Tag: Karnataka Floods

  • ಹೈಕಮಾಂಡ್ ಸಂದೇಶಕ್ಕೆ ಬಿಎಸ್‍ವೈ ಬೇಸರ!

    ಹೈಕಮಾಂಡ್ ಸಂದೇಶಕ್ಕೆ ಬಿಎಸ್‍ವೈ ಬೇಸರ!

    ಬೆಂಗಳೂರು: ಹೈಕಮಾಂಡ್ ಕಳುಹಿಸಿರುವ ಸಂದೇಶಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

    ಕರ್ನಾಟಕ ಪ್ರವಾಹ ಪರಿಹಾರವಾಗಿ ಕೇಂದ್ರ ಸರ್ಕಾರ ಕೊನೆಗೂ ಮಧ್ಯಂತರ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವಾಗಿ 3,200 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಕೇಳಿ ಕೊಂಡಿತ್ತು. ಆದರೆ ಕೇಂದ್ರ 1,200 ಕೋಟಿ ರೂ. ನೀಡಿ ತೊಳೆದುಕೊಂಡಿದೆ. ಅನುದಾನ ನೀಡಿದ ಬಳಿಕ ಮಧ್ಯಂತರ ಪರಿಹಾರ ಕೊಟ್ಟಿದ್ದೇವೆ, ಉಳಿದ ಹಣ ಸದ್ಯಕ್ಕಿಲ್ಲ. ಇನ್ನಷ್ಟು ಪರಿಹಾರ ಹಣಕ್ಕೆ ಸ್ವಲ್ಪ ದಿನ ಕಾಯಲೇಬೇಕು ಎಂದು ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಈಗಲಾದರೂ ಎಚ್ಚೆತ್ತುಕೊಳ್ಳಲಿ’- ರಾಜ್ಯ ಸರ್ಕಾರ ವಿರುದ್ಧ ಎಚ್‍ಡಿಕೆ ಲೇವಡಿ

    ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ನೆರೆ ಇದೆ. ಎಲ್ಲ ರಾಜ್ಯಗಳಿಗೂ ಅಧ್ಯಯನ ತಂಡ ಕಳುಹಿಸಿ ವರದಿ ತರಿಸಿಕೊಳ್ಳಲಾಗುತ್ತಿದೆ. ಎಲ್ಲ ರಾಜ್ಯಗಳ ಜೊತೆ ಕರ್ನಾಟಕಕ್ಕೂ ಸಿಗುತ್ತೆ ಪರಿಹಾರ ಸಿಗಲಿದೆ. ಅಲ್ಲಿವರೆಗೂ ಎಲ್ಲವನ್ನು ನೀವೇ ನಿಭಾಯಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರೈತರ ಬಳಿಕ ಜಿಲ್ಲಾಧಿಕಾರಿ ಮೇಲೆ ಸಿಎಂ ಬಿಎಸ್‍ವೈ ಗರಂ

    ಸಂದೇಶದಿಂದ ಬೇಸರಗೊಂಡಿರುವ ಸಿಎಂ, ನಾನು ಕೇಂದ್ರದ ಜೊತೆ ಮಾತನಾಡಲ್ಲ, ನೀವೇ ಮಾತನಾಡಿಕೊಳ್ಳಿ. ಅಮಿತ್ ಶಾ ವಹಿಸಿರುವ ಜವಾಬ್ದಾರಿ ನೀವೇ ನಿಭಾಯಿಸಿಕೊಳ್ಳಿ. ನನಗೆ ನಿಭಾಯಿಸಿ ಸಾಕಾಗಿದೆ. ಇನ್ನು ನನ್ನಿಂದ ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರು, ಪ್ರಧಾನಿ ಭೇಟಿಗೆ ಅವಕಾಶ ಕೇಳಿದೆ ಕೊಟ್ಟಿಲ್ಲ ಎಂದು ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರ ಮೇಲೆ ಪರಿಹಾರದ ಜವಾಬ್ದಾರಿಯನ್ನು ವರ್ಗಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಪ್ರತಿಭಟನೆಯ ಬಳಿಕ ಎಚ್ಚೆತ್ತ ಕೇಂದ್ರ – ಕರ್ನಾಟಕಕ್ಕೆ 1200 ಕೋಟಿ ಮಧ್ಯಂತರ ಪರಿಹಾರ

  • ನೆರೆ ಪರಿಹಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1 ಕೋಟಿ ರೂ. ದೇಣಿಗೆ

    ನೆರೆ ಪರಿಹಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1 ಕೋಟಿ ರೂ. ದೇಣಿಗೆ

    ಉಡುಪಿ: ಪ್ರವಾಹ ಪರಿಸ್ಥಿತಿಯಿಂದ ರಾಜ್ಯದ ಉತ್ತರ ಕರ್ನಾಟಕ ಭಾಗ ಹಾಗೂ ಕರವಾಳಿ ಭಾಗದ ಜಿಲ್ಲೆಗಳು ತತ್ತರಿಸಿವೆ. ಈಗಾಗಲೇ ಕರುನಾಡಿನ ನೋವಿಗೆ ಹಲವು ಜನರು, ಸಂಘ ಸಂಸ್ಥೆಗಳು ಜನರ ನೋವಿಗೆ ಸ್ಪಂಧಿಸಿವೆ. ಸದ್ಯ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲದಿಂದ ಪರಿಹಾರ ದೇಣಿಗೆಯಾಗಿ ಒಂದು ಕೋಟಿ ರೂ. ಘೋಷಣೆಯಾಗಿದೆ.

    ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಇಂದು ಸಂಜೆ ಸಭೆ ಸೇರಿ ಈ ಮಾನವೀಯ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆಯನ್ನು ನೀಡಲು ಎಲ್ಲರೂ ಒಪ್ಪಿದ್ದಾರೆ. ಈ ಬಗ್ಗೆ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ಹೊರಡಿಸಿದೆ.

    ಪಬ್ಲಿಕ್ ಟಿವಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಭಕ್ತರು ದೇವರಿಗೆ ಹರಕೆ ರೂಪದಲ್ಲಿ ಧನ ಸಹಾಯ ಮಾಡುತ್ತಾರೆ. ಜನ ಕಷ್ಟದಲ್ಲಿರುವಾಗ ಸೂರು ಕಳೆದುಕೊಂಡಿರುವಾಗ ದೇಗುಲ ಸಹಾಯ ಮಾಡುವುದು ಜವಾಬ್ದಾರಿ. ತಾಯಿ ಮೂಕಾಂಬಿಕೆಯ ಪ್ರೇರಣೆಯಂತೆ ನೆರೆ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳಿದರು.