Tag: Karnataka Elections 2018

  • ಬಾರ್ ಓಪನ್ ಆಗ್ತಿದ್ದಂತೆ ಮುಗಿಬಿದ್ದ ಜನ – ಎಣ್ಣೆಗಾಗಿ ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು

    ಬಾರ್ ಓಪನ್ ಆಗ್ತಿದ್ದಂತೆ ಮುಗಿಬಿದ್ದ ಜನ – ಎಣ್ಣೆಗಾಗಿ ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು

    ಬೆಂಗಳೂರು: ಚುನಾವಣೆ ನಿಮಿತ್ತ ಎರಡು ದಿನಗಳ ಕಾಲ ರಾಜ್ಯಾದ್ಯಂತ ಬಾರ್ ಗಳನ್ನು ಬಂದ್ ಮಾಡಲಾಗಿದ್ದು, ಎಣ್ಣೆ ಪ್ರಿಯರು ಎಣ್ಣೆ ಸಿಗದೆ ಪರದಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.

    ಶನಿವಾರ ಮತದಾನ ಮುಗಿದು ಇಂದು ಬೆಳಿಗ್ಗೆ ಬಾರ್ ಗಳು ಓಪನ್ ಆಗುತ್ತಿದ್ದಂತೆ ಮದ್ಯಕ್ಕಾಗಿ ಜನ ಮುಗಿಬಿದ್ದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಥಳಿ ರಸ್ತೆಯಲ್ಲಿರುವ ಬಾರ್ ವೊಂದರಲ್ಲಿ ಜನ ಮದ್ಯಕ್ಕಾಗಿ ಕಿತ್ತಾಡುತ್ತಿದ್ದ ಘಟನೆ ನಡೆದಿದೆ.

    ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಪಡೆಯುತ್ತಿರುವುಸು ಕಂಡು ಬಂದಿದೆ. ಇನ್ನು ಮಹಿಳೆಯರು ಕೂಡ ಎಣ್ಣೆಗಾಗಿ ಬಾರ್ ಗೆ ಎಡತಾಕಿದ್ದು, ಗಂಡಸರಿಗಿಂತ ತಾವೇನು ಕಡಿಮೆ ಎಂಬಂತೆ ಸಾಲಿನಲ್ಲಿ ನಿಂತು ಮದ್ಯ ಪಡೆದಿರುವುದು ವಿಶೇಷವಾಗಿತ್ತು.

    ಇನ್ನು ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಮಾತನಾಡಿ ಇಂದು ಬಾರ್ ಮುಂದೆ ನಿಂತಿರುವ ಜನರನ್ನು ನೋಡಿದರೆ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದಾಗ ಜನ ಬ್ಯಾಂಕ್ ಮುಂದೆ ನಿಂತು ನೋಟ್ ಬದಲಾಯಿಸಲು ಜನ ಪರದಾಡುತ್ತಿದ್ದ ಕಣ್ಣ ಮುಂದೆ ಹದುಹೋಯ್ತು ಎಂದು ತಿಳಿಸಿದ್ದಾರೆ.

  • ಹೈಕಮಾಂಡ್ ದಲಿತರನ್ನ ಸಿಎಂ ಮಾಡಿದ್ರೆ ನನ್ನದೇನೂ ತಕರಾರು ಇಲ್ಲ, ಬಿಟ್ಟು ಕೊಡೋದಕ್ಕೆ ಸಿದ್ಧ: ಸಿಎಂ

    ಹೈಕಮಾಂಡ್ ದಲಿತರನ್ನ ಸಿಎಂ ಮಾಡಿದ್ರೆ ನನ್ನದೇನೂ ತಕರಾರು ಇಲ್ಲ, ಬಿಟ್ಟು ಕೊಡೋದಕ್ಕೆ ಸಿದ್ಧ: ಸಿಎಂ

    ಮೈಸೂರು: ಹೈಕಮಾಂಡ್ ದಲಿತರನ್ನು ಸಿಎಂ ಮಾಡುತ್ತೇವೆ ಎನ್ನುವ ನಿರ್ಧಾರ ತೆಗೆದುಕೊಂಡ್ರೇ ತಗೊಳ್ಳಿ. ಇದ್ರಲ್ಲಿ ನನ್ನದೇನೂ ತಕರಾರು ಇಲ್ಲ. ಎಲ್ಲಾ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕಾಂಗ್ರೆಸ್‍ಗೆ ದಲಿತ ಸಿಎಂ ಕೂಗು ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಏನಾದ್ರೂ ದಲಿತ ಸಿಎಂ ಅಂತಾ ಕೇಳಿದ್ರೆ, ನಾನು ಬಿಟ್ಟು ಕೊಡಲು ಸಿದ್ಧ ಎಂದು ಉತ್ತರಿಸಿದ್ದಾರೆ.

    ಕರ್ನಾಟಕದ ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಲೋಕಸಭೆಗೂ ಮುನ್ನ ಎರಡು ರಾಜ್ಯದ ಚುನಾವಣೆ ಬರುತ್ತೆ. ಅಲ್ಲಿಯೂ ನಾವೇ ಗೆಲ್ಲುತ್ತೇವೆ. ಅದರ ಜೊತೆ ಲೋಕಸಭೆಯಲ್ಲಿಯೂ ನಾವೇ ಗೆಲ್ಲುತ್ತೇವೆ ಅಂತ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ರು.

    ನಾನೂ ಬದುಕಿರುವವರೆಗೆ ಜಾತಿವಾದಿಗಳು, ಮತೀಯವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ಚುನಾವಣಾ ರಾಜಕೀಯ ನನಗೆ ಸಾಕಾಗಿದೆ. ಆದ್ರೆ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ. ನನ್ನ ಜೊತೆಗಿರುವವರಿಗೆ ಬೆಂಬಲವಾಗಿ ಇರುತ್ತೇನೆ ಅಂದ್ರು.

    ಇದೇ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಸ್ವಲ್ಪ ಮಟ್ಟಿನ ಸತ್ಯ. ಅದು ಪೂರ್ಣ ಪ್ರಮಾಣದ ಸತ್ಯ ಅಲ್ಲ ಅಂತ ಮತದಾನೋತ್ತರ ಸಮೀಕ್ಷೆ ಕುರಿತು ಸಿಎಂ ಅಚ್ಚರಿ ಹೇಳಿಕೆ ನೀಡಿದ್ದಾರೆ.

    ಚಾಮುಂಡೇಶ್ವರಿ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ಆದ್ರೆ ಅಂತರ ಕಡಿಮೆಯಾಗಬಹುದು. ಜೆಡಿಎಸ್ ವಿಪರೀತ ಹಣ ಹಂಚಿದ್ರು. ಹಣದಿಂದಲೇ ಚುನಾವಣೆ ಗೆಲ್ಲುತ್ತೇವೆ ಎಂದು ಅವರು ಅಂದ್ಕೊಂಡಿದ್ದಾರೆ ಅದು ಸಾಧ್ಯವಿಲ್ಲ. ಅವರ ಹಣದಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಬಹುದು ಅಷ್ಟೇ ಅಂದ್ರು.

    ಒಟ್ಟಿನಲ್ಲಿ ಎಲೆಕ್ಷನ್ ಅಖಾಡದ ಕಾರ್ಯ ಮುಗಿಸಿ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಶನಿವಾರ ವೋಟ್ ಮಾಡಿದ ಬಳಿಕ ಮೈಸೂರಿನ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಸಿಎಂ, ಟ್ವೀಟ್ ಮೇಲೆ ಟ್ವೀಟ್ ಮಾಡ್ತಿದ್ದಾರೆ. ಬೆಂಬಲಿಗರೇ, ಕಾರ್ಯಕರ್ತರೇ, ಹಿತೈಷಿಗಳೇ ನಿರಾಳರಾಗಿರಿ. ನಿಮಗೆ ಇನ್ನೆರಡು ದಿನಗಳ ಕಾಲ ಚುನಾವಣೋತ್ತರ ಸಮೀಕ್ಷೆ ಮನೋರಂಜನೆ ನೀಡಲಿದೆ. ಎಕ್ಸಿಟ್ ಪೋಲ್‍ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಗೆಲ್ಲೋದು ನಾವೇ. ವೀಕೆಂಡ್‍ನ್ನು ಎಂಜಾಯ್ ಮಾಡಿ ಎಂದು ಟ್ವಿಟ್ಟರ್‍ನಲ್ಲಿ ಸಿಎಂ ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ. ಇದರೊಂದಿಗೆ 6+4+2= 4 ಅಂತ ಮಾರ್ಮಿಕವಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ದಲಿತರನ್ನು ಕಡೆಗಣಿಸುತ್ತಿದೆ. ಈ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿತ್ತು ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಬೆಂಗಳೂರಿನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರು ಒಟ್ಟಿಗೆ ಪ್ರಚಾರ ನಡೆಸಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಮತಗಟ್ಟೆ ಸಮೀಕ್ಷೆಯಲ್ಲಿ ಕೆಲವು ಈ ಬಾರಿ ರಾಜ್ಯದ ಅತಂತ್ರ ಪರಿಸ್ಥಿತಿ ನಿರ್ಮಾಣವವಾಗಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಸಿಎಂ ದಲಿತ ಸಿಎಂ ವಿಚಾರದ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ್ದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    https://www.youtube.com/watch?v=h_B_PDUG2Yk

    https://www.youtube.com/watch?v=pFR9WyP41KU

  • ಮತದಾನ ಮಾಡದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆ

    ಮತದಾನ ಮಾಡದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. ಮತದಾನದ ದಿನ ಹಲವು ಮಂದಿ ಮತದಾನ ಮಾಡಿಲ್ಲ. ಅದ್ರಲ್ಲಿ ನಟಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಕೂಡ ಒಬ್ಬರಾಗಿದ್ದಾರೆ.

    ಮಂಡ್ಯದ ಕೆ.ಆರ್ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಅವರು ಮತದಾನ ಮಾಡಬೇಕಾಗಿತ್ತು. ಆದರೆ ಇದೀಗ ಅವರು ಮತದಾನ ಮಾಡದೆ ದೂರು ಉಳಿದಿದ್ದರಿಂದ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ ನೈತಿಕತೆ ಎಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದು, ನಂಬರ್ ಒನ್ ಸಿಟಿಜನ್ ಅಂತ ಲೇವಡಿ ಮಾಡಿದ್ದಾರೆ. ರಮ್ಯಾ ಮತ್ತು ಬಹುಭಾಷಾ ನಟ ಪ್ರಕಾಶ್ ರೈ ಅವರು ಪೃಧಾನಿ ಮೋದಿ ಬಗ್ಗೆ ಮಾತನಾಡುತ್ತಾ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಮ್ಯಾ ವೋಟು ಮಾಡಿಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಕೆ ಹೇಳಿ ಅಂತಾ ಜನರು ಕಿಡಿ ಕಾರಿದ್ದು, ಮೊದಲು ವೋಟ್ ಮಾಡಿ ಜವಾಬ್ದಾರಿ ಕಲಿಯಿರಿ ರಮ್ಯಾ ಅವರಿಗೆ ಅಂತಾ ಟಾಂಗ್ ಕೊಟ್ಟಿದ್ದಾರೆ.

  • ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

    ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

    ವಿಜಯಪುರ: ರಾಜ್ಯ ಹಾಗೂ ವಿಜಯಪುರ ಜಿಲ್ಲೆಯೆ ಹೈ ವೋಲ್ಟೇಜ್ ಮತಕ್ಷೇತ್ರ ಬಬಲೇಶ್ವರದಲ್ಲಿ 80% ಮತದಾನವಾಗಿದೆ. ಇದೇ ಮೊದಲನೆ ಬಾರಿಗೆ ಈ ಮಟ್ಟಕ್ಕೆ ಮತದಾನವಾಗಿದ್ದು, ಕಾಂಗ್ರೆಸ್ ಭಾರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ಹೇಳಿದ್ದಾರೆ.

    ನನ್ನ ಮತಕ್ಷೇತ್ರದಲ್ಲಿ ಹೆಚ್ಚು ಮತದಾನ ಆಗಿದ್ದು ಖುಷಿ ಆಗಿದೆ. ನನ್ನ ವಿರುದ್ಧ ಹಲವು ಷಡ್ಯಂತ್ರ ಮಾಡಲಾಗಿದೆ. ನನ್ನ ಸೋಲಿಸಲು ವಿರೋಧ ಪಕ್ಷದವರು ಅನೇಕ ತಂತ್ರ ಕುತಂತ್ರಗಳನ್ನು ಮಾಡಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದರು. ಅದರ ಲಾಭ ನನಗೆ ಆಗಲಿದೆ. ಇದಕ್ಕೆ ಉತ್ತರ 15 ಕ್ಕೆ ಸಿಗಲಿದೆ ಕಾದು ನೋಡಿ ಎಂದರು.

    ರಾಜ್ಯದಲ್ಲಿ 120 ಸೀಟ್ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಮಾತನಾಡಿದ ಅವರು, ಬಿಎಲ್‍ಡಿಇ ಸಂಸ್ಥೆಯ ನೋಟ್‍ಪ್ಯಾಡ್ ನಲ್ಲಿ ನನ್ನ ನಕಲಿ ಸಹಿ ಮಾಡಲಾಗಿದೆ. ನಕಲಿ ಸಹಿ ಮಾಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕಳಿಸಲಾಗಿದೆ. ಇದರ ಹಿಂದೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಕೈವಾಡವಿದೆ. ಅವರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳತ್ತೇನೆ ಅಂದ್ರು.

  • ಕೋಟೆನಾಡಿನಲ್ಲಿ ಎಲೆಕ್ಷನ್‍ಗೆ ನಿಂತ ಅಭ್ಯರ್ಥಿಗಳಿಗೇ ಇಲ್ಲ ವೋಟ್ ಭಾಗ್ಯ!

    ಕೋಟೆನಾಡಿನಲ್ಲಿ ಎಲೆಕ್ಷನ್‍ಗೆ ನಿಂತ ಅಭ್ಯರ್ಥಿಗಳಿಗೇ ಇಲ್ಲ ವೋಟ್ ಭಾಗ್ಯ!

    ಚಿತ್ರದುರ್ಗ: ಸತತ ಒಂದು ತಿಂಗಳಿಂದ ಮತದಾರರಲ್ಲಿ ಮತಭಿಕ್ಷೆ ಕೇಳಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಆರು ಜನ ಅಭ್ಯರ್ಥಿಗಳಿಗೆ ಮತದಾನದ ಭಾಗ್ಯವೇ ಇಲ್ಲವಾಗಿದೆ.

    ಸಮಯದ ಅಭಾವ, ಕ್ಷೇತ್ರ ಬದಲಾವಣೆ ಹಾಗು ಅಭ್ಯರ್ಥಿಗಳು ಮತ್ತೊಂದೆಡೆ ನೆಲೆಸಿರೋದು ಇದಕ್ಕೆ ಪ್ರಮುಖ ಕಾರಣವಾಗಿದ್ದೂ, ತಮ್ಮ ಗೆಲುವಿಗಾಗಿ ಮತದಾರ ಪ್ರಭುಗಳ ಮನವೊಲಿಸಿ ತಪ್ಪದೇ ಮತ ಹಾಕುವಂತೆ ಒತ್ತಾಯಿಸುವಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳೇ ತಮ್ಮ ಮತದಾನದ ಹಕ್ಕನ್ನು ಮರೆತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!

    ಚಳ್ಳಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಅವರ ಮತವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಸಮಯದ ಅಭಾವದ ಕಾರಣ ಮತ ಚಲಾವಣೆ ಮಾಡಲಾಗಿಲ್ಲ. ಚಿತ್ರದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಮತವು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ದೊಡ್ಡಬಳ್ಳಾಪುರ ಮತಕ್ಷೇತ್ರದ ಮತದಾರರಾಗಿರೋದ್ರಿಂದ ಇಬ್ಬರೂ ಮತದಾನದಿಂದ ದೂರ ಉಳಿದಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ!

    ಹಿರಿಯೂರಿನ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಅವರು ಬೆಂಗಳೂರಿನ ಕೆ.ಆರ್ ಪುರಂ ನಿವಾಸಿಯಾಗಿದ್ದು, ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಹಾಗು ಮಾಜಿ ಸಚಿವ ಡಿ.ಸುಧಾಕರ್ ಕೂಡ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿದ್ದ ಅವರ ಮತವನ್ನು ಚಲಾವಣೆ ಮಾಡುವಲ್ಲಿ ವಿಫಲರಾಗಿದ್ದು, ಹೊಳಲ್ಕೆರೆ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ಕೂಡ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿರೋ ಅವರ ಮತವನ್ನು ಹಾಕಲು ಮರೆತಿದ್ದಾರೆ. ಇದನ್ನೂ ಓದಿ: ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ತುಂಬು ಗರ್ಭಿಣಿ!

    ಹೊಸದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಟ ಶಶಿಕುಮಾರ್ ಸಹ ಬೆಂಗಳೂರಿನ ರಾಜಾಜೀನಗರದ ನಿವಾಸಿಯಾಗಿದ್ದು, ಮತ ಹಾಕುವ ಅವಕಾಶದಿಂದ ವಂಚಿತರಾಗಿದ್ದಾರೆ. ಮತ ಚಲಾವಣೆ ನಮ್ಮ ಹಕ್ಕೆಂದು ಚುನಾವಣಾ ಆಯೋಗ ನಿರಂತರವಾಗಿ ಜಾಗೃತಿ ಮೂಡಿಸಿದ್ದರೂ ಸಹ ಮತ ಕೇಳಿ ಹಾಕಿಸುವ ಅಭ್ಯರ್ಥಿಗಳೇ ತಮ್ಮ ಮತ ಹಾಕುವ ಹಕ್ಕನ್ನು ಮರೆತಿರೋದು ವಿಪರ್ಯಾಸವೇ ಸರಿ. ಇದನ್ನೂ ಓದಿ: ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

  • ಮಗ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ ಹೆಚ್‍ಡಿ ಕುಮಾರಸ್ವಾಮಿ!

    ಮಗ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ ಹೆಚ್‍ಡಿ ಕುಮಾರಸ್ವಾಮಿ!

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ.

    ಮಗ ನಿಖಿಲ್ ಜೊತೆ ಕುಮಾರಸ್ವಾಮಿ ಅವರು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ ಡಿಕೆ ಅವರು ಅವಿರತವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹಗಲು, ರಾತ್ರಿ ಎನ್ನದೇ ದಣಿವರಿಯದಂತೆ ಓಡಾಡಿದ್ದರು. ಹೀಗಾಗಿ ಪ್ರಚಾರದ ಕೊನೆ ದಿನಗಳಲ್ಲಿ ಸುಸ್ತಾಗಿದ್ರು. ಹೀಗಾಗಿ ತನ್ನ ಮಗನ ಜೊತೆ ಚಿಕಿತ್ಸೆಗೆಂದು ಸಿಂಗಾಪುರಕ್ಕೆ ತೆರಳಿದ್ದಾರೆ.

    ಅಪ್ಪ- ಮಗ ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಮುಗಿದಿದೆ. ಆದರೆ ಎಲೆಕ್ಷನ್ ಡ್ಯೂಟಿ ಮುಗಿಸಿ ಏಕಕಾಲಕ್ಕೆ ಹೊರಟಿದ್ದರಿಂದ ಬೆಳಗಾವಿಯ ರಾಯಬಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ತಾಲೂಕಿನ ವಿವಿಧೆಡೆಗಳಿಂದ ಚುನಾವಣೆ ಕರ್ತವ್ಯ ಮುಗಿಸಿ ಏಕಕಾಲಕ್ಕೆ ಬಂದಿದ್ದರಿಂದ ಬಸ್ ಹಾಗೂ ವಾಹನಗಳಿಂದ ಸಂಚಾರ ದಟ್ಟಣೆಯುಂಟಾಗಿತ್ತು. ಆದ್ದರಿಂದ ಕುಡಚಿ ಹಾಗೂ ರಾಯಬಾಗ ಕ್ಷೇತ್ರಗಳಲ್ಲಿ ಕರ್ತವ್ಯ ಮುಗಿಸಿ ಬಂದ ಚುನಾವಣಾ ಸಿಬ್ಬಂದಿ ಮತ ಯಂತ್ರಗಳನ್ನು ಹಸ್ತಾಂತರಿಸಲು ವಿಳಂಬವಾಗಿದ್ದು, ಸಂಚಾರ ದಟ್ಟಣೆಯಿಂದ ಚುನಾವಣಾ ಸಿಬ್ಬಂದಿ ಹೈರಾಣಾಗಿದ್ದಾರೆ.

    ಟ್ರಾಫಿಕ್ ಜಾಮ್‍ನಿಂದ ಸಿಬ್ಬಂದಿ ಪಟ್ಟಣದ ಹೊಸ ಸಂಯುಕ್ತ ಪದವಿ ಪೂರ್ವ ಕಾಲೇಜುವರೆಗೆ ನಡೆದುಕೊಂಡು ಹೋಗಿದ್ದಾರೆ. ಸುಮಾರು ಮೂರು ಕಿಲೋಮೀಟರ್  ವರೆಗೆ ಮತಯಂತ್ರಗಳನ್ನು ಹೊತ್ತುಕೊಂಡೇ ಹೋಗಿದ್ದಾರೆ.

    ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಸತತ 3 ಗಂಟೆಗಳ ಕಾಲ ಹರಸಾಹಸಪಟ್ಟರು.

  • ಮಂಗಳವಾರ ಕರ್ನಾಟಕ ಕುರುಕ್ಷೇತ್ರದ ರಿಸಲ್ಟ್- ಮತ್ತೆ ನಾನೇ ಸಿಎಂ ಅಂದ್ರು ಸಿದ್ದರಾಮಯ್ಯ

    ಮಂಗಳವಾರ ಕರ್ನಾಟಕ ಕುರುಕ್ಷೇತ್ರದ ರಿಸಲ್ಟ್- ಮತ್ತೆ ನಾನೇ ಸಿಎಂ ಅಂದ್ರು ಸಿದ್ದರಾಮಯ್ಯ

    ಮೈಸೂರು: ಶನಿವಾರ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದ್ದು, ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳು ಹೊರಬಂದಿವೆ. ಎರಡು ಸಮೀಕ್ಷೆಗಳು ಕಾಂಗ್ರೆಸ್ ಮುನ್ನಡೆ ಅಂತಾ ತಿಳಿಸಿದ್ರೆ, ಇನ್ನೆರಡು ಬಿಜೆಪಿ ಜಯದ ಮೆಟ್ಟಿಲಿಗೆ ಸನೀಹದಲ್ಲಿವೆ ಅಂತಾ ತಿಳಿಸಿವೆ. ಇನ್ನೊಂದು ಸಮೀಕ್ಷೆ ಬಿಜೆಪಿ ಗೆಲ್ಲುವ ನಿಶ್ಚಿತ ಅಂತಾ ಹೇಳಿದೆ.

    ಮತದಾನ ಮತ್ತು ಮತಗಟ್ಟೆ ಸಮೀಕ್ಷೆ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಸಿಎಂ ಮಾತನಾಡಿದ್ದಾರೆ. ನಾನು ಮೊದಲಿನಿಂದಲೂ ಅಂದ್ರೆ ಆರು ತಿಂಗಳ ಹಿಂದಿನಿಂದಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳಿಕೊಂಡು ಬಂದಿದ್ದೇನೆ. ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ ಬಳಿಕ ನನಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದು ಗೊತ್ತಾಯಿತು. ಕಾಂಗ್ರೆಸ್ 120 ಸೀಟ್‍ಗಳಲ್ಲಿ ಗೆಲುವು ಸಾಧಿಸಲಿದೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ಬಿಜೆಪಿಗೆ ಸ್ಪಷ್ಟ ಬಹುಮತ: ಟುಡೇಸ್ ಚಾಣಕ್ಯ ಸಮೀಕ್ಷೆ

    ಪ್ರಧಾನಿ ಮೋದಿ ಅವರ ಭಾಷಣದಿಂದ ಕರ್ನಾಟಕದಲ್ಲಿ ಯಾವ ಅಲೆಯೂ ನಿರ್ಮಾಣವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಅದೇನು ಬದಲಾಗಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಾಪಕವಾಗಿ ಪ್ರಚಾರ ಮಾಡಿದ್ದು ಮತ್ತು ನಾವು ಐದು ವರ್ಷ ಮಾಡಿರುವ ಕೆಲಸಗಳು ನಮಗೆ ಅನುಕೂಲವಾಗಿವೆ ಅಂದ್ರು. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ: ಎರಡರಲ್ಲಿ ಕಾಂಗ್ರೆಸ್, ಎರಡಲ್ಲಿ ಬಿಜೆಪಿಗೆ ಮುನ್ನಡೆ

    ಚುನಾವಣೆ ಫಲಿತಾಂಶ ಬರುವರೆಗೂ ಎರಡು ದಿನ ವಿಶ್ರಾಂತಿ ಮಾಡುತ್ತೇನೆ. ಮತದಾನ ಮುಗಿದಿದ್ದು, ಎಲ್ಲವನ್ನೂ ತಲೆಯಿಂದ ತೆಗೆದು ಹಾಕಿ ರೆಸ್ಟ್ ಮಾಡ್ತೀನಿ. ಚಾಮುಂಡೇಶ್ವರಿ ಮತ್ತು ಬದಾಮಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಗೆಲ್ಲುತ್ತೇನೆ. ಎಕ್ಸಿಟ್ ಪೋಲ್‍ಗಳು ಏನೇ ಬರಲಿ ಗೆಲುವು ನಮ್ಮದೇ, ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.

  • ನಡುಗಡ್ಡೆಯಲ್ಲಿ ಸಿಲುಕಿದ ಚುನಾವಣಾ ಅಧಿಕಾರಿಗಳು

    ನಡುಗಡ್ಡೆಯಲ್ಲಿ ಸಿಲುಕಿದ ಚುನಾವಣಾ ಅಧಿಕಾರಿಗಳು

    ರಾಯಚೂರು: ಜಿಲ್ಲೆಯಲ್ಲಿ ಕೃಷ್ಣ ನದಿ ನೀರಿನಿಂದ ನಡುಗಡ್ಡೆಗಳಾಗಿರುವ ಗ್ರಾಮಗಳಲ್ಲಿ ಮತದಾನ ಕಾರ್ಯಕ್ಕೆ ತೆರಳಿದ್ದ ಚುನಾವಣಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪರದಾಡಿದರು.

    ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುರ್ವಕುಲ ಹಾಗು ಕುರ್ವಕುರ್ದಾಕ್ಕೆ ತೆರಳಿದ್ದ ಸಿಬ್ಬಂದಿ ವಾಪಸ್ ಬರಲು ತೆಪ್ಪ ಇಲ್ಲದೆ ಸುಮಾರು ಹೊತ್ತು ನದಿದಂಡೆಯಲ್ಲೇ ಪರದಾಡಬೇಕಾಯಿತು. ತೆಪ್ಪ ನಡೆಸುವ ಅಂಬಿಗರಿಲ್ಲದೆ ಚುನಾವಣಾ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.

    ಕೃಷ್ಣಾ ನದಿಗೆ ಜುರಾಲಾ ಆಣೆಕಟ್ಟೆ ಕಟ್ಟಿದ ನಂತರ ಈ ಗ್ರಾಮಗಳು ನಡುಗಡ್ಡೆಯಾಗಿದ್ದು ಸೇತುವೆ ಕಾರ್ಯ ಅಪೂರ್ಣವಾಗಿರುವುದರಿಂದ ನದಿ ದಾಟಲು ಪರದಾಡುವಂತಾಗಿದೆ.

  • ರಾಮನಗರದಲ್ಲಿ ಅತೀ ಹೆಚ್ಚು ವೋಟಿಂಗ್- ಮತದಾನದಲ್ಲಿ ಬೆಂಗಳೂರಿಗರೇ ಹಿಂದೆ

    ರಾಮನಗರದಲ್ಲಿ ಅತೀ ಹೆಚ್ಚು ವೋಟಿಂಗ್- ಮತದಾನದಲ್ಲಿ ಬೆಂಗಳೂರಿಗರೇ ಹಿಂದೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಶನಿವಾರ ಮತದಾನ ನಡೆದಿದೆ. ಈ ಬಾರಿ ರಾಜ್ಯದಲ್ಲಿ ದಾಖಲೆಯ ಶೇ.74.87ರಷ್ಟು ದಾಖಲೆಯ ಮತದಾನವಾಗಿದೆ.

    ರಾಮನಗರದಲ್ಲಿ ಅತೀ ಹೆಚ್ಚು ಮತದಾನವಾದರೆ ಬೆಂಗಳೂರಿನಲ್ಲೇ ಕಡಿಮೆ ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಬೆಂಗಳೂರು ನಗರದಲ್ಲಿ ಮತದಾನವಾಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ.

    ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರು ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟಲಿಲ್ಲ. ಇನ್ನು ಜಿಲ್ಲಾವಾರು ಮತದಾನ ಹೀಗಿದೆ.

    ಜಿಲ್ಲಾವಾರು ಮತದಾನ

    ಜಿಲ್ಲೆ   -ಶೇಕಡಾವಾರು

    ಬೆಳಗಾವಿ – ಶೇ.76.18
    ಬಾಗಲಕೋಟೆ- ಶೇ.72
    ಬಿಜಾಪುರ- ಶೇ.65
    ಗುಲ್ಬರ್ಗಾ- ಶೇ.63.01
    ಬೀದರ್- ಶೇ.65
    ರಾಯಚೂರು- ಶೇ.64.24
    ಕೊಪ್ಪಳ- ಶೇ.76.10
    ಗದಗ- ಶೇ.74.46
    ಧಾರವಾಡ- ಶೇ.70.64
    ಉತ್ತರ ಕನ್ನಡ- ಶೇ.77.78
    ಹಾವೇರಿ- ಶೇ.78.32
    ಬಳ್ಳಾರಿ -ಶೇ.71
    ಚಿತ್ರದುರ್ಗ-ಶೇ.79
    ದಾವಣಗೆರೆ-ಶೇ.75.59
    ಶಿವಮೊಗ್ಗ -ಶೇ.78
    ಉಡುಪಿ-ಶೇ.78.87
    ಚಿಕ್ಕಮಗಳೂರು -ಶೇ.79.06
    ತುಮಕೂರು- ಶೇ.73
    ಚಿಕ್ಕಬಳ್ಳಾಪುರ- ಶೇ.83.88
    ಕೋಲಾರ- ಶೇ.79.59
    ಬೆಂ. ಗ್ರಾಮಾಂತರ- ಶೇ.82
    ರಾಮನಗರ- ಶೇ.84
    ಮಂಡ್ಯ -ಶೇ.83.28
    ಹಾಸನ -ಶೇ.81.47
    ದಕ್ಷಿಣ ಕನ್ನಡ- ಶೇ.77.63
    ಕೊಡಗು- ಶೇ.75
    ಮೈಸೂರು- ಶೇ.74.60
    ಚಾಮರಾಜನಗರ -ಶೇ.78
    ಬೆಂಗಳೂರು ನಗರ- ಶೇ.50
    ಯಾದಗಿರಿ -ಶೇ.69