಗಳು ನಮ್ಮ ಕೈಯಲ್ಲಿ ಈ ಕೆಲಸ ಆಗುವುದಿಲ್ಲ ಬಿಟ್ಟು ಬಿಡಿ ಅಂತಾ ಬೇಡಿಕೊಂಡಿದ್ದಾರಂತೆ. ಇದಕ್ಕೆ ಕ್ಯಾರೆ ಎನ್ನದ ಸರ್ಕಾರ ಜವಾಬ್ದಾರಿ ನೀಡಿ, ಪ್ರತ್ಯೇಕ ಅನುದಾನ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv