Tag: Karnataka Elections 2018

  • ಕಾಂಗ್ರೆಸ್-ಬಿಜೆಪಿ ಪಕ್ಷಗಳಲ್ಲಿ ಶೀತಲ ಸಮರ- ಅಭ್ಯರ್ಥಿಗಳ ಪರ ಪ್ರಚಾರಕ್ಕೆ ನಾಯಕರೇ ಇಲ್ಲ!

    ಕಾಂಗ್ರೆಸ್-ಬಿಜೆಪಿ ಪಕ್ಷಗಳಲ್ಲಿ ಶೀತಲ ಸಮರ- ಅಭ್ಯರ್ಥಿಗಳ ಪರ ಪ್ರಚಾರಕ್ಕೆ ನಾಯಕರೇ ಇಲ್ಲ!

    ಬೆಂಗಳೂರು: ರಾಷ್ಟ್ರೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ರಾಜ್ಯ ನಾಯಕರೇ ತಲೆನೋವಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಾಯಕರ ನಡುವೆ ಪ್ರಚಾರದ ಶೀತಲ ಸಮರ ನಡೆಯುತ್ತಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಕೈ ಹಾಗೂ ಕಮಲ ಪಕ್ಷದೊಳಗಿನ ಕೋಲ್ಡ್ ವಾರ್‍ನಿಂದಾಗಿ ರಣರಂಗದಲ್ಲಿ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಏಕಾಂಗಿಯಾಗಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ ಕರ್ನಾಟಕಕ್ಕಷ್ಟೆ ಸೀಮಿತವಾಗಿದ್ದಾರೆ.

    ಗೆಲುವಿನ ಹಠಕ್ಕೆ ಬಿದ್ದ ಪರಮೇಶ್ವರ್ ಕೊರಟಗೆರೆ ಬಿಟ್ಟು ಹೊರಬರುತ್ತಿಲ್ಲ. ಡಿ.ಕೆ.ಶಿವಕುಮಾರ್ ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಭಾಗಕ್ಕಷ್ಟೆ ಸೀಮಿತವಾಗಿದ್ದಾರೆ. ನಾಯಕರ ಪ್ರಚಾರದ ಪ್ಲಾನ್ ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ನೆಮ್ಮದಿ ಕೆಡಿಸಿದೆ. ಹೀಗೆ ಕಾಂಗ್ರೆಸ್ ಪಾಲಿಗೆ ರಾಜ್ಯ ನಾಯಕರು ತಲೆನೋವಾಗಿದ್ದಾರೆ.

    ಬಿಜೆಪಿಯಲ್ಲೂ ಕೂಡ ನಾಯಕರ ಪ್ರಚಾರದ ಪ್ಲಾನ್ ತಲೆನೋವಾಗಿದೆ. ರಾಜ್ಯಾಧ್ಯಕ್ಷ ಬಿಎಸ್‍ವೈ ಒಬ್ಬರೇ ರಾಜ್ಯದ ಮೂಲೆ ಮೂಲೆ ಸುತ್ತತೊಡಗಿದ್ದಾರೆ. ಈಶ್ವರಪ್ಪ ಶಿವಮೊಗ್ಗ ಸೇರಿಕೊಂಡ್ರೆ, ಆರ್ ಅಶೋಕ್ ಪದ್ಮನಾಭನಗರಕ್ಕೆ ಸಿಮೀತರಾಗಿದ್ದಾರೆ. ಶೆಟ್ಟರ್ ಧಾರವಾಡ ಬಿಟ್ಟುಬರ್ತಿಲ್ಲ, ಅನಂತಕುಮಾರ್ ಹೆಗಡೆ ಉತ್ತರಕರ್ನಾಟಕ ರೌಂಡ್ಸ್ ನಲ್ಲಿದ್ದಾರೆ. ಹೀಗೆ ಕಾಂಗ್ರೆಸ್-ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ನಾಯಕರಗಳೇ ಸಿಗುತ್ತಿಲ್ಲ ಎನ್ನಲಾಗಿದೆ.

    ಸಿದ್ದರಾಮಯ್ಯ, ಬಿಎಸ್‍ವೈ ಇಬ್ಬರು ನಾನೇ ಮುಂದಿನ ಸಿಎಂ ಅಂತಾ ರಾಜ್ಯದ ಮೂಲೆ ಮೂಲೆ ಸುತ್ತುತ್ತಿದ್ದಾರೆ. ಆದ್ರೆ ಎರಡು ಪಕ್ಷದ ಉಳಿದ ನಾಯಕರಿಗೆ ಮಾತ್ರ ತಮ್ಮ ಕ್ಷೇತ್ರದಷ್ಟೇ ಚಿಂತೆಯಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಎಲೆಕ್ಷನ್ ಹೊತ್ತಲ್ಲಿ ಶಿರಸಿ ಕಾಂಗ್ರೆಸ್ ಅಭ್ಯರ್ಥಿಗೆ ಐಟಿ ಶಾಕ್

    ಎಲೆಕ್ಷನ್ ಹೊತ್ತಲ್ಲಿ ಶಿರಸಿ ಕಾಂಗ್ರೆಸ್ ಅಭ್ಯರ್ಥಿಗೆ ಐಟಿ ಶಾಕ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಅವರ ಆಪ್ತರಿಗೆ ಐ.ಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

    ಆರ್.ವಿ ದೇಶಪಾಂಡೆಯವರ ಆಪ್ತ ಹಾಗೂ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೀಮಣ್ಣ ನಾಯ್ಕರವರ ಶಿರಸಿಯ ಅಯ್ಯಪ್ಪ ನಗರದಲ್ಲಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳವಾರ ರಾತ್ರಿ ದಿಡೀರ್ ದಾಳಿ ನಡೆಸಿದ ಅಧಿಕಾರಿಗಳು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

    ಬೀಮಣ್ಣ ನಾಯ್ಕ್ ರವರು ಕೃಷಿಕರಾಗಿರುವುದಲ್ಲದೇ ಬಾರ್ ಆಂಡ್ ರೆಸ್ಟೋರೆಂಟ್ ಸೇರಿದಂತೆ ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿದ್ದರು. ಇನ್ನು ಕಳೆದ ಮೂರು ದಿನಗಳ ಹಿಂದೆ ಕೂಡ ಐಟಿ ಅಧಿಕಾರಿಗಳು ಆರ್.ವಿ.ದೇಶಪಾಂಡೆಯವರ ಆಪ್ತ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉದ್ಯಮಿ ಸುಭಾಷ್ ಕೂರವೇಕರ್ ಎಂಬವವರ ಮನೆಯ ಮೇಲೆ ಸಹ ಐ.ಟಿ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರ ವಶಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾಗಿದ್ದ ಹಾಗೂ ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಬೀಮಣ್ಣ ನಾಯ್ಕ ರವರ ಮನೆಯ ಮೇಲೆ ದಾಳಿ ನಡೆಸಿರುವುದು ಅನೇಕ ಕುತೂಹಲಕ್ಕೆ ಕಾರಣವಾಗಿದೆ.

  • ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ

    ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ

    ಬೆಂಗಳೂರು: ಆಗಿರೋದನ್ನು ಕೇಳಮ್ಮ, ಆಗದೇ ಇರೋದನೆಲ್ಲಾ ಕೇಳಬೇಡ. ಆಗಬೇಕಾಗಿರುವ ಕೆಲಸಗಳ ಬಗ್ಗೆ ಮುಂದೆ ಮಾತನಾಡೋಣ ನಾನ್ ಹೇಳದನ್ನ ಮೊದಲು ಕಿವಿಗೆ ಹಾಕ್ಕೊಳಿ ಅಂತಾ ಚುನಾವಣಾ ಪ್ರಚಾರದಲ್ಲಿ ಪ್ರಶ್ನಿಸಿದ ಮಹಿಳೆಗೆ ಸಚಿವ ಕೃಷ್ಣ ಬೈರೇಗೌಡ ಹೇಳಿದ ಮಾತಿದು.

    ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಕೃಷ್ಣ ಬೈರೇಗೌಡ್ರು ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ, ಮತದಾರರು ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಏರಿಯಾದಲ್ಲಿ ಬಸ್ ಬರೋದಿಲ್ಲ ಸಾಹೇಬ್ರೆ ಅಂತ ಪ್ರಶ್ನಿಸಿದ್ದಕ್ಕೆ ಗರಂ ಅದ ಸಚಿವರು, ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ ಬೀಡ ನೀನು ಎಂದು ಏರು ಧ್ವನಿಯಲ್ಲಿ ಮಾತನಾಡಿ ಮಹಿಳೆಯ ಬಾಯಿ ಮುಚ್ಚಿಸಿದ್ದಾರೆ.

    ಪತಿ ಕೃಷ್ಣ ಬೈರೇಗೌಡ ಪರ ಮತಯಾಚನೆ ಮಾಡಲು ಹೋದ ಸಚಿವರ ಪತ್ನಿ ಮೀನಾಕ್ಷಿ ಕೃಷ್ಣ ಬೈರೇಗೌಡ ಮತದಾರರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮತದಾರರ ಪ್ರಶ್ನೆಯಿಂದ ಕೆರಳಿದ ಮೀನಾಕ್ಷಿ ಕೃಷ್ಣ ಭೈರೇಗೌಡ ಯು ನೋ ರಿಯಾಲಿಟಿ..? ಗೊತ್ತಿಲ್ಲದೆ ಮಾತನಾಡ ಬೇಡಿ ಅಂತ ಗದರಿಸಿ ಮೀನಾಕ್ಷಿ ಕೃಷ್ಣ ಬೈರೇಗೌಡ ಕೋಪಗೊಂಡು ಹೊರ ಬಂದಿದ್ದಾರೆ.

  • ಬಿಎಸ್‍ವೈ, ಸಿದ್ದರಾಮಯ್ಯ ವಿರುದ್ಧ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ವಾಗ್ದಾಳಿ

    ಬಿಎಸ್‍ವೈ, ಸಿದ್ದರಾಮಯ್ಯ ವಿರುದ್ಧ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ವಾಗ್ದಾಳಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಿಡಿಕಾರಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜನರೇ ಈ ಭ್ರಷ್ಟ ಅಭ್ಯರ್ಥಿಗಳಿರುವ ಪಕ್ಷಕ್ಕೆ ಮತ ಹಾಕಬೇಡಿ ನೋಟಾ ಚಲಾವಣೆ ಮಾಡಿ ಅಂತ ಸಲಹೆ ನೀಡಿದ್ದಾರೆ.

    ಕಾಂಗ್ರೆಸ್-ಬಿಜೆಪಿ ಜಗಳಾಟ ಕೇವಲ ಮೇಲುನೋಟಕ್ಕೆ ಅಷ್ಟೇ. ಯಡಿಯೂರಪ್ಪ ಮೇಲೆ ಮತ್ತೆ ಸಿಎಂ ಮೇಲ್ಮನವಿ ಹಾಕಬೇಕಿತ್ತು. ಇವರೆಲ್ಲ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಕೊಡುವವರು ಅಂತ ಹೆಗ್ಡೆ ಕಿಡಿಕಾರಿದ್ದಾರೆ.

    ಭ್ರಷ್ಟಾಚಾರ ಹಾಗೂ ಇನ್ನಿತರ ಪ್ರಕರಣಗಳ ಆರೋಪವಿರುವ ವ್ಯಕ್ತಿಗಳಿಗೆ ಮತದಾರರು ಮತ ಹಾಕಬಾರದು. ಮತ ಹಾಕಿ ಅವರನ್ನು ಗೆಲ್ಲಿಸಿದ್ರೆ, ಆ ಮತದಾರರ ವಿರುದ್ಧವೂ ಒಂದು ಆರೋಪ ವ್ಯಕ್ತವಾಗುತ್ತದೆ. ಯಾಕಂದ್ರೆ ಭ್ರಷ್ಟಾಚಾರದ ಬಗ್ಗೆ ಯಾವುದೇ ಒಂದು ಕಾಳಜಿ ಇಟ್ಟುಕೊಂಡಿಲ್ಲ. ನಿಮಗೆ ಗೆದ್ದ ಅಭ್ಯರ್ಥಿಯಿಂದ ಯಾವುದಾದರೂ ಲಾಭವಿದೆ ಅನ್ನೋ ಒಂದೇ ಒಂದು ಕಾರಣದಿಂದ ಮತ ಹಾಕುತ್ತಿದ್ದೀರಿ. ಒಂದು ವೇಳೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಾದ್ರು ಕೂಡ ಒಳ್ಳೆಯವರು ಇಲ್ಲ ಅಂತ ಬಂದ್ರೆ ದಯವಿಟ್ಟು ನೋಟಾ ಚಲಾಯಿಸಿ. ಅವಾಗ ರಾಜಕೀಯ ನಾಯಕರುಗಳಿಗೆ ಒಂದು ಸಂದೇಶ ಹೋಗುತ್ತದೆ. ಒಳ್ಳೆಯವರನ್ನು ಚುನಾವಣೆಗೆ ನಿಲ್ಲಿಸದೇ ಇದ್ದರೆ, ಇನ್ನು ಮುಂದೆ ಮತದಾರರು ಯಾವುದೇ ಮತ ಹಾಕಲ್ಲ ಅಂತ ತಿಳಿಸಿದ್ದಾರೆ.

    ಭ್ರಷ್ಟಾಚಾರ ಆರೋಪ ಇಲ್ಲದಂತಹ ಪಕ್ಷಗಳು ಯಾವುದಿವೆ? ಹಲವಾರು ಅಭ್ಯರ್ಥಿಗಳ ವಿರುದ್ಧ ಗಂಭೀರ ಆರೋಪಗಳಿವೆ. ಕೆಲವರ ಮೇಲೆ ಅತ್ಯಾಚಾರದ ಆರೋಪವಿದೆ. ಕೆಲವರ ಮೇಲೆ ಅಕ್ರಮ ಗಣಿಕಾರಿಕೆ ಮಾಡಿದ ಆರೋಪವಿದೆ. ಇಂತಹ ಹಲವಾರು ಆರೋಪಗಳು ಎರಡೂ ಪಕ್ಷದ ಅಭ್ಯರ್ಥಿಗಳ ಮೇಲಿದೆ. ನನಗೆ ತಿಳಿದ ಮಟ್ಟಿಗೆ ಲೋಕಸಭೆಯಲ್ಲಿರೋ ಸುಮಾರು 545 ಸದಸ್ಯರಲ್ಲಿ ಸುಮಾರು ಶೇ.30ರಷ್ಟು ಜನ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಅಥವಾ ಅವರ ವಿರುದ್ಧ ಇನ್ಯಾವುದೋ ಕ್ರಿಮಿನಲ್ ಕೇಸ್ ಗಳಿವೆ. ಇಂತಹ ವ್ಯಕ್ತಿಗಳು ರಾಜಕೀಯ ಪಕ್ಷಗಳು ಮುಂದೆ ತಂದು ಪ್ರತಿನಿಧಿಗಳಾಗಿ ಮಾಡುವುದು ಸರಿಯಲ್ಲ ಅಂದ್ರು.

    ಯಾವ ಪಕ್ಷಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾವುದೇ ಚಿಂತನೆಯಿಲ್ಲ. ಗೆಲ್ಲುವುದು ಒಂದೇ ಒಂದು ಕಾರಣ ಅಂತ ನನಗನ್ನಿಸುತ್ತಿದೆ. ಬಿಜೆಪಿಯಿಂದ ಕಾಂಗ್ರೆಸ್ ಹೋದವರು ಹಾಗೂ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರಲ್ಲಿಯೂ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರು ಇದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಅನ್ನೋದು ಜನರನ್ನು ದಿಕ್ಕು ತಪ್ಪಿಸುವ ವಿಚಾರವಾಗಿದೆ ಅಂತ ಅವರು ಹೇಳಿದ್ರು.

    ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ಧ ಗಣಿ ವರದಿಯಲ್ಲಿ ಹೆಸರಿದೆ. ಆದರೆ ಅವರನ್ನು ಬರಮಾಡಿಕೊಂಡು ಕಾಂಗ್ರೆಸ್ ನಲ್ಲಿ ಈಗ ಸೀಟ್ ಕೊಟ್ಟಿದ್ದಾರೆ. ಭ್ರಷ್ಟಾಚಾರ ಅನ್ನೋದು ಒಂದು ಆರೋಪವೇ ಅಲ್ಲ. ಅಥವಾ ನಾವು ಕಾನೂನಿಗೆ ಹೆದರುವುದಿಲ್ಲ. ಯಾರಾದ್ರೂ ಗೆಲ್ಲುವಂತಹ ವ್ಯಕ್ತಿಗಳು ಬರಬೇಕು. ಅವರ ಮೇಲೆ ಎಂತಹ ಆರೋಪಗಳಿದ್ದರೂ ಕೂಡ ಅವರಿಗೆ ಸೀಟ್ ಕೊಡುತ್ತೇವೆ ಅನ್ನೋ ಒಂದು ಸಂದೇಶವನ್ನು ಎರಡೂ ಪಕ್ಷದವರು ಸಮಾಜಕ್ಕೆ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.

    224 ಅಭ್ಯರ್ಥಿಗಳಲ್ಲಿ ಬಹಳಷ್ಟು ಜನರ ಮೇಲೆ ಬೇರೆ ಬೇರೆ ಆರೋಪಗಳಿವೆ. ಆದ್ದರಿಂದ ಅಂತವರಿಂದ ಟಿಕೆಟ್ ಕೊಡುತ್ತಿರುವುದು, ಯಾವ ಪಕ್ಷಕ್ಕೂ ಕೂಡ ಸತ್ಯ, ಪ್ರಾಮಾಣಿಕತೆ, ನೈತಿಕತೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಯಾರೇ ಆದ್ರೂ ಸರಿ ಗೆಲ್ಲುವಂತಹ ವ್ಯಕ್ತಿಗೆ ಸೀಟ್ ಕೊಡ್ತಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

    ಜನಾರ್ದನ ರೆಡ್ಡಿಯವರನ್ನು ತೆರೆಮರೆ ಅಲ್ಲ ಡೈರೆಕ್ಟ್ ಆಗಿಯೇ ಬಿಜೆಪಿ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಎಲ್ಲಿದೆ ಇವರಿಗೆ ನೈತಿಕತೆ? ಇನ್ನು ರೆಡ್ಡಿ ಬ್ರದರ್ಸ್ ಕೇಳಿದವರಿಗೆ ಬಿಜೆಪಿಯವರು ಟಿಕೆಟ್ ಕೊಟ್ಟಿದ್ದಾರೆ. ಗಣಿಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಮಣೆ ಹಾಕಿದ್ದಾರೆ ಅಂತ ಗರಂ ಆದ್ರು.

  • ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ತುಂಬು ವೇದಿಕೆಯಲ್ಲಿಯೇ ಕಟ್ಟಿಕೊಂಡ ಸಿಎಂ: ವಿಡಿಯೋ ವೈರಲ್

    ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ತುಂಬು ವೇದಿಕೆಯಲ್ಲಿಯೇ ಕಟ್ಟಿಕೊಂಡ ಸಿಎಂ: ವಿಡಿಯೋ ವೈರಲ್

    ಕಲಬುರಗಿ: ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿಯೇ ಕಟ್ಟಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದ ಮುಂಬಾಗದಲ್ಲಿ ನಡೆದ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗೆ ಸಿದ್ದರಾಮಯ್ಯ ಅವರು ಬಂದಿದ್ದರು.

    ಈ ವೇಳೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆ ಏರುತ್ತಿರುವಾಗ ಸೊಂಟದಿಂದ ಪಂಚೆ ಕಳಚುತ್ತಿರುವ ಅನುಭವಕ್ಕೆ ಬಂದಿದೆ. ತಕ್ಷಣ ಸಿದ್ದರಾಮಯ್ಯ ತಡವರಿಸಿಕೊಂಡು ಸೊಂಟಕ್ಕೆ ಕೈ ಹಾಕಿ ವೇದಿಕೆಯಲ್ಲೇ ಪಂಚೆ ಕಟ್ಟಿಕೊಂಡಿದ್ದಾರೆ.

    ಕಾರ್ಯಕರ್ತರು ಸಿದ್ದರಾಮಯ್ಯ ಪಂಚೆ ಕಟ್ಟಿಕೊಳ್ಳುತ್ತಿದ್ದಾಗಲೇ ಹಾರ ಹಾಕಿ ಸನ್ಮಾನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ಪಂಚೆ ಕಟ್ಟಿಕೊಳ್ಳುವುದರಲ್ಲಿ ಮಗ್ನವಾಗಿದ್ದರು.

    https://www.youtube.com/watch?v=Ddpn4PiE4SI

  • ಮುಸ್ಲಿಂ ವೋಟ್ ಹೆಚ್ಚಿರುವುದ್ದರಿಂದ ನನಗೆ ಟಿಕೆಟ್ ಕೊಟ್ರು- ವಿವಾದಾತ್ಮಕ ಹೇಳಿಕೆ ನೀಡಿದ ಕೈ ಅಭ್ಯರ್ಥಿ

    ಮುಸ್ಲಿಂ ವೋಟ್ ಹೆಚ್ಚಿರುವುದ್ದರಿಂದ ನನಗೆ ಟಿಕೆಟ್ ಕೊಟ್ರು- ವಿವಾದಾತ್ಮಕ ಹೇಳಿಕೆ ನೀಡಿದ ಕೈ ಅಭ್ಯರ್ಥಿ

    ಬೀದರ್: ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಮುಸ್ಲಿಂ ಮತ ಓಲೈಕೆ ಮಾಡಿಕೊಳ್ಳಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್ ಬೀದರ್ ಜಿಲ್ಲೆಗೆ ಆಗಮಿಸಿದ್ರು. ಈ ವೇಳೆ ಬೀದರ್ ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ರಹೀಂ ಖಾನ್, ಗುಲಾಬ್ ನಬಿ ಆಜಾದ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೆ ಈ ಹೇಳಿಕೆ ನೀಡಿದ್ದಾರೆ.

    ಮುಸ್ಲಿಂ ವೋಟ್ ಹೆಚ್ಚು ಇರುವುದರಿಂದ ನನಗೆ ಬೀದರ್ ಉತ್ತರ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಇಲ್ಲದಿದ್ದರೆ ಜೀವನದಲ್ಲೇ ನನಗೆ ಟಿಕೆಟ್ ಸಿಗುತ್ತಿರಲಿಲ್ಲ. ಕೇವಲ ಮುಸ್ಲಿಂ ಮತದಾರರಿಂದ ನನ್ನ ಗೆಲುವು ಸಾಧ್ಯ. ಆದ್ದರಿಂದ ನೀವು ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ನಾನು ಸೋತರೆ ಅದು ಮುಸ್ಲಿಂ ಸಮಾಜಕ್ಕೆ ಮಾಡಿದ ಅವಮಾನ ಎಂದು ಮತ್ತೊಂದು ಹೇಳಿಕೆಯನ್ನು ರಹೀಂ ಖಾನ್ ನೀಡಿದ್ದಾರೆ.

    ರಹೀಂ ಖಾನ್‍ಗೆ ಮುಸ್ಲೀಂ ಮತಗಳು ಮಾತ್ರ ಬೇಕಾ? ಹಾಗಾದ್ರೆ ಬೇರೆ ಸಮಾಜದ ಮತ ಬೇಡವೇ ಎಂದು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ. ಒಬ್ಬ ಶಾಸಕರಾಗಿ ಧರ್ಮವನ್ನು ಮುಂದಿಟ್ಟುಕೊಂಡು ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಜನ ಜನ ಪ್ರಶ್ನೆ ಮಾಡುತ್ತಿದ್ದಾರೆ.

  • ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ

    ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ

    ಶಿವಮೊಗ್ಗ: ಭದ್ರಾವತಿ ಶಾಸಕ ಅಪ್ಪಾಜಿಗೌಡ ಫೋನಿನಲ್ಲಿ ಧಮ್ಕಿ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಂಘಟನೆಯೊಂದರ ಮುಖಂಡನಿಗೆ ಕರೆ ಮಾಡಿ ಮಾತನಾಡಿರೋ ಅಪ್ಪಾಜಿಗೌಡ, ನನಗೆ ಓಟ್ ಹಾಕದೇ ಹೋದ್ರೆ ಎಲ್ಲಿ ನೋಡ್ಕೋಬೇಕೋ ಅಲ್ಲಿ ನೋಡ್ಕೋತಿನಿ. ಎಲ್ಲರನ್ನು ಇರಲಿ ಅಂತ ಫ್ರೀ ಬಿಟ್ಟಿದ್ದೀನಿ. ಎಲೆಕ್ಷನ್ ಆಗಲಿ ಗೊತ್ತಲ ಭದ್ರವಾತಿ ಸ್ಟೈಲ್ ತೋರಿಸದಿದ್ರೆ ಅಂತ ಹಳೇ ಸ್ಟೈಲ್‍ನಲ್ಲಿ ಧಮ್ಕಿ ಹಾಕಿರೋ ಆಡಿಯೋ ಈಗ ವೈರಲ್ ಆಗಿದೆ. ಈ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಆಡಿಯೋದಲ್ಲೇನಿದೆ?:
    * ಮೋಹನ್- ಹಲೋ ಮಂಜು ಅವರೇ.. ಅಣ್ಣನ ಕೈನಲ್ಲಿ ಕೊಡ್ತೀನಿ ಮಾತಾಡು
    * ಅಪ್ಪಾಜಿಗೌಡ- ಹಲೋ
    * ಮೋಹನ- ಹಲೋ ನಮಸ್ಕಾರ ಅಣ್ಣ
    * ಅಪ್ಪಾಜಿಗೌಡ- ಏನಪ್ಪ
    * ಮೋಹನ- ನಾನು ಮೋಹನ ಅಣ್ಣ
    * ಅಪ್ಪಾಜಿ ಗೌಡ- ಹಾ ಹೇಳೋ ಮೋಹನ
    * ಮೋಹನ- ಅದೇ ಈ ಸಲ ನಾವೆಲ್ಲ ನಿಮಗೆ ಓಟ್ ಮಾಡ್ತೀವಿ ಅಣ್ಣ
    * ಅಪ್ಪಾಜಿಗೌಡ- ಏಲ್ಲೋ ತಾಸಿಗೆ ಒಂದೊದು ಮಾತಾಡ್ತಿಯಲ್ಲೋ ಮೋಹನ
    * ಮೋಹನ- ಅಣ್ಣ ಅಮ್ಮ ಬೈದ್ರು ಅಣ್ಣ ಬಾಯಿಗೆ ಬಂದಂಗೆ
    * ಅಪ್ಪಾಜಿಗೌಡ- ಅಮ್ಮ ಬೈದ್ರು ನಿನಗೆ ಬುದ್ಧಿ ಬಂದಿಲ್ಲ. ನನ್ಮಗಂದು ಅವನನ್ನ.. ಪೋಲೀಸ್ ನವನಿಗೆ ನೀನು ಹೋಗಿ ಕೇಳು ನಮ್ಮ ಬಾಸ್ ಅವನು ನನಗೆ ಅವನು ಕೇಳಲಿ ನಾನು ಹೇಳ್ತೀನಿ ಅಂತೀಯ
    * ಮೋಹನ- ತಪ್ಪಾಯ್ತು ಬಿಡಣ್ಣ ನಮ್ಮ ಕಡೆಯಿಂದ ತಪ್ಪಾಯ್ತು
    * ಅಪ್ಪಾಜಿಗೌಡ- ಮಾತಾಡಸಬೇಡ ಅಂತ ಹೇಳು ಸುಮ್ಮನೆ ಇದ್ದುಬಿಡ್ತೀವಿ
    * ಮೋಹನ- ಅಲ್ಲ ಅಣ್ಣ ನಂದು ತಪ್ಪಾಯ್ತು ಅಣ್ಣ
    * ಅಪ್ಪಾಜಿಗೌಡ- ತಪ್ಪಾಯ್ತು ಅನ್ನೋ ಪ್ರಶ್ನೆಯಲ್ಲ. ನಾವೇ ನೇರವಾಗಿ ಮಾತಾಡಿದ್ರು ನೀನು ಹಾಗೆ ಅವತ್ತು ಹಂಗೆ ಮಾತಾಡ್ತೀಯ ಅನ್ನೋದಾದ್ರೆ ನಾನು ರಾಜಕಾರಣ ಇಲ್ದೆ ಹೋದ್ರು ಅವನು ಪೋಲೀಸ್ನೋರನ್ನ ನಾನ್ ಕೇಳ್ತೀನಾ. ಓಟ್ ಮಾಡು ಕೆಲಸ ಮಾಡು ಅಂತ ಹೇಳಿ ಅವರಿಗೆಲ್ಲ ಇನ್ನ ಸ್ವಲ್ಪ ದಿನ ಕಳೀಲಿ. ಅವರಿಗೆ ಎಲ್ಲೆಲ್ಲಿ ಹೇಳಬೇಕೋ ಅಲ್ಲಲ್ಲಿ ಹೇಳ್ತೀನಿ. ನಾವು ಪ್ರೀ ಬಿಟ್ಟುಬಿಟ್ಟಿದ್ದೀವಿ ಅಷ್ಟೆ. ನಾವು ಹಳೆ ಸ್ಟೈಲ್ ಎತ್ತಿದ್ರೆ ಉಮೇಶ ಭದ್ರಾವತಿನಲ್ಲಿ ಇರ್ತಾ ಇರಲಿಲ್ಲ ಗೊತ್ತಾ?
    * ಮೋಹನ-ಆಯ್ತ ಅಣ್ಣ ಅಣ್ಣ

  • ಮಂಡ್ಯದಲ್ಲಿ ರಾತ್ರೋರಾತ್ರಿ ಆಪರೇಷನ್ ಕಾಂಗ್ರೆಸ್ – ಪಕ್ಷ ಸೇರುವಂತೆ ಎದುರಾಳಿಗೆ ಓಪನ್ ಆಫರ್

    ಮಂಡ್ಯದಲ್ಲಿ ರಾತ್ರೋರಾತ್ರಿ ಆಪರೇಷನ್ ಕಾಂಗ್ರೆಸ್ – ಪಕ್ಷ ಸೇರುವಂತೆ ಎದುರಾಳಿಗೆ ಓಪನ್ ಆಫರ್

    ಮಂಡ್ಯ: ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತೆ. ನಿಮ್ಮ ವಯಸ್ಸು, ಸಮಯ, ಭವಿಷ್ಯವನ್ನು ವೇಸ್ಟ್ ಮಾಡಿಕೊಳ್ಳದೇ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಇಂಧನ ಸಚಿವ ಡಿಕೆ.ಶಿವಕುಮಾರ್ ರಾಜ್ಯದ ಜನರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

    ಮಂಡ್ಯದ ಹಳೇ ಕಾಂಗ್ರೆಸ್ ಕಚೇರಿಯಲ್ಲಿ ಟಿಕೆಟ್ ವಂಚಿತರ ಭಿನ್ನಮತ ಶಮನಗೊಳಿಸಿ ಮಾತನಾಡಿದ ಅವರು, ಅಂಬರೀಶ್ ಅವರ ಅನುಪಸ್ಥಿತಿ ಕಾಡುತ್ತಿಲ್ಲ. ಅವರ ಆರೋಗ್ಯ ನಮಗೆ ಭಾರೀ ಮುಖ್ಯ. ಅವರನ್ನು ಪ್ರಚಾರಕ್ಕೆ ಬನ್ನಿ ಎಂದು ಒತ್ತಾಯ ಮಾಡಲ್ಲ ಅಂದ್ರು. ಇದನ್ನೂ ಓದಿ: ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ

    ಈ ಬೆನ್ನಲ್ಲೇ, ಜೆಡಿಎಸ್ ಮುಖಂಡ ಸಿದ್ದರಾಮೇಗೌಡ ಅವರ ಮನೆಗೆ ಮಧ್ಯರಾತ್ರಿ ತೆರಳಿದ ಪವರ್ ಮಂತ್ರಿ ಡಿಕೆಶಿ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ್ರು. ಪಕ್ಷ ಸೇರ್ಪಡೆ ನಂತ್ರನೂ ಮಾತನಾಡಿ ರಾಜಕಾರಣದಲ್ಲಿ ರಾತ್ರಿ ಕಾರ್ಯಾಚರಣೆಯೆಲ್ಲ ಮಾಡಬೇಕಾಗುತ್ತೆ ಎಂದು ತಮಾಷೆ ಮಾಡಿದ್ರು.